Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಿಷ್ಣು ಜಿ. ಭಂಡಾರಿ

ವಿಷ್ಣು ಜಿ. ಭಂಡಾರಿ ಅವರು ಚುಟುಕ ಬ್ರಹ್ಮ ದಿನಕರ ದೇಸಾಯಿರವರ ಗರಡಿಯಲ್ಲಿ ಪಳಗಿ ದೇಸಾಯಿಯವರಂತೆಯೇ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡಪರ ಹೋರಾಟದಲ್ಲಿ ಪಾಲುಗೊಳ್ಳುತ್ತಾ ಬಂದಿದ್ದಾರೆ. ಕನ್ನಡ ಗ್ರಂಥಗಳ ಮಾರಾಟವನ್ನು ತಮ್ಮ ಊರಿನಿಂದಲೇ ಆರಂಭಿಸಿದರು ವಿಷ್ಣು ಜಿ. ಭಂಡಾರಿ ಚುಟುಕುಗಳನ್ನು ವಿಡಂಬಾರಿ ಎಂಬ ಕಾವ್ಯ ನಾಮದಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಅಂಚೆ ಪೇದೆ ಆಗಿಯೂ ಕಾರ್ಯನಿರ್ವಹಿಸಿದ ವಿಷ್ಣು ಜಿ. ಭಂಡಾರಿ ಅವರು ‘ಅಂಚೆ ಪೇದೆಯ ಆತ್ಮಕಥೆ’ ಎಂ ಕೃತಿಯನ್ನು ರಚಿಸಿದ್ದು ಇವರ ಆರು ಚುಟುಕ ಸಂಕಲನಗಳು ನಾಡಿನ ಓದುಗರ ಗಮನ ಸೆಳೆದಿವೆ.