Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಹಸನ್ ನಂ ಸುರಕೋಡ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಪ್ರತಿಭೆ ಹಸನ್ ನಯೀಂ ಸುರಕೋಡ, ಕನ್ನಡದ ಹೆಸರಾಂತ ಅನುವಾದಕರು. ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು, ಸಮಾಜವಾದಿ ಚಿಂತಕರು.
ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮಯೆ ಮುಂತಾದವರ ಬರಹಗಳನ್ನು ಅನ್ಯಭಾಷೆಗೂ, ಕೋಮುಸೌಹಾರ್ದತೆಯ ನೆಲೆಗಳನ್ನು ಬಿಂಬಿಸುವ ಹಲವಾರು ಬರಹಗಳನ್ನು ಕನ್ನಡಕ್ಕೂ ಅನುವಾದಿಗೊಳಿಸಿದ ಹಿರಿಮೆ ಹಸನ್ ನ ೀಂ ಸುರಕೋಡರದ್ದು. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಕಾವ್ಯ-ಬದುಕು, ಸಾದತ್ ಹಸನ್ ಮಾಂಟೋ ಕಥನಕೃತಿಗಳು, ಅಮೃತಾಪ್ರೀತಂರ ಆತ್ಮಕತೆ, ಅಸರ್ ಆಲಿ ಅವರ ವೈಚಾರಿಕ ಬರಹಗಳನ್ನು ಕನ್ನಡಕ್ಕೆ ತಂದಿರುವ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಸನ್ ನಯೀಂ ಸುರಕೋಡ ಅವರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ಉರ್ದು ಕವಿ ಸಾಹಿರ್ ಲುಧಿಯಾನವಿರ ಕುರಿತ ‘ಪ್ರೇಮ ಲೋಕದ ಮಾಯಾವಿ’ ಇವರ ವಿಶಿಷ್ಟ ಕೃತಿಯಾಗಿದೆ.