Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಶಿವಾನಂದ ಕಳವೆ

ನಾಡಿನ ಹೆಸರಾಂತ ಪರಿಸರ ಹಾಗೂ ಅಭಿವೃದ್ಧಿ ಬರಹಗಾರರಾದ ಶಿವಾನಂದ ಕಳವೆ ನಾಡಿನ ಪರಿಸರ ಕುರಿತ ಹಲವಾರು ಲೇಖನಗಳನ್ನು ಹಾಗೂ ಅಂಕಣಗಳನ್ನು ನಿಯತವಾಗಿ ವಿವಿಧ ಪತ್ರಿಕೆಗಳಿಗೆ ಬರೆಯುತ್ತಾ ಬಂದಿದ್ದಾರೆ. ಮಾಲಿನ್ಯದಿಂದ ವಾತಾವರಣದ ಮೇಲೆ ಉಂಟಾಗುವ ಅಪಾಯಗಳನ್ನು ಜನತೆಗೆ ತಿಳಿಸಿಕೊಡುವಲ್ಲಿ ಅನೇಕ ಕಾರ್ಯಾಗಾರಗಳನ್ನು ವ್ಯವಸ್ಥೆ ಮಾಡಿರುವ ಶಿವಾನಂದ ಕಳವೆ ಕೃಷಿ ಪತ್ರಿಕೋದ್ಯಮದಲ್ಲಿ ಹಲವರನ್ನು ತರಬೇತುಗೊಳಿಸಿದ್ದಾರೆ.

ಪ್ರತಿಷ್ಟಿತ ಅಭಿವೃದ್ಧಿ ವರದಿಗಾರಿಕೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪಡೆದಿರುವ ಶಿವಾನಂದ ಕಳವೆ ಉತ್ತರ ಕನ್ನಡದಲ್ಲಿ ಪ್ರಾತ್ಯಕ್ಷಿಕೆಗಾಗಿ ಕೇಂದ್ರವೊಂದನ್ನು ನಿರ್ಮಿಸಿ ಪರಿಸರ ಹಾಗೂ ಕೃಷಿ ಕುರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.