Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಲೇರಿಯನ್ ಡಿಸೋಜ (ವಲ್ಲಿ ವಗ್ಗ)

ಕೊಂಕಣಿ ಪ್ರಾದೇಶಿಕ ಭಾಷೆಯ ವಿಶಿಷ್ಟ ಪ್ರತಿಭೆ ವಲೇರಿಯನ್ ಡಿಸೋಜ, ಕೊಂಕಣಿ ಸಾಹಿತಿ, ಕನ್ನಡ ಕಥೆಗಾರರಾಗಿ ಅವರದ್ದು ಅಚ್ಚಳಿಯದ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾದ ವಲೇರಿಯನ್ ಡಿಸೋಜ 17ರ ಹರೆಯದಲ್ಲೇ ಸಾಹಿತ್ಯ ಲೋಕ ಪ್ರವೇಶಿಸಿದ ಕಥೆಗಾರ. ವೃತ್ತಿಯಲ್ಲಿ ಕೈಗಾರಿಕೋದ್ಯಮಿ, ಪ್ರವೃತ್ತಿಯಲ್ಲಿ ಬರಹಗಾರ- ಪ್ರಕಾಶಕ, ಚೊಚ್ಚಲ ಕೊಂಕಣಿ ಕಥೆ ‘ರಾಕೆ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ಬರವಣಿಗೆಗೆ ಮಹಾಸ್ಫೂರ್ತಿ. ಕಥೆ, ಕವನ, ಲೇಖನ, ಅಂಕಣಬರಹ, ನಾಟಕ ಪ್ರಕಾರಗಳಲ್ಲಿ 56 ವರ್ಷಗಳಿಂದ ನಿರಂತರ ಸಾಹಿತ್ಯ ಕೃಷಿ, ಕವಿಗೋಷ್ಠಿ- ವಿಚಾರಗೋಷ್ಠಿಯಲ್ಲಿ ವಿದ್ವತ್ತಿನ ಮಂಡನೆ, ಕೊಂಕಣಿಯಲ್ಲಿ ಏಳು, ಕನ್ನಡದ ಒಂದು ಕೃತಿ ಪ್ರಕಟಣೆ, ಕೊಂಕಣಿ ನಿಯತಕಾಲಿಕಗಳಲ್ಲಿ 150, ಕನ್ನಡದ ಪತ್ರಿಕೆಗಳಲ್ಲಿ 40 ಕಥೆಗಳು ಪ್ರಕಟ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೌರವ ಪ್ರಶಸ್ತಿ, ಬೆಹರಾನ್-ದುಬೈ ಸಂಘಟನೆಗಳಿಂದಲೂ ಗೌರವಕ್ಕೆ ಭಾಜನರಾದ ಸಾಧಕ.