Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಆನಂದ ಸಿ. ಕುಂದರ್

ಸಮುದಾಯದ ಸೇವೆಯನ್ನು ದೈವಸೇವೆಯೆಂದು ಕೈಗೊಂಡವರು ಆನಂದ್ ಸಿ. ಕುಂದರ್. ಹಲವು ಕ್ಷೇತ್ರಗಳಲ್ಲಿ ಅಶಕ್ತರಿಗೆ ನೆರವಾದ ಬಂಧು. ಶಿಕ್ಷಣದ ಜ್ಯೋತಿ ಬೆಳಗಿದ ದಯಾಳು.
ದಕ್ಷಿಣ ಕನ್ನಡ ಜಿಲ್ಲೆಯ ಮಣೂರು-ಪಡುಕೆರೆಯ ಆನಂದ್ ಸಿ. ಕುಂದರ್ ಕುಂದಾಪುರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದವರು. ಜನತಾಶಿಕ್ಷಣ ಸಂಸ್ಥೆ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ, ಧಾರ್ಮಿಕ, ಕ್ರೀಡೆ, ಪರಿಸರ ಮತ್ತು ನೈರ್ಮಲ್ಯದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ೨೫ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ ಪುಸ್ತಕ, ೮೦೦ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ, ಮಳೆನೀರು ಸಂಗ್ರಹಗಾರಗಳ ನಿರ್ಮಾಣ, ೧೨ ಸಾವಿರ ಗಿಡಗಳ ವಿತರಣೆ, ಪ್ಲಾಸ್ಟಿಕ್ ವಿರೋಧಿ ಜಾಥಾ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತುರ್ತು ರಕ್ತನಿಧಿ ಸ್ಥಾಪನೆ ಮುಂತಾದವು ಆನಂದ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು, ಪರಿಸರ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳಿಗೆ ಪಾತ್ರರು.