Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಮೊಹಮ್ಮದ್ ಇದ್ರಿಸ್ ಖಾದ್ರಿ

ಮೊಹಮ್ಮದ್ ಇದ್ರಿಸ್ ಖಾದ್ರಿ ಅವರು ಬೀದರ್ ಜಿಲ್ಲೆಯಲ್ಲಿ ಸಮಗ್ರ ಕೃಷಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡವರು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಕಬ್ಬು ಮತ್ತು ಮಾವಿನ ತಳಿಗಳನ್ನು ಬೆಳೆಸಿ ಅತ್ಯುತ್ತಮ ಇಳುವರಿಯನ್ನು ಪಡೆದಿರುವ ಮೊಹಮದ್ ಖಾದ್ರಿ ಅವರು ಹೊಸ ತಲೆಮಾರಿನ ರೈತರಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾದ್ರಿ ಅವರ ಸಮಗ್ರ ಕೃಷಿ ಪದ್ದತಿಯನ್ನು ಗುರುತಿಸಿ ಗೌರವ ಪ್ರಶಸ್ತಿಯನ್ನು ಕೊಡಮಾಡಿದೆ. ನವದೆಹಲಿಯ ಐಸಿಎಆರ್ ಸಂಸ್ಥೆ ಸಹ ಅವರನ್ನು ಗೌರವಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ೨೦೧೫ನೆಯ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಡಾ|| ಮೊಹಮ್ಮದ್ ಇದ್ರಿಸ್ ಖಾದ್ರಿ ಅವರಿಗೆ ನೀಡಿ ಗೌರವಿಸಿದೆ.