Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿ.ಎಚ್. ಹನ್ನೆರಡು ಮಠ

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಜಿ.ಎಚ್. ಹನ್ನೆರಡು ಮಠ ಅವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಪ್ರವಾಸ, ನಾಟಕ, ಪ್ರಬಂಧ, ಚಿಂತನೆ ಹೀಗೆ ಹಲವಾರು ವಿಚಾರ ವೈವಿಧ್ಯಗಳನ್ನು ಕುರಿತು ೯೪ ಪುಸ್ತಕಗಳನ್ನು ರಚಿಸಿದ್ದಾರೆ. ‘ಬಸವ ಕಾವ್ಯದರ್ಶನಂ’ ಎಂಬ ಮಹಾಕಾವ್ಯವನ್ನು ರಚಿಸಿರುವ ಜಿ.ಎಚ್. ಹನ್ನೆರಡು ಮಠ ಅವರು ನಾಟಕಕಾರರಾಗಿಯೂ ಹೆಸರು ಮಾಡಿದ್ದಾರೆ. ಮಕ್ಕಳ ನಾಟಕಗಳೂ ಸೇರಿಂದಂತೆ ೨೫ ನಾಟಕಗಳನ್ನು ಬರೆದಿರುವ ಅವರು, ಬಸವಣ್ಣನವರ ಆಶಯಗಳನ್ನು ಪ್ರಚುರಪಡಿಸಿದ ಶರಣರ ಬದುಕು ಹಾಗೂ ಸಾಧನೆಯನ್ನು ಕುರಿತು ಅರ್ಥಪೂರ್ಣವಾದಂತಹ ಎಂಟು ಕಾದಂಬರಿಗಳನ್ನು ಪ್ರತ್ಯೇಕವಾಗಿ ಹಾಗೂ ಸಂಕಲಿತವಾಗಿ ‘ಮಹಾಸಂಗಮ’ ಎಂಬ ಬೃಹತ್ಸಂಪುಟ ರೂಪದಲ್ಲಿ ಹೊರತಂದಿದ್ದಾರೆ. ಜಿ.ಎಚ್. ಹನ್ನೆರಡು ಮಠ ಅವರು ಚಲನ ಚಿತ್ರಗಳಿಗಾಗಿಯೂ ಹಾಗೂ ಟೆಲಿವಿಷನ್‌ಗಾಗಿಯೂ ಸಾಹಿತ್ಯ ಗೀತೆಗಳನ್ನು ರಚಿಸಿದ್ದು, ರಂಗದ ಮೇಲೆ ಹಾಗೂ ಬಾನುಲಿಯಲ್ಲಿಯೂ ಅವರ ರಂಗಕೃತಿಗಳು ಪ್ರಯೋಗವಾಗಿವೆ. ಇವರಿಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ.