Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎಸ್. ನಾಗಭೂಷಣ

ವಿಮರ್ಶಾ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿರುವ ಡಿ.ಎಸ್.ನಾಗಭೂಷಣ ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

‘ಲೋಹಿಯಾ ವ್ಯಕ್ತಿವಿಚಾರ’, ‘ಮಾಸ್ತಿ ಸಾಹಿತ್ಯ ಸಮಗ್ರ ಚಿಂತನೆ’, ‘ಕಾಡಿನ ಹುಡುಗ ಕೃಷ್ಣ’ ಎಂಬ ಸಂಪಾದಿತ ಕೃತಿಗಳನ್ನು ಜೇಪಿ-ಸೆರೆಮನೆ ದಿನಚರಿ ಅನುವಾದ ಕೃತಿಯನ್ನು ಹಾಗು ಜೇಪಿ ಒಂದು ಅಪೂರ್ಣ ಕ್ರಾಂತಿಯ ಕತೆ ಎಂಬ ವೈಚಾರಿಕ ಕೃತಿಯನ್ನು ಹಾಗೂ ಕರ್ನಾಟಕ ಏಳು-ಬೀಳುಗಳನ್ನು ಕುರಿತ ಹಲವು ಪುಸ್ತಕಗಳನ್ನು ಡಿ.ಎಸ್.ನಾಗಭೂಷಣ ರಚಿಸಿದ್ದಾರೆ.

ಏಕೀಕರಣ ಕಂಡ ಕರ್ನಾಟಕದ ಬಹುಮುಖ ಬೆಳವಣಿಗೆ ಕುರಿತಂತೆ ಹಲವು ಮಹತ್ವದ ಕೃತಿಗಳನ್ನು ಹೊರತಂದಿರುವ ಇವರು ಅಂಕಣಕಾರರಾಗಿಯೂ ಜನಪ್ರಿಯರು.