Categories
e-ದಿನ

ಫೆಬ್ರವರಿ-11

ದಿನಾಚರಣೆಗಳು:

ಅಮೆರಿಕದಲ್ಲಿ ಸಂಶೋಧಕರ ದಿನ.

ವಿಶ್ವದ ಹಲವಾರು ರಾಷ್ಟ್ರಗಳು ಸಂಶೋಧಕರು ನೀಡಿರುವ ಕೊಡುಗೆಗಳಿಗಾಗಿ ಅವರಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಸಂಶೋಧಕರ ದಿನವವನ್ನು ಆಚರಿಸುತ್ತವೆ. ಅಮೆರಿಕದಲ್ಲಿ ಥಾಮಸ್ ಆಲ್ವಾ ಎಡಿಸನ್ ಅವರ ಜನ್ಮದಿನವನ್ನು ಸಾಂದರ್ಭಿಕವಾಗಿ ಇಟ್ಟುಕೊಂಡು ಸಂಶೋಧಕರಿಗೆ ಗೌರವವನ್ನು ಸೂಚಿಸುವ ‘ಇನ್ವೆಂಟರ್ಸ್ ಡೇ’ ಎಂದು ಈ ದಿನವನ್ನು ಆಚರಿಸಲಾಗುತ್ತಿದೆ.

ಜಪಾನಿನಲ್ಲಿ ರಾಷ್ಟ್ರೀಯ ಸಂಸ್ಥಾಪನಾ ದಿನ.

ಜಪಾನಿನಲ್ಲಿ ಫೆಬ್ರುವರಿ 11 ದಿನವನ್ನು ‘ನ್ಯಾಷನಲ್ ಫೌಂಡೇಷನ್ ಡೇ’ ಎಂದು ಆಚರಿಸಲಾಗುತ್ತಿದೆ. ಕ್ರಿಸ್ತ ಪೂರ್ವ 660ರ ವರ್ಷದಲ್ಲಿ ಜಿಮ್ಮು ಎಂಬಾತ ಜಪಾನಿನ ಚಕ್ರವರ್ತಿಯಾದ ಎಂಬ ಸಂಭ್ರಮದಿಂದ ಈ ದಿನವನ್ನು ರಾಷ್ಟ್ರೀಯ ಸಂಸ್ಥಾಪನಾ ದಿನ ಎಂದು ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 660: ಚಕ್ರವರ್ತಿ ಜಿಮ್ಮು ಈ ದಿನದಂದು ಜಪಾನಿನ ಸಂಸ್ಥಾಪನೆಯನ್ನು ಮಾಡಿದ ಎಂಬ ಸಾಂಪ್ರದಾಯಿಕ ಶ್ರದ್ಧೆ ಜಪಾನಿಯರಲ್ಲಿದೆ.

55: ರೋಮನ್ ಚಕ್ರಾಧಿಪತ್ಯದ ಉತ್ತರಾಧಿಕಾರಿಯಾದ ಟೈಬೀರಿಯಸ್ ಕ್ಲಾಡಿಯ್ಯಸ್ಸನು ನಿಗೂಢ ರೀತಿಯಲ್ಲಿ ಸಾವಿಗೀಡಾದ. ಇದರಿಂದಾಗಿ ನೀರೋಗೆ ಚಕ್ರವರ್ತಿಯಾಗುವ ಹಾದಿ ಸುಗಮವಾಯ್ತು.

244: ಮೆಸಪೊಟಾಮಿಯಾದ ಸೈತಾ ಎಂಬಲ್ಲಿ ದಂಗೆಕೋರ ಸೈನಿಕರಿಂದ ಚಕ್ರವರ್ತಿ ಮೂರನೇ ಗಾರ್ಡಿಯನ್ ಕಗ್ಗೊಲೆಯಾಯ್ತು. ಆತನ ಹೆಸರಿನಲ್ಲಿ ಕಾರ್ಚೆಮಿಶ್ ಎಂಬಲ್ಲಿ ದಿಬ್ಬವೊಂದನ್ನು ನಿರ್ಮಿಸಲಾಯ್ತು.

1790: ‘ಕ್ವೇಕರ್ಸ್’ ಎಂದು ಕರೆಯಲ್ಪಡುವ ‘ದಿ ರಿಲಿಜಿಯಸ್ ಸೊಸೈಟಿ ಆಫ್ ಫ್ರೆಂಡ್ಸ್’ ಸದಸ್ಯರು ಅಮೇರಿಕಾದ ಕಾಂಗ್ರೆಸ್ಸಿನ ಮುಂದೆ ಗುಲಾಮಗಿರಿಯ ರದ್ಧತಿಗೆ ಅಹವಾಲು ಅರ್ಪಿಸಿದರು.

1794: ಅಮೆರಿಕದ ಸೆನೆಟ್ಟಿನ ಪ್ರಥಮ ಸಭೆಗೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಯಿತು.

1808: ಜೆಸ್ಸಿ ಫೆಲ್ ಎಂಬ ವಿಜ್ಞಾನಿ ಮನೆಗಳಲ್ಲಿ ಇದ್ದಲಿನಿಂದ ಶಾಖವನ್ನು ಪಡೆಯುವುದನ್ನು ಪರೀಕ್ಷಿಸಿ ನೋಡಲು ಅಂಥ್ರಾಸೈಟನ್ನು ತೆರೆದ ತುರಿಯ(open grate) ಮೇಲೆ ಸುಟ್ಟರು.

1826: ಲಂಡನ್ ವಿಶ್ವವಿದ್ಯಾಲಯವು ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಹೆಸರಿನಿಂದ ಸ್ಥಾಪಿತಗೊಂಡಿತು

1840: ಗೆಟಾನೋ ಡೋನಿಜೆಟ್ಟಿ ಅವರ ಲಾ ಫಿಲ್ಲೆ ಡ್ಯು ರೆಜಿಮೆಂಟ್ ಒಪೇರಾ ಪ್ಯಾರಿಸ್ಸಿನಲ್ಲಿ ತನ್ನ ಮೊದಲ ಪ್ರದರ್ಶನ ನೀಡಿತು

1843: ಗಿಯೋಸಿಪ್ಪೆ ವೆರ್ಡಿ ಅವರ ‘ಐ ಲೊಂಬಾರ್ಡಿ ಅಲ್ಲಾ ಪರಿಮಾ ಕ್ರೊಸಿಯಾಟ’ ಒಪೇರಾ ಇಟಲಿಯ ಮಿಲನ್ ನಗರದಲ್ಲಿ ತನ್ನ ಮೊದಲ ಪ್ರದರ್ಶನ ನೀಡಿತು.

1856: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಅವಧ್ ನಗರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಅದರ ರಾಜನಾಗಿದ್ದ ವಾಜಿದ್ ಅಲಿ ಷಾ ಅನ್ನು ಬಂಧಿಸಿ ನಂತರದಲ್ಲಿ ಕೊಲ್ಕತ್ತಾಗೆ ಗಡೀಪಾರು ಮಾಡಿತು.

1903: ಆಂಟನ್ ಬ್ರಕ್ನರ್ ಅವರ 9ನೇ ಸಿಂಪೋನಿಯ ಮೊದಲ ಕಾರ್ಯಕ್ರಮವು ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಯಿತು.

1889: ಜಪಾನಿನಲ್ಲಿ ಮೀಜಿ ಸಂವಿಧಾನ ಅಂಗೀಕೃತಗೊಂಡಿತು. ಮೊದಲ ನ್ಯಾಷನಲ್ ಡಯೆಟ್ 1890ರಲ್ಲಿ ಆಯೋಜನೆಗೊಂಡಿತು

1937: ಜನರಲ್ ಮೋಟಾರ್ಸ್ ಸಂಸ್ಥೆಯು ಕಾರ್ಮಿಕ ಸಂಘಟನೆಯಾದ ‘ಯುನೈಟೆಡ್ ಆಟೋ ವರ್ಕರ್ಸ್’ಗೆ ಮಾನ್ಯತೆ ನೀಡಿತು. ಇದರಿಂದಾಗಿ ಸಂಸ್ಥೆಯಲ್ಲಿ ನೌಕರರು ನಡೆಸುತ್ತಿದ್ದ ‘ಸುಮ್ಮನೆ ಕುಳಿತುಕೊಳ್ಳುವ ಮುಷ್ಕರ’ (sit-down strike) ಅಂತ್ಯಗೊಂಡಿತು.

1938: ಬಿಬಿಸಿ ದೂರದರ್ಶನ ಕೇಂದ್ರವು ಮೊಟ್ಟಮೊದಲ ಕಾಲ್ಪನಿಕ ವಿಜ್ಞಾನ ಕಾರ್ಯಕ್ರಮವೊಂದನ್ನು ಭಿತ್ತರಿಸಿತು. ಈ ಕಾರ್ಯಕ್ರಮವವು ಕಾರೆಲ್ ಕಾಪೆಕ್ ಅವರ ‘ಆರ್.ಯು.ಆರ್’ ನಾಟಕದ ಅವತರಣಿಕೆಯಾಗಿತ್ತು. ‘ರೋಬೋಟ್’ ಎಂಬ ಪದ ಮೊಟ್ಟಮೊದಲ ಬಾರಿಗೆ ಬಳಸಿದ ಕೀರ್ತಿ ಈ ಕೃತಿಯದ್ದಾಗಿದೆ.

1939: ಲಾಕ್ ಹೀಡ್ ಪಿ-38 ಲೈಟ್ನಿಂಗ್ ಯುದ್ಧ ವಿಮಾನವು ಮೊಟ್ಟ ಮೊದಲಬಾರಿ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ನಡುವಣ ದೂರವನ್ನು 7 ಗಂಟೆ 2 ನಿಮಿಷಗಳಲ್ಲಿ ಕ್ರಮಿಸಿತು.

1945: ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಧುರೀಣ ಜೋಸೆಫ್ ಸ್ಟಾಲಿನ್ ಅವರು ಎರಡನೇ ಜಾಗತಿಕ ಸಮರ ಕಾಲದ ಯಾಲ್ಟಾ ಒಪ್ಪಂದಕ್ಕೆ ಸಹಿ ಹಾಕಿದರು. ನಾಝಿ ಜರ್ಮನಿಯನನ್ನು ಅಂತಿಮವಾಗಿ ಪರಾಭವಗೊಳಿಸುವ ಬಗೆ ಹಾಗೂ ಪರಾಜಿತ ಪೂರ್ವ ಯುರೋಪ್ ರಾಷ್ಟ್ರಗಳ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಈ ಮೂವರು ಚರ್ಚಿಸಿದರು.

1971: ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಂ ಮತ್ತು ಸೋವಿಯತ್ ಯೂನಿಯನ್ ಸೇರಿದಂತೆ 87 ರಾಷ್ಟ್ರಗಳು ಅಂತರರಾಷ್ಟ್ರೀಯ ಸಾಗರ ನೆಲೆಗಳಲ್ಲಿ ಅಣ್ವಸ್ತ್ರ ಪ್ರಯೋಗಗಳನ್ನು ನಿಷೇದಿಸುವ ‘ಸೀ ಬೆಡ್ ಆರ್ಮ್ಸ್ ಕಂಟ್ರೋಲ್ ಟ್ರೀಟಿ’ ಒಡಂಬಡಿಕೆಗೆ ಸಹಿ ಮಾಡಿದವು.

1975: ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ರಾಜಕೀಯ ಪಕ್ಷವೊಂದರ ಮೊತ್ತ ಮೊದಲ ಮಹಿಳಾ ನಾಯಕಿ ಎನಿಸಿದರು.

1978: ಚೀನಾ ದೇಶವು ಅರಿಸ್ಟಾಟಲ್, ವಿಲಿಯಂ ಷೇಕ್ಸ್ ಪಿಯರ್ ಮತ್ತು ಚಾರ್ಲ್ಸ್ ಡಿಕನ್ಸ್ ಅವರ ಕೃತಿಗಳ ಮೇಲಿನ ನಿರ್ಬಂಧವನ್ನು ರದ್ದುಗೊಳಿಸಿತು.

1979: ಇರಾನಿನಲ್ಲಿ ಜರುಗಿದ ಕ್ರಾಂತಿಯಲ್ಲಿ ಆಯಾತೊಲ್ಲಾ ರುಹೋಲ್ಲಾಹ್ ಖೊಮೈನಿ ಅವರ ನೇತೃತ್ವದ ಇಸ್ಲಾಮಿಕ್ ಧರ್ಮೀಯ ಆಡಳಿತವು ಆರಂಭಗೊಂಡಿತು.

1981: ಅಮೆರಿಕದ ಟೆನ್ನೆಸ್ಸೀ ಎಂಬಲ್ಲಿ ಸುಮಾರು ಒಂದು ಲಕ್ಷ ಗ್ಯಾಲನ್ ರೇಡಿಯೋ ಆಕ್ಟಿವ್ ಕೂಲೆಂಟಿನ ಸೋರಿಕೆ ಉಂಟಾಗಿ ‘ಟಿವಿಎ ಸೆಕ್ಯೂಯಾಹ್ ಒಂದು’ ಪರಮಾಣು ಘಟಕದ ಮೇಲೆ ತೀವ್ರ ಪರಿಣಾಮ ಉಂಟಾಯಿತಲ್ಲದೆ, ಎಂಟು ಜನ ಕಾರ್ಮಿಕರ ಮೇಲೆ ಕಲುಷಿತ ಪ್ರಭಾವ ಉಂಟಾಯಿತು.

1990: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಹೊರವಲಯದ ವಿಕ್ಟರ್ ವೆರ್ಸ್ಟರ್ ಸೆರೆಮನೆಯಲ್ಲಿದ್ದ ನೆಲ್ಸನ್ ಮಂಡೇಲಾ ಅವರನ್ನು 27 ವರ್ಷಗಳ ಸುದೀರ್ಘ ಸೆರೆವಾಸದಿಂದ ಬಿಡುಗಡೆ ಮಾಡಲಾಯಿತು.

1990: ತಜ್ಞರಿಂದ 42 ಸಾಧ್ಯತೆಗಳಲ್ಲಿ ಒಂದು ಎಂಬ ಕ್ಷೀಣ ಅಂಕ ಪಡೆದಿದ್ದ ಬಸ್ಟರ್ ಡೌಗ್ಲಾಸ್ ಅವರು ಮೈಕ್ ಟೈಸನ್ ಅವರನ್ನು ವಿಶ್ವ ಹೆವಿ ವೈಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹತ್ತು ಸುತ್ತಿನಲ್ಲಿ ಪರಾಭವಗೊಳಿಸಿದರು. ಇದು ಕ್ರೀಡಾ ಇತಿಹಾಸದ ಅತ್ಯಂತ ದೊಡ್ಡ ಅಚ್ಚರಿಗಳಲ್ಲೊಂದಾಗಿದೆ.

1997: ಹಬ್ಬಲ್ ಸ್ಪೇಸ್ ಟೆಲಿಸ್ಕೋಪಿನ ಸೇವೆಗಾಗಿ ‘ಡಿಸ್ಕವರಿ’ ಬಾಹ್ಯಾಕಾಶ ವಾಹನವನ್ನು ಉಡಾಯಿಸಲಾಯಿತು.

2001: ಡಚ್ ಪ್ರೊಗ್ರಾಮಿಂಗ್ ತಜ್ಞನೊಬ್ಬ ರಷ್ಯಾದ ಸೌಂದರ್ಯವತಿ ಟೆನಿಸ್ ತಾರೆ ಅನ್ನಾ ಕೋರ್ನಿಕೋವಾ ಅವರ ಚಿತ್ರವನ್ನು ತನ್ನ ಕುಟಿಲ ಚಾತುರ್ಯತೆಯಿಂದ ಬಳಸಿ ‘ಅನ್ನಾ ಕೋರ್ನಿಕೋವಾ ವೈರಸ್’ ಅನ್ನು ಸಾಂಕ್ರಾಮಿಕವಾಗಿ ಭಿತ್ತರಿಸಿ ವಿಶ್ವದೆಲ್ಲೆಡೆ ಮಿಲಿಯನ್ಗಟ್ಟಲೆ ಈಮೈಲ್ಗಳಿಗೆ ಸಂಚಕಾರ ಉಂಟುಮಾಡಿದ.

2006: ಔಷಧಗಳ ಮೇಲೆ ಎಲ್ಲ ತೆರಿಗೆಗಳೂ ಸೇರಿದಂತೆ ಗರಿಷ್ಠ ಮಾರಾಟ ದರ (ಎಂ.ಆರ್.ಪಿ) ನಮೂದಿಸುವುದನ್ನು ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ರಾಮ್ ವಿಲಾಸ ಪಾಸ್ವಾನ್ ಪ್ರಕಟಿಸಿದರು.

2007: ಭಾರತದ ಪ್ರಮುಖ ಮೊಬೈಲ್ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ಹಚ್-ಎಸ್ಸಾರ್ ಸಂಸ್ಥೆಯನ್ನು, ಬ್ರಿಟನ್ನಿನ ಪ್ರಮುಖ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ವೊಡಾಫೋನ್ 19.3 ಬಿಲಿಯನ್ ಡಾಲರುಗಳಿಗೆ ಖರೀದಿಸಿತು.

2007: ಅರಬ್ಬರ ವಿರೋಧವನ್ನು ಲೆಕ್ಕಿಸದೆ ಜೆರುಸಲೇಂನ ಹೊರಭಾಗದ ಅತ್ಯಂತ ವಿವಾದಾತ್ಮಕ ಧಾರ್ಮಿಕ ತಾಣದಲ್ಲಿಉತ್ಖನನ ಮುಂದುವರೆಸಲು ಇಸ್ರೇಲ್ ಸಚಿವ ಸಂಪುಟ ನಿರ್ಧರಿಸಿತು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಮತ್ತು ಇತರರು ಸುಮಾರು 31 ತಾಸುಗಳ ಕಾಲ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಅವರ ಭೂಮಿ ಜೊತೆಗಿನ ಸಂಪರ್ಕ ಕಡಿದುಹೋಗಿತ್ತು.

2008: 561 ವರ್ಷ ಹಳೆಯದಾದ ದಕ್ಷಿಣ ಕೊರಿಯಾದ ‘ನಮ್ದೇಮುನ್’ ಗೇಟ್ ಬೆಂಕಿಗಾಹುತಿಯಾಯಿತು. ಇದನ್ನು 2010ರಿಂದ 2013 ಅವಧಿಯಲ್ಲಿ ಪುನಃನಿರ್ಮಿಸಲಾಗಿದೆ.

2008: ಬ್ರಿಟನ್ನಿನ ಧನ ಸಹಾಯದಿಂದ ಪಶ್ಚಿಮ ಬಂಗಾಳದ ಸುಂದರಬನ ಸಂರಕ್ಷಿತ ಅರಣ್ಯ ವಲಯವನ್ನು ಕಾಪಾಡುವುಕ್ಕಾಗಿ 40ಲಕ್ಷ ಮ್ಯಾಂಗ್ರೋವ್ (ಕಾಂಡ್ಲಾಕಾಡು) ಸಸಿಗಳನ್ನು ನೆಡುವ ಯೋಜನೆ ಮಥುರಾಕಾಂಡ ದ್ವೀಪದಲ್ಲಿ ಆರಂಭವಾಯಿತು. ಬ್ರಿಟನ್ ಸರ್ಕಾರ ಈ ಯೋಜನೆಗೆ 60,000 ಡಾಲರ್ ಹಣದ ಬೆಂಬಲ ನೀಡಿದೆ.

2009: ರಾಂಗಿಂಗ್ ಪಿಡುಗನ್ನು ತಡೆಗಟ್ಟಲು ತಾನು ರಚಿಸಿರುವ ‘ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಸಮಿತಿ’ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಿಳಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತು.

2009: ರವೀಂದ್ರನಾಥ ಠಾಗೂರರ ಹಸ್ತಾಕ್ಷರದ ಪತ್ರವೊಂದು ಬಾಂಗಾದ್ಲೇಶದ ಉತ್ತರ ಬಾಂಗ್ಲಾದ ನವಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬರು ಸಂಗ್ರಹಿಸಿದ್ದ ಪತ್ರಗಳಲ್ಲಿ ಪತ್ತೆಯಾಯ್ತು. ಆರು ಪುಟಗಳ ಈ ಪತ್ರದಲ್ಲಿ ಠಾಗೂರರರಿಗೆ ಅವರಿಗೆ ಸಂಬಂಧಿಸಿದ ಹಲವಾರು ವಿಷಯಗಳೊಂದಿಗೆ ಅವರ ಖಚಿತ ಜನ್ಮದಿನದ ವಿವರವೂ ಇದೆ.

2011: ಈಜಿಪ್ಟಿನಲ್ಲಿ ಮೂಡಿದ ಕ್ರಾಂತಿಯ ಗಾಳಿಯಲ್ಲಿ ಹೋಸ್ನಿ ಮುಬಾರಕ್ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ 18 ದಿನಗಳ ಕಾಲ ನಡೆದ ಪ್ರತಿಭಟನಾ ಚಳುವಳಿಗೆ ಒಂದಷ್ಟು ಜಯ ದಕ್ಕಿದಂತಾಗಿದ್ದು, ಅಧಿಕಾರವನ್ನು ಸುಪ್ರೀಂ ಮಿಲಿಟರಿ ಕೌನ್ಸಿಲಿಗೆ ವರ್ಗಾಯಿಸಲಾಗಿದೆ.

ಪ್ರಮುಖಜನನ/ಮರಣ:

1800: ಇಂಗ್ಲಿಷ್ ಛಾಯಾಗ್ರಾಹಕ, ವಿಜ್ಞಾನಿ ಮತ್ತು ಕ್ಯಾಲೋಟೈಪ್ ಅನ್ವೇಷಕ ಹೆನ್ರಿ ಫಾಕ್ಸ್ ಟಾಲ್ಬಾಲ್ಟ್ ಅವರು ಇಂಗ್ಲೆಂಡಿನ ಡೋರ್ಸೆಟ್ ಬಳಿಯ ಮೆಲ್ಬರಿ ಎಂಬಲ್ಲಿ ಜನಿಸಿದರು. ಉಪ್ಪಿನ ಕಾಗದವನ್ನೂ ಕಂಡುಹಿಡಿದರಲ್ಲದೆ, ಅದರ ಮೇಲೆ ತಮ್ಮ ಕ್ಯಾಲೋಟೈಪ್ಸ್ ಚಿತ್ರಗಳನ್ನು ಮುದ್ರಿಸುವ ವಿಧಾನವನ್ನೂ ಇವರು ಕಂಡುಹಿಡಿದರು.

1847: ಮಹಾನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅಮೆರಿಕದ ಓಹಿಯೋ ಬಳಿಯ ಮಿಲನ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರಿಕ್ ಬಲ್ಬ್, ಫೋನೋಗ್ರಾಫ್, ಚಲನಚಿತ್ರ ಕ್ಯಾಮೆರಾ ಒಳಗೊಂಡಂತೆ 1000ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದ ಮಹಾನ್ ಸಂಶೋಧಕರೀತ.

1869: ಕಲಾತ್ಮಕ ವಸ್ತುಗಳ ಸಂಗ್ರಾಹಕಿ ಎಂದು ಪ್ರಸಿದ್ಧರಾಗಿರುವ ಡಚ್ ಮಹಿಳೆ ಹೆಲೆನೆ ಕ್ರೋಲರ್ ಮ್ಯುಲ್ಲರ್ ಅವರು ಜರ್ಮನಿಯ ಎಸ್ಸೆನ್ ಎಂಬಲ್ಲಿ ಜನಿಸಿದರು. ಮುಂದೆ ಅವರು ಪ್ರಸಿದ್ಧ ಕ್ರೋಲರ್ ಮ್ಯುಲ್ಲರ್ ಸಂಗ್ರಹಾಲಯವನ್ನು ಸ್ಥಾಪಿಸಿದರು.

1915: ಸಾಹಿತಿಯಾಗಿ, ಜಾನಪದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಕೈಂಕರ್ಯ ಸಲ್ಲಿಸಿದವರಾಗಿ ಪ್ರಸಿದ್ಧರಾಗಿರುವ ಡಾ. ಎಚ್. ಎಲ್. ನಾಗೇಗೌಡ ಅವರು ಮಂಡ್ಯ ಜೆಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಎಂಬಲ್ಲಿ ಜನಿಸಿದರು. ಸಾಹಿತ್ಯ ಅಕಾಡೆಮಿ ಗೌರವ, ನಾಡೋಜ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಸಮ್ಮೇಳನನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1963: ಶಿಲ್ಪ ಕಲಾವಿದ ಗಣೇಶ ಎಲ್. ಭಟ್ ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ ಜನಿಸಿದರು. ಶಿಲ್ಪ ಕಲಾವಿದರಾಗಿ, ಕಲೆಯ ಕಲಿಕೆಯ ಆಸಕ್ತರಿಗೆ ಪ್ರಾಚಾರ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಗಣೇಶ ಭಟ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರಗಳು ಲಭಿಸಿವೆ.

1931: ಇಂಗ್ಲಿಷ್-ಐರಿಷ್ ತಂತ್ರಜ್ಞ ಚಾರ್ಲ್ಸ್ ಅಲ್ಗರ್ನಾನ್ ಪಾರ್ಸನ್ಸ್ ಅವರು ಜಮೈಕಾದಲ್ಲಿ ನಿಧನರಾದರು. ಇವರು ಸ್ಟೀಮ್ ಟರ್ಬೈನ್ ಸಂಶೋಧನೆಗಾಗಿ ಪ್ರಸಿದ್ಧರಾಗಿದ್ದಾರೆ. ಡೈನಮೋ ಮತ್ತು ಟರ್ಬೈನ್ ಉಪಯೋಗಿಸಿ ವಿದ್ಯುತ್ ಉತ್ಪಾದನೆಯಲ್ಲಿ ಶ್ರಮಿಸಿದ ಇವರು ಟೆಲಿಸ್ಕೋಪ್ ಮತ್ತು ಸರ್ಚ್ ಲೈಟುಗಳಿಗಾಗಿ ಆಪ್ಟಿಕಲ್ ಎಕ್ವಿಪ್ಮೆಂಟ್ ಅನ್ನೂ ತಯಾರಿಸಿದ್ದರು.

1942: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ಜಮ್ನಾಲಾಲ್ ಬಜಾಜ್ ಅವರು ವಾರ್ಧಾದಲ್ಲಿ ನಿಧನರಾದರು. ಇವರು ಸ್ಥಾಪಿಸಿದ ಬಜಾಜ್ ಸಮೂಹವು ಭಾರತದ ಪ್ರಸಿದ್ಧ ಕೈಗಾರಿಕಾ ಸಂಸ್ಥೆಗಳಲ್ಲೊಂದಾಗಿದೆ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸವನ್ನೂ ಅನುಭವಿಸಿದ್ದರು.

1968: ಸ್ವಾತಂತ್ರ್ಯ ಹೋರಾಟಗಾರ, ಆಧ್ಯಾತ್ಮವಾದಿ, ಅರ್ಥಶಾಸ್ತ್ರಜ್ಞ, ವಿದ್ವಾಂಸ, ಸಂಘಟನಕಾರ ಪಂಡಿತ ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಮುಘಲ್ ಸರಾಯ್ ಎಂಬಲ್ಲಿ ನಿಧನರಾದರು. ಇವರು ಭಾರತ ಜನಸಂಘವನ್ನು ಸ್ಥಾಪಿಸಿದರು.

1973: ಜರ್ಮನಿಯ ಭೌತವಿಜ್ಞಾನಿ ಜೆ. ಹನ್ಸ್ ಡಿ. ಜೆನ್ಸೆನ್ ಅವರು ಹೀಡೆಲ್ ಬರ್ಗ್ ಎಂಬಲ್ಲಿ ನಿಧನರಾದರು. ನ್ಯೂಕ್ಲಿಯರ್ ಶೆಲ್ ಮಾಡೆಲ್ ಸಂಶೋಧನೆಗಾಗಿ ಇವರಿಗೆ 1963 ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1977: ಭಾರತದ ರಾಷ್ಟ್ರಪತಿ ಫಕ್ರುದ್ದಿನ್ ಆಲಿ ಆಹಮದ್ ನವದೆಹಲಿಯಲ್ಲಿ ನಿಧನರಾದರು. ಭಾರತದ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡು ಹಲವು ವರ್ಷ ಸೆರೆಮನೆ ವಾಸ ಅನುಭವಿಸಿದ್ದ ಇವರು 1974-77 ಅವಧಿಯಲ್ಲಿ ರಾಷ್ಟ್ರಪತಿಗಳಾಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲೇ ನಿಧನರಾದರು.

1978: ಸ್ವೀಡಿಷ್ ಸಾಹಿತಿ ಹ್ಯಾರಿ ಮಾರ್ಟಿನ್ಸನ್ ಅವರು ಸ್ಟಾಲ್ಕ್ ಹೋಮ್ ನಗರದಲ್ಲಿ ನಿಧನರಾದರು. ಇಪ್ಪತ್ತನೆಯ ಶತಮಾನದ ಸ್ವೀಡಿಷ್ ಕಾವ್ಯದಲ್ಲಿ ಮಹತ್ವದ ಸಾಧಕರೆಂದು ಪರಿಗಣಿತರಾಗಿದ್ದ ಇವರಿಗೆ 1974 ವರ್ಷದ ನೊಬೆಲ್ ಶ್ರೇಷ್ಠ ಸಾಹಿತ್ಯ ಪುರಸ್ಕಾರ ಸಂದಿತ್ತು.

1980: ಭಾರತದ ಖ್ಯಾತ ಇತಿಹಾಸಜ್ಞ ರೊಮೇಶ್ ಚಂದ್ರ ಮಜುಂದಾರ್ ಕೋಲ್ಕತ್ತದಲ್ಲಿ ನಿಧನರಾದರು. ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ದಾಖಲಿಸಲು ಸರ್ಕಾರ ನೇಮಿಸಿದ್ದ ಸಮಿತಿಯಲ್ಲಿ ಪ್ರಮುಖ ಸದಸ್ಯರಾಗಿದ್ದರು. ‘ಹಿಸ್ಟರಿ ಆಫ್ ದಿ ಫ್ರೀಡಮ್ ಮೂವ್ಮೆಂಟ್ ಇನ್ ಇಂಡಿಯಾ’ ಇವರ ಪ್ರಸಿದ್ಧ ಕೃತಿ.

1993: ಭಾರತದ ಖ್ಯಾತ ಉರ್ದು ಮತ್ತು ಹಿಂದೀ ಕವಿ, ಚಿತ್ರ ನಿರ್ದೇಶಕ ಮತ್ತು ಚಿತ್ರ ಕಥಾಲೇಖಕ ಕಮಲ್ ಅಮ್ರೋಹಿ ಮುಂಬೈನಲ್ಲಿ ನಿಧನರಾದರು. ಇವರು ಮಹಲ್, ಪಾಖೀಜಾ, ರಜಿಯಾ ಸುಲ್ತಾನ್ ಮುಂತಾದ ಚಿತ್ರಗಳಿಂದ ಪ್ರಸಿದ್ಧರಾಗಿದ್ದಾರೆ. ಮುಘಲ್ ಎ ಅಜಮ್ ಚಿತ್ರದ ಚಿತ್ರಕತೆಗಾಗಿ ಇವರು ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದರು.

1993: ಅಮೆರಿಕದ ಪ್ರಸಿದ್ಧ ಜೈವಿಕ ವಿಜ್ಞಾನಿ ರಾಬರ್ಟ್ ಡಬ್ಲ್ಯೂ ಹಾಲೀ ಕ್ಯಾಲಿಫೋರ್ನಿಯಾದ ಲಾಸ್ ಗೆಟೋಸ್ ಎಂಬಲ್ಲಿ ನಿಧನರಾದರು. ಇವರು ಭಾರತೀಯ ಮೂಲಸಂಜಾತ ಹರಭಜನ್ ಖೊರಾನಾ ಮತ್ತು ಮಾರ್ಷಲ್ ನೀರೇನ್ಬರ್ಗ್ ಅವರುಗಳೊಂದಿಗೆ 1968ರ ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.

Categories
e-ದಿನ

ಫೆಬ್ರವರಿ-10

ಪ್ರಮುಖಘಟನಾವಳಿಗಳು:

1846: ಪ್ರಥಮ ಆಂಗ್ಲೋ-ಸಿಖ್ ಯುದ್ಧವಾದ ಸೋಬ್ರಾನ್ ಕದನದಲ್ಲಿ ಬ್ರಿಟಿಷ್ ಪಡೆ ಸಿಖ್ಖರಿಗೆ ಸೋಲುಣಿಸಿತು.

1870: ಅಮೆರಿಕದಲ್ಲಿ ವರ್ಲ್ಡ್ಸ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ಪ್ರಾರಂಭಗೊಂಡಿತು.

1921: ನವದೆಹಲಿಯಲ್ಲಿ ‘ಇಂಡಿಯಾ ಗೇಟ್’ಗೆ ಕನ್ನಾಟನ್ ಡ್ಯೂಕ್ ಅವರು ಶಂಕುಸ್ಥಾಪನೆ ಮಾಡಿದರು.

1923: ಅಮೆರಿಕದ ಟೆಕ್ಸಾಸ್ ಬಳಿಯ ಲುಬ್ಬಾಕ್ ಎಂಬಲ್ಲಿ ಟೆಕ್ಸಾಸ್ ತಂತ್ರಜ್ಞಾನ ವಿಶ್ವವಿದ್ಯಾಲಯವು ಟೆಕ್ಸಾಸ್ ಟೆಕ್ನಲಾಜಿಕಲ್ ಕಾಲೇಜ್ ಎಂಬ ಹೆಸರಿನಿಂದ ಆರಂಭಗೊಂಡಿತು.

1929: ಜೆ. ಆರ್. ಡಿ. ಟಾಟಾ ಅವರಿಗೆ ‘ಪೈಲೆಟ್ ನಂಬರ್ ಒನ್’ ಗೌರವವನ್ನು ನೀಡಲಾಯಿತು. ಭಾರತ ಮತ್ತು ಬರ್ಮಾದ ಏರೋಕ್ಲಬ್ ಪರವಾಗಿ ಸರ್ ವಿಕ್ಟರ್ ಸಸೂನ್ ಸಹಿ ಮಾಡಿದ ಈ ದಾಖಲೆಯನ್ನು ಫೆಡರೇಷನ್ ಏರೋನಾಟಿಕ್ ಇಂಟರ್ ನ್ಯಾಷನಲ್ ನೀಡಿತು. ಜೆ. ಆರ್. ಡಿ. ಟಾಟಾ ಅವರ ಸಹೋದರಿ ಸ್ಲಿಲಾ (ಮುಂದೆ ಲೇಡಿ ದಿನ್ಶಾ ಪೆಟಿಟ್) ಅವರೂ ಭಾರತದಲ್ಲಿ ವಿಮಾನಯಾನದ ಲೈಸೆನ್ಸ್ ಪಡೆದ ಮೊತ್ತ ಮೊದಲ ಮಹಿಳೆಯಾಗಿದ್ದಾರೆ. ಅವರ ಕಿರಿಯ ಸಹೋದರಿ ರೋಡಾಬೆಹ್ ಸಾಹನಿ ಭಾರತದಲ್ಲಿ ವಿಮಾನಯಾನ ಲೈಸೆನ್ಸ್ ಪಡೆದ ಎರಡನೇ ಮಹಿಳೆಯಾಗಿದ್ದಾರೆ.

1942: ಸಂಗೀತ ಕ್ಷೇತ್ರದಲ್ಲಿ ಮೊದಲ ‘ಗೋಲ್ಡ್ ರೆಕಾರ್ಡ್’ ಅಥವಾ ‘ಗೋಲ್ಡ್ ಡಿಸ್ಕ್’ ಅನ್ನು ‘ಚಟ್ಟನೂಗ ಛೂ ಛೂ’ಗಾಗಿ ಗ್ಲೆನ್ ಮಿಲ್ಲರ್ ಅವರಿಗೆ ನೀಡಲಾಯಿತು

1952: ವಿಜಯ್ ಹಜಾರೆ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಮದ್ರಾಸಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ, 8 ರನ್ನುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ತನ್ನ ಮೊತ್ತ ಮೊದಲ ಟೆಸ್ಟ್ ವಿಜಯವನ್ನು ದಾಖಲಿಸಿತು. 55 ರನ್ನುಗಳಿಗೆ 8 ವಿಕೆಟ್ ಪಡೆದ ವಿನೂ ಮಂಕಡ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

1972: ರಾಸ್ ಅಲ್ ಖೈಮಾಹ್ ಪ್ರಾಂತ್ಯವು ಯುನೈಟೆಡ್ ಅರಾಬ್ ಎಮಿರೇಟ್ಸ್’ನ ಏಳನೇ ಎಮಿರೇಟ್ ಆಗಿ ಜೊತೆಗೂಡಿಕೊಂಡಿತು.

1996: ಐ.ಬಿ.ಎಮ್ ಸಂಸ್ಥೆಯ ‘ಡೀಪ್ ಬ್ಲೂ’ ಎಂಬ ಸೂಪರ್ ಕಂಪ್ಯೂಟರು ಪ್ರಸಿದ್ಧ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ಮೊದಲ ಬಾರಿಗೆ ಸೋಲಿಸಿತು.

2006: ಲಖನೌ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಕನ್ನಡಿಗ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ. ಯು.ಆರ್. ರಾವ್ ನೇಮಕಗೊಂಡರು.

2006: ವಿಜಾಪುರದಲ್ಲಿರುವ ರಾಷ್ಟ್ರದ ಎರಡನೇ ಅತಿ ಎತ್ತರದ ಶಿವನ ಮೂರ್ತಿಯ ಪ್ರತಿಷ್ಠಾಪನೆಯನ್ನು ನೆರವೇರಿತು. ಈ ಮೂರ್ತಿ 85 ಅಡಿ ಎತ್ತರವಿದೆ. ಮುರ್ಡೇಶ್ವರಲ್ಲಿ ಇರುವ 120 ಅಡಿಯ ಶಿವನ ಮೂರ್ತಿ ಭಾರತದ ಅತೀ ಎತ್ತರದ ಶಿವನ ಮೂರ್ತಿ ಎನಿಸಿದೆ.

2006: ದೇಶದ ಯಾವುದೇ ಭಾಗಕ್ಕೆ ಮಾಡುವ ಸ್ಥಿರ ದೂರವಾಣಿ ಮತ್ತು ಮೊಬೈಲ್ ಕರೆಗಳ ದರಗಳು ಮಾರ್ಚ್ 1ರಿಂದ ಕೇವಲ 1 ರೂಪಾಯಿ ಆಯಿತು. ಹೊಸ ಒನ್ ಇಂಡಿಯಾ ಯೋಜನೆಯ ಅಡಿ ದೇಶಾದ್ಯಂತ ಎಸ್ ಟಿ ಡಿ ಕರೆಗಳ ದವನ್ನು ರ 1 ರೂಪಾಯಿ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ ನಿಯಮಿತ (MTNL) ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿದವು.

2006: ಬೆಂಗಳೂರು ಆನಂದರಾವ್ ವೃತ್ತದ ಮೇಲು ಸೇತುವೆಯು ಇಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿತು.

2009: ಕನ್ನಡ ಪುಸ್ತಕ ಪ್ರಾಧಿಕಾರವು 2007 ಮತ್ತು 2008ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಪ್ರಕಟಿಸಿತು. ಧಾರವಾಡದ ‘ಮನೋಹರ ಗ್ರಂಥಮಾಲಾ’ ಮತ್ತು ಮೈಸೂರಿನ ‘ಕಾವ್ಯಾಲಯ’ ಪ್ರಕಾಶನ ಸಂಸ್ಥೆಗಳನ್ನು ಕ್ರಮವಾಗಿ ಈ ಪ್ರಶಸ್ತಿಗೆ ತಜ್ಞರ ಸಮಿತಿಯು ಆಯ್ಕೆ ಮಾಡಿತು.

2013: ಅಲಹಾಬಾದಿನಲ್ಲಿ ಕುಂಭಮೇಳದ ಸಂದರ್ಭದ ಕಾಲ್ತುಳಿತದಲ್ಲಿ 36 ಜನ ಸಾವಿಗೀಡಾಗಿ 39 ಜನರಿಗೆ ಪೆಟ್ಟಾಯಿತು.

ಪ್ರಮುಖಜನನ/ಮರಣ:

1775: ಪ್ರಸಿದ್ಧ ಇಂಗ್ಲಿಷ್ ಪ್ರಬಂಧಕಾರ ಮತ್ತು ವಿಮರ್ಶಕ ಚಾರ್ಲ್ಸ್ ಲ್ಯಾಂಬ್ ಅವರು ಲಂಡನ್ನಿನ ಇನ್ನರ್ ಟೆಂಪಲ್ ಎಂಬಲ್ಲಿ ಜನಿಸಿದರು. ಅವರ ಪ್ರಬಂಧ ಸಂಗ್ರಹ ‘ಎಸ್ಸೇಸ್ ಆಫ್ ಎಲಿಯ’, ಮಕ್ಕಳಿಗಾಗಿ ರಚಿಸಿದ ‘ಟೇಲ್ಸ್ ಫ್ರಮ್ ಷೇಕ್ಸ್ ಪಿಯರ್’ ಹಾಗೂ ಅವರು ತಮ್ಮ ಸಹೋದರಿಯೊಂದಿಗೆ ಸೇರಿ ರಚಿಸಿದ ‘ಮೇರಿ ಲ್ಯಾಂಬ್’ ಅತ್ಯಂತ ಪ್ರಸಿದ್ಧವಾಗಿದೆ.

1872: ಕನ್ನಡದ ಮಹಾನ್ ವಿದ್ವಾಂಸ, ಸಾಹಿತಿ, ಕನ್ನಡದ ಪ್ರಥಮ ವಿಜ್ಞಾನ ಬರಹಗಾರ ಎಂದು ಪ್ರಸಿದ್ಧಿ ಪಡೆದ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ ಪ್ರಧಾನ ಪಾತ್ರಧಾರಿಗಳಾದ ಬೆಳ್ಳಾವೆ ವೆಂಕಟನಾರಣಪ್ಪನವರು ಫೆಬ್ರವರಿ 10, 1872ರ ವರ್ಷದಲ್ಲಿ ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು. 1937ರ ವರ್ಷದಲ್ಲಿ ಜಮಖಂಡಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1940ರ ವರ್ಷದಲ್ಲಿ ಮೈಸೂರು ಮಹಾರಾಜರಿಂದ ‘ರಾಜಸೇವಾಸಕ್ತ’ ಬಿರುದು ಇವರಿಗೆ ಸಂದಿತ್ತು.

1890: ರಷ್ಯಾದ ಲೇಖಕ, ಕವಿ, ತರ್ಜುಮೆದಾರ ರಷ್ಯಾದ ಬೋರಿಸ್ ಪಾಸ್ಟರ್ ನಾಕ್ ಜನಿಸಿದರು. ಅವರಿಗೆ 1958ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1897: ಅಮೆರಿಕದ ವೈದ್ಯ ಶಾಸ್ತ್ರಜ್ಞ ಜಾನ್ ಫ್ರಾಂಕ್ಲಿನ್ ಎಂಡರ್ಸ್ ಕನೆಕ್ಟಿಕಟ್ ಪ್ರದೇಶದ ವೆಸ್ಟ್ ಹಾರ್ಟ್ ಫೋರ್ಡ್ ಎಂಬಲ್ಲಿ ಜನಿಸಿದರು. ಆಧುನಿಕ ಕಾಲದ ‘ವ್ಯಾಕ್ಸಿನ್ನುಗಳ ತಂದೆ’(The Father of Modern Vaccines) ಎಂದು ಪ್ರಖ್ಯಾತರಾಗಿರುವ ಇವರಿಗೆ 1954ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1902: ಭೌತವಿಜ್ಞಾನಿ ವಾಲ್ಟರ್ ಹೌಸರ್ ಬ್ರಟ್ಟೈನ್ ಅವರು ಚೀನಾದ ಜಿಯಾಮೆನ್ ಎಂಬಲ್ಲಿ ಜನಿಸಿದರು. ಮುಂದೆ ಅಮೆರಿಕದವರಾದ ಇವರಿಗೆ ಪಾಯಿಂಟ್-ಕಾಂಟಾಕ್ಟ್ ಟ್ರಾನ್ಸಿಸ್ಟರ್ ಸಂಶೋಧನೆಗಾಗಿ 1956 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1905: ಹಲಸಂಗಿ ಗೆಳೆಯರ ಬಳಗದ ಕೊಂಡಿ; ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಜನಪದ ಜೀವಾಳ’ ಮುಂತಾದ ಅಮೂಲ್ಯ ಸಂಗ್ರಹಕಾರ, ಕಥೆಗಾರ, ಭಾಷಾಂತರಕಾರ, ಭಾಷಣಕಾರ, ಪ್ರಕಾಶಕ, ಆಧ್ಯಾತ್ಮವಾದಿ ಸಿಂಪಿ ಲಿಂಗಣ್ಣ ಅವರು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. 1993ರಲ್ಲಿ ನಿಧನರಾದ ಇವರಿಗೆ ಭಾರತ ಸರ್ಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ವಿಶ್ವವಿದ್ಯಾಲಯದ ಗೌರವ ಡಿಲಿಟ್, ಜಾನಪದ ಆಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.

1910: ಬೆಲ್ಜಿಯಂ ದೇಶದ ಸಾಹಿತಿ ಡಾಮಿನಿಕ್ ಪಿಯರೆ ಬೆಲ್ಜಿಯಂ ದೇಶದ ದಿನಾಂಟ್ ಎಂಬಲ್ಲಿ ಜನಿಸಿದರು. ಅವರ ಸಾಹಿತ್ಯವು ವಿಶ್ವಮಹಾಯುದ್ಧದ ಸಂತ್ರಸ್ತರಿಗೆ ಶಕ್ತಿ ಭರವಸೆ ತುಂಬುವಂತದ್ದಾಗಿತ್ತು. 1958ರ ವರ್ಷದಲ್ಲಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು .

1925: ವೃತ್ತಿ ರಂಗಭೂಮಿ ಕಲಾವಿದ ಎಚ್.ಟಿ. ಅರಸ್ ಅವರು ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಜನಿಸಿದರು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ ಸೇರಿದಂತೆ ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿದಿರುವ ಇವರು ಅನೇಕ ಚಲನಚಿತ್ರಗಳಲ್ಲೂ ನಟಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

1950: ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಕ್ಯಾಲಿಫೋರ್ನಿಯಾದ ಮಾಡೆಸ್ಟೋ ಎಂಬಲ್ಲಿ ಜನಿಸಿದರು. ಇವರು 1972ರ ಮ್ಯೂನಿಚ್ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಾವು ಭಾಗವಹಿಸಿದ ಎಲ್ಲಾ 7 ಸ್ಪರ್ಧೆಗಳಲ್ಲೂ ಸ್ವರ್ಣಪದಕಗಳನ್ನು ಗೆದ್ದುಕೊಂಡಿದ್ದರು.

1918: ಇಟಲಿಯ ಕ್ರಾಂತಿಕಾರ ಹೋರಾಟಗಾರ, ಪತ್ರಕರ್ತ, ‘ವಿವಿಧತೆಯಲ್ಲಿ ಏಕತೆ’ ಎಂಬುದನ್ನ(varietate unitas) ಮೊದಲಿಗೆ ಬಳಕೆಗೆ ತಂದ ಟಿಯೋಡೊರೊ ಮೊನೆಟಾ ಅವರು ನಿಧನರಾದರು. ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1923: ಜರ್ಮನಿಯ ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ಹೆಲ್ಮ್ ರೋಂಟ್ಗೆನ್ ಜರ್ಮನಿಯ ಮ್ಯೂನಿಚ್ ನಗರಗದಲ್ಲಿ ನಿಧನರಾದರು. ಎಕ್ಸ್-ರೇ ಅಥವಾ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಕಂಡುಹಿಡಿದ ಇವರಿಗೆ 1901ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

2007: ಹೆಸರಾಂತ ಪರಿಸರ ತಜ್ಞ ಕೃಷ್ಣ ನಾರಾಯಣ್ ಅವರು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದರು. ಕೆಎನ್ ಎಂದೇ ಪರಿಚಿತರಾಗಿದ್ದ ಅವರು ಬೆಂಗಳೂರು ಮೂಲದ ‘ವೈಲ್ಡ್ ಲೈಫ್ ಪ್ರಿಸರ್ವೇಶನ್ ಗ್ರೂಪ್’ (WLPG) ಸಹ ಸಂಸ್ಥಾಪಕರಾಗಿದ್ದರು. ಪರಿಸರ ತಜ್ಞ ಉಲ್ಲಾಸ ಕಾರಂತ ಮತ್ತಿತರರ ಜೊತೆಗೆ ವನ್ಯಜೀವಿ ಸಂರಕ್ಷಣೆಯ ಕಾರ್ಯ ನಿರ್ವಹಿಸುತ್ತಿದ್ದರು.

Categories
e-ದಿನ

ಫೆಬ್ರವರಿ-09

ಪ್ರಮುಖಘಟನಾವಳಿಗಳು:

1825: 1824ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯೂ ನಿಚ್ಚಳ ಬಹುಮತ ಗಳಿಸಲಿಲ್ಲವಾಗಿ, ಅಮೆರಿಕದ ಪ್ರತಿನಿಧಿ ಸಭೆಯು ಜಾನ್ ಕ್ವಿನ್ಸಿ ಆಡಮ್ಸ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಚುನಾಯಿಸಿತು.

1895: ವಿಲಿಯಂ ಜಿ. ಮೊರ್ಗಾನ್ ಅವರು ಮಿನ್ಟೊನೆಟ್ಟೆ ಎಂಬ ಆಟವನ್ನು ಕಂಡುಹಿಡಿದರು. ಇದು ಮುಂದಿನ ಕೆಲವೇ ದಿನಗಳಲ್ಲಿ ವಾಲಿಬಾಲ್ ಎಂದು ಪ್ರಸಿದ್ಧಿ ಪಡೆಯಿತು.

1900: ಅಮೆರಿಕದ ಡ್ವೈಟ್ ಡೇವಿಸ್ ಅವರು ಟೆನಿಸ್ ಆಟಕ್ಕಾಗಿ ‘ಡೇವಿಸ್ ಕಪ್’ನ್ನು ಸ್ಥಾಪಿಸಿದರು. ಮೊದಲು ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ತಂಡಗಳ ನಡುವಣ ಸ್ಪರ್ಧೆಗಾಗಿ ಈ ಟ್ರೋಫಿಯನ್ನು ಸ್ಥಾಪಿಸಿದ ಸಂದರ್ಭದಲ್ಲಿ ಸ್ವತಃ ಡ್ವೈಟ್ ಡೇವಿಸ್ ಅವರೂ ವಿಜೇತ ಅಮೆರಿಕನ್ ತಂಡವನ್ನು ಪ್ರತಿನಿಧಿಸಿದ್ದರು. 1912ರಿಂದ ಮೊದಲುಗೊಂಡಂತೆ ‘ಡೇವಿಸ್ ಕಪ್’ ಪಂದ್ಯಾವಳಿಯು ‘ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್’ ಉಸ್ತುವಾರಿಯಲ್ಲಿ ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿದೆ.

1913: ಉತ್ತರ ಮತ್ತು ದಕ್ಷಿಣ ಅಮೆರಿಕದ ಪೂರ್ವ ತೀರದಲ್ಲಿ ಕೆಲವು ಉಲ್ಕೆಗಳ ಗುಂಪಿನಂತಹ ವಸ್ತು ಗೋಚರಿಸಿತು. ಈ ಕುರಿತು ಸಮಾಲೋಚನೆ ನಡೆಸಿದ ಪ್ರಮುಖ ಬೌತವಿಜ್ಞಾನಿಗಳು, ಇದು ಭೂಮಿಯ ಒಂದು ಅಲ್ಪಾಯುಷಿ ಸ್ವಾಭಾವಿಕ ಉಪಗ್ರಹ ಎಂಬ ಅಭಿಪ್ರಾಯಕ್ಕೆ ಬಂದರು.

1931: ನವದೆಹಲಿಯು ಬ್ರಿಟಿಷ್ ಭಾರತದ ರಾಜಧಾನಿಯಾಗಿ ಉದ್ಘಾಟನೆಗೊಂಡಿತು. 1912ರಲ್ಲಿ ದೇಶದ ರಾಜಧಾನಿಯನ್ನು ದೆಹಲಿಯಿಂದ ಕೋಲ್ಕತ್ತಕ್ಕೆ ವರ್ಗಾಯಿಸಲಾಗಿತ್ತು.

1971: ಮೂರನೆಯ ಬಾರಿ ಮಾನವನನ್ನು ಚಂದ್ರನ ಮೇಲೆ ಪದಾರ್ಪಣ ಮಾಡಿಸಿದ ‘ಅಪೋಲೋ 14’ ಬಾಹ್ಯಾಕಾಶ ವಾಹನವು ಭೂಮಿಗೆ ಹಿಂದಿರುಗಿತು.

1975: ಸೋವಿಯತ್ ಯೂನಿಯನ್ನಿನ ‘ಸೋಯುಜ್ 17’ ಗಗನವಾಹನವು ಭೂಮಿಗೆ ಹಿಂದಿರುಗಿತು.

1986: ಹ್ಯಾಲಿ ಧೂಮಕೇತುವು ಸೌರವ್ಯೂಹದಲ್ಲಿ ಕೊನೆಯ ಸಲ ತನ್ನ ದರ್ಶನವನ್ನು ನೀಡಿತು.

2007: ಭಾರತದ ಶಶಿ ತರೂರ್ ಅವರು ವಿಶ್ವಸಂಸ್ಥೆಯ ಅಂಡರ್ ಸೆಕ್ರೆಟರಿ-ಜನರಲ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು. 2006ರ ವರ್ಷದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು ಬನ್-ಕಿ-ಮೂನ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು.

2007: ಭಾರತೀಯ ಸಂಜಾತೆ, ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಮೈಕೆಲ್ ಲೋಪೆಜ್ ಅಲೆಜ್ರಿಯಾ ಅವರು 6.40 ನಿಮಿಷಗಳ ಮೂರನೇ ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಇದರೊಂದಿಗೆ ಒಟ್ಟು 50 ಗಂಟೆ 32 ನಿಮಿಷದ ನಡಿಗೆ ಸಾಧಿಸಿದ ಲೋಪೆಜ್ ಸಾಧನೆ ಅಮೆರಿಕದ ಗಗನಯಾತ್ರಿಯೊಬ್ಬರ ದಾಖಲೆ ಬಾಹ್ಯಾಕಾಶ ನಡಿಗೆಯಾಗಿದೆ. ಆದರೆ ಅತಿಹೆಚ್ಚು ಬಾಹ್ಯಾಕಾಶದ ನಡಿಗೆ ಮಡಿದ ದಾಖಲೆ ರಷ್ಯದ ಅನಾತೊಲಿ ಸೊಲೊವ್ಯೂವ್ ಅವರದ್ದಾಗಿದೆ. ಮಹಿಳಾ ಗಗನಯಾತ್ರಿಗಳ ಪೈಕಿ ಸುನೀತಾ ವಿಲಿಯಮ್ಸ್ ಅವರು ಈಗಾಗಲೇ ಬಾಹ್ಯಾಕಾಶ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

2007: ಹಿಂದಿನ ದಿನವಷ್ಟೇ ಎಫ್ -16 ವಿಮಾನ ಹಾರಿಸಿದ್ದ ಉದ್ಯಮಿ ರತನ್ ಟಾಟಾ ಅವರು ಈದಿನ ಅಮೆರಿಕ ವಾಯುಪಡೆಯ ‘ಬೋಯಿಂಗ್ ಎಫ್ -18 ಸೂಪರ್ ಹಾರ್ನೆಟ್’ ಚಾಲನೆ ಮಾಡಿದರು. ಅವರು 10,000 ಅಡಿಗಳಿಗೂ ಎತ್ತರದಲ್ಲಿ 1300 ಕಿ.ಮೀ. ವೇಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದರು. ಎರಡು ಎಂಜಿನ್ ಹೊಂದಿರುವ ಎಫ್ 18 ವಿಮಾನ ಬಹುಕಾರ್ಯ ನಿರ್ವಹಿಸಬಲ್ಲ ಜೆಟ್ ಫೈಟರ್ ಆಗಿದೆ.

2009: ನೇತಾಜಿ ಸುಭಾಶ್ ಚಂದ್ರ ಬೋಸರು, 1923ರಲ್ಲಿ ಬಂಧನದಲ್ಲಿದ್ದ ಮ್ಯಾನ್ಮಾರಿನ ಮಾಂಡಲೆಯ ಬಂದೀಖಾನೆಯು ಶಿಥಿಲವಾಗಿದ್ದರಿಂದ ಅಲ್ಲಿನ ಸರ್ಕಾರ ಅದನ್ನು ನೆಲಸಮಗೊಳಿಸಿತು.

ಪ್ರಮುಖಜನನ/ಮರಣ:

1404: ಬೈಝಾಂಟೈನಿನ ಕೊನೆಯ ಚಕ್ರವರ್ತಿ 11ನೇ ಕಾನ್ಸ್ಟಾಂಟಿನ್ ಜನಿಸಿದ. ಕಾನ್ ಸ್ಟಾಂಟಿನೋಪಲ್ ರಕ್ಷಣೆಗಾಗಿ ಒಟ್ಟೋಮಾನ್ ಟರ್ಕರ ವಿರುದ್ಧ ನಡೆದ ಅಂತಿಮ ಹೋರಾಟದಲ್ಲಿ ಈತ ಅಸು ನೀಗಿದ.

1846: ಪ್ರಾರಂಭಿಕ ಮರ್ಸಿಡಸ್ ವಾಹನಗಳ ವಿನ್ಯಾಸಕ ವಿಲ್ಹೆಲ್ಮ್ ಮೇಬ್ಯಾಕ್ ಬಾಡೆನ್ ಅವರು ವುರ್ಟೆಂಬರ್ಗಿನ ಹೀಲ್ಬ್ರಾನ್ ಎಂಬಲ್ಲಿ ಜನಿಸಿದರು.

1910: ಫ್ರಾನ್ಸಿನ ಜೈವಿಕ ವಿಜ್ಞಾನಿ ಮತ್ತು ತಳಿ ತಜ್ಞ ಜಾಕೆಸ್ ಮೊನಾಡ್ ಪ್ಯಾರಿಸ್ ನಗರದಲ್ಲಿ ಜನಿಸಿದರು. ಇವರಿಗೆ 1965ರ ವರ್ಷದಲ್ಲಿ ಎನ್ಜೈಮ್ ಉತ್ಪತ್ತಿಯ ನಿಯಂತ್ರಣ ಹಾಗೂ ವೈರಸ್ ಸಂಶ್ಲೇಷಣೆಗಾಗಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1914 : ವೃತ್ತಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಾಹಿತಿ, ನಟ, ನಿರ್ಮಾಪಕ, ನಿರ್ದೇಶಕರಾಗಿ ದುಡಿದಿದ್ದ ಹುಣಸೂರು ಕೃಷ್ಣಮೂರ್ತಿ ಅವರು ಹುಣಸೂರಿನಲ್ಲಿ ಜನಿಸಿದರು. ನಾಟಕ ಕಂಪೆನಿಗಳಲ್ಲಿ ನಟನಾಗಿ, ಸಾಹಿತಿಯಾಗಿ ಸೇವೆ ಸಲ್ಲಿಸಿದ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರಲ್ಲದೆ, 20ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿ 400ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರು. ರಾಜ್ಯ ಸರ್ಕಾರ ಸ್ಥಾಪಿಸಿದ ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಪಡೆದ ಮೊದಲಿಗರೆಂಬ ಕೀರ್ತಿ ಇವರದ್ದಾಗಿದೆ. ಇವರ ಸತ್ಯ ಹರಿಶ್ಚಂದ್ರ ಮತ್ತು ಮದುವೆ ಮಾಡಿ ನೋಡು ಚಿತ್ರಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಭಕ್ತ ಕುಂಬಾರ ಚಿತ್ರಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಸಂದಿತ್ತು. ಇದಲ್ಲದೆ ಉತ್ತಮ ಚಿತ್ರ ಸಂಭಾಷಣೆಗಾಗಿ ಭೂತಯ್ಯನ ಮಗ ಅಯ್ಯು ಮತ್ತು ಎಡೆಯೂರು ಸಿದ್ಧಲಿಂಗೇಶ್ವರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಂದಿತ್ತು.

1922: ವೈಭವಯುತ ಹೋಟೆಲ್ ಲೀಲಾ ಪ್ಯಾಲೇಸ್ ಸಮೂಹ ಸ್ಥಾಪಕ ಉದ್ಯಮಿ ಸಿ. ಪಿ. ಕೃಷ್ಣನ್ ನಾಯರ್ ಅವರು ಈಗಿನ ಕೇರಳಕ್ಕೆ ಸೇರಿದ ಕಣ್ಣೂರಿನಲ್ಲಿ ಜನಿಸಿದರು.

1923: ಪ್ರಸಿದ್ಧ ಶಸ್ತ್ರಚಿಕಿತ್ಸಕ ನಾರ್ಮನ್ ಎಡ್ವರ್ಡ್ ಶಮ್ ವೇ ಅವರು ಅಮೆರಿಕದ ಮಿಚಿಗನ್ ಬಳಿಯ ಕಲಮಸೂ ಎಂಬಲ್ಲಿ ಜನಿಸಿದರು. ಇವರು 1968ರಲ್ಲಿ ಅಮೆರಿಕದಲ್ಲಿ ಮೊತ್ತ ಮೊದಲ ಬಾರಿಗೆ ವಯಸ್ಕ ವ್ಯಕ್ತಿಗೆ ಹೃದಯ ಕಸಿ ಮಾಡಿದವರು.

1940: ಪ್ರಸಿದ್ಧ ಸಾಹಿತಿ ಜೆ. ಎಮ್. ಕೊಯೆಟ್ಜೀ ಅವರು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಲ್ಲಿ ಜನಿಸಿದರು. ದಕ್ಷಿಣ ಆಫ್ರಿಕಾದ ಕಾದಂಬರಿಕಾರ, ಪ್ರಬಂಧಕಾರ, ಭಾಷಾತಜ್ಞ ಮತ್ತು ಅನುವಾದಕರಾದ ಇವರಿಗೆ 2003 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1943: ಅಮೆರಿಕದ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಅವರು ಇಂಡಿಯಾನಾದ ಗೇರಿ ಎಂಬಲ್ಲಿ ಜನಸಿದರು. ವಿಶ್ವ ಬ್ಯಾಂಕಿನ ಪ್ರಧಾನ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಇವರಿಗೆ 2001 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1945: ಜಪಾನಿನ ಸೆಲ್ ಬಯಾಲಜಿಸ್ಟ್ ಆದ ಯೋಷಿನೋರಿ ಒಹ್ಸುಮಿ ಅವರು ಫುಕೋಕ ಎಂಬಲ್ಲಿ ಜನಿಸಿದರು. ಕಣ ಜೀವ ವಿಜ್ಞಾನದದಲ್ಲಿ ಆಟೋಫೇಗಿ ವಿಶೇಷಜ್ಞರಾದ ಇವರಿಗೆ 2016 ವರ್ಷದ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1981: ಭಾರತೀಯ ಕಾನೂನು ತಜ್ಞ ಮತ್ತು ರಾಜಕಾರಣಿ ಎಂ.ಸಿ. ಛಾಗ್ಲಾ ನಿಧನರಾದರು. ಇವರು ಮುಂಬೈ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರಲ್ಲದೆ, ಭಾರತದ ರಾಯಭಾರಿಗಳಾಗಿ ಹಾಗೂ ಭಾರತ ಸರ್ಕಾರದ ಶಿಕ್ಷಣ ಖಾತೆ ಮತ್ತು ವಿದೇಶಾಂಗ ಖಾತೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

1994: ಅಮೆರಿಕದ ಜೀವವಿಜ್ಞಾನಿ ಹೊವರ್ಡ್ ಮಾರ್ಟಿನ್ ಟೆಮಿನ್ ವಿಲ್ಕಾನ್ಸಿನ್ ಬಳಿಯ ಮ್ಯಾಡಿಸನ್ ಎಂಬಲ್ಲಿ ಜನಿಸಿದರು. ಜೆನೆಟಿಕ್ಸ್ ಮತ್ತು ವಿರೋಲಜಿ ತಜ್ಞರಾದ ಇವರು ‘ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್’ ಸಂಶೋಧನೆಗಾಗಿ 1975ರ ವರ್ಷದಲ್ಲಿ ನೊಬೆಲ್ ವೈದ್ಯಕೀಯ ಕ್ಷೇತ್ರದ ಪ್ರಶಸ್ತಿ ಪಡೆದಿದ್ದರು.

1995: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳ ವಿನಿಮಯೀಕರಣದ ಯೋಜನೆಗಾಗಿ ನಿಧಿಯನ್ನು ಸ್ಥಾಪಿಸಲು ಶ್ರಮಿಸಿದ ವಿಲಿಯಂ ಫುಲ್ ಬ್ರೈಟ್ ಅವರು ವಾಷಿಂಗ್ಟನ್ ನಗರದಲ್ಲಿ ನಿಧನರಾದರು. ಈ ಯೋಜನೆಗೆ ‘ಫುಲ್ ಬ್ರೈಟ್ ಪ್ರೋಗ್ರಾಮ್’ ಎಂಬ ಹೆಸರನ್ನೇ ಇರಿಸಲಾಗಿದೆ.

2005: ವಾಹನಗಳಲ್ಲಿ ಮಳೆ, ಮಂಜು ವಾತವರಣಗಳಲ್ಲಿ ಗಾಜನ್ನು ಒರೆಸಿ ದೃಷ್ಟಿಗೋಚರಿಸುವಂತೆ ಮಾಡುವ ವಿಂಡ್ ಸ್ಕ್ರೀನ್ ವೈಪರ್ ಅನ್ನು ಕಂಡು ಹಿಡಿದವರು ಅಮೆರಿಕದ ರಾಬರ್ಟ್ ಕೀರನ್ಸ್ ಅವರು. ಅವರು ಬಾಲ್ಟಿಮೋರ್ ಪಟ್ಟಣದಲ್ಲಿ ನಿಧನರಾದರು.

2006: ಹಿಂದಿ ಚಿತ್ರರಂಗದ ಹಿರಿಯ ನಟಿ ನಾದಿರಾ ಮುಂಬೈನಲ್ಲಿ ನಿಧನರಾದರು. ನೂರಾರು ಚಿತ್ರಗಳಲ್ಲಿ ನಟಿಸಿದ್ದ ಅವರ ಶ್ರೀ 420, ಪಾಕೀಜಾ, ಜೂಲಿ ಮುಂತಾದ ಚಿತ್ರಗಳಲ್ಲಿನ ಅಭಿನಯ ಇಂದೂ ಪ್ರಸಿದ್ಧವಾಗಿವೆ.

2008: ಸಮಾಜ ಸೇವಕ ಹಾಗೂ ಗಾಂಧಿವಾದಿ ಬಾಬಾ ಆಮ್ಟೆ ಅವರು ಚಂದ್ರಾಪುರ ಜಿಲ್ಲೆಯ ವರೊರಾದಲ್ಲಿರುವ ತಮ್ಮ ‘ಆನಂದವನ’ ಆಶ್ರಮದಲ್ಲಿ ನಿಧನರಾದರು. ಅವರ ‘ಆನಂದವನ’ ಆಶ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಕುಷ್ಠರೋಗಿಗಳು ಆರೈಕೆ ಪಡೆಯುತ್ತಿದ್ದಾರೆ. ಹಲವು ಪರಿಸರ ಚಳವಳಿಗಳನ್ನು ಹುಟ್ಟು ಹಾಕಿದ ಇವರು ಜನತೆಯ್ಲಲಿ ಪರಿಸರದ ಬಗೆಗೆ ಅರಿವು ಮೂಡಿಸುವ ಸಲುವಾಗಿ 1985ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು 1988ರಲ್ಲಿ ಅಸ್ಸಾಮಿನಿಂದ ಗುಜರಾತಿನವರೆಗೆ ಜಾಥಾ ನಡೆಸಿದ್ದರು. ಪದ್ಮಶ್ರೀ, ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮವಿಭೂಷಣ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ಗಾಂಧಿ ಶಾಂತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2010: ಹಾರುವ ತಟ್ಟೆಗಳ ಜನಕ ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅವರು ನಿಧನರಾದರು. ಮೊದಲಿಗೆ ಫ್ಲಯಿಂಗ್ ಸಾಸರ್ ಎಂದು ಹೆಸರಾಗಿದ್ದ ಇದು ಮುಂದೆ ಫ್ರಿಸ್ಬಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.

2012: ಹಿಂದೀ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕತೆಗಾರ ಓ.ಪಿ. ದತ್ತ ನಿಧನರಾದರು.

Categories
e-ದಿನ

ಫೆಬ್ರವರಿ-0 8

ಪ್ರಮುಖಘಟನಾವಳಿಗಳು:

[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1238: ಮೊಂಗೋಲರು ರಷ್ಯಾದ ವ್ಲಾಡಿಮರ್ ನಗರವನ್ನು ಸುಟ್ಟುಹಾಕಿದರು” open=”no”]ಮೊಂಗೋಲರು ರಷ್ಯಾದ ವ್ಲಾಡಿಮರ್ ನಗರವನ್ನು ಸುಟ್ಟುಹಾಕಿದರು[/fusion_toggle][fusion_toggle title=”1575: ನೆದರ್ಲ್ಯಾಂಡಿನ ಪ್ರಸಿದ್ಧ ಲೀಡನ್ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿತು” open=”no”]ನೆದರ್ಲ್ಯಾಂಡಿನ ಪ್ರಸಿದ್ಧ ಲೀಡನ್ ವಿಶ್ವವಿದ್ಯಾಲಯವು ಲೀಡನ್ ನಗರದಲ್ಲಿ ಪ್ರಾರಂಭಗೊಂಡಿತು. ಪ್ರೇಸಿಡಿಯಂ ಲಿಬರ್ಟಾಟಿಸ್ (Praesidium Libertatis) ಅಂದರೆ ‘ಸ್ವಾತಂತ್ರ್ಯದ ಭದ್ರಕೋಟೆ’ ಎಂಬ ಧ್ಯೇಯವನ್ನು ಈ ವಿಶ್ವವಿದ್ಯಾಲಯ ಭಿತ್ತರಿಸಿತ್ತು.[/fusion_toggle][fusion_toggle title=”1665: ಬಾಂಬೆ ಬ್ರಿಟಿಷರ ವಶಕ್ಕೆ ಸೇರಿತು” open=”no”]ಬ್ರಿಟಿಷರು ಈಗ ಮುಂಬೈ ಎನಿಸಿರುವ ಬಾಂಬೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮೊದಲು ಎರಡನೇ ಚಾರ್ಲ್ಸ್ ದೊರೆಯ ಕೈಗೆ ಬಂದ ಇದು 1668ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಆಡಳಿತಕ್ಕೆ ಒಳಪಟ್ಟಿತು.[/fusion_toggle][fusion_toggle title=”1872: ಅಂಡಮಾನ್ ದ್ವೀಪದಲ್ಲಿ ಖೈದಿಯೊಬ್ಬ ಭಾರತದ ಗವರ್ನರ್ ಜನರಲ್ ಮೇಯೋ ಅನ್ನು ಹತ್ಯೆ ಮಾಡಿದ.” open=”no”]ಅಂಡಮಾನ್ ದ್ವೀಪದಲ್ಲಿ ಖೈದಿಯೊಬ್ಬ ಭಾರತದ ಗವರ್ನರ್ ಜನರಲ್ ಮೇಯೋ ಅನ್ನು ಹತ್ಯೆ ಮಾಡಿದ[/fusion_toggle][fusion_toggle title=”1879: ಸ್ಟಾಂಡ್ಫೋರ್ಡ್ ಫ್ಲೆಮಿಂಗ್ ಅವರಿಂದ ‘ಯೂನಿವರ್ಸಲ್ ಸ್ಟಾಂಡರ್ಡ್ ಟೈಮ್’ ಅಳವಡಿಸುವ ಪ್ರಸ್ತಾಪ ” open=”no”]ರಾಯಲ್ ಕೆನಡಿಯನ್ ಇನ್ಸ್ಟಿಟ್ಯೂಟಿನಲ್ಲಿ ನಡೆದ ಸಭೆಯಲ್ಲಿ ಸ್ಟಾಂಡ್ಫೋರ್ಡ್ ಫ್ಲೆಮಿಂಗ್ ಅವರು ‘ಯೂನಿವರ್ಸಲ್ ಸ್ಟಾಂಡರ್ಡ್ ಟೈಮ್’ ಅಳವಡಿಸುವ ಪ್ರಸ್ತಾಪವನ್ನು ಮುಂದಿಟ್ಟರು[/fusion_toggle][fusion_toggle title=”1910: ವಿಲಿಯಂ ಡಿ. ಬಾಯ್ಸ್ ಅವರಿಂದ ದಿ ಬಾಯ್ಸ್ ಸ್ಕೌಟ್ಸ್ ಆಫ್ ಅಮೆರಿಕ ಸ್ಥಾಪನೆ” open=”no”]ವಿಲಿಯಂ ಡಿ. ಬಾಯ್ಸ್ ಅವರು ದಿ ಬಾಯ್ಸ್ ಸ್ಕೌಟ್ಸ್ ಆಫ್ ಅಮೆರಿಕವನ್ನು ಸ್ಥಾಪಿಸಿದರು[/fusion_toggle][fusion_toggle title=”1921: ಭಾರತದಲ್ಲಿ `ಚೇಂಬರ್ ಆಫ್ ಪ್ರಿನ್ಸಸ್’ (ರಾಜಕುಮಾರರ ಒಕ್ಕೂಟ) ಸ್ಥಾಪನೆ” open=”no”]ಭಾರತದಲ್ಲಿ ‘ಚೇಂಬರ್ ಆಫ್ ಪ್ರಿನ್ಸಸ್’ ಸ್ಥಾಪನೆಗೊಂಡಿತು. ವೈಸ್ ರಾಯ್ ಅಧ್ಯಕ್ಷರಾಗಿದ್ದ ಈ ಒಕ್ಕೂಟದಲ್ಲಿ 120 ಸದಸ್ಯರಿದ್ದರು.[/fusion_toggle][fusion_toggle title=”1922: ಅಮೆರಿಕದ ಶ್ವೇತಭವನದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರತಿಷ್ಟಾಪನೆ” open=”no”]ಅಮೆರಿಕದ ಅಧ್ಯಕ್ಷ ವಾರೆನ್ ಜಿ. ಹಾರ್ಡಿಂಗ್ ಅವರು ವೈಟ್ ಹೌಸಿನಲ್ಲಿ ಪ್ರಥಮ ರೇಡಿಯೋ ಸೆಟ್ ಸ್ಥಾಪಿಸಿದರು.[/fusion_toggle][fusion_toggle title=”1950: ಪೂರ್ವ ಜರ್ಮನಿಯಲ್ಲಿ ‘ಸ್ಟೇಸಿ’ ಎಂಬ ಗುಪ್ತ ಪೋಲೀಸ್ ದಳ ಸ್ಥಾಪನೆಗೊಂಡಿತು.” open=”no”]ಪೂರ್ವ ಜರ್ಮನಿಯಲ್ಲಿ ‘ಸ್ಟೇಸಿ’ ಎಂಬ ಗುಪ್ತ ಪೋಲೀಸ್ ದಳ ಸ್ಥಾಪನೆಗೊಂಡಿತು.[/fusion_toggle][fusion_toggle title=”1955: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಜಾಗೀರ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು.” open=”no”]ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಜಾಗೀರ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು. ಇದರಿಂದ ಅಲ್ಲಿ ವಶಪಡಿಸಿಕೊಂಡ ಒಂದು ದಶಲಕ್ಷ ಎಕರೆ ಭೂಮಿಯನ್ನು ಬಡಬಗ್ಗರಿಗೆ ಹಂಚಲಾಯಿತು.[/fusion_toggle][fusion_toggle title=”1971: ‘ನಾಸ್ಡಾಕ್’ ಷೇರು ಮಾರುಕಟ್ಟೆಯ ಸೂಚ್ಯಂಕ ಮೊದಲಬಾರಿಗೆ ತೆರೆದುಕೊಂಡಿತು” open=”no”]ಅಮೆರಿಕದ ಎರಡನೇ ದೊಡ್ಡ ಷೇರು ಮಾರುಕಟ್ಟೆಯಾದ ‘ನಾಸ್ಡಾಕ್’ (NASDAQ) ಸೂಚ್ಯಂಕವು ಮೊದಲ ಬಾರಿಗೆ ತೆರೆದುಕೊಂಡಿತು.[/fusion_toggle][fusion_toggle title=”1974: 84 ದಿನಗಳ ಗಗನ ವಾಸದ ನಂತರದಲ್ಲಿ ಭೂಲೋಕಕ್ಕೆ ಹಿಂದಿರುಗಿದ ಸ್ಕೈಲ್ಯಾಬ್ ತಂತ್ರಜ್ಞರು” open=”no”]84 ದಿನಗಳ ಗಗನ ವಾಸದ ನಂತರದಲ್ಲಿ ಸ್ಕೈಲ್ಯಾಬ್ ಬಾಹ್ಯಾಕಾಶ ಪ್ರಯೋಗಾಲಯದಿಂದ ನಾಸಾದ ತಂತ್ರಜ್ಞರು ಭುವಿಗೆ ವಾಪಸ್ಸಾದರು.[/fusion_toggle][fusion_toggle title=”1978: ಅಮೆರಿಕದ ಸೆನೆಟ್ಟಿನ ಕಾರ್ಯಕಲಾಪಗಳು ಮೊದಲ ಬಾರಿಗೆ ರೇಡಿಯೋದಲ್ಲಿ ನೇರ ಪ್ರಸಾರ” open=”no”]ಅಮೆರಿಕದ ಸೆನೆಟ್ಟಿನ ಕಾರ್ಯಕಲಾಪಗಳು ಮೊದಲ ಬಾರಿಗೆ ರೇಡಿಯೋದಲ್ಲಿ ನೇರ ಪ್ರಸಾರಗೊಂಡವು[/fusion_toggle][fusion_toggle title=”1994: ರಿಚರ್ಡ್ ಹ್ಯಾಡ್ಲಿ ಅವರ ಹೆಸರಿನಲ್ಲಿದ್ದ ಅತಿ ಹೆಚ್ಚು ವಿಕೆಟ್ ದಾಖಲೆ ಅಳಿಸಿದ ಕಪಿಲ್ ದೇವ್ ” open=”no”]ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕೆಯ ಹಷನ್ ತಿಲಕರತ್ನೆ ಅವರ ವಿಕೆಟ್ ಉರುಳಿಸುವ ಮೂಲಕ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟಿನಲ್ಲಿ 431 ವಿಕೆಟ್ ಗಳಿಸಿ ದಾಖಲೆ ಸ್ಥಾಪಿಸಿದ್ದ ಸರ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದರು.[/fusion_toggle][fusion_toggle title=”2006: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ” open=”no”]ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 1,025 ವರ್ಷಗಳಿಂದ ತಲೆ ಎತ್ತಿ ನಿಂತಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ ಸಹಸ್ರಾರು ಮಂದಿ ಭಕ್ತ ಸಮೂಹದ ನಡುವೆ ಆರಂಭಗೊಂಡಿತು. ಮೊದಲ ಕಲಶದ ಅಭಿಷೇಕ ಭಾಗ್ಯ ರಾಜಸ್ಥಾನ ರಾಜ್ಯದ ಅಜಮೇರ್ ಬಳಿಯ ಕಿಷನ್ ಗಢ ಊರಿನ ಅಶೋಕ ಪಾಟ್ನಿ ಅವರದಾಯಿತು. ಈ ಕಲಶವನ್ನು ಅವರು ಹರಾಜಿನಲ್ಲಿ 1.08 ಕೋಟಿ ರೂಪಾಯಿ ನೀಡಿ ಖರೀದಿಸಿದರು.[/fusion_toggle][fusion_toggle title=”2007: ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿದ ರತನ್ ಟಾಟಾ ” open=”no”]ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ -2007 ಉತ್ಸವದಲ್ಲಿ ಟಾಟಾ ಉದ್ಯಮ ಸಮೂಹದ ಮುಖ್ಯಸ್ಥರಾದ 69 ವರ್ಷದ ರತನ್ ಟಾಟಾ ಅವರು ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿದರು.ಈ ಮೂಲಕ ಎಫ್- 16 ಚಾಲನೆ ಮಾಡಿದ ಪ್ರಪ್ರಥಮ ಭಾರತೀಯ ಪ್ರಜೆ ಎಂಬ ಕೀರ್ತಿಗೆ ಅವರು ಭಾಜನರಾದರು.[/fusion_toggle][fusion_toggle title=”2008: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ ಬಳಸುವಂತಿಲ್ಲ ಎಂದು ತೀರ್ಮಾನಿಸಿದ ಕೋರ್ಟು” open=”no”]ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ, ಅಸಂವಿಧಾನಿಕವಾಗಿ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯ ಪೀಠವು ಆಂಧ್ರಪ್ರದೇಶ ಸರ್ಕಾರದ ಖೈದಿಗಳ ಬಿಡುಗಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ನೀಡಿತು.[/fusion_toggle][fusion_toggle title=”2008: ಭಾರತ ಮತ್ತು ರಷ್ಯಾ ಜಂಟಿ ಬಾಹ್ಯಾಕಾಶ ಯೋಜನೆಯಲ್ಲಿ 1984ರ ವರ್ಷದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರ 24 ವರ್ಷಗಳ ನಂತರದ ಭೇಟಿ” open=”no”]1984ರ ವರ್ಷದಲ್ಲಿ ಭಾರತ ಮತ್ತು ರಷ್ಯಾ ಜಂಟಿ ಬಾಹ್ಯಾಕಾಶ ಯೋಜನೆಯಲ್ಲಿ 1984ರ ವರ್ಷದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರು 24 ವರ್ಷಗಳ ನಂತರ ನವದೆಹಲಿಯಲ್ಲಿ ಮುಖಾಮುಖಿಯಾದರು. ರಾಜಧಾನಿಯಲ್ಲಿ ನಡೆದ 18ನೇ ವಿಶ್ವ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಬಾಹ್ಯಾಕಾಶ ಕುರಿತು ಪಾಠ ಹೇಳಲು ಹಾಗೂ ತರಬೇತಿ ನೀಡಲು ಇವರಿಬ್ಬರೂ ದೆಹಲಿಗೆ ಆಗಮಿಸಿದ್ದರು.

