Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಎಂ. ನಾರಾಯಣ

ಸಂಗೀತ ಕ್ಷೇತ್ರ ಕಂಡ ಪ್ರತಿಭಾವಂತ ಕೃತಿರಚನಕಾರರು ಎಂ.ನಾರಾಯಣ, ತುಳುಭಾಷೆಯಲ್ಲಿ ವರ್ಣ ಮತ್ತು ಕೃತಿಗಳನ್ನು ರಚಿಸಿದ ಮೊದಲಿಗರು. ಸಂಗೀತದ ಗುರು, ಅತ್ಯುತ್ತಮ ಗಾಯಕರು ಹಾಗೂ ಅಪರೂಪದ ೭೨ ಮೇಳ ಕರ್ತರಾಗಗಳ ಕೃತಿ ರಚನೆಕಾರರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ (೧೯೪೩ರಲ್ಲಿ ಜನಿಸಿದ ಸಂಗೀತ ವಿದ್ವಾನ್ ಎಂ. ನಾರಾಯಣ ಅವರಿಗೆ ಹೆಸರಾಂತ ವೇಣುವಾದನ ವಿದ್ವಾಂಸರಾಗಿದ್ದ ತಂದೆ ಎಂ.ಬಾಬು ಮೊದಲ ಗುರು. ಗೋಪಾಲಕೃಷ್ಣ ಅಯ್ಯರ್ ಅವರ ಬಳಿ ವಿಶೇಷ ಸ್ವರಾಭ್ಯಾಸ, ಮಂಗಳೂರು ಆಕಾಶವಾಣಿ ಕಲಾವಿದರಾಗಿ ಸಂಗೀತಕ್ಷೇತ್ರದಲ್ಲಿ ಸಾಧನಾಯಾನ ಆರಂಭ. ದೂರದರ್ಶನ ಕಲಾವಿದರಾಗಿ ಸ್ವರಪ್ರೇಮಿಗಳಿಗೆ ಚಿರಪರಿಚಿತರು. ಸುರತ್ಕಲ್ ಮತ್ತು ಮುಲ್ಕಿಯಲ್ಲಿ ಮೂರು ದಶಕಗಳಿಂದ ಸಾವಿರಾರು ಮಕ್ಕಳಿಗೆ ಸಂಗೀತ ಕಲಿಸಿದ ಮಹಾಗುರು, ಹೆಸರಾಂತ ಗಾಯನ-ಬೋಧನೆಯ ಜತೆಗೆ ಕೃತಿರಚನಕಾರರಾಗಿ ಹೆಗ್ಗುರುತು.