Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಪ್ರೊ.ಜಿ.ಕೆ. ವೀರೇಶ್

ಕೇಂದ್ರ ಸರ್ಕಾರವು ಇವರ ವರದಿಗಳ ಅನುಸಾರ ಕೃಷಿ ಇಲಾಖೆಯನ್ನು ಮರು ಸಂಘಟಿಸಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಎಂದು ನಾಮಕರಣ ಮಾಡಿದೆ ಎಂಬುದು ಇವರ ಅಧ್ಯಯನಶೀಲತೆಯ ಹೆಗ್ಗಳಿಕೆಗೆ ಸಂದ ಗರಿ.
ಕೃಷಿಕರ ಸರಣಿ ಆತ್ಮಹತ್ಯೆ ಸಮಸ್ಯೆಯ ಪರಿಹಾರಕ್ಕಾಗಿ ಎರಡು ದಶಕಗಳ ಹಿಂದೆ ರಚಿಸಿದ್ದ ಆಯೋಗದ ನೇತೃತ್ವ ವಹಿಸಿದ್ದ ಪ್ರೊ| ಜಿ.ಕೆ.ವೀರೇಶ ಅವರ ಶಿಫಾರಸ್ಸುಗಳನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ಅನುಷ್ಟಾನ ಮಾಡಿದೆ.
ಸರ್ಕಾರದ ಹಲವು ಸಮಿತಿಗಳಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆಯುತ್ತಿರುವ ಪ್ರೊ. ಜಿ.ಕೆ.ವೀರೇಶ್ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸುಸ್ಥಿರ ಕೃಷಿ ಪದ್ಧತಿಯ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೃಷಿ ತಜ್ಞರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿರುವ ಜಿ.ಕೆ.ವೀರೇಶ ರೈತರಿಗೆ ಹಾಗೂ ರೈತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತಹ ಹಲವು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಭಾರತೀಯ ಕೃಷಿ ಸಂಸ್ಥೆಯ ಸಮಾಲೋಚಕರಲ್ಲೊಬ್ಬರಾದ ಡಾ|| ಜಿ.ಕೆ.ವೀರೇಶ್ ತೃತೀಯ ವಿಶ್ವದಲ್ಲಿ ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೀಲನಕಾಶೆ ರಚಿಸಿಕೊಟ್ಟ ಉನ್ನತ ಸಮಿತಿಯಲ್ಲಿ ಸಹ ಕೆಲಸ ಮಾಡಿದ್ದಾರೆ.