Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಕೆ. ಪುಟ್ಟಯ್ಯ

ಸೊಪ್ಪು, ಉಪ್ಪು, ವಿದ್ಯುತ್ ಖರೀದಿ ಬಿಟ್ಟರೆ ಆಹಾರ ಧಾನ್ಯಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುವ ಸಮಗ್ರ ಕೃಷಿ ಪದ್ಧತಿಯ ಪ್ರಗತಿಪರ ರೈತ ಕೆ. ಪುಟ್ಟಯ್ಯ ಅವರು ಮೊದಲಿಗೆ ಜೀತದಾಳಾಗಿ ದುಡಿಯುತ್ತಿದ್ದರು. ನಂತರ ನಾಲ್ಕು ಎಕರೆ ದರಖಾಸ್ತು ಜಮೀನು ಹೊಂದಿದ್ದು, ನಲವತ್ತು ಜನ ಅವಿಭಕ್ತ ಕುಟುಂಬದ ಬದುಕಿಗೆ ಬೇಕಾದ ಎಲ್ಲ ದವಸ ಧಾನ್ಯಗಳನ್ನು ಬೆಳೆದುಕೊಳ್ಳಬೇಕಾಗುತ್ತಿತ್ತು.
ಲಭ್ಯವಿದ್ದ ನೀರಿನ ಮೂಲಗಳನ್ನು ಉಪಯೋಗಿಸಿಕೊಂಡು ಹಸಿರೆಲೆ ಗೊಬ್ಬರ ಬಳಸಿ ಸಾವಯವ ಕೃಷಿ ನಡೆಸಿದ ಪುಟ್ಟಯ್ಯ, ಇಂದು ತಮ್ಮ ಜಮೀನಿನಲ್ಲಿ ತರಿ, ಖುಷ್ಕ ಎರಡೂ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಪಶು ಸಂಗೋಪನೆಯನ್ನು ಸಹ ಮಾಡುತ್ತಾರೆ.
ಕೃಷಿ ಹೊಂಡದಿಂದ ಬೇಸಾಯಕ್ಕೆ ಆಗುವ ಅನುಕೂಲಗಳನ್ನು ಅರಿತುಕೊಂಡು ಅದರಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಪುಟ್ಟಯ್ಯ ಬೇರೆ ರೈತರಿಗೂ ಮಾದರಿ ಆಗಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಪ್ರಗತಿಪರ ರೈತ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ಕೊಟ್ಟು ಮನೆಮಾತಾದವರು.