ಪ್ರಮುಖಜನನ/ಮರಣ:

120: ಗ್ರೀಕ್ ಖಗೋಳ ಶಾಸ್ತ್ರಜ್ಞ, ಗಣಿತಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ವೆಟ್ಟಿಯಸ್ ವಾಲೆನ್ಸ್ ಜನನ” open=”no”]ಗ್ರೀಕ್ ಖಗೋಳ ಶಾಸ್ತ್ರಜ್ಞ, ಗಣಿತಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ವೆಟ್ಟಿಯಸ್ ವಾಲೆನ್ಸ್ ಜನಿಸಿದರು. ಇವರು ಜ್ಯೋತಿಷ್ಯಾಸ್ತರದ ಕುರಿತು ಹತ್ತು ಬೃಹತ್ ಸಂಪುಟಗಳ ಗ್ರಂಥವನ್ನು ರಚಿಸಿದ್ದರು.[/fusion_toggle][fusion_toggle title=”412: ಗ್ರೀಕ್ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞ ಪ್ರೋಕ್ಲಸ್ ಜನನ” open=”no”]ಗ್ರೀಕ್ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞ ಪ್ರೋಕ್ಲಸ್ ಕಾನ್ ಸ್ಟಾಂಟಿನೋಪಲ್ ನಗರದಲ್ಲಿ ಜನಿಸಿದರು.[/fusion_toggle][fusion_toggle title=”1897: ಭಾರತದ ಮೂರನೆಯ ರಾಷ್ಟ್ರಪತಿಗಳೂ, ಬೋಧಕರೂ ಆದ ಜಕೀರ್ ಹುಸೇನ್ ಜನನ” open=”no”]ಭಾರತದ ಮೂರನೆಯ ರಾಷ್ಟ್ರಪತಿಗಳೂ, ಬೋಧಕರೂ ಆಗಿದ್ದ ಜಕೀರ್ ಹುಸೇನ್ ಈಗಿನ ತೆಲಂಗಾಣದ ಹೈದರಾಬಾದಿನಲ್ಲಿ ಜನಿಸಿದರು. 1967ರಲ್ಲಿ ರಾಷ್ಟ್ರಪತಿಗಳಾದ ಇವರು ಅಧಿಕಾರದಲ್ಲಿದ್ದಾಗಲೇ 1969ರ ವರ್ಷದಲ್ಲಿ ನಿಧನರಾದರು. ಈ ಹಿಂದೆ ಅವರು ಉಪರಾಷ್ಟ್ರಪತಿ ಮತ್ತು ಬಿಹಾರ ರಾಜ್ಯದ ರಾಜ್ಯಪಾಲರ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇವರಿಗೆ 1963ರ ವರ್ಷದಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.[/fusion_toggle][fusion_toggle title=”1906: ಎಲೆಕ್ಟ್ರೋ ಫೋಟೋಗ್ರಫಿ ಕಂಡುಹಿಡಿದ ಚೆಸ್ಟರ್ ಕಾರ್ಲ್ಸನ್ ಜನನ” open=”no”]ಎಲೆಕ್ಟ್ರೋ ಫೋಟೋಗ್ರಫಿ ಕಂಡುಹಿಡಿದು ‘ಸೇರೋಗ್ರಫಿ(Xerography) ಅಭಿವೃದ್ಧಿಪಡಿಸಿದ ಅಮೇರಿಕದ ವೈದ್ಯ ಶಾಸ್ತ್ರಜ್ಞ ಚೆಸ್ಟರ್ ಕಾರ್ಲ್ಸನ್ ಅವರು ವಾಷಿಂಗ್ಟನ್ ಬಳಿಯ ಸೀಟಲ್ನಲ್ಲಿ ಜನಿಸಿದರು.[/fusion_toggle][fusion_toggle title=”1914: ಸಾಹಿತಿ ಎಸ್. ವಿ. ಪರಮೇಶ್ವರ ಭಟ್ ಜನನ” open=”no”]‘ಕನ್ನಡದ ಕಾಳಿದಾಸ’ರೆಂದೇ ಹೆಸರು ಮಾಡಿದ್ದ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ತೀರ್ಥಹಳ್ಳಿಯಲ್ಲಿ ಜನಿಸಿದರು. ಎಸ್. ವಿ. ಪರಮೇಶ್ವರ ಭಟ್ಟರು ಕನ್ನಡ ನವೋದಯದ ಕಾಲದ ಬಹುಶ್ರುತ ವಿದ್ವಾಂಸ ಬರಹಗಾರರು, ಕವಿಗಳು, ಭಾವಗೀತೆ, ವಚನ, ಮುಕ್ತಕಗಳೇ ಮೊದಲಾಗಿ ಸಾವಿರಾರು ಸಂಖ್ಯೆಯ ಸೃಜನಶೀಲ ಕಾವ್ಯಗಳನ್ನು ಸೃಷ್ಟಿಸಿದರಲ್ಲದೆ, ಸಂಸ್ಕೃತ ಮಹಾಕವಿಗಳ ಕಾವ್ಯ, ನಾಟಕ, ಗೀತೆ, ಮುಕ್ತಕಗಳನೇಕವನ್ನು ಅನುವಾದಗಳಲ್ಲಿ ತಂದು ಮರುಸೃಷ್ಟಿ ಮಾಡಿದ್ದಾರೆ. 2000ದ ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.[/fusion_toggle][fusion_toggle title=”1920: ಅಮೆರಿಕದ ಚಿತ್ರನಟಿ ಲಾರಾ ಟರ್ನರ್ ಜನನ” open=”no”]‘ಸಿಹಿ ಹುಡುಗಿ’ (ಸ್ವೀಟರ್ ಗರ್ಲ್) ಎಂದೇ ಖ್ಯಾತಳಾಗಿದ್ದ ಅಮೆರಿಕಾದ ಚಿತ್ರನಟಿ ಲಾರಾ ಟರ್ನರ್ ಜನಿಸಿದರು[/fusion_toggle][fusion_toggle title=”1924: ಭಾರತೀಯ ಉದ್ಯಮಿ ವಿಠ್ಠಲ್ ಮಲ್ಯ ಜನನ” open=”no”]ಬಾರತೀಯ ಉದ್ಯಮಿ ವಿಠ್ಠಲ್ ಮಲ್ಯ ಈಗ ಬಾಂಗ್ಲಾ ದೇಶಕ್ಕೆ ಸೇರಿರುವ ಡಾಕ್ಕಾದಲ್ಲಿ ಜನಿಸಿದರು.[/fusion_toggle][fusion_toggle title=”1934: ಸುಗಮ ಸಂಗೀತ ಕಲಾವಿದೆ ಎಚ್.ಆರ್. ಲೀಲಾವತಿ ಜನನ” open=”no”]ಸುಗಮ ಸಂಗೀತದ ಪ್ರಖ್ಯಾತ ಕಲಾವಿದೆ ಎಚ್.ಆರ್. ಲೀಲಾವತಿ ಬೆಂಗಳೂರಿನಲ್ಲಿ ಜನಿಸಿದರು. ಆಕಾಶವಾಣಿಯ ಸೇವೆಯಲ್ಲಿ ಪ್ರಮುಖ ಗಾಯನ ಕಲಾವಿದರಾಗಿದ್ದ ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿಗಳು ಸಂದಿವೆ. ಇವರು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.[/fusion_toggle][fusion_toggle title=”1941: ಘಜಲ್ ಸಂಗೀತಗಾರ ಜಗಜಿತ್ ಸಿಂಗ್ ಜನನ” open=”no”]ಪ್ರಸಿದ್ಧ ಘಜಲ್ ಸಂಗೀತ ಗಾಯಕ ಮತ್ತು ಸಂಯೋಜಕ ಜಗಜಿತ್ ಸಿಂಗ್ ಬಿಕನೇರ್ ಬಳಿಯ ಶ್ರೀ ಗಂಗಾನಗರ್ ಎಂಬಲ್ಲಿ ಜನಿಸಿದರು. ತಮ್ಮ ಪತ್ನಿ ಚಿತ್ರಾ ಸಿಂಗ್ ಅವರೊಂದಿಗೆ ಅನೇಕ ಕಛೇರಿಗಳನ್ನು ನೀಡಿದ್ದಲ್ಲದೆ ಅನೇಕ ಪ್ರಖ್ಯಾತ ಸಂಗೀತದ ಆಲ್ಬಂಗಳನ್ನು ಇವರು ಹೊರತಂದಿದ್ದರು. 1984ರ ವರ್ಷದಲ್ಲಿ 2011ರ ವರ್ಷದಲ್ಲಿ ಈ ಲೋಕವನ್ನಗಲಿದ ಇವರಿಗೆ ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.[/fusion_toggle][fusion_toggle title=”1963: ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಜನನ” open=”no”]ಭಾರತದ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಹೈದರಾಬಾದಿನಲ್ಲಿ ಜನಿಸಿದರು. ಏಕದಿನ ಕ್ರಿಕೆಟಿನಲ್ಲಿ 9000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್ಟಿನಲ್ಲಿ 6216ರನ್ ಗಳಿಸಿರುವ ಇವರು ಭಾರತ ತಂಡದ ನಾಯಕತ್ವವನ್ನೂ ನಿರ್ವಹಿಸಿದ್ದರು.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1957: ನೊಬೆಲ್ ಪುರಸ್ಕೃತ ಭೌತ ವಿಜ್ಞಾನಿ ವಾಲ್ತರ್ ಬೋಥೆ ನಿಧನ” open=”no”]ಜರ್ಮನಿಯ ಭೌತ ವಿಜ್ಞಾನಿ ವಾಲ್ತರ್ ಬೋಥೆ ಹೀಡೆಲ್ ಎಂಬಲ್ಲಿ ನಿಧನರಾದರು. ಇವರಿಗೆ 1954 ವರ್ಷದ ಭೌತಶಾಸ್ತ್ರ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1975: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ರಾಬರ್ಟ್ ರಾಬಿನ್ಸನ್ ನಿಧನ” open=”no”]ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ರಾಬರ್ಟ್ ರಾಬಿನ್ಸನ್ ಅವರು ಬಕ್ಕಿಂಗ್ ಹ್ಯಾಮ್ ಶೈರ್ ಬಳಿಯ ಗ್ರೇಟ್ ಮಿಸೆನ್ಡೆನ್ ಎಂಬಲ್ಲಿ ನಿಧನರಾದರು. ಅಲ್ಕಲಾಯ್ದ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1947 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1979: ನೊಬೆಲ್ ಪುರಸ್ಕೃತ ಡೆನ್ನಿಸ್ ಗಬೋರ್ ನಿಧನ” open=”no”]ಹಂಗೇರಿ ದೇಶದಲ್ಲಿ ಜನಿಸಿದ ಭೌತವಿಜ್ಞಾನಿ ಡೆನ್ನಿಸ್ ಗಬೋರ್ ಲಂಡನಿಧನರಾದರುನ್ನಿನಲ್ಲಿ . ಹೋಲೋಗ್ರೆಫಿ ಕಂಡುಹಿಡಿದ ಇವರಿಗೆ 1971ರ ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1998: ನೊಬೆಲ್ ಪುರಸ್ಕೃತ ಸಾಹಿತಿ ಹಾಲ್ಡರ್ ಲಾಕ್ಸೆನ್ಸ್ ನಿಧನ” open=”no”]ಐಲೆಂಡ್ ದೇಶದ ಹಾಲ್ಡರ್ ಲಾಕ್ಸೆನ್ಸ್ ರೇಕ್ ಜೆವಿಕ್ ಎಂಬಲ್ಲಿ ನಿಧನರಾದರು. ಇವರಿಗೆ 1955 ವರ್ಷದ ಸಾಹಿತ್ಯಕ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1999: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರಾಗಿದ್ದ ಮೇಜರ್ ಕೃಷ್ಣಸ್ವಾಮಿ ಸುಂದರ್ಜಿ ನಿಧನ” open=”no”]ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೃಷ್ಣಸ್ವಾಮಿ ಸುಂದರ್ಜಿ ನಿಧನರಾದರು. ಇವರ ಅಧಿಕಾರಾವಧಿಯಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ ಉಗ್ರಗಾಮಿಗಳನ್ನು ತೆರವು ಮಾಡುವ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಯಿತು.[/fusion_toggle][fusion_toggle title=”2008: ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಎಚ್. ಕೆ.ನಾರಾಯಣ ನಿಧನ” open=”no”]ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಸಂಗೀತ ಸಂಯೋಜಕ ಎಚ್. ಕೆ.ನಾರಾಯಣ ಬೆಂಗಳೂರಿನಲ್ಲಿ ನಿಧನರಾದರು. ಆಕಾಶವಾಣಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರಿಗೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು..[/fusion_toggle][fusion_toggle title=”2016: ಪ್ರಖ್ಯಾತ ಹಿಂದಿ ಮತ್ತು ಉರ್ದು ಕವಿ ಹಾಗೂ ಗೀತ ರಚನಕಾರ ನಿಡಾ ಫಾಜಿಲ್ ನಿಧನ” open=”no”]ಪ್ರಖ್ಯಾತ ಹಿಂದಿ ಮತ್ತು ಉರ್ದು ಕವಿ ಹಾಗೂ ಗೀತ ರಚನಕಾರ ನಿಡಾ ಫಾಜಿಲ್ ಮುಂಬೈನಲ್ಲಿ ನಿಧನರಾದರು. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ಚಲನಚಿತ್ರರಂಗದ ಹಲವಾರು ಪಶಸ್ತಿಗಳು ಸಂದಿದ್ದವು.[/fusion_toggle][/fusion_accordion]

Categories
e-ದಿನ

ಫೆಬ್ರುವರಿ-07

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1301: ಕಾರ್ನರ್ವಾನಿನ ಎಡ್ವರ್ಡ್ ಮೊದಲ ಇಂಗ್ಲಿಷ್ ಪ್ರಿನ್ಸ್ ಆಫ್ ವೇಲ್ಸ್ ಆಗಿ ಸಿಂಹಾಸನವೇರಿದ ” open=”no”]ಕಾರ್ನರ್ವಾನಿನ ಎಡ್ವರ್ಡ್ ಮೊದಲ ಇಂಗ್ಲಿಷ್ ಪ್ರಿನ್ಸ್ ಆಫ್ ವೇಲ್ಸ್ ಆಗಿ ಸಿಂಹಾಸನಾರೂಢನಾದ. ಈತ ಮುಂದೆ ಎರಡನೆಯ ಎಡ್ವರ್ಡ್ ದೊರೆ ಎನಿಸಿದ.[/fusion_toggle][fusion_toggle title=”1477: ಮಾನವತಾವಾದಿ, ರಾಜಕಾರಣಿ, ಇಂಗ್ಲೆಂಡಿನ ಚಾನ್ಸಲರ್ ಸೇಂಟ್ ಥಾಮಸ್ ಮೋರೆ ಜನನ” open=”no”]ಮಾನವತಾವಾದಿ, ರಾಜಕಾರಣಿ, ಇಂಗ್ಲೆಂಡಿನ ಚಾನ್ಸಲರ್ ಸೇಂಟ್ ಥಾಮಸ್ ಮೋರೆ ಜನಿಸಿದ. ದೊರೆ ಎಂಟನೆಯ ಹೆನ್ರಿಯನ್ನು ಇಂಗ್ಲೆಂಡಿನ ಚರ್ಚ್ ಮುಖ್ಯಸ್ಥ ಎಂಬುದಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಈತನ ತಲೆ ಕಡಿಯಲಾಯಿತು.[/fusion_toggle][fusion_toggle title=”1497: ಇಟಲಿಯ ಫ್ಲಾರೆನ್ಸ್ ನಗರದಲ್ಲಿ ನಡೆದ ಪ್ರತಿಷ್ಠೆಯ ವಸ್ತುಗಳ ದಹನ ಕಾರ್ಯಕ್ರಮವಾದ ‘ಬಾನ್ ಫೈರ್ ಆಫ್ ವ್ಯಾನಿಟೀಸ್’” open=”no”]ಇಟಲಿಯ ಪ್ಲಾರೆನ್ಸ್ ನಗರದಲ್ಲಿ ಗಿರೋಲಮೋ ಸವೋನರೋಲ ಅವರ ನೇತೃತ್ವದಲ್ಲಿ ಪ್ರತಿಷ್ಠೆಯ ವಸ್ತ್ಗುಗಳ ‘ಬಾನ್ ಫೈರ್ ಆಫ್ ವ್ಯಾನಿಟೀಸ್’ ಕಾರ್ಯಕ್ರಮ ನಡೆದು, ಆತನ ಬೆಂಬಲಿಗರು ಶೃಂಗಾರ ವಸ್ತುಗಳು, ಕಲಾತ್ಮಕ ವಸ್ತುಗಳು ಮತ್ತು ಗ್ರಂಥಗಳನ್ನು ಬೆಂಕಿಗೆ ಹಾಕಿದರು.[/fusion_toggle][fusion_toggle title=”1819: ಸಿಂಗಪುರವನ್ನು ಪಡೆದುಕೊಂಡ ಸರ್ ಥಾಮಸ್ ಸ್ಟಾಂಫೋರ್ಡನು ಅದನ್ನು ಮರುಕ್ಷಣದಲ್ಲೇ ವಿಲಿಯನ್ ಫರ್ಕುಹಾರನಿಗೆ ಕೊಟ್ಟು ಸಿಂಗಪುರದಿಂದ ಹೊರನಡೆದುಬಿಟ್ಟ ” open=”no”]ಸಿಂಗಪುರವನ್ನು ಪಡೆದುಕೊಂಡ ಸರ್ ಥಾಮಸ್ ಸ್ಟಾಂಫೋರ್ಡನು ಅದನ್ನು ಮರುಕ್ಷಣದಲ್ಲೇ ವಿಲಿಯನ್ ಫರ್ಕುಹಾರನಿಗೆ ಕೊಟ್ಟು ಸಿಂಗಪುರದಿಂದ ಹೊರನಡೆದುಬಿಟ್ಟ[/fusion_toggle][fusion_toggle title=”1856: ಅವಧ್ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿದ ಲಾರ್ಡ್ ಡಾಲ್ ಹೌಸಿ” open=”no”]ಆಡಳಿತಗಾರ ವಾಜಿದ್ ಅಲಿ ಶಹ ಆಳಲು ಅಸಮರ್ಥ ಎಂಬ ನೆಲೆಯಲ್ಲಿ, ಲಾರ್ಡ್ ಡಾಲ್ ಹೌಸಿಯು ಅವಧ್ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿದ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಲಖನೌದಲ್ಲಿ ಈ ಕ್ರಮದ ವಿರುದ್ಧ ವ್ಯಾಪಕ ಅತೃಪ್ತಿ ವ್ಯಕ್ತಗೊಂಡಿತ್ತು.[/fusion_toggle][fusion_toggle title=”1904: ಬಾಲ್ಟಿಮೋರ್ ನಗರದಲ್ಲಿ ಉಂಟಾದ ಬೆಂಕಿಯಲ್ಲಿ 30 ಗಂಟೆಗಳ ಅವಧಿಯಲ್ಲಿ 1500 ಕಟ್ಟಡಗಳು ಭಸ್ಮಗೊಂಡವು” open=”no”]ಬಾಲ್ಟಿಮೋರ್ ನಗರದಲ್ಲಿ ಉಂಟಾದ ಬೆಂಕಿಯು 30 ಗಂಟೆಗಳ ಕಾಲ ಹತೋಟಿಗೆ ಸಿಗದೆ 1500 ಕಟ್ಟಡಗಳು ಭಸ್ಮಗೊಂಡವು[/fusion_toggle][fusion_toggle title=”1940: ವಾಲ್ಟ್ ಡಿಸ್ನಿಯ ಎರಡನೇ ಪೂರ್ಣ ಪ್ರಮಾಣದ ಅನಿಮೇಟೆಡ್ ಚಿತ್ರವಾದ ‘ಪಿನೋಕ್ಹಿಯೋ ‘ ಪ್ರದರ್ಶನ” open=”no”]ವಾಲ್ಟ್ ಡಿಸ್ನಿಯ ಎರಡನೇ ಪೂರ್ಣ ಪ್ರಮಾಣದ ಅನಿಮೇಟೆಡ್ ಚಿತ್ರವಾದ ‘ಪಿನೋಕ್ಹಿಯೋ ‘ ತನ್ನ ಪ್ರಾರಂಭಿಕ ಪ್ರದರ್ಶನ ನೀಡಿತು.[/fusion_toggle][fusion_toggle title=”1979: ಪ್ಲೂಟೋವು ನೆಫ್ಚೂನಿಯ ಕಕ್ಷೆಯೊಳಗೆ ಪ್ರವೇಶಿಸಿದ್ದನ್ನು ಪ್ರಥಮವಾಗಿ ಗುರುತಿಸಲಾಯಿತು.” open=”no”]ಪ್ಲೂಟೋ ಮತ್ತು ನೆಫ್ಚೂನ್ಗಳ ಗುರುತು ಸಿಕ್ಕ ನಂತರದಲ್ಲಿ ಪ್ರಥಮ ಬಾರಿಗೆ ಪ್ಲೂಟೋವು ನೆಫ್ಚೂನ್ ಕಕ್ಷೆಯೊಳಗೆ ಪ್ರವೇಶಿಸಿದ್ದನ್ನು ಗುರುತಿಸಲಾಯಿತು.[/fusion_toggle][fusion_toggle title=”1984: ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಚಲಿಸಿದ ಬ್ರೂಸ್ ಮೆಕ್’ಕ್ಯಾಂಡಲೆಸ್ ಮತ್ತು ರಾಬರ್ಟ್ ಎಲ್ ಸ್ಟೆವಾರ್ಟ್” open=”no”]ನಾಸಾದ ಬ್ರೂಸ್ ಮೆಕ್’ಕ್ಯಾಂಡಲೆಸ್ ಮತ್ತು ರಾಬರ್ಟ್ ಎಲ್ ಸ್ಟೆವಾರ್ಟ್ ಅವರುಗಳು ಮ್ಯಾನಡ್ ಮ್ಯಾನೋವರಿಂಗ್ ಯೂನಿಟ್ (MMU) ಉಪಯೋಗಿಸಿ ಬಾಹ್ಯಾಕಾಶದಲ್ಲಿ ಬಂಧಮುಕ್ತ ಚಲನೆ ಮಾಡಿದ ಮೊದಲಿಗರೆನಿಸಿದರು.[/fusion_toggle][fusion_toggle title=”1990: ಸೋವಿಯತ್ ಒಕ್ಕೂಟದ ವಿಭಜನೆ” open=”no”]ಸೋವಿಯತ್ ಕಮ್ಮ್ಯೂನಿಸ್ಟ್ ಪಕ್ಷವು ತನ್ನ ಏಕಸ್ವಾಮ್ಯ ಅಧಿಕಾರವನ್ನು ಬಿಟ್ಟುಕೊಡಲು ನಿರ್ಧರಿಸಿತು. ಇದರಿಂದ ಸೋವಿಯತ್ ಒಕ್ಕೂಟವು ವಿಭಜನೆಗೊಂಡಿತು.[/fusion_toggle][fusion_toggle title=”1992: ಭಾರತದ ಮೊತ್ತ ಮೊದಲ ಜಲಾಂತರ್ಗಾಮಿ ‘ಐ ಎನ್ ಎಸ್ ಶಲ್ಕಿ’ ” open=”no”]‘ಐ ಎನ್ ಎಸ್ ಶಲ್ಕಿ’ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಮೊದಲ ಜಲಾಂತರ್ಗಾಮಿ ಎನಿಸಿತು.[/fusion_toggle][fusion_toggle title=”1995: ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ಸಂಚುಗಾರ ರಮ್ಜಿ ಯೂಸುಫ್ ಬಂಧನ” open=”no”]1993ರ ವರ್ಷದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಬಾಂಬ್ ದಾಳಿಯ ಸಂಚುಗಾರ ರಮ್ಜಿ ಯೂಸುಫ್ ಅನ್ನು ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಬಂಧಿಸಲಾಯಿತು.[/fusion_toggle][fusion_toggle title=”1997: ‘ಆಪಲ್ ಕಂಪ್ಯೂಟರ್’ ಸಂಸ್ಥೆಯೊಳಗೊಂದಾದ ‘ನೆಕ್ಸ್ಟ್’” open=”no”]‘ನೆಕ್ಸ್ಟ್’ ಸಂಸ್ಥೆ ‘ಆಪಲ್ ಕಂಪ್ಯೂಟರ್’ ಸಂಸ್ಥೆಯೊಂದಿಗೆ ವಿಲೀನಗೊಂಡಿತು. ಇದು ‘ಮ್ಯಾಕ್ ಓಎಸ್ ಎಕ್ಸ್’ (Mac OS X) ಕಂಪ್ಯೂಟರ್ ಚಾಲನಾ ವ್ಯವಸ್ಥೆಗೆ ಹಾದಿ ಮಾಡಿಕೊಟ್ಟಿತು.[/fusion_toggle][fusion_toggle title=”1999: ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದು ಇನ್ನಿಂಗ್ಸಿನ ಎಲ್ಲಾ ಹತ್ತು ವಿಕೆಟ್ ಉರುಳಿಸಿದ ಅನಿಲ್ ಕುಂಬ್ಳೆ ” open=”no”]ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸಿನ ಎಲ್ಲಾ 10 ವಿಕೆಟುಗಳನ್ನೂ ಗಳಿಸಿ, ಹಿಂದೆ ಜಿಮ್ ಲೇಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು.[/fusion_toggle][fusion_toggle title=”2007: ತಮ್ಮ ಕುಟುಂಬದ ಭೂಮಿಯನ್ನು ಬಡಬಗ್ಗರಿಗೆ ಹಂಚಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ” open=”no”]ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದಲ್ಲಿದ್ದ 310 ಎಕರೆ ಭೂಮಿಯನ್ನು ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಬಡವರಿಗೆ ಹಂಚುವ ಮೂಲಕ ವಿನೂತನ ಜನಪರ ದಾಖಲೆ ಸೃಷ್ಟಿಸಿದರು. ಕಡಪಾ ಜಿಲ್ಲೆಯ ಚಿನ್ನರಾಯ ಸಮುದ್ರಂ ರೆಡ್ಡಿವಾರ ಪಲ್ಲಿ ಮತ್ತು ತಿರನಂಪಲ್ಲಿ ಎಂಬ ಪುಟ್ಟ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ವಂತ ಜಮೀನನ್ನು 108 ಕುಟುಂಬಗಳಿಗೆ ಹಂಚಿದರು.[/fusion_toggle][fusion_toggle title=”2008: ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರಿನ ವಿಜ್ಞಾನಿ ಶಂತನು ಭಟ್ಟಾಚಾರ್ಯ” open=”no”]ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಶಂತನು ಭಟ್ಟಾಚಾರ್ಯ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.[/fusion_toggle][fusion_toggle title=”2009: ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಚೆಕ್ ನೀಡಿದರೆ ಶಿಕ್ಷಾರ್ಹ ಅಪರಾಧ ” open=”no”]ಬ್ಯಾಂಕ್ ಖಾತೆಯಲ್ಲಿ ಅಗತ್ಯದಷ್ಟು ಹಣವಿಲ್ಲ ಎಂಬುದು ಗೊತ್ತಿದ್ದೂ ಬೇರೆಯವರಿಗೆ ಚೆಕ್ ನೀಡಿದ್ದರೆ ಅದು ‘ವಂಚನೆ’ಯಾಗುತ್ತದೆ ಎಂದು ದೆಹಲಿಯ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ತೀರ್ಪು ನೀಡಿತು.[/fusion_toggle][fusion_toggle title=”2009: ಮಾಜಿ ಕ್ರಿಕೆಟ್ ಆಟಗಾರ ಜಿ. ಆರ್. ವಿಶ್ವನಾಥ್ ಅವರಿಗೆ ‘ಸಿ.ಕೆ. ನಾಯ್ಡು ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ'” open=”no”]ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರನ್ನು 2007-08ರ ಸಾಲಿನ ‘ಸಿ.ಕೆ. ನಾಯ್ಡು ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಇದೇ ಸಾಲಿನ ‘ಪಾಲಿ ಉಮ್ರಿಗರ್’ ಪ್ರಶಸ್ತಿಗೆ ಆಯ್ಕೆಯಾದರು.[/fusion_toggle][fusion_toggle title=”2009: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಪೊದೆಬೆಂಕಿಯಲ್ಲಿ 173 ಸಾವು” open=”no”]ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಹವಾಮಾನದ ವೈಪರೀತ್ಯದಿಂದ ಪೊದೆಗಳಲ್ಲಿ ಹತ್ತಿಕೊಂಡ ಕಿಚ್ಚಿನಿಂದಾಗಿ 173 ಜನ ಬೆಂಕಿಯಲ್ಲಿ ಬೆಂದುಹೋದರು.[/fusion_toggle][fusion_toggle title=”2009: ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾರೋಪ” open=”no”]ಚಿತ್ರದುರ್ಗದಲ್ಲಿ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಿದ ನಾಲ್ಕು ದಿನಗಳ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.[/fusion_toggle][fusion_toggle title=”2016: ಉತ್ತರ ಕೊರಿಯಾದಿಂದ ‘ಕ್ವಾಂಗ್ಮಿಯೊಂಗ್ ಸಾಂಗ್’ ಬಾಹ್ಯಾಕಾಶ ಉಪಗ್ರಹ ಉಡಾವಣೆ” open=”no”]ಉತ್ತರ ಕೊರಿಯಾವು ‘ಕ್ವಾಂಗ್ಮಿಯೊಂಗ್ ಸಾಂಗ್’ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1804: ಅಮೆರಿಕದ ಕಮ್ಮಾರ, ವ್ಯಾಪಾರಿ ಮತ್ತು ಡೀರೆ ಅಂಡ್ ಕಂಪೆನಿ ಸ್ಥಾಪಕ ಜಾನ್ ಡೀರೆ ಜನನ” open=”no”]ಅಮೆರಿಕದ ಕಮ್ಮಾರ ಮತ್ತು ವ್ಯಾಪಾರಿ ಜಾನ್ ಡೀರೆ ಅವರು ವೆರ್ಮಾಂಟ್ ಬಳಿಯ ರುಟ್ ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು ಸ್ಥಾಪಿಸಿದ ‘ಡೀರೆ ಅಂಡ್ ಕಂಪೆನಿ’ ವಿಶ್ವದ ಪ್ರಮುಖ ಮತ್ತು ಅತಿ ದೊಡ್ಡ ವ್ಯವಸಾಯ ಮತ್ತು ನಿರ್ಮಾಣ ಯಂತ್ರಗಳ ತಯಾರಿಕಾ ಸಂಸ್ಥೆಗಳಲ್ಲೊಂದಾಗಿದೆ.[/fusion_toggle][fusion_toggle title=”1842: ಮಹಾನ್ ಕತೆಗಾರ ಚಾರ್ಲ್ಸ್ ಡಿಕನ್ಸ್ ಜನನ” open=”no”]ಮಹಾನ್ ಕತೆಗಾರ ಮತ್ತು ಸಾಮಾಜಿಕ ವಿಮರ್ಶಕ ಚಾರ್ಲ್ಸ್ ಡಿಕನ್ಸ್ ಇಂಗ್ಲೆಂಡಿನ ಹ್ಯಾಂಪ್ ಶೈರ್ ಬಳಿಯ ಲ್ಯಾಂಡ್ ಪೋರ್ಟ್ ಎಂಬಲ್ಲಿ ಜನಿಸಿದರು. ವಿಕ್ಟೋರಿಯನ್ ಯುಗದ ಮಹತ್ವದ ಕತೆಗಾರರೆಂದು ಇವರು ಪ್ರಸಿದ್ಧಿ ಪಡೆದಿದ್ದಾರೆ. ದಿ ಪಿಕ್ವಿಕ್ ಪೇಪರ್ಸ್, ಆಲಿವರ್ ಟ್ವಿಸ್ಟ್, ಡೇವಿಡ್ ಕಾಪರ್ ಫೀಲ್ಡ್, ಎ ಟೇಲ್ ಆಫ್ ಟೂ ಸಿಟೀಸ್, ಗ್ರೇಟ್ ಎಕ್ಸ್ಪೆಕ್ಟೇಶನ್ಸ್ ಮುಂತಾದವು ಇವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.[/fusion_toggle][fusion_toggle title=”1885: ನೊಬೆಲ್ ಪುರಸ್ಕೃತ ಸಾಹಿತಿ ಸಿನ್ಕ್ಲೇರ್ ಲೂಯಿಸ್ ಜನನ” open=”no”]ಅಮೇರಿಕಾದ ನೊಬೆಲ್ ಸಾಹಿತ್ಯ ಪುರಸ್ಕೃತ ಸಾಹಿತಿ ಸಿನ್ಕ್ಲೇರ್ ಲೂಯಿಸ್ ಮಿನೆಸೋಟ ಬಳಿಯ ಸೌಕ್ ಸೆಂಟರ್ ಎಂಬಲ್ಲಿ ಜನಿಸಿದರು. ಇವರು ನೊಬೆಲ್ ಸಾಹಿತ್ಯ ಪುರಸ್ಕಾರ ಗಳಿಸಿದ ಪ್ರಥಮ ಅಮೆರಿಕ ನಿವಾಸಿಯಾಗಿದ್ದಾರೆ.[/fusion_toggle][fusion_toggle title=”1903: ನೊಬೆಲ್ ಪುರಸ್ಕೃತ ವೈದ್ಯ ಶಾಸ್ತ್ರಜ್ಞ ಉಲ್ಫ್ ವಾನ್ ಯೂಲರ್ ಜನನ” open=”no”]ಸ್ವೀಡಿಶ್ ವೈದ್ಯ ಶಾಸ್ತ್ರಜ್ಞ ಉಲ್ಫ್ ವಾನ್ ಯೂಲರ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ‘ನ್ಯೂರೋಟ್ರಾನ್ಸ್ಮೀಟರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1970 ವರ್ಷದ ನೊಬೆಲ್ ಪುರಸ್ಕಾರ ಸಂದಿತು.[/fusion_toggle][fusion_toggle title=”1908: ಭಾರತೀಯ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರ, ಬರಹಗಾರ ಮತ್ತು ಪತ್ರಕರ್ತ ಮನ್ಮಥ ನಾಥ ಗುಪ್ತ ಜನನ” open=”no”]ಭಾರತೀಯ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರ, ಬರಹಗಾರ ಮತ್ತು ಪತ್ರಕರ್ತ ಮನ್ಮಥ ನಾಥ ಗುಪ್ತ ಬನಾರಸ್ಸಿನಲ್ಲಿ ಜನಿಸಿದರು. ಕೇವಲ ಹದಿಮೂರನೆಯ ವಯಸ್ಸಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಇವರು ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾಗಿದ್ದರು. 1925ರ ವರ್ಷದಲ್ಲಿ ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಇವರು 14 ವರ್ಷಗಳ ಕಠಿಣ ಜೈಲುವಾಸ ಅನುಭವಿಸಿದರು. ಜೈಲಿನಿಂದ ಹೊರಬಂದ ಮೇಲೆ ಬ್ರಿಟಿಷರ ವಿರುದ್ಧ ಬರೆಯುತ್ತಿದ್ದ ಇವರನ್ನು 1939ರಿಂದ 1946ರ ವರೆಗೆ ಪುನಃ ಬಂಧನದಲ್ಲಿರಿಸಲಾಗಿತ್ತು. 2000ದ ವರ್ಷದಲ್ಲಿ ನಿಧನರಾದ ಇವರು ಕ್ರಾಂತಿಕಾರಿಯ ದೃಷ್ಟಿಯಲ್ಲಿನ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರಲ್ಲದೆ, ಆಜ್ ಕಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.[/fusion_toggle][fusion_toggle title=”1926: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನನ” open=”no”]ರಾಷ್ಟ್ರಕವಿ ಗೌರವಾನ್ವಿತರಾದ ಡಾ. ಜಿ.ಎಸ್. ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಸಾಹಿತ್ಯ ಸೃಜನೆ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು. ವಿಮರ್ಶೆ, ಮೀಮಾಂಸೆ, ಪ್ರವಾಸ ಕಥನ, ವ್ಯಕ್ತಿಚಿತ್ರಣ, ಆತ್ಮಚರಿತ್ರೆಗಳನ್ನೂ ಬರೆದಿದ್ದಾರೆ. ರಾಷ್ಟ್ರಕವಿ ಗೌರವವಲ್ಲದೆ, ರಾಜ್ಯ ಮತ್ತು ಕೇಂದ್ರ ಅಕಾಡೆಮಿ ಗೌರವ, ಹಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.[/fusion_toggle][fusion_toggle title=”1946: ಕವಿ ದೊಡ್ದರಂಗೇಗೌಡ ಜನನ” open=”no”]ಕವಿ, ಪ್ರಾಧ್ಯಾಪಕ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಡಾ. ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು. ಅನೇಕ ಕಾವ್ಯ ಸಂಕಲನಗಲ್ಲದೆ, ಸಂಶೋಧನಾ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಧಾನ ಪರಿಷತ್ ಸದಸ್ಯತ್ವ ಗೌರವ, ಚಲನಚಿತ್ರ ಗೀತ ಸಾಹಿತ್ಯಕ್ಕಾಗಿನ ಪ್ರಶಸ್ತಿಗಳು ಹೀಗೆ ಅನೇಕ ಗೌರವಗಳು ಅವರಿಗೆ ಸಂದಿವೆ.[/fusion_toggle][fusion_toggle title=”1964: ಪ್ರಸಿದ್ಧ ಪತ್ರಕರ್ತ, ಬರಹಗಾರ, ಚಲನಚಿತ್ರ ಮತ್ತು ಕಿರುತೆರೆ ಕಥೆಗಾರ ಅಶೋಕ್ ಬ್ಯಾಂಕರ್ ಜನನ” open=”no”]ಪ್ರಸಿದ್ಧ ಪತ್ರಕರ್ತ, ಬರಹಗಾರ, ಚಲನಚಿತ್ರ ಮತ್ತು ಕಿರುತೆರೆ ಕಥೆಗಾರ ಅಶೋಕ್ ಬ್ಯಾಂಕರ್ ಮುಂಬೈನಲ್ಲಿ ಜನಿಸಿದರು.[/fusion_toggle][fusion_toggle title=”1979: ಯೆಮನ್ ದೇಶದ ನೊಬೆಲ್ ಪುರಸ್ಕೃತ ಹೋರಾಟಗಾರ್ತಿ ತವಕ್ಕೊಲ್ ಕರ್ಮಾನ್ ಜನನ” open=”no”]ಯೆಮನ್ ದೇಶದ ಪತ್ರಕರ್ತೆ, ರಾಜಕಾರಣಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತವಕ್ಕೊಲ್ ಕರ್ಮಾನ್ ಜನಿಸಿದರು. ‘ವುಮೆನ್ ಜರ್ನಲಿಸ್ಟ್ಸ್ ವಿತೌಟ್ ಚೈನ್ಸ್’ ಎಂಬ ಸಂಘಟನೆಯ ನೇತೃತ್ವ ವಹಿಸಿರುವ ಅವರಿಗೆ 2011ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1937: ನೊಬೆಲ್ ಪುರಸ್ಕೃತ ಅಮೆರಿಕದ ನ್ಯಾಯವಾದಿ ಮತ್ತು ರಾಜಕಾರಣಿ ಎಲಿಹು ರೂಟ್ ನಿಧನ” open=”no”]ನೊಬೆಲ್ ಪುರಸ್ಕೃತ ಅಮೆರಿಕದ ನ್ಯಾಯವಾದಿ ಮತ್ತು ರಾಜಕಾರಣಿ ಎಲಿಹು ರೂಟ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ಅವರಿಗೆ 1912ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1938: ಫೈರ್ ಸ್ಟೋನ್ ಟೈರ್ ಮತ್ತು ರಬ್ಬರ ಕಂಪೆನಿಯ ಸ್ಥಾಪಕರಾದ ಹಾರ್ವೆ ಸಾಮ್ಯುಯಲ್ ನಿಧನ” open=”no”]ಫೈರ್ ಸ್ಟೋನ್ ಟೈರ್ ಮತ್ತು ರಬ್ಬರ ಕಂಪೆನಿಯ ಸ್ಥಾಪಕರಾದ ಹಾರ್ವೆ ಸಾಮ್ಯುಯಲ್ ಅವರು ಅಮೆರಿಕದ ಫ್ಲೋರಿಡಾ ನಗರದಲ್ಲಿ ನಿಧನರಾದರು.[/fusion_toggle][/fusion_accordion]

Categories
e-ದಿನ

ಫೆಬ್ರುವರಿ-06

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1597: ಜಪಾನಿನ ಸರ್ಕಾರವು ಪ್ರಾರಂಭಿಕವಾಗಿ ಕಂಡ ಕೆಲವು ಕ್ರೈಸ್ತಮತೀಯ ಗುಂಪನ್ನು ತನ್ನ ಸಮಾಜಕ್ಕೆ ಅಪಾಯಕಾರಿಯೆಂದು ಕೊಂದು ಹಾಕಿತು. ” open=”no”]ಜಪಾನಿನ ಸರ್ಕಾರವು ಪ್ರಾರಂಭಿಕವಾಗಿ ಕಂಡ ಕೆಲವು ಕ್ರಿಶ್ಚಿಯನ್ ಗುಂಪನ್ನು ತನ್ನ ಸಮಾಜಕ್ಕೆ ಮಾರಕವೆಂದು ಕೊಂದು ಹಾಕಿತು.[/fusion_toggle][fusion_toggle title=”1762: ಅಹಮದ್ ಶಹಾ ಅಬ್ದಾಲಿಯಿಂದ ಸಿಖ್ಖರ ಮಾರಣಹೋಮ” open=”no”]ಅಹಮದ್ ಶಹಾ ಅಬ್ದಾಲಿ ಲೂಧಿಯಾನ ಸಮೀಪದ ಕುಪ್ನಲ್ಲಿ ನಡೆದ ಸಮರದಲ್ಲಿ ಸಿಖ್ಖರ ಮಾರಣಹೋಮ ನಡೆಸಿದ. ಸಿಖ್ಖರು ಆತನ ಸಾರ್ವಭೌಮತ್ವ ಅಂಗೀಕರಿಸಲು ನಿರಾಕರಿಸಿದ್ದಕ್ಕಾಗಿ ಸುಮಾರು 10,000ದಿಂದ 30,000ದಷ್ಟು ಸಿಖ್ಖರನ್ನು ಕೊಲೆಗೈಯಲಾಯಿತು. ಅದೇ ವರ್ಷ ಏಪ್ರಿಲಿನಲ್ಲಿ ಅಬ್ದಾಲಿ ಅಮೃತಸರದ ಮೇಲೆ ದಾಳಿ ನಡೆಸಿ ಹರ್ಮಂದಿರವನ್ನು ನೆಲಸಮಗೊಳಿಸಿದ.[/fusion_toggle][fusion_toggle title=”1840: ಜಾನ್ ಬಾಯ್ಡ್ ಡನ್ಲಪ್ ಎಂಬ ಸ್ಕಾಟಿಷ್ ವ್ಯಾಪಾರಿ ಡನ್ಲಪ್ ರಬ್ಬರ್ ಸಂಸ್ಥೆ ಸ್ಥಾಪನೆ” open=”no”]ಜಾನ್ ಬಾಯ್ಡ್ ಡನ್ಲಪ್ ಎಂಬ ಸ್ಕಾಟಿಷ್ ವ್ಯಾಪಾರಿ ಡನ್ಲಪ್ ರಬ್ಬರ್ ಸಂಸ್ಥೆಯನ್ನು ಸ್ಥಾಪಿಸಿದ[/fusion_toggle][fusion_toggle title=”1852: ರಷ್ಯಾದ ಪ್ರಸಿದ್ಧ ಹರ್ಮಿಟೇಜ್ ಮ್ಯೂಸಿಯಂ ಪ್ರಾರಂಭ” open=”no”]ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ರಷ್ಯಾದ ದೊಡ್ಡ ಮತ್ತು ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ಹರ್ಮಿಟೇಜ್ ಮ್ಯೂಸಿಯಂ ಪ್ರಾರಂಭಗೊಂಡಿತು.[/fusion_toggle][fusion_toggle title=”1869: ಆಸ್ಟ್ರೇಲಿಯಾದಲ್ಲಿ ದೊಡ್ಡ ಚಿನ್ನದ ನಿಕ್ಷೇಪವಾದ ‘ವೆಲ್ಕಂ ಸ್ಟ್ರೇಂಜರ್’ ಪತ್ತೆ” open=”no”]ಚರಿತ್ರೆಯಲ್ಲೇ ಅತಂತ್ಯ ದೊಡ್ಡ ಚಿನ್ನದ ನಿಕ್ಷೇಪವಾದ ‘ವೆಲ್ಕಂ ಸ್ಟ್ರೇಂಜರ್’, ಆಸ್ಟ್ರೇಲಿಯಾದ ವಿಕ್ಟೋರಿಯಾ ಬಳಿಯ ಮೊಲಿಯಾಗುಲ್ ಎಂಬಲ್ಲಿ ಪತ್ತೆಯಾಯಿತು.[/fusion_toggle][fusion_toggle title=”1909: ಬೆಲ್ಜಿಯನ್ ರಸಾಯನ ಶಾಸ್ತ್ರಜ್ಞ ಲಿಯೋ ಬೇಕಲ್ಯಾಂಡ್ ಅವರಿಂದ ಪ್ರಪಂಚದ ಪ್ರಥಮ ಕೃತಕ ಪ್ಲಾಸ್ಟಿಕ್ ‘ಬ್ಯಾಕಲೈಟ್’ ತಯಾರಿಸಿದ ಘೋಷಣೆ” open=”no”]ಬೆಲ್ಜಿಯನ್ ರಸಾಯನ ಶಾಸ್ತ್ರಜ್ಞ ಲಿಯೋ ಬೇಕಲ್ಯಾಂಡ್ ಅವರು ಪ್ರಪಂಚದ ಪ್ರಥಮ ಕೃತಕ ಪ್ಲಾಸ್ಟಿಕ್ ಆದ ‘ಬ್ಯಾಕಲೈಟ್’ ಅನ್ನು ತಯಾರಿಸಿರುವುದಾಗಿ ಘೋಷಿಸಿದರು.[/fusion_toggle][fusion_toggle title=”1913: ಗ್ರೀಕ್ ಹಾರಾಟಗಾರರಿಂದ ಚರಿತ್ರೆಯ ಪ್ರಥಮ ನೌಕಾ ವಾಯು ಪ್ರದರ್ಶನ ” open=”no”]ಗ್ರೀಕ್ ವಾಯುಪಡೆಯ ವಿಮಾನ ಹಾರಾಟಗಾರರಾದ ಮೈಖೇಲ್ ಮೌಟೌಸಿಸ್ ಮತ್ತು ಏರೀಸ್ಟೀಡೀಸ್ ಮೊರೈಟಿನಿಸ್ ಅವರು ಚರಿತ್ರೆಯಲ್ಲಿ ಪ್ರಥಮ ನೌಖಾ ವಾಯು ಪ್ರದರ್ಶನವನ್ನು ‘ಫಾರ್ಮಾನ್ ಎಂ.ಎಫ್.7’ ಹೈಡ್ರೋಪ್ಲೇನ್ ಮೂಲಕ ನೀಡಿದರು.[/fusion_toggle][fusion_toggle title=”1918: ಅಮೆರಿಕದ ವಾಯುಪಡೆಯ ಪ್ರಥಮ ವಿಜಯ” open=”no”]ಸ್ಟೀಫನ್ ಡಬ್ಲ್ಯೂ ಥಾಮ್ಸನ್ ಅವರು ಜರ್ಮನಿಯ ವಿಮಾನವನ್ನು ಹೊಡೆದುರುಳಿಸಿದರು.  ಇದು ಅಮೆರಿಕದ ವಾಯುಸೇನಾ ಚರಿತ್ರೆಯಲ್ಲಿನ ಮೊದಲ ವಿಜಯವಾಗಿದೆ. [/fusion_toggle][fusion_toggle title=”1919: ಚಾರ್ಲಿ ಚಾಪ್ಲಿನ್ ಮತ್ತು ಸಂಗಡಿಗರಿಂದ ಯುನೈಟೆಡ್ ಆರ್ಟಿಸ್ಟ್ಸ್ ಸ್ಥಾಪನೆ” open=”no”]ಚಾರ್ಲಿ ಚಾಪ್ಲಿನ್, ಮೇರಿ ಪಿಕ್ಫೋರ್ಡ್, ಡೌಗ್ಲಾಸ್ ಫೇರ್ಬ್ಯಾಂಕ್ಸ್ ಮತ್ತು ಡಿ. ಡಬ್ಲೂ. ಗ್ರಿಫಿತ್ ಅವರುಗಳು ಯುನೈಟೆಡ್ ಆರ್ಟಿಸ್ಟ್ಸ್ ಸ್ಥಾಪಿಸಿದರು.[/fusion_toggle][fusion_toggle title=”1922: ಖಿಲಾಫತ್ ಚಳವಳಿ ಮತ್ತು ಪೊಲೀಸ್ ಠಾಣೆಗೆ ಬೆಂಕಿ” open=”no”]ಖಿಲಾಫತ್ ಚಳುವಳಿ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಮಂದಿ ಪೊಲೀಸರನ್ನು ಸುಟ್ಟು ಹಾಕಿದರು. ಈ ಹಿಂಸೆಯಿಂದ ಮನನೊಂದ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.[/fusion_toggle][fusion_toggle title=”1922: ‘ರೀಡರ್ಸ್ ಡೈಜೆಸ್ಟ್’ ಪ್ರಕಟಣೆ ಆರಂಭ” open=”no”]ಡೆ ವಿಟ್ ವ್ಯಾಲೇಸ್ ಅವರು ಜನರಿಗೆ ಮನರಂಜನೆ, ಮಾಹಿತಿ ಹಾಗೂ ಸ್ಫೂರ್ತಿ ನೀಡಲು ‘ರೀಡರ್ಸ್ ಡೈಜೆಸ್ಟ್’ ಆರಂಭಿಸಿದರು.[/fusion_toggle][fusion_toggle title=”1924: ದಿ ರಾಯಲ್ ಗ್ರೀನ್ವಿಚ್ ವೀಕ್ಷಣಾಲಯದಿಂದ ಗ್ರೀನ್ವಿಚ್ ಟೈಮ್ ಸಿಗ್ನಲ್ ಪ್ರಸಾರ ಆರಂಭ” open=”no”]ದಿ ರಾಯಲ್ ಗ್ರೀನ್ವಿಚ್ ವೀಕ್ಷಣಾಲಯವು ಗಂಟೆಗೊಮ್ಮೆ ಗ್ರೀನ್ವಿಚ್ ಟೈಮ್ ಸಿಗ್ನಲ್ ಎಂದು ಕರೆಯುವ ಸಮಯ ಸಂಜ್ಞೆಗಳ ಪ್ರಸಾರವನ್ನು ಆರಂಭಿಸಿತು.[/fusion_toggle][fusion_toggle title=”1937: ಚಾರ್ಲಿ ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ `ಮಾಡರ್ನ್ ಟೈಮ್ಸ್’ ಬಿಡುಗಡೆ” open=”no”]ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ ‘ಮಾಡರ್ನ್ ಟೈಮ್ಸ್’ ಬಿಡುಗಡೆಗೊಂಡಿತು.[/fusion_toggle][fusion_toggle title=”1971: ಚಂದ್ರನನ್ನು ತಲುಪಿದ ‘ಅಪೋಲೋ 14’ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ” open=”no”]‘ಅಪೋಲೋ 14’ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ಚಂದ್ರನನ್ನು ತಲುಪಿದರು.[/fusion_toggle][fusion_toggle title=”1991: ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಲೀಲಾಸೇಥ್” open=”no”]ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಲೀಲಾ ಸೇಥ್ ಅವರು ದೇಶದ ಪ್ರಥಮ ಮಹಿಳಾ ನ್ಯಾಯಾಧೀಶರೆಂಬ ಕೀರ್ತಿಗೆ ಪಾತ್ರರಾದರು.[/fusion_toggle][fusion_toggle title=”1997: ಸ್ವಿಟ್ಜರ್ಲ್ಯಾಂಡಿನ ಬ್ಯಾಂಕುಗಳಿಂದ ಹೋಲೋಕಾಸ್ಟ್ ಸಂತ್ರಸ್ತರ ಅಭ್ಯುದಯಕ್ಕಾಗಿ 7.1 ಮಿಲಿಯನ್ ಡಾಲರ್ ನಿಧಿ ಸ್ಥಾಪನೆ ” open=”no”]ಸ್ವಿಟ್ಜರ್ಲ್ಯಾಂಡಿನ್ ಮೂರು ದೊಡ್ಡ ಬ್ಯಾಂಕುಗಳು ಒಂದಾಗಿ ಹೋಲೋಕಾಸ್ಟ್ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಬೆಂಬಲಕ್ಕಾಗಿ 7.1 ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿದವು.[/fusion_toggle][fusion_toggle title=”2007: ಸುನೀತಾ ವಿಲಿಯಮ್ಸ್ ಅವರಿಂದ ದಾಖಲೆಯ ಬಾಹ್ಯಾಕಾಶ ನಡಿಗೆ” open=”no”]ಭಾರತೀಯ ಮೂಲಸಂಜಾತೆ ಮತ್ತು ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಒಟ್ಟು 22 ಗಂಟೆ 27 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ದಾಖಲೆ ನಿರ್ಮಿಸಿದರು. ಈವರೆಗೆ ಈ ದಾಖಲೆ ಕ್ಯಾಥಿ ಥೋರ್ನ್ ಟನ್ ಅವರ ಹೆಸರಿನಲ್ಲಿತ್ತು.[/fusion_toggle][fusion_toggle title=”2007: ಪೆಪ್ಸಿಕೋ ಅಧ್ಯಕ್ಷೆಯಾದ ಭಾರತದ ಇಂದ್ರಾ ಕೆ ನೂಯಿ” open=”no”]ಭಾರತದ ಇಂದ್ರಾ ಕೆ ನೂಯಿ ಅವರು ಆಹಾರ ಮತ್ತು ತಂಪು ಪಾನೀಯಗಳ ಬೃಹತ್ ಬಹುರಾಷ್ಟ್ರೀಯ ಸಂಸ್ಥೆಯಾದ ಪೆಪ್ಸಿಕೋದ ಅಧ್ಯಕ್ಷೆಯಾಗಿ ಆಯ್ಕೆಯಾದರು.[/fusion_toggle][fusion_toggle title=”2009: ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರಿಂದ ಅತಿ ಹೆಚ್ಚು ಏಕದಿನ ಪಂದ್ಯಗಳ ವಿಕೆಟ್ ದಾಖಲೆ ” open=”no”]ಮಾಂತ್ರಿಕ ಸ್ಪಿನ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಪಾಕಿಸ್ಥಾನದ ಮಾಜಿ ವೇಗದ ಬೌಲರ್ ವಾಸೀಮ್ ಅಕ್ರಮ್ ಅವರ 502 ವಿಕೆಟ್ ವಿಶ್ವದಾಖಲೆಯನ್ನು ಮುರಿದರು.[/fusion_toggle][fusion_toggle title=”2009: ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಸಲ್ಲುವ ‘ಸ್ವರ್ಣ ಕಮಲ’ ಪ್ರಶಸ್ತಿ ” open=”no”]‘ಕೇರ್ ಆಫ್ ಫುಟ್ಪಾತ್’ ಮಕ್ಕಳ ಚಿತ್ರಕ್ಕಾಗಿ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ ಅವರಿಗೆ ಸಂದ ಮಕ್ಕಳ ಚಿತ್ರಕ್ಕಾಗಿನ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಿದರು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1916: ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ ಮತ್ತು ಸಾಹಿತಿ ಬಿ.ಜಿ.ಎಲ್. ಸ್ವಾಮಿ ಜನನ” open=”no”]ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ, ಸಂಶೋಧಕ, ಶಿಕ್ಷಕ, ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರ ಡಾ. ಬಿ.ಜಿ. ಎಲ್ ಸ್ವಾಮಿ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಹಸುರು ಹೊನ್ನು’ ಕೃತಿಗಾಗಿ ಅವರಿಗೆ 1978ರ ವರ್ಷದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು. 1980ರ ವರ್ಷದಲ್ಲಿ ನಿಧನರಾದ ಇವರು ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.[/fusion_toggle][fusion_toggle title=”1930: ಚಂದ್ರನ ಮೇಲೆ ಮೊದಲು ಪದಾರ್ಪಣ ಮಾಡಿದ ನೀಲ್ ಆರ್ಮ್ ಸ್ಟ್ರಾಂಗ್ ಜನನ” open=”no”]ಚಂದ್ರನ ಮೇಲೆ ಮೊದಲು ಪದಾರ್ಪಣ ಮಾಡಿದ ಮಾನವರಾದ ನೀಲ್ ಆರ್ಮ್ ಸ್ಟ್ರಾಂಗ್ ಅಮೆರಿಕದ ಓಹಿಯೋದಲ್ಲಿ ಜನಿಸಿದರು.[/fusion_toggle][fusion_toggle title=”1931: ಖ್ಯಾತ ಪ್ರಾಧ್ಯಾಪಕ ಮತ್ತು ಸಾಹಿತಿ ಹಾ.ಮಾ. ನಾಯಕ್ ಜನನ” open=”no”]ಹಾರೋಗದ್ದೆ ಮಾನಪ್ಪ ನಾಯಕ್ ಅವರು ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರಾಧ್ಯಾಪನ ಮತ್ತು ವಿದ್ವತ್ಪೂರ್ಣ ಬರಹಗಳಿಗೆ ಹೆಸರಾಗಿದ್ದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಸಂದಿದ್ದವು. 2010, ನವೆಂಬರ್ 10ರಂದು ನಿಧನರಾದರು.[/fusion_toggle][fusion_toggle title=”1936: ಕವಿ ಡಾ. ಕೆ. ಎಸ್. ನಿಸಾರ್ ಅಹಮದ್ ಜನನ” open=”no”]‘ನಿತ್ಯೋತ್ಸವದ ಕವಿ’ ಎಂದೇ ಜನಮನದಲ್ಲಿ ಪ್ರಖ್ಯಾತರಾಗಿರುವ ಡಾ. ಕೆ.ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಕವಿಯಾಗಿ ನಿಸಾರರು ‘ಮನಸ್ಸು ಗಾಂಧಿಬಜಾರು’, ‘ನಿತ್ಯೋತ್ಸವ’, ‘ನೆನೆದವರ ಮನದಲ್ಲಿ’, ‘ನಾನೆಂಬ ಪರಕೀಯ’, ‘ಅನಾಮಿಕ ಆಂಗ್ಲರು’, ‘ಸುಮಹೂರ್ತ’, ‘ಸಂಜೆ ಐದರ ಮಳೆ’, ‘ಸ್ವಯಂ ಸೇವೆಯ ಗಿಳಿಗಳು’ ಮುಂತಾದ ಕವನ ಸಂಕಲನಗಳಲ್ಲದೆ ಅನೇಕ ಗದ್ಯ ಕೃತಿಗಳನ್ನೂ, ಬಾಷಾಂತರಗಳನ್ನೂ ಮಾಡಿದ್ದಾರೆ. ಪದ್ಮಶ್ರೀ, ಪಂಪ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೆಳನಾಧ್ಯಕ್ಷತೆ ಸೇರಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.[/fusion_toggle][fusion_toggle title=”1980: ಲೈವ್ ಜರ್ನಲ್ ಸೃಷ್ಟಿಕರ್ತ ಬ್ರಾಡ್ ಫಿಟ್ಜ್ ಪ್ಯಾಟ್ರಿಕ್ ಜನನ” open=”no”]ಅಮೆರಿಕದ ಪ್ರೋಗ್ರಾಮರ್, ಲೈವ್ ಜರ್ನಲ್ ಸೃಷ್ಟಿಕರ್ತ ಬ್ರಾಡ್ ಫಿಟ್ಜ್ ಪ್ಯಾಟ್ರಿಕ್, ಲೋವಾ ಎಂಬಲ್ಲಿ ಜನಿಸಿದರು. ಲೈವ್ ಜರ್ನಲ್ ಅಲ್ಲದೆ ಅನೇಕ ಉಚಿತ ಸಾಫ್ಟ್ವೇರ್ ಸೃಷ್ಟಿಸಿದ್ದಕ್ಕಾಗಿ ಇವರು ಪ್ರಸಿದ್ಧರಾಗಿದ್ದಾರೆ.[/fusion_toggle][fusion_toggle title=”1992: ಸ್ವಾತಂತ್ರ್ಯ ಹೋರಾಟಗಾರ ನಾಯಕ ಅಚ್ಯುತರಾವ್ ಪಟವರ್ಧನ್ ಜನನ” open=”no”]ಸ್ವಾತಂತ್ರ್ಯ ಹೋರಾಟಗಾರ ನಾಯಕ ಅಚ್ಯುತರಾವ್ ಪಟವರ್ಧನ್ ಅವರು ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಜನಿಸಿದರು. ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಾದ ಇವರು ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಸ್ವಾತಂತ್ರ್ಯಾನಂತರದ ತುರ್ತು ಪರಿಸ್ಥಿತಿಯ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1765: ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ” open=”no”]ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ. ತನ್ನ ಬೆಂಬಲಿಗ ವಂಚಕರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಷಾಮೀಲಾದ ಈತ 1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ನಿಷ್ಕ್ರಿಯ ನಿಲುವು ತಾಳಿದ. ಈ ಕದನದಲ್ಲಿ ಸೋತ ಸಿರಾಜುದ್ದೌಲ ಪದಚ್ಯುತನಾದ ನಂತರ ಬ್ರಿಟಿಷರು ಮೀರ್ ಜಾಫರನನ್ನೇ ಬಂಗಾಳದ ಆಡಳಿತಗಾರನನ್ನಾಗಿ ನೇಮಿಸಿದರು. ಸಾಯುವ ಕಾಲಕ್ಕೆ ಈತ ಅಫೀಮು ವ್ಯಸನಿಯೂ ಕುಷ್ಠರೋಗ ಪೀಡಿತನೂ ಆಗಿ ನರಳಿದ.[/fusion_toggle][fusion_toggle title=”1881: ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ನಿಧನ” open=”no”]ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ಲಂಡನ್ನಿನಲ್ಲಿ ನಿಧನರಾದರು. ‘ಸೇಜ್ ಆಫ್ ಚೆಲ್ಸಿಯಾ’ ಎಂದೇ ಇವರು ಖ್ಯಾತರಾಗಿದ್ದರು.[/fusion_toggle][fusion_toggle title=”1914: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ಅಲನ್ ಲಾಯ್ಡ್ ಹಾಡ್ಗ್ ಕಿನ್ ಜನನ” open=”no”]ಇಂಗ್ಲಿಷ್ ಜೀವಶಾಸ್ತ್ರಜ್ಞರಾದ ಅಲನ್ ಲಾಯ್ಡ್ ಹಾಡ್ಗ್ ಕಿನ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ಇವರಿಗೆ 1963ರ ವರ್ಷದಲ್ಲಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1915: ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ರಾಬರ್ಟ್ ಹೋಫ್ ಸ್ಟಾಡ್ಟರ್ ನಿಧನ ” open=”no”]ಅಮೆರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಹೋಫ್ ಸ್ಟಾಡ್ಟರ್ ಕ್ಯಾಲಿಫೋರ್ನಿಯಾದ ಸ್ಟಾನ್ ಫೋರ್ಡಿನಲ್ಲಿ ನಿಧನರಾದರು. ‘ಎಲೆಕ್ಟ್ರಾನ್ ಸ್ಕಾಟರಿಂಗ್ ಇನ್ ಆಟೋಮಿಕ್ ನ್ಯೂಕ್ಲಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1961ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1922: ಮೆಕಾನಿಕಲ್ ಪೆನ್ಸಿಲ್ ಸಂಶೋಧಕ ಸ್ಲಾವೋಲ್ಜುಬ್ ಎಡ್ವರ್ಡ್ ಪೆನ್ಕಲ ನಿಧನ” open=”no”]ಕ್ರೋಟ್ಸ್ ಅಂಡ್ ಸ್ಲೋವೇನಿಸ್ ದೇಶದ ಮೆಕಾನಿಕಲ್ ಸಂಶೋಧಕ ಸ್ಲಾವೋಲ್ಜುಬ್ ಎಡ್ವರ್ಡ್ ಪೆನ್ಕಲ ನಿಧನರಾದರು.[/fusion_toggle][fusion_toggle title=”1927 ಯೂನಿವರ್ಸಲ್ ಸೂಫಿಯಿಸಮ್ ಬೋಧಕ ಇನಾಯತ್ ಖಾನ್ ನಿಧನ” open=”no”]ಪಶ್ಚಿಮ ದೇಶಗಳಲ್ಲಿ ಸೂಫಿ ಪಂತವನ್ನು ಪಸರಿಸಿದ ಯೂನಿವರ್ಸಲ್ ಸೂಫಿಯಿಸಮ್ ಬೋಧಕ ಇನಾಯತ್ ಖಾನ್ ನವದೆಹಲಿಯಲ್ಲಿ ನಿಧನರಾದರು.[/fusion_toggle][fusion_toggle title=”1990: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ವಾಸಿಲಿ ಲಿಯೋನ್ ಟೈಫ್ ನಿಧನ” open=”no”]ಪ್ರಸಿದ್ಧ ಅರ್ಥಶಾಸ್ತ್ರಜ್ಞ ವಾಸಿಲಿ ಲಿಯೋನ್ ಟೈಫ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ರಷ್ಯನ್ ಮೂಲದ ಇವರಿಗೆ 1973ರ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು. ಒಂದು ಆರ್ಥಿಕ ವಲಯದಲ್ಲಿನ ಬದಲಾವಣೆ ಹೇಗೆ ಇನ್ನಿತರ ಆರ್ಥಿಕ ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಮಹತ್ವದ ಸಂಶೋಧನೆಯಾಗಿತ್ತು.[/fusion_toggle][fusion_toggle title=”2008: ಟ್ರಾನ್ಸಿಡೆಂಟಲ್ ಮೆಡಿಟೇಷನ್ ಪದ್ಧತಿಯ ಪ್ರವರ್ತಕ ಮಹರ್ಷಿ ಮಹೇಶ್ ಯೋಗಿ ನಿಧನ” open=”no”]ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಯೋಗ ಮತ್ತು ಧ್ಯಾನಪದ್ದತಿಗಳನ್ನು ಪಸರಿಸಿದ ಗುರು ಮಹರ್ಷಿ ಮಹೇಶ್ ಯೋಗಿ ಅವರು, ನೆದರ್ ಲ್ಯಾಂಡಿನ ವ್ಲೋಡ್ ರಾಪ್ ಎಂಬಲ್ಲಿ ನಿಧನರಾದರು. ಭಾರತದ ಜಬಲ್ಪುರದಲ್ಲಿ ಜನಿಸಿದ ಇವರು ಮನಸ್ಸಿನ ನಿಯಂತ್ರಣ ಮತ್ತು ಏಕಾಗ್ರತೆ ಸಾಧಿಸುವ ಟ್ರಾನ್ಸಿಡೆಂಟಲ್ ಮೆಡಿಟೇಷನ್ ಯೋಗ ಪದ್ಧತಿಯಿಂದ ಪ್ರಸಿದ್ಧರಾಗಿದ್ದರು. 1968ರಲ್ಲಿ, ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು, ಇವರ ಶಿಷ್ಯರಾದ ಮೇಲೆ, ಇವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು.[/fusion_toggle][fusion_toggle title=”2015: ನೊಬೆಲ್ ಪುರಸ್ಕೃತ ಪರಮಾಣು ಭೌತವಿಜ್ಞಾನಿ ವಾಲ್ ಲಾಗ್ಸ್ ಡನ್ ಫಿಚ್ ನಿಧನ” open=”no”]ಅಮೆರಿಕದ ಪರಮಾಣು ಭೌತವಿಜ್ಞಾನಿ ವಾಲ್ ಲಾಗ್ಸ್ ಡನ್ ಫಿಚ್ ಅವರು ನ್ಯೂ ಜೆರ್ಸಿಯ ಪ್ರಿನ್ಸ್ ಟನ್ ಎಂಬಲ್ಲಿ ನಿಧನರಾದರು. ಬ್ರೂಕ್ ಹಾವೆನ್ ನ್ಯಾಷನಲ್ ಪ್ರಯೋಗಾಲಯದಲ್ಲಿ ‘ಆಲ್ಟರ್ನೇಟಿಂಗ್ ರೇಡಿಯಂಟ್ಸ್ ಸಿಂಕ್ರಟ್ರಾನ್’ ಎಂಬ ಸಂಶೋಧನೆಗಾಗಿ ಇವರಿಗೆ 1980ರ ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][/fusion_accordion]

Categories
e-ದಿನ

ಫೆಬ್ರುವರಿ-05

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1597: ಜಪಾನಿನ ಸರ್ಕಾರವು ಪ್ರಾರಂಭಿಕವಾಗಿ ಕಂಡ ಕೆಲವು ಕ್ರೈಸ್ತಮತೀಯ ಗುಂಪನ್ನು ತನ್ನ ಸಮಾಜಕ್ಕೆ ಅಪಾಯಕಾರಿಯೆಂದು ಕೊಂದು ಹಾಕಿತು. ” open=”no”]ಜಪಾನಿನ ಸರ್ಕಾರವು ಪ್ರಾರಂಭಿಕವಾಗಿ ಕಂಡ ಕೆಲವು ಕ್ರಿಶ್ಚಿಯನ್ ಗುಂಪನ್ನು ತನ್ನ ಸಮಾಜಕ್ಕೆ ಮಾರಕವೆಂದು ಕೊಂದು ಹಾಕಿತು.[/fusion_toggle][fusion_toggle title=”1762: ಅಹಮದ್ ಶಹಾ ಅಬ್ದಾಲಿಯಿಂದ ಸಿಖ್ಖರ ಮಾರಣಹೋಮ” open=”no”]ಅಹಮದ್ ಶಹಾ ಅಬ್ದಾಲಿ ಲೂಧಿಯಾನ ಸಮೀಪದ ಕುಪ್ನಲ್ಲಿ ನಡೆದ ಸಮರದಲ್ಲಿ ಸಿಖ್ಖರ ಮಾರಣಹೋಮ ನಡೆಸಿದ. ಸಿಖ್ಖರು ಆತನ ಸಾರ್ವಭೌಮತ್ವ ಅಂಗೀಕರಿಸಲು ನಿರಾಕರಿಸಿದ್ದಕ್ಕಾಗಿ ಸುಮಾರು 10,000ದಿಂದ 30,000ದಷ್ಟು ಸಿಖ್ಖರನ್ನು ಕೊಲೆಗೈಯಲಾಯಿತು. ಅದೇ ವರ್ಷ ಏಪ್ರಿಲಿನಲ್ಲಿ ಅಬ್ದಾಲಿ ಅಮೃತಸರದ ಮೇಲೆ ದಾಳಿ ನಡೆಸಿ ಹರ್ಮಂದಿರವನ್ನು ನೆಲಸಮಗೊಳಿಸಿದ.[/fusion_toggle][fusion_toggle title=”1840: ಜಾನ್ ಬಾಯ್ಡ್ ಡನ್ಲಪ್ ಎಂಬ ಸ್ಕಾಟಿಷ್ ವ್ಯಾಪಾರಿ ಡನ್ಲಪ್ ರಬ್ಬರ್ ಸಂಸ್ಥೆ ಸ್ಥಾಪನೆ” open=”no”]ಜಾನ್ ಬಾಯ್ಡ್ ಡನ್ಲಪ್ ಎಂಬ ಸ್ಕಾಟಿಷ್ ವ್ಯಾಪಾರಿ ಡನ್ಲಪ್ ರಬ್ಬರ್ ಸಂಸ್ಥೆಯನ್ನು ಸ್ಥಾಪಿಸಿದ[/fusion_toggle][fusion_toggle title=”1852: ರಷ್ಯಾದ ಪ್ರಸಿದ್ಧ ಹರ್ಮಿಟೇಜ್ ಮ್ಯೂಸಿಯಂ ಪ್ರಾರಂಭ” open=”no”]ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ರಷ್ಯಾದ ದೊಡ್ಡ ಮತ್ತು ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ಹರ್ಮಿಟೇಜ್ ಮ್ಯೂಸಿಯಂ ಪ್ರಾರಂಭಗೊಂಡಿತು.[/fusion_toggle][fusion_toggle title=”1869: ಆಸ್ಟ್ರೇಲಿಯಾದಲ್ಲಿ ದೊಡ್ಡ ಚಿನ್ನದ ನಿಕ್ಷೇಪವಾದ ‘ವೆಲ್ಕಂ ಸ್ಟ್ರೇಂಜರ್’ ಪತ್ತೆ” open=”no”]ಚರಿತ್ರೆಯಲ್ಲೇ ಅತಂತ್ಯ ದೊಡ್ಡ ಚಿನ್ನದ ನಿಕ್ಷೇಪವಾದ ‘ವೆಲ್ಕಂ ಸ್ಟ್ರೇಂಜರ್’, ಆಸ್ಟ್ರೇಲಿಯಾದ ವಿಕ್ಟೋರಿಯಾ ಬಳಿಯ ಮೊಲಿಯಾಗುಲ್ ಎಂಬಲ್ಲಿ ಪತ್ತೆಯಾಯಿತು.[/fusion_toggle][fusion_toggle title=”1909: ಬೆಲ್ಜಿಯನ್ ರಸಾಯನ ಶಾಸ್ತ್ರಜ್ಞ ಲಿಯೋ ಬೇಕಲ್ಯಾಂಡ್ ಅವರಿಂದ ಪ್ರಪಂಚದ ಪ್ರಥಮ ಕೃತಕ ಪ್ಲಾಸ್ಟಿಕ್ ‘ಬ್ಯಾಕಲೈಟ್’ ತಯಾರಿಸಿದ ಘೋಷಣೆ” open=”no”]ಬೆಲ್ಜಿಯನ್ ರಸಾಯನ ಶಾಸ್ತ್ರಜ್ಞ ಲಿಯೋ ಬೇಕಲ್ಯಾಂಡ್ ಅವರು ಪ್ರಪಂಚದ ಪ್ರಥಮ ಕೃತಕ ಪ್ಲಾಸ್ಟಿಕ್ ಆದ ‘ಬ್ಯಾಕಲೈಟ್’ ಅನ್ನು ತಯಾರಿಸಿರುವುದಾಗಿ ಘೋಷಿಸಿದರು.[/fusion_toggle][fusion_toggle title=”1913: ಗ್ರೀಕ್ ಹಾರಾಟಗಾರರಿಂದ ಚರಿತ್ರೆಯ ಪ್ರಥಮ ನೌಕಾ ವಾಯು ಪ್ರದರ್ಶನ ” open=”no”]ಗ್ರೀಕ್ ವಾಯುಪಡೆಯ ವಿಮಾನ ಹಾರಾಟಗಾರರಾದ ಮೈಖೇಲ್ ಮೌಟೌಸಿಸ್ ಮತ್ತು ಏರೀಸ್ಟೀಡೀಸ್ ಮೊರೈಟಿನಿಸ್ ಅವರು ಚರಿತ್ರೆಯಲ್ಲಿ ಪ್ರಥಮ ನೌಖಾ ವಾಯು ಪ್ರದರ್ಶನವನ್ನು ‘ಫಾರ್ಮಾನ್ ಎಂ.ಎಫ್.7’ ಹೈಡ್ರೋಪ್ಲೇನ್ ಮೂಲಕ ನೀಡಿದರು.[/fusion_toggle][fusion_toggle title=”1918: ಅಮೆರಿಕದ ವಾಯುಪಡೆಯ ಪ್ರಥಮ ವಿಜಯ” open=”no”]ಸ್ಟೀಫನ್ ಡಬ್ಲ್ಯೂ ಥಾಮ್ಸನ್ ಅವರು ಜರ್ಮನಿಯ ವಿಮಾನವನ್ನು ಹೊಡೆದುರುಳಿಸಿದರು.  ಇದು ಅಮೆರಿಕದ ವಾಯುಸೇನಾ ಚರಿತ್ರೆಯಲ್ಲಿನ ಮೊದಲ ವಿಜಯವಾಗಿದೆ. [/fusion_toggle][fusion_toggle title=”1919: ಚಾರ್ಲಿ ಚಾಪ್ಲಿನ್ ಮತ್ತು ಸಂಗಡಿಗರಿಂದ ಯುನೈಟೆಡ್ ಆರ್ಟಿಸ್ಟ್ಸ್ ಸ್ಥಾಪನೆ” open=”no”]ಚಾರ್ಲಿ ಚಾಪ್ಲಿನ್, ಮೇರಿ ಪಿಕ್ಫೋರ್ಡ್, ಡೌಗ್ಲಾಸ್ ಫೇರ್ಬ್ಯಾಂಕ್ಸ್ ಮತ್ತು ಡಿ. ಡಬ್ಲೂ. ಗ್ರಿಫಿತ್ ಅವರುಗಳು ಯುನೈಟೆಡ್ ಆರ್ಟಿಸ್ಟ್ಸ್ ಸ್ಥಾಪಿಸಿದರು.[/fusion_toggle][fusion_toggle title=”1922: ಖಿಲಾಫತ್ ಚಳವಳಿ ಮತ್ತು ಪೊಲೀಸ್ ಠಾಣೆಗೆ ಬೆಂಕಿ” open=”no”]ಖಿಲಾಫತ್ ಚಳುವಳಿ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಮಂದಿ ಪೊಲೀಸರನ್ನು ಸುಟ್ಟು ಹಾಕಿದರು. ಈ ಹಿಂಸೆಯಿಂದ ಮನನೊಂದ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.[/fusion_toggle][fusion_toggle title=”1922: ‘ರೀಡರ್ಸ್ ಡೈಜೆಸ್ಟ್’ ಪ್ರಕಟಣೆ ಆರಂಭ” open=”no”]ಡೆ ವಿಟ್ ವ್ಯಾಲೇಸ್ ಅವರು ಜನರಿಗೆ ಮನರಂಜನೆ, ಮಾಹಿತಿ ಹಾಗೂ ಸ್ಫೂರ್ತಿ ನೀಡಲು ‘ರೀಡರ್ಸ್ ಡೈಜೆಸ್ಟ್’ ಆರಂಭಿಸಿದರು.[/fusion_toggle][fusion_toggle title=”1924: ದಿ ರಾಯಲ್ ಗ್ರೀನ್ವಿಚ್ ವೀಕ್ಷಣಾಲಯದಿಂದ ಗ್ರೀನ್ವಿಚ್ ಟೈಮ್ ಸಿಗ್ನಲ್ ಪ್ರಸಾರ ಆರಂಭ” open=”no”]ದಿ ರಾಯಲ್ ಗ್ರೀನ್ವಿಚ್ ವೀಕ್ಷಣಾಲಯವು ಗಂಟೆಗೊಮ್ಮೆ ಗ್ರೀನ್ವಿಚ್ ಟೈಮ್ ಸಿಗ್ನಲ್ ಎಂದು ಕರೆಯುವ ಸಮಯ ಸಂಜ್ಞೆಗಳ ಪ್ರಸಾರವನ್ನು ಆರಂಭಿಸಿತು.[/fusion_toggle][fusion_toggle title=”1937: ಚಾರ್ಲಿ ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ `ಮಾಡರ್ನ್ ಟೈಮ್ಸ್’ ಬಿಡುಗಡೆ” open=”no”]ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ ‘ಮಾಡರ್ನ್ ಟೈಮ್ಸ್’ ಬಿಡುಗಡೆಗೊಂಡಿತು.[/fusion_toggle][fusion_toggle title=”1971: ಚಂದ್ರನನ್ನು ತಲುಪಿದ ‘ಅಪೋಲೋ 14’ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ” open=”no”]‘ಅಪೋಲೋ 14’ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ಚಂದ್ರನನ್ನು ತಲುಪಿದರು.[/fusion_toggle][fusion_toggle title=”1991: ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಲೀಲಾಸೇಥ್” open=”no”]ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಲೀಲಾ ಸೇಥ್ ಅವರು ದೇಶದ ಪ್ರಥಮ ಮಹಿಳಾ ನ್ಯಾಯಾಧೀಶರೆಂಬ ಕೀರ್ತಿಗೆ ಪಾತ್ರರಾದರು.[/fusion_toggle][fusion_toggle title=”1997: ಸ್ವಿಟ್ಜರ್ಲ್ಯಾಂಡಿನ ಬ್ಯಾಂಕುಗಳಿಂದ ಹೋಲೋಕಾಸ್ಟ್ ಸಂತ್ರಸ್ತರ ಅಭ್ಯುದಯಕ್ಕಾಗಿ 7.1 ಮಿಲಿಯನ್ ಡಾಲರ್ ನಿಧಿ ಸ್ಥಾಪನೆ ” open=”no”]ಸ್ವಿಟ್ಜರ್ಲ್ಯಾಂಡಿನ್ ಮೂರು ದೊಡ್ಡ ಬ್ಯಾಂಕುಗಳು ಒಂದಾಗಿ ಹೋಲೋಕಾಸ್ಟ್ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಬೆಂಬಲಕ್ಕಾಗಿ 7.1 ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿದವು.[/fusion_toggle][fusion_toggle title=”2007: ಸುನೀತಾ ವಿಲಿಯಮ್ಸ್ ಅವರಿಂದ ದಾಖಲೆಯ ಬಾಹ್ಯಾಕಾಶ ನಡಿಗೆ” open=”no”]ಭಾರತೀಯ ಮೂಲಸಂಜಾತೆ ಮತ್ತು ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಒಟ್ಟು 22 ಗಂಟೆ 27 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ದಾಖಲೆ ನಿರ್ಮಿಸಿದರು. ಈವರೆಗೆ ಈ ದಾಖಲೆ ಕ್ಯಾಥಿ ಥೋರ್ನ್ ಟನ್ ಅವರ ಹೆಸರಿನಲ್ಲಿತ್ತು.[/fusion_toggle][fusion_toggle title=”2007: ಪೆಪ್ಸಿಕೋ ಅಧ್ಯಕ್ಷೆಯಾದ ಭಾರತದ ಇಂದ್ರಾ ಕೆ ನೂಯಿ” open=”no”]ಭಾರತದ ಇಂದ್ರಾ ಕೆ ನೂಯಿ ಅವರು ಆಹಾರ ಮತ್ತು ತಂಪು ಪಾನೀಯಗಳ ಬೃಹತ್ ಬಹುರಾಷ್ಟ್ರೀಯ ಸಂಸ್ಥೆಯಾದ ಪೆಪ್ಸಿಕೋದ ಅಧ್ಯಕ್ಷೆಯಾಗಿ ಆಯ್ಕೆಯಾದರು.[/fusion_toggle][fusion_toggle title=”2009: ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರಿಂದ ಅತಿ ಹೆಚ್ಚು ಏಕದಿನ ಪಂದ್ಯಗಳ ವಿಕೆಟ್ ದಾಖಲೆ ” open=”no”]ಮಾಂತ್ರಿಕ ಸ್ಪಿನ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಪಾಕಿಸ್ಥಾನದ ಮಾಜಿ ವೇಗದ ಬೌಲರ್ ವಾಸೀಮ್ ಅಕ್ರಮ್ ಅವರ 502 ವಿಕೆಟ್ ವಿಶ್ವದಾಖಲೆಯನ್ನು ಮುರಿದರು.[/fusion_toggle][fusion_toggle title=”2009: ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಸಲ್ಲುವ ‘ಸ್ವರ್ಣ ಕಮಲ’ ಪ್ರಶಸ್ತಿ ” open=”no”]‘ಕೇರ್ ಆಫ್ ಫುಟ್ಪಾತ್’ ಮಕ್ಕಳ ಚಿತ್ರಕ್ಕಾಗಿ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ ಅವರಿಗೆ ಸಂದ ಮಕ್ಕಳ ಚಿತ್ರಕ್ಕಾಗಿನ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಿದರು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1916: ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ ಮತ್ತು ಸಾಹಿತಿ ಬಿ.ಜಿ.ಎಲ್. ಸ್ವಾಮಿ ಜನನ” open=”no”]ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ, ಸಂಶೋಧಕ, ಶಿಕ್ಷಕ, ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರ ಡಾ. ಬಿ.ಜಿ. ಎಲ್ ಸ್ವಾಮಿ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಹಸುರು ಹೊನ್ನು’ ಕೃತಿಗಾಗಿ ಅವರಿಗೆ 1978ರ ವರ್ಷದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು. 1980ರ ವರ್ಷದಲ್ಲಿ ನಿಧನರಾದ ಇವರು ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.[/fusion_toggle][fusion_toggle title=”1930: ಚಂದ್ರನ ಮೇಲೆ ಮೊದಲು ಪದಾರ್ಪಣ ಮಾಡಿದ ನೀಲ್ ಆರ್ಮ್ ಸ್ಟ್ರಾಂಗ್ ಜನನ” open=”no”]ಚಂದ್ರನ ಮೇಲೆ ಮೊದಲು ಪದಾರ್ಪಣ ಮಾಡಿದ ಮಾನವರಾದ ನೀಲ್ ಆರ್ಮ್ ಸ್ಟ್ರಾಂಗ್ ಅಮೆರಿಕದ ಓಹಿಯೋದಲ್ಲಿ ಜನಿಸಿದರು.[/fusion_toggle][fusion_toggle title=”1931: ಖ್ಯಾತ ಪ್ರಾಧ್ಯಾಪಕ ಮತ್ತು ಸಾಹಿತಿ ಹಾ.ಮಾ. ನಾಯಕ್ ಜನನ” open=”no”]ಹಾರೋಗದ್ದೆ ಮಾನಪ್ಪ ನಾಯಕ್ ಅವರು ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರಾಧ್ಯಾಪನ ಮತ್ತು ವಿದ್ವತ್ಪೂರ್ಣ ಬರಹಗಳಿಗೆ ಹೆಸರಾಗಿದ್ದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಸಂದಿದ್ದವು. 2010, ನವೆಂಬರ್ 10ರಂದು ನಿಧನರಾದರು.[/fusion_toggle][fusion_toggle title=”1936: ಕವಿ ಡಾ. ಕೆ. ಎಸ್. ನಿಸಾರ್ ಅಹಮದ್ ಜನನ” open=”no”]‘ನಿತ್ಯೋತ್ಸವದ ಕವಿ’ ಎಂದೇ ಜನಮನದಲ್ಲಿ ಪ್ರಖ್ಯಾತರಾಗಿರುವ ಡಾ. ಕೆ.ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಕವಿಯಾಗಿ ನಿಸಾರರು ‘ಮನಸ್ಸು ಗಾಂಧಿಬಜಾರು’, ‘ನಿತ್ಯೋತ್ಸವ’, ‘ನೆನೆದವರ ಮನದಲ್ಲಿ’, ‘ನಾನೆಂಬ ಪರಕೀಯ’, ‘ಅನಾಮಿಕ ಆಂಗ್ಲರು’, ‘ಸುಮಹೂರ್ತ’, ‘ಸಂಜೆ ಐದರ ಮಳೆ’, ‘ಸ್ವಯಂ ಸೇವೆಯ ಗಿಳಿಗಳು’ ಮುಂತಾದ ಕವನ ಸಂಕಲನಗಳಲ್ಲದೆ ಅನೇಕ ಗದ್ಯ ಕೃತಿಗಳನ್ನೂ, ಬಾಷಾಂತರಗಳನ್ನೂ ಮಾಡಿದ್ದಾರೆ. ಪದ್ಮಶ್ರೀ, ಪಂಪ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೆಳನಾಧ್ಯಕ್ಷತೆ ಸೇರಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.[/fusion_toggle][fusion_toggle title=”1980: ಲೈವ್ ಜರ್ನಲ್ ಸೃಷ್ಟಿಕರ್ತ ಬ್ರಾಡ್ ಫಿಟ್ಜ್ ಪ್ಯಾಟ್ರಿಕ್ ಜನನ” open=”no”]ಅಮೆರಿಕದ ಪ್ರೋಗ್ರಾಮರ್, ಲೈವ್ ಜರ್ನಲ್ ಸೃಷ್ಟಿಕರ್ತ ಬ್ರಾಡ್ ಫಿಟ್ಜ್ ಪ್ಯಾಟ್ರಿಕ್, ಲೋವಾ ಎಂಬಲ್ಲಿ ಜನಿಸಿದರು. ಲೈವ್ ಜರ್ನಲ್ ಅಲ್ಲದೆ ಅನೇಕ ಉಚಿತ ಸಾಫ್ಟ್ವೇರ್ ಸೃಷ್ಟಿಸಿದ್ದಕ್ಕಾಗಿ ಇವರು ಪ್ರಸಿದ್ಧರಾಗಿದ್ದಾರೆ.[/fusion_toggle][fusion_toggle title=”1992: ಸ್ವಾತಂತ್ರ್ಯ ಹೋರಾಟಗಾರ ನಾಯಕ ಅಚ್ಯುತರಾವ್ ಪಟವರ್ಧನ್ ಜನನ” open=”no”]ಸ್ವಾತಂತ್ರ್ಯ ಹೋರಾಟಗಾರ ನಾಯಕ ಅಚ್ಯುತರಾವ್ ಪಟವರ್ಧನ್ ಅವರು ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಜನಿಸಿದರು. ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಾದ ಇವರು ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಸ್ವಾತಂತ್ರ್ಯಾನಂತರದ ತುರ್ತು ಪರಿಸ್ಥಿತಿಯ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1765: ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ” open=”no”]ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ. ತನ್ನ ಬೆಂಬಲಿಗ ವಂಚಕರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಷಾಮೀಲಾದ ಈತ 1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ನಿಷ್ಕ್ರಿಯ ನಿಲುವು ತಾಳಿದ. ಈ ಕದನದಲ್ಲಿ ಸೋತ ಸಿರಾಜುದ್ದೌಲ ಪದಚ್ಯುತನಾದ ನಂತರ ಬ್ರಿಟಿಷರು ಮೀರ್ ಜಾಫರನನ್ನೇ ಬಂಗಾಳದ ಆಡಳಿತಗಾರನನ್ನಾಗಿ ನೇಮಿಸಿದರು. ಸಾಯುವ ಕಾಲಕ್ಕೆ ಈತ ಅಫೀಮು ವ್ಯಸನಿಯೂ ಕುಷ್ಠರೋಗ ಪೀಡಿತನೂ ಆಗಿ ನರಳಿದ.[/fusion_toggle][fusion_toggle title=”1881: ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ನಿಧನ” open=”no”]ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ಲಂಡನ್ನಿನಲ್ಲಿ ನಿಧನರಾದರು. ‘ಸೇಜ್ ಆಫ್ ಚೆಲ್ಸಿಯಾ’ ಎಂದೇ ಇವರು ಖ್ಯಾತರಾಗಿದ್ದರು.[/fusion_toggle][fusion_toggle title=”1914: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ಅಲನ್ ಲಾಯ್ಡ್ ಹಾಡ್ಗ್ ಕಿನ್ ಜನನ” open=”no”]ಇಂಗ್ಲಿಷ್ ಜೀವಶಾಸ್ತ್ರಜ್ಞರಾದ ಅಲನ್ ಲಾಯ್ಡ್ ಹಾಡ್ಗ್ ಕಿನ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ಇವರಿಗೆ 1963ರ ವರ್ಷದಲ್ಲಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1915: ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ರಾಬರ್ಟ್ ಹೋಫ್ ಸ್ಟಾಡ್ಟರ್ ನಿಧನ ” open=”no”]ಅಮೆರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಹೋಫ್ ಸ್ಟಾಡ್ಟರ್ ಕ್ಯಾಲಿಫೋರ್ನಿಯಾದ ಸ್ಟಾನ್ ಫೋರ್ಡಿನಲ್ಲಿ ನಿಧನರಾದರು. ‘ಎಲೆಕ್ಟ್ರಾನ್ ಸ್ಕಾಟರಿಂಗ್ ಇನ್ ಆಟೋಮಿಕ್ ನ್ಯೂಕ್ಲಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1961ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1922: ಮೆಕಾನಿಕಲ್ ಪೆನ್ಸಿಲ್ ಸಂಶೋಧಕ ಸ್ಲಾವೋಲ್ಜುಬ್ ಎಡ್ವರ್ಡ್ ಪೆನ್ಕಲ ನಿಧನ” open=”no”]ಕ್ರೋಟ್ಸ್ ಅಂಡ್ ಸ್ಲೋವೇನಿಸ್ ದೇಶದ ಮೆಕಾನಿಕಲ್ ಸಂಶೋಧಕ ಸ್ಲಾವೋಲ್ಜುಬ್ ಎಡ್ವರ್ಡ್ ಪೆನ್ಕಲ ನಿಧನರಾದರು.[/fusion_toggle][fusion_toggle title=”1927 ಯೂನಿವರ್ಸಲ್ ಸೂಫಿಯಿಸಮ್ ಬೋಧಕ ಇನಾಯತ್ ಖಾನ್ ನಿಧನ” open=”no”]ಪಶ್ಚಿಮ ದೇಶಗಳಲ್ಲಿ ಸೂಫಿ ಪಂತವನ್ನು ಪಸರಿಸಿದ ಯೂನಿವರ್ಸಲ್ ಸೂಫಿಯಿಸಮ್ ಬೋಧಕ ಇನಾಯತ್ ಖಾನ್ ನವದೆಹಲಿಯಲ್ಲಿ ನಿಧನರಾದರು.[/fusion_toggle][fusion_toggle title=”1990: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ವಾಸಿಲಿ ಲಿಯೋನ್ ಟೈಫ್ ನಿಧನ” open=”no”]ಪ್ರಸಿದ್ಧ ಅರ್ಥಶಾಸ್ತ್ರಜ್ಞ ವಾಸಿಲಿ ಲಿಯೋನ್ ಟೈಫ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ರಷ್ಯನ್ ಮೂಲದ ಇವರಿಗೆ 1973ರ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು. ಒಂದು ಆರ್ಥಿಕ ವಲಯದಲ್ಲಿನ ಬದಲಾವಣೆ ಹೇಗೆ ಇನ್ನಿತರ ಆರ್ಥಿಕ ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಮಹತ್ವದ ಸಂಶೋಧನೆಯಾಗಿತ್ತು.[/fusion_toggle][fusion_toggle title=”2008: ಟ್ರಾನ್ಸಿಡೆಂಟಲ್ ಮೆಡಿಟೇಷನ್ ಪದ್ಧತಿಯ ಪ್ರವರ್ತಕ ಮಹರ್ಷಿ ಮಹೇಶ್ ಯೋಗಿ ನಿಧನ” open=”no”]ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಯೋಗ ಮತ್ತು ಧ್ಯಾನಪದ್ದತಿಗಳನ್ನು ಪಸರಿಸಿದ ಗುರು ಮಹರ್ಷಿ ಮಹೇಶ್ ಯೋಗಿ ಅವರು, ನೆದರ್ ಲ್ಯಾಂಡಿನ ವ್ಲೋಡ್ ರಾಪ್ ಎಂಬಲ್ಲಿ ನಿಧನರಾದರು. ಭಾರತದ ಜಬಲ್ಪುರದಲ್ಲಿ ಜನಿಸಿದ ಇವರು ಮನಸ್ಸಿನ ನಿಯಂತ್ರಣ ಮತ್ತು ಏಕಾಗ್ರತೆ ಸಾಧಿಸುವ ಟ್ರಾನ್ಸಿಡೆಂಟಲ್ ಮೆಡಿಟೇಷನ್ ಯೋಗ ಪದ್ಧತಿಯಿಂದ ಪ್ರಸಿದ್ಧರಾಗಿದ್ದರು. 1968ರಲ್ಲಿ, ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು, ಇವರ ಶಿಷ್ಯರಾದ ಮೇಲೆ, ಇವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು.[/fusion_toggle][fusion_toggle title=”2015: ನೊಬೆಲ್ ಪುರಸ್ಕೃತ ಪರಮಾಣು ಭೌತವಿಜ್ಞಾನಿ ವಾಲ್ ಲಾಗ್ಸ್ ಡನ್ ಫಿಚ್ ನಿಧನ” open=”no”]ಅಮೆರಿಕದ ಪರಮಾಣು ಭೌತವಿಜ್ಞಾನಿ ವಾಲ್ ಲಾಗ್ಸ್ ಡನ್ ಫಿಚ್ ಅವರು ನ್ಯೂ ಜೆರ್ಸಿಯ ಪ್ರಿನ್ಸ್ ಟನ್ ಎಂಬಲ್ಲಿ ನಿಧನರಾದರು. ಬ್ರೂಕ್ ಹಾವೆನ್ ನ್ಯಾಷನಲ್ ಪ್ರಯೋಗಾಲಯದಲ್ಲಿ ‘ಆಲ್ಟರ್ನೇಟಿಂಗ್ ರೇಡಿಯಂಟ್ಸ್ ಸಿಂಕ್ರಟ್ರಾನ್’ ಎಂಬ ಸಂಶೋಧನೆಗಾಗಿ ಇವರಿಗೆ 1980ರ ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][/fusion_accordion]

