Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ದ್ವಾರಕೀ ಕೃಷ್ಣಸ್ವಾಮಿ

ಗಾಯಕಿಯಾಗಿದ್ದ ದ್ವಾರಕಿ ಕೃಷ್ಣಸ್ವಾಮಿ ಶಸ್ತ್ರಚಿಕಿತ್ಸೆ ನಂತರ ಗಾಯನ ಸಾಮರ್ಥ ಕಳೆದುಕೊಂಡ ನಂತರ ಆಯ್ಕೆ ಮಾಡಿಕೊಂಡದ್ದು ಕೊಳಲು ವಾದನವನ್ನು
ದೇಶದ ಪ್ರಸಿದ್ಧ ಭರತನಾಟ್ಯ ಕಲಾವಿದರೊಂದಿಗೆ ಕೊಳಲು ವಾದನ ಸಹಕಾರ ನೀಡುತ್ತಾ ಹೆಸರು ಮಾಡಿರುವ ದ್ವಾರಕಿ ಕೃಷ್ಣಸ್ವಾಮಿ ನೃತ್ಯ ಹಾಗೂ ಸಂಗೀತ ಕ್ಷೇತ್ರವನ್ನು ಕುರಿತಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಅನೇಕ ರೂಪಕಗಳನ್ನು ಸಂಯೋಜಿಸಿರುವ ಇವರು ನೃತ್ಯ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಹಲವು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಇವರಿಗೆ ಸಂಗೀತ ನೃತ್ಯ ಅಕಾಡೆಮಿ, ಗಾಯನ ಸಮಾಜದ ಗೌರವ ಪ್ರಶಸ್ತಿಗಳು ಲಭಿಸಿವೆ.