Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಕೆ. ಕೃಷ್ಣಕುಮಾರ್ ಪೂಂಜ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯವರದ ಕೃಷ್ಣಕುಮಾರ್ ಪೂಂಜ ಅವರು ಸಮಾಜಸೇವೆಗಾಗಿ ಬದುಕು ಮುಡಿಪಿಟ್ಟ ನಿಜಸೇವಕರು. ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಅಹರ್ನಿಶಿ ಶ್ರಮಿಸಿದ ಕರುಣಾಮಯಿ.
೧೯೫೪ರಲ್ಲಿ ಫರಂಗಿಪೇಟೆಯಲ್ಲಿ ಜನಿಸಿದ ಕೃಷ್ಣಕುಮಾರ್ ಪೂಂಜ ಬಿ.ಕಾಂ ಪದವೀಧರರು. ವಿಜಯಾಬ್ಯಾಂಕ್ ವೃತ್ತಿಯಲ್ಲಿದ್ದುಕೊಂಡೇ ಸಮಾಜಸೇವೆಯನ್ನೇ ಪ್ರವೃತ್ತಿಯಾಗಿಸಿಕೊಂಡವರು. ಸೇವೆಯಿಂದ ಸಾರ್ಥಕತೆ ಎಂಬುದು ಅವರ ಧೈಯವಾಕ್ಯ. ಸೇವಾಂಜಲಿ ಪ್ರತಿಷ್ಠಾನದ ಧರ್ಮದರ್ಶಿಯಾಗಿ ೨೫ ವರ್ಷಗಳಿಂದಲೂ ಪ್ರತಿ ತಿಂಗಳಗೊಂದರಂತೆ ೫೪೫ ಉಚಿತ ವೈದ್ಯಕೀಯ ಶಿಬಿರ ಸಂಘಟಿಸಿ ಲಕ್ಷಾಂತರ ಜನರಿಗೆ ನೆರವಾದವರು. ೯೯ ರಕ್ತದಾನ ಶಿಬಿರ, ೬೦ ಉಚಿತ ನೇತ್ರ ತಪಾಸಣಾ ಶಿಬಿರ, ೨೦ಕ್ಕೂ ಹೆಚ್ಚು ದಂತ ಚಿಕಿತ್ಸಾ ಶಿಬಿರ, ೩೦೦೦ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೨೦ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು. ಲಲಿತಕಲೆಗಳ ತರಬೇತಿ, ಉಚಿತ ಆರೋಗ್ಯ ಕೇಂದ್ರ ಸ್ಥಾಪನೆ, ೩೦೦೦ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ ಮುಂತಾದ ಸೇವಾಕೈಂಕರ್ಯ ಕೈಗೊಂಡ ಹಿರಿಮೆ ಇವರದ್ದು. ಹಲವು ಪ್ರಶಸ್ತಿ-ನೂರಾರು ಸನ್ಮಾನಗಳಿಂದ ತ್ತೇಜಿತಗೊಂಡ
ಸೇವಾನಿರತರು.