Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಷಡಾಕ್ಷರಪ್ಪ ಹೊಸಮನಿ

ವೃತ್ತಿ ರಂಗಭೂಮಿ ಕಲಾವಿದರ ಪರಂಪರೆಯ ಹಿರಿಯ ಕೊಂಡಿ ಹೆಚ್. ಷಡಾಕ್ಷರಪ್ಪ, ಆರೂವರೆ ದಶಕಗಳ ಕಾಲ ಕಲೆಯನ್ನೇ ಉಸಿರಾಡಿದ ಅಪರೂಪದ ಕಲಾಚೇತನ,
ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಷಡಾಕ್ಷರಪ್ಪ ಬಹುಶ್ರುತ ಸಾಧಕರು. ಬಹುಮುಖ ಆಸಕ್ತಿಯಿಂದ ರಂಗದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡವರು. ನಟನೆ, ರಂಗಗಾಯನ, ಜನಪದ, ಯಕ್ಷಗಾನ, ಭಜನೆ, ಧಾರ್ಮಿಕ ಕಾರ್ಯಕ್ರಮ, ಸಂಗೀತ ಕಲಿಸುವಿಕೆಯಲ್ಲಿ ಅವಿರತ ನಿರತರು. ನಟನೆಯೇ ಪ್ರಧಾನ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳ ಪೋಷಣೆ, ಗೋಣಿಬಸವೇಶ್ವರ ನಾಟಕದಲ್ಲಿ ಗೋಣಿಬಸವೇಶ್ವರ ಪಾತ್ರಕ್ಕೆ ೧೦೮೯ ಬಾರಿ ಬಣ್ಣ ಹಚ್ಚಿದ ದಾಖಲೆ. ಮಕ್ಕಳಿಗೆ ಸಂಗೀತ ಪಾಠ ಹೇಳಿದ ಗುರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿಯ ಸಂದೇಶ ಸಾರಿದ ಹಿರಿಮೆ, ಅರವತ್ತೈದು ವರ್ಷಗಳಿಂದಲೂ ಅವಿರತವಾಗಿ ಕಲಾಸೇವೆಗೈದ ಕಲಾವಿದರು. ಬಸವರತ್ನ ಪ್ರಶಸ್ತಿ, ಮೈಸೂರಿನ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಕಲಾವಂತರು.