Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಕರಿಯಪ್ಪ

ಗ್ರಾಮೀಣರಿಗೆ ವೈದ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯವನ್ನೇ ಬದುಕಿನ ಕಾಯಕವಾಗಿಸಿಕೊಂಡವರು ಸಿ. ಕರಿಯಪ್ಪ, ಸಾವಿರಾರು ಬಡವರ ಕಣ್ಣಲ್ಲಿ ಬೆಳಕು ಮೂಡಿಸಿದ ಮಾದರಿ ಸಮಾಜಸೇವಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನರಸೀಪುರದ ಭೂಗಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜನಿಸಿದ ಕರಿಯಪ್ಪ ಓದಿದ್ದು ಪಿಯುಸಿ, ಕಣ್ಣಿನ ಕುರಿತ ಡಿಪ್ಲೋಮಾ, ಬಾಲ್ಯದಲ್ಲೇ ಆರ್‌ಎಸ್‌ಎಸ್ ಸಖ್ಯ ಶಿಕ್ಷವರ್ಗಾ ಪಡೆದು ಕಾರ್ಯವಾಹಕನಾಗಿಯೂ ದುಡಿದ ವೇಳೆಯೇ ಸೇವೆಗೆ ಬದುಕು ಮೀಸಲಿಡಬೇಕೆಂಬ ದಿವ್ಯನಿರ್ಧಾರ, ಅಯೋಧ್ಯೆಯ ರಥಯಾತ್ರೆಯಲ್ಲಿ ಭಾಗಿಯಾದ ಮೇಲೆ ಬದುಕೇ ಸೇವಾಕ್ಷೇತ್ರ, ಆರೋಗ್ಯ ಇಲಾಖೆಯ ನೇತ್ರ ಪರೀಕ್ಷಕನಾದ ಬಳಿಕ ಬಡಜನರ ಕಣ್ಣಿನ ಆರೋಗ್ಯರಕ್ಷಣೆಗಾಗಿ ಸಂಕಲ್ಪ, ಹಳ್ಳಿಗಳಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಖರಗಳ ಆಯೋಜನೆ, ಉಚಿತ ಕನ್ನಡಕಗಳನ್ನು ಕೊಡಿಸುವ ಕಾರ್ಯಕ್ಕೆ ಮುಂದಡಿ. ವಾರಕ್ಕೆ ೨೦ ಜನರಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಜತನದಿಂದ ಮಾಡಿಕೊಂಡು ಬಂದ ಕಾಯಕ, ಮೂರು ದಶಕಗಳಲ್ಲಿ ೧೦ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೫ ಸಾವಿರ ಬಡವರಿಗೆ ಉಚಿತ ಕನ್ನಡಕಗಳನ್ನು ದೊರೆಯುವಂತೆ ಮಾಡಿದ ಸಾರ್ಥಕತೆ, ವೃತ್ತಿಯಿಂದ ನಿವೃತ್ತರಾದರೂ ವೈದ್ಯಕೀಯ ಸೇವೆ ತಲುಪಿಸುವ ಕಾರ್ಯದಲ್ಲಿ ಅನವರತ ನಿರತ ಅನುಕರಣೀಯ ಸಮಾಜಮುಖಿ.