Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ರಂ.ಶಾ, ಲೋಕಾಪುರ

ಕಥೆಗಾರರಾಗಿದ್ದು ಹಲವು ಕಥಾ ಸಂಕಲನಗಳನ್ನು ಹೊರತಂದಿರುವ ರಂ.ಶಾ.ಲೋಕಾಪುರ ಅವರು ಅನಂತಮೂರ್ತಿ ಮತ್ತು ಕಾರಂತರ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಸಂತ ಜ್ಞಾನೇಶ್ವರ ಅವರ ಮರಾಠಿ ಭಾಷೆಯ ಜ್ಞಾನೇಶ್ವರಿ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿರುವ ರಂ.ಶಾ.ಲೋಕಾಪುರ ಅವರು ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳ ಬಗ್ಗೆ ಮೌಲಿಕ ಸಾಹಿತ್ಯ ರಚಿಸಿದ್ದಾರೆ. ಹಾಸ್ಯ ಲೇಖನಗಳ ಮೂಲಕ ಜನಮಾನಸದಲ್ಲಿ ತಮ್ಮ ಛಾಪನ್ನು ಒತ್ತಿದ ರಂ.ಶಾ.ಲೋಕಾಪುರ ಅವರ ‘ಸಾವಿತ್ರಿ’ ಕಾದಂಬರಿಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ಈ ಕಾದಂಬರಿಯನ್ನು ಟಿ.ಎಸ್.ರಂಗಾ ಅವರು ಚಲನಚಿತ್ರವಾಗಿಸಿದರು. ಇವರ ಇನ್ನೊಂದು ಕಾದಂಬರಿ ‘ತಾಯಿ ಸಾಹೇಬ’ವನ್ನು ಗಿರೀಶ ಕಾಸರವಳ್ಳಿ ಅವರು ಚಲನಚಿತ್ರವಾಗಿಸಿದರು.
ಇವರ ಸಾಹಿತ್ಯ ಸಾಧನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.