Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮಾರ್ಗರೇಟ್ ಆಳ್ವಾ

ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಮಾರ್ಗರೇಟ್ ಆಳ್ವಾ ಅವರದ್ದು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಪ್ರಮುಖರು.
ಮಂಗಳೂರಿನ ಕ್ರೈಸ್ತ ಕುಟುಂಬದ ಕುಡಿಯಾಗಿ ೧೯೪೨ರ ಏಪ್ರಿಲ್ ೧೪ರಂದು ಜನಿಸಿದ ಮಾರ್ಗರೇಟ್ ಆಳ್ವಾ ಅವರು ಸುಶಿಕ್ಷಿತರು. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿ.ಎ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು. ವಿದ್ಯಾಭ್ಯಾಸದ ಬಳಿ ವಕೀಲೆಯಾಗಿ ವೃತ್ತಿಬದುಕು ಆರಂಭಿಸಿದ ಮಾರ್ಗರೇಟ್ ಆಳ್ವಾ ಅವರು ಮಹಿಳೆ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುವ ‘ಕರುಣಾ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿ ಸೇವೆ ಸಲ್ಲಿಸಿದವರು. ಪತಿಯ ಪ್ರೋತ್ಸಾಹದ ಮೇರೆಗೆ ೧೯೬೯ರಲ್ಲಿ ರಾಜಕಾರಣಕ್ಕೆ ಧುಮುಕಿದ ಅವರು ೧೯೭೪ರಿಂದ ೯೨ರವರೆಗೆ ಸತತವಾಗಿ ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡವರು. ರಾಜ್ಯಸಭೆಯ ಉಪಾಧ್ಯಕ್ಷೆಯೂ ಆಗಿದ್ದ ಅವರು ೧೯೯೯ರಲ್ಲಿ ೧೩ನೇ ಲೋಕಸಭೆಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ೨೦೦೯ರಲ್ಲಿ ಉತ್ತರಾಕಾಂಡನ ಪ್ರಪ್ರಥಮ ಮಹಿಳಾ ರಾಜ್ಯಪಾಲೆಯಾಗಿದ್ದ ಅವರು ೨೦೧೨ರಿಂದ ೧೪ರವರೆಗೆ ರಾಜಸ್ತಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದು ವಿಶೇಷ.