Categories
e-ದಿನ

ಫೆಬ್ರವರಿ-04

ದಿನಾಚರಣೆಗಳು:
ವಿಶ್ವ ಕ್ಯಾನ್ಸರ್ ದಿನ

ಕ್ಯಾನ್ಸರ್ ಕಾಯಿಲೆ ಕುರಿತಾಗಿ ಜನ ಸಮುದಾಯದಲ್ಲಿ ಅರಿವು ಮೂಡಿಸಲು ಹಾಗೂ ಕ್ಯಾನ್ಸರ್ ತಡೆಗಟ್ಟುವಿಕೆ, ಗುರುತಿಸುವಿಕೆ ಮತ್ತು ಚಿಕಿತ್ಸೆಯ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವಿಕೆಗಳನ್ನು ಉದ್ದೇಶವಾಗಿಟ್ಟುಕೊಂಡು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಯೂನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಸಂಸ್ಥೆ ಈ ಆಚರಣೆಗೆ ಕರೆ ಕೊಟ್ಟಿದೆ. ಕ್ಯಾನ್ಸರ್ ರೋಗವನ್ನು ಬಹುಮಟ್ಟಿಗೆ 2020ರ ವರ್ಷದ ವೇಳೆಗೆ ವಿಶ್ವ ಕ್ಯಾನ್ಸರ್ ದಿನದ ಪ್ರಮುಖ ಆಶಯವಾಗಿದೆ.

ಶ್ರೀಲಂಕಾ ಸ್ವಾತಂತ್ರ್ಯ ದಿನಾಚರಣೆ

ಸಿಲೋನ್ ದೇಶವು 1948ರ ಫೆಬ್ರವರಿ ನಾಲ್ಕರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗೊಂಡಿತು. ಮುಂದೆ ಇದು ಶ್ರೀಲಂಕಾ ಎಂದು ತನ್ನ ಹೆಸರು ಬದಲಿಸಿಕೊಂಡಿತು.

ಪ್ರಮುಖಘಟನಾವಳಿಗಳು:

960: ಚೀನಾ ದೇಶದಲ್ಲಿ ಸಾಂಗ್ ಮನೆತನದ ಆಡಳಿತ ಪ್ರಾರಂಭಗೊಂಡು, ಆ ಮನೆತನದ ತಾಯ್ಸು ಚಕ್ರವರ್ತಿಯಾದ. ಈ ಮನೆತನವು ಮೂರು ಶತಮಾನಗಳಿಗೂ ಹೆಚ್ಚು ಕಾಲ ಚೀನಾ ದೇಶವನ್ನು ಆಳಿತು.

1169: ಸಿಸಿಲಿಯಲ್ಲಿ ಉಂಟಾದ ಭೀಕರ ಭೂಕಂಪದಲ್ಲಿ ಹತ್ತಾರು ಸಹಸ್ರ ಜನ ಸಾವು ನೋವುಗಳಿಗೀಡಾದರು

1758: ಬ್ರೆಜಿಲ್ ದೇಶದ ರಾಜಧಾನಿ ಮಕಾಪ ಸ್ಥಾಪನೆಗೊಂಡಿತು.

1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದರು.

1794: ಫ್ರೆಂಚ್ ಪ್ರತಿನಿಧಿ ಸಭೆಯು ಫ್ರೆಂಚ್ ಫಸ್ಟ್ ರಿಪಬ್ಲಿಕ್ಕಿನ ಎಲ್ಲ ಪ್ರಾಂತ್ಯಗಳಲ್ಲೂ ಗುಲಾಮಗಿರಿಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿತು. ಆದರೆ 1802ರ ವರ್ಷದಲ್ಲಿ ಅದು ಫ್ರೆಂಚ್ ವೆಸ್ಟ್ ಇಂಡೀಸ್ನಲ್ಲಿ ಪುನಃಸ್ಥಾಪಿತಗೊಂಡಿತು.

1797: ಈಕ್ವೆಡಾರ್ನಲ್ಲಿ ರಿಯೋಬಾಮಾ ಭೂಕಂಪನವಾಗಿ 40,000 ಸಾವಿರ ಸಾವು ಸಂಭವಿಸಿತು

1859: ನಾಲ್ಕನೆಯ ಶತಮಾನದ್ದೆಂದು ಹೇಳಲಾಗಿರುವ ಗ್ರೀಕ್ ಬರಹದಲ್ಲಿರುವ ನ್ಯೂ ಟೆಸ್ಟಾಮೆಂಟ್ ಆದ ಕೋಡೆಕ್ಸ್ ಸಿನೈಟಿಕಸ್ ಈಜಿಪ್ಟಿನಲ್ಲಿ ಸಿಕ್ಕಿತು. ಇದನ್ನು ಜರ್ಮನಿಯ ಬೈಬಲ್ ವಿದ್ವಾಂಸರಾದ ಟಿಸ್ಚಂಡರಾಫ್ ಅವರು ಸೈಂಟ್ ಕ್ಯಾಥರಿನ್ಸ್ ಮೊನಾಸ್ಟ್ರಿಯಲ್ಲಿ ಕಂಡರು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1936: ‘ರೇಡಿಯಂ’ ಪ್ರಥಮ ಕೃತಕ ರೇಡಿಯೋ ಆಕ್ಟಿವ್ ವಸ್ತು ಎಂದೆನಿಸಿತು.

1945: ಬ್ರಿಟಿಷ್ ಭಾರತೀಯ ಸೇನೆ ಮತ್ತು ಇಂಪೀರಿಯಲ್ ಜಪಾನ್ ಸೇನೆಗಳ ನಡುವೆ ಪೊಕೋಕು ಕದನ, ಇರ್ರವಡ್ಡಿ ರಿವರ್ ಆಪರೆಶನ್ಸ್ ಮುಂತಾದ ಸರಣಿ ಯುದ್ಧಗಳು ಆರಂಭಗೊಂಡವು.

1948: ಸಿಲೋನ್ ದೇಶವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗೊಂಡಿತು. ಮುಂದೆ ಇದು ಶ್ರೀಲಂಕಾ ಎಂದು ತನ್ನ ಹೆಸರು ಬದಲಿಸಿಕೊಂಡಿತು.

1967: ಲೂನಾರ್ ಬಾಹ್ಯಾಕಾಶ ಕಕ್ಷಾ ಕಾರ್ಯಕ್ರಮದಡಿಯಲ್ಲಿ ಲೂನಾರ್ ಆರ್ಬಿಟರ್ 3, ತನ್ನ ಬಾಹ್ಯಾಕಾಶ ಯಾತ್ರೆ ಪ್ರಾರಂಭಿಸಿತು. ಕೇಪ್ ಕಾನವೆರಾಲ್ ಇಂದ ಹಾರಿಬಿಟ್ಟ ಈ ಬಾಹ್ಯಾಕಾಶ ವಾಹನವು ಸರ್ವೇಯರ್ ಮತ್ತು ಅಪೋಲೋ ಬಾಹ್ಯಾಕಾಶ ವಾಹನಗಳಿಗೆ ಸೂಕ್ತ ನಿಲ್ದಾಣಗಳನ್ನು ಆಯುವ ಕೆಲಸವನ್ನು ಹೊತ್ತುಕೊಂಡಿತ್ತು.

1969: ಯಾಸೀರ್ ಅರಾಫತ್ ಅವರು ಪ್ಯಾಲೆಸ್ಟೈನ್ ಲಿಬರೇಷನ್ ಆರ್ಗನೈಸೇಷನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

2004: ಜನಪ್ರಿಯ ಅಂತರಜಾಲ ಸಾಮಾಜಿಕ ಸಮೂಹ ಸಂಪರ್ಕ (ನೆಟ್ವರ್ಕಿಂಗ್) ಜಾಲ ವ್ಯವಸ್ಥೆಯಾದ ಫೇಸ್ಬುಕ್ ಅನ್ನು ಮಾರ್ಕ್ ಜುಕರ್ ಬರ್ಗ್ ಸ್ಥಾಪಿಸಿದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್’ ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು 200 ಕಿಲೋ ತೂಕದ ದಾಳಿ ಪರಿಕರ ಸಾಮರ್ಥ್ಯವನ್ನೂ ಮತ್ತು 300 ಕಿಲೋ ತೂಕದ ಪರಮಾಣು ಅಸ್ತ್ರದಾಳಿ ಸಾಮರ್ಥ್ಯವನ್ನೂ ಹೊಂದಿದೆ.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹವಾನಿಯಂತ್ರಣ ವ್ಯವಸ್ಥೆಯ ದುರಸ್ತಿ ಕಾರ್ಯವನ್ನೂ ಕೈಗೊಂಡರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ ಪೂರ್ವಾಂಚಲ ಎಫ್ ಎಂ ಕೇಂದ್ರವು ನೇಪಾಳದ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವಂತದ್ದಾಗಿದೆ. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2009: ಚಿತ್ರದುರ್ಗದಲ್ಲಿ ಹೆಸರಾಂತ ವಿದ್ವಾಂಸ ಮತ್ತು ಸಾಹಿತಿ ಪ್ರೊ. ಎಲ್. ಬಸವರಾಜು ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಾಲ್ಕು ದಿನಗಳ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಆರಂಭಗೊಂಡಿತು.

2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

ಪ್ರಮುಖಜನನ/ಮರಣ:

1871: ಜರ್ಮನಿಯ ನ್ಯಾಯವಾದಿ ಮತ್ತು ಜರ್ಮನಿಯ ಪ್ರಥಮ ರಾಷ್ಟ್ರಾಧ್ಯಕ್ಷ ಫ್ರೆಡ್ರಿಕ್ ಎಬರ್ಟ್ ಜನಿಸಿದರು.

1891: ಭಾರತದ ನ್ಯಾಯವಾದಿ ಮತ್ತು ಲೋಕಸಭೆಯ ಎರಡನೇ ಅಧ್ಯಕ್ಷರಾದ ಎಂ. ಎ. ಅಯ್ಯಂಗಾರ್ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಚಾನೂರ್ ಎಂಬಲ್ಲಿ ಜನಿಸಿದರು. ಅವರು ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1902: ಅಮೆರಿಕದ ಪ್ರಸಿದ್ಧ ವಿಮಾನ ಹಾರಾಟಗಾರ ಚಾರ್ಲ್ಸ್ ಲಿಂಡ್ ಬರ್ಗ್ ಡೆಟ್ರಾಯಿಟ್ ನಗರದಲ್ಲಿ ಜನಿಸಿದರು. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ನಿರಂತರವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1906: ಅಮೆರಿಕದ ಖಗೋಳ ತಜ್ಞ ಮತ್ತು ‘ಪ್ಲೂಟೋ’ದ ಅನ್ವೇಷಕ ಕ್ಲೈಡ್ ಟಾಮ್ ಬಾಗ್ ಅವರು ಇಲಿನಾಯ್ಸ್ ಬಳಿಯ ಸ್ಟ್ರೀಟರ್ ಎಂಬಲ್ಲಿ ಜನಿಸಿದರು.

1913: ಅಮೆರಿಕದ ಕರಿಯ ಮಹಿಳೆ ರೋಸಾ ಪಾರ್ಕ್ಸ್ ಜನಿಸಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1922: ಹಿಂದೂಸ್ಥಾನಿ ಸಂಗೀತದ ಮಹಾನ್ ಗಾಯಕರಾದ ಪಂಡಿತ್ ಭೀಮಸೇನ ಜೋಷಿ ಗದಗ್ ಜಿಲ್ಲೆಯ ರಾನ್ ಎಂಬ ಗ್ರಾಮದಲ್ಲಿ ಜನಿಸಿದರು. ಸಂಗೀತ ಲೋಕದಲ್ಲಿ ಎಲ್ಲ ರೀತಿಯ ಮಹತ್ವದ ಸಾಧನೆ, ಜನಪ್ರಿಯತೆಗಳನ್ನು ಗಳಿಸಿದ್ದ ಡಾ. ಭೀಮಸೇನ ಜೋಶಿ ಅವರಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಫೆಲೋಷಿಪ್ ಒಳಗೊಂಡಂತೆ ದೇಶ ವಿದೇಶಗಳ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. 2011 ವರ್ಷದ ಜನವರಿ 24ರಂದು ಪುಣೆಯಲ್ಲಿ ನಿಧನರಾದ ಇವರು ಭಕ್ತಿ ಸಂಗೀತ, ಸಿನಿಮಾ ಸಂಗೀತ, ದೇಶಭಕ್ತಿ ಗೀತ ಸಂಗೀತದಲ್ಲೂ ಜನಪ್ರಿಯ ಸಾಧನೆ ಮಾಡಿದ್ದರು.

1924: ಭಾರತದ ರಾಷ್ಟ್ರಪತಿಗಳಾಗಿದ್ದ ಕೆ.ಆರ್. ನಾರಾಯಣನ್ ಅವರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇವರು ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎನಿಸಿದ್ದಾರೆ.

1926: ಪ್ರಖ್ಯಾತ ರಂಗಕರ್ಮಿ ಮತ್ತು ಬರಹಗಾರ ವೆಂ. ಮು. ಜೋಷಿ ಜನಿಸಿದರು.

1931: ಸಾಹಿತಿ ಮತ್ತು ಸಮಾಜ ಸೇವಕ ಮಾ.ಭ. ಪೆರ್ಲ ಅವರು ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮದಲ್ಲಿ ಜನಿಸಿದರು. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನಲ್ಲಿದ್ದ ಸಂದರ್ಭದಲ್ಲಿ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

1934: ಪಂಡಿತ್ ಬಿರ್ಜು ಮಹಾರಾಜ್ ಎಂಬ ಹೆಸರಿನಿಂದ ಕಥಕ್ ನೃತ್ಯದಲ್ಲಿ ಇಂದು ವಿಶ್ವಪ್ರಖ್ಯಾತರದ ಬ್ರಿಜ್ಮೋ ಮಿಶ್ರಾ ಅವರು ರಾಯಗರದಲ್ಲಿ ಜನಿಸಿದರು. ಕಥಕ್ ನೃತ್ಯಕ್ಕೆ ವಿಸ್ತಾರವನ್ನು ತಂದುಕೊಟ್ಟ ಇವರಿಗೆ ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಂಮಾನ್, ಗಾಂಧೀ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1938: ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಭಾರ್ಗವಿ ನಾರಾಯಣ್ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ 1998ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ನಾಟಕ ಅಕಾಡಮಿಯ ಸದಸ್ಯೆಯಾಗಿಯೂ ಸಹಾ ಸೇವೆ ಸಲ್ಲಿಸಿದ್ದಾರೆ.

1943: ಪ್ರಖ್ಯಾತ ನೃತ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ ಚೆನ್ನೈನಲ್ಲಿ ಜನಿಸಿದರು. ನೃತ್ಯ ಮತ್ತು ಸಂಗೀತ ಸಾಧನೆಗಳ ಜೊತೆಯಲ್ಲಿ, ಸಂಸ್ಕೃತಿ ಮತ್ತು ಕಲೆಗಳ ಕುರಿತಾದಂತೆ ಅವರು ಹಲವಾರು ಮಹತ್ವಪೂರ್ಣ ಬರಹ, ಸಂಶೋಧನೆಗಳನ್ನು ಮೂಡಿಸಿದ್ದು, ಹಲವಾರು ಗ್ರಂಥಗಳನ್ನೂ ಪ್ರಕಟಪಡಿಸಿದ್ದಾರೆ. ಅವರಿಗೆ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ, ಕಲೈಮಾಮಣಿ, ಕಾಳಿದಾಸ್ ಸಮ್ಮಾನ್, ನಾದ ಬ್ರಹ್ಮಂ. ಫುಕೋಕ ಏಷ್ಯಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಗೌರವ ಅಲ್ಲದೆ ಹಲವಾರು ಮಹತ್ವಪೂರ್ಣ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1943: ಅಮೆರಿಕದ ಪ್ರಸಿದ್ಧ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರೋಗ್ರಾಮರ್ ಕೆನ್ ಥಾಮ್ಸನ್ ಜನಿಸಿದರು. ಅವರು ಮೂಲ ಯೂನಿಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆಯೋಜಿಸಿ ಅಳವಡಿಸಿದ್ದರಲ್ಲದೆ ಬಿ ಪ್ರೊಗ್ರಾಮಿಂಗ್ ಲ್ಯಾಂಗ್ವೇಜಿನ ಪ್ರಧಾನ ಸೃಷ್ಟಿಕರ್ತರೂ ಆಗಿದ್ದರು. ಒಟ್ಟು 9 ಆಪರೇಟಿಂಗ್ ಸಿಸ್ಟಮ್ ಸೃಜಿಸಿದ್ದ ಇವರು ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರಲ್ಲದೆ ಅದರಲ್ಲಿನ ಗೋ ಪ್ರೊಗ್ರಾಮಿಂಗ್ ಭಾಷೆಯ ಸಹಕರ್ತೃವೂ ಆಗಿದ್ದರು. ಬಹುತೇಕವಾಗಿ ಬೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸೃಜಿಸಿದ ವಿವಿಧ ಕಂಪ್ಯೂಟರ್ ತಂತ್ರಜ್ಞಾನ ಉಪಕರಗಳಿಗೆ ಲೆಕ್ಕವೇ ಇಲ್ಲ.

1894: ಬೆಲ್ಜಿಯನ್ ವಾದ್ಯ ತಯಾರಕ, ಸ್ಯಾಕ್ಸಫೋನ್ ವಾದ್ಯ ಸಂಶೋಧಕ ಅಡೋಲ್ಫ್ ಸ್ಯಾಕ್ಸ್ ಪ್ಯಾರಿಸ್ ನಗರದಲ್ಲಿ ನಿಧನರಾದರು.

1928: ಡಚ್ ಭೌತವಿಜ್ಞಾನಿ ಹೆಂಡ್ರಿಕ್ ಲೋರೆಂಟ್ಸ್ ಅವರು ನೆದರ್ಲ್ಯಾಂಡಿನ ಹಾರ್ಲೆಂ ಎಂಬಲ್ಲಿ ನಿಧನರಾದರು. ಪೀಟರ್ ಜೀಮನ್ ಅವರೊಂದಿಗೆ ಇವರು ಮೂಡಿಸಿದ ‘ಜೀಮನ್ ಎಫೆಕ್ಟ್’ ಕುರಿತಾದ ಸಂಶೋಧನೆ ಮತ್ತು ವಿಸ್ತೃತ ಬರವಣಿಗೆಗಾಗಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1974: ಕೋಲ್ಕತ್ತದಲ್ಲಿ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸರು ನಿಧನರಾದರು. ಕ್ವಾಂಟಮ್ ಚಲನವನ್ನಾಧರಿಸಿದ ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ ಪ್ರವರ್ತಕರಾದ ಕೀರ್ತಿ ಸತ್ಯೇಂದ್ರನಾಥ ಬೋಸ್ ಅವರದು. ಐನ್‌ಸ್ಟೈನ್ ಅವರು ಬೋಸರ ಚಿಂತನೆಗಳಿಗೆ ನೀಡಿದ ವಿಸ್ತಾರ ‘ಬೋಸ್-ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್’ ಅಥವಾ ‘ಬೋಸ್ ಐನ್‌ಸ್ಟೈನ್ ಹಂಚಿಕೆ’ ಎಂದೇ ಖ್ಯಾತವಾಗಿದೆ. ಇತ್ತೀಚಿನ ವರ್ಷದಲ್ಲಿ ವಿಜ್ಞಾನ ಲೋಕದಲ್ಲಿ ಪ್ರಸ್ತುತಗೊಂಡ ‘ದೇವಕಣ’ ಅಥವ ‘God Particle’ ವಿಚಾರಕ್ಕೆ ಮೂಲಚಿಂತನೆ ನೀಡಿದವರು ಸತ್ಯೇಂದ್ರನಾಥ ಬೋಸ್ ಎಂಬುದನ್ನು ಇಡೀ ವಿಶ್ವವೇ ಖಚಿತಪಡಿಸಿದೆ. ಸತ್ಯೇಂದ್ರನಾಥ್ ಬೋಸ್ 1974ರಲ್ಲಿ ನಿಧನರಾದರು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ’ ಎಂದೇ ಖ್ಯಾತಿ ಪಡೆದಿತ್ತು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ‘ಅಭಿನಯ’ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ, ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್, ಮುನ್ನುಡಿ ಮುಂತಾದ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

Categories
e-ದಿನ

ಫೆಬ್ರುವರಿ-03

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1377: ಸೆಸೆನಾ ರಕ್ತದೋಕುಳಿ: ಕಂಡೊಟ್ಟಿಯರಿ ಎಂಬ ಪಪಾಲ್ ಸೈನಿಕರಿಂದ 2000 ಇಟಲಿ ಜನರ ಕಗ್ಗೊಲೆ” open=”no”]ಸೆಸೆನಾ ನಗರದಲ್ಲಿ ಕಂಡೊಟ್ಟಿಯರಿ ಎಂಬ ಪಪಾಲ್ ಸೈನಿಕರಿಂದ 2000 ಇಟಲಿ ಜನರ ಕಗ್ಗೊಲೆಯಾಯಿತು.[/fusion_toggle][fusion_toggle title=”1488: ದಕ್ಷಿಣಕ್ಕೆ ಅತಿ ಹೆಚ್ಚು ದೂರ ಪಯಣಿಸಿದ ಪ್ರಥಮ ಯೂರೋಪಿಯನ್ ಬಾರ್ಟೊಲೋಮಿಯೋ ಡಯಾಸ್” open=”no”]ಪೋರ್ಚುಗೀಸ್ ನಾವಿಕನಾದ ಬಾರ್ಟೊಲೋಮಿಯೋ ಡಯಾಸ್ ಎಂಬಾತ ಮೊದಲ ಬಾರಿಗೆ ದಕ್ಷಿಣದ ದಿಕ್ಕಿನಲ್ಲಿ ಅತಿ ಹೆಚ್ಚು ದೂರ ಸಾಗಿದ ಪ್ರಥಮ ಯೂರೋಪಿಗ ಎನಿಸಿದ. ಈತ ಗುಡ್ ಹೋಪ್ ಭೂಶಿರವನ್ನು ದಾಟಿ ‘ಮೊಸೆಲ್ ಬೇ’ ತೀರವನ್ನು ತಲುಪಿದ್ದ.[/fusion_toggle][fusion_toggle title=”1509: ಭಾರತದ ಡಿಯೋ ಯುದ್ಧದಲ್ಲಿ ಜಯಿಸಿದ ಪೋರ್ಚುಗೀಸ್ ನೌಕಾಪಡೆ” open=”no”]ಭಾರತದ ಡಿಯೋ ದ್ವೀಪದಲ್ಲಿ ನಡೆದ ಯುದ್ಧದಲ್ಲಿ ಪೋರ್ಚುಗೀಸ್ ನೌಕಾಪಡೆಯು ಓಟ್ಟೋಮನ್ ಸಾಮ್ರಾಜ್ಯ, ವೆನಿಸ್ ಗಣರಾಜ್ಯ, ಗುಜರಾತಿನ ಸುಲ್ತಾನ, ಈಜಿಪ್ಟಿನ ಮಮ್ಲುಕ್ ಬುರ್ಜಿ ಸುಲ್ತಾನೇಟ್, ಕಲ್ಲಿಕೋಟೆಯ ಜಾಮೊರಿನ್ ಮತ್ತು ರಘುಸಾದ ಗಣರಾಜ್ಯ ಇವುಗಳ ಒಕ್ಕೂಟದ ಸೈನ್ಯವನ್ನು ಸೋಲಿಸಿತು.[/fusion_toggle][fusion_toggle title=”1534: ಐರಿಷ್ ಬಂಡುಕೋರ ಸಿಲ್ಕೆನ್ ಥಾಮಸ್ ಅನ್ನು ಗಲ್ಲಿಗೇರಿಸಿದ ಹೆನ್ರಿ ” open=”no”]ಎಂಟನೆಯ ಹೆನ್ರಿಯು ಐರಿಷ್ ಭಿನ್ನಮತೀಯನಾದ ಸಿಲ್ಕೆನ್ ಥಾಮಸ್ ಅಥವಾ ಥಾಮಸ್ ಫಿಟ್ಸ್ ಗೆರಾಲ್ಡನನ್ನು ಗಲ್ಲಿಗೇರಿಸಿದ.[/fusion_toggle][fusion_toggle title=”1690: ಮೊಟ್ಟಮೊದಲಿಗೆ ಕಾಗದದ ಹಣವನ್ನು ಚಲಾವಣೆಗೆ ತಂದ ಅಮೆರಿಕದ ಮೊದಲ ವಸಾಹತು ಎಣಿಸಿದ ಮಸ್ಸಚುಸೆಟ್ಸ್ ” open=”no”]ಮಸ್ಸಚುಸೆಟ್ಸ್ ವಸಾಹತುವು ಅಮೆರಿಕದಲ್ಲಿ ಕಾಗದದ ಹಣವನ್ನು ಮೊಟ್ಟ ಮೊದಲಿಗೆ ಚಲಾವಣೆಗೆ ತಂದಿತು.[/fusion_toggle][fusion_toggle title=”1870: ಅಮೆರಿಕದಲ್ಲಿ ವರ್ಣಾತೀತವಾಗಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವ ಸಂವಿಧಾನ ತಿದ್ದುಪಡಿಗೆ ಅಸ್ತು” open=”no”]ಅಮೆರಿಕದಲ್ಲಿ ವರ್ಣತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವ ಸಂವಿಧಾನದ ಹದಿನೈದನೇ ತಿದ್ದುಪಡಿಯು ಅಂಗೀಕೃತಗೊಂಡಿತು.[/fusion_toggle][fusion_toggle title=”1913: ಅಮೆರಿಕದಲ್ಲಿ ಆದಾಯ ತೆರಿಗೆ ವಸೂಲಿಗೆ ಸಂವಿಧಾನದ ತಿದ್ದುಪಡಿ” open=”no”]ಅಮೆರಿಕದಲ್ಲಿ ಆದಾಯ ತೆರಿಗೆ ವಿಧಿಸುವ ಮತ್ತು ವಸೂಲಿ ಮಾಡುವ ಸಂವಿಧಾನದ ಹದಿನಾರನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.[/fusion_toggle][fusion_toggle title=”1916: ಮಹಾತ್ಮ ಗಾಂಧೀಜಿಯವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉದ್ಘಾಟನೆ.” open=”no”]ಮಹಾತ್ಮಾ ಗಾಂಧಿಯವರು ಬನಾರಸ್ ಹಿಂದು ವಿಶ್ವ ವಿದ್ಯಾಲಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ವಾರಣಾಸಿಯಲ್ಲಿ ಇರುವ ಈ ವಿಶ್ವವಿದ್ಯಾಲಯವು ವಿಶ್ವದ ಮೂರು ಅತಿದೊಡ್ಡ ವಸತಿ ವ್ಯವಸ್ಥೆ ಉಳ್ಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, 1300 ಎಕರೆ ಪ್ರದೇಶದಲ್ಲಿ ಹರಡಿದೆ. ಇದು 124 ಸಂಯೋಜಿತ ಕಾಲೇಜುಗಳನ್ನೂ ಸೇರಿ ಆರು ಉನ್ನತ ಅಧ್ಯಯನ ಕೇಂದ್ರಗಳನ್ನು ಒಳಗೊಂಡಿದೆ.[/fusion_toggle][fusion_toggle title=”1925: ಭಾರತದಲ್ಲಿ ಮೊಟ್ಟಮೊದಲ ಮೊದಲ ಎಲೆಕ್ಟ್ರಿಕ್ ರೈಲುಸೇವೆ ಆರಂಭ” open=”no”]ಮುಂಬೈನ ವಿಕ್ಟೋರಿಯಾ ಟರ್ಮಿನಸ್ ಇಂದ ಕುರ್ಲಾದವರೆಗೆ ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆಯ ಬಂದರು ಶಾಖೆಯು ಆರಂಭಗೊಂಡಿತು. ಇದು ಭಾರತದಲ್ಲಿ ಪ್ರಾರಂಭಗೊಂಡ ಮೊತ್ತ ಮೊದಲ ಎಲೆಕ್ಟ್ರಿಕ್ ರೈಲುಸೇವೆಯಾಗಿದೆ.[/fusion_toggle][fusion_toggle title=”1933: ಮುಲಾಜಿಲ್ಲದ ಜರ್ಮನೀಕರಣವೇ ತನ್ನ ಧ್ಯೇಯವೆಂದು ಘೋಷಿಸಿದ ಹಿಟ್ಲರ್” open=”no”]ಜರ್ಮನಿಯ ವಸಾಹತು ನೀತಿಯಾದ ‘ಲೆಬೆನ್ಸ್ರಾಮ್’ ಅನ್ನು ಪೂರ್ವ ಯೂರೋಪಿನಲ್ಲಿ ವಿಸ್ತರಿಸುವುದು ಮತ್ತು ಮುಲಾಜಿಲ್ಲದೆ ಜರ್ಮನೀಕರಿಸುವುದು ತಮ್ಮ ಥರ್ಡ್ ರೀಚ್ ವಿದೇಶಾಂಗ ನೀತಿ ಎಂದು ಅಡಾಲ್ಫ್ ಹಿಟ್ಲರ್ ಘೋಷಿಸಿದ.[/fusion_toggle][fusion_toggle title=”1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜರ್ಮನಿಯ ಮೇಲಿನ ಬಾಂಬ್ ಸುರಿಮಳೆಯಲ್ಲಿ ಸುಮಾರು 3000 ಸಾವು ಮತ್ತು ಸೂರು ಕಳೆದುಕೊಂಡ ಒಂದು ಲಕ್ಷ ಇಪ್ಪತ್ತು ಸಾವಿರ ಮಂದಿ” open=”no”]ಎರಡನೇ ವಿಶ್ವಮಹಾಯುದ್ಧದಲ್ಲಿ ಆಪರೇಷನ್ ಥಂಡರ್ ಕ್ಲಾಪ್ ಭಾಗವಾಗಿ ಎಂಟನೇ ವಾಯುಪಡೆಯು ಸುರಿಸಿದ ಒಂದು ಸಾವಿರ ಬಿ-17 ಬಾಂಬ್ ಸುರಿಮಳೆಯಲ್ಲಿ ಸುಮಾರು 2,500 ದಿಂದ 3000 ಜನ ಸಾವಿಗೀಡಾಗಿ, ಒಂದು ಲಕ್ಷ ಇಪ್ಪತ್ತು ಸಾವಿರ ಮಂದಿಯ ಮನೆಗಳು ಧ್ವಂಸವಾಗಿ ಬೀದಿಪಾಲಾದರು.[/fusion_toggle][fusion_toggle title=”1966: ಚಂದ್ರನ ಮೇಲಿಳಿದ ಲೂನಾ 9″ open=”no”]ಸೋವಿಯತ್ ಯೂನಿಯನ್ನಿನ ಬಾಹ್ಯಾಕಾಶ ನೌಕೆ `ಲ್ಯೂನಾ 9′ ಚಂದ್ರನ ಮೇಲಿಳಿಯಿತು.[/fusion_toggle][fusion_toggle title=”1969: ಪ್ಯಾಲೆಸ್ಟೈನ್ ಲಿಬರಲ್ ಆರ್ಗನೈಸೇಶನ್ ನಾಯಕರಾಗಿ ಯಾಸೀರ್ ಅರಾಫತ್ ನೇಮಕ” open=”no”]ಕೈರೋದಲ್ಲಿ ನಡೆದ ಪಾಲೆಸ್ಟೈನ್ ರಾಷ್ತ್ರೀಯ ಕಾಂಗ್ರೆಸ್ಸಿನಲ್ಲಿ ಯಾಸೀರ್ ಅರಾಫತ್ ಅವರು ಪ್ಯಾಲೆಸ್ಟೈನ್ ಲಿಬರಲ್ ಆರ್ಗನೈಸೇಶನ್ ನಾಯಕರಾಗಿ ನೇಮಕಗೊಂಡರು.[/fusion_toggle][fusion_toggle title=”1972: ಇರಾನಿನಲ್ಲಿ ಏಳು ದಿನಗಳ ಭೀಕರ ಹಿಮಪಾತ ಈ ದಿನ ಮೊದಲ್ಗೊಂಡಿತು.” open=”no”]ಇರಾನಿನಲ್ಲಿ ಏಳು ದಿನಗಳ ಭೀಕರ ಹಿಮಪಾತ ಈ ದಿನ ಮೊದಲ್ಗೊಂಡಿತು. ಈ ಹಿಮಪಾತದಲ್ಲಿ ಕಡೇಪಕ್ಷ 4,000 ಜನ ಸಾವಿಗೀಡಾದರು.[/fusion_toggle][fusion_toggle title=”1982: ಧರ್ಮಸ್ಥಳದ ‘ರತ್ನಗಿರಿ’ ಬೆಟ್ಟದ ಮೇಲಿನ ಬಾಹುಬಲಿಗೆ ಮೊದಲ ಮಹಾಮಸ್ತಕಾಭಿಷೇಕ” open=”no”]ಧರ್ಮಸ್ಥಳದ `ರತ್ನಗಿರಿ’ ಬೆಟ್ಟದ ಮೇಲಿನ ಬಾಹುಬಲಿಯ ಮೊದಲ ಮಹಾಮಸ್ತಕಾಭಿಷೇಕವು ಇಂದು ನೆರವೇರಿತು.[/fusion_toggle][fusion_toggle title=”1995: ಬಾಹ್ಯಾಕಾಶ ನೌಕೆಯ ಮೊದಲ ಮಹಿಳಾ ಪೈಲಟ್ ಎನಿಸಿದ ಐಲೀನ್ ಕಾಲಿನ್ಸ್” open=”no”]ನಾಸಾದ ಎಸ್.ಟಿ.ಎಸ್–63ರ ಬಾಹ್ಯಾಕಾಶ ಕಾರ್ಯಕ್ರಮವು ಮೊದಲ್ಗೊಂಡಿದ್ದು ಗಗನಯಾತ್ರಿ ಐಲೀನ್ ಕಾಲಿನ್ಸ್ ಅವರು ಈ ಬಾಹ್ಯಾಕಾಶ ನೌಕೆಯ ಮೊದಲ ಮಹಿಳಾ ಪೈಲಟ್ ಗೌರವಕ್ಕೆ ಪಾತ್ರರಾದರು.[/fusion_toggle][fusion_toggle title=”2006: ಕರ್ನಾಟಕದ ಮುಖ್ಯಮಂತ್ರಿಗಳಾಗಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ” open=”no”]ಕರ್ನಾಟಕ ರಾಜ್ಯದಲ್ಲಿ ಜನತಾದಳ (ಎಸ್) ಮತ್ತು ಭಾರತೀಯ ಜನತಾಪಕ್ಷದ ಮೈತ್ರಿಕೂಟದ ಸರ್ಕಾರವು ರಚನೆಗೊಂಡು, ಕರ್ನಾಟಕದ 18ನೇ ಮುಖ್ಯಮಂತ್ರಿಗಳಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು 5ನೇ ಉಪಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದರು.[/fusion_toggle][fusion_toggle title=”2007: ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ” open=”no”]ಅಂಧರಿಗೂ ಭಗವದ್ಗೀತೆ ಓದಲು ಅವಕಾಶ ಮಾಡಿಕೊಡುವ  ಪ್ರಯತ್ನವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನ ರೋಟರಿ ಸಂಸ್ಥೆಯ ಕಬ್ಬನ್ ಪಾರ್ಕ್ ಶಾಖೆ ಮಾಡಿತು. ಸ್ವಾಮಿ ಚಿನ್ಮಯಾನಂದರು 29 ಆವೃತ್ತಿಗಳಲ್ಲಿ ವಿಶ್ಲೇಷಿಸಿದ ಭಗವದ್ಗೀತೆಯ ಬ್ರೈಲ್ ಲಿಪಿ ಆವೃತ್ತಿಯನ್ನು, ಚಿನ್ಮಯ ಮಿಷನ್ ಮುಖ್ಯಸ್ಥರಾದ ಸ್ವಾಮಿ ಬ್ರಹ್ಮಾನಂದ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.[/fusion_toggle][fusion_toggle title=”2007: ಖಾಸಗಿ ಚಾನೆಲ್ಲುಗಳು ನೇರ ಕ್ರೀಡಾ ಪ್ರಸಾರವನ್ನು ದೂರದರ್ಶನದೊಂದಿಗೆ ಅವಶ್ಯವಾಗಿ ಹಂಚಿಕೊಳ್ಳಬೇಕಾದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಗೀಕಾರ ” open=”no”]ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆಯುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು, ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಹೊರಡಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಅನುಮೋದನೆ ನೀಡಿದರು.[/fusion_toggle][fusion_toggle title=”2007: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವಿಜ್ಞಾನಿಗೆ ಹದಿನಾಲ್ಕು ವರ್ಷ ಜೈಲು ” open=”no”]ವಿಶ್ವ ವಿಖ್ಯಾತ ವಿಜ್ಞಾನಿ ‘ಜೀನ್ ಥೆರೆಪಿ’ಯ ಜನಕ ಎಂದೇ ಪರಿಗಣಿತರಾದ ಎಪ್ಪತ್ತು ವರ್ಷದ ಅಮೆರಿಕದ ವಿಲಿಯಂ ಫ್ರೆಂಚ್ ಆಂಡರ್ಸನ್ ಅವರಿಗೆ ಲಾಸ್ ಏಂಜೆಲಿಸ್ ನ್ಯಾಯಾಲಯವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 14 ವರ್ಷಗಳ ಸೆರೆವಾಸ ವಿಧಿಸಿತು.[/fusion_toggle][fusion_toggle title=”2008: ನೂತನ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಪ್ರಾರಂಭದ ಘೋಷಣೆ” open=”no”]ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಮಾರ್ಚ್ 30ರ ಮಧ್ಯರಾತ್ರಿ 12 ಗಂಟೆಗೆ ಪ್ರಯಾಣ ಬೆಳೆಸುವುದು. ಇದಕ್ಕೆ ಮುಂಚಿತವಾಗಿ ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ವೇಳೆಗೆ ಖಾಸಗಿ ಸಂಸ್ಥೆಯ ವಿಮಾನವೊಂದು ನಿಲ್ದಾಣಕ್ಕೆ ಆಗಮಿಸುವುದು. ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ವಿಮಾನದ ಆಗಮನಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ ಎ ಎಲ್ ಅಧಿಕಾರಿಗಳು ಪ್ರಕಟಿಸಿದರು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1747: ಅಮೆರಿಕದ ಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಸಾಮ್ಯುಯಲ್ ಓಸ್ಗುಡ್ ಜನನ” open=”no”]ಅಮೆರಿಕದ ಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಸಾಮ್ಯುಯಲ್ ಓಸ್ಗುಡ್ ಅವರು ಮೆಸಚುಸೆಟ್ಸ್ ಪ್ರಾಂತ್ಯದ ಆಂಡೋವರ್ ಎಂಬಲ್ಲಿ ಜನಿಸಿದರು. ಅವರು ಅಮೆರಿಕದ ಸೇನಾನಿಯಾಗಿ ಮತ್ತು ರಾಜಕಾರಣಿಯಾಗಿ ಸಹಾ ಹೆಸರಾಗಿದ್ದರು.[/fusion_toggle][fusion_toggle title=”1757: ಇಟಲಿಯ ನೇತ್ರತಜ್ಞ ಮತ್ತು ಶಸ್ತ್ರಚಿಕಿತ್ಸಕ ಜೋಸೆಫ್ ಫ್ಲಾರೆನ್ಸ್ ಜನನ” open=”no”]ಇಟಲಿಯ ನೇತ್ರತಜ್ಞ ಮತ್ತು ಶಸ್ತ್ರಚಿಕಿತ್ಸಕ ಜೋಸೆಫ್ ಫ್ಲಾರೆನ್ಸ್ ಬ್ಯಾಸಿಲಿಕಟ್ ಬಳಿಯ ಪಿಸೆರ್ನೋ ಎಂಬಲ್ಲಿ ಜನಿಸಿದರು. 18 ಮತ್ತು 19ನೇ ಶತಮಾನದ ಮಹತ್ವದ ನೇತ್ರತಜ್ಞರಾದ ಇವರು ಫ್ರಾನ್ಸಿನ ನೆಪೋಲಿಯನಿಕ್ ಸಾಮ್ರಾಜ್ಯದಲ್ಲಿ ನೇತ್ರಪೊರೆ ಶಸ್ತ್ರಚಿಕಿತ್ಸಕರಾಗಿ ಪ್ರಸಿದ್ಧರಾಗಿದ್ದರು.[/fusion_toggle][fusion_toggle title=”1821: ಆಧುನಿಕ ಕಾಲದ ಪ್ರಥಮ ಮಹಿಳಾ ವೈದ್ಯರೆಂಬ ಖ್ಯಾತಿಯ ಎಲಿಜಬೆತ್ ಬ್ಲಾಕ್ವೆಲ್ ಜನನ” open=”no”]ಆಧುನಿಕ ಕಾಲದ ಪ್ರಥಮ ಮಹಿಳಾ ವೈದ್ಯರೆಂಬ ಖ್ಯಾತಿಯ ಎಲಿಜಬೆತ್ ಬ್ಲಾಕ್ವೆಲ್ ಇಂಗ್ಲೆಡಿನ ಬ್ರಿಸ್ಟಲ್ ಎಂಬಲ್ಲಿ ಜನಿಸಿದರು. ಅಮೆರಿಕದಲ್ಲಿ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಇವರು ಯುನೈಟೆಡ್ ಕಿಂಗ್ಡಂನಲ್ಲಿನ ಮೆಡಿಕಲ್ ರಿಜಿಸ್ಟರ್ನಲ್ಲಿ ದಾಖಲಾದ ಪ್ರಥಮ ಮಹಿಳೆಯೂ ಆಗಿದ್ದಾರೆ. ಮಹಿಳೆಯರಿಗೆ ವಿದ್ಯಾಭ್ಯಾಸದಲ್ಲಿ ಪ್ರೇರಕರಾಗಿದ್ದ ಇವರು, ಸಮಾಜದಲ್ಲಿ ಮಾನಸಿಕ ಮತ್ತು ಸಾಮಾಜಿಕವಾಗಿ ಸುಧಾರಣೆ ತರಲು ಸಹಾ ಮಹತ್ವದ ಕೆಲಸವನ್ನು ಮಾಡಿದವರಾಗಿದ್ದಾರೆ.[/fusion_toggle][fusion_toggle title=”1922: ಸಾಹಿತಿ, ವಿದ್ವಾಂಸ, ಸಂಶೋಧಕ ಎಚ್. ಎಸ್. ತಿಪ್ಪೇರುದ್ರಸ್ವಾಮಿ ಜನನ” open=”no”]ಡಾ. ತಿಪ್ಪೇರುದ್ರಸ್ವಾಮಿಯವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು. ಕನ್ನಡ ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರು ತಮ್ಮ ಕರ್ನಾಟಕದ ಸಮಗ್ರ ಸಂಸ್ಕೃತಿ ಚಿಂತನೆಗಳಲ್ಲಿ ರಾಜಕೀಯ, ಇತಿಹಾಸ, ಧರ್ಮ, ಮತ್ತು ಸಾಂಸ್ಕೃತಿಕ ತಳಹದಿಗಳನ್ನು ತೆರೆದಿಟ್ಟಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆಗಾಗಿನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.[/fusion_toggle][fusion_toggle title=”1938: ಚಲನಚಿತ್ರ ಕಲಾವಿದೆ ವಹೀದಾ ರೆಹಮಾನ್ ಜನನ” open=”no”]ಪ್ರಸಿದ್ಧ ನಟಿ ವಹೀದಾ ರೆಹಮಾನ್ ಚೆನ್ನೈ ನಗರದ ಬಳಿಯ ಚೆಂಗಲ್ಪೇಟ್ ಎಂಬಲ್ಲಿ ಜನಿಸಿದರು. ಹಿಂದಿಯ ಅನೇಕ ಚಿತ್ರಗಳಲ್ಲಿ ಅಲ್ಲದೆ ತಮಿಳು, ತೆಲುಗು, ಬಂಗಾಳಿ ಚಿತ್ರಗಳಲ್ಲೂ ನಟಿಸಿದ ಇವರಿಗೆ ಪದ್ಮಭೂಷಣ ಪ್ರಶಸ್ತಿ, ಅನೇಕ ಫಿಲಂ ಫೇರ್ ಮತ್ತು ಇನ್ನಿತರ ಪ್ರಶಸ್ತಿಗಳು ಸಂದಿವೆ.[/fusion_toggle][fusion_toggle title=”1955: ಕವಿ ಡಾ.ಸಿದ್ದಲಿಂಗಯ್ಯ ಜನನ” open=”no”]ಕವಿ ಸಿದ್ಧಲಿಂಗಯ್ಯನವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಸಿದ್ಧಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬಾಬು ಜಗಜೀವನ ರಾಮ್‌ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರದ ಗೀತೆಗೆ ಚಲನಚಿತ್ರ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹಾ ಇವರು ಸೇವೆ ಸಲ್ಲಿಸಿದ್ದಾರೆ.[/fusion_toggle][fusion_toggle title=”1959: ರಂಗಕರ್ಮಿ ಅನಂತರಾಮ್ ಜೆರ್ರಿ ಜನನ ” open=”no”]ಅಪರೂಪದ ಸಂಗೀತ ರಚನೆಗಾರ, ಧ್ವನಿ ಅನ್ವೇಷಕ, ರಂಗಭೂಮಿ ನಟ ಅನಂತರಾಮ್ ಜೆರ್ರಿ ಮೈಸೂರಿನಲ್ಲಿ ಜನಿಸಿದರು. ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳು ಜುಳು ನಾದ ಮುಂತಾದ ಹಿನ್ನೆಲೆ ಸಂಗೀತ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬಿದಿರು, ಪರಂಗಿ ಕೊಂಬು, ಪ್ಲಾಸ್ಟಿಕ್ ಬಕೆಟಿನಿಂದ ಹೊರಹೊಮ್ಮಿಸುವ ನಾದ ವಿಶೇಷತೆಯನ್ನು ಕರಗತ ಮಾಡಿಕೊಂಡಿದ್ದ ಅನಂತರಾಮ್ ತಮ್ಮದೇ ‘ರಂಗಸ್ವರ’ ಸಂಸ್ಥೆಯ ಮೂಲಕ ರಂಗಗೀತೆಗಳ ಪ್ರಚಾರ ನಿರ್ವಹಿಸಿದ್ದರು.[/fusion_toggle][fusion_toggle title=”1963: ಅರ್ಥಶಾಸ್ತ್ರಜ್ಞ ಮತ್ತು ಭಾರತದ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ಜನನ” open=”no”]ಅರ್ಥಶಾಸ್ತ್ರಜ್ಞ ಮತ್ತು ಭಾರತದ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ಜನಿಸಿದರು. ಅವರು ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್’ನ ಉಪಾಧ್ಯಕ್ಷರಾಗಿದ್ದಾರೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1468: ಮುದ್ರಣ ವ್ಯವಸ್ಥೆಯನ್ನು ಕಂಡುಹಿಡಿದ ಜೋಹಾನೆಸ್ ಗುಟೆನ್ಬರ್ಗ್ ನಿಧನ” open=”no”]ಮುದ್ರಣ ವ್ಯವಸ್ಥೆಯನ್ನು ಕಂಡುಹಿಡಿದ ಜರ್ಮನಿಯ ಜೋಹಾನೆಸ್ ಗುಟೆನ್ಬರ್ಗ್ ಅವರು ಮೈನ್ಸ್ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1924: ಅಮೆರಿಕದ ಅಧ್ಯಕ್ಷ, ಇತಿಹಾಸಜ್ಞ ವುಡ್ರೋ ವಿಲ್ಸನ್ ನಿಧನ” open=”no”]ಇತಿಹಾಸಜ್ಞ, ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ವಾಷಿಂಗ್ಟನ್ ನಗರದಲ್ಲಿ ನಿಧನರಾದರು.[/fusion_toggle][fusion_toggle title=”1959: ವಿಮಾನ ಅಪಘಾತದಲ್ಲಿ ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ ಬುಡ್ಡಿ ಹಾಲ್ಲಿ ನಿಧನ” open=”no”]ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ, ಇಪ್ಪತ್ತೆರಡರ ಪ್ರಾಯದ, ಬುಡ್ಡಿ ಹಾಲ್ಲಿ ಅವರು ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ನಿಧನರಾದರು. ಇವರೊಂದಿಗೆ ಪಯಣಿಸುತ್ತಿದ್ದ ರಿಚ್ಚೀ ವ್ಯಾಲೆನ್ಸ್ ಮತ್ತು ಜೆ.ಪಿ. ರಿಚರ್ಡ್ಸನ್ ಅವರುಗಳೂ ನಿಧನರಾದರು.[/fusion_toggle][fusion_toggle title=”1969: ಪ್ರಸಿದ್ಧ ರಾಜಕಾರಣಿ ಮತ್ತು ತಮಿಳು ನಾಡಿನ ಮುಖ್ಯಮಂತ್ರಿ ಅಣ್ಣಾದೊರೈ ನಿಧನ” open=”no”]ಪ್ರಸಿದ್ಧ ರಾಜಕಾರಣಿ ಮತ್ತು ತಮಿಳು ನಾಡಿನ ಮುಖ್ಯಮಂತ್ರಿ ಅಣ್ಣಾದೊರೈ ಚೆನ್ನೈನಲ್ಲಿ ನಿಧನರಾದರು.[/fusion_toggle][fusion_toggle title=”2008: ಜನಪ್ರಿಯ ರಂಗಪ್ರಕಾರ `ನೌಟಂಕಿ’ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ ನಿಧನ” open=”no”]ಜನಪ್ರಿಯ ರಂಗಪ್ರಕಾರ `ನೌಟಂಕಿ’ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ ಜೈಪುರದಲ್ಲಿ ನಿಧನರಾದರು. ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ರಂಗ ಪ್ರಕಾರವಾಗಿರುವ `ನೌಟಂಕಿ’ ಬೆಳವಣಿಗೆ ಮತ್ತು ಅದರ ಜನಪ್ರಿಯತೆಗೆ ಅತ್ಯಂತ ಸೃಜನಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಿರಿಜ ಪ್ರಮುಖರಾಗಿದ್ದರು.[/fusion_toggle][fusion_toggle title=”2009: ಯಕ್ಷಗಾನ ಕಲೆಯ ಮೇರು ಕಲಾವಿದ ಕೆರೆಮನೆ ಶಂಭು ಹೆಗಡೆ ನಿಧನ” open=”no”]ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ನಿಧನರಾದರು. ಇವರು ‘ಶ್ರೀ ಇಡಗುಂಜಿ ಮಹಾಗಣಪತಿ’ ಯಕ್ಷಗಾನ ಮೇಳ ಸಂಘಟಿಸಿ, ದೇಶದ ವಿದೇಶಗಳಲ್ಲಿ ಸಂಚರಿಸಿ, ಐದು ಸಾವಿರಕ್ಕಿಂತಲೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿದ್ದವು.[/fusion_toggle][/fusion_accordion]

Categories
e-ದಿನ

ಫೆಬ್ರವರಿ-02

ಪ್ರಮುಖಘಟನಾವಳಿಗಳು:

1536: ಸ್ಪೈನಿನ ಪೆಡ್ರೋ ಡಿ. ಮೆಂಡೋಜಾ ಅವರು ಅರ್ಜೆಂಟಿನಾದ ಬ್ಯೂನೋ ಐರ್ಸ್ ಅನ್ವೇಷಿಸಿದರು

1653: ಮುಂದೆ ನ್ಯೂಯಾರ್ಕ್ ನಗರವೆಂದು ಹೆಸರಾದ ನ್ಯೂ ಆಮ್ಸ್ಟರ್ಡ್ಯಾಮ್ ಸ್ಥಾಪನೆಗೊಂಡಿತು

1848: ಕ್ಯಾಲಿಫೋರ್ನಿಯಾದಲ್ಲಿ ಚಿನ್ನದ ಬೃಹತ್ ನಿಕ್ಷೇಪ ಪತ್ತೆಯಾದ ಹಿನ್ನೆಲೆಯಲ್ಲಿ, ಚೀನಾದಿಂದ ವಲಸೆಬಂದ ಗಣಿಕಾರ್ಮಿಕರ ಮೊದಲ ಹಡಗು ಸ್ಯಾನ್ ಫ್ರಾನ್ಸಿಸ್ಕೋ ತಲುಪಿತು

1876: ಅಮೆರಿಕದಲ್ಲಿ ನ್ಯಾಷನಲ್ ಲೀಗ್ ಆಫ್ ಪ್ರೊಫೆಶನಲ್ ಬೇಸ್ ಬಾಲ್ ಕ್ಲಬ್ಸ್ ಆರಂಭಗೊಂಡಿತು. ಇದು ಬೇಸ್ ಬಾಲ್ ಆಟದ ಅತ್ಯಂತ ಮಹತ್ವದ ಲೀಗ್ ಎನಿಸಿದೆ.

1913: ಅಮೆರಿಕದ ಪ್ರಮುಖ ರೈಲು ರಸ್ತೆ ನಿಲ್ದಾಣವಾದ ನ್ಯೂಯಾರ್ಕ್ ಗ್ರಾಂಡ್ ಸೆಂಟ್ರಲ್ ಟರ್ಮಿನಲ್ ಕಾರ್ಯಾರಂಭ ಮಾಡಿತು.

1934: ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಯುನೈಟೆಡ್ ಸ್ಟೇಟ್ಸ್ ಸ್ಥಾಪನೆಗೊಂಡಿತು

1934: ಸೋವಿಯತ್ ಸೇನೆಯು ಜರ್ಮನಿಯ ಕೊನೆಯ ಸೇನಾ ತಂಡದ ಶರಣಾಗತಿಯನ್ನು ಅಂಗೀಕರಿಸುವುದರೊಂದಿಗೆ ಸ್ಟಾಲಿನ್ಗ್ರಾಡ್ ಯುದ್ಧವು ಅಂತ್ಯಗೊಂಡಿತು

1971: ಉಗಾಂಡದಲ್ಲಿ ಅಧ್ಯಕ್ಷ ಮಿಲ್ಟನ್ ಒಬೋಟೆ ಸ್ಥಾನದಲ್ಲಿ ಇದಿ ಅಮೀನ್ ಅಧಿಕಾರ ವಹಿಸಿಕೊಂಡ.

1972: ‘ಬ್ಲಡಿ ಸಂಡೆ’ ಪ್ರತೀಕಾರವಾಗಿ ಡಬ್ಲಿನ್ ನಗರದಲ್ಲಿ ಬ್ರಿಟಿಷ್ ರಾಯಭಾರ ಕಚೇರಿ ಧ್ವಂಸಗೊಂಡಿತು. ಜನವರಿ 30, 1972ರಂದು ಉತ್ತರ ಐರ್ಲ್ಯಾಂಡಿನಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರ ಮೇಲೆ ಬ್ರಿಟಿಷ್ ಸೈನಿಕರು ಗುಂಡು ಹಾರಿಸಿ 26 ಜನರನ್ನು ಸಾವಿಗೀಡುಮಾಡಿದ್ದರು.

1990: ವರ್ಣಭೇದ ನೀತಿಯಿದ್ದ ದಕ್ಷಿಣ ಆಫ್ರಿಕಾದಲ್ಲಿ ಆಶಾಕಿರಣವೊಂದು ಮೂಡಿತು. ಎಫ್. ಡಬ್ಲೂ. ಕ್ಲಾರ್ಕ್ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲಿನ ನಿರ್ಬಂಧ ತೆರವುಗೊಳಿಸಿದರಲ್ಲದೆ, ನೆಲ್ಸನ್ ಮಂಡೇಲ ಅವರನ್ನು ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು.

2000: ಪ್ಯಾರಿಸ್ನಲ್ಲಿ ಫಿಲಿಪ್ ಬಿನಾಂಟ್ ಅವರು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಂಸ್ಥೆ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಮುಖೇನ ಮೊದಲ ಡಿಜಿಟಲ್ ಸಿನಿಮಾ ಪ್ರದರ್ಶನ ವ್ಯವಸ್ಥೆಯನ್ನು ಸಾಕಾರಗೊಳಿಸಿದರು.

2004: ಸ್ವಿಸ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ವಿಶ್ವದ ಆಗ್ರಶ್ರೇಯಾಂಕದ ಪುರುಷ ಟೆನಿಸ್ ಆಟಗಾರರಾದರು. ಈ ಸ್ಥಾನವನ್ನು ಅವರು 237 ವಾರಗಳ ಕಾಲ ಉಳಿಸಿಕೊಂಡಿದ್ದರು.

2007: ಇಂಡೊನೆಷ್ಯಾದಲ್ಲಿ 300 ವರ್ಷಗಲ್ಲಿ ಅತ್ಯಂತ ಭೀಕರವಾದ ಪ್ರವಾಹ ಮೊದಲುಗೊಂಡಿತು.

2007: ಕಲಾವಿದ ಎಂ.ಎಫ್. ಹುಸೇನ್ ಅವರ ವುಮನ್ ಅಂಡ್ ಹಾರ್ಸಸ್ ಕಲಾಕೃತಿಯು ದುಬೈಯಲ್ಲಿ ನಡೆದ ಹರಾಜಿನಲ್ಲಿ 4,41,600 ಡಾಲರುಗಳ ದಾಖಲೆ ಮೊತ್ತಕ್ಕೆ ಮಾರಾಟಗೊಂಡಿತು.

2007: ಧರ್ಮಸ್ಥಳದ ಬಾಹುಬಲಿಗೆ ಎಳನೀರು, ಹಾಲು, ಕಬ್ಬಿನಹಾಲು, ಅರಿಷಿಣಗಳ 1008 ಕಲಶಗಳಿಂದ ಅಭಿಷೇಕ ನಡೆಯಿತು. ದೆಹಲಿಯ ಸುರೇಂದ್ರಜೀ ಮೊದಲ ಕಲಶ ಪಡೆದರು.

2008: ಶಾಂತಿ ಪ್ರಕ್ರಿಯೆ ಹಾಗೂ ಮಾನವ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಮತ್ತು ಪರಸ್ಪರ ಸಹಕರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡವು. ಇಸ್ರೋ ಹಾಗೂ ನಾಸಾ ಈ ನಿಟ್ಟಿನ ಒಪ್ಪಂದಕ್ಕೆ ಸಹಿಹಾಕಿದವು. ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಾಸಾ ಆಡಳಿತಾಧಿಕಾರಿ ಮೈಖೆಲ್ ಗ್ರಿಫ್ಫಿನ್ ಹಾಗೂ ಇಸ್ರೊ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಈ ಕುರಿತಾದ ಒಪ್ಪಂದಕ್ಕೆ ಸಹಿ ಮಾಡಿದರು.

2008: ಬೆಸ್ಟ್ ಬೇಕರಿ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಖಾನ್ ಅವರಿಗೆ 38 ಲಕ್ಷ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಆದೇಶಿಸಿತು. ಬೆಸ್ಟ್ ಬೇಕರಿ ಪ್ರಕರಣದಲ್ಲಿ ಹೇಳಿಕೆ ಬದಲಿಸುವ ಸಲುವಾಗಿ ಕಾಂಗ್ರೆಸ್ ಪಾಲಿಕೆ ಸದಸ್ಯ ಚಂದ್ರಕಾಂತ್ ಶ್ರೀವಾತ್ಸವ್ ಅವರಿಂದ ಅಪಾರ ಪ್ರಮಾಣದ ಲಂಚ ಪಡೆದಿರುವ ಆರೋಪ ಜಹೀರಾ ಮೇಲಿತ್ತು.

2008: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ‘ಗೋಲ್ಡನ್ ಚಾರಿಯಟ್’ ರೈಲಿಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಆರಂಭಿಸಿದ ಈ ಐಷಾರಾಮಿ ರೈಲು ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ಸುವರ್ಣರಥ ರೈಲಿಗೆ ಚಾಲನೆ ಕೊಟ್ಟ ವೇದಿಕೆಯಲ್ಲೇ, ಬಡವರ ರೈಲು ಎಂದೇ ಖ್ಯಾತಿ ಪಡೆದಿರುವ ಸಂಪೂರ್ಣ ಹವಾನಿಯಂತ್ರಿತ ‘ಗರೀಬ್ ರಥ’ ರೈಲಿಗೆ ಸಚಿವ ವೇಲು ಚಾಲನೆ ನೀಡಿದರು.

2009: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಗೆ ಒಂಬತ್ತು ಪ್ರಕರಣಗಳಲ್ಲಿ ಮುಂಬೈ ವಿಶೇಷ ನ್ಯಾಯಾಲಯವು ಕಾರಾಗೃಹ ಶಿಕ್ಷೆ ವಿಧಿಸಿತು. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಪುಣೆಯ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿ, ನಕಲಿ ಛಾಪಾ ಕಾಗದದ 8 ಪ್ರಕರಣ ಮತ್ತು ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಿಬಿಐನ ವಿಶೇಷ ನ್ಯಾಯಾಲಯವು ಪರಿಗಣಿಸಿತು. ನ್ಯಾಯಾಲಯವು ಪ್ರತಿಯೊಂದು ಪ್ರಕರಣದಲ್ಲಿ ತಲಾ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಎಲ್ಲ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕಾಗುತ್ತದೆ. ತಾನು ಎಚ್‌ಐವಿ ಸೋಂಕು ಪೀಡಿತನಾಗಿರುವುದರಿಂದ ಶಿಕ್ಷೆಯಿಂದ ತನಗೆ ವಿನಾಯ್ತಿ ನೀಡಬೇಕೆಂದು ತೆಲಗಿ ಮನವಿ ಮಾಡಿಕೊಂಡಿದ್ದರೂ ಅದನ್ನು ನ್ಯಾಯಾಲಯವು ಪರಿಗಣಿಸಲಿಲ್ಲ.

2009: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿಗೆ 197 ವಿಧಾನಸಭಾ ಕ್ಷೇತ್ರಗಳ ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿತು.

ಪ್ರಮುಖಜನನ/ಮರಣ:

1869: ನಾಟಕಶಿರೋಮಣಿ ಅನಮನಪಲ್ಲಿ ವೆಂಕಟ ವರದಾಚಾರ್ ಅವರು ಚಿತ್ರದುರ್ಗದಲ್ಲಿ ಜನಿಸಿದರು. ತಮ್ಮ ರತ್ನಾವಳಿ ನಾಟಕ ಸಭಾ ಮೂಲಕ ಅನೇಕ ಪ್ರಸಿದ್ಧ ನಾಟಕಗಳನ್ನು ಆಡಿದ ವರದಾಚಾರ್ಯರಿದ್ದ ರಂಗಭೂಮಿ ಯುಗವನ್ನು, ಕನ್ನಡ ವೃತ್ತಿ ರಂಗಭೂಮಿಯ ಸ್ವರ್ಣಯುಗವೆಂದು ಪರಿಗಣಿಸಲಾಗಿದೆ. ಇವರು 1926ರ ಏಪ್ರಿಲ್ 4ನೆಯ ದಿನದಂದು ಬೆಂಗಳೂರಿನಲ್ಲಿ ನಿಧನರಾದರು.

1889: ಸ್ವಾತಂತ್ರ್ಯ ಯೋಧೆ, ಗಾಂಧೀ ವಾದಿ, ಸಮಾಜಸೆವಾಕರ್ತೆ ರಾಜಕುಮಾರಿ ಅಮೃತಾ ಕೌರ್ ಲಕ್ನೋದಲ್ಲಿ ಜನಿಸಿದರು. ಅವರು ಸ್ವತಂತ್ರ ಭಾರತದ ಆರೋಗ್ಯ ಸಚಿವರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದರು.

1892: ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ದ ಸಂಸ್ಥಾಪಕರೂ ಆದ ಶ್ರೀ ಪಂಚಾಕ್ಷರ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜನಿಸಿದರು. ಪಂಚಾಕ್ಷರಿ ಗವಾಯಿಗಳು ಕರ್ನಾಟಕಿ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಅಸೀಮ ಗಾಯಕರೆನಿಸಿದ್ದರಲ್ಲದೆ ಬಹುತೇಕ ಎಲ್ಲ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿಯೂ ನಿಷ್ಣಾತರೆನಿಸಿದ್ದರು.

1913: ಸಹಜ ಕೃಷಿಯ ಮಹಾನ್ ಸಾಧಕ ಮತ್ತು ತತ್ವಜ್ಞಾನಿ ಮಸನೋಬು ಫುಕೋಕ ಜಪಾನಿನ ಇಯೋ ಎಂಬಲ್ಲಿ ಜನಿಸಿದರು. ‘ಸ್ವಾಭಾವಿಕ ಕೃಷಿ’ ಅಥವಾ ‘ಏನನ್ನೂ ಮಾಡದೆ ಕೃಷಿ ಮಾಡು’ ಎಂಬುದು ಸಹಜವಾಗಿ ಕಾಡುಗಳು, ಸ್ವಾಭಾವಿಕ ಸಸ್ಯವರ್ಗ ಯಾವ ರೀತಿಯಲ್ಲಿ ತಾನೇ ತಾನಾಗಿ ಬೆಳೆದು ಫಲ ನೀಡುತ್ತದೆಯೋ ಅಂತಹ ರೀತಿಯನ್ನು ಸಿದ್ಧಿಸಿಕೊಂಡು ಮಹತ್ಸಾಧನೆ ಮಾಡಿದಾತನೀತ.

1914: ಮಹಾನ್ ಕಲಾವಿದ ಎಂ.ಜೆ. ಶುದ್ಧೋದನ ಜನಿಸಿದರು. ಬುದ್ಧನ ಅಪೂರ್ವ ಚಿತ್ರಗಳನ್ನು ಬಿಡಿಸಿದ್ದ ಇವರು ಅನೇಕ ವ್ಯಕ್ತಿಚಿತ್ರಗಳನ್ನೂ ಬಿಡಿಸಿದ್ದರು. ಮೈಸೂರಿನ ಜಯಚಾಮರಾಜೇಂದ್ರ ಕಲಾ ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.

1915: ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಕಥೆಗಾರರಾದ ಖುಷ್ವಂತ್ ಸಿಂಗ್ ಅವರು ಈಗ ಪಾಕಿಸ್ತಾನದ ಭಾಗವಾಗಿರುವ ಹಡಲಿ ಎಂಬಲ್ಲಿ ಜನಿಸಿದರು. ಅವರ ಪ್ರಸಿದ್ಧ ಧಾರಾವಾಹಿ ಅಂಕಣ ‘with malice towards one and all’ ಭಾರತದ ಬಹುತೇಕ ದೈನಿಕಗಳಲ್ಲಿ ಆವರ್ತನಗೊಂಡು ಬೃಹತ್ ಓದುಗ ಬಳಗವನ್ನು ಸೃಷ್ಟಿಸಿತು. ಹಲವಾರು ಜನಪ್ರಿಯ ಸಾಹಿತ್ಯಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1923: ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಹಾಕಿ ಆಟಗಾರ, ತರಬೇತು ದಾರ, ಕನ್ವರ್ ದಿಗ್ವಿಜಯ ಸಿಂಗ್ ಉತ್ತರ ಪ್ರದೇಶದ ಬರಬಾಂಕಿ ಎಂಬಲ್ಲಿ ಜನಿಸಿದರು. ‘ಬಾಬು’ ಎಂದು ಕರೆಯಲ್ಪಡುತ್ತಿದ್ದ ಇವರು 1928, 1932, 1936, 1948, 1952ರ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗಳಿಸಿದ ಹಾಕಿ ತಂಡದ ಸದಸ್ಯರಾಗಿದ್ದರಲ್ಲದೆ ಮುಂದಿನ ದಶಕಗಳಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತ್ತು .

1939: ಅಮೆರಿಕದ ಅರ್ಥಶಾಸ್ತ್ರಜ್ಞ ಡೇಲ್ ಟಿ. ಮಾರ್ಟೆನ್ಸೆನ್ ಒರಿಗಾನ್ ಎಂಬಲ್ಲಿ ಜನಿಸಿದರು. ‘ಮಾರ್ಕೆಟ್ಸ್ ವಿಥ್ ಸರ್ಚ್ ಫ್ರಿಕ್ಷನ್ಸ್’ ಕುರಿತಾದ ಚಿಂತನೆಗಾಗಿ ಇವರು 2010ರ ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರವನ್ನು ಸ್ವೀಕರಿಸಿದ್ದರು.

1884: ಹಿಂದೀ ಸಾಹಿತ್ಯವನ್ನು ವೈಜ್ಞಾನಿಕವಾಗಿ ಸಂಜ್ಞೀಕರಿಸಿ, ವಿಭಾಗೀಕರಿಸಿ, ಪ್ರಸ್ತುತ ಪಡಿಸಿದ ಮಹತ್ವದ ಸಾಧಕರಾದ ರಾಮಚಂದ್ರ ಶುಕ್ಲ ನಿಧನರಾದರು. ಯಾವುದೇ ವೈಜ್ಞಾನಿಕ ಸಾಧನಗಳೂ ಇನ್ನೂ ಲಭ್ಯವಿಲ್ಲದಿದ್ದ ಅಂದಿನ ದಿನಗಳಲ್ಲಿ ಇಂತಹ ಸಾಧನೆಯನ್ನು ಮಾಡಿ ‘ಸಾಹಿತ್ಯ ಕಾ ಇತಿಹಾಸ್’ ಪ್ರಕಟಿಸಿದ ಕೀರ್ತಿ ಇವರದ್ದಾಗಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಆಗೋನ ಜಿಲ್ಲೆಯಲ್ಲಿ 1882ರ ವರ್ಷದಲ್ಲಿ ಜನಿಸಿದ್ದರು.

1970: ಬ್ರಿಟಿಷ್ ಗಣಿತಜ್ಞ, ತತ್ವಜ್ಞಾನಿ, ಇತಿಹಾಸಜ್ಞ ಮತ್ತು ಸಾಹಿತಿ ಬರ್ಟ್ರೆಂಡ್ ರಸೆಲ್ ಅವರು ಕ್ಯಾರ್ನಫನ್ ಶೈರ್ ಎಂಬಲ್ಲಿ ನಿಧನರಾದರು. ಎಲ್ಲ ರೀತಿಯ ಪೂರ್ವಾಗ್ರಹ ಯುದ್ಧಪೀಡಿತ ಮನೋಭಾವಗಳ ವಿರುದ್ಧರಾದ ಅವರು ಮುಕ್ತಮನಸ್ಸಿನ ಬರವಣಿಗೆಗೆ ಹೆಸರಾಗಿದ್ದು 1950ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಿದ್ದರು.

