Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಚ, ಸರ್ವಮಂಗಳಾ

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು ಚ. ಸರ್ವಮಂಗಳಾ. ಕಾವ್ಯ, ಅನುವಾದ ಮತ್ತು ಸಂಪಾದನಾ ಕ್ಷೇತ್ರದಲ್ಲಿ ಕೃಷಿಗೈದವರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸರ್ವಮಂಗಳಾ ಹುಟ್ಟಿದ್ದು ೧೯೪೮ರಲ್ಲಿ. ಓದಿನೊಟ್ಟಿಗೆ ಬರಹ, ಸಾಮಾಜಿಕ ಹೋರಾಟಗಳಿಂದ ಅರಳಿದ ಮಹಿಳಾ ಪರ ಸಶಕ್ತ ದನಿ. ಇವರ ಅಮ್ಮನಗುಡ್ಡ ಕವನಸಂಕಲನ. ೯ ಭಾಷೆಗಳಿಗೆ ಅನುವಾದಿತಗೊಂಡಿರುವ ಕೃತಿ, ಜ್ಞಾನಶ್ರೀ, ಎರಡು ದಶಕಗಳ ಕಾವ್ಯ, ಚದುರಂಗ ಮಾಚಿಕೆ ಸಂಪಾದಿತ ಕೃತಿಗಳು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮ ಎಂಬ ಮುಕ್ತವೇದಿಕೆ, ಪಿಯುಸಿಎಲ್ ಹಾಗೂ ಭಾರತ-ಚೀನಾ ಮೈತ್ರಿ ಸಂಘದ ಸಂಚಾಲಕಿ, ಮೈಸೂರು ವಿವಿ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿಯ ಅಧ್ಯಕ್ಷೆಯಾಗಿಯೂ ದುಡಿದವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಾಹಿತ್ಯ ಸಲಹಾ ಸಮಿತಿಯ ಸದಸ್ಯೆಯಾಗಿ ಸೇವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ದಿನಕರ್ ದೇಸಾಯಿ ಪ್ರಶಸ್ತಿ ಹಾಗೂ ಚನ್ನಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಪಾತ್ರರು.