Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ರಾಮಣ್ಣ ಬ್ಯಾಟಿ (ವಿಶೇಷ ಚೇತನ)

ಗದಗ ಜಿಲ್ಲೆಯ ವಿಶೇಷ ಚೇತನ ರಾಮಣ್ಣ ಬ್ಯಾಟಿ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅನನ್ಯ ಸಾಧಕರು. ಅಂಧತ್ವದಲ್ಲೇ ಸಾಹಿತ್ಯದ ಬೆಳಕು ಹರಿಸಿದ ಮಹಾಪ್ರತಿಭೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ-ಸುರೇಖಾನ ರಾಮಣ್ಣರ ಹುಟ್ಟೂರು. ಓದಿದ್ದು ನಾಲ್ಕ ತರಗತಿಯಾದರೂ ಬೆಳೆದದ್ದು ಆಗಸದೆತ್ತರಕ್ಕೆ, ಹೊರಗಣ್ಣಿನ ಅಂಧತ್ವ ಮೀರಿ ಒಳಗಣ್ಣಿಂದ ಲೋಕ ಅರಿತವರು. ಆಂತರ್ಯದ ಭಾವಗಳಿಗೆ ಅಕ್ಷರ ರೂಪವಿತ್ತು ಕಾವ್ಯಕಟ್ಟಿದ ಆಶುಕವಿ. ಗದ್ಯ-ಪದ್ಯಗಳ ರಚನೆಯಲ್ಲಿ ನಿಸ್ಸಿಮರು. ಚೌಪದಿ ಕಾವ್ಯ, ಭಾಮಿನಿ ಷಟ್ನದಿಯಲ್ಲಿ ರಚಿಸಿದ ಉದ್ಭಂಥಗಳು ಜನಾನುರಾಗಿ, ಸಿದ್ದಲಿಂಗ ಕಾವ್ಯಸುಧೆ, ಹೊಳಲಮ್ಮದೇವಿ ಶತಕ, ರಂಗಾವಧೂತರ ಚರಿತ್ರೆ ಗೌರಿಶಂಕರ ಚರಿತಾಮೃತ, ಹುಲಿಗೆಮ್ಮದೇವಿ ವ್ರತ ಮಹಾತ್ಮ ಮುಂತಾದ ೬೦ ಗ್ರಂಥಗಳು ಸಾಹಿತ್ಯಲೋಕಕ್ಕೆ ಕೊಟ್ಟ ಅನನ್ಯ ಕೊಡುಗೆ. ಗದಗ-ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅವ್ವ ಪ್ರಶಸ್ತಿ, ದೇವರ ದಾಸಿಮಯ್ಯ ಮುಂತಾದ ಪ್ರಶಸ್ತಿಗಳಿಗೆ ಸತ್ಪಾತ್ರರು.