1980: ಅಮೆರಿಕದ ಜೈವಿಕ ವಿಜ್ಞಾನಿ ವಿಲಿಯಂ ಹೊವಾರ್ಡ್ ಸ್ಟೀನ್ ನಿಧನರಾದರು. ಇವರಿಗೆ ‘ರಿಬೋನ್ಯುಕ್ಲೀಸ್’ ಕುರಿತಾದ ಮಹತ್ವದ ಕೊಡುಗೆಗಾಗಿ 1972ರ ವರ್ಷದಲ್ಲಿ ರಸಾಯನ ಶಾಸ್ತ್ರಕ್ಕೆ ಸಲ್ಲುವ ನೊಬೆಲ್ ಪುರಸ್ಕಾರ ಸಂದಿತ್ತು.

2006: ಬಹುಭಾಷಾ ಮತ್ತು ಬಹುಶಾಸ್ತ್ರ ವಿದ್ವಾಂಸರಾದ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು. ವೇದ, ವೈದ್ಯಕೀಯ, ಸಕಲ ಧರ್ಮ ಶಾಸ್ತ್ರ, ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಸಂಗೀತಕಲೆ, ಚಿತ್ರಕಲೆ, ಜೀವನಚರಿತ್ರೆ, ಅನುವಾದ, ಸಂಪಾದನೆ, ಜೀವನಸಾಧನೆ ಇತ್ಯಾದಿ ಬಹುಮುಖಿ ಕ್ಷೇತ್ರಗಳಲ್ಲಿ ಕೃತಿ ರಚಿಸಿ ಅತ್ಯದ್ಭುತ ಪ್ರತಿಭೆ ಎಂದೆನಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಗಾಯನ ಸಮಾಜದ ‘ಸಂಗೀತ ಕಲಾ ರತ್ನ’, ವಿವಿಧ ಪ್ರತಿಷ್ಟಿತ ಸಂಸ್ಕೃತ ವಿದ್ಯಾಲಯಗಳ ‘ವೇದರತ್ನ’ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

Categories
e-ದಿನ

ಫೆಬ್ರವರಿ-01

ಪ್ರಮುಖಘಟನಾವಳಿಗಳು:

1327: ಹದಿಹರೆಯದ ಎಡ್ವರ್ಡನಿಗೆ ರಾಜ್ಯಾಭಿಷೇಕ ಮಾಡಲಾಯಿತು. ಆದರೆ ರಾಜ್ಯಾಡಳಿತದ ಚುಕ್ಕಾಣಿಯನ್ನು ಆತನ ತಾಯಿ ಇಸಾಬೆಲ್ಲಾ ಮತ್ತು ಆಕೆಯ ಪ್ರಿಯಕರ್ ರೋಜರ್ ಮಾರ್ಟಿಮರ್ ಹಿಡಿದಿದ್ದರು.

1814: ಫೀಲಿಫೈನ್ಸಿನ ಉಂಟಾದ ಭೀಕರ ಜ್ವಾಲಾಮುಖಿಯಲ್ಲಿ 1200 ಜನ ಅಸುನೀಗಿದರು.

1835: ಮಾರಿಷಸ್ನಲ್ಲಿ ಗುಲಾಮಗಿರಿಯು ಅಂತ್ಯಗೊಂಡಿತು.

1881: ದೆಹಲಿಯಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜು ಸ್ಥಾಪನೆಗೊಂಡಿತು.

1884: ಆಕ್ಸ್ ವರ್ಡ್ ನಿಘಂಟಿನ ಮೊದಲ ಸಂಪುಟವು ಬಿಡುಗಡೆಗೊಂಡಿತು. ಇದು ‘A’ ಇಂದ ‘Ant’ ವರೆಗಿನ ಪದಕೋಶವನ್ನು ಉಳ್ಳದ್ದಾಗಿತ್ತು.

1893: ಥಾಮಸ್ ಆಲ್ವಾ ಎಡಿಸನ್ ಅವರು ನ್ಯೂ ಜೆರ್ಸಿಯ ವೆಸ್ಟ್ ಆರೆಂಜ್ ಎಂಬಲ್ಲಿ ತಮ್ಮ ‘ಬ್ಲಾಕ್ ಮರಿಯಾ’ ಎಂಬ ಚಲನಚಿತ್ರ ಸ್ಟುಡಿಯೋದ ನಿರ್ಮಾಣವನ್ನು ಪೂರ್ಣಗೊಳಿಸಿದರು.

1897: ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಆ ದೇಶದ ಪ್ರಥಮ ಬ್ಯಾಂಕ್ ಆದ ‘ಶಿನ್ಹನ್ ಬ್ಯಾಂಕ್’ ಪ್ರಾರಂಭಗೊಂಡಿತು.

1918: ಬಹುತೇಕ ರಾಷ್ಟ್ರಗಳಂತೆ ರಷ್ಯಾ ದೇಶವು ಗ್ರೆಗೋರಿಯನ್ ಕಾಲೆಂಡರ್ ಅನ್ನು ಅಳವಡಿಸಿಕೊಂಡಿತು.

1942: ಅಮೆರಿಕದ ಅಧಿಕೃತ ರೇಡಿಯೋ ಮತ್ತು ಟೆಲಿವಿಷನ್ ಸೇವೆಯಾದ ‘ವಾಯ್ಸ್ ಆಫ್ ಅಮೆರಿಕ’ದಿಂದ ‘ಆಕ್ಸಿಸ್ ಶಕ್ತಿಗಳಾದ ಜರ್ಮನಿ-ಜಪಾನ್-ಇಟಲಿ’ ಹಿಡಿತದಲ್ಲಿದ್ದ ಪ್ರದೇಶಗಳನ್ನು ಉದ್ದೇಶಿಸಿದ ಕಾರ್ಯಕ್ರಮಗಳ ಪ್ರಸಾರ ಆರಂಭಗೊಂಡಿತು.

1946: ನಾರ್ವೆ ದೇಶದ ಟ್ರಿಗ್ವೆ ಲೈ ಅವರು ವಿಶ್ವಸಂಸ್ಥೆಯ ಪ್ರಥಮ ಸೆಕ್ರೆಟರಿ-ಜನರಲ್ ಆಗಿ ನೇಮಕಗೊಂಡರು.

1946: ಹಂಗೇರಿಯ ಪಾರ್ಲಿಮೆಂಟು ರಾಜಪ್ರಭುತ್ವದ ಆಡಳಿತವನ್ನು ಕೊನೆಗಾಣಿಸಿ, ‘ಹಂಗೆರಿ ಗಣರಾಜ್ಯ’ವನ್ನು ಘೋಷಿಸಿತು.

1964: ಭಾರತ ಸರ್ಕಾರ ಸ್ವಾಮ್ಯದ ಬಂಡವಾಳ ಹೂಡಿಕೆ ಸೇವಾ ಸಂಸ್ಥೆಯಾದ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1977: ಭಾರತದಲ್ಲಿ ರೈಲು ಮ್ಯೂಸಿಯಂ ಸ್ಥಾಪನೆಗೊಂಡಿತು. ಈ ಮಾದರಿಯ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡದ್ದು ಇದೇ ಮೊದಲು.

1977: ಭಾರತದಲ್ಲಿ ತಟ ರಕ್ಷಾಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಸ್ಥಾಪನೆಗೊಂಡಿತು.

1979: 15 ವಷಗಳ ಗಡೀಪಾರಿನ ನಂತರ ಆಯಾತೊಲ್ಲ ಖೊಮೇನಿ ಇರಾನಿಗೆ ವಾಪಸ್ಸಾದರು.

1981: ಆಸ್ಟ್ರೇಲಿಯಾದ ಟ್ರೆವರ್ ಚಾಪೆಲ್ ಅವರು ಅಂಡರ್ ಆರ್ಮ್ ಬೌಲಿಂಗ್ ಮಾಡುವುದರ ಮೂಲಕ ಕ್ರಿಕೆಟ್ ಲೋಕದಲ್ಲೊಂದು ಹೊಸ ವಿವಾದ ಹುಟ್ಟುವುದಕ್ಕೆ ಕಾರಣರಾದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದ ಕೊನೆಯ ಚೆಂಡನ್ನು ಅವರು ಈ ರೀತಿ ಬೌಲ್ ಮಾಡಿದರು.

1982: ಧರ್ಮಸ್ಥಳದಲ್ಲಿ ಬಾಹುಬಲಿ ಪ್ರತಿಷ್ಠಾಪನೆ ನೆರವೇರಿತು.

1985: ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಹಮ್ಮದ್ ಅಜರುದ್ದೀನ್ ಅವರು 122 ರನ್ ಗಳಿಸುವುದರೊಂದಿಗೆ, ತಮ್ಮ ಮೊದಲ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದಾಖಲೆ ನಿರ್ಮಿಸಿದರು.

1989: ಗ್ರೊ ಹಾರ್ಲೆಮ್ ಬ್ರಂಟ್ ಲ್ಯಾಂಡ್ ಅವರು ನಾರ್ವೆ ದೇಶದ ಮೊದಲ ಮಹಿಳಾ ಪ್ರಧಾನಿ ಎನಿಸಿದರು.

1992: ಭೋಪಾಲ್ ಅನಿಲ ದುರಂತದ ಸಂಬಂಧಿತ ವಿಚಾರಣೆಗೆ ಹಾಜರಾಗದೆ ಇದ್ದ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿಯಾದ ವಾರೆನ್ ಅಂಡರ್ಸನ್ ಅವರನ್ನು ಭೋಪಾಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ದೇಶಭ್ರಷ್ಟನೆಂದು ಘೋಷಿಸಿದರು.

2003: ತನ್ನ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡಿತು. ಭಾರತೀಯ ಮೂಲಸಂಜಾತೆ ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

2004: ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿನ ನೂಕುನುಗ್ಗಲಿನಲ್ಲಿ, ಕಾಲ್ತುಳಿತದಿಂದ 251 ಯಾತ್ರಿಗಳು ಮೃತರಾಗಿ, 244 ಜನ ಗಾಯಾಳುಗಳಾದರು.

2005: ನೇಪಾಳದ ದೊರೆ ಜ್ಞಾನೇಂದ್ರ ಅವರು ಸರ್ಕಾರವನ್ನು ರದ್ದು ಪಡಿಸಿ, ಪೂರ್ಣ ಅಧಿಕಾರವನ್ನು ತಮ್ಮ ಕೈಗೇ ತೆಗೆದುಕೊಂಡರು.

2006: ಕೇಂದ್ರ ಸಚಿವ ಸಂಪುಟವು, ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಅಧುನೀಕರಣ ಹರಾಜು ಪ್ರಕ್ರಿಯೆಗೆ ಸಮ್ಮತಿ ನೀಡಿತು.

2007: ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆಯುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು, ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತು.

2007: ಡಯೋರಿಯಾ ಅಥವ ಅತಿಸಾರ ನಿಯಂತ್ರಿಸಲು ಉಪ್ಪು-ಸಕ್ಕರೆ ಮಿಶ್ರಿತ ನೀರು ಸೇವನೆ ಅತ್ಯಂತ ಪರಿಣಾಮಕಾರಿ ಕ್ರಮ ಎಂಬುದನ್ನು ಕಂಡು ಹಿಡಿದ ಕೋಲ್ಕತದ ಅನ್ವಯಿಕ ಅಧ್ಯಯನ ಸಂಸ್ಥೆಯ ವೈದ್ಯ ದಿಲೀಪ್ ಮಹಲ್ನೊಬಿಸ್ ಮತ್ತು ಇತರ ಮೂವರು ತಜ್ಞರಿಗೆ, 2006ನೇ ಸಾಲಿನ ಪ್ರತಿಷ್ಠಿತ ‘ಪ್ರಿನ್ಸ್ ಮಹಿಡಾಲ್’ ಪ್ರಶಸ್ತಿ ಲಭಿಸಿತು. ಥಾಯ್ ರಾಜಮನೆತನದ ಗೌರವವಾದ 50 ಸಾವಿರ ಡಾಲರ್ ನಗದು ಮೊತ್ತದ ಈ ಪ್ರಶಸ್ತಿಯನ್ನು ದೊರೆ ಭೂಮಿಬಲ್ ಅತುಲ್ಯ ತೇಜ್ ಅವರು ಬ್ಯಾಂಕಾಕಿನಲ್ಲಿ ಪ್ರದಾನ ಮಾಡಿದರು.

2007: ಸುನೀತಾ ವಿಲಿಯಮ್ಸ್ ಅವರು ತಮ್ಮ ಒಂಬತ್ತು ದಿನಗಳ ಬಾಹ್ಯಾಕಾಶ ನಡಿಗೆಯ ಮೊದಲ ಹಂತದಲ್ಲಿನ ಮೂರು ನಡಿಗೆಯನ್ನು ಸಹವರ್ತಿಗಳಾದ ಕಮಾಂಡರ್ ಮೈಕೇಲ್ ಲೋಪೆಜ್ ಅಲೆಗ್ರಿಯಾ ಜೊತೆಗೆ ಆರಂಭಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗಿರುವ ಕಷ್ಟಕರವಾದ ಅಮೋನಿಯಾ ಕೋಲಿಂಗ್ ಲೈನ್ಸ್ ಹಾದಿಯಲ್ಲಿ ಸುನೀತಾ ಅವರು ತಮ್ಮ ನಡಿಗೆಯನ್ನು ಪ್ರಾರಂಭ ಮಾಡಿದರು.

2008: ವಾಂಗ್ ಎಂಬ ಚೀನಾದ ವೂಲಾಂಗ್ ಪ್ರಾಂತ್ಯದ ನಿವಾಸಿಯೊಬ್ಬ, ತಾನು ನಾಜಿಂಗ್ ಪಟ್ಟಣದ ಮೇಯರ್ ಆಗಿದ್ದ ಸಂದರ್ಭದಲ್ಲಿ ಲಂಚ ಪಡೆದದ್ದಕ್ಕಾಗಿ ಮರಣದಂಡನೆಗೆ ಗುರಿಯಾದ.

2009: ಭಾರತದ ಟೆನಿಸ್ ಪಟುಗಳಾದ ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್ಪಿನ ಮಿಶ್ರ ಡಬ್ಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದರು. ಈ ಜೋಡಿ ಪ್ರಾನ್ಸಿನ ನಥಾಲಿ ಡೆಚಿ ಮತ್ತು ಇಸ್ರೇಲಿನ ರಾಂಡಿ ರಾಮ್ ಜೋಡಿಯನ್ನು 6-3 ಮತ್ತು 6-1 ನೇರ ಸೆಟ್ಗಳಲ್ಲಿ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪ್ರಮುಖಜನನ/ಮರಣ:

1905: ಭೌತಶಾಸ್ತ್ರಜ್ಞ ಎಮಿಲೋ ಎಸ್. ಸೀಗ್ರೆ ಅವರು ಇಟಲಿಯ ತಿವೋಲಿಯಲ್ಲಿ ಜನಿಸಿದರು. ಮುಂದೆ ಅವರು ಅಮೆರಿಕದಲ್ಲಿ ನೆಲೆಸಿದರು. ಟೆಕ್ನೇಟಿಯಂ, ಅಸ್ಟಾಟೈನ್ ಮುಂತಾದ ಅಂಶಗಳನ್ನೂ ಹಾಗೂ ಉಪ ಅಣು ಅಂಶವಾದ (ಸಬ್ ಆಟೋಮಿಕ್ ಆಂಟಿಪಾರ್ಟಿಕಲ್) ಆಂಟಿಪ್ರೊಟಾನ್ ಅನ್ನು ಕಂಡುಹಿಡಿದ ಇವರಿಗೆ 1959ರ ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1919: ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ ‘ಸಂಸ್ಕಾರ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಪಟ್ಟಾಭಿರಾಮರೆಡ್ಡಿ. ಈ ಚಿತ್ರಕ್ಕಾಗಿ ಅವರು ಭಾರತ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಪಡೆದರು. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಅವರು ಶ್ರೇಷ್ಠ ನಿರ್ದೇಶಕರಿಗೆ ಸಲ್ಲುವ ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

1929: ವೃತ್ತಿ ರಂಗಕರ್ಮಿ ಕಂಠಿ ಹನುಮಂತರಾಯ ಅವರು ವಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನ ನಾಗರಾಳದಲ್ಲಿ ಜನಿಸಿದರು. ಲೇಖಕರಾಗಿಯೂ ಸಾಧನೆ ಮಾಡಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

1930: ‘ದಿ ಟೈಮ್ಸ್’ ಪತ್ರಿಕೆ ಮೊದಲ ಬಾರಿಗೆ ‘ಪದಬಂಧ ’(crossword) ಪ್ರಕಟಿಸಿತು

1931: ರಷ್ಯದ ಅಧ್ಯಕ್ಷ ಬೋರಿಸ್ ಯೆಲ್ಸಿನ್ ರಷ್ಯಾದ ಬುಟ್ಕ ಎಂಬಲ್ಲಿ ಜನಿಸಿದರು. 2007ರಲ್ಲಿ ನಿಧನರಾದ ಇವರು 1991ರಿಂದ 1999 ಅವಧಿಯಲ್ಲಿ ಅಧಿಕಾರರೂಢರಾಗಿದ್ದರು.

1940: ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ ಅವರು ಉಡುಪಿ ತಾಲ್ಲೂಕಿನ ಉಚ್ಚಿಲ ಗ್ರಾಮದಲ್ಲಿ ಜನಿಸಿದರು. ರಂಗಭೂಮಿಯ ನಟ-ನಿರ್ದೇಶಕರಾರಿರುವುದರ ಜೊತೆಗೆ ವಿವಿಧ ರೀತಿಯ 40ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

1940: ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ಫಿಲಿಪ್ ಫ್ರಾನ್ಸಿಸ್ ನೊವಾಲನ್ ಫಿಲೆಡೆಲ್ಫಿಯಾದಲ್ಲಿ ನಿಧನರಾದರು. ವಿಜ್ಞಾನ ಕೌತುಕ ಕಾದಂಬರಿಗಳಿಗೆ ಹೆಸರಾದ ಇವರು, ‘ಬಕ್ ರೋಜರ್ಸ್’ ಕೃತಿಗಾರರೆಂದು ವಿಶ್ವಪ್ರಸಿದ್ಧರಾಗಿದ್ದಾರೆ.

1958: ಅಮೆರಿಕದ ಭೌತವಿಜ್ಞಾನಿ ಕ್ಲಿಂಟನ್ ಡೇವಿಸ್ಸನ್ ವರ್ಜೀನಿಯಾದಲ್ಲಿ ನಿಧನರಾದರು.ಎಲೆಕ್ಟ್ರಾನ್ ಡಿಫ್ರಕೇಶನ್ ಕುರಿತಾದ ಇವರ ಡೇವಿಸ್ಸನ್-ಜೆರ್ಮರ್ ಸಂಶೋಧನೆಗಾಗಿ 1937 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1976: ಜರ್ಮನಿಯ ಭೌತಶಾಸ್ತ್ರಜ್ಞ ವೆರ್ನರ್ ಹೀಸೆನ್ಬರ್ಗ್ ಅವರು ಮ್ಯೂನಿಚ್ ನಗರದಲ್ಲಿ ನಿಧನರಾದರು. ‘ಕ್ವಾಂಟಮ್ ಮೆಕಾನಿಕ್ಸ್’ ಸಾಧನೆಗಾಗಿ ಅವರಿಗೆ 1932ರ ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1976: ಅಮೆರಿಕದ ವೈದ್ಯ ಶಾಸ್ತ್ರಜ್ಞ ಜಾರ್ಜ್ ವಿಪ್ಪಲ್ ಅವರು ನ್ಯೂಯಾರ್ಕಿನ ರೋಚೆಸ್ಟರ್ ಎಂಬಲ್ಲಿ ನಿಧನರಾದರು. ಅನಿಮಿಯಾ ಸಂದರ್ಭಗಳಲ್ಲಿ ಕರುಳಿನ ಚಿಕಿತ್ಸೆ ಕುರಿತಾದ ಇವರ ಸಂಶೋಧನೆಗಾಗಿ ಇವರಿಗೆ 1934ರ ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1986: ಸ್ವೀಡನ್ನಿನ ರಾಜಕಾರಣಿ, ಸಮಾಜಶಾಸ್ತ್ರಜ್ಞೆ ಮತ್ತು ವಿಶ್ವಶಾಂತಿ ಕಾರ್ಯಕರ್ತೆ ಆಲ್ವಾ ಮಿರ್ಡಾಲ್ ಡೇನ್ರಿಡ್ ಎಂಬಲ್ಲಿ ಜನಿಸಿದರು. ಇವರಿಗೆ 1982ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

2003: ಭಾರತೀಯ ಮೂಲಸಂಜಾತೆ ಅಮೆರಿಕದ ಪ್ರಜೆ ಕಲ್ಪನಾ ಚಾವ್ಲಾ ಅವರು ಬಾಹ್ಯಾಕಾಶ ಅಪಘಾತದಲ್ಲಿ ನಿಧನರಾದರು. ತನ್ನ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡು, ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

2012: ಪೋಲೆಂಡಿನ ಕವಯತ್ರಿ ವಿಸ್ಲವಾ ಸಿಮ್ಬೋರ್ಸ್ಕಾ ಅವರು ಕ್ರಾಕೊವ್ ಎಂಬಲ್ಲಿ ನಿಧನರಾದರು. ಕವಯತ್ರಿ, ಪ್ರಬಂಧಗಾರ್ತಿ ಮತ್ತು ಅನುವಾದಕಿಯಾದ ಅವರಿಗೆ 1996ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2013: ಬಂಗಾಳದ ಪ್ರಸಿದ್ಧ ಚಿತ್ರಗಾರ್ತಿ ಶಾನು ಲಹಿರಿ ಕೋಲ್ಕತ್ತದಲ್ಲಿ ನಿಧನರಾದರು. ಸಾರ್ವಜನಿಕ ಚಿತ್ರಕಲೆ ಮತ್ತು ಗ್ರಾಫಿಟಿ ಚಿತ್ರಕಲೆಯಲ್ಲಿ ಪ್ರಸಿದ್ಧರಾದ ಆಕೆ, ಕೊಲ್ಕತ್ತಾ ನಗರವನ್ನು ಸಿಂಗರಿಸುವ ಸಲುವಾಗಿ ನಗರದ ತುಂಬಾ ವ್ಯಾಪಕವಾಗಿ ಚಿತ್ರಗಳನ್ನು ರಚಿಸಿ ರಾಜಕೀಯದ ಭಿತ್ತಿಗಳು ಕಣ್ಣಿಗೆ ಕಾಣದಂತೆ ಮಾಡಿದ್ದರು.

Categories
e-ದಿನ

ಜನವರಿ-31

ಪ್ರಮುಖಘಟನಾವಳಿಗಳು:

1606: ಸಿಡಿಮದ್ದು ಬಳಸಿ ಹೌಸ್ ಆಫ್ ಲಾರ್ಡ್ಸ್ ಅನ್ನು ಸಿಡಿಸಿ ಆ ಮೂಲಕ ಚಕ್ರವರ್ತಿ ಜೇಮ್ಸ್ ಅನ್ನು ಕೊಲ್ಲುವ ವಿಫಲ ಷಡ್ಯಂತ್ರ ನಡೆಸಿದ ಗೈ ಫಾಕ್ಸ್ ಎಂಬಾತನಿಗೆ ಮರಣದಂಡನೆ ವಿಧಿಸಲಾಯಿತು.

1747: ಮೊದಲ ಗುಹ್ಯ ರೋಗಗಳ ಚಿಕಿತ್ಸಾ ಕೇಂದ್ರ ಲಂಡನ್ ಲಾಕ್  ಆಸ್ಪತ್ರೆಯಲ್ಲಿ ಪ್ರಾರಂಭಗೊಂಡಿತು.

1862: ಅಲ್ವಾನ್ ಗ್ರಹಾಮ್ ಕ್ಲಾರ್ಕ್ ಅವರು ತಮ್ಮ 18.5 ಅಂಗುಲ ದೂರದರ್ಶಕ ಯಂತ್ರ ಉಪಯೋಗಿಸಿ ಸೈರಸ್ ಸಂಗಾತಿಯಾದ  ಬಿಳಿ ಕುಬ್ಜ ಗ್ರಹ ‘ಸೈರಸ್ ಬಿ’ ಅನ್ನು ಗುರುತಿಸಿದರು.  ಈ ದೂರದರ್ಶಕ ಯಂತ್ರ ಈಗಲೂ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿದೆ.

1865: ಅಮೆರಿಕನ್ ಅಂತರ್ಯುದ್ಧ: ಅಮೆರಿಕವು ಗುಲಾಮಗಿರಿಯನ್ನು ನಿರ್ಮೂಲಮಾಡುವ ಹದಿಮೂರನೇ ಸಂವಿಧಾನ ತಿದ್ದುಪಡಿಯನ್ನು ಮಾಡಿ, ಅದನ್ನು ಅಂಗೀಕರಿಸಲು ಎಲ್ಲಾ ರಾಜ್ಯಗಳಿಗೂ ಸಲ್ಲಿಸಿತು.

1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಬಹುತೇಕ ವಿಶ್ವದೆಲ್ಲೆಡೆಯಂತೆ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು.

1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ, ಫೀಲ್ಡ್ ಮಾರ್ಷಲ್ ಪೌಲಸ್ ಅವರು  ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.

1945: ಅಮೆರಿಕದ ಸೈನ್ಯದ ಗುಪ್ತಚರನಾದ ಎಡ್ಡಿ ಸ್ಲೊವಿಕ್ ಅನ್ನು ರಾಜದ್ರೋಹದ ಆಪಾದನೆಯಿಂದ  ಕೊಲ್ಲಲಾಯಿತು. ಅಮೆರಿಕದ ಆಂತರಿಕ ಯುದ್ಧದ ನಂತರದಲ್ಲಿ ಇಂತಹ ಘಟನೆ ನಡೆದದ್ದು ಇದೇ ಮೊದಲು.

1945: ಎರಡನೇ ವಿಶ್ವ ಮಹಾಯುದ್ಧ: ಸ್ಟುಥಾಫ್ ಕಾನ್ಸೆಂಟ್ರೇಷನ್ ಕ್ಯಾಂಪಿನಲ್ಲಿದ್ದ 3000 ನಿವಾಸಿಗಳನ್ನು ಬಲವಂತದಿಂದ ಪಾಲ್ಮಿಕನ್ನಿನಲ್ಲಿ  ಅಲ್ಲಿ ಬಾಲ್ಟಿಕ್ ಸಮುದ್ರದಲ್ಲಿ ನಡೆಯುವಂತೆ ಮಾಡಿ ಹತ್ಯೆ ಮಾಡಲಾಯಿತು.

1950: ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕದ ಬಾಂಬ್ ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ಪ್ರಕಟಿಸಿದರು.

1958: ಅಮೆರಿಕಾದ ಮೊದಲ ಉಪಗ್ರಹ ‘ಎಕ್ಸ್ ಪ್ಲೋರರ್-1′   ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು. ಅದು ಯಶಸ್ವಿಯಾಗಿ ವಾನ್ ಅಲೆನ್ ರೇಡಿಯೇಶನ್ ಬೆಲ್ಟ್ ಅನ್ನು ಪತ್ತೆ ಹಚ್ಚಿತು.

1963: ನವಿಲನ್ನು ಭಾರತದ ‘ರಾಷ್ಟ್ರೀಯ ಪಕ್ಷಿ’ ಎಂದು  ಘೋಷಿಸಲಾಯಿತು.

1966: ಸೋವಿಯತ್ ಯೂನಿಯನ್ ಮನುಷ್ಯರಿಲ್ಲದ ಗಗನ ನೌಕೆ ‘ಲೂನಾ 9’ ಅನ್ನು ಉಡಾಯಿಸಿತು

1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಚೆಲ್  ಅವರನ್ನು ಹೊತ್ತ ‘ಅಪೋಲೋ 14’ ಬಾಹ್ಯಾಕಾಶ ಯಾತ್ರೆ ಪ್ರಾರಂಭಗೊಂಡಿತು.  ಈ ಯಾನವು ಚಂದ್ರನಲ್ಲಿ ಫ್ರಾ ಮಾರೋ ಹೈಲ್ಯಾಂಡ್ಸ್ ಎಂಬಲ್ಲಿನ ಕಾರ್ಯಾಚರಣೆ ಉದ್ದೇಶ ಹೊಂದಿತ್ತು.

2007: ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ‘ಗಾಂಧಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.

2007: ಕಾವೇರಿ ನದಿ ದಂಡೆಯ ಮೇಲಿರುವ ಟಿ. ನರಸೀಪುರದಲ್ಲಿ ಏಳನೇ ಮಹಾಕುಂಭಮೇಳ  ಆರಂಭಗೊಂಡಿತು.

2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ‘ಬೇಲೂರು ಚನ್ನಕೇಶವ ದೇವಾಲಯ’ ಸ್ತಬ್ಧಚಿತ್ರವು ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು.

2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು.

2009: ಭಾರತದ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್‌ನ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು.

2010: ‘ಅವತಾರ್’ ವಿಶ್ವದಾದ್ಯಂತ  2 ಬಿಲಿಯನ್ ಗಳಿಸಿದ ಪ್ರಥಮ ಚಲನಚಿತ್ರವೆನಿಸಿತು.

ಪ್ರಮುಖಜನನ/ಮರಣ:

1868: ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕನ್ನರಾದ ವಿಲಿಯಮ್ ರಿಚರ್ಡ್ಸ್ ಅವರು ಪೆನ್ಸಿಲ್ವೇನಿಯಾದ ಜರ್ಮನ್ ಟೌನ್ ಎಂಬಲ್ಲಿ ಜನಿಸಿದರು.  ಕೆಮಿಕಲ್ ಎಲಿಮೆಂಟ್ಸ್ ಗಳಲ್ಲಿ ಇರುವ ಆಟೋಮಿಕ್ ತೂಕವನ್ನು ಖಚಿತವಾಗಿ ಹೇಳುವ ಮಾದರಿಯನ್ನು ಇವರು ಪ್ರಸ್ತುತಪಡಿಸಿದರು.

1884: ಜರ್ಮನಿಯ ಪ್ರಥಮ ಅಧ್ಯಕ್ಷರಾದ ಥಿಯೋಡರ್ ಹಿಯಸ್ ಜನಿಸಿದರು.

1896: ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಹಿತ್ಯ ಸೇವೆ ಸಲ್ಲಿಸಿರುವ ಬೇಂದ್ರೆಯವರಿಗೆ   ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಶ್ರೀ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ‘ನಾಕು ತಂತಿ’ ಕವನ ಸಂಕಲನಕ್ಕೆ ‘ಜ್ಞಾನಪೀಠ ಪ್ರಶಸ್ತಿ’  ಮುಂತಾದ ಅನೇಕ ಗೌರವಗಳು ಸಂದವು.  ಅಕ್ಟೋಬರ್ 26, 1986ರ ದೀಪಾವಳಿಯಂದು ಕೀರ್ತಿಶೇಷರಾದರು.

1902: ಸ್ವೀಡನ್ನಿನ ರಾಜಕಾರಣಿ, ಸಮಾಜಶಾಸ್ತ್ರಜ್ಞೆ  ಮತ್ತು ವಿಶ್ವಶಾಂತಿ ಕಾರ್ಯಕರ್ತೆ ಆಳ್ವಾ ಮಿರ್ಡಾಲ್ ಉಪ್ಸಲ ಎಂಬಲ್ಲಿ ಜನಿಸಿದರು.   ಇವರಿಗೆ 1982ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1927: ಅಮೆರಿಕದ ಪ್ರಸಿದ್ಧ ಚಿತ್ರೋದ್ಯಮಿ ಫಿಲ್ಮೆಶನ್ ಸ್ಟುಡಿಯೊಸ್ ಸ್ಥಾಪಕ ನಾರ್ಮ್ ಪ್ರೆಸ್ಕಾಟ್ ಜನಿಸಿದರು.

1929: ಜರ್ಮನಿಯ ಭೌತವಿಜ್ಞಾನಿ ರುಡೊಲ್ಫ್ ಮೊಸ್ಸಬಾವರ್ ಮ್ಯೂನಿಚ್ನಲ್ಲಿ ಜನಿಸಿದರು.  ಅವರ ‘ರಿಕಾಯಿಲ್’ಲೆಸ್ ನ್ಯೂಕ್ಲಿಯರ್ ರೆಸೋನಾನ್ಸ್ ಫ್ಲೋರೋಸೆನ್ಸ್’ ಸಂಶೋಧನೆಗಾಗಿ 1961 ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1935: ಜಪಾನಿನ ಸಾಹಿತಿ ಕೇನ್ಸಬುರೋ ಓಎ ಜನಿಸಿದರು.  ಅವರ  ಕಥೆ, ಕಾದಂಬರಿ ಮತ್ತು ಪ್ರಬಂಧಗಳಲ್ಲಿ ರಾಜಕೀಯ, ಸಾಮಾಜಿಕ,ಆಧ್ಯಾತ್ಮಿಕ ಅಂಶಗಳೇ ಅಲ್ಲದೆ, ಅಣ್ವಸ್ತ್ರ, ಅಣುಶಕ್ತಿ, ಸಾಮರಸ್ಯ ಕಳೆದುಕೊಳ್ಳುತ್ತಿರುವ  ಸಾಮಾಜಿಕ ಬದುಕಿನ ಸ್ಥಿತಿಗತಿಗಳ  ವಿಸ್ತೃತ ಅಧ್ಯಯನವಿದೆ.  ಅವರಿಗೆ 1994ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ನ್ಯೂ ಜೆರ್ಸಿಯ ಲಾಂಗ್ ಬ್ರಾಂಚ್ ಎಂಬಲ್ಲಿ ಜನಿಸಿದರು.  ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ ನೈಜ ಘಟನೆಗಳನ್ನು ನಿರೂಪಿಸುವ ಪತ್ರಿಕೋದ್ಯಮ ವಿಧಾನವನ್ನು ರೂಪಿಸಿದ ಕೀರ್ತಿ ಇವರದ್ದಾಗಿದೆ.

1933: ನೊಬೆಲ್ ಪುರಸ್ಕೃತ ಇಂಗ್ಲಿಷ್ ಸಾಹಿತಿ ಜಾನ್ ಗ್ಯಾಲ್ಸೋವರ್ತಿ ಲಂಡನ್ನಿನಲ್ಲಿ ನಿಧನರಾದರು.  ಅವರ ಫೋರ್ಸೈಟ್ ಸಾಗ ಮತ್ತದರ ಸರಣಿ ಕಥಾನಕಗಳಾದ  ಎ ಮಾಡರ್ನ್ ಕಾಮಿಡಿ ಮತ್ತು ಎಂಡ್ ಆಫ್ ದಿ ಚಾಪ್ಟರ್ ಪ್ರಖ್ಯಾತವಾಗಿದ್ದವು.  ಅವರಿಗೆ 1932ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1954: ಅಮೆರಿಕದ ತಂತ್ರಜ್ಞ, ಎಫ್ ಎಮ್ ರೇಡಿಯೋ ಜನಕ ಎಡ್ವಿನ್ ಹೊವಾರ್ಡ್ ಆರ್ಮ್ ಸ್ಟ್ರಾಂಗ್  ನ್ಯೂಯಾರ್ಕಿನ ಮ್ಯಾನ್ ಹಟನ್ ಎಂಬಲ್ಲಿ ನಿಧನರಾದರು.

1956: ಇಂಗ್ಲಿಷ್ ಬರಹಗಾರ, ಟೆಡ್ಡಿ ಬೇರ್ ವಿನ್ನಿ-ದಿ-ಪೂಹ್ ಸೃಷ್ಟಿಕರ್ತ ಎ.ಎ. ಮಿಲ್ನೆ ಇಂಗ್ಲೆಂಡಿನ ಸಸೆಕ್ಸ್ ಬಳಿಯ ಹ್ಯಾಟ್ಫೀಲ್ಡ್ ಎಂಬಲ್ಲಿ ನಿಧನರಾದರು.

1973: ನಾರ್ವೆಯ ಅರ್ಥಶಾಸ್ತ್ರಜ್ಞ ರಾಗ್ನರ್ ಫ್ರಿಸ್ಚ್ ಓಸ್ಲೋದಲ್ಲಿ ನಿಧನರಾದರು. 1969ರ ವರ್ಷದಲ್ಲಿ ಅವರಿಗೆ  ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ ಬೆಂಗಳೂರಿನಲ್ಲಿ ನಿಧನರಾದರು. ಭೌತಶಾಸ್ತ್ರ ಅಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ,  ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಕರ್ನಾಟಕದಲ್ಲಿನ  ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿ ತಮ್ಮ  ಸರ್ವಸ್ವವನ್ನೂ ಅದಕ್ಕೆ ಕೊಟ್ಟವರಾಗಿ ಮಹತ್ವದ ಸೇವೆ ಸಲ್ಲಿಸಿದರು. ಅವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಅನೇಕ ವಿಶ್ವವಿದ್ಯಾಲಯಗಳ  ಡಾಕ್ಟರೇಟ್ ಗೌರವವೂ ಒಳಗೊಂಡಂತೆ ಅನೇಕ  ಪ್ರಶಸ್ತಿಗಳು ಸಂದಿದ್ದವು.

2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಪ್ರಸಿದ್ಧ ಕಾದಂಬರಿಕಾರ ಸಿಡ್ನಿ ಶೆಲ್ಡನ್  ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2009: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ, ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿದ್ದ ತಾಯ್ ನಾಗೇಶ್ ನಿಧನರಾದರು. ಅವರು ಹಲವಾರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು.

Categories
e-ದಿನ

ಜನವರಿ-30

ದಿನಾಚರಣೆ:
ಹುತಾತ್ಮರ ದಿನ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹಂತಕನ ಗುಂಡಿಗೆ ಬಲಿಯಾದ ಈ ದಿನವನ್ನು ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಮಹನೀಯರಿಗೆ ಗೌರವ ಸಲ್ಲಿಸುವ ‘ಹುತಾತ್ಮರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. 1948ರ ಜನವರಿ 30ರ ಈ ದಿನದಂದು ಸಂಜೆ 5.10 ಗಂಟೆಗೆ ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಮಂದಿರಕ್ಕೆ ತೆರಳುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು ನಾಥೂರಾಂ ಗೋಡ್ಸೆಯ ಗುಂಡೇಟಿನ ದೆಸೆಯಿಂದ ತಮ್ಮ ಈ ಲೋಕದ ಬದುಕಿಗೆ ವಿದಾಯ ಹೇಳಿದರು.

ಪ್ರಮುಖಘಟನಾವಳಿಗಳು:

1607: ಇಂಗ್ಲೆಂಡಿನ ಬ್ರಿಸ್ಟಲ್ ಕಾಲುವೆ ಮತ್ತು ಸೇವರ್ನ್ ಎಸ್ಟ್ಯುರೆ ಸಮುದ್ರ ತೀರದ 200 ಚದರ ಮೈಲಿ ಪ್ರದೇಶದಲ್ಲಿ  ಭೀಕರ ಪ್ರವಾಹ ಉಂಟಾಗಿ ಸುಮಾರು  2000 ಸಾವು ಸಂಭವಿಸಿತು.

1790: ‘ಲೈಫ್ ಬೋಟ್’ ಎಂಬ ಜೀವ ರಕ್ಷಕ ದೋಣಿಯನ್ನು ಟೈನ್ ನದೀ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

1806: ಡೆಲಾವರೆ ನದಿಯ ಮೇಲೆ ನ್ಯೂಜೆರ್ಸಿಯ ಮೊರಿಸ್ವಿಲ್ಲೆ, ಪೆನ್ಸಿಲ್ವೇನಿಯಾ, ಟ್ರೆಂಟನ್ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಿದ ಮೂಲ ‘ಲೋವರ್ ಟ್ರೆಂಟನ್ ಬ್ರಿಡ್ಜ್’ ಸಂಚಾರಕ್ಕೆ  ತೆರೆದುಕೊಂಡಿತು.

1820: ಟ್ರಿನಿಟಿ ಪೆನಿನ್ಸುಲಾ ದೃಷ್ಟಿಸಿದ ಎಡ್ವರ್ಡ್ ಬ್ರಾನ್ಸಿಫೀಲ್ಡ್ ಅವರು  ಅಂಟಾರ್ಟಿಕಾ ಅನ್ವೇಷಿಸಿದ ಘೋಷಣೆ ಮಾಡಿದರು.

1826: ಪ್ರಪಂಚದ ಮೊದಲ ಸಸ್ಪೆನ್ಷನ್ ಬ್ರಿಡ್ಜ್ ಎಂದು ಖ್ಯಾತಿಗಳಿಸಿರುವ ಯುನೈಟೆಡ್ ಕಿಂಗ್ಡಂನ  ಮೆನಾಯ್ ಸಸ್ಪೆನ್ಷನ್ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿತು.  ಇದು ಐಲ್ ಆಫ್ ಆಂಗ್ಲೆಸೇ ಇಂದ ವೇಲ್ಸಿನ ವಾಯುವ್ಯ ತೀರಕ್ಕೆ ಸಂಪರ್ಕ ಕಲ್ಪಿಸಿದೆ.

1908: ದಕ್ಷಿಣ ಆಫ್ರಿಕಾದಲ್ಲ್ಲಿ ಎರಡು ತಿಂಗಳ ಕಾಲ ಸೆರೆವಾಸಕ್ಕೆ  ಒಳಗಾಗಿದ್ದ  ಮೋಹನದಾಸ್ ಕರಮಚಂದ್ ಗಾಂಧೀ ಅವರನ್ನು ಜಾನ್ ಸಿ. ಸ್ಮಟ್ಸ್ ಅವರು ಬಿಡುಗಡೆ ಮಾಡಿದರು.

1911: ಯು.ಎಸ್.ಎಸ್. ಟೆರ್ರಿ ಎಂಬ ಯುದ್ಧ ನೌಕೆ ಕ್ಯೂಬಾದ ಹವಾನಾದಲ್ಲಿ  ಅಪಘಾತಕ್ಕೆ ಸಿಲುಕಿದ ವಿಮಾನದ ಡೌಗ್ಲಸ್ ಮೆಕ್ಕರ್ಡಿ ಎಂಬುವರ ಪ್ರಾಣ ಉಳಿಸಿತು.

1927: ಸ್ವೀಡನ್ನಿನ ಪ್ರಧಾನಿಯಾಗಿದ್ದ  ಉಲೂಫ್ ಪಾಮೆ ಸ್ವೀಡನ್ನಿನ ಸ್ಟಾಕ್ಹೋಮ್ ನಗರದಲ್ಲಿ ಜನಿಸಿದರು.  ಸ್ವೀಡನ್ ರಾಷ್ಟ್ರದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಇವರು 1986ರ ವರ್ಷದಲ್ಲಿ ಹತ್ಯೆಗೀಡಾದರು.

1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ.  ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ತನ್ನ ಕೈಗೆ ತೆಗೆದುಕೊಂಡ.

1945: ಎರಡನೇ ವಿಶ್ವಮಹಾಯುದ್ಧದಲ್ಲಿ ಸಂತ್ರಸ್ತರಾದ ಜರ್ಮನರನ್ನು ಹೊತ್ತೊಯ್ಯುತ್ತಿದ್ದ ವಿಲ್ಹೆಮ್ ಗಸ್ಟ್ಲೋಫ್ ಎಂಬ  ಹಡಗು ಸೋವಿಯತ್ ಸಬ್ಮೆರಿನ್ನಿನ ದಾಳಿಗೀಡಾಗಿ 9500 ಜನ ಮೃತರಾದರು.

1956: ಮೊಂಟಗೋಮೆರಿ ಬಸ್ ಬಹಿಷ್ಕಾರಕ್ಕೆ ಪ್ರತಿಯಾಗಿ  ಆಫ್ರಿಕನ್-ಅಮೇರಿಕನ್ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್  ಜೂನಿಯರ್ ಅವರ ಮನೆಯ ಮೇಲೆ ಬಾಂಬ್ ದಾಳಿ ನಡೆಯಿತು.

1972: ಪಾಕಿಸ್ತಾನವು ಕಾಮನ್ ವೆಲ್ತ್ ರಾಷ್ಟ್ರಗಳ ಒಕ್ಕೂಟದಿಂದ  ತನ್ನ ಸದಸ್ಯತ್ವವನ್ನು ಹಿಂತೆಗೆದುಕೊಂಡು ಹೊರನಡೆಯಿತು.

1975: ಅಮೇರಿಕಾದ ಮೊದಲ ಸಮುದ್ರ ರಾಷ್ಟ್ರೀಯ ಸಮುದ್ರ ಸಂಗ್ರಹಾಲಯವಾದ ‘ಮಾನಿಟರ್ ನ್ಯಾಷನಲ್ ಮೆರಿನ್ ಸಾಂಕ್ಚುಯರಿ’ ಸ್ಥಾಪನೆಗೊಂಡಿತು.

2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು.

2007: ಕೇಂದ್ರ ಸರ್ಕಾರವು ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರನ್ನು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.

2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈನ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈನ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು.

2009: ವಿಶ್ವದ ಮೂರನೇ ಅತಿದೊಡ್ಡ ಸರಕು-ಸಾಗಣೆ ವಿಮಾನವಾದ  ಎಫ್ ಕಾರ್ಗೊ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.   ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಸಾಧನ-ಸರಕುಗಳನ್ನು ಈ ವಿಮಾನ ಹೊತ್ತು ತಂದಿತು.  30 ವಿಶ್ವದಾಖಲೆ ಮಾಡಿರುವ ಈ ವಿಮಾನ, 1,71,219 ಕೆ.ಜಿ. ತೂಕದಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಪ್ರಮುಖಜನನ/ಮರಣ:

1785: ಭಾರತದಲ್ಲಿ ಬ್ರಿಟಿಷ್ ಆಡಳಿತಗಾರನಾಗಿದ್ದ  ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ ಕೋಲ್ಕತ್ತದಲ್ಲಿ ಜನಿಸಿದ.  ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿದ್ದ ಈತ  ಪತ್ರಿಕಾ ಸ್ವಾತಂತ್ರ್ಯ ನೀಡುವ ಹಾಗೂ  ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸಿದ್ದ.

1882: ಅಮೆರಿಕದಲ್ಲಿ ಸತತವಾಗಿ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ 1933ರಿಂದ ತಾವು 1945ರ ವರ್ಷದಲ್ಲಿ ನಿಧನರಾಗುವವರೆವಿಗೂ ಅಧಿಕಾರದಲ್ಲಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಜನಿಸಿದರು.

1889: ಹಿಂದೀ ಭಾಷಾ ಕವಿ, ನಾಟಕಕಾರ ಮತ್ತು ಕಾದಂಬರಿಕಾರ ಜೈಶಂಕರ್ ಪ್ರಸಾದ್ ವಾರಣಾಸಿಯಲ್ಲಿ ಜನಿಸಿದರು.  ಇವರು ಆಧುನಿಕ ಹಿಂದೀ ಸಾಹಿತ್ಯದ ಪ್ರಮುಖ ಪ್ರವರ್ತಕರಲ್ಲಿ ಒಬ್ಬರೆಂದು ಪ್ರಖ್ಯಾತಿ ಪಡೆದಿದ್ದಾರೆ.

1899: ಪ್ರಖ್ಯಾತ ವೈರಸ್ ಶಾಸ್ತ್ರಜ್ಞರಾದ  ಮ್ಯಾಕ್ಸ್ ಥೀಲರ್ ಅವರು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದರು.  ಮುಂದೆ ಅಮೇರಿಕನ್ ಪ್ರಜೆಯಾದ ಅವರು 1937ರ ವರ್ಷದಲ್ಲಿ ಕಾಮಾಲೆ ರೋಗ ಅಥವಾ ಹಳದಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿದರು.  ಈ ಸಾಧನೆಗಾಗಿ ಅವರಿಗೆ 1951ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ  ವಿಜ್ಞಾನ ಪುರಸ್ಕಾರ ಸಂದಿತು.

1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವಿಜಾಪುರದಲ್ಲಿ ಜನಿಸಿದರು.

1926: ‘ಜಿಟಿಎನ್’ ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ವಿಜ್ಞಾನ ಬರಹಗಾರ ಗುಡ್ಲೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ (ಗುತಿನಾ)  ಮೈಸೂರಿನಲ್ಲಿ ಜನಿಸಿದರು.  ಹಲವೆಡೆಗಳಲ್ಲಿ ಅಧ್ಯಾಪನ ನಡೆಸಿದ ನಂತರ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಮುಂತಾದ ಅನೇಕ ಗೌರವಗಳು ಅವರನ್ನು ಅರಸಿಬಂದಿದ್ದವು. ಜೂನ್ 27 2008ರಂದು ಮೈಸೂರಿನಲ್ಲಿ ನಿಧನರಾದ ಇವರು ವಿಜ್ಞಾನದ ಗ್ರಂಥಗಳನ್ನಷ್ಟೇ ಅಲ್ಲದೆ ಸಂಗೀತದ ಕುರಿತಾಗಿಯೂ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ.

1913: ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ ಹಂಗೇರಿ ದೇಶದ ಬುಡಾಪೆಸ್ಟ್ ಎಂಬಲ್ಲಿ ಜನಿಸಿದರು. ಅವರ ತಂದೆ ಪಮ್ಜಾಬಿನವರಾಗಿದ್ದರು ಮತ್ತು ತಾಯಿ ಹಂಗೇರಿ ಮೂಲದವರಾಗಿದ್ದರು.   ಇಪ್ಪತ್ತನೆಯ ಶತಮಾನದ ಮಹತ್ವದ ಕಲಾವಿದರಲ್ಲಿ ಒಬ್ಬ ಪ್ರಮುಖರೆಂದು ಪರಿಗಣಿತರಾಗಿರುವ ಇವರು ಬ್ರಿಟಿಷ್ ಭಾರತದ ಭಾಗವಾಗಿದ್ದ ಲಾಹೋರಿನಲ್ಲಿ 1941 ಡಿಸೆಂಬರ್ 5ರಂದು ನಿಧನರಾದರು.

1924: ಸತ್ಯ ನಾರಾಯಣ ಗೋಯೆಂಕಾ ಅವರು ಬ್ರಿಟಿಷ್ ಭಾರತದ ಭಾಗವಾಗಿದ್ದ  ಬರ್ಮಾದಲ್ಲಿ ಜನಿಸಿದರು.  ವಿಪಾಸನಾ ಬೋಧಕರಾಗಿ ಮಹತ್ವದ ಕೆಲಸ ಮಾಡಿದ್ದ ಅವರು, 2000ದ ವರ್ಷದಲ್ಲಿ  ವಿಶ್ವಸಂಸ್ಥೆಯು ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಿದ್ದ  ಸರ್ವಧರ್ಮ ಮತ್ತು ಆಧ್ಯಾತ್ಮಿಕ ನಾಯಕರ  ಸಹಸ್ರಮಾನದ  ಸಮಾರಂಭದಲ್ಲಿ  ಆಹ್ವಾನಿತ  ಉಪನ್ಯಾಸಕಾರಾಗಿದ್ದರು.  ಇವರಿಗೆ ಭಾರತ ಸರ್ಕಾರವು  2012ರ ವರ್ಷದಲ್ಲಿ ಪದ್ಮಭೂಷಣ ಗೌರವವನ್ನು ಅರ್ಪಿಸಿತು.  2013ರ ಸೆಪ್ಟೆಂಬರ್ 29ರಂದು ಮುಂಬೈನಲ್ಲಿ  ನಿಧನರಾದರು.

1925: ಕಂಪ್ಯೂಟರ್ ಮೌಸ್ ಕಂಡುಹಿಡಿದ  ಡೌಗ್ಲಸ್ ಏಂಜೆಲ್ಬಾರ್ಟ್ ಅವರು ಅಮೆರಿಕದ ಒರಿಗಾನ್ ಬಳಿಯ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು.

1949: ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಜೀವಶಾಸ್ತ್ರಜ್ಞ ನೊಬೆಲ್ ಪುರಸ್ಕೃತ ಪೀಟರ್ ಅಗ್ರೆ ಅಮೆರಿಕದ ಮಿನ್ನೆಸೋಟ ಬಳಿಯ ನಾರ್ತ್ ಫೀಲ್ಡ್ ಎಂಬಲ್ಲಿ ಜನಿಸಿದರು. ಇವರಿಗೆ ‘ಚಾನೆಲ್ಸ್ ಇನ್ ಸೆಲ್ ಮೆಮ್ಬ್ರಾನ್ಸಸ್’ ಕುರಿತಾದ ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.

1928: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ  ಜೋಹಾನೆಸ್ ಫಿಬಿಗರ್ ಅವರು ಡೆನ್ಮಾರ್ಕಿನ ಸಿಲ್ಕೆಬೋರ್ಗ್ ಎಂಬಲ್ಲಿ ಜನಿಸಿದರು.  ಪೆಥಲಾಜಿಕಲ್ ಅನಾಟಮಿ ವಿಶೇಷಜ್ಞರಾದ ಅವರಿಗೆ 1926ರ ವರ್ಷದ  ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.  ಅವರು  ಇಲಿಗಳಲ್ಲಿ  ಕ್ಯಾನ್ಸರ್ ಉಂಟುಮಾಡುವ ಜೀವಕಣಗಳನ್ನು ಗುರುತಿಸಿದ್ದರು.

1948: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು,  ನಾಥೂರಾಮ್ ಗೋಡ್ಸೆಯ ಗುಂಡಿನೇಟಿನಿಂದ ದೆಹಲಿಯಲ್ಲಿ ನಿಧನರಾದರು.

1948: ಅಮೆರಿಕದ ಪೈಲಟ್ ಹಾಗೂ ರೈಟ್ ಕಂಪೆನಿಯ ಸ್ಥಾಪಕ ಸಹೊದರರಲ್ಲಿ ಒಬ್ಬರಾದ ಅರ್ವಿಲ್ಲೇ ರೈಟ್ ಅವರು ಅಮೆರಿಕದ ಡೇಟನ್ ಎಂಬಲ್ಲಿ  ನಿಧನರಾದರು. ಇವರು  ತಮ್ಮ ಸಹೋದರ ವಿಲ್ಬರ್ಟ್ ರೈಟ್ ಅವರೊಡಗೂಡಿ  ವಿಮಾನ ಸಂಶೋಧನೆ, ನಿರ್ಮಾಣ ಮತ್ತು  ಹಾರಾಟಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.

1968: ಭಾರತೀಯ ಸ್ವಾತಂತ್ಯ್ರ ಹೋರಾಟಗಾರ, ಕವಿ, ನಾಟಕಕಾರ ಮತ್ತು ಪತ್ರಕರ್ತ ಮಖನಲಾಲ್ ಚತುರ್ವೇದಿ ನಿಧನರಾದರು.  ಮಧ್ಯಪ್ರದೇಶದ ಹೊಷಾಂಗಾಬಾದ್ ಜಿಲ್ಲೆಯ ಬೋವಾಯ್ ಹಳ್ಳಿಯವರಾದ ಅವರು  ಹಿಂದೀ ಭಾಷೆಯ ಛಾಯಾವಾದ್ ಪರಂಪರೆಯ ಮಹತ್ವದ ಬರಹಗಾರರೆನಿಸಿದವರು.  ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು  ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1969: ಬೆಲ್ಜಿಯಂ ದೇಶದ ಸಾಹಿತಿ ಡಾಮಿನಿಕ್ ಪಿಯರೆ ನಿಧನರಾದರು. ಅವರ ಸಾಹಿತ್ಯ ವಿಶ್ವಮಹಾಯುದ್ಧದ ಸಂತ್ರಸ್ತರಿಗೆ ಶಕ್ತಿ ಭರವಸೆ ತುಂಬುವಂತದ್ದಾಗಿತ್ತು.  1958ರ ವರ್ಷದಲ್ಲಿ ಇವರಿಗೆ  ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1991: ಅಮೇರಿಕಾದ ಭೌತವಿಜ್ಞಾನಿ ಮತ್ತು ತಂತ್ರಜ್ಞಾನಿ ಜಾನ್ ಬರ್ಡೀನ್ ಮೆಸಾಚುಸೆಟ್ಸ್ ಪ್ರಾಂತ್ಯದ ಬೋಸ್ಟನ್ ನಗರದಲ್ಲಿ  ನಿಧನರಾದರು.  ಎರಡು ಬಾರಿ  ಭೌತವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಇವರಾಗಿದ್ದಾರೆ.  ಟ್ರಾನ್ಸಿಸ್ಟರ್ ಕಂಡು ಹಿಡಿದದ್ದಕ್ಕೆ ಒಮ್ಮೆ ಮತ್ತು  ಸೂಪರ್ ಕಂಡಕ್ಟಿವಿಟಿ ಕುರಿತಾದ  ಮತ್ತೊಂದು ಸಾಧನೆಗೆ ಇವರಿಗೆ ನೊಬೆಲ್ ಪ್ರಶಸ್ತಿ ಸಂದಿತು.

2008: ಕನ್ನಡದ ಪ್ರಸಿದ್ಧ ಸಾಹಿತಿ  ವ್ಯಾಸರಾಯ ಬಲ್ಲಾಳ ಅವರು ಬೆಂಗಳೂರಿನಲ್ಲಿ ನಿಧನರಾದರು.  ವಿವಿಧ ರೀತಿಯ ಸಾಹಿತ್ಯ ರಚನೆ ಮಾಡಿರುವ ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು ತಮ್ಮ ಕಾದಂಬರಿಗಳಿಂದ ಹೆಚ್ಚು  ಪ್ರಸಿದ್ಧರು. ಬಂಡಾಯ ಕೃತಿಗೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು.

2016: ಭಾರತದ ಸೇನೆಯ ಮಹಾದಂಡನಾಯಕರಾಗಿದ್ದ ಜನರಲ್ ಕೆ. ವಿ. ಕೃಷ್ಣರಾವ್ ಅವರು ನವದೆಹಲಿಯಲ್ಲಿ ನಿಧನರಾದರು.  ಆಂಧ್ರಪ್ರದೇಶದವರಾದ ಅವರು 1942ರಲ್ಲಿ ಸೇನೆಗೆ ಸೇರಿದ್ದರು.  1971ರಲ್ಲಿ  ತಮ್ಮ ನಾಯಕತ್ವದಲ್ಲಿ ಸಿಲ್ಹಟ್ ಪ್ರದೇಶವನ್ನು ಆಕ್ರಮಿಸಿ ಬಾಂಗ್ಲಾದೇಶ ಸ್ವಾಂತಂತ್ರ್ಯಗೊಳ್ಳಲು ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ಅವರು, 1983ರಲ್ಲಿ ಭಾರತದ ಸಮಸ್ತ ಸೇನೆಯ ಮುಖ್ಯಸ್ಥರಾಗಿ ನಿವೃತ್ತರಾದರು. ನಂತರದಲ್ಲಿ ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಅವರು ಅನೇಕ ಗ್ರಂಥಗಳನ್ನೂ ರಚಿಸಿದ್ದರು.

 

Categories
e-ದಿನ

ಜನವರಿ-29

ಪ್ರಮುಖಘಟನಾವಳಿಗಳು:

1780: ಜೇಮ್ಸ್ ಆಗಸ್ಟಸ್ ಹಿಕ್ಕಿ  ಅವರು ಕೋಲ್ಕತದಲ್ಲಿ  ಭಾರತದ ಮೊತ್ತ ಮೊದಲ ಪತ್ರಿಕೆ ಇಂಗ್ಲಿಷಿನ  ‘ಹಿಕ್ಕೀಸ್ ಬೆಂಗಾಲ್ ಗಝೆಟ್’ ಅಥವಾ ‘ಕಲ್ಕತ್ತಾ ಜನರಲ್ ಅಡ್ವರ್ ಟೈಸರ್’ ಪ್ರಕಟಿಸಿದರು. ಈ ಪತ್ರಿಕೆಯಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.

1819: ಬ್ರಿಟನ್ನಿನ ಸ್ಟಾಂಫೋರ್ಡ್ ರಾಫಲ್ಸ್ ಸಿಂಗಪುರ ದ್ವೀಪದಲ್ಲಿ ಕಾಲಿಟ್ಟರು

1856: ರಾಣಿ ವಿಕ್ಟೋರಿಯಾ ಅವರು  ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವವಾಗಿರುವ ‘ವಿಕ್ಟೋರಿಯಾ ಕ್ರಾಸ್’ ಸ್ಥಾಪಿಸಿದರು.

1886: ಕಾರ್ಲ್ ಬೆಂಜ್ ಅವರು  1885ರಲ್ಲಿ ನಿರ್ಮಿಸಿದ ತಮ್ಮ ಗ್ಯಾಸೋಲಿನ್ ಚಾಲಿತ  ಕಾರಿಗೆ ಪೇಟೆಂಟ್ ಪಡೆದರು.

1996: ಫ್ರಾನ್ಸಿನ ಅಧ್ಯಕ್ಷರಾದ  ಜಾಕೆಸ್ ಚಿರಾಕ್ ಅವರು  ತಮ್ಮ ದೇಶದ ಅಣ್ವಸ್ತ್ರ ಪ್ರಯೋಗಗಳಿಗೆ ನಿರ್ಣಾಯಕವಾದ  ಅಂತ್ಯವನ್ನು ಘೋಷಿಸಿದರು

2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು ಕರಾಚಿಯಲ್ಲಿ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಅವರು ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.

2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಐದನೆಯ ಬಾರಿ ಜಯಗಳಿಸಿದ ಭಾರತದ ವಿಶ್ವನಾಥನ್ ಆನಂದ್  ವಿಶ್ವದಾಖಲೆ ನಿರ್ಮಿಸಿದರು.

2006: ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ  42.7  ಮೀಟರ್ ಎತ್ತರದ  ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ  ಸಾಹಿತಿ ನಾ.ಡಿಸೋಜಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯವು ಅತ್ಯುನ್ನತ ದೇಶಿಕೋತ್ತಮ ಪದವಿಯನ್ನು ಪ್ರದಾನ ಮಾಡಿತು.

2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು.

ಪ್ರಮುಖಜನನ/ಮರಣ:

1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ ಇಂಗ್ಲೆಂಡಿನ ಡರ್ಬಿಶೈರ್ ಎಂಬಲ್ಲಿ  ಜನಿಸಿದ.  ಭಾರತದ ಮೊದಲನೇ  ಸ್ವಾತಂತ್ರ್ಯ ಸಂಗ್ರಾಮದ ವೇಳೆ ಈತ  ಬ್ರಿಟಿಷ್ ಸೇನೆಯನ್ನು ನಡೆಸಿದ  ಈತ, 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ.

1820: ಬ್ರಿಟನ್ನಿನ ದೊರೆ ಮೂರನೇ ಜಾರ್ಜ್ ತನ್ನ 81ನೇ ವಯಸ್ಸಿನಲ್ಲಿ ವಿಂಡ್ಸರ್ ಕ್ಯಾಸಲ್ ಎಂಬಲ್ಲಿ  ನಿಧನನಾದ.  59 ವರ್ಷಗಳ ಸುದೀರ್ಘ ಕಾಲ ಈತ ಬ್ರಿಟನ್ನನ್ನು ಆಳಿದ.

1866: ಫ್ರಾನ್ಸಿನ ಕಲಾ ಇತಿಹಾಸಜ್ಞ, ನಾಟಕಕಾರ ಮತ್ತು ಪ್ರಬಂಧಕಾರ ರೋಮೈನ್ ರೋಲ್ಲ್ಯಾಂಡ್ ನೀವೇರೇ ಬಳಿಯ ಕ್ಲಾಮೆಸಿ ಎಂಬಲ್ಲಿ ಜನಿಸಿದರು.  1915ರ ವರ್ಷದಲ್ಲಿ ಇವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು. ಇವರು  ಮಹಾತ್ಮಾ ಗಾಂಧೀ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ ರಚಿಸಿದ್ದರು.

1926: ಭೌತವಿಜ್ಞಾನಿ ಅಬ್ದಸ್ ಸಲಾಂ ಅವರು ಸ್ವತಂತ್ರಪೂರ್ವ ಭಾರತದಲ್ಲಿ, ಈಗ ಪಾಕಿಸ್ತಾನದ ಭಾಗವಾಗಿರುವ ಪಂಜಾಬಿನ ಝಾಂಗ್ ಎಂಬಲ್ಲಿ ಜನಿಸಿದರು.  ‘ಎಲೆಕ್ಟ್ರೋವೀಕ್ ಯೂನಿಫಿಕೇಶನ್ ಥಿಯರಿ ಸಂಶೋಧೆಗಾಗಿ 1979ರ ವರ್ಷದ ನೊಬೆಲ್ ಪುರಸ್ಕಾರ ಪಡೆದರು.  ಇವರು ನೊಬೆಲ್ ಪುರಸ್ಕಾರ ಪಡೆದ ಪ್ರಥಮ ಪಾಕಿಸ್ತಾನಿ ಪ್ರಜೆಯಾಗಿದ್ದಾರೆ.

1936: ತೆಲುಗಿನ  ಕವಿ, ಚಿತ್ರಕಥೆಗಾರ, ಮತ್ತು ಖ್ಯಾತ ಗೀತರಚನಕಾರ ವೇಟುರಿ ಸುಂದರರಾಮ ಮೂರ್ತಿ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆಡಕಲ್ಲೆಪಲ್ಲಿ ಎಂಬ ಹಳ್ಳಿಯಲ್ಲಿ ಜನಿಸಿದರು.  2010ರ ವರ್ಷದಲ್ಲಿ ನಿಧನರಾದ ಇವರು ತಮ್ಮ ನಾಲ್ಕು ದಶಕಗಳ ಚಿತ್ರರಂಗದ ಜೀವನದಲ್ಲಿ ಸಹಸ್ರಾರು ಗೀತೆಗಳನ್ನು ರಚಿಸಿ, ರಾಷ್ಟ್ರಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

1947: ಅಮೆರಿಕದ ಜೀವಶಾಸ್ತ್ರಜ್ಞೆ ಲಿಂಡಾ ಬಿ. ಬಕ್ ಅವರು ವಾಷಿಂಗ್ಟನ್ ಪ್ರದೇಶದ ಸೀಟಲ್ನಲ್ಲಿ ಜನಿಸಿದರು.  ಒಲ್’ಫ್ಯಾಕ್ಟರಿ ಸಿಸ್ಟಮ್ ಕುರಿತಾದ ಕಾರ್ಯಕ್ಕೆ ಈಕೆ 2004 ವರ್ಷದ ಜೀವವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸ್ವೀಕರಿಸಿದ್ದರು.

1954: ಅಮೆರಿಕದ ಪ್ರಸಿದ್ಧ ಕಿರುತೆರೆ ಕಾರ್ಯಕ್ರಮ ನಿರೂಪಕಿ, ಅಭಿನೇತ್ರಿ ಮತ್ತು  ನಿರ್ಮಾಪಕಿ ಓಪ್ರಾ ವಿನ್ಫ್ರೆ ಅವರು ಮಿಸಿಸಿಪಿಯ ಕೊಸಿಯುಸ್ಕೋ ಎಂಬಲ್ಲಿ ಜನಿಸಿದರು.  ಅವರು ಹಾರ್ಪೋ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮುಖ್ಯಸ್ಥೆಯಾಗಿದ್ದಾರೆ.

1955: ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ  ಕಲಾವಿದೆ ಪ್ರತಿಭಾ ಪ್ರಹ್ಲಾದ್ ಬೆಂಗಳೂರಿನಲ್ಲಿ ಜನಿಸಿದರು. ಕಳೆದ 3 ದಶಕಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ  ಕರ್ನಾಟಕ ಕಲಾಶ್ರೀ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

1970: ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತೀಯರೊಬ್ಬರು ಪ್ರಥಮ ಬಾರಿಗೆ ವೈಯಕ್ತಿಕವಾದ ರಜತ ಪದಕ ಗೆಲ್ಲುವ ಮೂಲಕ ಹೊಸ ಚರಿತ್ರೆಯನ್ನು ಬರೆದವರು ಶೂಟರ್ ರಾಜ್ಯವರ್ಧನ ಸಿಂಗ್ ರಾಥೋರ್.   ಅವರು ರಾಜಾಸ್ಥಾನದ ಜೈಸಲ್ಮೇರ್ ಪಟ್ಟಣದಲ್ಲಿ  ಜನಿಸಿದರು.

1934: ಜರ್ಮನಿಯ ರಸಾಯನ ಶಾಸ್ತ್ರಜ್ಞ ಮತ್ತು ತಂತ್ರಜ್ಞ ಫ್ರಿಟ್ಜ್ ಹೇಬರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬಲ್ಲಿ ನಿಧನರಾದರು.   ಹೇಬರ್-ಬೋಷ್ ಪ್ರೋಸೆಸ್ ಸಂಶೋಧನೆಗಾಗಿ ಅವರಿಗೆ ರಸಾಯನ ಶಾಸ್ತ್ರ ವಿಜ್ಞಾನದ ನೊಬೆಲ್ ಪುರಸ್ಕಾರ ಸಂದಿತು.

2003: ಪ್ರಸಿದ್ಧ ಚಿತ್ರ ನಟಿ, ನಿರ್ಮಾಪಕಿ  ಪಂಡರೀಬಾಯಿ ಚೆನ್ನೈನಲ್ಲಿ ನಿಧನರಾದರು.  ಕರ್ನಾಟಕದ ಭಟ್ಕಳದಲ್ಲಿ ಜನಿಸಿ ಕನ್ನಡ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಸುಮಾರು 6 ದಶಕಗಳ ಕಾಲ ನಟಿಸಿದ್ದ ಇವರಿಗೆ ‘ಬೆಳ್ಳಿ ಮೋಡ’ ಮತ್ತು ‘ನಮ್ಮ ಮಕ್ಕಳು’ ಚಿತ್ರಗಳ ಅಭಿನಯಕ್ಕೆ ರಾಜ್ಯಪ್ರಶಸ್ತಿ ಹಾಗೂ ಚಲನಚಿತ್ರರಂಗದಲ್ಲಿನ ಮಹತ್ವದ ಸೇವೆಗಾಗಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್ ಕುಮಾರ್ ಪ್ರಶಸ್ತಿ ಸಂದಿತ್ತು .

2004: ಭಾರತದ ಸಿಮ್ಲಾದಲ್ಲಿ ಜನಿಸಿದ ಬ್ರಿಟಿಷ್ ಲೇಖಕಿ ಮೇರಿ ಮಾರ್ಗರೇಟ್ ಕಾಯೆ ಅವರು ಬ್ರಿಟನ್ನಿನ ಲ್ಯಾವನ್ ಹ್ಯಾಮ್ ಎಂಬಲ್ಲಿ  ನಿಧನರಾದರು.  ಅವರ ‘ದಿ ಫಾರ್ ಪೆವಿಲಿಯನ್ಸ್’ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ.

 

Categories
e-ದಿನ

ಜನವರಿ-28

ಪ್ರಮುಖಘಟನಾವಳಿಗಳು:

1573: ಪೋಲಾಂಡಿನಲ್ಲಿ ಧರ್ಮ ಸ್ವಾತಂತ್ರ್ಯಕ್ಕೆ ಅವಕಾಶವೀಯುವ ವಾರ್ಸಾ ಕನ್ಫೆಡರೇಶನ್  ನಿರ್ಣಯವನ್ನು ಅಂಗೀಕರಿಸಲಾಯಿತು

1724: ಪೀಟರ್ ದಿ ಗ್ರೇಟ್ ಅವರು ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ  ‘ದಿ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್’ ಸ್ಥಾಪಿಸಿದರು. ಇದಕ್ಕೆ  1917ರ ವರ್ಷದ ವರೆಗೆ ‘ಸೈಂಟ್ ಪೀಟರ್ಸ್ ಬರ್ಗ್ ಅಕಾಡೆಮಿ ಆಫ್ ಸೈನ್ಸಸ್’ ಎಂಬ ಹೆಸರಿತ್ತು.

1813: ಜೇನ್ ಆಸ್ಟೆನ್ ಅವರ ಪ್ರಸಿದ್ಧ ಕೃತಿ ‘ಪ್ರೈಡ್ ಅಂಡ್ ಪ್ರಿಜಡೈಸ್’ ಕೃತಿ, ಯುನೈಟೆಡ್ ಕಿಂಗ್ಡಂನಲ್ಲಿ ಪ್ರಥಮ ಬಾರಿಗೆ ಪ್ರಕಟಗೊಂಡಿತು.

1820: ರಷ್ಯಾದ ಫ್ಯಾಬಿಯನ್ ಗೊಟ್ಲಿಯೇಬ್ ವಾನ್ ಬೆಲ್ಲಿಂಗ್ ಶೌಸೇನ್ ಮತ್ತು ಮೈಖೈಲ್ ಪೆಟ್ರೋವಿಕ ಲಜ್ಜಾರೇವ್ ನೇತೃತ್ವದ ತಂಡವು ಅಂಟಾರ್ಕ್ಟಿಕ್ ತೀರದ ಬಳಿಯಲ್ಲಿ ಅಂಟಾರ್ಕ್ಟಿಕ್ ಖಂಡದ ಇರವನ್ನು ಪತ್ತೆ ಹಚ್ಚಿತು.

1846: ರಣಜೋಧ್ ಸಿಂಗ್ ಮಜಿಥಿಯ ನೇತೃತ್ವದ  ಸಿಖ್ ಸೈನ್ಯ ಮತ್ತು ಸರ್ ಹ್ಯಾರಿ ಸ್ಮಿತ್ ನೇತೃತ್ವದ  ಬ್ರಿಟಿಷ್ ಪಡೆಗಳ  ನಡುವೆ ಯುದ್ಧ ನಡೆದು  ಸಿಖ್ ಪಡೆ ಸೋಲನುಭವಿಸಿತು

1855: ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ನಡುವಣ ಪನಾಮಾ ಕೆನಾಲ್ ರೈಲ್ವೆ ಸಂಚಾರ ಪ್ರಥಮ ಬಾರಿಗೆ  ಪ್ರಾರಂಭಗೊಂಡಿತು

1896: ಇಂಗ್ಲೆಂಡಿನ  ಕೆಂಟ್ ಪ್ರದೇಶದ ಈಸ್ಟ್ ಪೆಕ್ಹಾಂ ಊರಿನ ವಾಲ್ಟರ್ ಆರ್ನಾಲ್ಡ್ ಎಂಬಾತ ವೇಗವಾಗಿ ಕಾರು  ಓಡಿಸಿದ್ದಕ್ಕೆ ದಂಡನೆಗೆ ಒಳಗಾದ ಪ್ರಥಮ ವ್ಯಕ್ತಿ ಎನಿಸಿದ. ಆಗ ಗಂಟೆಗೆ 2 ಮೈಲು ಮಾತ್ರಾ ಕಾರು  ವೇಗವಾಗಿ  ಓಡಿಸಬಹುದಿತ್ತು.  ಆದರೆ ವಾಲ್ಟರ್ ಗಂಟೆಗೆ 8 ಮೈಲು ವೇಗದಲ್ಲಿ ಗಾಡಿ ಓಡಿಸಿದ.  ಹೀಗಾಗಿ ಆತನಿಗೆ  ಒಂದು ಶಿಲ್ಲಾಂಗ್ ಮತ್ತು ಖರ್ಚನ್ನು ಬರಿಸುವ  ದಂಡನೆ ವಿಧಿಸಲಾಯಿತು.

1902: ಪ್ರಸಿದ್ಧ ಉದ್ಯಮಿ ಆಂಡ್ರ್ಯೂ ಕಾರ್ನಿಗಿ ಅವರ ಹತ್ತು ಮಿಲಿಯನ್ ಡಾಲರ್ ಕೊಡುಗೆಯಿಂದ  ಕಾರ್ನಿಗಿ ಇನ್ಸ್ಟಿಟ್ಯೂಷನ್ ಆಫ್ ವಾಷಿಂಗ್ಟನ್ ಸ್ಥಾಪನೆಗೊಂಡಿತು

1933: ಚೌಧುರಿ ರಹಮತ್ ಅಲಿ ಖಾನ್ ಎಂಬಾತ ಪಾಕಿಸ್ತಾನ ಎಂಬ ಹೆಸರನ್ನು ಪ್ರಸ್ತಾಪಿಸಿದ. ಇದು ಅಂದಿನ ಭಾರತೀಯ ಮುಸ್ಲಿಂ ನಾಯಕರಿಗೆ ಪ್ರಿಯವಾಗಿ, ಮುಂದೆ  ಅದು ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಬೇಡಿಕೆಯ ಚಳುವಳಿಗೆ ನಾಂದಿಯಾಯ್ತು.

1935: ಐಸ್ಲ್ಯಾಂಡ್ ಶಸ್ತ್ರಕ್ರಿಯಾ ಗರ್ಭಪಾತವನ್ನು  ಕಾನೂನುಬದ್ಧಗೊಳಿಸಿದ ಪ್ರಥಮ ರಾಷ್ಟ್ರವೆನಿಸಿತು.

1938: ಜರ್ಮನಿಯ ರುಡಾಲ್ಫ್ ಕರಸ್ಸಿಯೋಲ ಅವರು ‘ಮರ್ಸಿಡಿಸ್ ಬೆನ್ಸ್ ಡಬ್ಲ್ಯೂ195’ ಕಾರಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಗಂಟೆಗೆ  432.70 ಕಿಲೋಮೀಟರ್ ವೇಗದಲ್ಲಿ ಚಲಿಸುವುದರ ಮೂಲಕ  ದಾಖಲೆ ಸ್ಥಾಪಿಸಿದರು.

1945: ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಚೀನಾಕ್ಕೆ ಪುನಃತೆರೆದುಕೊಂಡ ಬರ್ಮಾದ ರಸ್ತೆಯ ಮೂಲಕವಾಗಿ  ಅಗತ್ಯವಸ್ತುಗಳ ಸರಬರಾಜು   ಪ್ರಾರಂಭಗೊಂಡವು.

1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ‘ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ’  ಸ್ಥಳದಲ್ಲೇ ಸುಪ್ರೀಂಕೋರ್ಟ್  ಕಾರ್ಯನಿರ್ವಹಿಸಿತು.

1953: ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.

1956: ಅಮೆರಿಕದ ಪ್ರಸಿದ್ಧ ನಟ ಮತ್ತು ಗಾಯಕ ಎಲ್ವಿಸ್ ಪ್ರೆಸ್ಲಿ ಅವರು ಪ್ರಥಮ ಬಾರಿಗೆ ಕಿರುತೆರೆಯಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಿದರು.

1958: ಲೆಗೋ ಸಂಸ್ಥೆ ತನ್ನ ಪಸಿದ್ಧ ಇಟ್ಟಿಗೆ ರೂಪದ  ಜೋಡಣಾ ಆಟಿಕೆ ವಿನ್ಯಾಸಕ್ಕೆ  ಪೇಟೆಂಟ್ ಪಡೆಯಿತು.  ಈ ವಿನ್ಯಾಸಗಳು ಇಂದಿನ ದಿನಗಳಲ್ಲಿ ಕೂಡಾ ಅತ್ಯಂತ ಜನಪ್ರಿಯವಾಗಿವೆ.

1986: ನಾಸಾದ ಬಾಹ್ಯಾಕಾಶ ನೌಕೆ  ‘ಚಾಲೆಂಜರ್’ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.

1988: ಆರ್ ವಿ ಮಾರ್ಗೆಂಟೇಲರ್ ತೀರ್ಮಾನದಲ್ಲಿ ಕೆನಡಾದ ಸುಪ್ರೀಂ ಕೋರ್ಟು ಗರ್ಭಪಾತದ ವಿರುದ್ಧವಿದ್ದ ಎಲ್ಲ ಕಾನೂನುಗಳನ್ನೂ  ರದ್ದುಗೊಳಿಸಿತು.

2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಣಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2006: ತಮ್ಮ ಸರ್ಕಾರಕ್ಕೆ ಜನತಾದಳ (ಎಸ್) ಪಕ್ಷವು ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ  ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ ಸಲ್ಲಿಸಿದರು.  ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ ನೀಡಿದರು.

2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉದ್ಘಾಟನೆಗೊಂಡಿತು

2007: ಚೀನಾದಲ್ಲಿ ಗಂಟೆಗೆ 250 ಕಿ.ಮೀ. ವೇಗವಾಗಿ ಓಡುವ ಬುಲೆಟ್ ರೈಲುಗಾಡಿಯು ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚಾರ ಆರಂಭಿಸಿತು.

2007: ಬ್ರಿಟನ್ನಿನ ‘ಚಾನೆಲ್ 4′ ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ ‘ಸೆಲೆಬ್ರಿಟಿ ಬಿಗ್ ಬ್ರದರ್’ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.  ಅವರಿಗೆ  85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್)  ಬಹುಮಾನ ದೊರಕಿತು.

2008: ಭಾರತದ  ಸಾನಿಯಾ ಮಿರ್ಜಾ ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು.

2009: ದೇಶದ ಪ್ರತಿಯೊಬ್ಬ ಪ್ರಜೆಗೂ ಶಾಶ್ವತ ಗುರುತಿನ ಚೀಟಿ ನೀಡುವ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಾಧಿಕಾರ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು.

ಪ್ರಮುಖಜನನ/ಮರಣ:

1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ ಜನಿಸಿದರು.  ಭಾರತದ ‘ಪಂಚತಂತ್ರ’ ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1865: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬರಹಗಾರ  ಲಾಲಾ ಲಜಪತ ರಾಯ್ ಅವರು ಪಂಜಾಬಿನ ದುಡಿಕೆ ಎಂಬಲ್ಲಿ ಜನಿಸಿದರು.  ಪಂಜಾಬಿನ ಕೇಸರಿ ಎಂದು ಪ್ರಸಿದ್ಧರಾದ ಇವರು  ಸೈಮನ್ ಕಮಿಷನ್ ವಿರುದ್ಧ ನಡೆಸಿದ ಚಳುವಳಿ ಸಂದರ್ಭದಲ್ಲಿ ಪೋಲಿಸ್ ಆಕ್ರಮಣದಲ್ಲಿ ತೀವ್ರವಾಗಿ ಗಾಯಗೊಂಡು ನಿಧನರಾದರು.

1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕರಾದ  ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ ಅವರು ಕೊಡಗಿನ ಶನಿವಾರಸಂತೆಯಲ್ಲಿ  ಜನಿಸಿದರು.ಎರಡೂ ವಿಶ್ವ ಮಹಾಯುದ್ಧಗಳಲ್ಲಿ ಪಾಲ್ಗೊಂಡಿದ್ದು ನಂತರದಲ್ಲಿ ಭಾರತದ ಸೇನೆಯ ಮಹಾದಂಡನಾಯಕರಾಗಿ ಹಾಗೂ  ಹಲವು ದೇಶಗಳಿಗೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ಇವರಿಗೆ  ಅಮೆರಿಕಾದ ಅಧ್ಯಕ್ಷ ಟ್ರೂಮನ್ ಅವರು ಕಾರಿಯಪ್ಪನವರಿಗೆ ‘ಆರ್ಡರ್ ಆಫ್ ದಿ ಚೀಫ್ ಕಮಾಂಡರ್ ಆಫ್ ದಿ ಲೆಜನ್ ಆಫ್ ಮೆರಿಟ್’ ಪ್ರಶಸ್ತಿ ನೀಡಿ ಗೌರವಿಸಿದ್ದರು. ಭಾರತ ಸರ್ಕಾರ ಅವರಿಗೆ ಫೀಲ್ಡ್ ಮಾರ್ಷಲ್ ಗೌರವವನ್ನು ಅರ್ಪಿಸಿತು. ತೊಂಬತ್ತನಾಲ್ಕು ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರಿಯಪ್ಪನವರು ಮೇ 15, 1993ರಂದು ಬೆಂಗಳೂರಿನಲ್ಲಿ ನಿಧನರಾದರು

1922: ಅಮೆರಿಕದ ಜೈವಿಕ ವಿಜ್ಞಾನಿ ರಾಬರ್ಟ್ ಡಬ್ಲ್ಯೂ ಹಾಲಿ ಇಲಿನಾಯ್ಸ್ ಪ್ರದೇಶದ ಉರ್ಬಾನಾ ಎಂಬಲ್ಲಿ ಜನಿಸಿದರು.  ಅವರಿಗೆ 1968ರ ವರ್ಷದಲ್ಲಿ  ‘ಟ್ರಾನ್ಸ್ಫರ್ ಆರ್.ಎನ್.ಎ, ಲಿಂಕಿಂಗ್ ಡಿ.ಎನ್.ಎ ಅಂಡ್ ಪ್ರೊಟೀನ್ ಸಿಂಥೆಸಿಸ್’ ಕಾರ್ಯಕ್ಕಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿತು.

