Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಟಿ. ಶಿವಣ್ಣ

ಶಿಕ್ಷಣದ ಬಹು ಅಂಗಗಳಲ್ಲಿ ಮಾದರಿಯಾದ ಕಾರ್ಯಗಳನ್ನು ಕೈಗೊಂಡ ಶಿಕ್ಷಣ ತಜ್ಞರು ಪ್ರೊಟಿ. ಶಿವಣ್ಣ. ಅಧ್ಯಯನ, ಅಧ್ಯಾಪನ, ಸಮುದಾಯದ ಸೇವೆ ಮತ್ತು ಬರವಣಿಗೆಯಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದವರು.
ಸಕ್ಕರೆಯ ನಾಡಿನ ಗಟ್ಟಿ ಪ್ರತಿಭೆ ಪ್ರೊ.ಟಿ. ಶಿವಣ್ಣ. ಮದ್ದೂರು ಜನ್ಮಸ್ಥಳ. ೧೯೩೦ರ ಸೆಪ್ಟೆಂಬರ್ ೨ರಂದು ಜನಿಸಿದ ಶಿವಣ್ಣ ಅವರು ಬಿ.ಎ ಹಾನರ್ ಪದವೀಧರರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕ, ರೀಡರ್, ಪ್ರಾಚಾರ್ಯ ಮತ್ತು ಪ್ರಾಂಶುಪಾಲರಾಗಿ ಶೈಕ್ಷಣಿಕ ಸೇವೆ. ಎನ್‌ಸಿ ಅಧಿಕಾರಿಯಾಗಿ ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಪ್ರತಿಭಾವಂತರು. ಬೆಂಗಳೂರು ವಿ.ವಿ ಯ ಶೈಕ್ಷಣಿಕ ಮಂಡಳಿ, ಸೆನೆಟ್, ಸಿಂಡಿಕೇಟ್ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿಯೂ ಸೇವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮಾಜವಿಜ್ಞಾನ ಪುಸ್ತಕಗಳ ರಚನೆ, ರಂಗನಟನೆ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ, ವಿದೇಶ ಪ್ರವಾಸಗಳು ನೆಚ್ಚಿನ ಹವ್ಯಾಸ ಮಾತ್ರವಲ್ಲ ಅವರ ಬಹುಮುಖಿ ಆಸಕ್ತಿ-ಸಾಧನೆಗೆ ಸಾಕ್ಷಿ. ಆರು ದಶಕದಲ್ಲಿ ವಿದೇಶಗಳಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೊಂಡು ಭಾಷಣಕಾರರಾಗಿ ವಿದ್ವತ್ ಮೆರೆದ ಪ್ರೊಟಿ.ಶಿವಣ್ಣರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿಗಳು ಸಂದಿದ್ದು ೯೦ರ ಆಸುಪಾಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ಸಾಧಕರಿಗೆ ಅವರ ಬದುಕೇ ನೈಜ ಪ್ರೇರಣೆ.