Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಶೇಖರ್‌ ನಾರಾಯಣಪುರ

ಬೇಸಾಯ ಲಾಭದಾಯಕ ಎಂಬುದನ್ನು ನಿರೂಪಿಸಿದ ಕೃಷಿಪಂಡಿತರು ಎನ್.ಎಸ್. ಚಂದ್ರಶೇಖರ್, ನೈಸರ್ಗಿಕ ಕೃಷಿಯ ಪ್ರತಿಪಾದಕ, ರೈತರ ಆಶಾಕಿರಣ, ಆದರ್ಶ ಕೃಷಿರತ್ನ, ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಲ್ಲಿ ೧೯೬೦ರಲ್ಲಿ ಜನಿಸಿದ ಚಂದ್ರಶೇಖರ್ ಮೂಲತಃ ಕೃಷಿಕರಾದರೂ ಬಹುರೂಪಿ, ೧೫ ವರ್ಷದ ಅನುಭವವುಳ್ಳ ಪತ್ರಿಕೋದ್ಯಮಿ, ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಧ್ಯಯನಕ್ಕಾಗಿ ೨೪ ಸಾವಿರ ಹಳ್ಳಿಗಳ ವೀಕ್ಷಿಸಿದ ಅಲೆಮಾರಿ, ೨೦೦೯ರಲ್ಲಿ ಕೃಷಿರಂಗಪ್ರವೇಶ, ಉಳುಮೆ ಮಾಡದೇ, ಗೊಬ್ಬರ ಬಳಸದೇ, ಔಷಧಿ ಸಿಂಪಡಿಸದೇ ನೈಸರ್ಗಿಕ ವಾತಾವರಣ ಸೃಷ್ಟಿಸಿ ಬೆಳೆಗಳ ಉತ್ಪಾದಿಸಿ ನೈಸರ್ಗಿಕ ಕೃಷಿಯಲ್ಲಿ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ ತೋರಿಸಿದ ಪ್ರಗತಿಪರ ಕೃಷಿಕ, ಕಾಫಿ, ಕೋಕೋ, ಬಾಳೆ, ೧೦ ವಿಧದ ಹಣ್ಣಿನ ಗಿಡಗಳು, ಜಾಯಿಕಾಯಿ ಬೆಳೆದ ಕೃಷಿಋಷಿ, ನೈಸರ್ಗಿಕ ಕೃಷಿ ಕುರಿತು ೧೫೦೦ ರೈತರಲ್ಲಿ ಅರಿವು ಮೂಡಿಸಿದ ಹೆಗ್ಗಳಿಕೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಸಮ್ಮೇಳನ, ಆಕಾಶವಾಣಿ, ದೂರದರ್ಶನಗಳಲ್ಲಿ ಉಪನ್ಯಾಸ, ರೈತಬಳಗ ರಚಿಸಿ ಕೃಷಿ ಚಟುವಟಿಕೆ ಕುರಿತು ನಿರಂತರ ಸಮಾಲೋಚನೆ, ಪ್ರತಿಷ್ಠಿತ ಕೃಷಿಪಂಡಿತ ಪ್ರಶಸ್ತಿ, ವಾರಣಾಸಿಯ ಕೃಷಿರತ್ನ ಪ್ರಶಸ್ತಿ, ಗುಜರಾತ್ ಸರ್ಕಾರದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇನ್ನಿತರ ಗೌರವಗಳಿಂದ ಭೂಷಿತರು, ಲೇಖಕರೂ ಆಗಿರುವ ಚಂದ್ರಶೇಖರ್ ಮಾದರಿ ಕೃಷಿಕರು.