ವಿಮರ್ಶಾ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿರುವ ಡಿ.ಎಸ್.ನಾಗಭೂಷಣ ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
‘ಲೋಹಿಯಾ ವ್ಯಕ್ತಿವಿಚಾರ’, ‘ಮಾಸ್ತಿ ಸಾಹಿತ್ಯ ಸಮಗ್ರ ಚಿಂತನೆ’, ‘ಕಾಡಿನ ಹುಡುಗ ಕೃಷ್ಣ’ ಎಂಬ ಸಂಪಾದಿತ ಕೃತಿಗಳನ್ನು ಜೇಪಿ-ಸೆರೆಮನೆ ದಿನಚರಿ ಅನುವಾದ ಕೃತಿಯನ್ನು ಹಾಗು ಜೇಪಿ ಒಂದು ಅಪೂರ್ಣ ಕ್ರಾಂತಿಯ ಕತೆ ಎಂಬ ವೈಚಾರಿಕ ಕೃತಿಯನ್ನು ಹಾಗೂ ಕರ್ನಾಟಕ ಏಳು-ಬೀಳುಗಳನ್ನು ಕುರಿತ ಹಲವು ಪುಸ್ತಕಗಳನ್ನು ಡಿ.ಎಸ್.ನಾಗಭೂಷಣ ರಚಿಸಿದ್ದಾರೆ.
ಏಕೀಕರಣ ಕಂಡ ಕರ್ನಾಟಕದ ಬಹುಮುಖ ಬೆಳವಣಿಗೆ ಕುರಿತಂತೆ ಹಲವು ಮಹತ್ವದ ಕೃತಿಗಳನ್ನು ಹೊರತಂದಿರುವ ಇವರು ಅಂಕಣಕಾರರಾಗಿಯೂ ಜನಪ್ರಿಯರು.