Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಣೇಶ ತಿಮ್ಮಯ್ಯ

ಕೃಷಿ ಕ್ಷೇತ್ರದಲ್ಲಿ ನವೀನ ಸಂಶೋಧನೆಗಳಿಂದ ಹೊಸ ಸಾಧ್ಯತೆಗಳನ್ನು ತೋರ್ಗಾಣಿಸಿದ ಸಾಧಕರು ಗಣೇಶ ತಿಮ್ಮಯ್ಯ, ಸೇನೆ ಮತ್ತು ಕೃಷಿಯಲ್ಲಿನ ಸಾಧನೆ ರಾಷ್ಟ್ರಪ್ರಶಸ್ತಿಗಳಿಗೆ ಭಾಜನವಾದ ಪ್ರತಿಭಾವಂತರು, ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ೧೯೬೦ರಲ್ಲಿ ಜನಿಸಿದ ಗಣೇಶ ತಿಮ್ಮಯ್ಯ ಅವರು ಅಪ್ಪಟ ದೇಶಪ್ರೇಮಿ, ಬೇಸಾಯದಲ್ಲಿ ಧನ್ಯತೆ ಕಂಡುಕೊಂಡ ಪ್ರಗತಿಪರ ಕೃಷಿಕ, ಭಾರತೀಯ ಸೇನೆಯಲ್ಲಿ ಹವಾಲ್ದಾ‌ರ್ ‍ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸೈನಿಕರು. ಸೇನೆಯಿಂದ ನಿವೃತ್ತರಾದ ಮೇಲೆ ಸಾಧನಾಕ್ಷೇತ್ರವಾಗಿಸಿಕೊಂಡವರು. ಭತ್ತದ ವಿವಿಧ ತಳಿಗಳನ್ನು ಬೆಳೆದು ಸಂಶೋಧನಾ ಕೇಂದ್ರಗಳಿಗೆ ಬೀಜ ನೀಡುತ್ತಿರುವ ಬೇಸಾಯಗಾರರು. ಹೊಸ ಹೊಸ ಬೆಳೆಯಾದ ನುಸುಗುನ್ನಿ, ಬೀಯಂವನ್ನೂ ಬೆಳೆದವರು. ರಾಜ್ಯದಲ್ಲೇ ಪ್ರತಿ ಹೆಕ್ಟೇರ್‌ಗೆ ಅತಿ ಹೆಚ್ಚು ಭತ್ತದ ಇಳುವರಿಯನ್ನು ಬೆಳೆದ ಹೆಗ್ಗಳಿಕೆ, ಕೋಟಿಯ ಹೊಸ ತಳಿ, ಮೀನಿನ ಹೊಸ ತಳಿ, ಬೆಳೆಗಂದ, ಬಿದಿರು ಮಾಡಂಗಲ, ತುಂಗಾ, ಅಲೇರಾ ಜೀರಿಗೆ ಸಣ್ಣ, ಕಜೆ.ವಿ.ಆರ್‌ನಂರ ಬೆಳೆಗಳನ್ನು ಬೆಳೆದ ಮಾದರಿ ರೈತರು. ರಾಜ್ಯ, ರಾಷ್ಟ್ರೀಯ ಕೃಷಿ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಹಿರಿಮೆ. ಕೃಷಿ ಸಾಧನೆಗಾಗಿ ಎರಡು ರಾಷ್ಟ್ರೀಯ ಹಾಗೂ ಆರು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇಲಿಸಿಕೊಂಡ ದೇಸೀ ಕೃಷಿ ವಿಜ್ಞಾನಿ.