Categories
ಕನ್ನಡ ಸೇವೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ ಜಯಸಿಂಹ

ಶ್ರೀ ಕೆ ಜಯಸಿಂಹ ಕನ್ನಡಪರವಾದ ಕ್ರಿಯಾತ್ಮಕ ಕೆಲಸಕ್ಕೆ ಸದಾ ಸಿದ್ಧವಾಗಿರುವ ಶ್ರೀ ಕೆ ಜಯಸಿಂಹ ಅವರು ನಾಡಿನ ಎಲ್ಲ ವಲಯಗಳಲ್ಲೂ ಕನ್ನಡ ಭಾಷೆ-ಸಂಸ್ಕೃತಿಗಳು ಬೇರೂರಬೇಕೆಂಬ ಕನಸು ಹೊತ್ತವರು.

ಮೈಸೂರು ವಾಸಿಯಾದ ಶ್ರೀ ಜಯಸಿಂಹ ಅವರು ಕನ್ನಡವನ್ನು ಒಂದು ರಚನಾತ್ಮಕ ಕೆಲಸವೆಂದು ಭಾವಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತಿಳಿವಳಿಕೆಯಿಂದ ಕನ್ನಡಪರ ಹೋರಾಟಕ್ಕೆ ಸಂವೇದನೆಯ ಸ್ಪರ್ಶವನ್ನು ತಂದುಕೊಟ್ಟಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಬದ್ಧತೆಯಿಂದ ದುಡಿಯುತ್ತ ಬಂದಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಆಂದೋಲನಗಳ ರೂವಾರಿಯಾಗಿದ್ದಾರೆ.

೧೯೯೪ರಲ್ಲಿ ಮೈಸೂರು ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಶ್ರೀ ಜಯಸಿಂಹ ಅವರನ್ನು ೧೯೯೮ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನಲ್ಲಿ ನಡೆಸಿದ ವಿಭಾಗ ಮಟ್ಟದ ಸಮಾವೇಶದಲ್ಲಿ ಸನ್ಮಾನಿಸಿದೆ. ಇದೇ ರೀತಿ ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನೆಗಳನ್ನು ನ್ನು ಪಡೆದಿದ್ದಾರೆ. ಹೀಗೆ ತಮ್ಮ ಜೀವನವನ್ನೇ ಕನ್ನಡ ಸೇವೆಗೆ ಮೀಸಲಾಗಿಟ್ಟಿರುವ ಶ್ರೀ ಜಯಸಿಂಹ ಅವರಿಗೆ ಕನ್ನಡ ರಾಜ್ಯೋತ್ಸವದ ಈ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.