Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಹನುಮಂತ ಬೊಮ್ಮಗೌಡ

ಹನುಮಂತ ಬೊಮ್ಮಗೌಡ ಅವರು ಪಾರ್ಶ್ವ ರೋಗವನ್ನು ನಿವಾರಿಸುವಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ತಮ್ಮ ತಂದೆಯವರಿಂದ ಕಲಿತ ಈ ಔಷಧಿ ಕೊಡುವ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಲು ಒಳರೋಗಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಿ ಪಾರ್ಶ್ವರೋಗ ಪೀಡಿತರಿಗೆ ಅವರು ನೆರವಾಗುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಇವರ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ ಹನುಮಂತ ಬೊಮ್ಮಗೌಡ ವನ ಔಷಧಗಳಿಂದ ಪಾರ್ಶ್ವರೋಗ ಪೀಡಿತರಿಗೆ ಲೇಪನ ಚಿಕಿತ್ಸೆಯನ್ನು ಮಾಡುವಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.