1925: ರಾಜಾರಾಮಣ್ಣನವರು ತುಮಕೂರಿನಲ್ಲಿ ಜನಿಸಿದರು.  ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾರಾಮಣ್ಣನವರು 1974ರಲ್ಲಿ ‘ರಾಜಾಸ್ಥಾನದ ಪೊಕ್ರಾನ್’ನಲ್ಲಿ ಜರುಗಿದ ‘ಭಾರತದ ಪ್ರಥಮ ಪರಮಾಣು ಪರೀಕ್ಷೆ’ಯನ್ನು ಸಮರ್ಥವಾಗಿ ನಿರ್ವಹಿಸಿದರು.  ‘ಹೋಮಿ ಜಹಂಗೀರ್ ಭಾಬಾ’ರವರ ಆಪ್ತ ಶಿಷ್ಯರಾಗಿದ್ದ ಅವರು ‘ಶ್ರೇಷ್ಟ ಪರಮಾಣು ವಿಜ್ಞಾನಿಯಲ್ಲದೆ ‘ನುರಿತ ಪಿಯಾನೋ ವಾದಕ’, ‘ವೇದೊಪನಿಷದ್ ಪಾರಂಗತ’, ‘ಉಪಾಧ್ಯಾಯ’, ‘ದಾರ್ಶನಿಕ’, ‘ರಾಜ್ಯಸಭೆ ಸದಸ್ಯ’, ‘ರಕ್ಷಣಾ ರಾಜ್ಯ ಮಂತ್ರಿ’ ಸಹಾ ಆಗಿದ್ದರು. ಸೆಪ್ಟೆಂಬರ್ 24, 2004ರಂದು ಮುಂಬೈನಲ್ಲಿ ನಿಧನರಾದ ಇವರಿಗೆ ‘ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ’, ‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’, ‘ಮೇಘನಾದ್ ಸಹಾ ಪದಕ’, ‘ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ಸಂದಿದ್ದವು.

1930: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಮತ್ತು ಗಾಯಕರಾದ ಪಂಡಿತ್ ಜಸರಾಜ್ ಅವರು ಈಗ ಹರ್ಯಾಣಾದಲ್ಲಿರುವ  ಹಿಸಾರ್ ಪಟ್ಟಣದಲ್ಲಿ ಜನಿಸಿದರು.  ಮೆವಾತಿ ಘರಾಣಾದ ಸಂಗೀತಗರರಾದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1931: ಕನ್ನಡ ಸಾಹಿತ್ಯಲೋಕದ ಪ್ರಮುಖ ಬರಹಗಾರ, ವಿದ್ವಾಂಸ, ಶಿಕ್ಷಣ ತಜ್ಞ, ಉತ್ತಮ ವಾಗ್ಮಿ ಹಾಗೂ ಆಡಳಿತಗಾರರೆಂದು ಹೆಸರಾಗಿರುವ ಸಾ. ಶಿ. ಮರುಳಯ್ಯನವರು  ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಎಂಬ ಗ್ರಾಮದಲ್ಲಿ ಜನಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ  ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಫೆಬ್ರವರಿ 2016ರಲ್ಲಿ ನಿಧನರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1938: ಪ್ರಖ್ಯಾತ ಜೀವ ವಿಜ್ಞಾನಿ ಥಾಮಸ್ ಲಿಂಡಾಹಿ ಅವರು ಸ್ವೀಡನ್ನಿನ ಸ್ಟಾಲ್ಕ್ ಹೋಮ್ ನಗರದಲ್ಲಿ ಜನಿಸಿದರು.  ಮುಂದೆ ಬ್ರಿಟಿಷ್ ಪ್ರಜೆಯಾಗಿ ಕ್ಯಾನ್ಸರ್ ಕುರಿತಾಗಿ ಮಹತ್ವದ ಸಂಶೋಧನೆ ನಡೆಸಿದ ಅವರಿಗೆ 2015ರ ವರ್ಷದಲ್ಲಿ ರಸಾಯನ ಶಾಸ್ತ್ರದ  ನೊಬೆಲ್ ಪ್ರಶಸ್ತಿ ಸಂದಿತು.

1945: ರಂಗಕರ್ಮಿ ರಾಜಶೇಖರ ಕದಂಬ ಅವರು ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.  ನಟರಾಗಿ, ಕದಂಬ ರಂಗವೇದಿಕೆ ಸ್ಥಾಪಕರಾಗಿ ಖ್ಯಾತರಾಗಿರುವ ಇವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1955: ಪ್ರಸಿದ್ಧ ಉದ್ಯಮಿ ವಿನೋದ್ ಖೋಸ್ಲಾ ನವದೆಹಲಿಯಲ್ಲಿ ಜನಿಸಿದರು.  ಅಮೆರಿಕದಲ್ಲಿ ಇಂಜಿನಿಯರ್ ಮತ್ತು ಉದ್ಯಮಿಯಾಗಿರುವ ಇವರು ವಿಶ್ವಪ್ರಸಿದ್ಧ ಸನ್ ಮೈಕ್ರೋಸಿಸ್ಟಮ್ಸ್ ಸಂಸ್ಥೆಯ  ಸಹ ಸಂಸ್ಥಾಪರಾಗಿ ಮತ್ತು ಅದರ ಪ್ರಾರಂಭಿಕ ಅಧ್ಯಕ್ಷರಾಗಿ ಪ್ರಸಿದ್ಧರು.  ಇದಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹಲವಾರು ಸಂಸ್ಥೆಗಳ ಸ್ಥಾಪಕರಾದ ಇವರು ಭಾರತದಲ್ಲಿನ  ಎಸ್.ಕೆ.ಎಸ್. ಮೈಕ್ರೋ ಫೈನಾನ್ಸ್ ಸಂಸ್ಥೆಯ ಮೂಲಕ ಸಣ್ಣ ಸಾಲ ವ್ಯವಸ್ಥೆಯನ್ನೂ ರೂಪಿಸಿದ್ದಾರೆ.

1976: ದಕ್ಷಿಣ ಭಾರತದ ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಮಾಳವಿಕಾ ಅವಿನಾಶ್ ಜನಿಸಿದರು.  ಇವರಿಗೆ ತಮಿಳು ನಾಡು ಸರ್ಕಾರದಿಂದ  ಉತ್ತಮ ನಟಿ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ಸಂದಿವೆ.

1939: ಇಪ್ಪತ್ತನೆ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬರೆಂದು ಹೆಸರಾಗಿರುವ ಡಬ್ಯೂ. ಬಿ. ಈಟ್ಸ್ ಅವರು ಐರ್ಲ್ಯಾಂಡಿನ ಮೆಂಟನ್ ಎಂಬಲ್ಲಿ ಜನಿಸಿದರು.  ಐರಿಷ್ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಮಹತ್ವದ ಸಾಹಿತ್ಯ ಸೃಷ್ಟಿ ಮಾಡಿದ್ದ ಇವರಿಗೆ 1923ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.  ರಬೀಂದ್ರ ನಾಥ ಠಾಗೂರ್ ಅವರ ಗೀತಾಂಜಲಿ ಕೃತಿಗೆ  ಇವರು ಮುನ್ನುಡಿ ಬರೆದಿದ್ದರು.

1996: ರಷ್ಯನ್ ಮೂಲದ  ಅಮೆರಿಕನ್ ಸಾಹಿತಿ ಜೋಸೆಫ್ ಬ್ರಾಡ್ಸ್ಕಿ ಅವರು ನ್ಯೂಯಾರ್ಕ್ ನಗರದಲ್ಲಿ  ನಿಧನರಾದರು.  ರಷ್ಯಾದಿಂದ ಹೊರಹಾಕಲ್ಪಟ್ಟು ಅಮೆರಿಕದಲ್ಲಿ ಬಂದು ನೆಲೆಸಿ ಸಾಹಿತ್ಯ ಸಾಧನೆ ಮಾಡಿದ ಇವರಿಗೆ 1987ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1996: ಅಮೆರಿಕದ ಪ್ರಸಿದ್ಧ  ಕಾಮಿಕ್ ಬರಹಗಾರ  ಜೆರ್ರಿ ಸೀಗಲ್ ಅವರು ಲಾಸ್ ಏಂಜಲಿಸ್ ನಗರದಲ್ಲಿ ನಿಧನರಾದರು.  ವಿಶ್ವಪ್ರಸಿದ್ಧ  ‘ಸೂಪರ್ಮ್ಯಾನ್’ ಕಾಮಿಕ್ ಅನ್ನು ಇವರು ಜೋಸೆಫ್ ಶಸ್ಟರ್ ಅವರ ಜೊತೆಗೂಡಿ ಸೃಷ್ಟಿಸಿದ್ದರು.

2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ, ಚಲನಚಿತ್ರ ಚಿತ್ರಕಥಾ ಸಾಹಿತಿ ಕಮಲೇಶ್ವರ್ ಫರೀದಾಬಾದಿನಲ್ಲಿ ನಿಧನರಾದರು.  ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಪದ್ಮಭೂಷಣ ಹಾಗೂ ಇನ್ನಿತರ ಪುರಸ್ಕಾರ ಪಡೆದಿದ್ದ ಇವರು  30ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದು  ನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ  ಚಿತ್ರಕಥೆ ಸಂಭಾಷಣೆ ರಚಿಸಿದ್ದರು.  ಪ್ರಸಿದ್ಧ ಚಿತ್ರಗಳಾದ ಆಂಧಿ, ಮೌಸಮ್, ಚೋಟಿ ಸಿ ಬಾತ್, ರಂಗ್ ಬಿರಂಗಿ ಇವುಗಳಲ್ಲಿ ಸೇರಿವೆ.

2007: ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ಮುಂಬೈನಲ್ಲಿ  ನಿಧನರಾದರು.  ಅವರು ಗೀತ ರಚನಕಾರರಾಗಿ, ನಿರ್ಮಾಪಕರಾಗಿ ಸಹಾ ಚಲನಚಿತ್ರ ರಂಗದಲ್ಲಿ ಕೆಲಸ ಮಾಡಿದ್ದರು.

2015: ಫ್ರೆಂಚ್ ರಸಾಯನ ಶಾಸ್ತ್ರಜ್ಞ ವೈವೆಸ್ ಚೌವಿನ್ ಫ್ರಾನ್ಸಿನ ಟವರ್ಸ್ ಎಂಬಲ್ಲಿ ನಿಧನರಾದರು.  2005ರ ವರ್ಷದಲ್ಲಿ ಇವರಿಗೆ ‘ಮೆಟಾಥಿಸಿಸ್’ ಕುರಿತಾದ ಸಂಶೋಧನೆಗಾಗಿ ರಸಾಯನ ಶಾಸ್ತ್ರಜ್ಞರಿಗೆ ಸಲ್ಲುವ ನೊಬೆಲ್  ಪುರಸ್ಕಾರ ಸಂದಿತು.

Categories
e-ದಿನ

ಜನವರಿ-27

ದಿನಾಚರಣೆ:
ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನಾಚರಣೆ
ಹೋಲೋಕಾಸ್ಟ್ ಎಂಬುದು ನಾಜಿ ಆಡಳಿತದಲ್ಲಿ ಹಲವು ದಶಲಕ್ಷಗಟ್ಟಲೆ ಜನ ಕೊಲ್ಲಲ್ಪಟ್ಟ ಘಟನೆಯಾಗಿದೆ. ಸುಮಾರು ಆರು ದಶಲಕ್ಷ ಜ್ಯೂಯಿಷ್ ಜನ, ಎರಡು ಮಿಲಿಯನ್ ರೊಮಾನಿ ಜನ, ಎರಡೂವರೆ ಲಕ್ಷ ಮಾನಸಿಕ ರೋಗಿಗಳು ಮತ್ತು ಅಂಗವಿಕಲರು, ಒಂಬತ್ತು ಸಾವಿರ ಸಲಿಂಗರತಿ ವ್ಯಕ್ತಿಗಳು ನಾಜಿ ಆಡಳಿತದಲ್ಲಿ ಕೊಲೆಗೀಡಾದರು. ಈ ಭೀಕರ ದುರಂತದಲ್ಲಿ ಮಡಿದವರ ಗೌರವಾರ್ಥವಾಗಿ ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನವನ್ನು ಹಲವಾರು ಐರೋಪ್ಯ ದೇಶಗಳಲ್ಲಿ ಆಚರಿಸಲಾಗುತ್ತಿದೆ. 1945ರ ವರ್ಷದ ಜನವರಿ 27ರಂದು ನಾಜಿಗಳ ದೊಡ್ಡ ಶಿಬಿರವಾಗಿದ್ದ ಆಸ್ಕಿವಿಟ್ಜ್-ಬಿರ್ಕೆನಾವ್ ಅನ್ನು ಸೋವಿಯತ್ ಪಡೆಗಳು ನಾಜಿಗಳಿಂದ ಮುಕ್ತಿಗೊಳಿಸಿದವು.

ಪ್ರಮುಖಘಟನಾವಳಿಗಳು:

1785: ಅಮೆರಿಕದ ಪ್ರಥಮ ವಿಶ್ವವಿದ್ಯಾಲಯವಾದ  ‘ಯೂನಿವರ್ಸಿಟಿ ಆಫ್ ಜಾರ್ಜಿಯ’ ಸ್ಥಾಪನೆಗೊಂಡಿತು.

1880: ಥಾಮಸ್ ಆಲ್ವಾ ಎಡಿಸನ್ ಅವರು ವಿದ್ಯುತ್ ಬಲ್ಬಿಗೆ (ಇನ್ಕಾನ್ ಡಿಸೆಂಟ್ ಲ್ಯಾಂಪಿಗೆ) ಪೇಟೆಂಟ್ ಪಡೆದುಕೊಂಡರು.

1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿಬಯೋಟಿಕ್ ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ನ್ಯೂಮೋನಿಯಾ (pneumonia), ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು.

1951: ಅಮೆರಿಕದ ಆಪರೇಷನ್ ರೇಂಜರ್ ಎಂಬ ಹೆಸರಿನ  ಪರಮಾಣು ಪರೀಕ್ಷೆ  ಲಾಸ್ ವೇಗಾಸ್ ಬಳಿಯ ನೇವಡ ಎಂಬಲ್ಲಿ ಆರಂಭಗೊಂಡಿತು.

1955: 1954ರ ವರ್ಷದಿಂದ ಅನ್ವಯವಾಗುವಂತೆ,  1955ರ ವರ್ಷದಿಂದ ಆರಂಭಿಸಲಾದ  ಭಾರತದ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು  ಪ್ರದಾನ ಮಾಡಲಾಯಿತು. ಈ ಭಾರತರತ್ನ ಪ್ರಶಸ್ತಿಯನ್ನು  ಪ್ರಪ್ರಥಮವಾಗಿ ಸ್ವೀಕರಿಸಿದ ಮಹನೀಯರೆಂದರೆ ಪ್ರಥಮ ಹಾಗೂ ಕೊನೆಯ ಭಾರತೀಯ ಗೌರ್ನರ್ ಜನರಲ್  ಸಿ. ರಾಜಗೋಪಾಲಚಾರಿ,  ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್. ಸಿ. ವಿ. ರಾಮನ್  ಮತ್ತು  ಮಹಾನ್ ದಾರ್ಶನಿಕರೂ ಹಾಗೂ  ಭಾರತದ ಪ್ರಥಮ ಉಪರಾಷ್ಟ್ರಪತಿಗಳೂ  ಆದ  ಡಾ. ಸರ್ವೇಪಲ್ಲಿ ರಾಧಾಕೃಷ್ಣನ್.  ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಈ ಮಹನೀಯರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

1967: ನಾಸಾದ ಕೆನಡಿ ಸ್ಪೇಸ್ ಸೆಂಟರಿನಲ್ಲಿ,  ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಉಂಟಾದ ಅಗ್ನಿ ಆಕಸ್ಮಿಕದಲ್ಲಿ ಅಮೆರಿಕದ ಗಗನಯಾತ್ರಿಗಳಾದ  ಗಸ್ ಗ್ರಿಸ್ಸೋಮ್, ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ  ಸಾವಿಗೀಡಾದರು.

1967: ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಂ ಮತ್ತು ರಷ್ಯಾದಿಂದ  ಬಾಹ್ಯಾಕಾಶದಲ್ಲಿ ಅಣ್ವಸ್ತ್ರ ಉಪಯೋಗಿಸದಿರುವ ಒಡಂಬಡಿಕೆಯಾದ  ‘ಔಟರ್ ಸ್ಪೇಸ್ ಟ್ರೀಟಿ’ಗೆ ವಾಷಿಂಗ್ಟನ್ ನಗರದಲ್ಲಿ ಸಹಿಮಾಡಿದವು.  ಚಂದ್ರ ಮತ್ತು ಇತರ ಬಾಹ್ಯಾಕಾಶ  ತಾಣಗಳನ್ನು ಯಾವುದೇ ಅಣ್ವಸ್ತ್ರಗಳ ಬಳಕೆಗೆ ಉಪಯೋಗಿಸದೆ ಕೇವಲ ಶಾಂತಿಯುತವಾಗಿ ಬಳಸುವುದು  ಈ ಒಡಂಬಡಿಕೆಯ ತಿರುಳಾಗಿದೆ.

1974: ರಾಷ್ಟ್ರಪತಿ ವಿ.ವಿ. ಗಿರಿ ಅವರು  ನವದೆಹಲಿಯ ತೀನ್ ಮೂರ್ತಿ ಭವನದಲ್ಲಿ ರೂಪುಗೊಂಡ  ‘ನೆಹರೂ ಸ್ಮಾರಕ ಮ್ಯೂಸಿಯಂ’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

1996: ಹೋಲೋಕಾಸ್ಟ್ ಎಂಬುದು ನಾಜಿ ಆಡಳಿತದಲ್ಲಿ ಹಲವು ದಶಲಕ್ಷಗಟ್ಟಲೆ ಜನ ಕೊಲ್ಲಲ್ಪಟ್ಟ  ಘಟನೆಯಾಗಿದೆ.  ಸುಮಾರು ಆರು ದಶಲಕ್ಷ ಜ್ಯೂಯಿಷ್ ಜನ, ಎರಡು ಮಿಲಿಯನ್ ರೊಮಾನಿ ಜನ,  ಎರಡೂವರೆ ಲಕ್ಷ  ಮಾನಸಿಕ ರೋಗಿಗಳು ಮತ್ತು ಅಂಗವಿಕಲರು, ಒಂಬತ್ತು ಸಾವಿರ  ಸಲಿಂಗರತಿ ವ್ಯಕ್ತಿಗಳು ನಾಜಿ ಆಡಳಿತದಲ್ಲಿ ಕೊಲೆಗೀಡಾದರು.  ಈ ದುರಂತದಲ್ಲಿ ಮಡಿದವರ ಗೌರವಾರ್ಥವಾಗಿ  ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನವನ್ನು  ಹಲವಾರು ಐರೋಪ್ಯ ದೇಶಗಳಲ್ಲಿ ಆಚರಿಸಲಾಗುತ್ತಿದೆ.  1945ರ ವರ್ಷದ  ಜನವರಿ 27ರಂದು  ನಾಜಿಗಳ ದೊಡ್ಡ ಶಿಬಿರವಾಗಿದ್ದ ಆಸ್ಕಿವಿಟ್ಜ್-ಬಿರ್ಕೆನಾವ್ ಅನ್ನು ಸೋವಿಯತ್ ಪಡೆಗಳು  ನಾಜಿಗಳಿಂದ  ಮುಕ್ತಿಗೊಳಿಸಿದವು.  ಜರ್ಮನಿಯು ಪ್ರಥಮ ಬಾರಿಗೆ 1996ರ ವರ್ಷದಲ್ಲಿ ಈ ಆಚರಣೆಯನ್ನು ನಡೆಸಿತು.

2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ ‘ಬಿಗ್ ಬಾಸ್’ ಆಗಿ ಆಯ್ಕೆಯಾದರು.

2007: ನಟ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಡಿ ಆನರ್ ಅನ್ನು  ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2008: ಈ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಸೇರಿರುವುದು ವಿಶೇಷವಾಗಿ ಗಮನ ಸೆಳೆದಿದೆ.  ಉತ್ತರ ಪ್ರದೇಶದ ಮಲಿಹಾಬಾದ್ ನಿವಾಸಿಯಾದ ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ ಮಹತ್ವದ ಸಾಧನೆ ಮಾಡಿದ್ದಾರೆ.

ಪ್ರಮುಖಜನನ/ಮರಣ:

98: ಟ್ರಜಾನ್ ತನ್ನ ಸಾಕು ತಂದೆ ನರ್ವಾ ಉತ್ತರಾಧಿಕಾರಿಯಾಗಿ ರೋಮನ್ ಚಕ್ರಾಧಿಪತಿಯಾದ.  ಈತನ  ಆಳ್ವಿಕೆಯಲ್ಲಿ ರೋಮನ್ ಸಾಮ್ರಾಜ್ಯವು ಗರಿಷ್ಟ ಮಟ್ಟದಲ್ಲಿ ವಿಸ್ತರಿಸಿತು.

1886: ಮಹಾನ್ ಭಾರತೀಯ ನ್ಯಾಯವಾದಿ ರಾಧಾಬಿನೋದ್ ಪಾಲ್ ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಕುಷ್ಟಿಯಾ ಜಿಲ್ಲೆಯಲ್ಲಿ ಜನಿಸಿದರು. ಇವರು ವಿಶ್ವಸಂಸ್ಥೆಯ ಅಂತರ ರಾಷ್ಟ್ರೀಯ  ಕಾನೂನು ಆಯೋಗದ  ಸದಸ್ಯರಾಗಿದ್ದರು.  ಅಲ್ಲದೆ, ಎರಡನೇ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಜಪಾನಿಯರ ಅಪಾರಾಧಗಳ ವಿಚಾರಣೆಗಳನ್ನು ಕೈಗೊಂಡ  ಅಂತರರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ಲಿನಲ್ಲಿ ಇದ್ದ  ಏಕೈಕ  ದಕ್ಷಿಣ ಏಷ್ಯಾದ ನ್ಯಾಯಾಧೀಶರಾಗಿದ್ದರು.  ಮತ್ತೊಂದು ವಿಶೇಷವೆಂದರೆ, ಈ ಸಂದರ್ಭದಲ್ಲಿ ತೀರ್ಪು ನೀಡಿದ  ಎಲ್ಲಾ ನ್ಯಾಯಾಧೀಶರಲ್ಲಿ, “ಎಲ್ಲರೂ ಅಪರಾಧ ಮಾಡಿದವರಲ್ಲ” ಎಂದು ತೀರ್ಪು ನೀಡಿದ ಏಕೈಕ ನ್ಯಾಯಾಧೀಶ ಇವರಾಗಿದ್ದರು.  ಇವರ ಹೆಸರಲ್ಲಿ ಯಾಸುಕುನಿ ಶ್ರೈನ್ ಮತ್ತು ಕ್ಯೋಟೋ ಯೋಜೆನ್ ಶ್ರೈನ್ ಮುಂತಾದವುಗಳನ್ನು ಜಪಾನಿನಲ್ಲಿ ನಿರ್ಮಿಸಲಾಗಿದೆ.

1903: ಮಹಾನ್ ವೈದ್ಯ ಜಾನ್ ಎಕ್ಕಲ್ಸ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಜನಿಸಿದರು.  ಆಸ್ಟ್ರೇಲಿಯಾ ಅಲ್ಲದೆ, ಸ್ವಿಡ್ಜರ್ಲ್ಯಾಂಡ್, ಮತ್ತು ಬ್ರಿಟನ್ನಿನ  ಪೌರತ್ವ ಹೊಂದಿದ್ದ ಇವರಿಗೆ ಸೈನಾಪ್ಸ್ ಕುರಿತಾದ ಮಹತ್ವದ ಕಾರ್ಯಕ್ಕೆ 1963ರಲ್ಲಿ  ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ನೀಡಲಾಯಿತು.

1928: ಪ್ರಸಿದ್ಧ ಬ್ರಿಟಿಷ್ ನಟ, ಚಿತ್ರಕಥೆಗಾರ ಬ್ರಿಟಿಷ್ ನಟ ಮೈಖೇಲ್ ಕ್ರೆಗ್ ಪುಣೆಯಲ್ಲಿ ಜನಿಸಿದರು.  ರಂಗಭೂಮಿ, ಕಿರುತೆರೆ, ಮತ್ತು ಸಿನಿಮಾ ರಂಗಗಳಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.

1936: ಅಮೆರಿಕದ ಪ್ರಸಿದ್ಧ ಭೌತಶಾಸ್ತ್ರಜ್ಞ ಸಾಮ್ಯುಯಲ್ ಸಿ. ಸಿ. ಟಿಂಗ್ ಅವರು ಮಿಚಿಗನ್ ಬಳಿಯ ಆನ್ ಹಾರ್ಬರ್ ಎಂಬಲ್ಲಿ ಜನಿಸಿದರು.  ಸಬ್ ಆಟೋಮೆಟಿಕ್ ಪಾರ್ಟಿಕಲ್ ಸಂಶೋಧನೆಗಾಗಿ ಇವರಿಗೆ 1976ರ ವರ್ಷದ ನೊಬೆಲ್ ಪುರಸ್ಕಾರ ಸಂದಿತು.  ಇವರು 2011ರಲ್ಲಿ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಶನ್ನಿನಲ್ಲಿ ಸ್ಥಾಪಿಸಲಾದ  1.5 ಬಿಲಿಯನ್ ಡಾಲರ್ ಮೌಲ್ಯದ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟೋಮೀಟರ್ ಪ್ರಯೋಗದ  ಪ್ರಧಾನ ತನಿಕಾ ಅಧಿಕಾರಿಗಳಾಗಿದ್ದರು.

1944: ಉತ್ತರ ಐರ್ಲ್ಯಾಂಡಿನಲ್ಲಿ ಶಾಂತಿ ಸ್ಥಾಪನಾ ಕಾರ್ಯಕರ್ತೆಯಾಗಿ ಅನೇಕ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸಿ ಮಹತ್ವದ ಕೆಲಸ ಮಾಡಿರುವ  ಮೈರೀಡ್ ಕಾರಿಗಾನ್ ಮೆಗೈರ್ ಅವರು  ಬೆಲ್ಗ್ರೇಡ್ ನಗರದಲ್ಲಿ ಜನಿಸಿದರು.   ಇವರಿಗೆ 1976ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1945:ಕವಿ, ಕಥೆಗಾರ, ಕಾದಂಬರಿಕಾರ ಮತ್ತು ಚಲನಚಿತ್ರ ಗೀತರಚನಕಾರ  ಎಂ.ಎನ್ ವ್ಯಾಸರಾವ್ ಅವರು ಮೈಸೂರಿನಲ್ಲಿ ಜನಿಸಿದರು. ‘ಮಳೆಯಲ್ಲಿ ನೆನೆದ ಮರಗಳು’ ಎಂಬ  ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ; ಹಲವಾರು ವಿಚಾರ ಸಂಕೀರ್ಣ, ಕವಿ ಸಮ್ಮೇಳನಗಳಲ್ಲಿ ಪ್ರಮುಖ ಪಾತ್ರ; ಸಾಹಿತ್ಯ, ಸಿನಿಮಾಗಳಿಗೆ ಸಂಬಂಧಿತ ಹಲವಾರು ಪ್ರಶಸ್ತಿ ಗೌರವಗಳು ಎಂ. ಎನ್. ವ್ಯಾಸರಾಯರನ್ನು ಅರಸಿ ಬಂದಿವೆ.

1731: ಪ್ರಸಿದ್ಧ ವಾದ್ಯ ತಯಾರಕ ಹಾಗೂ ಪಿಯಾನೋ ವಾದ್ಯವನ್ನು ಕಂಡುಹಿಡಿದ  ಬಾರ್ಟೋಲೋಮಿಯೋ ಕ್ರಿಸ್ಟೋಫೋರಿ  ಇಟಲಿಯಲ್ಲಿ ಜನಿಸಿದರು.

1880: ಪ್ರಖ್ಯಾತ ಹ್ಯಾಲಿಫ್ಯಾಕ್ಸ್ ಟೌನ್ ಹಾಲ್,  ರಾಯಲ್ ಒಪೇರಾ ಹೌಸ್ ಮುಂತಾದ ಪ್ರಸಿದ್ಧ ಕಟ್ಟಡಗಳನ್ನೂ ಒಳಗೊಂಡಂತೆ,  ಶ್ರೇಷ್ಠ ಕಟ್ಟಡ ವಿನ್ಯಾಸಗಳಿಗೆ  ಪ್ರಸಿದ್ಧರಾಗಿದ್ದ  ಎಡ್ವರ್ಡ್ ಮಿಡಲ್ಟನ್ ಬ್ಯಾರಿ ಇಂಗ್ಲೆಂಡಿನಲ್ಲಿ ನಿಧನರಾದರು.

2006: ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ  ಸರ್ದಾರ್ ಮಲ್ಲಿಕ್ ಮುಂಬೈನಲ್ಲಿ ನಿಧನರಾದರು. ಇವರು ಉಸ್ತಾದ್ ಅಲ್ಲಾ ಉದ್ದೀನ್ ಖಾನ್ ಅವರ ಬಳಿ ಸಂಗೀತ ಕಲಿತದ್ದಲ್ಲದೆ,  ಪ್ರಖ್ಯಾತ ನೃತ್ಯ ಕಲಾವಿದ ರವಿಶಂಕರ್ ಅವರ ಬಳಿಯೂ ನೃತ್ಯ ಸಂಗೀತ ಸಾಧನೆ ಮಾಡಿದ್ದರು.  ಪ್ರಾರಂಭದ ದಿನಗಳಲ್ಲಿ ಹಿನ್ನೆಲೆ ಗಾಯಕರಾಗಿಯೂ  ಹಾಡುತ್ತಿದ್ದ ಇವರು  ನಂತರದ ದಿನಗಳಲ್ಲಿ  ಸಂಗೀತ ನಿರ್ದೇಶನಕ್ಕೆ ಮೀಸಲಾದರು.    ರೇಣುಕಾ, ರಾಸ್, ಸ್ಟೇಜ್, ಲೈಲಾ ಮಜ್ನು, ತೋಕಾರ್ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ಹರಿದಿದ್ದ ಅವರ ಸಂಗೀತ,  ಮಾಧುರ್ಯ ಗುಣದಿಂದ  ಪ್ರಸಿದ್ಧಿಗೊಂಡಿತ್ತು.

2006: ಕನ್ನಡದ ಪ್ರಸಿದ್ಧ ಬರಹಗಾರ್ತಿ ಟಿ. ಸುನಂದಮ್ಮ ಬೆಂಗಳೂರಿನಲ್ಲಿ ನಿಧನರಾದರು.  ‘ಕೊರವಂಜಿ’ ಹಾಸ್ಯಪತ್ರಿಕೆಯ ಮೂಲಕ  ಹೆಸರಾದ ಇವರ ‘ಸಮಗ್ರ ಹಾಸ್ಯ ಕೃತಿ’ 1993ರಲ್ಲಿ ಪ್ರಕಟವಾಗಿತ್ತು. ‘ಭಂಜದ ಚೀಲ’, ‘ಬಣ್ಣದ ಚಿಟ್ಟೆ’ ಹಾಗೂ ‘ಪೆಪ್ಪರ್ ಮೆಂಟ್’ ಇವರ ಇನ್ನಿತರ ಕೆಲವು ಕೃತಿಗಳು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದಾನಚಿಂತಾಮಣಿ ಮುಂತಾದ ಅನೇಕ ಗೌರವಗಳಿಗೆ   ಭಾಜನರಾಗಿದ್ದ ಇವರು  ‘ಕರ್ನಾಟಕ ಲೇಖಕಿಯರ ಸಂಘ’ ಮೂಡುವುದಕ್ಕೆ ಕಾರಣಕರ್ತರಾಗಿ ನಿರಂತರ ಕ್ರಿಯಾಶೀಲರಾಗಿದ್ದರು.

2009: ದೇಶದ ಎಂಟನೇ ರಾಷ್ಟ್ರಪತಿಗಳಾಗಿದ್ದ ಆರ್. ವೆಂಕಟರಾಮನ್ ನವದೆಹಲಿಯಲ್ಲಿ ನಿಧನರಾದರು.  ತಮಿಳು ನಾಡಿನ ರಾಜಕೀಯದಲ್ಲಿ ಮತ್ತು ರಾಷ್ಟ್ರದ ರಾಜಕಾರಣದಲ್ಲಿ ವಿವಿಧ ಹುದ್ಧೆಗಳನ್ನು ನಿರ್ವಹಿಸಿ  ಎಂಟನೇ ರಾಷ್ಟ್ರಪತಿಗಳ ಸ್ಥಾನವನ್ನು ಅಲಂಕರಿಸಿದ್ದ ವೆಂಕಟರಾಮನ್  ಅನೇಕ ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ.

2015: ಅಮೇರಿಕಾದ ಭೌತಶಾಸ್ತ್ರಜ್ಞ ಚಾರ್ಲ್ಸ್ ಹಾರ್ಡ್ ಟೌನ್ಸ್ ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ಎಂಬಲ್ಲಿ ನಿಧನರಾದರು.  ಕ್ವಾಂಟಮ್ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಇವರಿಗೆ 1964ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

Categories
e-ದಿನ

ಜನವರಿ-26

 

 

ದಿನಾಚರಣೆಗಳು:

ಭಾರತದ ಗಣತಂತ್ರ ದಿನ

1950ರಲ್ಲಿ ಈ ದಿನದಂದು ಭಾರತದ ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಿಂಹವುಳ್ಳ  ಸಾಮ್ರಾಟ ಅಶೋಕನ ಲಾಂಛನ ದೇಶದ ರಾಷ್ಟ್ರೀಯ ಲಾಂಛನವಾಯ್ತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಭಾರತದ ಪ್ರಥಮ ರಾಷ್ಟ್ರಪತಿಗಳಾಗಿ ಬಾಬು ರಾಜೇಂದ್ರ ಪ್ರಸಾದ್ ಅವರು ಪ್ರಮಾಣವಚನ ಸ್ವೀಕರಿಸಿದರು. ದೇಶದ ಪ್ರಜೆಗಳಿಗೆ  ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತೀಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ಪ್ರತಿವರ್ಷ ದೆಹಲಿಯಲ್ಲಿ ಈ ದಿನದಂದು  ನಡೆಯುವ  ಗಣರಾಜ್ಯೋತ್ಸವ ಪೆರೇಡಿನಲ್ಲಿ ಭಾರತದ ರಾಷ್ಟ್ರಪತಿಗಳು ಸೇನೆಯಿಂದ ಗೌರವವಂದನೆ ಸ್ವೀಕರಿಸುತ್ತಾರೆ.

ಜನವರಿ 26 ಆಸ್ಟ್ರೇಲಿಯಾದ ಅಧಿಕೃತ ರಾಷ್ಟ್ರೀಯ ದಿನವಾಗಿದೆ.  1788ನೇ ವರ್ಷದಲ್ಲಿ ನ್ಯೂ ಸೌತ್ ವೇಲ್ಸ್ ನಗರದ ಜಾಕ್ಸನ್ ಬಂದರಿಗೆ ಮೊದಲ ಬ್ರಿಟಿಷ್ ಹಡಗುಗಳು ಈ ದಿನದಲ್ಲಿ ಬಂದಿಳಿದವು.  ಆ ಸಂದರ್ಭದಲ್ಲಿ ಗರ್ವನರ್ ಆರ್ಥರ್ ಫಿಲಿಪ್, ಸಿಡ್ನಿ ಕಡಲಿನ ದಂಡೆಯಲ್ಲಿ ಗ್ರೇಟ್ ಬ್ರಿಟನ್ನಿನ ಧ್ವಜಾರೋಹಣ ಮಾಡಿದ ಸಂದರ್ಭಕ್ಕೆ ಈ ಆಚರಣೆ ಹೊಂದಿಕೊಂಡಿದೆ.  ಇಂದಿನ ವರ್ಷಗಳಲ್ಲಿ  ಆಸ್ಟ್ರೇಲಿಯಾದ  ಸಾಂಸ್ಕೃತಿಕ, ಐತಿಹಾಸಿಕ ಮತ್ತು  ಮಹತ್ವದ ಸಾಧನೆಗಳನ್ನು ಸಂಭ್ರಮಿಸುವ ಉತ್ಸವವನ್ನಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1500: ವಿನ್ಸೆಂಟ್ ಯಾನೆಸ್ ಪಿನ್ಜನ್, ಬ್ರೆಜಿಲ್ ನೆಲದಲ್ಲಿ ಕಾಲಿಟ್ಟ ಪ್ರಥಮ ಐರೋಪ್ಯರೆನಿಸಿದರು.

1531: ಲಿಸ್ಬನ್ನಿನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು ಮೂವತ್ತು ಸಾವಿರ ಜನ ಅಸುನೀಗಿದರು.

1565: ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ತಾಳೀಕೋಟೆ ಯುದ್ಧ  ನಡೆಯಿತು.  ತಾಳೀಕೋಟೆ ಈಗಿನ  ಬಿಜಾಪುರದಿಂದ 80 ಕಿ.ಮೀ ದೂರದಲ್ಲಿರುವ ಕರ್ನಾಟಕದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.

1838: ಟೆನ್ನೆಸ್ಸೆ ಅಮೆರಿಕದಲ್ಲಿ ಪ್ರಥಮ ಬಾರಿಗೆ ಮಧ್ಯಪಾನ ನಿರೋಧ ಕಾಯಿದೆ ಜಾರಿಗೊಳಿಸಿದ

1905: ವಜ್ರಗಳಲ್ಲೇ ಅತ್ಯಂತ ದೊಡ್ಡದಾದ ಕುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಬಳಿಯ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು.  ಈ ದಿನಕ್ಕೆ ಮೂರು ವರ್ಷಗಳ ಹಿಂದೆ  ಈ ಗಣಿಯನ್ನು ಪತ್ತೆ ಹಚ್ಚಿದ್ದ ಸರ್ ಥಾಮಸ್ ಕುಲಿನನ್ ಅವರ ಹೆಸರೇ ಈ ವಜ್ರದ ಹೆಸರಾಗಿದೆ.  ಈ ವಜ್ರ   3,106.75 ಕ್ಯಾರಟ್  (0.621350 ಕೆ.ಜಿ) ತೂಗುತ್ತದೆ.

1911: ಗ್ಲೆನ್ ಹೆಚ್. ಕರ್ಟಿಸ್ ಅವರು  ಅಮೆರಿಕದ ಮೊದಲ  ಸೀಪ್ಲೇನ್ ಹಾರಿಸಿದರು.

1926: ಸ್ಕಾಟಿಷ್ ತಂತ್ರಜ್ಞರಾದ  ಜಾನ್ ಲೋಗಿ ಬೈರ್ಡ್ ಅವರು ಮೊದಲಬಾರಿಗೆ  ದೂರದರ್ಶನ ಯಂತ್ರವನ್ನು ಪದರ್ಶಿಸಿದರು.

1930: ಭಾರತದ ರಾಷ್ಟ್ರೀಯ ಕಾಂಗ್ರೆಸ್ಸು ಬ್ರಿಟಿಷರಿಂದ ಪೂರ್ಣ ಸ್ವಾತಂತ್ಯ್ರವನ್ನು ಪಡೆಯುವ ಧ್ಯೇಯವಾದ  ‘ಪೂರ್ಣ ಸ್ವರಾಜ್’ಅನ್ನು  ಘೋಷಿಸಿತು. ಅದು ಮುಂದೆ 17 ವರ್ಷಗಳ ನಂತರದಲ್ಲಿ  ಸಾರ್ಥ್ಯಕ್ಯಗೊಂಡಿತು.

1942: ಎರಡನೇ ವಿಶ್ವಮಹಾಯುದ್ಧದಲ್ಲಿ  ಪಾಲ್ಗೊಳ್ಳಲು ಅಮೆರಿಕನ್ ಪಡೆಗಳು ಯೂರೋಪಿನ  ಉತ್ತರ ಐರ್ಲ್ಯಾಂಡ್ ತಲುಪಿದವು.

1949: ಕ್ಯಾಲಿಫೋರ್ನಿಯಾದ ಪಲೋಮಾರ್ ವೀಕ್ಷಣಾಲಯದಲ್ಲಿನ ‘ಹಲೆ ಟೆಲಿಸ್ಕೊಪ್’ ಮುಖಾಂತರವಾಗಿ ಎಡ್ವಿನ್ ಹಬ್ಬಲ್ ಕಡೆಗೆ  ಪ್ರಥಮ ಬೆಳಕನ್ನು ಕಾಣಲಾಯಿತು.  ಇದರಿಂದಾಗಿ 1976ರ ಅವಧಿಯಲ್ಲಿ ಬಿಟಿಎ-6 ಟೆಲಿಸ್ಕೋಪ್ ಆವಿಷ್ಕಾರ ಬರುವವರೆಗೆ, ಇದು ಅತ್ಯಂತ ಬೃಹತ್ ನೋಟ ಸಾಧ್ಯತೆಯ ‘ಲಾರ್ಜೆಸ್ಟ್ ಅಪೇರ್ಚರ್ ಆಪ್ಟಿಕಲ್ ಟೆಲಿಸ್ಕೋಪ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

1950: ಭಾರತದ ಸಂವಿಧಾನವು ಆಚರಣೆಗೆ ಬಂದು ಭಾರತವು ಗಣತಂತ್ರ ರಾಷ್ಟ್ರವಾಯಿತು.  ಬಾಬು ರಾಜೇಂದ್ರ ಪ್ರಸಾದ್ ಭಾರತದ ಪ್ರಥಮ ರಾಷ್ಟ್ರಪತಿಗಳಾದರು. ಈ ದಿನವನ್ನು ಗಣತಂತ್ರ ದಿನವನ್ನಾಗಿ  ಆಚರಿಸಲಾಗುತ್ತಿದೆ.

1952: ಈಜಿಪ್ಟಿನಲ್ಲಿ ದಂಗೆಕೋರರು,  ಬ್ರಿಟಿಷರು ಮತ್ತು  ಈಜಿಪ್ಟಿನ ಶ್ರೀಮಂತ  ವರ್ಗದವರನ್ನು ಗುರಿಯಿಟ್ಟುಕೊಂಡು ಇಡೀ ಕೈರೋದ ಮಧ್ಯ ಭಾಗದ ವಾಣಿಜ್ಯ ಜಿಲ್ಲೆಯನ್ನು ಬೆಂಕಿಯಲ್ಲಿ ಹತ್ತಿ ಉರಿಯುವಂತೆ ಮಾಡಿದರು.  ಇದು ಈಜಿಪ್ಟಿನ ‘ಬ್ಲಾಕ್ ಸಾಟರ್ಡೇ’ ಎನಿಸಿದೆ.

1962: ನಾಸಾದ ರೇಂಜರ್ 3, ಚಂದ್ರನನ್ನು ಅಧ್ಯಯನ ಮಾಡಲು ಉಡ್ಡಯನಗೊಂಡಿತು.  ಆದರೆ ಅದು 22,000 ಮೈಲುಗಳ ಅಂತರದಲ್ಲಿ ಚಂದ್ರನನ್ನು ತಲುಪಲು ವಿಫಲಗೊಂಡಿತು.

1965: ಹಿಂದಿ ಭಾಷೆಯನ್ನೂ ಭಾರತದ ಅಧಿಕೃತ ರಾಷ್ಟ್ರಭಾಷೆ ಎಂದು ಪರಿಗಣಿಸಲಾಯಿತು.

2001: ಗುಜರಾತಿನಲ್ಲಿ 7.7 ಎಂ.ಡಬ್ಲ್ಯೂ ಪ್ರಮಾಣದ  ಭೀಕರ ಭೂಕಂಪನವಾಗಿ 13,085 ರಿಂದ 20,023 ಸಾವುಗಳು ಸಂಭವಿಸಿ 1,66,800 ಮಂದಿ ಗಾಯಗೊಂಡರು.

2007: ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ‘ಸಾಕ್ಷಾತ್’ ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು.

2007: ಬೆಂಗಳೂರು ನಗರದ  ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದಲ್ಲಿರುವ ಶ್ರೀ  ಜಯಚಾಮರೆಜೇಂದ್ರ  ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

2008:  ಇನ್ಫೋಸಿಸ್ ಸಂಸ್ಥಾಪಕರಾದ  ಎನ್. ಆರ್. ನಾರಾಯಣ ಮೂರ್ತಿ ಅವರಿಗೆ ಫ್ರಾನ್ಸ್ ಸರ್ಕಾರವು ತನ್ನ ದೇಶದ  ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್’ ಪ್ರಶಸ್ತಿ ನೀಡಿ ಗೌರವಿಸಿತು.

2008: ಅಡಿಲೇಡಿನಲ್ಲಿ ಹಿಂದಿನ ದಿನ ತಾನೇ  ಅತಿ ಹೆಚ್ಚು (414) ವಿಕೆಟ್ ಪತನದ ವಿಶ್ವದಾಖಲೆ ನಿರ್ಮಿಸಿದ್ದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್,  ಈ ದಿನ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.

2009: ಸುಮಾರು 5,500 ವರ್ಷಗಳಿಗೂ ಹಳೆಯದಾದ ನವಶಿಲಾಯುಗಕ್ಕೆ ಸೇರಿದ್ದ ಮಾನವ ನಿರ್ಮಿತ ಗುಹೆ ಮತ್ತು ಮಡಿಕೆ ಮಾಡುವ ಸ್ಥಳಗಳನ್ನು ಪತ್ತೆ ಹಚ್ಚಿರುವುದಾಗಿ ಚೀನೀ ಪ್ರಾಕ್ತನ ತಜ್ಞರು ಪ್ರಕಟಿಸಿದರು. ವಾಯವ್ಯ ಚೀನಾದ ಶಾಂನ್ಷಿ ಪ್ರಾಂತ್ಯದ ನದೀ ತೀರದ  ಕಡಿದಾದ ಪ್ರದೇಶದಲ್ಲಿ 17 ಗುಹಾಂತರ ಮನೆಗಳು ಕಂಡು ಬಂದಿವೆ ಎಂದು ಪ್ರಾಚ್ಯಶಾಸ್ತ್ರಜ್ಞ ವಾಂಗ್ ವೇಲಿನ್ ಹೇಳಿದರು.  ಕ್ರಿ.ಪೂ. 3500 ಮತ್ತು 3000ರ ಅವಧಿಯಲ್ಲಿ ಈ ಮನೆಗಳು ನಿರ್ಮಾಣಗೊಂಡಿವೆ ಎಂದು ಈ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2009: ಮುಂಬೈ ನಗರದ ಮೇಲೆ  ನವೆಂಬರ್  26ರ  ಉಗ್ರರ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ  ಮಹಾರಾಷ್ಟ್ರ ಪೊಲೀಸ್ ದಳದ  ಹೇಮಂತ ಕರ್ಕರೆ, ಅಶೋಕ ಕಮ್ತೆ, ವಿಜಯ ಸಾಲಸ್ಕರ್, ತುಕಾರಾಮ್ ಓಂಬಳೆ,  ಹವಿಲ್ದಾರ್ ಗಜೇಂದರ್ ಸಿಂಗ್ ಮುಂತಾದವರು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ 11 ಮಂದಿ ಭದ್ರತಾ ಸಿಬ್ಬಂದಿಯನ್ನು ರಾಷ್ಟ್ರವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವದಿಂದ ಸ್ಮರಿಸಿತು. ರಾಜಧಾನಿಯಲ್ಲಿ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಬಟಾಲಾ ಹೌಸಿನಲ್ಲಿ ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಅವರಿಗೂ ಮರಣೋತ್ತರ ಪ್ರಶಸ್ತಿ ಗೌರವ ಸಲ್ಲಿಸಲಾಯಿತು.

2017: ಕರ್ನಾಟಕದ ಪ್ರಖ್ಯಾತ ವಿಜ್ಞಾನಿ ಪ್ರೊ. ಯು. ಆರ್. ರಾವ್ ಅವರಿಗೆ ಪದ್ಮವಿಭೂಷಣ, ನಿಘಂಟು ವಿದ್ವಾಂಸರಾದ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ, ಚಲನಚಿತ್ರ ಕಲಾವಿದೆ ಭಾರತಿ ವಿಷ್ಣುವರ್ಧನ್, ಜನಪದ ಕಲಾವಿದೆ ಮತ್ತು ಸಮಾಜ ಸುಧಾರಕಿ ಸುಕ್ರಿ ಬೊಮ್ಮಗೌಡ, ತೂಗು ಸೇತುವೆಗಾಗಿ ಪ್ರಸಿದ್ಧರಾದ ಗಿರೀಶ್ ಭಾರದ್ವಾಜ್, ಒಲಿಂಪಿಕ್ಸ್ ಪದಕ ವಿಜೇತ ಗಿರೀಶ್ ಭಾರದ್ವಾಜ್, ಅಂಧರ ಕ್ರಿಕೆಟ್ ನಾಯಕ ಶೇಖರ್ ನಾಯಕ್ ಅವರುಗಳನ್ನೂ ಒಳಗೊಂಡಂತೆ 7 ಪದ್ಮವಿಭೂಷಣ, 7 ಪದ್ಮಭೂಷಣ ಮತ್ತು 75 ಪದ್ಮಶ್ರೀ ಪ್ರಶಸ್ತಿಗಳನ್ನು ಭಾರತ ಸರ್ಕಾರ ಪ್ರಕಟಿಸಿದೆ. ಪದ್ಮಭೂಷಣ ಪ್ರಶಸ್ತಿ ನಾಮಾಂಕಿತ ಗಣ್ಯರಲ್ಲಿ ಪ್ರಖ್ಯಾತ ಗಾಯಕ ಕೆ. ಜೆ. ಏಸುದಾಸ್ ಹಾಗೂ ಪದ್ಮಶ್ರೀ ಗಣ್ಯರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದ್ದಾರೆ.

ಪ್ರಮುಖಜನನ/ಮರಣ:

1904: ಐರ್ಲ್ಯಾಂಡಿನಲ್ಲಿನ ಒಬ್ಬ ಪ್ರಾಂತೀಯ ರಾಜಕಾರಣಿಯಾದರೂ ವಿಶ್ವಸಂಸ್ಥೆ, ಕೌನ್ಸಿಲ್ ಆಫ್ ಯೂರೋಪ್, ಆಮ್ನೆಸ್ಟಿ ಇಂಟರ್ನ್ಯಾಷನಲ್ ಮುಂತಾದ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳ  ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ  ಸೀನ್ ಮೆಕ್ಬ್ರೈಡ್ ಅವರು ಪ್ರಾನ್ಸಿನ ಪ್ಯಾರಿಸ್ ನಗರದಲ್ಲಿ ಜನಿಸಿದರು.  ಅವರಿಗೆ 1974ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

1911: ಪ್ರಸಿದ್ಧ ಭೌತವಿಜ್ಞಾನಿ ಪಾಲಿಕರ್ರ್ಪ ಕುಶ್ಚ್ ಜರ್ಮನಿಯಲ್ಲಿ ಜನಿಸಿದರು.  ಮುಂದೆ ಅಮೇರಿಕಾದ ಪ್ರಜೆಯಾದ ಅವರು ‘ಮ್ಯಾಗ್ನೆಟಿಕ್ ಮೂವ್ಮೆಂಟ್ ಆಫ್ ದಿ ಎಲೆಕ್ಟ್ರಾನ್’ ಅನ್ನು  ಅತ್ಯಂತ ಖಚಿತವಾಗಿ  ಪ್ರಸ್ತುತಪಡಿಸಿದ್ದಕ್ಕಾಗಿ  1955ರ ವರ್ಷದ ನೊಬೆಲ್ ಪುರಸ್ಕಾರ ಪಡೆದರು

1915: ಕನ್ನಡದ ಪ್ರೇಮಕವಿ ಎಂದೇ ಪ್ರಖ್ಯಾತರಾದ ಡಾ. ಕೆ. ಎಸ್. ನರಸಿಂಹಸ್ವಾಮಿ ಅವರು  ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.  ಮೈಸೂರು ಮಲ್ಲಿಗೆಗೆ ದೇವರಾಜಬಹದ್ದೂರ್ ಬಹುಮಾನ, ಶಿಲಾಲತೆಗೆ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ, ತೆರೆದ ಬಾಗಿಲು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ‘ದುಂಡು ಮಲ್ಲಿಗೆ’ ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಇವರು ಡಿಸೆಂಬರ್ 2003ರಲ್ಲಿ ನಿಧನರಾದರು.

1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು. ಅಖಿಲ ಭಾರತ ಲಲಿತ ಕಲಾ ಅಕಾಡೆಮಿಯಿಂದ ಚಿನ್ನದ ಪದಕ, ಧರ್ಮಸ್ಥಳದ ವಸ್ತು ಪ್ರದರ್ಶನದಿಂದ ಚಿನ್ನದ ಪದಕ,  ರಾಜ್ಯ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1921: ಜಪಾನಿನ ಪ್ರಖ್ಯಾತ ಉದ್ಯಮಿ,  ವಿಶ್ವ ಪ್ರಸಿದ್ಧ ‘ಸೋನಿ’ ಸಂಸ್ಥೆಯ ಸ್ಥಾಪಕರಾದ ಅಕಿಯೋ ಮೊರಿಟಾ ಅವರು  ಐಚಿ ಬಳಿಯ ನಗೋಯ್ ಎಂಬಲ್ಲಿ ಜನಿಸಿದರು.  ಮ್ಯಾಗ್ನೆಟಿಕ್ ಟೇಪ್ ಉದ್ಯಮ, ಪಾಕೆಟ್ ರೇಡಿಯೋ ಮುಂತಾದ ಅನೇಕ ಮಹತ್ವದ  ವಸ್ತುಗಳ ನಿರ್ಮಾಣವನ್ನು ಪ್ರಾರಂಭಿಸಿದ ಕೀರ್ತಿ ಇವರದ್ದಾಗಿದೆ.

1967: ಪ್ರಸಿದ್ಧ ಇಂಟರ್ನೆಟ್ ಮೂವಿ ಡಾಟಾಬೇಸ್ (IMDb) ಸಂಸ್ಥೆಯ ಸ್ಥಾಪಕ ಕಾಲ್ ನೀಧಾಮ್ ಇಂಗ್ಲೆಂಡಿನ ಡೆಂಟೆನ್ ಎಂಬಲ್ಲಿ ಜನಿಸಿದರು.  ಮುಂದೆ ಈ ಸಂಸ್ಥೆಯನ್ನು 1998ರಲ್ಲಿ ಅಮೆಜಾನ್ ಸಂಸ್ಥೆ ತನ್ನ ಪರಿಧಿಯೊಳಗೆ ಸೇರಿಸಿಕೊಂಡಿತು.

1556: ಮೆಟ್ಟಿಲುಗಳ ಮೇಲಿಂದ ಉರುಳಿ ಬಿದ್ದು ಗಾಯಗೊಂಡ ಚಕ್ರವರ್ತಿ ಹ್ಯುಮಾಯುನ್ ಸಾವಿಗೀಡಾದ.

1831: ಕಿತ್ತೂರು ರಾಣಿ ಚೆನ್ನಮ್ಮನಿಗೆ ಬೆಂಬಲವಾಗಿ ಗೊರಿಲ್ಲಾ ಯುದ್ಧದ ರೂವಾರಿಯಾಗಿ   ಬ್ರಿಟಿಷರಿಗೆ ಸಿಂಹ ಸ್ವಪ್ನನಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು  ನೇಣುಗಂಬಕ್ಕೇರಿಸಿ ಕೊಂದರು.

1891: ಪೆಟ್ರೋಲಿಯಂ ಮತ್ತು ಗ್ಯಾಸಿನ ಸಹಾಯದಿಂದ  ಚಲಿಸುವ  ಇಂಟರ್ನಲ್ ಕಂಬಶನ್ ಇಂಜಿನ್  ನಿರ್ಮಿಸಿ  ಆಧುನಿಕ  ಕಂಬಶನ್ ಇಂಜಿನ್ನುಗಳಿಗೆ ಪಂಕ್ತಿ ಹಾಕಿಕೊಟ್ಟ  ನಿಕೊಲಸ್ ಓಟ್ಟೋ ಜರ್ಮನಿಯ ಕೊಲೇನ್ ಎಂಬಲ್ಲಿ ನಿಧನರಾದರು.

2006: ಖ್ಯಾತ ಭಾರತೀಯ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು.  ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.

2009: ಹಿರಿಯ ಕಲಾವಿದ ಮತ್ತು ಬಿಜಿಎಂ ಕಲಾಶಾಲೆಯ ಸ್ಥಾಪಕ ಬೋಳಾರ್ ಗುಲಾಂ ಮೊಹಮ್ಮದ್ ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೇ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.  ಇವರು 1953ರಲ್ಲಿ ಸ್ಥಾಪಿಸಿದ ಬಿಜಿಎಂ ಕಲಾಶಾಲೆ ಸಹಸ್ರಾರು ಕಲಾವಿದರು ರೂಪುಗೊಳ್ಳಲು ಕಾರಣವಾಗಿದೆ.

2013: ಅಂತರರಾಷ್ಟ್ರೀಯ ಖ್ಯಾತಿಯ  ಭಾರತೀಯ ಭೌತವಿಜ್ಞಾನಿ  ಪದ್ಮಾಕಾಂತ್ ಶುಕ್ಲಾ  ನವದೆಹಲಿಯಲ್ಲಿ ನಿಧನರಾದರು.

 

Categories
e-ದಿನ

ಜನವರಿ-25

ದಿನಾಚರಣೆಗಳು:
ರಾಷ್ಟ್ರೀಯ ಮತದಾರರ ದಿ
ಭಾರತದ ಚುನಾವಣಾ ಆಯೋಗವು 1950ರ ವರ್ಷದಲ್ಲಿ ಜನವರಿ 25ರ ಈ ದಿನದಂದು ಸ್ಥಾಪನೆಗೊಂಡಿತು. ಭಾರತದಲ್ಲಿ ಮತದಾನವನ್ನು ಚಲಾಯಿಸುವ ಹಕ್ಕು ಹೊಂದಿರುವ ಪ್ರತಿಯೋರ್ವರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಡುವ ಉದ್ದೇಶದಿಂದ 2011ರಿಂದ ಪ್ರಾರಂಭಗೊಂಡಂತೆ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1881: ಪ್ರಖ್ಯಾತ ಸಂಶೋಧಕರುಗಳಾದ ಥಾಮಸ್ ಆಲ್ವಾ ಎಡಿಸನ್ ಮತ್ತು ಅಲೆಗ್ಸಾಂಡರ್ ಗ್ರಹಾಮ್ ಬೆಲ್ ಅವರು ಜೊತೆಗೂಡಿ ಓರಿಯೆಂಟಲ್ ಟೆಲಿಫೋನ್ ಕಂಪೆನಿ ಸ್ಥಾಪಿಸಿದರು.

1890: ಅಮೆರಿಕದ ಪ್ರಸಿದ್ಧ ಪತ್ರಕರ್ತೆ, ಬರಹಗಾರ್ತಿ ಮತ್ತು ಸಾಹಸಿ ನೆಲ್ಲಿ ಬ್ಲೈ ಎಂಬಾಕೆ 72ದಿನಗಳಲ್ಲಿ ವಿಶ್ವ ಪರ್ಯಟನೆ ನಡೆಸಿದ ದಾಖಲೆ ಸ್ಥಾಪಿಸಿದರು.

1909: ರಿಚರ್ಡ್ ಸ್ಟ್ರಾಸ್ ಅವರ ಪ್ರಸಿದ್ಧ ‘ಎಲೆಕ್ಟ್ರಾ’ ಒಪೇರಾ ತನ್ನ ಮೊದಲ ಪ್ರದರ್ಶನವನ್ನು ಜರ್ಮನಿಯ ‘ಡ್ರೆಸ್ಡನ್ ಸ್ಟೇಟ್ ಒಪೇರಾ’ ಎಂಬಲ್ಲಿ ನೀಡಿತು.

1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅವರು ನ್ಯೂಯಾರ್ಕಿನಿಂದ, 3500 ಮೈಲಿಗಳ ದೂರದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿದ್ದ ತಮ್ಮ ಮಾಜಿ ಸಹೋದ್ಯೋಗಿ ವಾಟ್ಸನ್ ಅವರೊಂದಿಗೆ ಟೆಲಿಫೋನ್ ಸಂಭಾಷಣೆಯನ್ನು ನಡೆಸುವುದರ ಮೂಲಕ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ ಖಂಡಗಳ ನಡುವಣ ಟೆಲಿಫೋನ್ ಸೇವೆಯನ್ನು (ಟ್ರಾನ್ಸ್ ಕಾಂಟಿನೆಂಟಲ್ ಟೆಲಿಫೋನ್ ಸರ್ವೀಸ್) ಉದ್ಘಾಟಿಸಿದರು.

1924: ಫ್ರೆಂಚ್ ಆಲ್ಫಿನ ಚಾಮೊನಿಕ್ಸಿ ಎಂಬಲ್ಲಿ ಮೊದಲಬಾರಿಗೆ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಸ್ಪರ್ಧೆಗಳು (ವಿಂಟರ್ ಒಲಿಂಪಿಕ್ ಗೇಮ್ಸ್) ಆರಂಭಗೊಂಡವು.

1937: ಅತ್ಯಂತ ಸುದೀರ್ಘ ಕಾಲ ಪ್ರದರ್ಶಿಸಲ್ಪಟ್ಟ ಕಾರ್ಯಕ್ರಮವೆಂಬ ದಾಖಲೆಗೆ ಪಾತ್ರವಾಗಿರುವ ‘ದಿ ಗೈಡಿಂಗ್ ಲೈಟ್’ ಮೊದಲಬಾರಿಗೆ ರೇಡಿಯೋ ಕಾರ್ಯಕ್ರಮವಾಗಿ ಚಿಕಾಗೋದ ಎನ್.ಬಿ.ಸಿ ರೇಡಿಯೋದಲ್ಲಿ ಪ್ರಸರಣಗೊಂಡಿತು. ಮುಂದೆ ಸಿ.ಬಿ.ಎಸ್. ಟೆಲಿವಿಷನ್ನಿಗೆ ಬಂದ ಈ ಕಾರ್ಯಕ್ರಮವು ‘ದಿ ಗೈಡಿಂಗ್ ಲೈಟ್’ ಸೋಪ್ ಒಪೇರಾ ಎಂಬ ಪ್ರಸಿದ್ಧಿಯೊಂದಿಗೆ ಸೆಪ್ಟೆಂಬರ್ 18, 2009 ವರ್ಷದ ವರೆವಿಗೆ ನಿರಂತರ ಪ್ರಸರಣಗೊಂಡ ಅಪೂರ್ವ ದಾಖಲೆ ಸೃಷ್ಟಿಸಿತು.

1947: ಅಮೆರಿಕದ ಥಾಮಸ್ ಗೋಲ್ಡ್ ಸ್ಮಿತ್ ಜೂನಿಯರ್ ಅವರು ‘ಕೆಥೋಡ್ ರೇ ಟ್ಯೂಬ್ ಅಮ್ಯೂಸ್ಮೆಂಟ್ ಡಿವೈಸ್ ಎಂಬ ತಮ್ಮ ಆಟದ ಸಂಶೋಧಕ್ಕೆ ಪೇಟೆಂಟ್ ಕೋರಿಕೆ ಅರ್ಜಿ ಸಲ್ಲಿಸಿದರು. ಇದು ವಿಶ್ವದ ಮೊಟ್ಟಮೊದಲ ಎಲೆಕ್ಟ್ರಾನಿಕ್ ಗೇಮ್ ಎಂಬ ಕೀರ್ತಿಗೆ ಪಾತ್ರವಾಗಿದೆ.

1949: ಮೊಟ್ಟ ಮೊದಲ ಎಮ್ಮಿ ಅವಾರ್ಡ್ ನೀಡಿಕೆ ಕಾರ್ಯಕ್ರಮವು ಹಾಲಿವುಡ್ ಅಥ್ಲೆಟಿಕ್ ಕ್ಲಬ್ಬಿನಲ್ಲಿ ನಡೆಯಿತು.

1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ರಾಷ್ಟ್ರದ ಬೃಹತ್ ಸಂಖ್ಯಾ ಮತದಾರರನ್ನು ಬಾಗಿಯಾಗಿಸಿ ವಿವಿಧ ರೀತಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ಚುನಾವಣೆಗಳನ್ನು ಪ್ರಜಾಪ್ರಭುತ್ವದ ನಿಯಮಾವಳಿಗಳ ಪ್ರಕಾರವಾಗಿ ನಿಗಧಿತ ಅವಧಿಗಳಲ್ಲಿ ನಡೆಸುತ್ತಾ ಬಂದಿರುವ ಕೀರ್ತಿ ಇದರದ್ದಾಗಿದೆ.

1961:  ವಾಷಿಂಗ್ಟನ್ ನಗರದಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನ್ನೆಡಿ ಅವರು ಪ್ರಥಮಬಾರಿಗೆ ನೇರ ಟೆಲಿವಿಷನ್ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.

1964: ಒರಿಗಾನ್ ವಿಶ್ವವಿದ್ಯಾಲಯದಲ್ಲಿ ಟ್ರಾಕ್ ಮತ್ತು ಫೀಲ್ಡ್ ಅಥ್ಲೆಟ್ಟುಗಳಿಗಾಗಿ ‘ಬ್ಲೂ ರಿಬ್ಬನ್ ಸ್ಪೋರ್ಟ್ಸ್’ ಪ್ರಾರಂಭಗೊಂಡಿತು. ಇದು ಮುಂದೆ ಪ್ರಸಿದ್ಧ ‘ನೈಕಿ’ ಸಮೂಹವಾಗಿ ರೂಪುಗೊಂಡಿತು.

1971: ಉಗಾಂಡದಲ್ಲಿ ನಡೆದ ದಂಗೆಯಲ್ಲಿ ಮಿಲ್ಟನ್ ಒಬೋಟೆಯನ್ನು ಪದಚ್ಯುತಿಗೊಳಿಸಿ ಇದಿ ಅಮೀನ್ ಅಧಿಕಾರ ವಹಿಸಿಕೊಂಡರು.

1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿಯವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1980: ಮದರ್ ತೆರೇಸಾ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಲಾಯಿತು.

1995: ನಾರ್ವೆಯ ಸಂಶೋಧನಾ ರಾಕೆಟ್ ಒಂದನ್ನು ಅಮೇರಿಕಾದ ಟ್ರೈಡೆಂಟ್ ಮಿಸ್ಸೈಲ್ ಎಂದು ತಪ್ಪಾಗಿ ಗ್ರಹಿಸಿದ್ದ ರಷ್ಯಾವು ಅಣ್ವಸ್ತ್ರವನ್ನು ಇನ್ನೇನು ಬಳಸಿಯೇ ಬಿಡುವಂತಹ ದುಡುಕಿಗೆ ಕೈ ಹಾಕಿತ್ತು. ನಂತರದಲ್ಲಿ ಅದು ಅಪಾಯಕಾರಿ ಅಲ್ಲದ್ದು ಎಂಬ ಅಂಶ ರಷ್ಯಾ ಅರಿವಿಗೆ ಬಂತು.

1996: ಬಿಲ್ಲಿ ಬೆಯ್ಲಿ ಎಂಬಾತ ಅಮೆರಿಕದಲ್ಲಿ ಗಲ್ಲಿಗೇರಿಸಲ್ಪಟ್ಟ ಕೊನೆಯ ವ್ಯಕ್ತಿಯಾದ. ನಂತರದಲ್ಲಿ ಅಮೆರಿಕವು ನೇಣು ಹಾಕುವುದರ ಬದಲು, ಬೇರೆ ರೀತಿಯ ಮಾರಾಣಾಂತಿಕ ಶಿಕ್ಷಾ ಕ್ರಮಗಳನ್ನು ಅನುಸರಿಸುತ್ತಿದೆ.

2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಅತ್ಯಂತ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.

2004: ನಾಸಾದ ಆಪರ್ಚುನಿಟಿ ರೋವರ್ ಮಂಗಳ ಗ್ರಹದ ಮೇಲೆ ಇಳಿಯಿತು.

2005: ಮಹಾರಾಷ್ಟ್ರದ ಮಂಧ್ರಾದೇವಿ ದೇಗುಲದ ನೂಕು ನುಗ್ಗಲಿನಲ್ಲಿ ಕಡೇಪಕ್ಷ 258 ಜನ ಸಾವಿಗೀಡಾದರು.

2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ನಿಧನರಾದ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.

2006: ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ನಂದನ್ ನೀಲೇಕಣಿ ಅವರಿಗೆ ಪದ್ಮಭೂಷಣ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಪದ್ಮಶ್ರೀ ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಯಿತು.

2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

2007: ಕರ್ನಾಟಕದ ಸಾಹಿತಿ ‘ಕಾಂತಾಪುರ’ ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಪೆಪ್ಸಿ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.

2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ದಾಖಲು ಮಾಡಿಕೊಂಡು, ‘ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ’ ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

2008: ಬೆಂಗಳೂರಿನ ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಲಭಿಸಿತು.

2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ತಂಡಗಳ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಹಿಡಿದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿಯಲ್ಲಿ ಹೆಚ್ಚು ಜನರನ್ನು (377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಮೂಲಕ) ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.

2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ರೈಲುಗಾಡಿಯಾದ ‘ಸುವರ್ಣ ರಥ’ ಬೆಂಗಳೂರಿನ ಹೊರವಲಯದ ವೈಟ್ ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದೆ ಒಂದು ವಾರದ ಅವಧಿಯಲ್ಲಿ ಒಳವಿನ್ಯಾಸೀಕರಣಗೊಂಡ ಈ ಗಾಡಿಯು, ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ; ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ; ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರಾಗಿದ್ದಾರೆ. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದ್ದಾರೆ. ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

2009: ಕರ್ನಾಟಕದ ಮೂಲದವರಾದ ಮಾಧವನ್ ನಾಯರ್ (ಪದ್ಮವಿಭೂಷಣ), ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ. ಆರ್. ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ ‘ಪದ್ಮವಿಭೂಷಣ’ಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಯಶಸ್ವಿ ‘ಚಂದ್ರಯಾನ’ದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾದರು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವ ಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ. ಪಿ. ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ. ಮೂರನೇ ಅತ್ಯುನ್ನತ ಸನ್ಮಾನ ‘ಪದ್ಮಭೂಷಣ’ಕ್ಕೆ ಬೀಜಿಂಗ್ ಒಲಿಂಪಿಕ್ಸ್ ಬಂಗಾರದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಜ್ ಅಹುವ್ಲಾಲಿಯಾ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30 ಮಂದಿ ಪಾತ್ರರಾದರು.

2009: ಸಶಸ್ತ್ರ ಪಡೆ ಸಿಬ್ಬಂದಿಗೆ 9 ಮರಣೋತ್ತರ ಅಶೋಕ ಚಕ್ರ, 13 ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಒಟ್ಟು 428 ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮಟೆ ಹಾಗೂ ವಿಜಯ್ ಸಾಲಸ್ಕರ್ ಅವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರ ‘ಅಶೋಕ ಚಕ್ರ’ ಪ್ರಶಸ್ತಿ ಘೋಷಿಸಲಾಯಿತು.

2009: ಕೇಂದ್ರ ಗೃಹ ಸಚಿವರ ಆಂತರಿಕ ಭದ್ರತಾ ಸಲಹೆಗಾರರಾದ ಕೆ.ಸಿ.ವರ್ಮಾ ಅವರು ದೇಶದ ಅಗ್ರಮಾನ್ಯ ಗೂಢಚರ್ಯ ಸಂಸ್ಥೆ ‘ರಾ’ ಮುಖ್ಯಸ್ಥರಾಗಿ ನೇಮಕಗೊಂಡರು.

ಪ್ರಮುಖಜನನ/ಮರಣ:

1783: ವಿಲಿಯಂ ಕೋಲ್ಗೆಟ್ ಅವರು ಗ್ರೇಟ್ ಬ್ರಿಟನ್ನಿನ ಕೆಂಟ್ ಬಳಿಯ ಹಾಲಿಂಗ್ ಬೌರ್ನ್ ಎಂಬಲ್ಲಿ ಜನಿಸಿದರು. ಅಮೆರಿಕಕ್ಕೆ ವಲಸೆ ಬಂದ ಅವರು 1806ರಲ್ಲಿ ಕೋಲ್ಗೆಟ್ ಟೂಥ್ ಪೇಸ್ಟ್ ಕಂಪೆನಿಯನ್ನು ಪ್ರಾರಂಭಿಸಿದರು. ಮುಂದೆ ಈ ಸಂಸ್ಥೆಯು ಕೇವಲ ಟೂಥ್ ಪೇಸ್ಟ್ ಮಾತ್ರವಲ್ಲದೆ, ಕೋಲ್ಗೆಟ್ ಪಾಲ್ಮೊಲಿವ್ ಹೆಸರಿನಿಂದ ಅನೇಕ ವಸ್ತುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ.

1824: ಬಂಗಾಳಿಯ ಮಹಾನ್ ಕವಿ ಮತ್ತು ಪ್ರಮುಖ ನಾಟಕಕಾರರಾದ ಮೈಕೆಲ್ ಮಧುಸೂದನ ದತ್ತ ಅವರು ಬಂಗಾಳದ ಜೆಸ್ಸೂರು ಜಿಲ್ಲೆಯ ಬಳಿಯ ಸಾಗರ್ದಾರಿ ಎಂಬಲ್ಲಿ ಜನಿಸಿದರು.

1917: ಭೌತವಿಜ್ಞಾನಿ ಮತ್ತು ರಸಾಯನ ಶಾಸ್ತ್ರ ವಿಜ್ಞಾನಿ ಇಲ್ಯಾ ಪ್ರಿಗೊಜಿನ್ ಅವರು ಮಾಸ್ಕೋದಲ್ಲಿ ಜನಿಸಿದರು. ಮುಂದೆ ಅವರಿ ಬೆಲ್ಜಿಯಮ್ ದೇಶದಲ್ಲಿ ನೆಲೆಸಿದರು. ಇರ್ರವರ್ಸಿಬಲ್ ಥರ್ಮೋಡೈನಮಿಕ್ಸ್ ಎಂಬ ಅವರ ಸಂಶೋಧನೆಗಾಗಿ 1977ರ ವರ್ಷದಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1921: ಖ್ಯಾತ ಸಾಹಿತಿ ಮತ್ತು ಪತ್ರಕರ್ತ ನಾಡಿಗ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸದಲ್ಲಿ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅನೇಕ ರಾಷ್ಟ್ರಗಳನ್ನು ಸಂದರ್ಶಿಸಿದ ಅವರು ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದರು. ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು. 1983ರಲ್ಲಿ ನಿಧನರಾದ ಇವರಿಗೆ ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನಗಳೇ ಮೊದಲಾದ ಅನೇಕ ಗೌರವಗಳು ಸಂದಿದ್ದವು.

1923: ಸ್ವೀಡನ್ನಿನ ಫಾರ್ಮಕಾಲಜಿಸ್ಟ್ ಮತ್ತು ವೈದ್ಯಶಾಸ್ತ್ರಜ್ಞ ಅರ್ವಿಡ್ ಕಾರ್ಲ್ಸನ್ ಉಪ್ಪಸ್ಸಲ ಎಂಬಲ್ಲಿ ಜನಿಸಿದರು. ನ್ಯೂರೋ ಟ್ರಾನ್ಸ್ಮೀಟರ್ ಡೋಪಮೈನ್ ಮತ್ತು ಪಾರ್ಕಿನ್ಸನ್ ಕಾಯಿಲೆಯಲ್ಲಿ ಅವುಗಳ ಪರಿಣಾಮದ ಕುರಿತಾದ ಇವರ ಸಂಶೋಧನೆಗೆ ನೊಬೆಲ್ ವೈದ್ಯಕೀಯ ಶಾಸ್ತ್ರಕ್ಕೆ ಸಲ್ಲುವ ನೊಬೆಲ್ ಪುರಸ್ಕಾರ ಸಂದಿತು.

1939: ಪ್ರಸಿದ್ಧ ರಂಗಭೂಮಿ ಮತ್ತು ಸಿನಿಮಾ ನಟ ದಿನೇಶ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1990ರಲ್ಲಿ ನಿಧನರಾದ ಅವರು ರಂಗಭೂಮಿಯ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಎರಡೂ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ್ದರು. ಚಲನಚಿತ್ರಗಳಲ್ಲಿ ಅವರು ಹಾಸ್ಯ ಪಾತ್ರಗಳು ಮತ್ತು ಖಳಪಾತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದರು.

1949: ನೊಬೆಲ್ ಪುರಸ್ಕೃತ ತಳಿ ತಜ್ಞ (ಜೆನೆಟಿಸಿಸ್ಟ್) ಹಾಗೂ ಜೀವ ವಿಜ್ಞಾನಿ ಪಾಲ್ ನರ್ಸ್ ಅವರು ಇಂಗ್ಲೆಂಡಿನ ನಾರ್ವಿಚ್ ಎಂಬಲ್ಲಿ ಜನಿಸಿದರು. ರಾಯಲ್ ಸೊಸೈಟಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಅವರಿಗೆ 2001 ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1954: ಕ್ರಾಂತಿಕಾರಿ ಹೋರಾಟಗಾರ ಮತ್ತು ಭಾರತೀಯ ಕಮ್ಮ್ಯೂನಿಸ್ಟ್ ಪಕ್ಷದ ಸ್ಥಾಪಕ ಎಂ.ಎನ್. ರಾಯ್ ನಿಧನರಾದರು. ಅವರು ತಮ್ಮ ಅನೇಕ ವೈಚಾರಿಕ ಬರಹಗಳಿಗೂ ಪ್ರಸಿದ್ಧರಾಗಿದ್ದರು.

2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ ಕೇರಳದ ತಿರುವನಂತಪುರದಲ್ಲಿ ನಿಧನರಾದರು.

2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನ್ ದೇಶದ ವಸಾಹತಾಗಿತ್ತು. ‘ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ’ ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು.

Categories
e-ದಿನ

ಜನವರಿ-24

ಪ್ರಮುಖಘಟನಾವಳಿಗಳು:

41: ವಿಲಕ್ಷಣ ನಡೆ  ಮತ್ತು ಅಂಕೆಯಿಲ್ಲದಂತೆ  ಎಲ್ಲದಕ್ಕೂ ಕರುಬುವ ಕೆಟ್ಟ ನಡತೆಯ ರೋಮನ್ ಚಕ್ರವರ್ತಿ ಕಲಿಗುಲನನ್ನು ಆತನ ಭದ್ರತಾ ಸೇನಾಪಡೆಯವರೇ  ಕೊಂದುಹಾಕಿ, ಆತನ ಚಿಕ್ಕಪ್ಪನಾದ ಕ್ಲಾಡಿಯಸ್ ಅನ್ನು ಚಕ್ರವರ್ತಿಯೆಂದು ಘೋಷಿಸಿದರು.

1739: ಪೇಶ್ವೆ ದೊರೆ ಚಿಮ್ನಜಿ ಅಪ್ಪ ಅವರು ಪೋರ್ಚುಗೀಸ್ ಪಡೆಗೆ ಸೋಲುಣಿಸಿ ತಾರಾಪುರದ ಕೋಟೆಯನ್ನು ವಶಪಡಿಸಿಕೊಂಡರು.

1835: ಬ್ರೆಜಿಲ್ ದೇಶದ ಸಾಲ್ವಡಾರ್ ಡ ಬಹಿಯಾದಲ್ಲಿನ ಗುಲಾಮರು ಬಂಡಾಯವೆದ್ದರು. ಇದು ಮುಂದಿನ 50 ವರ್ಷಗಳಲ್ಲಿ ಅಲ್ಲಿ ಗುಲಾಮಗಿರಿ ಪೂರ್ಣವಾಗಿ ಅಂತ್ಯಗೊಳ್ಳಲು ಪ್ರಾರಂಭ ನೀಡಿತು.

1848: ಜೇಮ್ಸ್ ಡಬ್ಲ್ಯೂ ಮಾರ್ಷಲ್ ಎಂಬುವರು ಕ್ಯಾಲಿಫೋರ್ನಿಯಾದ  ಸಕ್ರಮೆಂಟೋ ಬಳಿಯ ಸಟ್ಟರ್ಸ್ ಮಿಲ್  ಎಂಬಲ್ಲಿ ಚಿನ್ನದ ಗಣಿಯನ್ನು ಪತ್ತೆ ಹಚ್ಚಿದರು.

1857: ಕಲ್ಕತ್ತಾ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿತು.  ಇದು ದಕ್ಷಿಣ ಏಶ್ಯಾದಲ್ಲೇ  ಪ್ರಥಮ ಪೂರ್ಣ ಪ್ರಮಾಣದ ಸುಸಜ್ಜಿತ  ವಿಶ್ವವಿದ್ಯಾಲಯವಾಗಿ ಆರಂಭಗೊಂಡ  ಕೀರ್ತಿಗೆ ಪಾತ್ರವಾಗಿದೆ.

1908: ಸ್ಕೌಟ್ ಚಳುವಳಿಯ ಸ್ಥಾಪನೆಗೆ ಪ್ರಸಿದ್ಧರಾದ ರಾಬರ್ಟ್ ಬಾಡೆನ್ ಪೋವೆಲ್  ಅವರು ಪ್ರಥಮ ಬಾಯ್ಸ್ ಸ್ಕೌಟ್ ಸಂಘಟನೆಯನ್ನು ಇಂಗ್ಲೆಂಡಿನಲ್ಲಿ  ಆರಂಭಿಸಿದರು.

1939: ಚಿಲಿ ದೇಶದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಭೂಕಂಪದಲ್ಲಿ ಸುಮಾರು 28,000 ಜನರು ನಿಧನರಾದರು.

1946: ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನವು ವಿಶ್ವ ಸಂಸ್ಥೆಯ ಅಣು ಶಕ್ತಿ ಆಯೋಗವನ್ನು ರಚಿಸುವ ನಿರ್ಧಾರ ಕೈಗೊಂಡಿತು.

1972: ಜಪಾನಿನ ಸಾರ್ಜೆಂಟ್ ಶಿಯೋಚಿ ಯೊಕಾಯ್ ಎಂಬಾತ ಎರಡನೇ ವಿಶ್ವ ಮಹಾಯುದ್ಧ ಕೊನೆಗೊಂಡಾಗಿನಿಂದ  (ಸುಮಾರು 27 ವರ್ಷ)  ಕಾಡಿನಲ್ಲಿ ತಲೆಮರೆಸಿಕೊಂಡಿದ್ದದ್ದು ಪತ್ತೆಯಾಯಿತು.

1978: ನ್ಯೂಕ್ಲಿಯರ್ ರಿಯಾಕ್ಟರ್ ಹೊತ್ತಿದ್ದ ಸೋವಿಯತ್ ಉಪಗ್ರಹವಾದ ‘ಕಾಸ್ಮೋಸ್ 954’, ಭೂಮಿಯ ಕಕ್ಷೆಯಲ್ಲಿ ಉರಿದುಹೋಗಿ, ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ರೇಡಿಯೋ ಆಕ್ಟಿವ್ ಅವಶೇಷಗಳನ್ನು ಚೆಲ್ಲಿತು.  ಇವುಗಳಲ್ಲಿ ಕೇವಲ ಶೇಕಡಾ ಒಂದರಷ್ಟು ಮಾತ್ರವನ್ನೇ ಪುನಃಶೇಖರಿಸಿಕೊಳ್ಳಲು ಸಾಧ್ಯವಾಯಿತು.

1950: ರವೀಂದ್ರನಾಥ ಠಾಗೂರ್ ಅವರು ರಚಿಸಿದ ‘ಜನ ಗಣ ಮನ’ ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

1950:  ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಭಾರತದ ಪ್ರಥಮ ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಲಾಯಿತು.

1966:  ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1984:  ಆಪಲ್ ಕಂಪ್ಯೂಟರ್ ಸಂಸ್ಥೆ ಅಮೇರಿಕಾದಲ್ಲಿ  ಮೆಕಿನ್ ತೋಶ್ ಪರ್ಸನಲ್ ಕಂಪ್ಯೂಟರ್ ಮಾರಾಟವನ್ನು ಆರಂಭಿಸಿತು.

1986: ಎರಡನೇ ವೋಯೇಜರ್  ಯುರೇನಸ್ ಉಪಗ್ರಹಕ್ಕೆ 81,500 ಕಿಲೋಮೀಟರ್ ಸಮೀಪದಲ್ಲಿ ಹಾದು ಹೋಯ್ತು.

1990: ಜಪಾನ್ ದೇಶವು ಚಂದ್ರನಲ್ಲಿಗೆ ಹಿತೇನ್ ಎಂಬ ಬಾಹ್ಯಾಕಾಶ ಶೋಧನಾ ವಾಹನವನ್ನು  ಕಳುಹಿಸಿತು.  ಚಂದ್ರನಲ್ಲಿ ಇಲ್ಲಿಯವರೆಗೆ  ಸೋವಿಯತ್ ಯೂನಿಯನ್ ಮತ್ತು  ಅಮೆರಿಕ ಮಾತ್ರಾ ಇಂತಹ ಶೋಧವನ್ನು ಕೈಗೊಂಡಿದ್ದವು.

2007: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ಇಂದು ಉದ್ಘಾಟಿಸಲಾಯಿತು.

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ವೇರ್ ಸಾಧನ ಮತ್ತು ಅಕ್ಷರವಿನ್ಯಾಸ (ಫಾಂಟ್)ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಮತ್ತು  ಈ-ಮೈಲ್ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್ ಮತ್ತು  ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2008: ‘ಹೆವೆನ್ ಸೆಂಟ್ ಬ್ರಾಂಡಿ’ ಎಂಬುದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, ‘ಉದ್ದದಲ್ಲಿ ಅತಿ ಪುಟ್ಟ ನಾಯಿ’ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು.

2008: ಬೆಂಗಳೂರು ವಿಶ್ವವಿದ್ಯಾಲಯದ  ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ  ಡಾ. ಗೀತಾ ಬಾಲಿ ಅವರನ್ನು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ  ನೇಮಕ ಮಾಡಲಾಯಿತು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ ಅವರು  ಹಿಮಹಾವುಗೆ (ಸ್ಕೀ) ಸಹಾಯದಿಂದ  ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಅವರು ನವೆಂಬರ್ 2007ರಿಂದ ಈ ಪಯಣವನ್ನು ಆರಂಭಿಸಿದ್ದರು.

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ ‘ದಿ ಬುಲೆಟಿನ್’ ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು.  ಹೀಗೆ,  ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡ  127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ  ಅಧಿಕೃತವಾಗಿ ಮುಚ್ಚಿಹೋಯಿತು.

2009: 2020ನೇ ವರ್ಷದ ವೇಳೆಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಎರಡನೇ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿತು. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಭೂದಾಖಲೆಗಳ ವಿತರಣೆಗೆ ಪ್ರಥಮ ಆದ್ಯತೆ ನೀಡಲಾಯಿತು.

2009: ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು  ಜಾರಿಗೆ ತರಲು  ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ ಮಸೂದೆ ತಿದ್ದುಪಡಿಗೆ ಕರ್ನಾಟಕ ವಿಧಾನಪರಿಷತ್ತು ತನ್ನ   ಅಂಗೀಕಾರ ನೀಡಿತು.

ಪ್ರಮುಖಜನನ/ಮರಣ:

1826: ಇಂಗ್ಲೆಂಡಿನ ನ್ಯಾಯಾಲಯದಲ್ಲಿ (ಬಾರ್ನಲ್ಲಿ ) ಪ್ರವೇಶ ಗಳಿಸಿದ ಪ್ರಥಮ ನ್ಯಾಯವಾದಿ ಜ್ಞಾನೇಂದ್ರ ಮೋಹನ್ ಠಾಗೂರ್ ಅವರು ಕಲ್ಕತ್ತಾದಲ್ಲಿ ಜನಿಸಿದರು.  1862ರ ವರ್ಷದಲ್ಲಿ ಕಲ್ಕತ್ತಾ ಉಚ್ಛ ನ್ಯಾಯಾಲಯದಲ್ಲಿ ಬ್ಯಾರಿಸ್ಟರ್ ಆಗಿ ನೊಂದಾಯಿತರಾದ ಇವರು, ಬ್ಯಾರಿಸ್ಟರ್  ಸಾಧನೆ ಮಾಡಿದ ಪ್ರಥಮ ಭಾರತೀಯರೆನಿಸಿದ್ದಾರೆ.

1870: ಮುದ್ದಣ ಹೆಸರಿನಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾದ  ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಜನಿಸಿದರು.  ‘ರತ್ನಾವತೀ ಕಲ್ಯಾಣ’,   ‘ಕುಮಾರ ವಿಜಯ’.  ‘ರಾಮಾಶ್ವಮೇಧ’ ಮುಂತಾದ ಮಹತ್ವದ ಕೃತಿಗಳನ್ನು ರಚಿಸಿದ ಅವರು ಕೇವಲ ತಮ್ಮ  32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು  ನಿಧನರಾದರು. 75 ವರ್ಷಗಳ ನಂತರ, 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1877: ಕಾವ್ಯವಾಚನದಲ್ಲಿ ಪ್ರಸಿದ್ಧರಾಗಿದ್ದ ವಿದ್ವಾನ್ ಸಂ.ಗೋ. ಬಿಂದೂರಾಯರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು. ಕಾವ್ಯವಾಚನವನ್ನು ನಾಡಿನೆಲ್ಲೆಡೆ ನಡಿಸಿದ್ದಲ್ಲದೆ, ಅನೇಕ ಶಿಷ್ಯರನ್ನು ತಯಾರು ಮಾಡಿ ಗಮಕ ಕಲೆಗೆ ಬೆಳವಣಿಗೆಯ ಗತಿಯನ್ನು ಹಾಕಿಕೊಟ್ಟ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಮುಂಬಯಿಯ ಗಮಕ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು  ಸಂದಿದ್ದವು.

1924: ಭಾರತೀಯ ಪ್ರಥಮ ಮಹಿಳಾ ಸೇನಾನಿ ಮತ್ತು ಮಹಿಳಾ ರಾಯಭಾರಿ ಎಂಬ ಕೀರ್ತಿಗೆ ಪಾತ್ರರಾದ ಚೋನಿರ ಬೆಳ್ಳಿಯಪ್ಪ ಮುತ್ತಮ್ಮ ಅವರು ವಿರಾಜಪೇಟೆಯಲ್ಲಿ ಜನಿಸಿದರು.  ಇವರು  ಭಾರತೀಯ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಥಮ ಮಹಿಳೆ. ಇಂಡಿಯನ್ ಫಾರಿನ್ ಸರ್ವಿಸ್ ಸೇರಿದ ಪ್ರಥಮ ಮಹಿಳೆ ಎಂಬ ಕೀರ್ತಿಯೂ ಇವರದ್ದಾಗಿದೆ.  1970ರ ವರ್ಷದಲ್ಲಿ ಹಂಗೇರಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಇವರು ಮುಂದೆ ಘಾನಾ ಮತ್ತು   ನೆದರ್ಲ್ಯಾಂಡಿನ ಹೇಗ್’ನಲ್ಲೂ ಭಾರತದ ರಾಯಭಾರಿಗಳಾಗಿದ್ದರು.  2009, ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ನಿಧನರಾದರು.

1935: ಭಾರತೀಯ ಧಾರ್ಮಿಕ ಗುರು ಶಿವಬಾಲಯೋಗಿ ಅವರು ಸತ್ಯರಾಜು ಅಲ್ಲಕ ಎಂಬ ಹೆಸರಿನಿಂದ ಗೋದಾವರಿ ತೀರದ ಆದಿವಾರಪುಪೆಟ ಎಂಬಲ್ಲಿ ಜನಿಸಿದರು.  1994ರಲ್ಲಿ ನಿಧನರಾದ ಇವರ ಆಶ್ರಮಗಳು  ಭಾರತ ಮತ್ತು ಅನೇಕ ವಿದೇಶಗಳಲ್ಲಿ ವ್ಯಾಪಿಸಿವೆ.

1937:  ಬರಹಗಾರ್ತಿ, ಆಕಾಶವಾಣಿಯ ನಿರ್ದೇಶಕಿ ಮತ್ತು ಸಂಶೋಧಕಿ ಡಾ. ಜ್ಯೋತ್ಸ್ನಾ ಕಾಮತ್ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು.  ಕರ್ನಾಟಕ ಸರ್ಕಾರದ  ‘ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ, ‘ಕಿಟ್ಟಲ್ ಪುರಸ್ಕಾರ’,   ಕರ್ಣಾಟಕ ಇತಿಹಾಸ ಕಾಂಗ್ರೆಸ್ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.  ತಮ್ಮ ಪತಿ ಕೃಷ್ಣಾನಂದ ಕಾಮತ್,  ಪುತ್ರ ವಿಕಾಸ್ ಕಾಮತ್ ಅವರೊಂದಿಗೆ ಇವರು ಸ್ಥಾಪಿಸಿರುವ www.kamat.com ಸಾಂಸ್ಕೃತಿಕ ತಾಣ ಪ್ರಸಿದ್ಧವಾಗಿದೆ.

1941:  ಪ್ರಖ್ಯಾತ ರಸಾಯನ ಶಾಸ್ತ್ರ  ವಿಜ್ಞಾನಿ  ಡಾನ್ ಶೆಚ್ ಮ್ಯಾನ್ ಈಗಿನ ಇಸ್ರೇಲಿನ ಭಾಗವಾಗಿರುವ ಟೆಲ್ ಅವಿವ್ ಎಂಬಲ್ಲಿ ಜನಿಸಿದರು.  ‘ಕ್ವಾಸಿ ಕ್ರಿಸ್ಟಲ್ಸ್’ ವಿಷಯದಲ್ಲಿನ ಇವರ ಸಂಶೋಧನೆಗಾಗಿ 2011 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿದೆ.

1943: ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಸುಭಾಷ್ ಘೈ ನಾಗಪುರದಲ್ಲಿ ಜನಿಸಿದರು.  ಅನೇಕ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಅವರ ‘ಇಕ್ಬಾಲ್’ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿತ್ತು.

1955:  ವಿಜ್ಞಾನದ ಸ್ನಾತಕೋತ್ತರ ಪದವೀಧರರಾದರೂ ಸಾಹಿತ್ಯದಲ್ಲಿ ಮಹತ್ವದ ಸಾಧನೆ ಮಾಡಿರುವ ಜಯಂತ ಕಾಯ್ಕಿಣಿ ಗೋಕರ್ಣದಲ್ಲಿ ಜನಿಸಿದರು.  ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು  ಚಲನಚಿತ್ರಗಳಲ್ಲಿ ಗೀತ ರಚನಕಾರರಾಗಿ ಮತ್ತು  ಚಿತ್ರಕಥೆಗಾರರಾಗಿ ಸಹಾ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.   ಚಲನಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಸಹಾ ದುಡಿದಿರುವ ಇವರು  ಕಿರುತೆರೆಯಲ್ಲೂ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು  ನಿರ್ವಹಿಸಿದ್ದಾರೆ.

1895:  ಬ್ರಿಟಿಷ್ ರಾಜಕಾರಣಿ ಲಾರ್ಡ್ ರಾಂಡೋಲ್ಫ್ ಚರ್ಚಿಲ್  ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್  ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದ್ದರು. ಇವರ ಪುತ್ರ ವಿನ್ಸ್ಟನ್ ಚರ್ಚಿಲ್ ಬ್ರಿಟಿಷ್ ಪಧಾನಿಯಾಗಿ ವಿಶ್ವನಾಯಕರಾಗಿ ಪ್ರಸಿದ್ಧರಾಗಿದ್ದರು.

1965: ಎರಡನೇ ಮಹಾಯುದ್ಧ ಕಾಲದಲ್ಲಿ  ಬ್ರಿಟಿಷ್ ಪ್ರಧಾನಿಯಾಗಿ  ಗೆಲುವು ಸಾಧಿಸಿದ ಬ್ರಿಟಿಷ್ ಪ್ರಧಾನಿ  ವಿನ್ಸ್ಟನ್ ಚರ್ಚಿಲ್ ನಿಧನರಾದರು.  ಅವರಿಗೆ  ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1966: ಭಾರತದ ಪ್ರಸಿದ್ಧ ಅಣುವಿಜ್ಞಾನಿ ಹೋಮಿ ಜೆ ಭಾಭಾ ಅವರು ತಾವು ಪಯಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 707 ವಿಮಾನವು ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ ನಿಧನರಾದರು.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ ಅವರು ಬೆಂಗಳೂರಿನ ಅನಾಥಾಶ್ರಮವೊಂದರಲ್ಲಿ  ನಿಧನರಾದರು.  ಸ್ವಾತಂತ್ರ್ಯಾ ನಂತರ ಮೈಸೂರು ಸಂಸ್ಥಾನದಲ್ಲಿ ಜನಪರ ಸರ್ಕಾರ ಸ್ಥಾಪನೆಯ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಮುಂದೆ  ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು  ‘ಮದರ್ ಲ್ಯಾಂಡ್’, ‘ಇನ್ಫಾ’ ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು ‘ಸ್ಕೂಪ್’ ಮಾಡಿದ ಕೀರ್ತಿ ಇವರದಾಗಿತ್ತು.

Categories
e-ದಿನ

ಜನವರಿ-23

ದಿನಾಚರಣೆಗಳು:

ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಕ ಸ್ಪರ್ಶ ನೀಡಿ ವಿಶ್ವದಾದ್ಯಂತ  ಬ್ರಿಟಿಷ್ ಆಡಳಿತದ ವಿರುದ್ಧ ಬಲ ಸಂಘಟಿಸಲು ಶ್ರಮಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಭಾರತದಲ್ಲಿ ಇಂದು ಆಚರಿಸಲಾಗುತ್ತಿದೆ.  ಮೊದ ಮೊದಲು ಒರಿಸ್ಸಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳಗಳಲ್ಲಿ  ವಿಶೇಷವಾಗಿ ಆಚರಿಸಲ್ಪಡುತ್ತಿದ್ದ ನೇತಾಜಿಯವರ ಹುಟ್ಟುಹಬ್ಬ ಕ್ರಮೇಣವಾಗಿ ದೇಶದ ಎಲ್ಲೆಡೆಗಳಲ್ಲಿ ವಿಶಿಷ್ಟ ವೈವಿಧ್ಯತೆಗಳಿಂದ ಆಚರಣೆಗೊಳ್ಳುತ್ತಿದೆ.

1950-53 ಅವಧಿಯಲ್ಲಿ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಾ ನಡುವಣ ಕೊರಿಯನ್ ಯುದ್ಧದಲ್ಲಿ ಖೈದಿಗಳಾಗಿದ್ದ 22,000 ಮಾಜಿ ಕಮ್ಮ್ಯೂನಿಸ್ಟ್ ಸೈನಿಕರು ಸ್ವತಂತ್ರ್ಯರಾಗಿ ತೈವಾನಿಗೆ ಹಿಂದಿರುಗಿದ ಸಂಕೇತವಾಗಿ  ಈ ದಿನವನ್ನು ‘ವರ್ಲ್ಡ್ ಫ್ರೀಡಮ್ ಡೇ’ ಎಂದು ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

393: ರೋಮನ್ ಚಕ್ರವರ್ತಿಯಾದ ಮೊದಲನೇ ಥಿಯೋಡಿಯಸ್ ತನ್ನ ಎಂಟು ವರ್ಷದ ಮಗ ಹೊನೋರಿಯಸ್ ಅನ್ನು  ಸಹ ಚಕ್ರವರ್ತಿಯೆಂದು ಘೋಷಿಸಿದ.

1368: ಚೀನಾದಲ್ಲಿ ಹೊಂಗ್ವು ಚಕ್ರವರ್ತಿಯಾಗಿ ಝೂ ಯುವಾನ್ ಜಂಗ್ ಪಟ್ಟಕ್ಕೆ ಬಂದ.  ಇದರಿಂದಾಗಿ ಚೀನಾವನ್ನು ಮೂರು ಶತಮಾನಗಳ ಕಾಲ ಆಳಿದ  ಮಿಂಗ್ ರಾಜವಂಶದ ಆಳ್ವಿಕೆ ಪ್ರಾರಂಭಗೊಂಡಿತು.

1556: ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಭೂಕಂಪ ಚೀನಾದ ಶಾಂಕ್ಸಿ ಎಂಬಲ್ಲಿ ಉಂಟಾಗಿ, ಸುಮಾರು 8,30,000 ಜನರು ನಿಧನರಾದರು.

1571: ಲಂಡನ್ನಿನಲ್ಲಿ ರಾಯಲ್ ಎಕ್ಸ್ಚೇಂಜ್ ವಾಣಿಜ್ಯ ಕೇಂದ್ರವು  ಪ್ರಾರಂಭಗೊಂಡಿತು. ಇದನ್ನು ಥಾಮಸ್ ಗ್ರೇಷಂ ಎಂಬ ವರ್ತಕರೊಬ್ಬರು ರಿಚರ್ಡ್ ಕ್ಲಫ್ ಎಂಬುವರ ಸಲಹೆಯ ಮೇರೆಗೆ ಸ್ಥಾಪಿಸಿದರು.  ತ್ರಾಪಿಜ್ಯ(trapezoidal)ದಂತಹ ಆಕೃತಿಯಲ್ಲಿ ಇದರ ವಿನ್ಯಾಸವಿದ್ದು,  ಬ್ರಿಟನ್ನಿನ ಪ್ರಥಮ ವಿಶಿಷ್ಟ ವಾಣಿಜ್ಯ ಕಟ್ಟಡವೆಂಬ ಕೀರ್ತಿಗೆ ಪಾತ್ರವಾಗಿದ್ದ, ಈ ಕಟ್ಟಡ  ಎರಡು ಸಲ ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಭಸ್ಮವಾಗಿತ್ತು.  ಈಗಿರುವ ಈ ಕಟ್ಟಡವನ್ನು  1840ರ ವರ್ಷದಲ್ಲಿ ವಿಲಿಯಂ ಟೈಟ್ ಅವರ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.  150 ವರ್ಷಗಳ ಕಾಲ ಲಾಯ್ಡ್ ಇನ್ಷೂರೆನ್ಸ್ ಸಂಸ್ಥೆಗೆ ತಾಣವಾಗಿದ್ದ ಈ ಸ್ಥಳ ಇಂದಿನ ದಿನಗಳಲ್ಲಿ ಪ್ರತಿಷ್ಟಿತ ಕಚೇರಿಗಳು, ಮಾರಾಟ ಮಳಿಗೆಗಳು ಮತ್ತು ಹೋಟೆಲುಗಳಿಗೆ ಆಶ್ರಯ ನೀಡಿದೆ.

1656: ಫ್ರೆಂಚ್ ದಾರ್ಶನಿಕ ಬ್ಲೈಸ್ ಪಾಸ್ಕಲ್ ಅವರು ತಮ್ಮ ಪ್ರಸಿದ್ಧ ಹದಿನೆಂಟು ಪತ್ರಗಳ ಸರಣಿಯಾದ ‘ಲೆಟರ್ಸ್ ಪ್ರಾವಿನ್ಸಿಯೇಲ್ಸ್’ನ  ಮೊದಲನೆಯ ಪತ್ರವನ್ನು ಪ್ರಕಟಿಸಿದರು.  ಇದನ್ನು ಅವರು ತಮ್ಮ ಮಿತ್ರ ಆಂಟೋಯಿನ್ ಆರ್ನಾಲ್ಡ್ ಅವರಿಗೆ ಬೆಂಬಲವಾಗಿ, ಅವರನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಪಡಿಸಲು ಹೊರಟ ‘ಫ್ಯಾಕಲ್ಟಿ ಡಿ ಥಿಯಾಲಜಿ’ ಅಧಿಕಾರ ವರ್ಗಕ್ಕೆ   ಬರೆದರು.

1846: ಟುನಿಶಿಯಾದಲ್ಲಿ ಗುಲಾಮಗಿರಿ ಪದ್ಧತಿಯನ್ನು ರದ್ದುಗೊಳಿಸಲಾಯಿತು

1849: ಅಮೆರಿಕದಲ್ಲಿ ಪ್ರಥಮ ಮಹಿಳಾ ವೈದ್ಯರೆಂಬ ಕೀರ್ತಿಗೆ ಭಾಜನರಾದ ಎಲಿಜಬೆತ್ ಬ್ಲ್ಯಾಕ್ ವೆಲ್ ಅವರಿಗೆ  ಜಿನೀವಾ ಮೆಡಿಕಲ್ ಕಾಲೇಜು ಸ್ನಾತಕೋತ್ತರ ‘ಎಂ.ಡಿ’ ವೈದ್ಯಕೀಯ ಪದವಿ ನೀಡಿ ಗೌರವಿಸಿತು.

1873:  ಅಮೆರಿಕದ ಮೊಂಟಾನದಲ್ಲಿ ಯು.ಎಸ್. ಅಶ್ವದಳದವರು ಬಹುತೇಕ ಹೆಂಗಸರು ಮತ್ತು ಮಕ್ಕಳನ್ನು ಒಳಗೊಂಡ ಸ್ಥಳೀಯ ಅಮೆರಿಕನ್ನರನ್ನು ಕೊಂದುಹಾಕಿದರು.  ಇದು ‘ಮರಿಯಾಸ್ ಮಾರಣಹೋಮ’(Marias Massacre) ಎಂದು ಚರಿತ್ರೆಯಲ್ಲಿ ದಾಖಲಾಗಿದೆ.

1909: ತಾನು ಅಪಾಯದಲ್ಲಿದ್ದೇನೆ ಎಂಬ  ರೇಡಿಯೋ ಸಂದೇಶಗಳ ಸಂಜ್ಞೆಗಳು ಮೊದಲು ‘CQD’ ಎಂಬ ಹೆಸರಿನಲ್ಲಿ ಬಳಕೆಯಲ್ಲಿದ್ದವು. ಈಗ ಹೆಚ್ಚು ‘SOS’ ಸಂಜ್ಞೆ ಬಳಕೆಯಲ್ಲಿದೆ.   ಈ ‘CQD’ ಸಂಜ್ಞೆಯನ್ನು  ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದು ಅಪಾಯದಲ್ಲಿದ್ದ  ಆರ್.ಎಂ.ಎಸ್. ರಿಪಬ್ಲಿಕ್ ಹಡಗು ಮೊದಲಬಾರಿಗೆ ಬಳಸಿತು.

1912: ಮಾದಕ ವಸ್ತುಗಳ ನಿಯಂತ್ರಣ ಯತ್ನವಾದ ‘ಇಂಟರ್ನ್ಯಾಷನಲ್ ಓಪಿಯಮ್ ಕನ್ವೆನ್ಷನ್’ ನೆದರ್ಲ್ಯಾಂಡಿನ ಹೇಗ್ ನಗರದಲ್ಲಿ ಆರಂಭಗೊಂಡಿತು.

1950: ಇಸ್ರೇಲಿನ ರಾಷ್ಟ್ರೀಯ ನಿರ್ಣಾಯಕ ಮಂಡಲಿಯಾದ ‘ಕ್ನೆಸೆಟ್’, ಜೆರುಸಲೇಮ್ ಅನ್ನು ತನ್ನ ರಾಷ್ಟ್ರದ ರಾಜಧಾನಿಯನ್ನಾಗಿಸಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು.

1957: ಅಮೆರಿಕದ  ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅವರು ತಮ್ಮ ನಿರ್ಮಿತಿಯಾದ ‘ಹಾರುವ ತಟ್ಟೆ’ಯ ಹಕ್ಕನ್ನು ವಾಮ್-ಓ ಟಾಯ್ ಸಂಸ್ಥೆಗೆ ಮಾರಿದರು.  ಆ ಸಂಸ್ಥೆ ಮುಂದೆ ಇದನ್ನು ‘ಫ್ರಿಸ್ಬೀ’ ಎಂದು ಹೆಸರಿಸಿತು.

1960: ಅಮೆರಿಕದ ಸಮುದ್ರಾದಾಳಕ್ಕೆ ಜಿಗಿಯುವ ವ್ಯವಸ್ಥೆಯಾದ ‘Bathyscaphe USS Trieste’ ಪೆಸಿಫಿಕ್ ಸಾಗರದಲ್ಲಿ 10,911 ಮೀಟರ್ (35,797 ಅಡಿ) ಆಳಕ್ಕೆ ಜಿಗಿದ ದಾಖಲೆ ನಿರ್ಮಿಸಿತು.

1973: ಅಮೆರಿಕದ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಅವರು ವಿಯೆಟ್ನಾಂ ಜೊತೆಗೆ ಶಾಂತಿ ಒಪ್ಪಂದ ಏರ್ಪಟ್ಟಿರುವುದಾಗಿ ಘೋಷಿಸಿದರು.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಪಕ್ಷವಾದ ಕಾಂಗ್ರೆಸ್ ಮತ್ತು ಅದು ಹೇರಿದ  ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ ‘ವೈಸ್ ರಾಯ್ ಹೌಸ್’ ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ ‘ರಾಷ್ಟ್ರಪತಿ ಭವನ’ ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಅವರು ವಿನ್ಯಾಸಗೊಳಿಸಿದ ಈ ಕಟ್ಟಡದ ನಿರ್ಮಾಣವು  1913ರಲ್ಲಿ ಆರಂಭಗೊಂಡಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಸಂದ  ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸ್ ಅವರಿಗೆ ಸಂದ ಶುಲ್ಕ 5000 ಪೌಂಡುಗಳು.

1997: ಮ್ಯಾಡಲೀನ್ ಆಲ್ ಬ್ರೈಟ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ(ಯುನೈಟೆಡ್ ಸ್ಟೇಟ್ಸ್ ಸೆಕ್ರೆಟರಿ ಆಫ್ ಸ್ಟೇಟ್) ಆದ   ಪ್ರಥಮ ಮಹಿಳೆಯಾದರು.

1998: ನೆಟ್ ಸ್ಕೇಪ್ (Netscape)  ಸಂಸ್ಥೆಯು ಮೊಸಿಲ್ಲಾ (Mozilla) ಎಂಬ  ಅಂತರಜಾಲ ಸಂವಹನ ವವ್ಯಸ್ಥೆ (ಬ್ರೌಸರ್) ಅನ್ನು ಯಾರು ಬೇಕಾದರೂ ಉನ್ನತೀಕರಣಗೊಳಿಸಲು ಆಸ್ಪದವೀಯುವ ‘ಓಪನ್ ಸೋರ್ಸ್’ ನೆಲೆಯಲ್ಲಿ ಬಿಡುಗಡೆ ಮಾಡಿತು.

2002: ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ನಂತರ ಕೊಲೆಗೈಯಲಾಯಿತು.

2006:  ಕಲಾತ್ಮಕ ಮತ್ತು ವಾಣಿಜ್ಯ ಚಲನಚಿತ್ರಗಳೆರಡರಲ್ಲೂ ಹೆಸರು ಮಾಡಿರುವ ಭಾರತೀಯ ಚಿತ್ರನಟಿ ಶಬನಾ ಅಜ್ಮಿ ಅವರು ವರ್ಲ್ಡ್ ಎಕನಾಮಿಕ್ ಫೋರಮ್ ನೀಡುವ ಕ್ರಿಸ್ಟಲ್ ಗೌರವಕ್ಕೆ ಪಾತ್ರರಾದರು.

2007: 2005-06ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ವಿತರಿಸಲಾಯಿತು.   ಈ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

2009: ಚಲನಚಿತ್ರಗಳಲ್ಲಿ ಧೂಮಪಾನ ದೃಶ್ಯಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ 2006 ವರ್ಷದಲ್ಲಿ  ಹೊರಡಿಸಿದ ಅಧಿಸೂಚನೆಯನ್ನು ದೆಹಲಿ ಉಚ್ಛ ನ್ಯಾಯಾಲಯವು ರದ್ದುಪಡಿಸಿತು.

2009: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪ್ರಾಚೀನ ಮೊಹೆಂಜೊದಾರೊಕ್ಕಿಂತಲೂ ಹಳೆಯದಾದ, ಸುಮಾರು 5,500 ವರ್ಷಗಳ ಇತಿಹಾಸವಿರುವ ನಾಗರಿಕತೆಯ ಕುರುಹು ಪತ್ತೆಯಾಯಿತು. 22 ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡ ತಂಡವೊಂದು ಸಿಂಧ್ ಪ್ರಾಂತ್ಯದ ಸುಕ್ಕರ್ ಜಿಲ್ಲೆಯ ‘ಲಖಿಯಾ ಜೊ ದರೊ’ ಎಂಬಲ್ಲಿ  ಕೈಗೊಂಡ ಉತ್ಖನನದ ವೇಳೆ ಅಮೂಲ್ಯ ಹರಳುಗಳು, ಗೃಹೋಪಯೋಗಿ ಮಡಕೆಗಳು, ತಾಮ್ರ ಮತ್ತು ಇತರ ಲೋಹಗಳು ಪತ್ತೆಯಾದವು. ‘ಇದು ಮೊಹೆಂಜೊದಾರೊ ನಾಗರಿಕತೆಗಿಂತ ಹಳೆಯದು ಎಂದು ನಾವು ಸದ್ಯ ಹೇಳಬಲ್ಲೆವು’ ಎಂದು ಈ ಉತ್ಖನನ ಯೋಜನೆಯ ನಿರ್ದೇಶಕ ಗುಲಾಂ ಮುಸ್ತಫಾ ‘ಡಾನ್’ ಪತ್ರಿಕೆಗೆ ತಿಳಿಸಿದರು.

ಪ್ರಮುಖಜನನ/ಮರಣ:

1809: ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಸಂಗಡಿಗರೊಂದಿಗೆ ಹೋರಾಡಿದ ಸುರೇಂದ್ರ ಸೈ ಅವರು ಒದಿಶಾದ ಸಂಬಾಲ್ಪುರದ ಬಳಿಯ ಖಿಂಡ ಎಂಬಲ್ಲಿ ಜನಿಸಿದರು.  ಇವರು ತಮ್ಮ ಅನೇಕ ಸಂಗಡಿಗರ ಜೊತೆಗೂಡಿ ಪಶ್ಚಿಮ ಒದಿಶಾದ  ಅನೇಕ ಪ್ರಾಂತ್ಯಗಳು ಬ್ರಿಟಿಷರಿಗೆ ದಕ್ಕದ ಹಾಗೆ  ಹೋರಾಟ ನಡೆಸಿದ್ದರು.  ಬ್ರಿಟಿಷ್ ಬಂಧನಕ್ಕೆ ಸಿಲುಕಿ ಹಿಂಸೆಗೊಳಗಾದ ಇವರು 1884ರ ಮೇ 23ರಂದು ಅಸಿರ್ ಘರ್ ಸೆರೆಮನೆಯಲ್ಲಿ ಕೊನೆಯುಸಿರೆಳೆದರು.

1814: ಭಾರತೀಯ ಪುರಾತತ್ವ ಸಂಶೋಧನಾ ಪಿತಾಮಹರೆಂದು ಪ್ರಸಿದ್ಧರಾಗಿರುವ  ಕನ್ನಿಂಗ್ ಹ್ಯಾಮ್ ಅವರು ಲಂಡನ್ನಿನಲ್ಲಿ ಜನಿಸಿದರು. ಅಲೆಗ್ಸಾಂಡರ್ ಭಾರತದ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪದ ಕುರುಹುಗಳನ್ನು ಪತ್ತೆ ಮಾಡಿ ಭಾರತೀಯ ಪುರಾತತ್ವ ಶೋಧನೆಗೆ ಹೊಸ ಮಾರ್ಗವನ್ನು ನಿರ್ಮಿಸಿಕೊಟ್ಟರು. ವೃತ್ತಿಯಲ್ಲಿ ಬ್ರಿಟಿಷ್ ಸೇನೆಯ ಇಂಜಿನಿಯರ್  ಆಗಿದ್ದರೂ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು,   1862ರಲ್ಲಿ ಭಾರತ ಸರ್ಕಾರದ ಪುರಾತತ್ವ ಸಂಶೋಧನಾ ಇಲಾಖೆಯನ್ನು ಸ್ಥಾಪಿಸಿ, ಅದರ ಸರ್ವೇಯರ್ ಆಗಿ,  ನಂತರ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದರು.

1876: ಜರ್ಮನಿಯ ವಿಜ್ಞಾನಿ ಓಟ್ಟೋ ಡೀಲ್ಸ್ ಹ್ಯಾಂಬರ್ಗಿನಲ್ಲಿ ಜನಿಸಿದರು.  ಸಿಂಥೆಟಿಕ್ ರಬ್ಬರ್ ಮತ್ತು ಪ್ಲಾಸ್ಟಿಕ್ ಕುರಿತಾದ ಇವರ ಉಪಯುಕ್ತ  ಸಂಶೋಧನೆಗಾಗಿ 1950ರಲ್ಲಿ ರಸಾಯನ ಶಾಸ್ತ್ರಜ್ಞರಿಗೆ ನೀಡುವ ನೊಬೆಲ್ ಪುರಸ್ಕಾರ ನೀಡಲಾಯಿತು.

1893: ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ರಾಳ್ಲಪಲ್ಲಿಯಲ್ಲಿ  ಜನಿಸಿ, ವಿದ್ಯಾಭ್ಯಾಸದ ನಿಮಿತ್ತ ಮೈಸೂರು ಸೇರಿದರು. ವ್ಯಾಕರಣ ಅಲಂಕಾರ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸುವುದರ ಜೊತೆಗೆ ಸಂಗೀತದಲ್ಲಿಯೂ ಅತ್ಯುತ್ತಮ ಮಟ್ಟದ ಜ್ಞಾನ ಸಂಪಾದಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗು   ಪ್ರಾಧ್ಯಾಪಕರಾಗಿ  ವೃತ್ತಿಯಲ್ಲಿದ್ದ ಶ್ರೀಯುತರು, ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಗೌರವ ಡಾಕ್ಟರೇಟ್‌ ಮುಂತಾದ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದರು. 11-03-1979ರಂದು ತಿರುಪತಿ ತಿರುಮಲ ದೇವಸ್ಥಾನದ ‘ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌’ ಗೌರವ ಪಡೆದ ಒಂದೆರಡು ಘಂಟೆಗಳಲ್ಲೇ ನಿಧನರಾದರು.

1894: ಪ್ರಸಿದ್ಧ ಬರಹಗಾರ್ತಿ ಜ್ಯೋತಿರ್ಮಯಿ ದೇವಿ ಜಯಪುರದಲ್ಲಿ ಜನಿಸಿದರು.  ಬಂಗಾಳದಲ್ಲಿ ನೆಲೆಸಿದ ಇವರು ಸಣ್ಣಕತೆಗಳಿಗೆ ಪ್ರಸಿದ್ಧರಾಗಿದ್ದು, ಜಯಪುರ ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಕಳೆದ ತಮ್ಮ ಬಾಲ್ಯದ ಜೀವನವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

1897: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಟಕ್ ನಗರದಲ್ಲಿ ಜನಿಸಿದರು.  1920 ಮತ್ತು  1930ರ ದಶಕದಲ್ಲಿ ಯುವ ಕ್ರಾಂತಿಕಾರಿ ಕಾಂಗ್ರೆಸ್ ನಾಯಕರಾಗಿದ್ದ ಇವರು,  1938-39ರ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ  ಅಧ್ಯಕ್ಷರಾಗಿದ್ದರು. ತಮ್ಮ ಕ್ರಾಂತಿಕಾರಿ ಮನೋಭಾವಕ್ಕೆ ಅನುಗುಣವಾಗಿ ದೇಶದಿಂದ ಹೊರಹೋಗಿ ಬ್ರಿಟಿಷರ ವಿರುದ್ಧ ವಿರುದ್ಧ ಬಲ ಸಂಘಟಿಸಲು ಶ್ರಮಿಸಿದ ಅವರು, ತೈವಾನಿನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಎನ್ನಲಾಗಿದೆ.

1907: ಜಪಾನಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹೈಡೆಕಿ ಯುಕಾವ ಅವರು ಟೋಕಿಯೋದಲ್ಲಿ ಜನಿಸಿದರು.  1949ರ ವರ್ಷದಲ್ಲಿ ಭೌತಶಾಸ್ತ್ರದ ಮಹತ್ವದ ಸಾಧನೆಗಳಿಗಾಗಿ ಅವರಿಗೆ ನೊಬೆಲ್ ಪುರಸ್ಕಾರ ಸಂದಿತು.

1915: ಸೈಂಟ್ ಲೂಸಿಯಾದ ಬರ್ಬಾಡಿಯನ್ ಅರ್ಥಶಾಸ್ತ್ರಜ್ಞರಾದ ವಿಲಿಯಂ ಅರ್ಥರ್ ಲೂಯಿಸ್ ಜನಿಸಿದರು.  ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಂಡವಾಳ ಮತ್ತು ಕೂಲಿಯ ಕುರಿತಾಗಿ ಮಹತ್ವದ ಅಧ್ಯಯನ ಕೈಗೊಂಡು ಸಂಶೋಧನಾತ್ಮಕ ಕೊಡುಗೆಗಳನ್ನು ನೀಡಿದ ಇವರಿಗೆ 1979ರ ವರ್ಷದಲ್ಲಿ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1918: ನೊಬೆಲ್ ಪುರಸ್ಕೃತ  ಜೈವಿಕ ವಿಜ್ಞಾನಿ ಮತ್ತು  ವೈದ್ಯೆ ಗೆರ್ಟ್ರೂಡ್ ಬಿ. ಎಲಿಯಾನ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.  ಈಕೆ ಹಲವಾರು ನವೀನ ವಿಧಾನಗಳಲ್ಲಿ ಹೊಸ ಹೊಸ ಔಷಧಗಳನ್ನು ಕಂಡುಹಿಡಿದಿದ್ದು, ಇವುಗಳಲ್ಲಿ  ಏಡ್ಸ್ ರೋಗಕ್ಕೆ  ಸಲ್ಲುವ ‘AZT’, ಆರ್ಗನ್ ಟ್ರಾನ್ಸ್ ಪ್ಲಾಂಟ್ಗಳಲ್ಲಿ  ಉಪಯೋಗಿಸುವ ‘ಅಜತಿಯೋಪ್ರೈನ್’, ‘ಇಮ್ಯುನೋ ಸಪ್ರೆಸಿವ್ ಡ್ರಗ್ಸ್’ ಮುಂತಾದವು ಪ್ರಮುಖವಾಗಿವೆ.  ಇವರಿಗೆ 1988ರ ವರ್ಷದಲ್ಲಿ, ಔಷದ ಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿದೆ.

1920: ‘ಹಾರುವ ತಟ್ಟೆಗಳು’ ಅಥವಾ  ಫ್ಲಯಿಂಗ್ ಡಿಸ್ಕ್ ಸೃಷ್ಟಿಕರ್ತ ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅಮೆರಿಕದ ಉಟಾಹ್ ಬಳಿಯ ರಿಚ್ ಫೀಲ್ಡ್ ಎಂಬಲ್ಲಿ ಜನಿಸಿದರು.   ಮುಂದೆ ಅವರು ತಮ್ಮ ‘ಹಾರುವ ತಟ್ಟೆ’ಯ ಹಕ್ಕನ್ನು ವಾಮ್-ಓ ಟಾಯ್ ಸಂಸ್ಥೆಗೆ ಮಾರಿದರು.  ಆ ಸಂಸ್ಥೆ ಅದನ್ನು  ‘ಫ್ರಿಸ್ಬೀ’ ಎಂದು ಪ್ರಸಿದ್ಧಿಪಡಿಸಿತು.

1927: ಶಿವಸೇನಾ ರಾಜಕೀಯ ಪಕ್ಷ ಸ್ಥಾಪಕರಾದ ಬಾಳ್ ಕೇಶವ್ ಠಾಕ್ರೆ ಅವರು ಪುಣೆಯಲ್ಲಿ ಜನಿಸಿದರು.  ಠಾಕ್ರೆ ಅವರು ವ್ಯಂಗ್ಯಚಿತ್ರಕಾರರಾಗಿ ಮತ್ತು  ಪತ್ರಕರ್ತರಾಗಿ, ಪತ್ರಿಕೋದ್ಯಮಿಯಾಗಿ ತಮ್ಮ ಪ್ರಾರಂಭಿಕ ವೃತ್ತಿ ಜೀವನವನ್ನು ನಡೆಸಿ ಮುಂದೆ ಶಿವಸೇನಾ ಪಕ್ಷವನ್ನು ಸ್ಥಾಪಿಸಿದರು.   2012ರ ವರ್ಷದಲ್ಲಿ ನಿಧನರಾದ ಅವರು ತಮ್ಮ ಕೊನೆಯ ದಿನಗಳವರೆವಿಗೂ ‘ಮಾರ್ಮಿಕ್’ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನೂ ಮತ್ತು ‘ಸಾಮ್ನಾ’ ಪತ್ರಿಕೆಗೆ ಲೇಖನಗಳನ್ನೂ ಬರೆಯುತ್ತಿದ್ದರು.

1929: ಜರ್ಮನಿಯಲ್ಲಿ ಜನಿಸಿ, ಕೆನಡಾದ ನಿವಾಸಿಯಾದ ಜಾನ್ ಪೊಲಾನೈ ಬರ್ಲಿನ್ ನಗರದಲ್ಲಿ ಜನಿಸಿದರು.  ಕೆಮಿಕಲ್ ಕಿನೆಟಿಕ್ಸ್ ಕುರಿತಾದ ಸಂಶೋಧನೆಗಾಗಿ ಅವರಿಗೆ ರಸಾಯನ ಶಾಸ್ತ್ರದ  1986ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

1930: ಕವಿ ಮತ್ತು ನಾಟಕಕಾರ ಡೆರೆಕ್ ವಾಲ್ಕಾಟ್ ಅವರು ಸೈಂಟ್ ಲೂಸಿಯಾದ ಕ್ಯಾಸ್ಟ್ರೀಸ್ ಎಂಬಲ್ಲಿ ಜನಿಸಿದರು.  ಅವರು ತಮ್ಮ  ‘ಒಮೆರೋಸ್’ ಕವಿತಾ ಸಂಕಲನ ಮತ್ತು ಹಲವಾರು ನಾಟಕಗಳ ಕೃತಿಯಿಂದ ಪ್ರಸಿದ್ಧರಾಗಿದ್ದು, 1992ರ ನೊಬೆಲ್ ಪ್ರಶಸ್ತಿಯೇ ಅಲ್ಲದೆ ವಿಶ್ವದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

1953: ಕನ್ನಡದ ಪ್ರಸಿದ್ಧ ರಂಗಕರ್ಮಿ ಮತ್ತು ಚಲನಚಿತ್ರ ನಿರ್ದೇಶಕರಾದ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಬೆಂಗಳೂರಿನಲ್ಲಿ ಜನಿಸಿದರು.  ಮೂರು ಬಾರಿ ರಾಷ್ಟ್ರೀಯ ಭಾವೈಕ್ಯತೆಗಾಗಿ ನೀಡುವ ನರ್ಗಿಸ್ ದತ್ ಚಲನಚಿತ್ರ ಪ್ರಶಸ್ತಿಯ ಜೊತೆಗೆ ಇನ್ನೂ ಅನೇಕ ರಾಷ್ಟ್ರಮಟ್ಟದ ಚಲನಚಿತ್ರ ಪಶಸ್ತಿಗಳು, ಇಪ್ಪತ್ತಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು ಮತ್ತು ಆರು ಬಾರಿ ಪನೋರಮಾಗೆ ಆಯ್ಕೆಗೊಂಡ ಸಾಧನೆಗಳಲ್ಲಿ ಇವರ  ನಿರ್ದೇಶನದ ಚಿತ್ರಗಳು ಭಾಗಿಯಾಗಿವೆ.   ಅವರು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2007:  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್  ಬೆಂಗಳೂರಿನಲ್ಲಿ ನಿಧನರಾದರು.  ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು.

2009: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಯಾನೆ ಕುಳ್ಳಪ್ಪು ಕುಂದಾಪುರದಲ್ಲಿ ನಿಧನರಾದರು. ರಾಜ್ಯನಾಟಕ ಆಕಾಡೆಮಿ, ಕೊಂಕಣಿ ನಾಟಕ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬಾಲಕೃಷ್ಣ ಪೈ ತಮ್ಮ ಕುಳ್ಳನೆ ದೇಹಕಾಯದಿಂದಾಗಿ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿಯಾಗಿದ್ದರು.

Categories
e-ದಿನ

ಜನವರಿ-22

ಪ್ರಮುಖಘಟನಾವಳಿಗಳು:

613: ಕಾನ್ಸ್ಟಾಂಟಿನೋಪಾಲ್ನಲ್ಲಿ ಚಕ್ರವರ್ತಿ ಹೆರಾಕ್ಲಿಶಿಯಸ್ ಎಂಟು ತಿಂಗಳ ತನ್ನ ಮಗು ಕಾನ್ಸ್ಟಾಂಟಿಗೆ ಸಹ-ಚಕ್ರವರ್ತಿ ಎಂದು  ಕಿರೀಟಧಾರಣೆ ಮಾಡಿಸಿದ.

1760: ವಾಂಡಿವಾಶ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷರು,  ದಕ್ಷಿಣಭಾರತದಾದ್ಯಂತ ತಮ್ಮ ಪೂರ್ಣ ಪ್ರಭುತ್ವವನ್ನು  ಸಾಧಿಸಿದರು.

1840: ಎರಡನೇ ಆಂಗ್ಲ ಸಿಖ್ ಕದನದಲ್ಲಿ ಒಂಬತ್ತು ತಿಂಗಳ ನಿರಂತರ ಹೋರಾಟದಲ್ಲಿ ಕೊನೆಯ ಸಿಕ್ ಹೋರಾಟಗಾರರು ಸೋಲನುಭವಿಸುವುದರೊಂದಿಗೆ ಮುಲ್ತಾನ್ ಬ್ರಿಟಿಷರ ವಶವಾಯಿತು.

1905: ರಷ್ಯಾದ  ಸೈಂಟ್ ಪೀಟರ್ಸ್ ಬರ್ಗಿನಲ್ಲಿ  ಫಾದರ್ ಜಿಯೋರ್ಜಿ  ಗ್ಯಾಪನ್ ಎಂಬಾತನ ನೇತೃತ್ವದಲ್ಲಿ ಸರ್ವಾಧಿಕಾರಿ ಎರಡನೇ ತ್ಸಾರ್ ನಿಕಲಸನಿಗೆ ಮನವಿ ಅರ್ಪಿಸಲು ‘ವಿಂಟರ್ ಪ್ಯಾಲೇಸಿಗೆ’ ಮೆರವಣಿಗೆ ಹೊರಟಿದ್ದ ಕಾರ್ಮಿಕರು ಮತ್ತು ಅವರ ಕುಟುಂಬದವರ  ಮೇಲೆ ಇಂಪೀರಿಯಲ್ ಗಾರ್ಡ್ ಸೈನಿಕರು ಗುಂಡಿನ ಮಳೆ ಸುರಿಸಲಾಗಿ ನೂರಕ್ಕೂ ಹೆಚ್ಚು ಜನರು ಮೃತರಾದರು.  ಕೆಲವೊಂದು ವರದಿಗಳು, ಸತ್ತವರು ಮತ್ತು ಗಾಯಗೊಂಡವರ  ಸಂಖ್ಯೆ 1000ದಿಂದ  4000 ಎಂದೂ ಹೇಳಿದೆ.  ಹೀಗೆ ರಕ್ತಪಾತವಾದ ಈ ಘಟನೆ ‘ಬ್ಲಡಿ ಸಂಡೆ’ ಎಂಬ ಹೆಸರಿನಿಂದ  ಚರಿತ್ರೆಯಲ್ಲಿ ದಾಖಲಾಗಿದ್ದು,  ರಷ್ಯಾದ 1917ರ ಕ್ರಾಂತಿಗೆ ಒಂದು ಮಹತ್ವದ ಕಾರಣವಾಗಿ ಪರಿಣಮಿಸಿತು.

1927: ಟೆಡ್ಡಿ ವೇಕ್ ಲ್ಯಾಮ್ ಅವರು ವಿಶ್ವದಲ್ಲೇ ಪ್ರಥಮ ಬಾರಿಗೆ ಫುಟ್ಬಾಲ್ ಪಂದ್ಯದ ವೀಕ್ಷಕ ವಿವರಣೆಯನ್ನು ಆಕಾಶವಾಣಿಯಲ್ಲಿ ನೀಡಿದರು.  ಈ ಪಂದ್ಯವು ಅರ್ಸೆನಲ್ ಎಫ್.ಸಿ   ಮತ್ತು  ಶೆಫೀಲ್ಡ್ ಯುನೈಟೆಡ್ ಹೈಬರಿ ತಂಡಗಳ ನಡುವೆ ನಡೆಯಿತು.

1946: ಅಮೆರಿಕದ ಪ್ರಸಿದ್ಧ ಬೇಹುಗಾರಿಕೆ ಸಂಸ್ಥೆ  ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ಗೆ ಮುನ್ನುಡಿಯಾದ ‘ಸೆಂಟ್ರಲ್ ಇಂಟೆಲಿಜೆನ್ಸ್ ಗ್ರೂಪ್’ ಸ್ಥಾಪನೆಗೊಂಡಿತು.  ವಿಶ್ವದೆಲ್ಲೆಡೆಯಿಂದ  ಭದ್ರತಾ ವ್ಯವಸ್ಥೆಯ ನಿಟ್ಟಿನಲ್ಲಿ ವಿಷಯಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ವಿಶ್ಲೇಷಿಸುವ ಕಾರ್ಯವನ್ನು ನಿರ್ವಹಿಸುವ ಪ್ರಸಿದ್ಧ ಸಂಸ್ಥೆ ಇದಾಗಿದೆ.

1968: ಅಮೆರಿಕದ ಬಾಹ್ಯಾಕಾಶ ಅನ್ವೇಷಣೆಗಳಿಗೆ ಸಹಾಯಕವಾಗಲು ನಿರ್ಮಿಸಿದ ಲೂನಾರ್ ಮಾಡ್ಯೂಲ್ ಅನ್ನು ಹೊತ್ತ ಅಪೋಲೋ 5 ಗಗನ ವಾಹನವು ಆಗಸಕ್ಕೆ ಚಿಮ್ಮಿತು.

1973: ಗರ್ಭಪಾತವು ಕಾನೂನು ಬಾಹಿರವಲ್ಲವೆಂದು ರೋ ವಿ. ವೇಡ್ ಮತ್ತು ಡೋ ವಿ. ಬೋಲ್ಟನ್  ಕಾನೂನು ವ್ಯಾಜ್ಯದಲ್ಲಿ  ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ, ಅಮೇರಿಕಾದ ಎಲ್ಲಾ 50 ರಾಜ್ಯಗಳೂ ಸ್ವಯಂಪ್ರೇರಿತ ಗರ್ಭಪಾತವು  ನ್ಯಾಯಸಮ್ಮತವೆಂದು ಅಂಗೀಕರಿಸಿದಂತಾಯಿತು.

1984: ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯು  ಬಳಕೆದಾರ ಸ್ನೇಹಮುಖೀ ವ್ಯವಸ್ಥೆಯಾದ ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಮತ್ತು ‘ಮೌಸ್’ ಉಳ್ಳ,  ತನ್ನ ಮೊದಲ ಕಂಪ್ಯೂಟರ್ ಆದ   ‘ಆಪಲ್ ಮೆಖಿನ್ತೋಶ್’  ಅನ್ನು ಸೂಪರ್ ಬೌಲ್ 18 ಚಾನೆಲ್ಲಿನ ಜಾಹೀರಾತಿನಲ್ಲಿ ಪರಿಚಯಿಸಿತು.   ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಜಾರಿಯಾಗುವುದಕ್ಕೆ ಮುಂಚಿನ ಕಂಪ್ಯೂಟರುಗಳನ್ನು ಉಪಯೋಗಿಸುವ ಬಳಕೆದಾರನಿಗೆ,  ಕಂಪ್ಯೂಟರ್ ಜೊತೆಗಿನ ನಿಯಮಿತ ಸಂವಾದ ವ್ಯವಸ್ಥೆಯ ಮೂಲ ಜ್ಞಾನ ಮತ್ತು ರೂಢಿ ಅತ್ಯಗತ್ಯವಾಗಿತ್ತು.  ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ವ್ಯವಸ್ಥೆಯಲ್ಲಿ ಬಳಕೆದಾರ ತನ್ನ ಮುಂದೆ ಕಂಪ್ಯೂಟರ್ ಪರದೆಯಲ್ಲಿ ಕಾಣುವ ಯಾವುದೇ ವ್ಯವಸ್ಥೆಯನ್ನಾಗಲೀ  ಮೌಸ್ ಬಳಕೆ ಮತ್ತು ಸುಲಭ ಕೀ ಬೋರ್ಡ್ ಅಕ್ಷರಗಳನ್ನು ಸ್ಪರ್ಶಿಸುವುದರ ಮೂಲಕ  ಹಾಗೂ ಕೆಲವೊಮ್ಮೆ  ಪರದೆಯಲ್ಲೇ ಬೆರಳಾಡಿಸುವುದರ ಮೂಲಕ ಚಾಲ್ತಿಗೊಳಿಸುವುದು ಸುಲಭ ಸಾಧ್ಯವಾಗಿದೆ.

1999: ಒರಿಸ್ಸಾದ ಕಿಯೋನ್ ಝಾರ್ ಎಂಬಲ್ಲಿ ಕಾರಿನಲ್ಲಿ ನಿದ್ರಿಸುತ್ತಿದ್ದ ಆಸ್ಟ್ರೇಲಿಯನ್ ಮಿಷಿನರಿ  ಗ್ರಹಾಮ್ ಸ್ಟೈನ್ಸ್   ಮತ್ತು ಅವರ ಇಬ್ಬರು ಪುತ್ರರನ್ನು ದುಷ್ಕರ್ಮಿಗಳು ಸಜೀವವಾಗಿ ದಹನ ಮಾಡಿದರು.

2001: ಭಾರತೀಯ ನೌಕಾಪಡೆಗೆ ‘ಐ ಎನ್ ಎಸ್ ಮುಂಬೈ’ ಮತ್ತು ‘ಐ ಎನ್ ಎಸ್ ಕಿರ್ಕ್’ ಸಮರನೌಕೆಗಳನ್ನು ಸೇರ್ಪಡೆಗೋಳಿಸಲಾಯಿತು.

2006: ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಚಾಲನೆ ನೀಡಿದರು.

2007: ಅಂತಾರಾಷ್ಟ್ರೀಯ ಖ್ಯಾತಿಯ ಗುಜರಾತಿನ ಗೀತ್ ಸೇಥಿ ಎಂಟು ವರ್ಷಗಳ ನಂತರ ಮತ್ತೊಮ್ಮೆ ಬಿಲಿಯರ್ಡ್ಸ್ ರಾಷ್ಟ್ರೀಯ ಚಾಂಪಿಯನ್ ಆದರು. ಕರ್ನಾಟಕದ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಆವರಣದಲ್ಲಿ ನಡೆದ ಫೈನಲ್ ಸುತ್ತಿನ ಮುಖಾಮುಖಿಯಲ್ಲಿ ಸೇಥಿ ಅವರು  ಪಂಕಜ್ ಅಡ್ವಾಣಿ ಅವರನ್ನು ಸೋಲಿಸಿದರು.

2007: ಗಗನಕ್ಕೇರಿಸಿದ್ದ ‘ಎಸ್ ಆರ್ ಇ-1 ಮರುಬಳಕೆ ಉಪಗ್ರಹ’ವನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ಸು ತಂದುಕೊಳ್ಳುವುದರಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾದರು. ಅಮೆರಿಕ, ಚೀನಾ, ರಷ್ಯಾದ ನಂತರದಲ್ಲಿ ಇಂತಹ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು.

2008: “ನೇತಾಜಿ ಸುಭಾಶ್ ಚಂದ್ರ ಬೋಸರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾದರು” ಎಂದು ನೇತಾಜಿ ಸಾವಿನ ಕುರಿತಂತೆ ಸರ್ಕಾರ ಸಂಗ್ರಹಿಸಿದ ಸಮಗ್ರ ದಾಖಲೆಗಳ ಅನುಸಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರಕ್ಕೆ ಬಂದಿರುವುಗಾಗಿ ಮಿಷನ್ ನೇತಾಜಿ ಸಂಸ್ಥೆಗೆ ನೀಡಲಾದ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿತು.

2009: ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಘಟಕ ಪ್ರದೇಶ ಮೌಲ್ಯ (ಯುಎವಿ) ತೆರಿಗೆ ಪದ್ಧತಿಯನ್ನು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಜಾರಿಗೆ ತರಲು ಅನುವು ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಧ್ವನಿಮತದಿಂದ ಆಂಗೀಕರಿಸಿತು. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2003ರಿಂದ ಜಾರಿಯಲ್ಲಿದ್ದ ಸಿವಿಎಸ್ (ಕ್ಯಾಪಿಟಲ್ ವ್ಯಾಲ್ಯೂ ಸ್ಕೀಮ್) ತೆರಿಗೆ ಪದ್ಧತಿಗೆ ಬದಲಾಗಿ ತೆರಿಗೆ ಪಾವತಿದಾರರು ಸ್ವಯಂಘೋಷಿತ ಪದ್ಧತಿಯ ಮೂಲಕ ತಾವೇ ತೆರಿಗೆಯನ್ನು ನಿರ್ಧರಿಸಿಕೊಳ್ಳಬಹುದಾದ ವ್ಯವಸ್ಥೆ ಜಾರಿಗೆ ಬಂದಿದೆ.

2009: 125 ಗಂಟೆ ನಿರಂತರ ಪಾಠ ಮಾಡುವ ಮೂಲಕ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿನ ಜಮ್ಮುನ್ ಪಾಣಿ ಗ್ರಾಮದ ದಿಲೀಪ್ ಕುಮಾರ್ ಚಾಂದೆಲ್ ಎಂಬ ಅಧ್ಯಾಪಕರು  ವಿಶ್ವ ದಾಖಲೆ ನಿರ್ಮಿಸಿದರು.

ಪ್ರಮುಖಜನನ/ಮರಣ:

1561: ಮಹಾನ್ ತತ್ವಜಾನಿ, ಆಡಳಿತಗಾರ ಮತ್ತು ವೈಜ್ಞಾನಿಕ  ತಳಹದಿಯ ಚಿಂತಕ ಫ್ರಾನ್ಸಿಸ್ ಬೇಕನ್ ಲಂಡನ್ನಿನ ಸ್ಟ್ರಾಂಡ್ ಎಂಬಲ್ಲಿ ಜನಿಸಿದರು.

1570: ಇಂಗ್ಲಿಷ್ ಇತಿಹಾಸಜ್ಞ, ರಾಜಕಾರಣಿ, ಕಾಟನ್ ಲೈಬ್ರೆರಿ ಜನಕ ಸರ್ ರಾಬರ್ಟ್ ಕಾಟನ್ ಜನಿಸಿದರು.  ಇವರು ಸಂಗ್ರಹಿಸಿದ ವಿವಿಧ ವಸ್ತುಗಳ ಅಪೂರ್ವ ಬರವಣಿಗೆಗಳು ಕಾಟನ್ ಲೈಬ್ರೆರಿ ಎಂದು ಪ್ರಸಿದ್ಧಿ ಪಡೆದದ್ದಷ್ಟೇ ಅಲ್ಲದೆ  ಮುಂದೆ ಬ್ರಿಟಿಷ್ ಲೈಬ್ರೆರಿಯ  ಪ್ರಾರಂಭಕ್ಕೆ ಪ್ರೇರಕವಾದವು.

1896: ಹಿಂದೀ ಸಾಹಿತ್ಯದ ಮಹತ್ವದ ಬರಹಗಾರರಾದ ಸೂರ್ಯಕಾಂತ ತ್ರಿಪಾಠಿ ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದರು.  ‘ನಿರಾಲಾ’ ಎಂಬ ಕಾವ್ಯ ನಾಮದಲ್ಲಿ ಅವರ ಬರಹಗಳು ಪ್ರಸಿದ್ಧಿ ಪಡೆದಿವೆ.

1897: ಪ್ರಖ್ಯಾತ ಸಂಗೀತಕಾರ, ಸಂಗೀತ ಶಾಸ್ತ್ರಜ್ಞ ಮತ್ತು ಬರಹಗಾರ ದಿಲೀಪ್ ಕುಮಾರ್ ರಾಯ್ ಬಂಗಾಳದ ನಾಡಿಯಾ ಬಳಿಯ ಕೃಷ್ಣಾನಗರ್ ಎಂಬಲ್ಲಿ ಜನಿಸಿದರು.  1965ರ ವರ್ಷದಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯು ಇವರನ್ನು ಫೆಲೋಷಿಪ್ ಗೌರವ ನೀಡಿ  ಸನ್ಮಾನಿಸಿತು.

1908: ಸೋವಿಯತ್ ರಷ್ಯಾದ ಭೌತಶಾಸ್ತ್ರಜ್ಞ ಲೆವ್ ಲಂಡಾವು ಅವರು ಬಾಕು ಎಂಬಲ್ಲಿ ಜನಿಸಿದರು.  1962ರ ವರ್ಷದಲ್ಲಿ ಸೂಪರ್ ಫ್ಲೂಯಿಡಿಟಿ  ಕುರಿತಾಗಿ ಇವರು ನೀಡಿದ  ಮಹತ್ವದ ಸುಳಿವುಗಳಿಗಾಗಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ನೀಡಲಾಯಿತು.

1936: ಅಮೇರಿಕಾದ ಭೌತಶಾಸ್ತ್ರಜ್ಞ ಮತ್ತು  ರಸಾಯನ ಶಾಸ್ತ್ರಜ್ಞ ಅಲನ್ ಜೆ ಹೀಗರ್ ಲೋವಾ ಬಳಿಯ ಸಿಯೋಕ್ಸ್ ಸಿಟಿ ಎಂಬಲ್ಲಿ ಜನಿಸಿದರು.  ಕಂಡಕ್ಟಿವ್ ಪಾಲಿಮರ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2000ದ ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1900: ಮೈಕ್ರೋಫೋನ್ ಸಹ ಸಂಶೋಧಕರಾದ ಡೇವಿಡ್ ಎಡ್ವರ್ಡ್ ಹ್ಯೂಸ್ ಅವರು ಲಂಡನ್ನಿನಲ್ಲಿ ನಿಧನರಾದರು.

1901: ಅರವತ್ತನಾಲ್ಕು ವರ್ಷಗಳ ಸುದೀರ್ಘ ಆಳ್ವಿಕೆಯ ಬಳಿಕ ಯುನೈಟೆಡ್ ಕಿಂಗ್ಡಂನ  ರಾಣಿ ವಿಕ್ಟೋರಿಯಾ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1922: ಡ್ಯಾನಿಶ್ ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಫ್ರೆಡ್ರಿಕ್ ಬಜೇರ್ ನಿಧನರಾದರು.  ಇವರಿಗೆ 1908ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.  ಅನೇಕ ಶಾಂತಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದ ಇವರು ಸ್ವೀಡನ್ ಮತ್ತು ನಾರ್ವೆ ನಡುವೆ ಶಾಂತಿ ಸಹಕಾರ ಏರ್ಪಡುವ  ಮಾತುಕತೆಗಳನ್ನು ಏರ್ಪಾಡು ಮಾಡಿದ್ದರು.

2006: ಹಿರಿಯ ಹಿಂದಿ ಭಾಷಾ ವಿದ್ವಾಂಸ ಡಾ. ಮಂಡಗದ್ದೆ ಕಟ್ಟೆ ಭಾರತಿ ರಮಣಾರ್ಯ ನಿಧನರಾದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಹಿಂದಿಯ ತುಳಸಿ ರಾಮಾಯಣವನ್ನು ಮಕರಂದ ವ್ಯಾಖ್ಯೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪಕ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2014: ಪ್ರಸಿದ್ಧ ಚಿತ್ರನಟ ಅಕ್ಕಿನೇನಿ ನಾಗೇಶ್ವರರಾವ್ ಹೈದರಾಬಾದಿನಲ್ಲಿ ನಿಧನರಾದರು.  ಚಿತ್ರ ನಟರಾಗಿ, ನಿರ್ಮಾಪಕರಾಗಿ, ಸ್ಟುಡಿಯೋ ನಿರ್ಮಿಸಿದವರಾಗಿ ವಿವಿಧ ರೀತಿಯ ಸಾಧನೆ ಮಾಡಿದ್ದ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ, ಪದ್ಮಭೂಷಣ, ಪದ್ಮವಿಭೂಷಣವೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

Categories
e-ದಿನ

ಜನವರಿ-21

ಪ್ರಮುಖಘಟನಾವಳಿಗಳು:

1749: ಇಟಲಿಯ ವೆರೋನಾದ ‘ಟಿಯಾಟ್ರೋ ಫಿಲರ್  ಮೊನಿಕೋ’ ಯೂರೋಪ್ ಖಂಡದಲ್ಲೇ ಪ್ರಸಿದ್ಧ ‘ಅಪೇರಾ ಹೌಸ್’ ಎಂಬ   ಪ್ರಸಿದ್ಧಿ ಪಡೆದಿದೆ. 1716ರಲ್ಲಿ ಪ್ರಥಮಬಾರಿಗೆ ನಿರ್ಮಾಣವಾಗಿದ್ದ ಇದು 1749ರ ಜನವರಿ 21ರಂದು ಬೆಂಕಿಗೆ ನಾಶವಾಯ್ತು.  ಮುಂದೆ ಫೆಬ್ರುವರಿ 23,  1945ರಲ್ಲಿ  ವಿಶ್ವಮಹಾ ಯುದ್ಧದ ಸಂದರ್ಭದಲ್ಲಿ ಆಂಗ್ಲೋ ಅಮೇರಿಕನ್ ಬಾಂಬ್ ದಾಳಿಗೆ ಕುಸಿದು ಬಿದ್ದ ಈ ಕಟ್ಟಡವನ್ನು ಹಿಂದಿನ ಸಾಂಸ್ಕೃತಿಕ ಕುರುಹಿನಂತೆ 1975ರ ವರ್ಷದಲ್ಲಿ ಪುನರ್ನಿರ್ಮಿಸಲಾಗಿದೆ.

1789: ಅಮೇರಿಕಾದ ಪ್ರಥಮ ಕಾದಂಬರಿ ವಿಲಿಯಮ್ ಹಿಲ್ ಬ್ರೌನ್ ಅವರ  ‘ದಿ ಪವರ್ ಆಫ್ ಸಿಂಪಥಿ’ ಅಥವಾ ‘ಟ್ರಿಯಂಪ್ ಆಫ್ ನೇಚರ್ ಫೌಂಡೆಡ್ ಇನ್ ಟ್ರೂಥ್’ ಬೋಸ್ಟನ್ ನಗರದಲ್ಲಿ ಮುದ್ರಣಗೊಂಡಿತು.

1793: ಹದಿನಾರನೇ ಲೂಯಿಯನ್ನು ಪ್ಯಾರಿಸ್ಸಿನಲ್ಲಿ ಗಿಲೊಟಿನ್ ಯಂತ್ರದ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು.

1952: ಮುಂಬೈನ ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿ ಉದ್ಘಾಟನೆಗೊಂಡಿತು. ಸರ್ ಗೋಸ್ವಾಜೀ ಜಹಾಂಗೀರ್ ಅವರು 7,04,112 ರೂಪಾಯಿಗಳನ್ನು ದೇಣಿಗೆ ನೀಡಿದ ಕಾರಣ ಈ ಆರ್ಟ್ ಗ್ಯಾಲರಿಗೆ ಅವರ ಹೆಸರನ್ನೇ ಇಡಲಾಯಿತು. ತಮ್ಮ ಮೃತಪುತ್ರ ಜಹಾಂಗೀರ್ ನೆನಪಿಗಾಗಿ ಈ ದೇಣಿಗೆಯನ್ನು ಗೋಸ್ವಾಜೀ ನೀಡಿದರು.

1954: ಅಮೇರಿಕದ ಪ್ರಥಮ ಅಣ್ವಸ್ತ್ರ ಸುಸಜ್ಜಿತ  (ನ್ಯೂಕ್ಲಿಯರ್ ಎನೇಬಲ್ಡ್)  ಜಲಾಂತರ್ಗಾಮಿ ನೌಕೆಯಾದ  ‘ಯು.ಎಸ್.ಎಸ್. ನೌಟಿಲಸ್’ ಅನ್ನು  ಕನೆಕ್ಟಿಕಟ್ ಬಳಿಯ ಗ್ರೋಟನ್ ಎಂಬಲ್ಲಿ ಬಿಡುಗಡೆಗೊಳಿಸಲಾಯಿತು.

1960: ‘ಲಿಟಲ್ ಜೋ 1 ಬಿ’ ಎಂಬ ಬಾಹ್ಯಾಕಾಶ ನೌಕೆ ವರ್ಜೀನಿಯಾದ ವಾಲಪ್ಸ್ ದ್ವೀಪದಿಂದ  ಬುಧ ಗ್ರಹಕ್ಕೆ ಪಯಣ ಹೊರಟಿತು.  ಇದರಲ್ಲಿ ಪಯಣ ಕೈಗೊಂಡಾಕೆ ಮಿಸ್ ಸ್ಯಾಮ್ ಎಂಬ ಕೋತಿ.

1972: ಮಣಿಪುರ, ಮಿಜೋರಂ ಮತ್ತು ತ್ರಿಪುರಾ ಪೂರ್ಣ ಪ್ರಮಾಣದ ರಾಜ್ಯಗಳಾದವು.

2008: ಭಾರತೀಯ ಇಸ್ರೋ ಸಂಸ್ಥೆ, ಇಸ್ರೇಲಿನ ‘ಬೇಹುಗಾರಿಕೆ’ ಉಪಗ್ರಹವೊಂದನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಕ್ಷೆಗೆ ತಲುಪಿಸಿತು.  ವಾಣಿಜ್ಯ ಉದ್ದೇಶದ ಉಪಗ್ರಹ ಉಡಾವಣೆಯಲ್ಲಿ ಇದು ಭಾರತದ ಪ್ರಮುಖ ಹೆಜ್ಜೆ ಎನಿಸಿತು.  ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ‘ಪಿಎಸ್ಎಲ್ವಿ- ಸಿ10’ ಉಪಗ್ರಹ ಉಡಾವಣಾವಾಹನವು,  300 ಕೆ.ಜಿ. ತೂಕದ ಇಸ್ರೇಲಿನ ಟೆಕ್ಸಾರ್ (ಪೋಲಾರಿಸ್) ಉಪಗ್ರಹವನ್ನು, ಉಡಾವಣೆಯಾದ 19.75 ನಿಮಿಷಗಳಲ್ಲಿ  ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಿತು. ಮೋಡ ಹಾಗೂ ಮಂಜು ಮುಸುಕಿದ ವಾತಾವರಣದ ಮಧ್ಯೆಯೂ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ‘ಟೆಕ್ಸಾರ್’ ಉಪಗ್ರಹಕ್ಕೆ ಇದ್ದು, ಅದು ಹಗಲು ಮತ್ತು  ರಾತ್ರಿಗಳಲ್ಲಿ  ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವುಳ್ಳದ್ದಾಗಿದೆ.

ಪ್ರಮುಖಜನನ/ಮರಣ:

1884: ಅಮೆರಿಕದ ಬರಹಗಾರ ಮತ್ತು ‘ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್’ ಸ್ಥಾಪಕ ರೋಜರ್ ನಾಶ್ ಬಾಲ್ಡ್ವಿನ್ ಅವರು ಮಸ್ಸಚುಸೆಟ್ಸ್ ಪ್ರಾಂತ್ಯದ ವೆಲ್ಲೆಸ್ಲಿ ಎಂಬಲ್ಲಿ ಜನಿಸಿದರು.

1912: ಜರ್ಮನ್ ಅಮೇರಿಕನ್ನರಾದ ಕೊನ್ರಾಡ್ ಎಮಿಲ್ ಬ್ಲಾಚ್ ಅವರು ಜರ್ಮನಿಯ ಸಾಮ್ರಾಜ್ಯದ ಭಾಗವಾಗಿದ್ದ ಪ್ರಸ್ಸಿಯಾದ ಸಿಲೇಸಿಯಾದಲ್ಲಿ ಜನಿಸಿದರು.  ಮುಂದೆ ಅಮೆರಿಕದಲ್ಲಿ ನೆಲೆಸಿದ ಇವರು  ಜೈವಿಕ ತಂತ್ರಜ್ಞಾನ ವಿಜ್ಞಾನಿಯಾಗಿ ಮಹತ್ವದ ಸಾಧನೆಗೈದರು. ಕೊಲೆಸ್ಟ್ರಾಲ್ ಮತ್ತು ಫ್ಯಾಟಿ ಆಸಿಡ್ ಮೆಟಬಾಲಿಸಂ ನಿಯಂತ್ರಣದಲ್ಲಿನ ಇವರ ಸಂಶೋಧನೆಗಾಗಿ  2000ದ ವರ್ಷದಲ್ಲಿ ಫಿಸಿಯಾಲಜಿ ಅಥವ ಮೆಡಿಸನ್ ಕ್ಷೇತ್ರದಲ್ಲಿನ ನೊಬೆಲ್ ಪುರಸ್ಕಾರ ಸಂದಿತು.

1921: ಕನ್ನಡಿಗರಲ್ಲಿ ವೈಜ್ಞಾನಿಕ ಮನೋಭಾವವನ್ನು ಹುಟ್ಟಿಸುವಂತಹ ಮಹತ್ವದ ಬರಹಗಳನ್ನು ಮಾಡಿರುವ ಲಕ್ಷ್ಮಣರಾವ್ ಅವರು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು.  ಅಧ್ಯಾಪನವಷ್ಟೇ ಅಲ್ಲದೆ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಪ್ರಾರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾಗಿ ಅದರ  ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಮತ್ತು ವಿಜ್ಞಾನ ಪರಿಷತ್ತು ನಡೆಸುವ ವಾರ್ಷಿಕ ಜನಪ್ರಿಯ ವಿಜ್ಞಾನ ಲೇಖಕರ ಕಾರ್ಯ ಶಿಬಿರಗಳ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನದಲ್ಲಿ 35 ಕೃತಿಗಳನ್ನು ಪ್ರಕಟಿಸಿರುವ ಇವರಿಗೆ ಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ರಾಷ್ಟ್ರೀಯ ಪುರಸ್ಕಾರ ಮತ್ತು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ 4 ಬಾರಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1924: ಹಿರಿಯ ಆರ್ಥಿಕ ತಜ್ಞ ಮತ್ತು ರಾಜಕಾರಣಿ ಮಧು ದಂಡವತೆ ಅಹ್ಮದ್ ನಗರದಲ್ಲಿ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಅವರು  ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಬಳಕೆಯ ಪ್ರಕ್ರಿಯೆಗೆ  ನಾಂದಿ ಹಾಡಿದ ವ್ಯಕ್ತಿ. ವಿ.ಪಿ. ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಇವರು 1990ರಲ್ಲಿ ಹಾಗೂ 1996ರಿಂದ 1998ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 2005ರ ನವೆಂಬರ್ 12ರಂದು ನಿಧನರಾದರು.

1924: ಅಮೆರಿಕದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ನಿರ್ವಾಹಕ ಮತ್ತು ಉದ್ಯಮಿ ಮೊರಿಸ್ ಮೈಕ್ ಮೆಡವಾಯ್ ಜನಿಸಿದರು.  ಪ್ರಖ್ಯಾತ ಅಂತರರಾಷ್ಟ್ರೀಯ ಚಿತ್ರ ಸಂಸ್ಥೆಗಳಾದ ಒರಾಯನ್ ಪಿಕ್ಚರ್ಸ್, ಟ್ರೈಸ್ಟಾರ್ ಪಿಕ್ಚರ್ಸ್, ಯುನೈಟೆಡ್ ಆರ್ಟಿಸ್ಟ್ಸ್, ಮತ್ತು ಫೀನಿಕ್ಸ್ ಪಿಕ್ಚರ್ಸ್ ಮುಂತಾದ ಸಂಸ್ಥೆಗಳಲ್ಲಿ  ಅವರ ಪ್ರಮುಖ ಪಾತ್ರವಿತ್ತು.

1942: ಪ್ರಸಿದ್ಧ ಕ್ಲಾರಿಯೋನೇಟ್ ವಾದಕ ನರಸಿಂಹಲು ವಡವಾಟಿಯವರು  ರಾಯಚೂರು ಜಿಲ್ಲೆಯ ವಡವಾಟಿ ಎಂಬಲ್ಲಿ ಜನಿಸಿದರು.  ಪಂಡಿತ ಸಿದ್ಧರಾಮ ಜಂಬಲದಿನ್ನಿಯವರಿಂದ ಹಿಂದೂಸ್ತಾನಿ ಸಂಗೀತ ಕಲಿತ ಇವರು ಸತತ ಸಾಧನೆಯಿಂದ ಕ್ಲಾರಿಯೋನೇಟ್ ವಾದ್ಯದಲ್ಲಿ  ಹೊಸ ಹೊಸ ಪ್ರಯೋಗಗಳನ್ನು ನಡೆಸಿದರು. ವಿಶ್ವದಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ  ಕರ್ನಾಟಕ ಸಂಗೀತ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಮುಂತಾದ ಅನೇಕ ಗೌರವಗಳು ಸಂದಿವೆ.

1953: ಬಿಲ್ ಗೇಟ್ಸ್ ಅವರೊಂದಿಗೂಡಿ ಪ್ರಸಿದ್ಧ ಮೈಕ್ರೋಸಾಫ್ಟ್ ಸಂಸ್ಥೆಗೆ ಪ್ರಾರಂಭ ನೀಡಿದ  ಪಾಲ್ ಅಲೆನ್ ಅವರು ವಾಷಿಂಗ್ಟನ್ ರಾಜ್ಯದ ಸೀಟಲ್ನಲ್ಲಿ ಜನಿಸಿದರು.  ಮುಂದೆ ಅವರು ವಲ್ಕನ್ ಇನ್ಕಾರ್ಪೋರೇಷನ್ ಸಂಸ್ಥೆಯನ್ನು ಸ್ಥಾಪಿಸಿ ಅದರ  ಪ್ರಮುಖ ಅಧಿಕಾರಿಗಳಾಗಿದ್ದಾರೆ.  ಅನೇಕ ಕ್ರೀಡಾ ತಂಡಗಳ ಅಧಿಪತ್ಯವನ್ನು  ಹೊಂದಿರುವ ಅವರು  ಅಲೆನ್ ಇನ್ಸ್ಟಿಟ್ಯೂಟ್ ಆಫ್ ಬ್ರೈನ್ ಸೈನ್ಸ್, ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇನ್ಸ್ಟಿಟ್ಯೂಟ್ ಆಫ್ ಸೆಲ್ ಸೈನ್ಸ್, ವಲ್ಕನ್ ಏರೋಸ್ಪೇಸ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ವಿಶ್ವದ ನಲವತ್ತು ಪ್ರಮುಖ ಶ್ರೀಮಂತರಲ್ಲಿ ಒಬ್ಬರೆನಿಸಿ ಸಾಕಷ್ಟು ಸಮಾಜ ಸೇವೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ.

1893: ಪ್ರಖ್ಯಾತ ಹಿಂದೀ ಭಾಷಾ ಸಾಹಿತಿಗಳಾದ ಆಚಾರ್ಯ ಶಿವಪೂಜನ್ ಸಹಾಯ್ ಅವರು ಪಾಟ್ನಾದಲ್ಲಿ ನಿಧನರಾದರು.  ‘ಶಿವಪೂಜನ್ ರಚನಾವಳಿ’ ಅವರ ಪಸಿದ್ಧ ಕೃತಿ.  1960ರ ವರ್ಷದಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1924: ಪ್ರಸಿದ್ಧ ಕ್ರಾಂತಿಕಾರಿ, ಸೋವಿಯತ್ ಯೂನಿಯನ್ ಶಿಲ್ಪಿ, ನಿರ್ಮಾಪಕ ಹಾಗೂ ಮೊದಲ ಮುಖ್ಯಸ್ಥ ವ್ಲಾಡಿಮೀರ್ ಇಲಿಚ್ ಲೆನಿನ್ ತಮ್ಮ 53ನೇ ವಯಸ್ಸಿನಲ್ಲಿ ಮಾಸ್ಕೋ ಸಮೀಪದ ಗೋರ್ಕಿಯಲ್ಲಿ  ನಿಧನರಾದರು.

1926: ಇಟಲಿಯ ಪ್ರಸಿದ್ಧ ವೈದ್ಯ ಮತ್ತು ಜೀವ ವಿಜ್ಞಾನಿ  ಕ್ಯಾಮಿಲ್ಲೋ ಗೊಲ್ಗಿ ಇಟಲಿಯ ಕಾರ್ಟೆನೋ ಎಂಬಲ್ಲಿ ಜನಿಸಿದರು. ಗೊಲ್ಗಿ ಅಪಾರಟಸ್, ಗೊಲ್ಗಿ ಟೆನ್ಡನ್ ಮುಂತಾದ ಅನೇಕ ಅನೇಕ ಅನಾಟಮಿ ಮತ್ತು ಫಿಸಿಯಾಲಜಿಯ ಕುರಿತಾದ ತತ್ವಗಳಿಗೆ ಅವರ ಹೆಸರು ಪ್ರಖ್ಯಾತವಾಗಿವೆ.  ತಮ್ಮ ಕಾಲದ ಶ್ರೇಷ್ಠ ನರರೋಗ ತಜ್ಞ ಮತ್ತು ಜೀವವಿಜ್ಞಾನಿ ಎಂದು ಹೆಸರಾಗಿದ್ದ ಇವರಿಗೆ ನೊಬೆಲ್ ವೈದ್ಯಕೀಯ ಶಾಸ್ತ್ರದ ಪಾರಿತೋಷಕ ಸಂದಿತ್ತು.

1945: ಭಾರತದ ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಟೋಕಿಯೋದಲ್ಲಿ ನಿಧನರಾದರು. ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ  ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು.  ಲಾರ್ಡ್ ಹಾರ್ಡಿಂಜನ ಸಭೆಯ  ಸಂದರ್ಭದಲ್ಲಿ ಬಾಂಬ್ ಎಸೆದಿದ್ದ ಇವರು ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದರು.  ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆ ಮಾಡಿದ ಇವರು ಮುಂದೆ ಅದರ ನಾಯಕತ್ವವನ್ನು ಸುಭಾಷ್ ಚಂದ್ರಬೋಸರಿಗೆ ವಹಿಸಿದ್ದರು.

1950: ಬ್ರಿಟಿಷ್ ಆಡಳಿತದ ಭಾರತದಲ್ಲಿನ ಬಿಹಾರದ  ಪೂರ್ವ ಚಂಪಾರನ್ ಪ್ರದೇಶದಲ್ಲಿ ಜನಿಸಿದ್ದ  ಜಾರ್ಜ್ ಆರ್ವೆಲ್ ಅವರು ಲಂಡನ್ನಿನಲ್ಲಿ ನಿಧನರಾದರು.  ಎನಿಮಲ್ ಫಾರ್ಮ್, ನೈನ್ಟೀನ್ ಎಯ್ಟಿ ಫೋರ್ ಮುಂತಾದ ಪ್ರಸಿದ್ಧ ಕೃತಿಗಳನ್ನೂ ಒಳಗೊಂಡಂತೆ ಅವರು ಅನೇಕ  ಕೃತಿಗಳಿಗೆ ಹೆಸರಾಗಿದ್ದಾರೆ.

2006: ಸರ್ಬಿಯಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುಮಾರು 2 ದಶಕಗಳ ಕಾಲ ಹೋರಾಟ ನಡೆಸಿ ಯಶಸ್ಸು ಪಡೆದ ಗಾಂಧೀವಾದಿ, ಕೊಸಾವೊ ಅಧ್ಯಕ್ಷ ಇಬ್ರಾಹಿಂ ರುಗ್ವೊ ಸರ್ಬಿಯಾದ ಪ್ರಿಸ್ಟಿನಾದಲ್ಲಿ ನಿಧನರಾದರು.

2010: ರಂಗಭೂಮಿಯಲ್ಲಿ ಮಹತ್ವದ ಸಾಧನೆ ಮಾಡಿ, ಸಿನಿಮಾ ರಂಗದಲ್ಲೂ ಪ್ರಸಿದ್ಧರಾಗಿದ್ದ ಚಿಂದೋಡಿ ಲೀಲಾ ಅವರು ಬೆಂಗಳೂರಿನಲ್ಲಿ ನಿಧನರಾದರು. ರಂಗಕ್ಷೇತ್ರದಲ್ಲಿನ ಅವರ ಸಾಧನೆಗಾಗಿ   ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸರ್ಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ  ಪುರಸ್ಕಾರಗಳು ಚಿಂದೋಡಿ ಲೀಲಾ ಅವರಿಗೆ ಸಂದಿದ್ದವು. ಹಲವು ವರ್ಷಗಳ ಕಾಲ ನಾಟಕ ಅಕಾಡೆಮಿಯನ್ನೂ ನಡೆಸಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸಹಾ ಚಿಂದೋಡಿ ಲೀಲಾ ಕಾರ್ಯ ನಿರ್ವಹಿಸಿದ್ದರು.  ಕರ್ನಾಟಕದ ವಿವಿದೆಡೆಗಳಲ್ಲಿ ಮೂಡಿದ ಶಾಶ್ವತ ರಂಗಭೂಮಿಗಳಿಗೆ ಲೀಲಾ ಪ್ರಮುಖ ಕಾರಣಕರ್ತರಾದರು.

2016: ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ತಮ್ಮ 97ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾದರು.  ಭಾರತದ ಶಾಸ್ತ್ರೀಯ ನೃತ್ಯಕಲೆಯನ್ನು ಜಗತ್ತಿಗೆ ಪರಿಚಯಿಸಿ, ಅದರ ಮಹತ್ವನನ್ನು ಸಾರಿದ ಇವರು  1949ರಲ್ಲಿ ಅಹಮ್ಮದಾಬಾದಿನಲ್ಲಿ ದರ್ಪಣಂ ಎಂಬ ಕಲಾಕೇಂದ್ರವನ್ನು ಸ್ಥಾಪಿಸಿದ್ದರು.  1992ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

Categories
e-ದಿನ

ಜನವರಿ-20

ಪ್ರಮುಖಘಟನಾವಳಿಗಳು:

1265: ಮೊದಲ ಇಂಗ್ಲಿಷ್ ಪಾರ್ಲಿಮೆಂಟು  ‘ಲಾರ್ಡ್ಸ್’ ಎಂದು ಕರೆಯಲ್ಪಡುವ ಕೇಂದ್ರ ಪ್ರತಿನಿಧಿಗಳನ್ನು  ಮಾತ್ರವಲ್ಲದೆ, ಎಲ್ಲಾ ಪ್ರಮುಖ ಪಟ್ಟಣಗಳ ಪ್ರತಿನಿಧಿಗಳನ್ನೂ ಒಳಗೊಂಡು ತನ್ನ ಮೊದಲ ಸಭೆಯನ್ನು ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರಿನಲ್ಲಿ ನಡೆಸಿತು.   ಇದು ‘ಹೌಸಸ್ ಆಫ್ ಪಾರ್ಲಿಮೆಂಟ್’ ಹೆಸರಿನಿಂದ ಕರೆಯಲ್ಪಡುತ್ತಿದೆ.

1818: ಕೋಲ್ಕತದ ಗಹ್ರನ್ ಹಟ್ಟಾದಲ್ಲಿ  ಹಿಂದು ಕಾಲೇಜ್ ಸ್ಥಾಪನೆಯಾಯಿತು. ರಾಜಾ ರಾಮ್ ಮೋಹನ್ ರಾಯ್ ಅವರು ಈ ಸಂಸ್ಥೆಯಲ್ಲಿನ  ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಲೇಜು 1855ರ ಏಪ್ರಿಲ್ 15ರಂದು ಮುಚ್ಚಿತು. ಅದೇ ವರ್ಷ ಜೂನ್ 15ರಂದು ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು.  ಮುಂದೆ ಈ ಕಾಲೇಜು ಇರುವ ಗಹ್ರನ್ ಹಟ್ಟಾ ಹೆಸರು ಕೂಡಾ 304, ಚಿತ್ಪುರ್ ರಸ್ತೆ ಎಂದು ಬದಲಾಯಿತು.

1841: ಹಾಂಕಾಂಗ್ ದ್ವೀಪವನ್ನು ಬ್ರಿಟಿಷರು ಆಕ್ರಮಿಸಿದರು.

1887: ಪರ್ಲ್ ಹಾರ್ಬರ್ ಅನ್ನು ಸೈನ್ಯದ ನೌಕಾನೆಲೆ ಆಗಿಸಲು ಅಮೆರಿಕದ ಸೆನೆಟ್ ಅಂಗೀಕಾರ ನೀಡಿತು.

1892: ಕೆನಡಾದ ವೈದ್ಯ ಜೇಮ್ಸ್ ನೈಸ್ಮಿತ್ ರೂಪಿಸಿದ  ‘ಬಾಸ್ಕೆಟ್ ಬಾಲ್’ ಆಟವನ್ನು ಮೊತ್ತ ಮೊದಲ ಬಾರಿಗೆ ಮೆಸಾಚ್ಯುಸೆಟ್ಸ್ ಸ್ಪ್ರಿಂಗ್ ಫೀಲ್ಡಿನ ‘ವೈ.ಎಂ.ಸಿ.ಎ’ನಲ್ಲಿ  ಆಡಲಾಯಿತು.

1920: ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ (ACLU) ಸ್ಥಾಪನೆಗೊಂಡಿತು. ಸಂವಿಧಾನವು ನೀಡಿರುವ ಸ್ವಾತಂತ್ರ್ಯತೆ  ಮತ್ತು ಹಕ್ಕುಗಳನ್ನು ಎಲ್ಲರಿಗೂ ಸಿಗುವಂತೆ  ಕಾಪಾಡುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಇದರ ಪ್ರಮುಖ ಕಚೇರಿ ನ್ಯೂಯಾರ್ಕ್ ನಗರದಲ್ಲಿದೆ.

1929: ಪ್ರಥಮಬಾರಿಗೆ ಹೊರಾಂಗಣದಲ್ಲಿ ಚಿತ್ರಿಸಿ, ಪೂರ್ಣಪ್ರಮಾಣದ  ಸಂಭಾಷಣೆ ಅಳವಡಿತಗೊಂಡ ‘ಇನ್ ಓಲ್ಡ್ ಅರಿಸೋನಾ’ ಚಿತ್ರವು ಬಿಡುಗಡೆಗೊಂಡಿತು.

1945: ಎರಡನೇ ವಿಶ್ವಮಹಾಯುದ್ಧದ ಅಂತ್ಯದ ಸಂದರ್ಭದಲ್ಲಿ, ಪೂರ್ವ ಪ್ರಸ್ಸಿಯಾದಿಂದ  18 ಲಕ್ಷ ಜರ್ಮನರ ಸ್ಥಳಾಂತರ ಪ್ರಾರಂಭ.  ಸೋವಿಯತ್ ರಷ್ಯಾದ ‘ರೆಡ್ ಆರ್ಮಿ’ಯ ಮುಂದುವರಿಕೆಯ ಭೀತಿಯಿಂದ,  ಜನ ತಾವೇ ತಾವಾಗಿ ಈ ಪ್ರಾಂತ್ಯದಿಂದ ಹೊರ ಹೋಗತೊಡಗಿದರು.  ಈ ಸ್ಥಳಾಂತರ ಎರಡು ತಿಂಗಳ ಸಮಯವನ್ನು ತೆಗೆದುಕೊಂಡಿತು.

1948: ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಭಾರತ ಮತ್ತು ಪಾಕಿಸ್ತಾನದ ಕುರಿತಾದ 39ನೇ ನಿರ್ಣಯವನ್ನು  ಅಂಗೀಕರಿಸಿತು.  ಈ ಎರಡೂ ದೇಶಗಳೂ, ಕಾಶ್ಮೀರದ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ಸಹಾಯ ಮಾಡುವುದು ಈ ನಿರ್ಣಯದ ಆಶಯವಾಗಿತ್ತು.

1957: ಟ್ರಾಂಬೆಯ ಪರಮಾಣು ಇಂಧನ ಸಂಸ್ಥೆಯು  ಔಪಚಾರಿಕವಾಗಿ ಉದ್ಘಾಟನೆಗೊಂಡಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಈ ಸಂಸ್ಥೆಗೆ 1967ರ ವರ್ಷದಲ್ಲಿ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಎಂದು ಹೆಸರನ್ನಿರಿಸಲಾಯಿತು.

1958: ಬಳ್ಳಾರಿಯಲ್ಲಿ ಡಾ. ವಿ.ಕೃ. ಗೋಕಾಕ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಮೂರುದಿನದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.

1972: 1971ರ ವರ್ಷದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ, ಭಾರತದೊಂದಿಗಿನ ಯುದ್ಧದಲ್ಲಿ ಸೋಲನ್ನನುಭವಿಸಿದ ಕೆಲವೇ ವಾರಗಳಲ್ಲಿ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಯನ್ನು ಪ್ರಾರಂಭಿಸಿತು.

1972: ಮೇಘಾಲಯವು ರಾಜ್ಯವಾಯಿತು, ಮತ್ತು ಅರುಣಾಚಲ ಪ್ರದೇಶವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.  ಮುಂದೆ 1987ರಲ್ಲಿ ಅರುಣಾಚಲ ಪ್ರದೇಶವೂ ರಾಜ್ಯವಾಯಿತು.

1986: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಿನವನ್ನು ಪ್ರಪ್ರಥಮ ಬಾರಿಗೆ ಫೆಡರಲ್ ರಜಾ ದಿನವನ್ನಾಗಿ ಆಚರಿಸಲಾಯಿತು.

2006: ಭಾರತ ಮತ್ತು ಪಾಕಿಸ್ತಾನದ ನಡುವಣ ಜನಸಂಪರ್ಕ ಅಭಿವೃದ್ಧಿಯ ಯತ್ನವಾಗಿ ಉಭಯರಾಷ್ಟ್ರಗಳ ನಡುವೆ ಮೂರನೇ ಬಸ್ ಸಂಚಾರಕ್ಕೆ  ಚಾಲನೆ ನೀಡಲಾಯಿತು.  ಈ ಬಸ್ ಸಂಚಾರವು  ಲಾಹೋರ್ ಮತ್ತು  ಅಮೃತಸರಗಳ ನಡುವೆ ಏರ್ಪಟ್ಟಿತು.

2006: ಕೊಂಕಣ ರೈಲ್ವೆಯು ಅಭಿವೃದ್ಧಿ ಪಡಿಸಿದ ಅಪಘಾತ ನಿಯಂತ್ರಣ ಸಾಧನಾ ರಕ್ಷಾ ಕವಚಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪೇಟೆಂಟ್ ಲಭಿಸಿತು. ಈ ರಕ್ಷಾ ಕವಚದ ಪೇಟೆಂಟಿಗಾಗಿ ಕೊಂಕಣ ರೈಲ್ವೆಯು ಅಮೆರಿಕ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಅರ್ಜಿ ಸಲ್ಲಿಸಿತು.

2007: ಮೂರು ಜನರ ತಂಡವೊಂದು ಕೇವಲ ಹಿಮದಲ್ಲಿ ಚಲಿಸಲು ಉಪಯೋಗಿಸುವ ‘ಸ್ಕಿಸ್ ಮತ್ತು ಕೈಟ್’ಗಳನ್ನು ಬಳಸಿಕೊಂಡು, 1958ರ ನಂತರದಲ್ಲಿ ಇದೇ ಮೊದಲಬಾರಿಗೆ  ಪಯಣಕ್ಕೆ ಲಭ್ಯವಿಲ್ಲದ ಹಾಗಿದ್ದ  1759 ಕಿಲೋಮೀಟರುಗಳ ದಕ್ಷಿಣ ಧ್ರುವದಲ್ಲಿ  ಟ್ರೆಕಿಂಗ್ ನಡೆಸಿತು.   ಯಾವುದೇ ಯಾಂತ್ರಿಕ ವಸ್ತುಗಳ ಬಳಕೆಯಿಲ್ಲದೆ  ದಕ್ಷಿಣ ಧ್ರುವಕ್ಕೆ ಕೈಗೊಂಡ ಯಾತ್ರೆಗಳಲ್ಲಿ ಇದೇ ಪ್ರಥಮದ್ದಾಗಿದೆ.

2007:  ಅತ್ಯಂತ ಹಳೆಯದಾದ, 1903ರಲ್ಲಿ ತಯಾರಾದ ಸುಸ್ಥಿತಿಯಲ್ಲಿರುವ ಫೋರ್ಡ್ ಕಾರು ಫೋನಿಕ್ಸಿನಲ್ಲಿ ನಡೆದ ಹರಾಜಿನಲ್ಲಿ 630,000 ಅಮೆರಿಕ ಡಾಲರುಗಳಿಗೆ ಮಾರಾಟವಾಯಿತು. ಅಮೆರಿಕದಲ್ಲಿ ಫೋರ್ಡ್ ಕಂಪೆನಿ ಮಾರಾಟ ಮಾಡಿದ ಮೊದಲ ಮೂರು ಕಾರುಗಳಲ್ಲಿ ಇದೂ ಒಂದು. ಹೂಸ್ಟನ್ನಿನ ಖ್ಯಾತ ವಕೀಲ ಜಾನ್ ಓ ಕ್ವಿನ್ ಈ ಕಾರಿನ ನೂತನ ಒಡೆಯರಾದರು.

2008: ಮಲೇಷಿಯಾ ಸರ್ಕಾರವು ಹಿಂದೂಗಳ ಹಬ್ಬವಾದ ‘ತೈಪೂಸಂ’ ಅನ್ನು  ರಾಷ್ಟ್ರೀಯ ರಜಾ ದಿನವನ್ನಾಗಿ  ಘೋಷಿಸಿತು.

2009: ಬರಾಕ್ ಒಬಾಮ ಅವರು  ವಾಷಿಂಗ್ಟನ್ನಿನಲ್ಲಿ ಅಮೆರಿಕ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸ್ವಲ್ಪ ಮೊದಲು ಉಪಾಧ್ಯಕ್ಷ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ, ಆಫ್ರಿಕನ್ ಮೂಲದ ಅಮೆರಿಕನ್ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನವನ್ನು  ಪ್ರವೇಶಿಸಿದರು. ಕೊರೆಯುವ ಚಳಿಯಲ್ಲೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ 20 ಲಕ್ಷಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದರು.

ಪ್ರಮುಖಜನನ/ಮರಣ:

1873: ನೊಬೆಲ್ ಪುರಸ್ಕೃತ ಡ್ಯಾನಿಶ್ ಸಾಹಿತಿ ಜೋಹಾನ್ನೆಸ್ ವಿ. ಜೆನ್ಸೆನ್ ಅವರು ಡೆನ್ಮಾರ್ಕಿನ, ಜುಟ್ಲ್ಯಾಂಡ್ ಬಳಿಯ ಫರ್ಸೋ ಎಂಬಲ್ಲಿ ಜನಿಸಿದರು.  ಡ್ಯಾನಿಶ್ ಮತ್ತು ಇಂಗ್ಲಿಷ್ ಬಾಷೆಗಳಲ್ಲಿ ಸಾಹಿತ್ಯ ರಚಿಸಿರುವ  ಅವರಿಗೆ 1944ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1894: ಅಮೆರಿಕದ ವ್ಯಂಗ್ಯಚಿತ್ರಕಾರ ಹೆರಾಲ್ಡ್ ಗ್ರೇ ಅವರು ಇಲಿನಾಯ್ಸ್ ಪ್ರದೇಶದ ಕನ್ಕಕೀ ಎಂಬಲ್ಲಿ ಜನಿಸಿದರು.  ‘ಲಿಟಲ್ ಆರ್ಫನ್ ಅನಿ’ ಅವರ ಪ್ರಸಿದ್ಧ ಸೃಷ್ಟಿ.

1931: ಅಮೆರಿಕದ ಭೌತವಿಜ್ಞಾನಿ ಮತ್ತು ಶಿಕ್ಷಕ ನ್ಯೂ ಯಾರ್ಕ್ ನಗರದ ರೈ ಎಂಬಲ್ಲಿ ಜನಿಸಿದರು.  ‘ಸೂಪರ್ ಫ್ಲೂಯಿಡಿಟಿ ಇನ್ ಹೀಲಿಯಂ – 3’ ಕುರಿತ ಸಂಸೋಧನೆಗಾಗಿ  ಇವರಿಗೆ  ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1923:ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಕರಾಗಿ ವೃತ್ತಿ ನಡೆಸಿ, ಮಹತ್ವದ ಕವಿ ಎನಿಸಿದ್ದ ಅವರಿಗೆ  1970ರಲ್ಲಿ ಸೋವಿಯತ್ ಲ್ಯಾಂಡ್ ಪ್ರಶಸ್ತಿ, 1982 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1992ರಲ್ಲಿ ‘ಬಕುಳದ ಹೂಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.  1984ರಲ್ಲಿ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.  ಸು.ರಂ. ಎಕ್ಕುಂಡಿಯವರು 20 ಆಗಸ್ಟ್ 1995ರಲ್ಲಿ ನಿಧನರಾದರು.

1934: ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯ ಶಿಲ್ಪಿಯವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು.  ಎಲ್ಲ ವಿಧದ ಶಿಲ್ಪಗಳಲ್ಲಿ ನಿಷ್ಣಾತರಾದ ಇವರಿಗೆ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಶಿಲ್ಪಕಲೆಯ ಸರ್ವಶ್ರೇಷ್ಠ ಜಕಣಾಚಾರಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1936: ಚಂದ್ರಶೇಖರ ಐತಾಳರು  ಉಡುಪಿ ತಾಲ್ಲೂಕಿನ ಗುಂಡ್ಮಿಯಲ್ಲಿ ಜನಿಸಿದರು.  ಮೂಲತಃ ಕವಿಯಾದ ಇವರು,  ಇತಿಹಾಸ ಬರಹ,  ಪ್ರವಾಸ ಕಥನ, ವಿಮರ್ಶೆ, ಅನುವಾದ, ಜನಪದ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ.  ಬಿ.ಎಂ.ಶ್ರೀ. ಸುವರ್ಣ ಪದಕ, ‘ಸೌಂದರ್ಯದ ಸಾನಿಧ್ಯದಲ್ಲಿ’ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ‘ಕೈಲಿಯ ಕರೆದ ನೊರೆಹಾಲು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಮದ್ದುಂಟೆ ಜನನ ಮರಣಕ್ಕೆ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸೀಯಾಳ’ ಕೃತಿಗೆ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1964: ಲೇಖಕ, ಪತ್ರಕರ್ತ, ವರದಿಗಾರರಾದ ಫರೀದ್ ಜಕಾರಿಯ ಅವರು ಭಾರತದಲ್ಲಿ ಜನಿಸಿದರು.  ಸಿ.ಎನ್.ಎನ್. ವಾಹಿನಿಯ ‘ಫರೀದ್ ಜಕಾರಿಯ ಜಿ.ಪಿ.ಎಸ್’ ಕಾರ್ಯಕ್ರಮದ ಆಯೋಜಕರಾದ ಅವರು ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಅಂಕಣಕಾರರೂ ಆಗಿದ್ದಾರೆ. ನ್ಯೂಸ್ ವೀಕ್, ಟೈಮ್ ಮುಂತಾದ ಪತ್ರಿಕೆಗಳಲ್ಲಿ ಸಂಪಾದಕೀಯವನ್ನೂ ನಡೆಸಿದ್ದ ಅವರ ಹಲವಾರು ಪ್ರಕಟಿತ ಪುಸ್ತಕಗಳೆಲ್ಲಾ  ಅಪಾರ ಮಾರಾಟ ಕಂಡಿವೆ.

1982: ಫೇಸ್ಬುಕ್ ಸಂಸ್ಥೆಯಿಂದ ನೇಮಕಗೊಂಡ ಪ್ರಥಮ ಭಾರತೀಯರೆಂಬ ಪ್ರಖ್ಯಾತಿಗೆ ಪಾತ್ರರಾದ  ಸಾಫ್ಟ್ವೇರ್ ತಂತ್ರಜ್ಞೆ ರುಚಿ ಸಂಗ್ವಿ  ಪುಣೆಯಲ್ಲಿ ಜನಿಸಿದರು.  ಫೇಸ್ಬುಕ್ಕಿನ ಪ್ರಾರಂಭದ ದಿನಗಳ ಪ್ರಮುಖ ತಂತ್ರಜ್ಞರಾಗಿದ್ದ ರುಚಿ ಅವರು, ಫೆಸ್ಬುಕ್ಕಿನ  ಮೂಲ ವ್ಯವಸ್ಥೆ ಮತ್ತು ಸುದ್ಧಿ ಪ್ರಸ್ತುತಿಯ ಮೇಲ್ವಿಚಾರಕರಾಗಿ ಪ್ರಮುಖ ಕೆಲಸ ಮಾಡಿದ್ದರು.  ಫೆಸ್ಬುಕ್ ವ್ಯವಸ್ಥೆ ಹಾಗೂ ಕಾರ್ಯಯೋಜನೆಗಳ ಪ್ರಮುಖರ ತಂಡದಲ್ಲಿದ್ದ ಅವರು ಇಂದು, ಪ್ರಖ್ಯಾತಗೊಂಡಿರುವ ಫೇಸ್ಬುಕ್ ನ್ಯೂಸ್ ಫೀಡ್ ಯೋಜನೆಯನ್ನು  ವಿನ್ಯಾಸಗೊಳಿಸಿದ  ಪ್ರಮುಖರಲ್ಲೊಬ್ಬರಾಗಿದ್ದಾರೆ.  2011ರಲ್ಲಿ ಅವರು ತಮ್ಮದೇ ಆದ ಕೋವ್ ಸಂಸ್ಥೆ ಸ್ಥಾಪಿಸಿದರು.  ಮುಂದೆ ಆ ಸಂಸ್ಥೆ ಡ್ರಾಪ್ ಬಾಕ್ಸ್ ಸಂಸ್ಥೆಗೆ ಮಾರಾಟಗೊಂಡಿತು.

1837: ಪ್ರಸಿದ್ಧ ಬ್ರಿಟಿಷ್ ಕಟ್ಟಡ ವಿನ್ಯಾಸಕ ಜಾನ್ ಸೋನೆ ನಿಧನರಾದರು.  ಅವರು  ‘ಬ್ಯಾಂಕ್ ಆಫ್ ಇಂಗ್ಲೆಂಡ್’ ಕಟ್ಟಡದ ವಿನ್ಯಾಸಕಾರರಾಗಿ ಪ್ರಸಿದ್ಧರಾಗಿದ್ದರು.

1901: ಬೆಲ್ಜಿಯಂ ತಂತ್ರಜ್ಞ ಜೆನೋಬ್ ಗ್ರಾಮೆ ನಿಧನರಾದರು.  ಅವರು ಎಲೆಕ್ಟ್ರಿಕ್ ವ್ಯವಸ್ಥೆಗೆ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್  ಒದಗಿಸುವ ಡೈನಮೋದಂತಹ ಗ್ರಾಮೆ ಯಂತ್ರವನ್ನು ಸೃಷ್ಟಿಸಿದ್ದರು.  ಈ ಯಂತ್ರ ಅಂದಿನ ದಿನಗಳವರೆಗೆ ಇದ್ದ ಡೈನಮೋಗಳಿಗಿಂತ  ಸುಗಮವಾಗಿ ಹೆಚ್ಚಿನ ವೋಲ್ಟೇಜ್ ಹರಿಸುವಂತಹ ಸಾಮರ್ಥ್ಯ ಹೊಂದಿತ್ತು.

1949: ಭಾರತೀಯ ನ್ಯಾಯವಾದಿ, ಮುತ್ಸದ್ಧಿ ಸರ್ ತೇಜ್ ಬಹಾದುರ್ ಸಪ್ರು ತಮ್ಮ 73ನೇ ವಯಸ್ಸಿನಲ್ಲಿ ಅಲಹಾಬಾದಿನಲ್ಲಿ  ನಿಧನರಾದರು. ಭಾರತೀಯ ಸಂವಿಧಾನ ಕರಡು ಪ್ರತಿ ತಯಾರಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1982: ಕುಖ್ಯಾತ ಕೊಲೆಗಾರರಾದ ಬಿಲ್ಲಾ ಮತ್ತು ರಂಗ ಅವರನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.

1988: ‘ಗಡಿನಾಡ ಗಾಂಧಿ’ ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಆಫ್ಘಾನಿಸ್ಥಾನದ ಪೇಷಾವರದಲ್ಲಿ ನಿಧನರಾದರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು ‘ಖುದಾಯಿ ಖಿದ್ಮತ್ಗಾರ್’ ನ (ರೆಡ್ ಶರ್ಟ್ ಮೂವ್ ಮೆಂಟ್) ಸ್ಥಾಪಕರಾಗಿದ್ದರು. ಭಾರತ ಸರ್ಕಾರವು ಅವರಿಗೆ  1987 ವರ್ಷದಲ್ಲಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು.

2005: ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಚಿತ್ರನಟಿ ಪರ್ವೀನ್ ಬಾಬಿ ಅವರು ಮುಂಬೈನಲ್ಲಿ ನಿಧನರಾದರು.

2009: ‘ಚಿಂಗಾರಿ’ ಹಾಗೂ ‘ಚಿನಕುರುಳಿ’ ಖ್ಯಾತಿಯ ಹಿರಿಯ ವ್ಯಂಗ್ಯಚಿತ್ರಕಾರ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಜಿ.ವೈ.ಹುಬ್ಳೀಕರ್ ನಿಧನರಾದರು. ಅವರು ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರತಿದಿನ ‘ಚಿನಕುರುಳಿ’ ವ್ಯಂಗ್ಯಚಿತ್ರವನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಹುಬ್ಳೀಕರ್ ಅವರಿಗೆ ಸಂದಿದ್ದವು.

Categories
e-ದಿನ

ಜನವರಿ-19

ದಿನಾಚರಣೆ:
ಕೊಕ್ಬೊರೊಕ್ ದಿನ
ತ್ರಿಪುರಾ ರಾಜ್ಯದಲ್ಲಿ ಅಲ್ಲಿನ ಅಧಿಕೃತ ಭಾಷೆಯಾದ ‘ಕೊಕ್ಬೊರೊಕ್’ ಅಭಿವೃದ್ಧಿ ಪೂರಕವಾಗಿ ಪ್ರತಿವರ್ಷದ ಜನವರಿ 19 ದಿನವನ್ನು ಕೊಕ್ಬೊರೊಕ್ ದಿನವನ್ನಾಗಿ ಆಚರಿಸಲಾಗುತ್ತಿದೆ. 1979ರ ವರ್ಷದಿಂದ ಜಾರಿಯಲ್ಲಿರುವ ಈ ದಿನಾಚರಣೆಯನ್ನು ಅನೇಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1607: ಫಿಲಿಪ್ಪೈನ್ಸ್ ದೇಶದಲ್ಲಿನ ಸಾನ್ ಸಾನ್ ಅಗಸ್ಟಿನ್ ಚರ್ಚ್ ನಿರ್ಮಾಣ ಪೂರ್ಣಗೊಂಡಿತು.  ಇಂದಿಗೂ ಇದು ಆ ದೇಶದ  ಅತ್ಯಂತ ಹಳೆಯ ಚರ್ಚ್ ಆಗಿ  ಶೋಭಿಸುತ್ತಿದೆ.

1736: ಪ್ರಸಿದ್ಧ ಸ್ಕಾಟಿಷ್ ಸಂಶೋಧಕ ಜೇಮ್ಸ್ ವಾಟ್ ಜನಿಸಿದರು.  ಇವರು ಸಂಶೋಧಿಸಿದ ಹಬೆ ಯಂತ್ರ (ಸ್ಟೀಮ್ ಇಂಜಿನ್) ಕೈಗಾರಿಕಾ ಕ್ರಾಂತಿಗೆ ಸಂದ ಮಹತ್ವದ ಕೊಡುಗೆಯಾಗಿದೆ.

1839: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು, ಕೆಂಪು ಸಮುದ್ರಕ್ಕೆ ಪೂರ್ವ ದಿಕ್ಕಿನಿಂದ ಮಾರ್ಗ   ಹೊಂದಿರುವ ಯೆಮೆನ್ ದೇಶದ ಏಡನ್ ಬಂದರು ನಗರವನ್ನು ವಶಪಡಿಸಿಕೊಂಡಿತು.

1883: ಥಾಮಸ್ ಆಲ್ವಾ ಎಡಿಸನ್ ಅವರು ನಿರ್ಮಿಸಿದ ಪ್ರಥಮ ನಗರ  ವಿದ್ಯುದ್ದೀಕರಣ ವ್ಯವಸ್ಥೆಯು ನ್ಯೂ ಜೆರ್ಸಿಯ ರೋಸೆಲ್ಲೇ ಎಂಬಲ್ಲಿ ಪ್ರಾರಂಭಗೊಂಡಿತು.  ಎತ್ತರದ ಕಂಬಗಳ ಮೇಲೆ ವೈರ್ ವ್ಯವಸ್ಥೆಯ ಮೂಲಕ  ಈ ವ್ಯವಸ್ಥೆಯನ್ನು ರೂಪಿಸಲಾಯಿತು.

1915: ಫ್ರಾನ್ಸಿನ ಜಾರ್ಜಸ್ ಕ್ಲಾಡ್ ಅವರು ಜಾಹೀರಾತುಗಳಲ್ಲಿ  ಬಳಕೆಯಲ್ಲಿರುವ ನಿಯಾನ್ ಡಿಸ್ಚಾರ್ಜ್ ಟ್ಯೂಬಿಗೆ ಪೇಟೆಂಟ್ ಪಡೆದರು.

1920: ಅಮೆರಿಕದ ಸೆನೆಟ್, ಲೀಗ್ ಆಫ್ ನೇಷನ್ಸ್ ಕೂಟವನ್ನು ಸೇರುವುದಕ್ಕೆ ವಿರುದ್ಧವಾಗಿ ಮತ ನೀಡಿತು.

1931: ಲಂಡನ್ನಿನಲ್ಲಿ ಪ್ರಥಮ ದುಂಡುಮೇಜಿನ ಪರಿಷತ್ತು ಮುಕ್ತಾಯಗೊಂಡಿತು.

1937: ಲಾಸ್ ಏಂಜೆಲಿಸ್  ನಗರದಿಂದ  ನ್ಯೂಯಾರ್ಕಿಗೆ 7 ಗಂಟೆ 28 ನಿಮಿಷ, 25 ಸೆಕೆಂಡುಗಳಲ್ಲಿ ತಮ್ಮ  ಮಾನೋ ಪ್ಲೇನನ್ನು ಹಾರಿಸುವ ಮೂಲಕ ಲಕ್ಷಾಧೀಶ ಹೊವರ್ಡ್ ಹಗ್ಸ್ ಅವರು ವಿಮಾನ ಹಾರಾಟ ಚರಿತ್ರೆಯಲ್ಲಿ  ದಾಖಲೆ ಮೂಡಿಸಿದರು.

1940: ಪ್ರಥಮ ಬಾರಿಗೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ ಪಕ್ಷವನ್ನು  ಅಪಹಾಸ್ಯಗೈದು ಚಿತ್ರಿಸಲಾದ ‘You Nazty Spy!’ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತು.

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಸೋವಿಯತ್ ಪಡೆಗಳು ಲೋಡ್ಸ್ ಘೆಟ್ಟೋ ಅನ್ನು ನಾಜಿ ಪಡೆಗಳಿಂದ ಮುಕ್ತಗೊಳಿಸಿತು.  ನಾಜಿಗಳು ಆಕ್ರಮಿಸಿದ್ದ ಈ ಪ್ರದೇಶದಲ್ಲಿ 1940ರಲ್ಲಿ ಇದ್ದ 2 ಲಕ್ಷ ಮೂಲನಿವಾಸಿಗಳಲ್ಲಿ, ಕೇವಲ 900ಕ್ಕಿಂತ  ಕಡಿಮೆ ಜನ ಮಾತ್ರ ಬದುಕುಳಿದಿದ್ದರು.

1960: ಜಪಾನ್ ಮತ್ತು ಅಮೆರಿಕ ದೇಶಗಳು ಪಾರಸ್ಪರಿಕ  ಸಂರಕ್ಷಣಾ ಒಪ್ಪಂದ ‘ಯು.ಎಸ್ – ಜಪಾನ್ ಮ್ಯೂಟುಯಲ್ ಸೆಕ್ಯೂರಿಟಿ ಟ್ರೀಟಿ’ಗೆ ಸಹಿ ಮಾಡಿದವು.

1983: ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯು ಬಳಕೆದಾರ ಸ್ನೇಹಮುಖೀ ವ್ಯವಸ್ಥೆಯಾದ ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಮತ್ತು ‘ಮೌಸ್’ ಉಳ್ಳ ‘ಆಪಲ್ ಲೀಸಾ’ ಎಂಬ ಪರ್ಸನಲ್ ಕಂಪ್ಯೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತು. ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಜಾರಿಯಾಗುವುದಕ್ಕೆ ಮುಂಚಿನ ಕಂಪ್ಯೂಟರ್ಗಳನ್ನು ಉಪಯೋಗಿಸುವ ಬಳಕೆದಾರನಿಗೆ,  ಕಂಪ್ಯೂಟರ್ ಜೊತೆಗಿನ ನಿಯಮಿತ ಸಂವಾದ ವ್ಯವಸ್ಥೆಯ ಮೂಲ ಜ್ಞಾನ ಮತ್ತು ರೂಢಿ ಅತ್ಯಗತ್ಯವಾಗಿತ್ತು.  ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ವ್ಯವಸ್ಥೆಯಲ್ಲಿ ಬಳಕೆದಾರ ತನ್ನ ಮುಂದೆ ಕಂಪ್ಯೂಟರ್ ಪರದೆಯಲ್ಲಿ ಕಾಣುವ ಯಾವುದೇ ವ್ಯವಸ್ಥೆಯನ್ನಾಗಲೀ  ಮೌಸ್ ಬಳಕೆ ಮತ್ತು ಸುಲಭ ಕೀ ಬೋರ್ಡ್ ಅಕ್ಷರಗಳನ್ನು ಸ್ಪರ್ಶಿಸುವುದರ ಮೂಲಕ  ಹಾಗೂ ಕೆಲವೊಮ್ಮೆ  ಪರದೆಯಲ್ಲೇ ಬೆರಳಾಡಿಸುವುದರ ಮೂಲಕ ಚಾಲ್ತಿಗೊಳಿಸುವುದು ಸುಲಭ ಸಾಧ್ಯವಾಗಿದೆ.

1986: ಕಂಪ್ಯೂಟರ್ ಲೋಕದಲ್ಲಿ ‘ಐ.ಬಿ.ಎಮ್ ಪಿ.ಸಿ’ಗಳಲ್ಲಿ ಉಪದ್ರವ ಕೊಡುವ  ‘ಬ್ರೈನ್’ ಎಂಬ  ಕಂಪ್ಯೂಟರ್ ವಿಷಕಣವು (ವೈರಸ್) ಬಿಡುಗಡೆಗೊಂಡಿತು.  ಕಂಪ್ಯೂಟರಿನ ಮೂಲ ಚಾಲನಾ ವ್ಯವಸ್ಥೆಯಲ್ಲಿ ಸ್ಪುರಣಗೊಳ್ಳುವ ಈ ವೈರಸ್ (boot sector virus) ಅನ್ನು ಪಾಕಿಸ್ತಾನದ ಲಾಹೋರಿನ ನಿವಾಸಿಗಳಾದ ಫರೂಕ್ ಅಲ್ವಿ ಸಹೋದರರು ತಯಾರಿಸಿದರು.  ತಾವು ಸಿದ್ಧಪಡಿಸಿದ್ದ ಸಾಫ್ಟ್ವೇರ್ ಅನ್ನು ಯಾರೂ ಅನಧಿಕೃತವಾಗಿ ಪ್ರತಿಮಾಡಿಕೊಳ್ಳಬಾರದೆಂಬ ಉದ್ದೇಶ ಅವರ ಈ ವಿಷಕಣದ ಉತ್ಪತ್ತಿಗೆ ಕಾರಣ ಎಂಬುದು ಅವರ ಅಂಬೋಣವಂತೆ.

1997: 30 ವರ್ಷಗಳ ನಂತರ ಹೆಬ್ರೋನ್ ನಗರಕ್ಕೆ ಆಗಮಿಸಿದ ಪ್ಯಾಲೆಸ್ಟೈನಿನ ನಾಯಕ ಯಾಸೀರ್ ಅರಾಫತ್ ಅವರು, ಇಸ್ರೇಲ್ ತನ್ನ ವಶಕ್ಕೆ ತೆಗೆದುಕೊಂಡಿದ್ದ  ವೆಸ್ಟ್ ಬ್ಯಾಂಕ್ ನಗರವನ್ನು ಹಿಂದಿರುಗಿಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿದರು.

1999: ಜನರಲ್ ಎಲೆಕ್ಟ್ರಿಕ್ ಕಂಪೆನಿಯ ಉಪಸಂಸ್ಥೆಯಾಗಿದ್ದ, ರಕ್ಷಣಾ ವ್ಯವಸ್ಥೆಯ ಘಟಕವನ್ನು ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆ  ತನ್ನ ವಶಕ್ಕೆ ತೆಗೆದುಕೊಳ್ಳಲು ಒಪ್ಪಿತು.   ಮುಂದೆ ಇದೇದೇ ವರ್ಷದ ನವೆಂಬರನಲ್ಲಿ ಇದನ್ನು ಬಿ.ಎ.ಇ. ಸಿಸ್ಟಮ್ಸ್ ಎಂಬ ಹೆಸರಿನೊಂದಿಗೆ ನಡೆಸತೊಡಗಿತು.

2000: ಫಕ್ರುದ್ದೀನ್ ತಾಕುಲ್ಲಾ ಅವರು ರಾಜಧಾನಿ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಪ್ರಯಾಣಕ್ಕೆ ಅವರು ಬಳಸಿದ್ದು 26 ವರ್ಷಗಳ ಹಿಂದೆ 1973ರ ಜುಲೈ 15ರಂದು ಖರೀದಿಸಿದ್ದ ಟಿಕೆಟನ್ನು! ಭಾರತೀಯ ರೈಲ್ವೆಯು ಒದಗಿಸಿದ್ದ ‘ಮಿತಿ ರಹಿತ ಬುಕ್ಕಿಂಗ್’ ಸವಲತ್ತನ್ನು ಬಳಸಿಕೊಂಡು, ಭಾರತದ 50ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಅವರು ಈ ಟಿಕೆಟನ್ನು ಖರೀದಿಸಿದ್ದರು. ರೈಲ್ವೆ ಇಲಾಖೆಯು ಮುಂದೆ  ಈ ಸವಲತ್ತುನ್ನು ಹಿಂತೆಗೆದುಕೊಂಡಿತು.

2007: “ಮೋನಾಲಿಸಾ 1542ರ ಜುಲೈ 15ರಂದು ಮೃತರಾಗಿದ್ದು, ಆಕೆ ತಮ್ಮ ಅಂತಿಮ ದಿನಗಳನ್ನು ಕಳೆದ ಸೆಂಟ್ರಲ್ ಫ್ಲಾರೆನ್ಸಿನಲ್ಲಿ ಅವರ ಸಮಾಧಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ದಾಖಲೆ ಫ್ಲಾರೆನ್ಸಿನ ಇಗರ್ಜಿಯೊಂದರಲ್ಲಿ ಲಭಿಸಿದೆ” ಎಂದು ಮೋನಾಲಿಸಾ ಕುರಿತು ವಿಶೇಷ ಅಧ್ಯಯನ ನಡೆಸಿದ ಗಿಯಾಸುಪ್ಪೆ ಪಲ್ಲಾಂಟಿ ಹೇಳಿದ್ದಾರೆ.

2017: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ವಿದ್ವಾಂಸ ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕ ನೀಡಲಾಗುತ್ತಿರುವ ಈ ಪ್ರಶಸ್ತಿಯು ಏಳು ಲಕ್ಷದ ಒಂದು ರೂ. ನಗದು, ಪ್ರಶಸ್ತಿ ಫಲಕ, ಶಾಲು ಹಾಗೂ ಫಲತಾಂಬೂಲವನ್ನು ಒಳಗೊಂಡಿದೆ.

ಪ್ರಮುಖಜನನ/ಮರಣ:

1739: ಇಟಲಿಯ ಪ್ರಸಿದ್ಧ ಕಟ್ಟಡ ವಿನ್ಯಾಸಕಾರ ‘ಜೋಸೆಫ್ ಬೊನಾಮಿ ದಿ ಎಲ್ಡರ್’ ಅವರು ರೋಮ್ ನಗರದಲ್ಲಿ  ಜನಿಸಿದರು.  ಅವರ ವಿನ್ಯಾಸಗಳಾದ ‘ಲಾಂಗ್ ಫೋರ್ಡ್ ಹಾಲ್’ ಮತ್ತು ‘ಬ್ಯಾರೆಲ್ಲ್ಸ್ ಹಾಲ್’ ಪ್ರಸಿದ್ಧವಾಗಿವೆ.

1871: ಬಲ್ಗೇರಿಯಾದ ಶಿಕ್ಷಣ ತಜ್ಞ ಮತ್ತು ಚಳುವಳಿ ನಾಯಕ ಡೇಂ ಗ್ರೂಯೇವ್ ಅವರು ಸ್ಮಿಲೇವೋ ಎಂಬ ಹಳ್ಳಿಯಲ್ಲಿ ಜನಿಸಿದರು.  ಅವರು ‘ಇಂಟರ್ನಲ್ ಮೆಕೆಡೋನಿಯನ್ ರೆವಲ್ಯೂಷನರಿ ಆರ್ಗನೈಸೇಷನ್’ ಸಂಸ್ಥಾಪಿಸಿದ ಪ್ರಮುಖರಲ್ಲಿ ಒಬ್ಬರು.

1886: ಹಿಂದೂಸ್ಥಾನಿ ಸಂಗೀತ ಕಲಾವಿದ, ಗುರು ಸವಾಯಿ ಗಂಧರ್ವರು  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.  ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಅಂತಹವರಿಗೆ ಗುರುಗಳಾಗಿದ್ದ  ಸವಾಯಿ ಗಂಧರ್ವರಿಗೆ ಹೈದರಬಾದ್ ಕರ್ನಾಟಕ  ಮಂಡಳಿಯ ಮಾನಪತ್ರ,   ಧರಪುರದ ಮಹಾರಾಜರ ಚಿನ್ನದ ಪದಕ, 1938ರಲ್ಲಿ  ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ, 1939ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿದ ಸುವರ್ಣಪದಕ ಮಂತಾದ ಅನೇಕ ಗೌರವಗಳು ಸಂದಿದ್ದವು.  1952, ಸೆಪ್ಟೆಂಬರ್ 12ರಂದು ನಿಧನರಾದರು.

1912: ರಷ್ಯಾದ ಪ್ರಸಿದ್ಧ ಗಣಿತಜ್ಞ ಮತ್ತು ಅರ್ಥಶಾಸ್ತ್ರಜ್ಞ ಲೆನಾಯ್ಡ್ ಕಾಂಟೋರ್ರ್ವಿಚ್ ಅವರು ಅಂದಿನ ರಷ್ಯಾ ಚಕ್ರಾಧಿಪತ್ಯದಲ್ಲಿದ್ದ ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ ಜನಿಸಿದರು.     ಲೀನಿಯರ್ ಪ್ರೊಗ್ರಾಮಿಂಗ್ ಜನಕರೆಂದು ಇವರು ಪ್ರಸಿದ್ಧರಾಗಿದ್ದಾರೆ.  ಸಂಪನ್ಮೂಲಗಳ ಸಮರ್ಪಕ ಹಂಚಿಕೆಯ ವಿಧಿ ವಿಧಾನಗಳ ಕುರಿತಾಗಿ ಮಹತ್ವದ  ಚಿಂತನೆಗಳನ್ನು ಪ್ರಸ್ತುತಪಡಿಸಿದ್ದ ಇವರಿಗೆ 1975ರ ವರ್ಷದಲ್ಲಿ  ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಸಂದಿತ್ತು.

1944: ಅಮೆರಿಕದ ಕಟ್ಟಡ ವಿನ್ಯಾಸಕ ಮತ್ತು ಶಿಕ್ಷಣ ತಜ್ಞ ಥಾಮ್ ಮೇಯ್ನ್ ಅವರು ಕನೆಕ್ಟಿಕಟ್ ಬಳಿಯ ವಾಟರ್ ಬರಿ ಎಂಬಲ್ಲಿ ಜನಿಸಿದರು.  ಇವರ ವಿನ್ಯಾಸಗಳಾದ ಸಾನ್ ಫ್ರಾನ್ಸಿಸ್ಕೋ ಫೆಡರಲ್ ಕಟ್ಟಡ ಮತ್ತು ಫೇರೇ ಟವರ್ ಪ್ರಖ್ಯಾತವಾಗಿವೆ.

1984: ಭಾರತೀಯ ಕಾರ್ ರೇಸ್ ಪಟು ಕರುಣ್ ಚಂದೋಕ್ ಅವರು ಚೆನ್ನೈ ನಗರದಲ್ಲಿ ಜನಿಸಿದರು.  ಕಾರ್ ರೇಸ್ ಪಟುವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು , ಏಷ್ಯಾ ವಲಯದಲ್ಲಿ ಹಲವು ಪ್ರಶಸ್ತಿಗಳನ್ನೂ ಗಳಿಸಿರುವ ಅವರು,  ವೀಕ್ಷಕ ವಿವರಣೆಗಾರರಾಗಿ,  ತಂತ್ರಜ್ಞರಾಗಿ ಮತ್ತು  ಕಾರ್ ರೇಸ್ ವರದಿಗಾರರಾಗಿ ಸಹಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಮಾಡಿದ್ದಾರೆ.

1905: ವಿದ್ವಾಂಸ ಮತ್ತು ಧಾರ್ಮಿಕ ಸುಧಾರಕರಾಗಿದ್ದ ಮಹರ್ಷಿ ದೇಬೇಂದ್ರನಾಥ ಠಾಗೂರ್, ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ವಿಶ್ವಕವಿ ಎಂದೆನಿಸಿರುವ ರಬೀಂದ್ರನಾಥ ಠಾಗೂರ್  ಇವರ ಪುತ್ರರು.

1967: ಮಹಾನ್ ಸಂಗೀತ ವಿದ್ವಾಂಸ, ಪಿಟೀಲಿನಲ್ಲಿ ಏಳು ತಂತಿಗಳ ಬಳಕೆಯಿಂದ ಸುಸ್ವರ ಹೊಮ್ಮಿಸಿ ಪ್ರಖ್ಯಾತರಾದ  ಪಿಟೀಲು ಚೌಡಯ್ಯನವರು ಮೈಸೂರಿನಲ್ಲಿ ನಿಧನರಾದರು.  ಅವರು ವಾಣಿ ಎಂಬ ಚಲನಚಿತ್ರವನ್ನೂ ನಿರ್ಮಿಸಿ ಅದರಲ್ಲಿ ಪಾತ್ರವಹಿಸಿದ್ದರು.

1990: ಆಧ್ಯಾತ್ಮಿಕ ಗುರು ಓಶೋ ಎಂದು ಪ್ರಸಿದ್ಧರಾಗಿದ್ದ  ರಜನೀಶ್ ಅವರು,  ತಮ್ಮ 58ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು.  ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬೋಧನೆಗಳು, ಗ್ರಂಥಗಳು ಮತ್ತು ನಿರ್ಮಿಸಿದ ವೈವಿಧ್ಯಪೂರ್ಣ ಆಧ್ಯಾತ್ಮಿಕ ಶಿಬಿರಗಳ ಮೂಲಕ ಪ್ರಸಿದ್ಧರಾಗಿದ್ದಾರೆ.

Categories
e-ದಿನ

ಜನವರಿ-18

ಪ್ರಮುಖಘಟನಾವಳಿಗಳು:

1591: ಸಿಯಾಮಿನ ರಾಜ ನರೇಸುವಾನ್ ಬರ್ಮಾದ ರಾಜಕುಮಾರ ಮಿಂಗಿ ಸ್ವಾನನನ್ನು ದ್ವಂದ್ವ ಯುದ್ಧದಲ್ಲಿ ಕೊಂದು ಹಾಕಿದ.  ಈ ದಿನವನ್ನು ರಾಯಲ್ ಥಾಯ್ ಆರ್ಮ್ಡ್ ಫೋರ್ಸಸ್ ಡೇ ಎಂದು ಆಚರಿಸಲಾಗುತ್ತದೆ

1778: ಜೇಮ್ಸ್ ಕುಕ್ ಹವಾಯಿ ದ್ವೀಪವನ್ನು ಅನ್ವೇಷಿಸಿದ ಮೊದಲ ಯೂರೋಪಿಗನೆನಿಸಿದ.  ಆತ ಇದನ್ನು ಸ್ಯಾಂಡ್ವಿಚ್ ಐಲ್ಯಾಂಡ್ ಎಂದು ಹೆಸರಿಸಿದ್ದ.

1788: 736 ಖೈದಿಗಳನ್ನು ಹೊತ್ತ ಗ್ರೇಟ್ ಬ್ರಿಟನ್ನಿನ ಮೊದಲ ಹಡಗು ಆಸ್ಟ್ರೇಲಿಯಾದ ‘ಬೊಟಾನಿ ಬೇ’ ಸಮುದ್ರ ತೀರಕ್ಕೆ ಬಂದಿಳಿಯಿತು.

1886: ಆಧುನಿಕ ಹಾಕಿ ಕ್ರೀಡೆಗೆ ಜನ್ಮಕೊಟ್ಟ ‘ದಿ ಹಾಕಿ ಅಸೋಸಿಯೇಶನ್’ ಇಂಗ್ಲೆಂಡಿನಲ್ಲಿ ಆರಂಭಗೊಂಡಿತು.

1896: ಎಚ್. ಎಲ್. ಸ್ಮಿತ್ ಮೊದಲ ಬಾರಿಗೆ ಎಕ್ಸ್ ರೇ ಯಂತ್ರವನ್ನು ಉತ್ತರ ಕೆರೋಲಿನಾದಲ್ಲಿ ಪ್ರದರ್ಶಿಸಿದ

1903: ಮೆಸಾಚುಸೆಟ್ಸ್ ಪ್ರದೇಶದ ವೆಲ್ ಫ್ಲೀಟ್ ಎಂಬಲ್ಲಿಂದ  ಮೊದಲ ಟ್ರಾನ್ಸ್ ಅಟ್ಲಾಂಟಿಕ್ ರೇಡಿಯೋ ಪ್ರಸರಣ  ಅಮೆರಿಕದಲ್ಲಿ ಭಿತ್ತರಗೊಂಡಿತು.

1911: ಮೊತ್ತ ಮೊದಲ ಬಾರಿಗೆ ಹಡಗಿನ ಮೇಲೆ  ವಿಮಾನವೊಂದು  ಬಂದಿಳಿಯಿತು. ಪೈಲಟ್ ಇ.ಬಿ. ಎಲಿ ಅವರು ಸಾನ್ ಫ್ರಾನ್ಸಿಸ್ಕೊ ಬಂದರಿನಲ್ಲಿ ತಂಗಿದ್ದ  ಎಸ್. ಪೆನ್ಸಿಲ್ವೇನಿಯಾ ಹಡಗಿನ ಮೇಲೆ  ತಮ್ಮ ವಿಮಾನವನ್ನು ಇಳಿಸಿದರು.

1915: ಪಶ್ಚಿಮ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಜಪಾನ್ ತನ್ನ 21 ಆಗ್ರಹಪೂರ್ವಕ ಬೇಡಿಕೆಗಳನ್ನು ಚೀನಾದ ಮುಂದಿಟ್ಟಿತು.

1919: ಮೊದಲ ಜಾಗತಿಕ ಸಮರದಿಂದ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗಾಗಿ ಪ್ಯಾರಿಸ್ ಶಾಂತಿ ಸಮ್ಮೇಳನವನ್ನು, ವರ್ಸೈಲ್ಸಿನಲ್ಲಿ  ಆಯೋಜಿಸಲಾಯಿತು. ಸಮರದಲ್ಲಿ ಪರಾಭವಗೊಂಡ ಜರ್ಮನಿಗೆ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಸಮ್ಮೇಳನದಲ್ಲಿ ವಿಜಯ ಸಾಧಿಸಿದ ನಾಲ್ಕು ಪ್ರಮುಖ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಪ್ರಮುಖ ಪಾತ್ರ ವಹಿಸಿದವು.

1950: ಪ್ರಧಾನಿ ಜವಾಹರಲಾಲ್ ನೆಹರೂ ಅವರು “ಭಾರತವು ಜಾತ್ಯತೀತ ರಾಷ್ಟ್ರ” ಎಂದು ಘೋಷಿಸಿದರು.

1958: 40ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ವಿ.ಕೃ. ಗೋಕಾಕ್ ಅವರ ಸಮ್ಮೆಳನಾಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ಆರಂಭಗೊಂಡಿತು.

1976: ಲೆಬೆನಾನಿನ  ಕ್ರಿಶ್ಚಿಯನ್ ಉಗ್ರಗಾಮಿಗಳು ಬೀರತ್ತಿನ ಕರಾಂಟಿನದಲ್ಲಿ 1000ಕ್ಕೂ ಹೆಚ್ಚು ಜನರನ್ನು ಕೊಂದುಹಾಕಿದರು.

1977: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧನದಲ್ಲಿರಿಸಿದ್ದ,  ರಾಜಕೀಯ ನಾಯಕರುಗಳಾದ ಮೊರಾರ್ಜಿ ದೇಸಾಯಿ ಮತ್ತಿತರರನ್ನು ಬಿಡುಗಡೆ ಮಾಡಲಾಯಿತು.

1977: ವಿಜ್ಞಾನಿಗಳು ಮೊದಲಬಾರಿಗೆ,   ಮಾರಣಾಂತಿಕವಾಗಿದ್ದ ಅದುವರೆವಿಗೂ ಪತ್ತೆಯಾಗದಿದ್ದ ಲೆಜನಿಯರ್ಸ್ ಸಾಂಕ್ರಾಮಿಕ   ರೋಗಕ್ಕೆ ಕಾರಣವಾಗಿದ್ದ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದರು.  ಫಿಲೆಡೆಲ್ಫಿಯಾದಲ್ಲಿ 1976ರಲ್ಲಿ ಹಲವಾರು ಜನ ರೋಗಕ್ಕೆ ಒಳಗಾಗಿ ಸತ್ತ ಸಂದರ್ಭದಲ್ಲಿ,  ಆ ರೋಗ ಲೆಜನ್ನೆಯರ್ಸ್ ಎಂಬ ಹೆಸರನ್ನು ಪಡೆದುಕೊಂಡಿತ್ತು.  ಅದನ್ನು ಕುರಿತು ಕೂಲಂಕಷವಾಗಿ ಅಧ್ಯಯನ ನಡೆಸಿದ ವಿಜ್ಞಾನಿಗಳು ಅದು ಯಾವ  ಬ್ಯಾಕ್ಟೀರಿಯಾದಿಂದ  ಆದದ್ದು ಎಂಬುದನ್ನು ಗುರುತಿಸಿ ಅದಕ್ಕೆ ಲೆಜಿಯನ್ನೆಲ್ಲಾ ಎಂದು ಹೆಸರಿಸಿದರು.  ಈ ಬ್ಯಾಕ್ಟೀರಿಯಾ ಉಂಟುಮಾಡಿದ ಕಾಯಿಲೆಗೆ  ಲೆಜಿಯನ್ನೆಲ್ಲಾ ಪ್ನಿಯಮೋಫಿಲಾ ಎಂದು ಹೆಸರಿಸಿದರು.

1993: ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ದಿನವನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲೂ ಆಚರಿಸಲಾಯಿತು.

2005: ವಿಶ್ವದ ಅತಿ ದೊಡ್ಡ ವ್ಯಾಪಾರಿ ಜೆಟ್ ವಿಮಾನವಾದ ‘ಏರ್ ಬಸ್ ಎ380’ ಫ್ರಾನ್ಸಿನ ಟೂಲೌಸ್ ಎಂಬಲ್ಲಿ ನಡೆದ ಸಮಾರಂಭದಲ್ಲಿ  ಅನಾವರಣಗೊಂಡಿತು.

2006: ಧರ್ಮಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಜಾತ್ಯತೀತ ಜನತಾದಳವು ಬಿಜೆಪಿ ಜೊತೆಗೂಡಿ ಪರ್ಯಾಯ ಸರ್ಕಾರ ರಚನೆಗೆ ಮುಂದಾಯಿತು. ಜನವರಿ 26ರ ಒಳಗೆ ಬಹುಮತ ಸಾಬೀತುಪಡಿಸಬೇಕೆಂದು  ರಾಜ್ಯಪಾಲರು ಮುಖ್ಯಮಂತ್ರಿಗಳಾದ  ಧರ್ಮಸಿಂಗ್ ಅವರಿಗೆ ಸೂಚನೆ ನೀಡಿದರು.

2007: ಪ್ರತಿ ಕುಟುಂಬದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಎಂಬ ಎಂಬ ಖ್ಯಾತಿಗೆ ಗುಲ್ಬರ್ಗ ಪಾತ್ರವಾಯಿತು. ಇದು ಈ ಹೆಗ್ಗಳಿಕೆ  ಹೊಂದಿರುವ ದೇಶದ ಎರಡನೇ ಜಿಲ್ಲೆ ಎನಿಸಿತು.

2008: ಉಡುಪಿಯ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದ   ಹೊಸ ಇತಿಹಾಸ ನಿರ್ಮಿಸಿದರು. ಪೀಠಾರೋಹಣದ ಜೊತೆಗೆ ಪರ್ಯಾಯದ ಮೊದಲ ದಿನವೇ ಶ್ರೀಕೃಷ್ಣ ದೇವರ ಪೂಜೆ ನೆರವೇರಿಸಿದ ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು.

2009: ಗಂಡೋರಿ ನಾಲಾ ನೀರಾವರಿ ಯೋಜನೆ ಆರಂಭಗೊಂಡಿತು. ಯೋಜನೆಯ ಎಡದಂಡೆ ಕಾಲುವೆಯ 66 ಕಿಮೀವರೆಗೂ ನೀರು ಹರಿಸಲಾಯಿತು.  ಹೀಗಾಗಿ ಇದು  ಗುಲ್ಬರ್ಗ ನೀರಾವರಿ ಯೋಜನಾ ವಲಯದಲ್ಲಿಯೇ ಅತಿ ಹೆಚ್ಚು ಉದ್ದದವರೆಗೆ ನೀರು ಹರಿಸಿದ ಕಾಲುವೆ ಎಂಬ ಖ್ಯಾತಿ ಪಡೆಯಿತು.

2009: ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮತ್ತು ಈಗಾಗಲೇ ಇರುವ ಮೂರು ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುಗ್ರೀವಾಜ್ಞೆ ಹೊರಡಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯಗಳ ಮಸೂದೆ 2008ನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಸಂಸತ್ತಿನ ಕಳೆದ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗದ ಕಾರಣ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ರಾಷ್ಟ್ರಪತಿಗಳ ಈ ಸುಗ್ರೀವಾಜ್ಞೆ ಪ್ರಕಾರ, ಸಚಿವಾಲಯವು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಕ್ರಮ ಕೈಗೊಂಡಿತು.

2017: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರ ಆರಾಧನಾ ಮಹೋತ್ಸವವು ಜನವರಿ 13 ರಿಂದ ಪ್ರಾರಂಭಗೊಂಡು ಅವರು ಸ್ವರ್ಗಸ್ಥರಾದ ಈ ದಿನದ ಆಚರಣೆಯವರೆಗೆ ನಡೆದಿದೆ.  ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಸಂಗೀತಗಾರರು ತಿರುವಯ್ಯಾರಿನಲ್ಲಿ ಬಂದು ಸೇರಿ ಕಛೇರಿ ನಡೆಸಿದರಲ್ಲದೆ, ಆರಾಧನೆಯ ಕೊನೆಯ ದಿನವಾದ ಇಂದು  ಒಟ್ಟಾಗಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಿದ್ದಾರೆ. ಪುಷ್ಯ ಬಹಳ ಪಂಚಮಿ ದಿನದಂದು ತ್ಯಾಗರಾಜರು ಸಮಾಧಿಸ್ಥರಾದ  ದಿನಕ್ಕೆ ಹೊಂದಿಕೊಂಡಂತೆ ಈ ಆಚರಣೆ ಪ್ರತೀವರ್ಷವೂ ನಡೆಯುತ್ತಿದೆ.

ಪ್ರಮುಖಜನನ/ಮರಣ:

1842: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ  ಅವರು  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ ಎಂಬಲ್ಲಿ ಜನಿಸಿದರು ಇವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸಂಸ್ಥಾಪಕ  ಸದಸ್ಯರಲ್ಲಿ ಒಬ್ಬರಾಗಿದ್ದರು. ಬ್ರಿಟಿಷರೊಂದಿಗೆ ಶಾಂತಿಯಿಂದ ವ್ಯವಹರಿಸಿ ಭಾರತೀಯ ಸಮಾಜವನ್ನು ಸುಧಾರಿಸುವ  ಮನೋಧರ್ಮ ಹೊಂದಿದ್ದ ರಾನಡೆ ಅವರು, ಸಮಾಜ ಸುಧಾರಣಾ  ಕಾರ್ಯಗಳಿಗಾಗಿ ಹಲವಾರು ಸಂಘಟನೆಗಳನ್ನು ಸ್ಥಾಪಿಸಿದ್ದರಲ್ಲದೆ, ಇಂದುಪ್ರಕಾಶ ಎಂಬ ಸಮಾಜ ಮುಖೀ ಪತ್ರಿಕೆಯನ್ನೂ ಹೊರಡಿಸುತ್ತಿದ್ದರು.

1954: ಅಲೆಗ್ಸಾಂಡರ್ ಗ್ರಹಾಂಬೆಲ್ ಅವರ ಸಹಾಯಕನಾಗಿ ಟೆಲಿಫೋನ್ ಕಂಡುಹಿಡಿಯುವುದರಲ್ಲಿ ದುಡಿದಿದ್ದ ಥಾಮಸ್ ಎ. ವಾಟ್ಸನ್, ಅಮೆರಿಕದ ಮೆಸ್ಸಚುಸೆಟ್ಸ್ ಪ್ರದೇಶದಲ್ಲಿ ಜನಿಸಿದರು.  ಗ್ರಹಾಂ ಬೆಲ್ ಅವರು ಮೊಟ್ಟ ಮೊದಲ ಬಾರಿಗೆ ಟೆಲಿಫೋನ್ ಮಾಡಿದ್ದು ಪಕ್ಕದ ಕೊಠಡಿಯಲ್ಲಿದ್ದ ‘ಥಾಮಸ್ ವಾಟ್ಸನ್’ ಅವರಿಗೆ.

1892:  ಖ್ಯಾತ ಹಾಲಿವುಡ್ ನಟ ಅಲಿವರ್ ಹಾರ್ಡಿ ಜನಿಸಿದರು.    ಸ್ಟಾನ್ ಲಾರೆಲ್ ಅವರೊಂದಿಗೆ  ‘ಲಾರೆಲ್ ಅಂಡ್ ಹಾರ್ಡಿ’ ಹಾಸ್ಯ ಜೋಡಿಯಾಗಿ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು.

1921: ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್‌ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು.  ನಗೆಬರಹಗಾರ, ಕಾದಂಬರಿಕಾರ, ನಟ, ಸೂತ್ರದ ಬೊಂಬೆಯಾಟಗಾರ, ಹೀಗೆ ನಾನಾ ಪ್ರಕಾರಗಳಲ್ಲಿ  ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದೊಯ್ಯುತ್ತಿದ್ದ ದೀಕ್ಷಿತರು 1986ರ ವರ್ಷದಲ್ಲಿ ನಿಧನರಾದರು.

1921: ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಯೋಚಿರು ನಂಬು, ಜಪಾನಿನ ಟೋಕಿಯೋದಲ್ಲಿ ಜನಿಸಿದರು.  ಮುಂದೆ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಥಿಯೋರೆಟಿಕಲ್ ಭೌತವಿಜ್ಞಾನದಲ್ಲಿ ಅವರು ಪ್ರಸಿದ್ಧಿ ಪಡೆದರು.

1927: ಪ್ರಸಿದ್ಧ ವೀಣಾವಾದಕರಾದ ಸುಂದರಂ ಬಾಲಚಂದರ್ ತಮಿಳುನಾಡಿನ ಮೈಲಾಪುರದಲ್ಲಿ ಜನಿಸಿದರು.  ಪ್ರಾರಂಭಿಕ ವರ್ಷಗಳಲ್ಲಿ ಸಿನಿಮಾ ನಟರಾಗಿ, ಗಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಹಾ ದುಡಿದಿದ್ದ ಅವರು, ಮುಂದೆ ಹೆಚ್ಚು ವೀಣಾವಾದನದಲ್ಲೇ ತಮ್ಮನ್ನು ತಲ್ಲೀನಗೊಳಿಸಿಕೊಂಡರು.  ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1937: ಉತ್ತರ ಐರ್ಲ್ಯಾಂಡಿನಲ್ಲಿ ಸೋಷಿಯಲ್ ಡೆಮೋಕ್ರಾಟಿಕ್ ಅಂಡ್ ಲೇಬರ್ ಪಾರ್ಟಿ ಸ್ಥಾಪಿಸಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಜಾನ್ ಹ್ಯೂಮೆ  ಅವರು, ಡೆರ್ರಿ ಎಂಬಲ್ಲಿ ಜನಿಸಿದರು.

1957: ಭಾರತೀಯ ಈಜುಗಾರ್ತಿ, ಸೌಂದರ್ಯ ರಾಣಿ, ನಟಿ, ರೂಪದರ್ಶಿ, ರಾಜಕಾರಣಿ  ನಫೀಸಾ ಅಲಿ ಮುಂಬೈನಲ್ಲಿ ಜನಿಸಿದರು.  ಅನೇಕ ಚಲನಚಿತ್ರಗಳಲ್ಲಿ ನಟಿಸಿರುವ ಅವರು  1972-74 ಅವಧಿಯಲ್ಲಿ ಅವರು ಈಜುಗಾರಿಕೆಯ ಚಾಂಪಿಯನ್ ಆಗಿದ್ದರು.  1976ರಲ್ಲಿ   ಮಿಸ್ ಇಂಡಿಯಾ ಸ್ಪರ್ಧೆ ವಿಜೇತಯಾಗಿದ್ದ ಅವರು 1977ರ ವರ್ಷದಲ್ಲಿ ಮಿಸ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.

1936: ಇಂಗ್ಲಿಷ್ ಸಣ್ಣ ಕಥೆಗಾರ, ಕವಿ, ಕಾದಂಬರಿಕಾರ ರುಡ್ ಯಾರ್ಡ್ ಕಿಪ್ಲಿಂಗ್ ತಮ್ಮ 71ನೇ ವಯಸಿನಲ್ಲಿ ಇಂಗ್ಲೆಂಡಿನ ಬುರ್ ವಾಶ್ನಲ್ಲಿ ನಿಧನರಾದರು. ಭಾರತದಲ್ಲಿ ಜನಿಸಿ ಭಾರತದ ವಾತಾವರಣದ ಮಹತ್ವದ ಪ್ರಾಕೃತಿಕ  ಕಥಾನಕಗಳನ್ನು ಸೃಷ್ಟಿಸಿ ಪ್ರಸಿದ್ಧರಾಗಿದ್ದ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.  ‘ಜಂಗಲ್ ಬುಕ್’ ಅವರ ಅತ್ಯಂತ ಜನಪ್ರಿಯ ಕೃತಿ.

1947: ಭಾರತೀಯ ಗಾಯಕ, ನಟ ಕುಂದನ್ ಲಾಲ್ ಸೈಗಲ್, ತಮ್ಮ 42ನೇ ವಯಸಿನಲ್ಲಿ ಜಲಂಧರಿನಲ್ಲಿ ನಿಧನರಾದರು. ‘ದೇವದಾಸ್’ ಚಿತ್ರದ ಮೂಲಕ ಅವರು ಅಪಾರ ಖ್ಯಾತಿ ಗಳಿಸಿದ್ದರು.

1995: ಜರ್ಮನಿಯ ನೊಬೆಲ್ ಪುರಸ್ಕೃತ ಜೈವಿಕ ವಿಜ್ಞಾನಿ ಅಡೋಲ್ಫ್ ಬ್ಯುಟೆನಾನ್  ಮ್ಯೂನಿಚ್ ನಗರದಲ್ಲಿ ನಿಧನರಾದರು.

1996: ತೆಲುಗು ಚಿತ್ರನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಹೈದರಾಬಾದಿನಲ್ಲಿ ನಿಧನರಾದರು.  ಚಲನಚಿತ್ರಗಳಲ್ಲಿ ಅಭಿನಯ ಮತ್ತು ನಿರ್ಮಾಣಕ್ಕೆ ಹಲವು ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2003: ಹಿಂದಿಯ ಪ್ರಖ್ಯಾತ ಕವಿ, ಬರಹಗಾರ ಹರಿವಂಶರಾಯ್ ಬಚ್ಚನ್ ಮುಂಬೈನಲ್ಲಿ ನಿಧನರಾದರು.  ಸರಸ್ವತಿ ಸಮ್ಮಾನ್ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2007: ಜಗತ್ತಿನ ಹಿರಿಯಜ್ಜಿ ಎಂದೇ ಹೆಸರಾದ ಕೆನಡಾದ ಜೂಲಿ ವಿನ್ ಫರ್ಡ್ ಬರ್ಟ್ರೆಂಡ್ ತಮ್ಮ 115ನೇ ವಯಸ್ಸಿನಲ್ಲಿ ನಿಧನರಾದರು. ಜಗತ್ತಿನ ಹಿರಿಯಾಕೆ  ಎಂಬ ಖ್ಯಾತಿ ಪಡೆದಿದ್ದ ಇವರು  ಗಿನ್ನೆಸ್ ದಾಖಲೆಯ ಪುಸ್ತಕಕ್ಕೂ ಸೇರಿದ್ದರು. ನಿದ್ದೆಯಲ್ಲಿಯೇ ಸಾವಿಗೆ ಸರಿದ ಇವರು  1891ರ ಸೆಪ್ಟೆಂಬರ್ 16ರಂದು ಕ್ಯೂಬಿಕ್ನಲ್ಲಿ ಜನಿಸಿದ್ದರು.

2007: ಖ್ಯಾತ ಪತ್ರಿಕೋದ್ಯಮಿ ಲಲಿತ್ ಮೋಹನ್ ಥಾಪರ್ ನವದೆಹಲಿಯಲ್ಲಿ ನಿಧನರಾದರು. ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರಾಗಿದ್ದ ಥಾಪರ್ 1991ರಲ್ಲಿ ದಿ ಪಯೋನೀರ್ ಪತ್ರಿಕೆಯ ಮಾಲೀಕರಾದರು. 1998ರಲ್ಲಿ ಈ ಪತ್ರಿಕೆಯನ್ನು ಬೇರೆ  ಆಡಳಿತಕ್ಕೆ ಹಸ್ತಾಂತರಿದರು.

2008: ಚೆಸ್ ವಿಶ್ವ ಚಾಂಪಿಯನ್ ಪಟ್ಟ ಧರಿಸಿದ ಅಮೆರಿಕದ ಮೊತ್ತಮೊದಲ ಸ್ಪರ್ಧಿ  ಬಾಬ್ಬಿ ಫಿಷರ್ ಐರ್ಲ್ಯಾಂಡಿನ ರೆಜಾವಿಕ್ ನಗರದಲ್ಲಿ ನಿಧನರಾದರು. 1972ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ವಿರುದ್ಧ ಗೆಲುವು ಪಡೆದು, ವಿಶ್ವ ಚಾಂಪಿಯನ್ ಸಾಧನೆ ಮಾಡಿದ ಅಮೆರಿಕದ ಮೊದಲ ಸ್ಪರ್ಧಿ ಎಂಬ ಹೆಸರು ಪಡೆದಿದ್ದರು.

Categories
e-ದಿನ

ಜನವರಿ-17

ಪ್ರಮುಖಘಟನಾವಳಿಗಳು:

395: ಚಕ್ರವರ್ತಿ ಒಂದನೇ ಥಿಯೋಡೋಸಿಯಸ್ ನಿಧನನಾದಂತೆ, ರೋಮನ್ ಚಕ್ರಾಧಿಪತ್ಯವು ಇಬ್ಬಾಗಗೊಂಡಿತು.  ಅರ್ಕಾಡಿಯಸ್ ಪೂರ್ವ ರೋಮನ್ ಚಕ್ರವರ್ತಿಯಾಗಿ ಮತ್ತು ಹೊನೋರಿಯಾಸ್ ಪಶ್ಚಿಮ ರೋಮನ್ ಚಕ್ರವರ್ತಿಯಾದರು.

1524: ಜಿಯೋವನ್ನಿ ಡ ವೆರಜ್ಜಾನೋ ಪಸಿಫಿಕ್ ಸಾಗರಕ್ಕೆ ಸಮುದ್ರಮಾರ್ಗವನ್ನು ಅರಸುತ್ತಾ ಪೋರ್ಚುಗೀಸರ ವಸಾಹತುವಾದ ಮಡಿಯೇರಾದಿಂದ  ಪಶ್ಚಿಮದ ಕಡೆಗೆ ಪಯಣವನ್ನಾರಂಭಿಸಿದರು.

1773: ಮೊಟ್ಟ ಮೊದಲ ಅಂಟಾರ್ಟಿಕಾ ಸರ್ಕಲ್ಲಿನ ದಕ್ಷಿಣದೆಡೆಗಿನ  ಸಾಹಸ ಯಾತ್ರೆ ಕ್ಯಾಪ್ಟನ್ ಜೇಮ್ಸ್ ಕುಕ್ ನೇತೃತ್ವದಲ್ಲಿ ಪ್ರಾರಂಭಗೊಂಡಿತು.

1811: ಮೆಕ್ಸಿಕನ್ ಸ್ವಾತಂತ್ರ್ಯ ಯುದ್ಧದಲ್ಲಿ ಕೇವಲ 6000 ಸೈನಿಕರ ಸ್ಪಾನಿಷ್ ಪಡೆ 1 ಲಕ್ಷ ಮೆಕ್ಸಿಕನ್ ಕ್ರಾಂತಿಕಾರಿ ಪಡೆಯನ್ನು ಸೋಲಿಸಿತು.

1904: ಅಂಟನ್ ಚೆಕಾವ್ ಅವರ  ‘ದಿ ಚೆರ್ರಿ ಆರ್ಚರ್ಡ್’  ಮಾಸ್ಕೋ ಆರ್ಟ್ ಥಿಯೇಟರಿನಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು.

1912: ಇಂಗ್ಲೆಂಡಿನ ಕ್ಯಾಪ್ಟನ್ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರು, ದಕ್ಷಿಣ ಧ್ರುವ ತಲುಪಿದರು. ರೋಲ್ಡ್ ಅಮಂಡ್ಸನ್ ಅವರು  ಈ ಸಾಧೆನಯನ್ನು ಮಾಡಿದ ಒಂದು ತಿಂಗಳ ನಂತರ ರಾಬರ್ಟ್ ಫಾಲ್ಕನ್ ಸ್ಕಾಟ್ ಈ ಸಾಧನೆಯನ್ನು ಮಾಡಿದರು.

1917: ಅಮೆರಿಕವು ಡೆನ್ಮಾರ್ಕಿಗೆ, ವರ್ಜಿನ್ ಐಲೆಂಡಿಗೆ ಬೆಲೆಯಾಗಿ 25 ಮಿಲಿಯನ್ ಡಾಲರ್ ನೀಡಿತು

1929: ಇ.ಸಿ. ಸೆಗರ್ ಅವರ ಕಾರ್ಟೂನ್ ಸೃಷ್ಟಿಯಾದ  ‘ಪೊಪಾಯ್ ದಿ ಸೈಲರ್ ಮ್ಯಾನ್’ ಮೊದಲ ಬಾರಿಗೆ ‘ತಿಂಬಲ್ ಥಿಯೇಟರ್ ಕಾಮಿಕ್ ಸ್ಟ್ರಿಪ್’ನಲ್ಲಿ ಮೂಡಿಬಂತು.

1946: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ  ಪ್ರಥಮ ಅಧಿವೇಶನವನ್ನು ನಡೆಸಿತು.

1950: ಹನ್ನೊಂದು ಜನರ ಕಳ್ಳರ ಗುಂಪೊಂದು, ಬೋಸ್ಟನ್ನಿನಲ್ಲಿ ಸಶಸ್ತ್ರಕಾವಲಿದ್ದ ಬ್ರಿಂಕ್ ಕಟ್ಟಡದಲ್ಲಿ ಸುಮಾರು 2.8 ಮಿಲಿಯನ್ ದರೋಡೆಯನ್ನು ಅತ್ಯಂತ ಚಾಕಚಕ್ಯತೆಯಿಂದ  ಸುಳಿವುಗಳೇ ಸಿಗದ ಹಾಗೆ ನಡೆಸಿತು.  ಇದು ಶತಮಾನದ  ದೊಡ್ಡ ಕಳ್ಳತನದ ಘಟನೆ ಎನಿಸಿತ್ತು.

1941: ಭಾರತ ಸ್ವಾತಂತ್ರ್ಯ ಹೋರಾಟದ ಮಹತ್ವದ ನಾಯಕರಾದ ಸುಭಾಶ್ ಚಂದ್ರ ಬೋಸ್ ಅವರು  ಕೋಲ್ಕತ್ತಾದಿಂದ ತಲೆಮರೆಸಿಕೊಂಡರು.  ನಂತರ ಅವರು ಕಂಡದ್ದು ಮಾಸ್ಕೋದಲ್ಲಿ.

1991: ಕುವೈತಿನಿಂದ, ಅದನ್ನು ಆಕ್ರಮಿಸಿದ್ದ  ಇರಾಕ್ ಅನ್ನು ಹೊರಗಟ್ಟುವುದಕ್ಕಾಗಿ ‘ಆಪರೇಷನ್ ಡೆಸರ್ಟ್ ಸ್ಟಾರಂ’ ಆರಂಭಗೊಂಡಿತು.

1992: ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದ ಜಪಾನಿನ ಪ್ರಧಾನಿ ಕಿಯಿಚಿ ಮಿಯಾಜವಾ ಅವರು ಎರಡನೇ ವಿಶ್ವಮಹಾಯುದ್ಧದಲ್ಲಿ, ಕೊರಿಯಾದ ಹೆಣ್ಣು ಮಕ್ಕಳನ್ನು ಲೈಂಗಿಕ ಜೀತಕ್ಕೆ ಒಡ್ಡಿದ ಘಟನೆಗಾಗಿ ಕ್ಷಮೆ ಯಾಚಿಸಿದರು.

2006: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು  (ಬಿ.ಎಂ.ಟಿ.ಸಿ), ಬೆಂಗಳೂರು ನಗರ ಸಂಚಾರಕ್ಕಾಗಿ ಐಶಾರಾಮಿ ವೋಲ್ವೋ ಬಸ್ ಸೇವೆಯನ್ನು ಪ್ರಾರಂಭಿಸಿತು.

2006: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣದ ಮುಖ್ಯ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಆತನ ಇಬ್ಬರು ಸಹಚರರಿಗೆ ಮುಂಬೈ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು.

2007: ಭಾರತವು ಅಮೆರಿಕದಿಂದ ಖರೀದಿಸಿದ ಮೊತ್ತ ಮೊದಲ ಯುದ್ಧ ನೌಕೆಯಾದ  ‘ಯು ಎಸ್ ಎಸ್ ಟ್ರೆಂಟೋನ್’ ಅನ್ನು ಅಮೆರಿಕದ ವರ್ಜೀನಿಯಾದಲ್ಲಿನ ನೋರ್ ಫೆಕ್ ನೌಕಾನೆಲೆಯಲ್ಲಿ ಭಾರತದ ನೌಕಾಪಡೆಗೆ ಹಸ್ತಾಂತರಿಸಲಾಯಿತು. 17,000 ಟನ್ ತೂಕದ ಈ ಬೃಹತ್ ನೌಕೆಗೆ ‘ಐ ಎನ್ ಎಸ್ ಜಲಾಶ್ವ’ ಎಂದು ನಾಮಕರಣ ಮಾಡಲಾಯಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬ್ರಿಟನ್ನಿನ ಚಾನೆಲ್ 4 ರಿಯಾಲಿಟಿ ಶೋ ‘ಸೆಲೆಬ್ರಿಟಿ ಬಿಗ್ ಬ್ರದರ್’ ಕಾರ್ಯಕ್ರಮದಲ್ಲಿ, ಸಹ ಸ್ಪರ್ಧಿಗಳು ಜನಾಂಗೀಯ ನಿಂದನೆ ಮಾಡಿದ ಘಟನೆಗೆ, ವಿಶ್ವವ್ಯಾಪಿ ಪ್ರತಿಭಟನೆ ವ್ಯಕ್ತವಾಯಿತು.

2007: ಕರ್ನಾಟಕ  ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಬೃಹತ್ ಬೆಂಗಳೂರು ಮಹಾನಗರ’ ಕುರಿತ ಅಧಿಸೂಚನೆಗೆ  ರಾಜ್ಯಪಾಲ ಟಿ.ಎನ್. ಚತುರ್ವೇದಿ ಸಹಿ ಮಾಡಿದರು.

2007: ದುರಂತವನ್ನು ಸೂಚಿಸುವುದಕ್ಕಾಗಿ ಪರಮಾಣು ವಿಜ್ಞಾನಿಗಳ ಸಂಘಟನೆ ಸ್ಥಾಪಿಸಿರುವ ‘ಡೂಮ್ಸ್ ಡೇ ಗಡಿಯಾರ’ವು ತನ್ನ  ಸಮಯವನ್ನು  ಮಧ್ಯರಾತ್ರಿ ಹನ್ನೆರಡಕ್ಕೆ ಮುಂಚಿನ ಐದು ನಿಮಿಷಕ್ಕೆ ಸರಿಸಿದೆ.  ಮಧ್ಯರಾತ್ರಿ ಹನ್ನೆರಡಕ್ಕೆ  ಎಷ್ಟು ಹತ್ತಿರದಲ್ಲಿ ನಿಮಿಷದ ಮುಳ್ಳು ಇದೆ,ಯೋ ಅಷ್ಟು ಹತ್ತಿರದಲ್ಲಿ ವಿಶ್ವಕ್ಕೆ ದುರಂತ ಕಾದಿದೆ ಎಂಬ ಸೂಚನೆ ‘ಡೂಮ್ಸ್ ಡೇ ಗಡಿಯಾರ’ದಲ್ಲಿದೆ.

2008: 1970ರ ಅವಧಿಯಲ್ಲಿ, ತಾವು ಭಾರತದಲ್ಲಿ ರಾಜಕೀಯ ಕೃಪಾಶ್ರಯ ಪಡೆದಿದ್ದ ಸಂದರ್ಭದಲ್ಲಿ, ತಮ್ಮ ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಅಗತ್ಯವಾಗಿದ್ದ  ಹಣವನ್ನು ಹೊಂದಿಸಿಕೊಳ್ಳುವ ಸಲುವಾಗಿ, ತಾವು ನಕಲಿ ನೋಟುಗಳ ಮುದ್ರಣ ಜಾಲ ಹರಡಿದ್ದನ್ನು ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು, ಕಂಟಿಪುರ ಟೆಲಿವಿಷನ್ನಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಒಪ್ಪಿಕೊಂಡರು. ನೇಪಾಳ ವಿಮಾನಯಾನಕ್ಕೆ ಸೇರಿದ ಪ್ರಯಾಣಿಕರ ವಿಮಾನ ಅಪಹರಣದ ರೂವಾರಿ ಕೂಡ ತಾವೇ ಎಂದು ಕೂಡಾ ಈ ಸಂದರ್ಭದಲ್ಲಿ   ಬಹಿರಂಗಪಡಿಸಿದರು.

2008: ಪ್ರತಿವರ್ಷ ಒಂದು ಲಕ್ಷ ಅಂಗವಿಕಲರಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಒದಗಿಲು ಕೇಂದ್ರ ಸರ್ಕಾರವು 1800 ಕೋಟಿ ರೂಪಾಯಿಗಳ ಪ್ರೋತ್ಸಾಹಕರ ಯೋಜನೆಯನ್ನು ಜಾರಿಗೊಳಿಸಿತು. ಸರ್ಕಾರಿ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

2008: ಆಸ್ಟ್ರೇಲಿಯ ವಿರುದ್ಧ, ಪರ್ತಿನಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಂಡ್ರ್ಯೂ ಸೈಮಂಡ್ಸ್ ಅವರ ವಿಕೆಟ್ ಪಡೆದ  ಅನಿಲ್ ಕುಂಬ್ಳೆ,  600 ವಿಕೆಟ್ ಪಡೆದ ವಿಶ್ವದ ಮೂರನೆಯ ಹಾಗೂ ಭಾರತದ ಪ್ರಪ್ರಥಮ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2009: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರೊ. ವೆಂಕಟಾಚಲ ಶಾಸ್ತ್ರಿ  ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದರು.

2009: ಮಂಗಳೂರಿನ ಶಕ್ತಿನಗರದಲ್ಲಿ ನಿರ್ಮಾಣಗೊಂಡಿರುವ ವಿಶ್ವ ಕೊಂಕಣಿ ಕೇಂದ್ರವನ್ನು ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಉದ್ಘಾಟಿಸಿದರು. ಈ ಕೇಂದ್ರಕ್ಕೆ ‘ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ವಿಶ್ವ ಕೊಂಕಣಿ ಕೇಂದ್ರ’ ಎಂದು ಹೆಸರಿಡಲಾಯಿತು.

ಪ್ರಮುಖಜನನ/ಮರಣ:

1501: ಜರ್ಮನ್ ಭೌತಶಾಸ್ತ್ರಜ್ಞ ಮತ್ತು ಸಸ್ಯಶಾಸ್ತ್ರಜ್ಞರಾದ ಲೆಯೋನ್ ಹಾರ್ಟ್ ಫಚಸ್ ಜನಿಸಿದರು.  ಅವರು ಸಸ್ಯಗಳ ಉಪಯೋಗಗಳನ್ನು ತಿಳಿಸಿಕೊಡುವ ಸಚಿತ್ರಗ್ರಂಥ  ‘ಹರ್ಬಲ್ ಬುಕ್’ ಪ್ರಕಟಿಸಿ ಪ್ರಸಿದ್ಧರಾಗಿದ್ದರು.

1706: ವಿಜ್ಞಾನಿಯಾಗಿ, ಲೇಖಕರಾಗಿ, ರಾಜಕಾರಣಿಯಾಗಿ, ಅಮೆರಿಕದ ಸ್ವಾತಂತ್ರ್ಯ ಸೇನಾನಿಯಾಗಿ,  ಸಂಗೀತಗಾರರಾಗಿ, ವಿಜ್ಞಾನಿಯಾಗಿ ಹೀಗೆ ಬಹುಮುಖಿಯಾಗಿ ಹೆಸರಾದ ಬೆಂಜಮಿನ್ ಫ್ರಾಂಕ್ಲಿನ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು.  ಅಮೆರಿಕದ ಪ್ರಥಮ ಪೋಸ್ಟ್ ಜನರಲ್ ಆಗಿದ್ದ  ಇವರಿಗೆ ಮಿಂಚೆಂಬುದು ವಿದ್ಯುತ್ ಸಂಬಂಧವಾದ ವಿದ್ಯಮಾನವಾಗಿ ಅರಿವಾಯಿತು.  ಅದನ್ನು ಲೋಕಕ್ಕೆ ತೋರಿಸಿಕೊಟ್ಟರಲ್ಲದೆ ಮಿಂಚುಕೋಲು, ಫ್ರಾಂಕ್ಲಿನ್ ಸ್ಟೌವ್, ಓಡೋಮೀಟರ್, ಬೈಫೋಕಲ್ ಕನ್ನಡಕದ ಗಾಜು ಹೀಗೆ ಅನೇಕ ವಸ್ತುಗಳ  ಜನಕರಾದರು.

1863: ರಷ್ಯಾದ ರಂಗಕರ್ಮಿ, ನಟ, ನಿರ್ದೇಶಕ ಕೊನ್ ಸ್ಟಾಂಟಿನ್ ಸೆರ್ಗಿಯೆವಿಚ್ ಸ್ಟಾನಿಸ್ಲಾವ್ ಸ್ಕಿ ಮಾಸ್ಕೋದಲ್ಲಿ ಜನಿಸಿದರು.  ತಮ್ಮದೇ ಆದ ಹೊಸ ನಟನಾ ತರಬೇತಿ, ಸಿದ್ಧತೆ ಮತ್ತು ತಾಲೀಮುಗಳಿಗೆ ಹೆಸರಾಗಿದ್ದ ಇವರು ಹಾಕಿಕೊಟ್ಟ ಪಂಕ್ತಿ   ‘ಸ್ಟಾನಿಸ್ಲಾವ್ ಸ್ಕಿ ಸಿಸ್ಟಮ್’ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿದೆ.

1867: ಅಮೆರಿಕದ ಚಲನಚಿತ್ರ ನಿರ್ಮಾಪಕ ಹಾಗೂ ಅತ್ಯಂತ ಪ್ರತಿಷ್ಟಿತ  ಚಲನಚಿತ್ರ ನಿರ್ಮಾಣ ಮತ್ತು ಮನರಂಜನಾ ಕಾರ್ಯಕ್ರಮ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಸ್ಟುಡಿಯೋ  ಸಂಸ್ಥಾಪಕರಲ್ಲಿ ಒಬ್ಬರಾದ  ಕಾರ್ಲ್ ಲಯೇಮ್ಲೆ ಅವರು ಜರ್ಮನಿ ದೇಶದಲ್ಲಿ ಜನಿಸಿದರು.  ಅವರು 400 ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಣಗಳಲ್ಲಿ ಭಾಗಿಯಾಗಿದ್ದರು.

1886: ಅಮೆರಿಕದ ಪಸಿದ್ಧ ವಿಮಾನ ಹಾರಾಟಗಾರ ಮತ್ತು ವಿಮಾನ ಕಾರ್ಖಾನೆಯ ಸ್ಥಾಪಕ ಗ್ಲೆನ್ ಮಾರ್ಟಿನ್  ಜನಿಸಿದರು.  ಅವರು ಸ್ಥಾಪಿಸಿದ ಮಾರ್ಟಿನ್ ಕಂಪೆನಿ, ಹಲವಾರು ಸಂಸ್ಥೆಗಳ ವಿಲೀನದೊಂದಿಗೆ ಇಂದು ಲಾಕ್ ಹೀಡ್ ಮಾರ್ಟಿನ್ ಕಂಪೆನಿ ಎಂಬ ದೊಡ್ಡ ಉದ್ಯಮವಾಗಿದೆ.

1888: ಭಾರತೀಯ ದಾರ್ಶನಿಕ ಮತ್ತು ಆಧುನಿಕ ಹಿಂದೀ ಪ್ರಾರಂಭಿಕ ಬರಹಗಾರರಲ್ಲಿ  ಪ್ರಮುಖರೆನಿಸಿರುವ  ಬಾಬು ಗುಲಾಬ್ ರೈ ಉತ್ತರದೇಶದ ಎಟಾವಾಹ್ ಎಂಬಲ್ಲಿ ಜನಿಸಿದರು.  ಇವರ ಗೌರವಾರ್ಥ ಭಾರತ ಸರ್ಕಾರವು 2002 ವರ್ಷದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತು.

1905: ಭಾರತದ ಖ್ಯಾತ ಗಣಿತ ತಜ್ಞ ದತ್ತಾತ್ರೇಯ ರಾಮಚಂದ್ರ ಕಾಪ್ರೇಕರ್  ಜನಿಸಿದರು. ‘6174′ ಸಂಖ್ಯೆಗಾಗಿ ವಿಶ್ವಖ್ಯಾತಿ ಪಡೆದಿರುವ ಇವರ ಗೌರವಾರ್ಥ ಈ ಸಂಖ್ಯೆಯನ್ನು ‘ಕಾಪ್ರೇಕರ್ ಕಾನ್ ಸ್ಟಾಂಟ್’ ಎಂದೇ ಹೆಸರಿಸಲಾಗಿದೆ.

1911: ಚಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಪ್ರಮುಖ ನೇತಾರರಾಗಿದ್ದ ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಜಾರ್ಜ್ ಸ್ಟಿಗ್ಲರ್ ಜನಿಸಿದರು.  ಎಕನಾಮಿಕ್ಸ್ ಅನ್ನು ‘ಇಂಪೀರಿಯಲ್ ಸೈನ್ಸ್’ ಎಂದು ಪ್ರತಿಪಾದಿಸಿದ್ದ ಅವರಿಗೆ 1982ರ ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರ ಪುರಸ್ಕಾರ ಸಂದಿತ್ತು.

1917: ತಮಿಳು ನಾಡಿನ ಮುಖ್ಯಮಂತ್ರಿ ಹಾಗೂ ಪ್ರಸಿದ್ಧ ಚಲನಚಿತ್ರ ನಾಯಕನಟರಾಗಿದ್ದ  ಮರುಡು ಗೋಪಾಲನ್ ರಾಮಚಂದ್ರನ್ ಶೀಲಂಕಾದ ಕ್ಯಾಂಡಿಯಲ್ಲಿ ಜನಿಸಿದರು.  ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ  ಪ್ರಥಮ ಚಿತ್ರನಟರಾದ ಇವರು, 1972ರಲ್ಲಿ  ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು. 1987ರ ವರ್ಷದಲ್ಲಿ ನಿಧನರಾದ ಇವರಿಗೆ ಮರಣೋತ್ತರವಾಗಿ 1988ರಲ್ಲಿ ‘ಭಾರತ ರತ್ನ’ ಪಶಸ್ತಿಯನ್ನು ಅರ್ಪಿಸಲಾಯಿತು.

1942: ಕ್ಯಾಷಿಯಸ್ ಕ್ಲೇ ಎಂದು ಹೆಸರು  ಬದಲಿಸಿಕೊಂಡ ಮಹಮ್ಮದ್ ಅಲಿ, ಅಮೇರಿಕಾದ ಕೆಂಟಕಿಯ ಲೌಸಿವಿಲ್ಲೆ ಎಂಬಲ್ಲಿ ಜನಿಸಿದರು.  ತಮ್ಮ ವೃತ್ತಿ ಜೀವನದಲ್ಲಿ ಮೂರು ಬಾರಿ ವಿಶ್ವ ಬಾಕ್ಸಿಂಗ್ ಹೆವಿವೈಟ್ ಚಾಂಪಿಯನ್ ಆಗಿದ್ದ ಇವರು, ತಾವಾಡಿದ್ದ 61 ಪಂದ್ಯಗಳಲ್ಲಿ 56ರಲ್ಲಿ ಜಯಿಸಿ ದಾಖಲೆ ನಿರ್ಮಿಸಿದ್ದರು.  2016ರ ವರ್ಷದಲ್ಲಿ ನಿಧನರಾದ ಇಅವರು ಟ್ರೆವರ್ ಬೆರ್ಬಿಕ್ ಅವರ ವಿರುದ್ಧ ಸೋಲುಂಡ ಬಳಿಕ 1981ರ ವರ್ಷದಲ್ಲಿ  ಬಾಕ್ಸಿಂಗಿಗೆ ವಿದಾಯ ಹೇಳಿದ್ದರು.

1945: ಕವಿ, ಜನಪ್ರಿಯ ಚಿತ್ರ ಸಾಹಿತಿ ಮತ್ತು  ಗೀತರಚನಕಾರರಾದ ಜಾವೇದ್ ಅಖ್ತರ್  ಗ್ವಾಲಿಯರ್ನಲ್ಲಿ ಜನಿಸಿದರು.  ಸಲೀಂ ಖಾನ್ ಅವರೊಂದಿಗೆ ‘ಸಲೀಂ-ಜಾವೇದ್’ ಜೋಡಿ ಎಂದು ಹೆಸರಾಗಿ 1971-82 ಅವಧಿಯಲ್ಲಿ ಇವರು ಅನೇಕ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ, ಗೀತೆ ರಚಿಸಿದ್ದರು.  ಮುಂದೆ ಏಕಾಂಗಿಯಾಗಿ ಮುಂದುವರೆದ ಇವರು, ಇದೇ ಕೆಲಸವನ್ನು  ನಿರಂತರವಾಗಿ ಮುಂದುವರೆಸಿದ್ದಾರೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ ಮತ್ತು ಹದಿಮೂರು ಬಾರಿ ಫಿಲಂ ಫೇರ್ ಪ್ರಶಸ್ತಿಗಳು ಇವರಿಗೆ ಸಂದಿವೆ.

1954: ರಾಷ್ಟ್ರ ಮಟ್ಟದ ಖ್ಯಾತಿಯ ತಬಲಾ ವಾದಕ ಪಂಡಿತ ಪಂಡಿತ್  ರಘುನಾಥ ನಾಕೋಡ್ ಅವರು ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳು ಅವರಿಗೆ ಸಂದಿವೆ.

395: ಜರ್ಮನ್ ಚಕ್ರವರ್ತಿ ಥಿಯೋಡೋಸಿಯಸ್ ನಿಧನರಾದರು.

1951: ಅಸ್ಸಾಮಿ ಕವಿ, ನಾಟಕಕಾರ ಮತ್ತು ನಿರ್ದೇಶಕ ಜ್ಯೋತಿ ಪ್ರಸಾದ್ ಆಗರವಾಲ ತೆಜಪುರದಲ್ಲಿ  ನಿಧನರಾದರು.  ಪ್ರಸಿದ್ಧ ಕವಿ, ನಾಟಕಕಾರ, ಕಲಾವಿದರಾಗಿದ್ದ ಇವರು ಅಸ್ಸಾಮಿನಲ್ಲಿ ‘ಜ್ಯೋಮತಿ’ ಎಂಬ ಚಲನಚಿತ್ರ ನಿರ್ಮಿಸುವುದರೊಂದಿಗೆ ‘ಅಸ್ಸಾಮಿ ಸಿನಿಮಾ ಜನಕ’ ಎಂದೂ ಖ್ಯಾತರಾಗಿದ್ದರು.  ಅವರ ನಿಧನದ ದಿನವನ್ನು ಆಸ್ಸಮಿನಲ್ಲಿ ‘ಶಿಲ್ಪಿ ದಿವಸ್’ ಎಂದು ಆಚರಿಸಲಾಗುತ್ತಿದೆ.

1964: ಮುಂಬೈನಲ್ಲಿ ಜನಿಸಿ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ದರಾಗಿದ್ದ ಟಿ. ಎಚ್. ವೈಟ್ ಅವರು, ಗ್ರೀಸ್ ದೇಶದ ಅಥೆನ್ಸ್ ಬಳಿಯ ಪಿರೆಯಸ್ ಎಂಬಲ್ಲಿ ನಿಧನರಾದರು.  ಅವರ ಕಾದಂಬರಿ ಸರಣಿಗಳು  ಆರ್ಥೂರಿಯನ್ ನಾವೆಲ್ಸ್ ಎಂದು ಪ್ರಸಿದ್ಧವಾಗಿವೆ.  ‘ದಿ ಒನ್ಸ್ ಅಂಡ್ ದಿ ಫ್ಯೂಚರ್ ಕಿಂಗ್’, ‘ದಿ ಸ್ವೋರ್ಡ್ ಇನ್ ದಿ ಸ್ಟೋನ್’ ಮುಂತಾದ ಕಾದಂಬರಿಗಳು ಪ್ರಸಿದ್ಧವಾಗಿವೆ.

1997: ಪ್ಲೂಟೋವನ್ನು ಅನ್ವೇಷಿಸಿದ ಅಮೆರಿಕದ ಭೌತವಿಜ್ಞಾನಿ  ಕ್ಲೈಡ್ ಟೋಂಬಾಗ್ ನ್ಯೂ ಮೆಕ್ಸಿಕೋದಲ್ಲಿ ನಿಧನರಾದರು.  1930ರಲ್ಲಿ ಅವರು ಪ್ಲೂಟೋ ಅನ್ವೇಷಿಸಿದರು.  ಆ ಸಂದರ್ಭದಲ್ಲಿ ಪ್ಲೂಟೋವನ್ನು ಒಂದು ಗ್ರಹವಾಗಿ  ಪರಿಗಣಿಸಲಾಗಿತ್ತು. ಮುಂದೆ ಅದನ್ನು ಕುಬ್ಜ ಗ್ರಹ ಎಂದು ಪರಿಗಣಿಸಲಾಗುತ್ತಿದೆ.

2002: ಸ್ಪಾನಿಷ್ ಸಾಹಿತಿ ಕಾಮಿಲೋ ಜೋಸ್ ಸೆಲ ಅವರು ಸ್ಪೇನ್ ದೇಶದಲ್ಲಿ ಜನಿಸಿದರು.  ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು.  ‘ದಿ ಫ್ಯಾಮಿಲಿ ಆಫ್ ಪಾಸ್ಕುಯಲ್ ಡುರಾಟೆ’, ‘ದಿ ಹೈವ್ಸ್’ ಅವರ ಪ್ರಸಿದ್ಧ ಕೃತಿಗಳು.

2007: ಅಂಕಣಕಾರ, ಪುಲಿಟ್ಜರ್ ಪ್ರಶಸ್ತಿ ವಿಜೇತ,  ವಿಡಂಬನಾತ್ಮಕ ಲೇಖನಗಳ ಕೃತಿಕಾರ ಆರ್ಟ್ ಬಕ್ ವಾಲ್ಡ್ ಅವರು ವಾಷಿಂಗ್ಟನ್ನಿನಲ್ಲಿ ನಿಧನರಾಧರು.

2009: ಸುಗಮ ಸಂಗೀತ ಗಾಯಕ, ಸಂಗೀತ ಸಂಯೋಜಕ ಹಾಗೂ  ನಟ  ರಾಜು ಅನಂತಸ್ವಾಮಿ ಬೆಂಗಳೂರಿನಲ್ಲಿ ನಿಧನರಾದರು.

2016: ‘ಗೀತಪ್ರಿಯ’ ಎಂಬ ಹೆಸರಿನಿಂದ ಪ್ರಸಿದ್ಧರಾದ  ಕನ್ನಡ ಚಿತ್ರರಂಗದ ಗೀತರಚಕಾರರೂ ಮತ್ತು ನಿರ್ದೇಶಕರೂ ಆದ ಲಕ್ಷ್ಮಣರಾವ್ ಮೋಹಿತೆ ನಿಧನರಾದರು.  ಇವರ ಮಣ್ಣಿನ ಮಗ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ.  ಇದಲ್ಲದೆ  ಹೊಂಬಿಸಿಲು, ಬೆಸುಗೆ, ಬೆಳುವಲದ ಮಡಿಲಲ್ಲಿ ಮುಂತಾದ  ನೆನಪಿನಲ್ಲಿ ಉಳಿಯುವ ಚಿತ್ರಗಳೂ ಸೇರಿದಂತೆ  32 ಚಿತ್ರಗಳನ್ನು ನಿರ್ದೇಶಿಸಿ ನೂರಾರು  ಗೀತೆಗಳನ್ನು ರಚಿಸಿದ ಗೀತಪ್ರಿಯರ ರಚನೆ  ಮಹ್ಮಮ್ಮದ್ ರಫಿ ಹಾಡಿದ  ‘ನೀನೆಲ್ಲಿ ನಡೆವೆ ದೂರ’ ಇಂದಿಗೂ ಜನಪ್ರಿಯ.

Categories
e-ದಿನ

ಜನವರಿ-16

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 27: ಜೂಲಿಯಸ್ ಸೀಸರನಿಗೆ  ರೋಮನ್ ಸೆನೆಟ್ ‘ಅಗಸ್ಟಸ್’ ಬಿರುದನ್ನು ನೀಡಿತು.  ಇದರಿಂದಾಗಿ  ರೋಮನ್ ಚಕ್ರಾಧಿಪತ್ಯಕ್ಕೆ ನಾಂದಿ ಹಾಡಿದಂತಾಯಿತು.

1362: ‘ನಾರ್ತ್ ಸೀ’ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಅಲೆಯಲ್ಲಿ ಇಂಗ್ಲೆಂಡಿನ ಪೂರ್ವ ತೀರವನ್ನು ಧ್ವಂಸಮಾಡಿತಲ್ಲದೆ, ಸ್ಟ್ರಾಂಡ್ ದ್ವೀಪದ ರಂಗ್ ಹೋಲ್ಟಿನಲ್ಲಿದ್ದ ಜರ್ಮನಿ ನಗರವನ್ನು ನಾಶಮಾಡಿತು

1547: ರಷ್ಯಾದ ತ್ಸಾರ್ ದೊರೆಯಾಗಿ ಇವಾನ್ ಎಂಬಾತನ ಸಿಂಹಾಸನಾರೋಹಣ ನಡೆಯಿತು. ‘ತ್ಸಾರ್’ (Czar) ಎಂಬುದಾಗಿ ಹೆಸರು ಇಟ್ಟುಕೊಂಡ ಮೊದಲ ರಷ್ಯಾದ ಆಡಳಿತಗಾರ ಈತ.

1707: ಸ್ಕಾಟಿಷ್ ಪಾರ್ಲಿಮೆಂಟು ‘ಆಕ್ಟ್ ಆಫ್ ಯೂನಿಯನ್’ ಅನ್ನು ಅಂಗೀಕರಿಸಿತು.  ಇದರಿಂದಾಗಿ ಗ್ರೇಟ್ ಬ್ರಿಟನ್ ಸೃಷ್ಟಿಗೆ ಹಾದಿಯಾಯಿತು.

1761: ಬ್ರಿಟಿಷ್ ಸೇನೆ ಫ್ರೆಂಚರಿಂದ ಪಾಂಡಿಚೇರಿಯನ್ನು ವಶಪಡಿಸಿಕೊಂಡಿತು.

1786: ವರ್ಜೀನಿಯಾವು ಥಾಮಸ್ ಜೆಫರ್ಸನ್ ಸೃಷ್ಟಿಸಿದ  ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಅಳವಡಿಸಿಕೊಂಡಿತು.

1920: ಪ್ರಥಮ ವಿಶ್ವಮಹಾಯುದ್ಧದ ನಂತರ ಮುಂದೆ ಅಂತಹ ಯುದ್ಧಗಳು ನಡೆಯದಂತೆ ತಡೆಯಲು ಹಲವಾರು ರಾಷ್ಟ್ರಗಳು ಒಟ್ಟಿಗೆ ಸೇರಿ ಲೀಗ್ ಆಫ್ ನೇಷನ್ಸ್ ಸ್ಥಾಪಿಸಿದವು.  ಇದರ ಮೊದಲ ಸಭೆ ಪ್ಯಾರಿಸ್ಸಿನಲ್ಲಿ ನಡೆಯಿತು.  ಮುಂದೆ ಎರಡನೇ ಮಹಾಯುದ್ಧ ನಡೆದು ಲೀಗ್ ಆಫ್ ನೇಷನ್ಸ್ ಉದ್ದೇಶ ವಿಫಲವಾದ ಹಿನ್ನೆಲೆಯಲ್ಲಿ, ಎರಡನೇ ಮಹಾಯುದ್ಧದ ನಂತರದಲ್ಲಿ ಇದು ತನ್ನ ಅಸ್ತಿತ್ವವನ್ನು ಕಳೆದುಕೊಂಡು, ವಿಶ್ವಸಂಸ್ಥೆ ಹುಟ್ಟಿಕೊಂಡಿತು.

1936: ಅಮೆರಿಕಾದ ರೇಸ್ ಟ್ರ್ಯಾಕಿನಲ್ಲಿ ಮೊತ್ತ ಮೊದಲ ಫೊಟೋ ಫಿನಿಶ್ ಕ್ಯಾಮರಾವನ್ನು ಅಳವಡಿಸಲಾಯಿತು. ಫ್ಲಾರಿಡಾದಲ್ಲಿ ಕುದುರೆಗಳ ಓಟ ಗಮನಿಸಿಲು `ಎಲೆಕ್ಟ್ರಿಕ್ ಕಣ್ಣು’ ಬಳಸಲಾಯಿತು.

1945: ಅಡಾಲ್ಫ್ ಹಿಟ್ಲರನು ನೆಲಮಾಳಿಗೆಯಾದ  ಫುಹ್ರೇರ್ ಬಂಕರ್ ಅನ್ನು ಪ್ರವೇಶಿಸಿದನು.

1955: ಪುಣೆಯ ಖಡಕವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಆರಂಭಗೊಂಡಿತು. ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರು 1949 ಅಕ್ಟೋಬರ್ 6ರಂದು ಶಿಲಾನ್ಯಾಸ ನೆರವೇರಿಸಿದ್ದರು.

1964: ಸಂಗೀತ ಪ್ರಧಾನ ಇಂಗ್ಲಿಷ್ ಹಾಸ್ಯ ನಾಟಕ ‘ಹಲೋ ಡಾಲಿ’ ಬ್ರಾಡ್ವೇ ರಂಗಮಂದಿರದಲ್ಲಿ ಪ್ರಾರಂಭಗೊಂಡಿತು.  ಇದು 2844 ಪ್ರದರ್ಶನಗಳನ್ನು ಕಂಡಿತ್ತು.

1969: ಸೋವಿಯತ್ ಬಾಹ್ಯಾಕಾಶ ವಾಹನಗಳಾದ ಸೋಯುಜ್ 4 ಮತ್ತು ಸೋಯುಜ್ 5, ಒಂದರಿಂದ ಮತ್ತೊಂದಕ್ಕೆ  ಮನುಷ್ಯರನ್ನು ಪ್ರವೇಶಿಸುವುದನ್ನು ಅನುವು ಮಾಡಿಕೊಟ್ಟವು.  ಬಾಹ್ಯಾಕಾಶ ಕಕ್ಷೆಯಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಗಗನ ನಡಿಗೆಯ ಮೂಲಕ ಪ್ರವೇಶ ನಡೆದದ್ದು ಇದೊಂದೇ ಬಾರಿ.

1979: ಇರಾನಿನ ಶಹಾ ಮೊಹಮ್ಮದ್ ರೇಝಾ ಶಹಾ ಪಹ್ಲವಿ ಅವರು ಇರಾನ್ ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಈಜಿಪ್ಟಿಗೆ ವಲಸೆ ಹೋದರು.   ಆಯಾತುಲ್ಲಾ  ಖೊಮೇನಿ ಇರಾನಿನ ಆಡಳಿತವನ್ನು ತಮ್ಮ  ವಶಕ್ಕೆ ತೆಗೆದುಕೊಂಡರು.

1992: ಮೆಕ್ಸಿಕೋದಲ್ಲಿ ಇ.ಐ. ಸಲ್ವಾಡಾರ್ ಮತ್ತು ವಿರೋಧಿ ತಂಡಗಳ ನಡುವೆ ಚಾಪುಲ್ಟೆಪೆಕ್ ಶಾಂತಿ ಒಪ್ಪಂದ ಏರ್ಪಟ್ಟು, 12 ವರ್ಷಗಳ ಸುದೀರ್ಘ ಕಾಲದವರೆಗೆ 75000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ  ಸಾಲ್ವಡೊರಾನ್ ಆಂತರಿಕ  ಕ್ರಾಂತಿ ಹೋರಾಟ ಮುಕ್ತಾಯ ಕಂಡಿತು.

1997: ಕಾರ್ಮಿಕ ಧುರೀಣ ದತ್ತಾ ಸಾಮಂತ್ ಅವರನ್ನು ಮುಂಬೈಯಲ್ಲಿ ಗುಂಡಿಕ್ಕಿ ಕೊಲೆಗೈಯಲಾಯಿತು.

2003: ಮಿಷನ್ ಎಸ್.ಟಿ.ಎಸ್ – 107ನ್ನು ಹೊತ್ತ  ಕೊಲಂಬಿಯಾ ತನ್ನ ಕೊನೆಯ ಗಗನಯಾನವನ್ನು ಕೈಗೊಂಡಿತು.  ಇದಾದ 16 ದಿನಗಳ ನಂತರದಲ್ಲಿ ಕೊಲಂಬಿಯಾವು ತನ್ನ ಮುಂದಿನ ಮರುಪ್ರವೇಶದಲ್ಲಿ ವಿಭಜನೆಗೊಂಡಿತು.

2006: ಮಿಷೆಲ್ ಬಾಸೆಲೆಟ್ ಚಿಲಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು. ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಅಧ್ಯಕ್ಷ ಸ್ಥಾನವೊಂದಕ್ಕೆ ಆಯ್ಕೆಯಾಗಿರುವ ಎರಡನೆಯ ಮಹಿಳೆ.

2007: ವರ್ಲ್ಡ್ ಎಕನಾಮಿಕ್ ಫೋರಂ ಪ್ರಕಟಿಸಿದ 2007 ಸಾಲಿನ ಜಾಗತಿಕ ಯುವ ನಾಯಕರ ಪಟ್ಟಿಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ಜನಾಗ್ರಹ ಸಂಸ್ಥೆಯ ಸಂಸ್ಥಾಪಕ ರಮೇಶ ರಾಮನಾಥನ್, ಸಂಸದರಾದ ಓಮರ್ ಅಬ್ದುಲ್ಲ, ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್,  ಅರವಿಂದ್ ಕೇಜ್ರಿವಾಲ ಸ್ಥಾನ ಪಡೆದರು.

2007: ಲಂಡನ್ನಿನ ಚಾನೆಲ್ 4ರ ರಿಯಾಲಿಟಿ ಶೋ  ‘ಬಿಗ್ ಬ್ರದರ್’ ನಲ್ಲಿ ಅವಕಾಶ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು, “ತಾನು  ಭಾರತೀಯಳೆಂಬ ಕಾರಣಕ್ಕಾಗಿ ಇತರ ಸ್ಪರ್ಧಿಗಳಿಂದ ಜನಾಂಗೀಯ ನಿಂದೆ ಹಾಗೂ ಅವಹೇಳನಕ್ಕೆ ಗುರಿಯಾಗಬೇಕಾಯಿತೆಂದು”  ಕಣ್ಣೀರಿಟ್ಟರು. ಕಾರ್ಯಕ್ರಮದ ನಿರ್ಮಾಪಕರು ಈ ಪ್ರಕರಣದ ತನಿಖೆಗೆ ಆದೇಶಿಸಿದರು.

2007: ದ ಟೈಮ್ಸ್ ಆಫ್ ಇಂಡಿಯಾ ದೈನಿಕದ ಕನ್ನಡ ಆವೃತ್ತಿ ‘ದ ಟೈಮ್ಸ್ ಆಫ್ ಇಂಡಿಯಾ ಕನ್ನಡ’ ಮಾರುಕಟ್ಟೆ ಪ್ರವೇಶಿಸಿತು.

2008: ಚೀನಾದ ಸಿಸಿಟಿವಿ-9 ವಾಹಿನಿಗೆ ಭಾರತದಲ್ಲಿ ಡೌನ್ ಲೋಡ್ ಮಾಡಲು ಅನುಮತಿ ನೀಡಲಾಯಿತು. ಇದರಂತೆ ಝೀ ಟಿವಿ ಪ್ರಸಾರಕ್ಕೆ ಚೀನಾ ಒಪ್ಪಿದೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿದವು.

2009: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವುದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು ಹಾಗೂ ಎಲ್ಲಾ ನಾಗರಿಕರಿಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ದೇಶದ ಎಲ್ಲಾ ನಾಗರಿಕರ ನೋಂದಣಿ ಮಾಡಲು ಹಾಗೂ ಗುರುತಿನ ಚೀಟಿ ವಿತರಿಸಲು ರಾಷ್ಟ್ರೀಯ ನೋಂದಣಿ ಪ್ರಾಧಿಕಾರವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ಪಿ. ಸದಾಶಿವಂ ಮತ್ತು ಜೆ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

2009: ಕನ್ನಡ ಸಾಹಿತ್ಯದ ಸೃಜನೇತರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರನ್ನು 2008ನೇ ಸಾಲಿನ ‘ಪಂಪ ಪ್ರಶಸ್ತಿ’ಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿತು.

ಪ್ರಮುಖಜನನ/ಮರಣ:

1920: ಪ್ರಸಿದ್ಧ ನ್ಯಾಯವಾದಿ, ಗ್ರಂಥಕರ್ತ, ಆರ್ಥಿಕ ತಜ್ಞ, ಭಾಷಣಕಾರ  ನಾನಿ ಪಾಲ್ಖೀವಾಲ ಮುಂಬೈನಲ್ಲಿ ಜನಿಸಿದರು.  ‘ಸಾಂವಿಧಾನಿಕ ತಿದ್ದುಪಡಿಗಳನ್ನು ನ್ಯಾಯಾಂಗವು ಪ್ರಶ್ನಿಸುವಂತಿಲ್ಲ’  ಎಂಬ ಸರ್ಕಾರದ ವಾದವನ್ನು ಸುಪ್ರೀಂಕೋರ್ಟಿನಲ್ಲಿ ಹಲವು ಕಾಲಗಳವರೆಗೆ ಹೋರಾಡಿ “ಪಾರ್ಲಿಮೆಂಟಿನಲ್ಲಿ ತಿದ್ದುಪಡಿಗಳನ್ನು ಮಾಡಬಹುದೇ ಹೊರತು ಆ ತಿದ್ದುಪಡಿಗಳು ಸಂವಿಧಾನದ ಮೂಲಭೂತ ಅಡಿಪಾಯಗಳನ್ನು ಧ್ವಂಸಗೊಳಿಸಲು ಅಧಿಕಾರವಿಲ್ಲ” ಎಂಬ ಪ್ರಸಿದ್ಧ ತೀರ್ಪು ಬರಲು ಪಾಲ್ಖೀವಾಲ ಕಾರಣರಾದರು.

1923: ಲಾಭದ ಉದ್ದೇಶವಿಲ್ಲದೆ ಸ್ಥಾಪನೆಗೊಂಡ ನ್ಯೂಯಾರ್ಕಿನ ಪ್ರಸಿದ್ಧ  ರೌಂಡ್ ಎಬೌಟ್ ರಂಗಮಂದಿರ ಸ್ಥಾಪಕರಲ್ಲೊಬ್ಬರಾದ  ಅಮೆರಿಕನ್ ರಂಗ ತಜ್ಞ ಜೆನೆ ಫೀಸ್ಟ್ ಜನಿಸಿದರು.

1946: ಸೂತ್ರಧಾರ ನಾಟಕ ತಂಡದ ಸ್ಥಾಪಕರಲ್ಲೊಬ್ಬರಾದ  ‘ಸೂತ್ರಧಾರ ರಾಮಯ್ಯ’ ಅವರು ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು. ಸೂತ್ರಧಾರ ನಾಟಕ ತಂಡವನ್ನು ಕಟ್ಟಿದ್ದಲ್ಲದೆ, ಕಲಾವಿದರಾಗಿ ಹಾಗೂ  ಸೂತ್ರಧಾರ ವಾರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿರುವ ಇವರಿಗೆ ಕರ್ನಾಟಕ ನಾಟಕ ಅಕಾಡಮಿಯಿಂದ 2000 ವರ್ಷದ ಪ್ರಶಸ್ತಿ ಸಂದಿದೆ.

1901: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ  ಪುಣೆಯಲ್ಲಿ ನಿಧನರಾದರು.

1938: ಪ್ರಖ್ಯಾತ ಬಂಗಾಳಿ ಕಾದಂಬರಿಕಾರ ಮತ್ತು ಕಥೆಗಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರು ಕೋಲ್ಕತ್ತಾದಲ್ಲಿ ನಿಧನರಾದರು.

1989: ಖ್ಯಾತ ಮಲಯಾಳಂ ಚಲನಚಿತ್ರ ನಟ ಪ್ರೇಮ್ ನಜೀರ್ ನಿಧನರಾದರು. ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನ ಪಾತ್ರವಹಿಸಿ ದಾಖಲೆ ನಿರ್ಮಿಸಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

Categories
e-ದಿನ

ಜನವರಿ-15

ದಿನಾಚರಣೆ
ಭಾರತದಲ್ಲಿ ಮಕರ ಸಂಕ್ರಾಂತಿ, ಮಾಘಿ, ಮಾಘೇ, ಪೊಂಗಲ್, ಉತ್ತರಾಯಣ ಹೀಗೆ ವಿವಿಧ ರೀತಿಯ ಸಂಭ್ರಮ
ಭಾರತದ ಎಲ್ಲ ಭಾಗಗಳಲ್ಲೂ ಸುಗ್ಗಿ ಸಂಭ್ರಮ ಅಥವಾ ಹೊಲಗದ್ದೆಗಳಲ್ಲಿ ಬೆಳಯ ಕಟಾವು ಸಂಭ್ರಮ, ಪರಿಸರಕ್ಕೆ ಕೃತಜ್ಞತೆ, ವಿವಿಧ ರೀತಿಯ ಸಂಸ್ಕೃತಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವಗಳನ್ನು ಹೊಸೆದುಕೊಂಡಿರುವ ವಿಶಿಷ್ಟ ಆಚರಣೆ ಸಂಕ್ರಾಂತಿ. ಒಂದು ದಿನದಿಂದ ಮೂರು ನಾಲ್ಕು ದಿನಗಳವರೆಗೆ ಈ ಹಬ್ಬ ವಿಧ ವಿಧಗಳಲ್ಲಿ ಹಲವು ಹೆಸರುಗಳಲ್ಲಿ ನಡೆಯುತ್ತವೆ.
ಅಸ್ಸಾಂನಲ್ಲಿ ಮಾಘ್ ಬಿಹು;
ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಮಾಘಿ;
ಭಾರತದ ಹಲವು ಕಡೆಗಳಲ್ಲಿ ಮಕರ ಸಂಕ್ರಾಂತಿ;
ಭೋಗೀ ಹಬ್ಬ;
ಎಳ್ಳು ಬೆಲ್ಲ ಹಬ್ಬ;
ನೇಪಾಳದಲ್ಲಿ ಮಾಘೇ ಸಂಕ್ರಾಂತಿ;ತಮಿಳು ನಾಡಿನಲ್ಲಿ ಥೈ ಪೊಂಗಲ್ ಹಬ್ಬ;
ಸುಗ್ಗೀ ಹಬ್ಬ
ಉತ್ತರಖಾಂಡ್, ಗುಜರಾತ್ ಮತ್ತು ರಾಜಾಸ್ಥಾನದಲ್ಲಿ ಉತ್ತರಾಯಣ
ಇತ್ಯಾದಿ, ಇತ್ಯಾದಿ,

ವಿಕಿಪೀಡಿಯಾ ದಿನ
ಅಂತರಜಾಲ ವಿಶ್ವಕೋಶಗಳಲ್ಲಿ ಪ್ರಮುಖವಾದ ವಿಕಿಪೀಡಿಯಾ 2001ರ ವರ್ಷದ ಜನವರಿ 15ರಂದು ಸಾರ್ವತ್ರಿಕವಾಗಿ ಲಭ್ಯವಾಯ್ತು. ಇದಕ್ಕೆ ಒಂದೈದು ದಿನ ಇದು ನ್ಯುಪೀಡಿಯಾ ಎಂಬ ಹೆಸರಿನಲ್ಲಿ ಅಂತರಜಾಲದಲ್ಲಿತ್ತು. ವಿಶ್ವದಲ್ಲಿ ಯಾರು ಬೇಕಾದರೂ ಜ್ಞಾನವನ್ನು ಸೇರಿಸಬಹುದಾದ ಮುಕ್ತ ವಿಶ್ವಕೋಶವಾಗಿರುವ ವಿಕಿಪೀಡಿಯಾ, ಇದುವರೆವಿಗೂ 295 ಭಾಷೆಗಳಲ್ಲಿ ಲಭ್ಯವಿದ್ದು ಅವುಗಳಲ್ಲಿ 284 ಕ್ರಿಯಾಶೀಲವಾಗಿವೆ. ವಿಕಿಪೀಡಿಯಯಾದಲ್ಲಿ ಲೇಖನ ಸೇರಿಸುವ ವಿಕಿಪೀಡಿಯನ್ನರು ವಿವಿಧೆಡೆಗಳಲ್ಲಿ ಹಾಗೂ ಅಂತರಜಾಲ ಸಂಪರ್ಕ ಮುಖೇನ ಒಂದಾಗಿ ಸೇರಿ ಈ ದಿನವನ್ನು ಹಲವು ರೀತಿಗಳಲ್ಲಿ ಸಂಭ್ರಮಿಸುತ್ತಾರೆ.

ಭಾರತೀಯ ಸೇನಾ ದಿನ

ಭಾರತದ ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15ರಂದು ಆಚರಿಸಲಾಗುತ್ತದೆ. 1949ರ ಈ ದಿನದಂದು, ನಮ್ಮ ಕೊಡಗಿನವರಾದ ಫೀಲ್ಡ್ ಮಾರ್ಷಲ್ ಕೊಡನಂದೇರಾ ಮಾದಪ್ಪ ಕಾರ್ಯಪ್ಪ ಅವರು, ಸ್ವತಂತ್ರ ಭಾರತೀಯ ಸೇನೆಯ ಮೊಟ್ಟಮೊದಲ ಕಮಾಂಡ್ ಇನ್ ಚೀಫ್ ಆಗಿ ನಿಯುಕ್ತರಾದರು. ಭಾರತೀಯ ಸೈನಿಕರಲ್ಲಿ ಸ್ಫೂರ್ತಿ ತುಂಬುವ ಈ ಆಚರಣೆ, ಎಲ್ಲ ಪ್ರತೀಕೂಲ ಪರಿಸ್ಥಿತಿ ಮತ್ತು ಸವಾಲುಗಳ ನಡುವೆಯೂ, ದೇಶದ ರಕ್ಷಣೆಗಾಗಿ ಹಗಲಿರುಳೂ ಶ್ರಮಿಸುವ ಭಾರತೀಯ ಸೇನೆಯ ಸಮರ್ಪಣಾ ಮನೋಭಾವದ ಕುರಿತು ದೇಶಿಗರು ಚಿಂತಿಸುವ ಕ್ಷಣವೂ ಆಗಿದೆ. ಸೇನಾ ಕೇಂದ್ರ ಕಚೇರಿಗಳಲ್ಲಿ ಹಾಗೂ ರಾಷ್ಟ್ರದ ರಾಜಧಾನಿಯಲ್ಲಿ ಈ ಆಚರಣೆಯ ಪ್ರತೀಕವಾದ ಸೇನಾ ಕವಾಯತು ಪ್ರದರ್ಶನಗಳು ನಡೆಯುತ್ತವೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 69: ಓಥೋ ಕಾರ್ಯಾಚರಣೆ ನಡೆಸಿ ರೋಮ್ ಅಧಿಪತ್ಯದ ಆಡಳಿತವನ್ನು ಆಕ್ರಮಿಸಿಕೊಂಡು ತನ್ನನ್ನು ಚಕ್ರಾಧಿಪತಿ ಎಂದು ಘೋಷಿಸಿಕೊಂಡ.  ಆದರೆ, ಕೇವಲ ಮೂರು ತಿಂಗಳು ಮಾತ್ರಾ ಅಧಿಕಾರ ನಡೆಸಿ ಆತ್ಮಹತ್ಯೆ ಮಾಡಕೊಂಡ

1559: ಮೊದಲನೇ  ಎಲಿಜಬೆತ್ ಅವರು ಇಂಗ್ಲೆಂಡ್ ಮತ್ತು ವೆಸ್ಟ್ ಮಿನಿಸ್ಟರ್ ಅಬ್ಬೆಯ ರಾಣಿಯಾದರು.

1759: ಪ್ರಸಿದ್ಧ ಬ್ರಿಟಿಷ್ ವಸ್ತುಸಂಗ್ರಹಾಲಯವು ‘ಮಾಂಟಗೋ ಹೌಸ್’ನಲ್ಲಿ ಪ್ರಾರಂಭಗೊಂಡಿತು.  ಈ ಸಂಗ್ರಹಾಲಯದಲ್ಲಿ ಪ್ರಸಕ್ತದಲ್ಲಿ  80 ಲಕ್ಷಕ್ಕೂ ಹೆಚ್ಚು ವಸ್ತುಗಳಿವೆ.

1782: ಅಮೇರಿಕದ ಕಾಂಗ್ರೆಸ್ ಮುಂದೆ, ಆರ್ಥಿಕ ಸೂಪರಿಂಟೆಂಡೆಂಟರಾದ ರಾಬರ್ಟ್ ಮೋರಿಸ್ ಅವರು ರಾಷ್ಟ್ರೀಯ ಮಟ್ಟದಲ್ಲಿ ನಾಣ್ಯಗಳನ್ನು ತಯಾರಿಸುವ  ಮಿಂಟ್ ವ್ಯವಸ್ಥೆಯನ್ನು ನಿರ್ಮಿಸಿ ನಾಣ್ಯಗಳನ್ನು ತಯಾರಿಸುವ ಪ್ರಸ್ತಾಪವನ್ನು ಮುಂದಿರಿಸಿದರು.

1870: ರಾಜಕೀಯದ ಕುರಿತಾದ ಪ್ರಥಮ ವ್ಯಂಗ್ಯಚಿತ್ರ ಮೂಡಿಬಂತು.  “ಎ ಲೈವ್ ಜಕಾಸ್ ಕಿಕ್ಕಿಂಗ್ ಡೆಡ್ ಲಯನ್” ಎಂಬ ಥಾಮಸ್ ನಾಸ್ಟ್ ಅವರು ಮೂಡಿಸಿದ ವ್ಯಂಗ್ಯಚಿತ್ರವು ಹಾರ್ಪರ್ಸ್ ವೀಕ್ಲಿ ಪತ್ರಿಕೆಯಲ್ಲಿ  ಪ್ರಕಟಗೊಂಡಿತು.  ಈ ವ್ಯಂಗ್ಯ ಚಿತ್ರವು ಡೆಮೊಕ್ರಾಟಿಕ್ ಪಕ್ಷವನ್ನು ಕತ್ತೆಯಂತೆ ಬಿಂಬಿಸಿತ್ತು.

1889: ಪೆಂಬರ್ಟನ್ ಮೆಡಿಸನ್ ಎಂಬ ಹೆಸರಿನಲ್ಲಿ ‘ದಿ ಕೋಕಾ-ಕೋಲಾ ಕಂಪೆನಿ’ಯು ಅಟ್ಲಾಂಟ ನಗರದಲ್ಲಿ ಪ್ರಾರಂಭಗೊಂಡಿತು.

1908: ಆಲ್ಫಾ ಕಪ್ಪ ಅಲ್ಫಾ ಸೊರಾರಿಟಿ ಎಂಬ ಗ್ರೀಕ್ ಆಕ್ಷರದ ಸಂಸ್ಥೆ  ಆಫ್ರಿಕನ್ ಅಮೆರಿಕನ್ ಮಹಿಳೆಯರ ಕಾಲೇಜಿನಲ್ಲಿ ಆರಂಭಗೊಂಡಿತು.

1910: ಅಂದಿನ ದಿನದಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ ಆಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿದ್ದ, 325 ಅಡಿ ಎತ್ತರದ ‘ಬಫೆಲೋ ಬಿಲ್ ಡ್ಯಾಮ್’, ಅಮೇರಿಕಾದ  ವ್ಯೋಮಿಂಗ್ ಬಳಿಯ ಪಾರ್ಕ್ ಕೌಂಟಿ ಎಂಬಲ್ಲಿ ಪೂರ್ಣಗೊಂಡಿತು.

1934: ನೇಪಾಳ ಮತ್ತು ಬಿಹಾರದ ಪ್ರಾಂತ್ಯಗಳನ್ನು ಜರ್ಜರಿಸಿದ 8 ಪ್ರಮಾಣದ ಭೂಕಂಪದಲ್ಲಿ 6,000 ದಿಂದ 10,700 ಜನರು ಸಾವಿಗೀಡಾದರು.

1936: ಪೂರ್ಣವಾಗಿ ಗಾಜಿನಿಂದಾವೃತವಾದ ಕಟ್ಟಡವನ್ನು ‘ಓವೆನ್ಸ್ – ಇಲ್ಲಿನಾಯ್ಸ್ ಗ್ಲಾಸ್ ಕಂಪೆನಿ’ಗಾಗಿ ಒಹಿಯೋದ ಟೊಲೇಡೋ ಎಂಬಲ್ಲಿ ನಿರ್ಮಿಸಲಾಯಿತು.

1943: ‘ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್’ ಸಂಸ್ಥೆಯ ಪ್ರಧಾನ ಕಚೇರಿಯಾದ ‘ಪೆಂಟಾಗನ್’, ವರ್ಜೀನಾಯಾದ ಅರ್ಲಿಂಗ್ಟನ್ ಎಂಬಲ್ಲಿ ಕಾರ್ಯಾರಂಭ ಮಾಡಿತು.

1949: ಜನರಲ್ ಕೆ.ಎಂ. ಕಾರಿಯಪ್ಪ ಅವರು ಭಾರತದ ಪ್ರಪ್ರಥಮ ಸೇನಾ ದಂಡನಾಯಕರಾಗಿ ಸರ್ ರಾಯ್ ಬೌಚರ್ ಅವರಿಂದ ಅಧಿಕಾರ ವಹಿಸಿಕೊಂಡರು. 1986ರ ವರ್ಷದಲ್ಲಿ ಇವರಿಗೆ  ‘ಫೀಲ್ಡ್ ಮಾರ್ಷಲ್’ ಗೌರವವನ್ನು ದೇಶ ಸಮರ್ಪಿಸಿತು.

1969: ಸೋವಿಯತ್ ಯೂನಿಯನ್ ‘ಸೋಯುಜ್ 5’ ಬಾಹ್ಯಾಕಾಶ  ನೌಕೆಯನ್ನು ಉಡಾಯಿಸಿತು.

1973: ಶಾಂತಿಪೂರ್ವಕ ಮಾತುಕತೆಗಳಲ್ಲಿ ಕಂಡುಬಂದ ಪ್ರಗತಿಯ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಉತ್ತರ ವಿಯೆಟ್ನಾಮ್ ನಲ್ಲಿ ನಡೆಸುತ್ತಿರುವ ಆಕ್ರಾಮಕ  ಕಾರ್ಯಾಚರಣೆಗೆ ತಾತ್ಕಾಲಿಕ ತಡೆಯನ್ನು ಘೋಷಿಸಿದರು.

1986: ಇಂಡಿಯನ್ ಏರ್ಲೈನ್ಸ್ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ  ಕೂಡಿದ  ಮೊಟ್ಟ ಮೊದಲ ವಾಣಿಜ್ಯ ಪ್ರಯಾಣಿಕರ ವಿಮಾನ ಹಾರಾಟ ನಡೆಸಿತು. ಕ್ಯಾಪ್ಟನ್ ಸೌದಾಮಿನಿ ದೇಶಮುಖ್ ಮತ್ತು ಸಹ ಪೈಲಟ್ ನಿವೇದಿತಾ ಭಾಸಿನ್ ಅವರುಗಳು,  ಇಬ್ಬರು ಗಗನಸಖಿಯರ ನೆರವಿನೊಂದಿಗೆ ಐಸಿ 258 ವಿಮಾನವನ್ನು ಸಿಲ್ಚಾರ್ನಿಂದ ಕೋಲ್ಕತ್ತಾ ಹಾರಿಸಿದರು.

1991: ವಿಶ್ವಸಂಸ್ಥೆಯು ಇರಾಖಿಕೆ,  ಕುವೈತಿನಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ನೀಡಿದ್ದ ಗಡುವು ಅಂತ್ಯಗೊಂಡಿತು.  ಇದು ‘ಆಪರೇಶನ್ ಡೆಸರ್ಟ್ ಸ್ಟಾರಂ ಕಾರ್ಯಾಚರಣೆ’ ಸಿದ್ಧತೆಗೆ ಇಂಬುಗೊಟ್ಟಿತು.

2001: ವಿಕಿಪೀಡಿಯಾವು ಅಂತರಜಾಲದಲ್ಲಿ ಸ್ಥಾಪಿತಗೊಂಡಿತು.

2005: ಯೂರೋಪಿನಲ್ಲಿನ ಹಲವು ದೇಶಗಳ ಸಹಕಾರದಲ್ಲಿ ಮೂಡಿರುವ  ‘ಯೂರೋಪಿಯನ್ ಸ್ಪೇಸ್ ಏಜೆನ್ಸಿ’ (ESA), ಚಂದ್ರನ ಮೇಲೆ  ಸುತ್ತಿಸಿದ ‘ಸ್ಮಾರ್ಟ್-1’ ಕಕ್ಷಾಗಾಮಿಯು, ಅಲ್ಲಿ ಕ್ಯಾಲ್ಸಿಯಂ, ಅಲ್ಯೂಮಿನಿಯಂ, ಸಿಲಿಕಾನ್, ಕಬ್ಬಿಣ ಮತ್ತಿತರ ಅಂಶಗಳನ್ನು ಪತ್ತೆಹಚ್ಚಿರುವುದಾಗಿ ವರದಿಮಾಡಿದೆ.

2008: ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವಿರೇನ್ ರಸ್ಕಿನ ಅವರು ಅಂತಾರಾಷ್ಟ್ರೀಯ ಹಾಕಿಗೆ  ವಿದಾಯವನ್ನು, ಮುಂಬೈನಲ್ಲಿ ಪ್ರಕಟಿಸಿದರು.

2008: ಮಹಾರಾಷ್ಟ್ರದ ದಾಬೋಲ್ ಮತ್ತು ಬೆಂಗಳೂರು ನಡುವಣ ಅನಿಲ ಸರಬರಾಜು ಕೊಳವೆ ಮಾರ್ಗ ಸ್ಥಾಪಿಸುವ ಪ್ರಸ್ತಾವಕ್ಕೆ ರಾಷ್ಟ್ರದ ಪ್ರಮುಖ ಅನಿಲ ಸರಬರಾಜು ಸಂಸ್ಥೆಯಾದ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್ ಇಂಡಿಯಾ)ದ ನಿರ್ದೇಶಕ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು.

2008: ನೇಪಾಳದ ಈಶಾನ್ಯ ಪ್ರದೇಶದಲ್ಲಿರುವ ಲುಕ್ಲಾ ವಿಮಾನ ನಿಲ್ದಾಣಕ್ಕೆ,  ಮೊಟ್ಟ ಮೊದಲು ಮೌಂಟ್ ಎವರೆಸ್ಟ್ ಏರಿದ  ತೇನ್ಸಿಂಗ್ ಮತ್ತು ಹಿಲರಿ ಗೌರವಾರ್ಥ ‘ಹಿಲರಿ ತೇನ್ ಸಿಂಗ್ ವಿಮಾನ ನಿಲ್ದಾಣ’ ಎಂದು ಅಲ್ಲಿನ  ಸರ್ಕಾರ ಮರು ನಾಮಕರಣ ಮಾಡಿತು.

2009: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಮಹಾ ನಿರ್ದೇಶಕರಾಗಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಕೆ.ಎನ್. ಶ್ರೀವಾತ್ಸವ  ನೇಮಕಗೊಂಡರು.

2009: ಆರ್ಥಿಕ ಹಿಂಜರಿಕೆ ಪರಿಣಾಮ ಮುಂದುವರೆದು, ಕೆನಡಾ ಮೂಲದ ದೂರಸಂಪರ್ಕ ಸಾಧನ ಮತ್ತು ಮೂಲ ಸೌಕರ್ಯ ಸೇವಾ ಸಂಸ್ಥೆಯಾದ   ‘ನಾರ್ಟೆಲ್ ನೆಟ್‌ವರ್ಕ್ಸ್ ಕಾರ್ಪೊರೇಷನ್ ‘ ಬಹುತೇಕವಾಗಿ  ದಿವಾಳಿಯಾಯಿತು.

ಪ್ರಮುಖಜನನ/ಮರಣ:

1754: ಪ್ರಾಣಿ ದಯಾ ಸಂಘವಾದ ‘ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್’ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ರಿಚರ್ಡ್ ಮಾರ್ಟಿನ್ ಅವರು ಐರ್ಲೆಂಡ್ ದೇಶದಲ್ಲಿ ಜನಿಸಿದರು.  ಕಿಂಗ್ ನಾಲ್ಕನೇ ಜಾರ್ಜ್ ಅವರು ಮಾರ್ಟಿನ್ ಅವರಿಗಿದ್ದ  ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಅವರಿಗಿದ್ದ ಸಹಾನುಭೂತಿಯ ಗುಣವನ್ನು  ಗೌರವಿಸಿ ‘ಹ್ಯೂಮಾನಿಟಿ ಡಿಕ್’ ಎಂದು ಸಂಭೋದಿಸುತ್ತಿದ್ದರು.  ರಾಜಕಾರಣಿಯಾಗಿದ್ದ ರಿಚರ್ಡ್ ಮಾರ್ಟಿನ್ 1822ರ ವರ್ಷದಲ್ಲಿ ಕ್ರೂಯಲ್ ಟ್ರೀಟ್ಮೆಂಟ್ ಆಫ್ ಕ್ಯಾಟಲ್ ಆಕ್ಟ್ ಕಾನೂನು ಜಾರಿಗೊಳಿಸುವುದರಲ್ಲಿ ಯಶಸ್ವಿಯಾದರು.

1856: ಆಧುನಿಕ ಕನ್ನಡದ ಪ್ರಥಮ  ನಾಟಕಕಾರ, ಕೀರ್ತನಕಾರರೆಂದು ಮಾನ್ಯರಾದ ಶಾಂತಕವಿಗಳ ನಿಜನಾಮ ಸಕ್ಕರಿ ಬಾಳಾಚಾರ್ಯ.  ಅವರು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಜನಿಸಿದರು.  ನಾಟಕ ಕಂಪೆನಿಗಳಿಗೆ ಹಲವಾರು ನಾಟಕಗಳನ್ನು ಬರೆದಿದ್ದ ಇವರು, ಕಾವ್ಯವನ್ನೂ ಸಂಸ್ಕೃತ  ಅನುವಾದಗಳನ್ನೂ, ಹಲವಾರು ಕನ್ನಡ ಗೀತೆಗಳನ್ನೂ,  ಲಾವಣಿಗಳನ್ನೂ, ಹಾಸ್ಯ ಪ್ರಬಂಧಗಳನ್ನು  ರಚಿಸಿದ್ದಾರೆ. 1920ರಲ್ಲಿ ಈ ಲೋಕದಿಂದ ದೂರವಾದ ತಮ್ಮ ಗುರು ಶಾಂತಕವಿಗಳಗಳ ಬಗ್ಗೆ ಕವಿ ಬೇಂದ್ರೆಯವರು ‘ಶಾಂತಕವಿಗಳ ವಿಶ್ರಾಂತಿ’ ಎಂಬ ಪ್ರಸಿದ್ಧ ಕವಿತೆ ಬರೆದಿದ್ದಾರೆ.

1866: ನೊಬೆಲ್ ಶಾಂತಿ ಪುರಸ್ಕೃತ  ಆರ್ಚ್ ಬಿಷಪ್, ಇತಿಹಾಸಜ್ಞ ಮತ್ತು ಶಿಕ್ಷಕ ನಾಥನ್ ಸೋಡೆರ್ ಬ್ಲಾಂ ಅವರು, ಸ್ವೀಡನ್ನಿನ ಉಪ್ಪಸಲ ಎಂಬಲ್ಲಿ ಜನಿಸಿದರು.  ಮೊದಲನೇ ವಿಶ್ವ ಮಹಾಯುದ್ಧದಲ್ಲಿ ಶಾಂತಿಗಾಗಿ ಶ್ರಮಿಸಲು ಎಲ್ಲ ಕ್ರೈಸ್ತ ನಾಯಕರಿಗೂ ಅವರು ಕರೆಕೊಟ್ಟಿದ್ದರು.

1895: ಪ್ರಶಸ್ತಿ ವಿಜೇತ ರಸಾಯನ ಶಾಸ್ತ್ರಜ್ಞ ಆರ್ಟರಿ ಇಲ್ಮಾರಿ ವಿರ್ಟನೇನ್ ಅವರು ಫಿನ್ಲ್ಯಾಂಡ್ ದೇಶದಲ್ಲಿ ಜನಿಸಿದರು.  ಅವರು ಎ.ಐ.ವಿ. ಸೈಲೇಜ್ ಅನ್ನು ಕಂಡು ಹಿಡಿದರು.  ಇದು ಹಾಲಿನ ಉತ್ಪನ್ನವನ್ನು ಹೆಚ್ಚಿಸಿತಲ್ಲದೆ,  ಬೆಣ್ಣೆಯನ್ನು ಕೆಡದಂತೆ ಸಂರಕ್ಷಿಸುವುದಕ್ಕೆ ಸಹಾಯಕವಾಯಿತು.   ಎ.ಐ.ವಿ ಸಾಲ್ಟ್ ಕಂಡುಹಿಡಿದದ್ದು, ಫಿನ್ಲ್ಯಾಂಡಿನ ಬೆಣ್ಣೆ ರಫ್ತನ್ನು ಅಪಾರವಾಗಿ ಹೆಚ್ಚಿಸಿತು.

1906: ಸೂಪರ್ ಟ್ಯಾಂಕರುಗಳ ಪಡೆಯನ್ನು ನಿರ್ಮಿಸಿದ ಗ್ರೀಕ್ ಶಿಪ್ಪಿಂಗ್ ಉದ್ಯಮಿಯಾದ ಅರಿಸ್ಟಾಟಲ್ ಒನಾಸಿಸ್ ಅವರು, ಈಗಿನ ಟರ್ಕಿಗೆ ಸೇರಿದ ಇಸ್ಮಿರ್ ಪ್ರದೇಶದ ಕರತಾಸ್ ಎಂಬಲ್ಲಿ ಜನಿಸಿದರು.  ಮುಂದೆ ಅರ್ಜೆಂಟಿನಾಗೆ ಬಂದ ಅವರು  ಅತ್ಯಂತ ಶ್ರೀಮಂತ ಉದ್ಯಮಿಯಾದರು.  ಇವರು ಅಮೆರಿಕಾದ ಅಧ್ಯಕ್ಷ ಕೆನಡಿ ಅವರ ವಿಧವಾ ಪತ್ನಿ ಜಾಕೆಲಿನ್ ಕೆನಡಿ ಅವರನ್ನು ವಿವಾಹವಾದರು.

1908: ಥಿಯೋರೇಟಿಕಲ್ ಭೌತಶಾಸ್ತ್ರಜ್ಞರಾದ ಎಡ್ವರ್ಡ್ ಟೆಲ್ಲರ್ ಅವರು  ಹಂಗೇರಿಯಲ್ಲಿ ಜನಿಸಿದರು.  ಮುಂದೆ ಅಮೆರಿಕ ನಿವಾಸಿಯಾದ ಅವರು ನ್ಯೂಕ್ಲಿಯರ್ ಮತ್ತು ಮಾಲೆಕ್ಯುಲರ್ ಫ್ರಿಸಿಕ್ಸ್, ಸ್ಪೆಕ್ಟ್ರೋಸ್ಕೊಪಿ ಮತ್ತು ಸರ್ಫೇಸ್ ಫಿಸಿಕ್ಸ್ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನಿತ್ತರು.    ‘ಹೈಡ್ರೋಜನ್ ಬಾಂಬ್ ಜನಕ’ ಎಂದು ಹೆಸರಾಗಿದ್ದ  ಇವರು 1945ರಲ್ಲಿನಿರ್ಮಿಸಲಾದ ಜಗತ್ತಿನ ಮೊತ್ತ ಮೊದಲ ಪರಮಾಣು ಬಾಂಬ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರಲ್ಲದೆ, ಜಗತ್ತಿನ ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ನಿರ್ಮಿಸುವಲ್ಲೂ ಪಾತ್ರವಹಿಸಿದ್ದರು.

1920: ರುದ್ರಯ್ಯ ಚಂದ್ರಯ್ಯ ಹಿರೇಮಠ ಅವರು ಗದಗದ ಬಳಿ ಇರುವ ಕುರುಡಗಿ ಎಂಬಲ್ಲಿ ಜನಿಸಿದರು.  ಭಿಕ್ಷಾಟನೆ, ಬಾಲ ಕಾರ್ಮಿಕತನದಲ್ಲಿ ಬೆಳೆದರೂ, ಓದಿನ ಆಸಕ್ತಿ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದ ಎತ್ತರದವರೆಗೂ ಏರಿಸಿತು.  ಮಹತ್ವದ ಸಾಹಿತಿಗಳಾಗಿದ್ದ ಅವರಿಗೆ ಕನ್ನಡ ನಾಡು 59ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನೀಡಿತು.  ತೆಲುಗು,  ತಮಿಳು, ಮಲಯಾಳಂ, ಕನ್ನಡ ಭಾಷೆಗಳ ಕುರಿತು ದ್ರಾವಿಡ ಭಾಷಾ ಜ್ಞಾನ ಕೇಂದ್ರದ ನಿರ್ದೇಶಕರಾಗಿ ಸಹಾ ಅವರು ಸೇವೆ ಸಲ್ಲಿಸಿದ್ದರು.

1929: ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯನ್ನು ಹುಟ್ಟು ಹಾಕಿದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್  ಅವರು ಜನಿಸಿದರು. 1963ರ ವರ್ಷದಲ್ಲಿ ವಾಷಿಂಗ್ಟನ್ ಮಾರ್ಚ್ ನೇತೃತ್ವ ವಹಿಸಿದ್ದ ಮಾರ್ಟಿನ್ ಲೂಥರ್ ಕಿಂಗ್ ಆ ಸಮಯದಲ್ಲಿ ಮಾಡಿದ ‘I have a dream – ನನ್ನದೊಂದು ಕನಸಿದೆ’ ಭಾಷಣ ವಿಶ್ವಪ್ರಖ್ಯಾತಿಗಳಿಸಿತು.

1934: ಕರ್ನಾಟಕದ 13ನೇ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು, ಆಂಧ್ರಪ್ರದೇಶದ ಚೆಬ್ರೋಲು ಎಂಬಲ್ಲಿ ಜನಿಸಿದರು.  2013ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಿಧನರಾದ ಇವರು,  1990ರ ವರ್ಷದಲ್ಲಿನ  ಕಿರು ಅವಧಿಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು.

1988: ಐರಿಷ್  ರಾಜಕಾರಣಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ  ಸೀನ್ ಮ್ಯಾಕ್ ಬ್ರೈಡ್ ಅವರು ಐರ್ಲ್ಯಾಂಡಿನ ಡಬ್ಲಿನ್ ನಗರದಲ್ಲಿ ನಿಧನರಾದರು.  ಇವರು  ವಿಶ್ವ ಸಂಸ್ಥೆ, ಕೌನ್ಸಿಲ್ ಆಫ್ ಯೂರೋಪ್ ಮತ್ತು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮುಂತಾದ ಮಹತ್ವದ ಸಂಸ್ಥೆಗಳ ಸಂಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

1988: 1964ರಲ್ಲಿ ಪ್ರಧಾನಿ ನೆಹರೂ ನಿಧನರಾದ ಸಂದರ್ಭ  ಮತ್ತು 1966ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ನಿಧನರಾದ ಸಂದರ್ಭಗಳಲ್ಲಿ ಎರಡು ಬಾರಿ ಭಾರತದ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಗುಲ್ಜಾರಿ ಲಾಲ್ ನಂದಾ ನಿಧನರಾದರು. ಕೇಂದ್ರ ಮಂತ್ರಿಗಳಾಗಿ ಹಾಗೂ ಭಾರತದ ಯೋಜನಾ ಆಯೋಗದ ಅಧ್ಯಕ್ಷರಾಗಿ ಸಹಾ ಇವರು ಕಾರ್ಯ ನಿರ್ವಹಿಸಿದ್ದರು.   1997 ವರ್ಷದಲ್ಲಿ ಅವರಿಗೆ ‘ಭಾರತರತ್ನ’ ಗೌರವವನ್ನು ಸಲ್ಲಿಸಲಾಗಿತ್ತು.

2006: ತೈಲ ಸಮೃದ್ಧ ಕುವೈತ್ ರಾಷ್ಟ್ರವನ್ನು ಸುಮಾರು 30 ವರ್ಷಗಳ ಕಾಲ ಆಳಿದ ದೊರೆ ಶೇಖ್ ಜಬರ್ ಅಲ್ ಸಭಾ ನಿಧನರಾದರು.

2009: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಲನಚಿತ್ರ  ನಿರ್ದೇಶಕ ತಪನ್ ಸಿನ್ಹಾ  ಕೋಲ್ಕತದಲ್ಲಿ  ನಿಧನರಾದರು.  ಅಮೆರಿಕದ ಚಿತ್ರಗಳು ಹಾಗೂ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದ್ದ ಸಿನ್ಹಾ ತಂತ್ರಜ್ಞರಾಗಿ ಚಿತ್ರರಂಗ ಪ್ರವೇಶಿಸಿದರು. ಅವರು ನಿರ್ದೇಶಿಸಿದ 41 ಚಿತ್ರಗಳಲ್ಲಿ 19 ಚಿತ್ರಗಳು  ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದವು. ಪ್ರತಿಷ್ಟಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅಂತಾರಾಷ್ಟ್ರೀಯ ವಿಮರ್ಶಕರ ಶ್ಲಾಘನೆಗೂ ಪಾತ್ರವಾಗಿದ್ದವು.

Categories
e-ದಿನ

ಜನವರಿ-14

ದಿನಾಚರಣೆ
ಭಾರತದಲ್ಲಿ ಮಕರ ಸಂಕ್ರಾಂತಿ, ಮಾಘಿ, ಮಾಘೇ, ಪೊಂಗಲ್, ಉತ್ತರಾಯಣ ಹೀಗೆ ವಿವಿಧ ರೀತಿಯ ಸಂಭ್ರಮ
ಭಾರತದ ಎಲ್ಲ ಭಾಗಗಳಲ್ಲೂ ಸುಗ್ಗಿ ಸಂಭ್ರಮ ಅಥವಾ ಹೊಲಗದ್ದೆಗಳಲ್ಲಿ ಬೆಳಯ ಕಟಾವು ಸಂಭ್ರಮ, ಪರಿಸರಕ್ಕೆ ಕೃತಜ್ಞತೆ, ವಿವಿಧ ರೀತಿಯ ಸಂಸ್ಕೃತಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವಗಳನ್ನು ಹೊಸೆದುಕೊಂಡಿರುವ ವಿಶಿಷ್ಟ ಆಚರಣೆ ಸಂಕ್ರಾಂತಿ. ಒಂದು ದಿನದಿಂದ ಮೂರು ನಾಲ್ಕು ದಿನಗಳವರೆಗೆ ಈ ಹಬ್ಬ ವಿಧ ವಿಧಗಳಲ್ಲಿ ಹಲವು ಹೆಸರುಗಳಲ್ಲಿ ನಡೆಯುತ್ತವೆ.
ಅಸ್ಸಾಂನಲ್ಲಿ ಮಾಘ್ ಬಿಹು;
ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಮಾಘಿ;
ಭಾರತದ ಹಲವು ಕಡೆಗಳಲ್ಲಿ ಮಕರ ಸಂಕ್ರಾಂತಿ;
ಭೋಗೀ ಹಬ್ಬ;
ಎಳ್ಳು ಬೆಲ್ಲ ಹಬ್ಬ;
ನೇಪಾಳದಲ್ಲಿ ಮಾಘೇ ಸಂಕ್ರಾಂತಿ;ತಮಿಳು ನಾಡಿನಲ್ಲಿ ಥೈ ಪೊಂಗಲ್ ಹಬ್ಬ;
ಸುಗ್ಗೀ ಹಬ್ಬ
ಉತ್ತರಖಾಂಡ್, ಗುಜರಾತ್ ಮತ್ತು ರಾಜಾಸ್ಥಾನದಲ್ಲಿ ಉತ್ತರಾಯಣ
ಇತ್ಯಾದಿ, ಇತ್ಯಾದಿ,

ಪ್ರಮುಖಘಟನಾವಳಿಗಳು:


1761:
ಮರಾಠಾ ಸೇನೆಯು ಪಾಣಿಪತ್ತಿನಲ್ಲಿ ಅಹಮದ್ ಶಹಾ ದುರಾನಿಯ ಸೇನೆ ಆಕ್ರಮಣದಲ್ಲಿ ಸೋಲುಂಡಿತು.   ‘ಮೂರನೇ ಪಾಣಿಪತ್ ಯುದ್ಧ’ ಎಂದು ಹೆಸರಾಗಿರುವ ಈ ಯುದ್ಧದಿಂದ ಉಂಟಾದ ಅರಾಜಕತೆ ಭವಿಷ್ಯದಲ್ಲಿ ಬ್ರಿಟಿಷರ ಆಡಳಿತಕ್ಕೆ ಎಡೆ ಮಾಡಿಕೊಟ್ಟಿತು.

1784: ಅಮೇರಿಕದ ಕಾಂಗ್ರೆಸ್ಸು ಗ್ರೇಟ್ ಬ್ರಿಟನ್ ಜೊತೆಗಿನ ಟ್ರೀಟಿ ‘ಆಫ್ ಪ್ಯಾರಿಸ್’ ಅನ್ನು ಅಂಗೀಕರಿಸಿತು.

1863: ಮರದ ತೊಗಟೆಯನ್ನು ಉಪಯೋಗಿಸಿ ತಯಾರಿಸಲಾದ ಕಾಗದದಲ್ಲಿ  ‘ದಿ ಬೋಸ್ಟನ್ ವೀಕ್ಲಿ ಜರ್ನಲ್’ ಮುದ್ರಣಗೊಂಡಿತು.  ಅಮೇರಿಕಾದ ಸುದ್ಧಿಪತ್ರಿಕೆಯೊಂದು ಇಂತಹ ಕಾಗದದಲ್ಲಿ  ಮುದ್ರಣಗೊಂಡದ್ದು ಇದೇ ಮೊದಲು.

1943: ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು, ವಿಮಾನದಲ್ಲಿ ಪಯಣಿಸಿದ ಪ್ರಥಮ ಹಾಲಿ ಅಧ್ಯಕ್ಷರು ಎಂದೆನಿಸಿದರು. ವಿಶ್ವಮಹಾಯುದ್ಧದ ಕುರಿತಾಗಿ ವಿನ್ಸ್ಟನ್ ಚರ್ಚಿಲ್ ಅವರೊಂದಿಗೆ ಸಮಾಲೋಚಿಸುವುದಕ್ಕಾಗಿ ಅವರು  ಮಿಯಾಮಿಯಿಂದ ಮೊರಾಕ್ಕೋಗೆ ವಿಮಾನದಲ್ಲಿ ಪಯಣಿಸಿದರು.

1950: ಸೋವಿಯತ್ ರಷ್ಯಾವು ತಯಾರಿಸಿದ ಮಿಗ್-17 ಯುದ್ಧ ವಿಮಾನದ ಪ್ರಥಮ ಪ್ರತಿಕೃತಿಯ ವಿಮಾನವು ತನ್ನ ಹಾರಾಟವನ್ನು ನಡೆಸಿತು.

1954: ದಿ ಹಡ್ಸನ್ ಮೋಟಾರ್ ಕಂಪೆನಿಯು, ನಾಶ್ ಕೆಲ್ವಿನೇಟರ್ ಸಂಸ್ಥೆಯೊಂದಿಗೆ ವಿಲೀನಗೊಂಡು ‘ಅಮೇರಿಕನ್ ಮೋಟಾರ್ಸ್ ಸಂಸ್ಥೆ’ ರೂಪುಗೊಂಡಿತು.

1969: ಮದ್ರಾಸ್ ರಾಜ್ಯಕ್ಕೆ ಅಧಿಕೃತವಾಗಿ ತಮಿಳುನಾಡು ಎಂದು ಮರುನಾಮಕರಣ ಮಾಡಲಾಯಿತು.

1973: ಅಮೆರಿಕದ ಪ್ರಸಿದ್ಧ ಗಾಯಕ ಮತ್ತು ನಟರಾದ  ಎಲ್ವಿಸ್ ಪ್ರೆಸ್ಲಿ ಅವರ ‘ಅಲ್ ಓಹಾ ಫ್ರಮ್ ಹವಾಯ್’ ಕಾರ್ಯಕ್ರಮ, ದೂರದರ್ಶನದಲ್ಲಿ ಕಲಾವಿದರೊಬ್ಬರು ನಡೆಸಿಕೊಟ್ಟ, ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಮನರಂಜನಾ  ಕಾರ್ಯಕ್ರಮ ಎಂದೆನಿಸಿತು.

2009: ಹಿರಿಯ ವಿದ್ವಾಂಸ ಡಾ.ಎಲ್.ಬಸವರಾಜು ಅವರಿಗೆ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಗೌರವವನ್ನು  ಪ್ರದಾನ ಮಾಡಲಾಯಿತು.

2007: ವಿಶ್ವದ ಬೃಹತ್ ಪರಿಹಾರ ಸಂಸ್ಥೆಗಳಾದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸಂಸ್ಥೆಗಳು,  ಹಿಂದೆ ತಮ್ಮ ಲಾಂಛನದಲ್ಲಿ ಬಳಸುತ್ತಿದ್ದ ಅರ್ಧ ಚಂದ್ರದ ಚಿತ್ರದ  ಜೊತೆಗೆ ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಹರಳಿನ (ಕ್ರಿಸ್ಟಲ್) ಚಿತ್ರವಿರುವ ನೂತನ ಲಾಂಛನವನ್ನು  ಬಳಕೆಗೆ ತಂದವು.

2007: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯ ಜ್ಞಾನ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

2007: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಕೋನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ಅಧಿಕಾರ ಸ್ವೀಕರಿಸಿದರು.

2013: ಭಾರತದಲ್ಲಿ ಹಾಕಿ ಇಂಡಿಯ ಲೀಗ್ ಎಂಬ ವೃತ್ತಿ ನಿರತ ಸಂಸ್ಥೆ ಸ್ಥಾಪನೆಗೊಂಡಿತು

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 83: ರೋಮನ್ ಚಕ್ರಾಧಿಪತ್ಯದಲ್ಲಿ ಸೇನಾಧಿಕಾರಿ ಮತ್ತು ರಾಜಕಾರಣಿಯಾಗಿದ್ದ  ಮಾರ್ಕ್ ಆಂತೋನಿ ಜನನ

1507: ಇಟಲಿಯ ಪುನರುತ್ಥಾನದ ಅಂತಿಮ ಕಾಲಘಟ್ಟದ ಅವಧಿಯ ( late-Renaissance or Mannerist period) ಪ್ರಮುಖ ಕಲಾವಿದ ಲುಕಾ ಲೋಂಗಿ ಜನಿಸಿದರು.  ರಾವೆನ್ನಾ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಅವರು ಧಾರ್ಮಿಕ ಮತ್ತು ವ್ಯಕ್ತಿ ಚಿತ್ರಗಳನ್ನು ಬಿಡಿಸುವುದರಲ್ಲಿ ಪ್ರಸಿದ್ಧರಾಗಿದ್ದರು.

1551: ಚರಿತ್ರಕಾರ ಅಬುಲ್ ಫಝಲ್ ಇಬನ್ ಮುಬಾರಕ್ ಜನಿಸಿದರು. ಈತ ಮೊಘಲ್ ಚಕ್ರವರ್ತಿ ಅಕ್ಬರ್ ಆಸ್ಥಾನಿಕರಾಗಿದ್ದು  ಅಕ್ಬರ್ ಸಾಮ್ರಾಜ್ಯದ ಸಮಸ್ತ ಚರಿತ್ರೆಯನ್ನೂ ಮೂರು ಸಂಪುಟಗಳಲ್ಲಿ ರಚಿಸಿದರು.    ಮೊದಲ ಎರಡು ಸಂಪುಟಗಳು ‘ಅಕ್ಬರನಾಮಾ’ ಎಂಬ ಹೆಸರಿನಲ್ಲೂ ಮೂರನೆಯದು  ‘ಐನ್-ಎ-ಅಕ್ಬರಿ’ ಎಂಬ ಹೆಸರಿನಲ್ಲೂ ಮೂಡಿಬಂತು.  ಇವರು  ಬೈಬಲ್ಲಿನ ಪರ್ಷಿಯನ್ ಅನುವಾದವನ್ನೂ ