Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಸಂಧ್ಯಾ ಸತೀಶ್ ಪೈ

ಮಣಿಪಾಲದ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕಿಯಾಗಿರುವ ಡಾ|| ಸಂಧ್ಯಾ ಪೈ ವಾರಪತ್ರಿಕೆ ‘ತರಂಗ’ದ ಪ್ರಧಾನ ಸಂಪಾದಕರಾಗಿ ಓದುಗರ ಮನ ಮುಟ್ಟುವಂತೆ ಅನೇಕ ಅಂಕಣಗಳನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ.

ಸಮಾಜದಲ್ಲಿ ಘಟಿಸುವ ಸಣ್ಣ ಸಣ್ಣ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಅಮೂಲಾಗ್ರವಾದ ಚಿಂತನೆಗಳನ್ನು ಹರಿಯ ಬಿಡುವ ಅಂಕಣಗಳನ್ನು ಸಂಧ್ಯಾ ಪೈ ಅವರು ಓದುಗರಿಗೆ ದಾಟಿಸುತ್ತಿದ್ದಾರೆ. ಓದುಗರನ್ನು ಚಿಂತನೆಗೆ ಹಚ್ಚುವಂತಹ ಲೇಖನಗಳ ಮೂಲಕ ಮನಮುಟ್ಟುತ್ತಿರುವ ಸಂಧ್ಯಾ ಪೈ ಮಕ್ಕಳಿಗಾಗಿ ಅನೇಕ ವಿಚಾರಗಳನ್ನು ಸರಳವಾಗಿ ಹೇಳುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಂಧ್ಯಾ ಅವರ ಕೃತಿಗಳು ಓದುಗರನ್ನು ಮುಟ್ಟುತ್ತಿದೆ. ಡಾ|| ಸಂಧ್ಯಾ ಪೈ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.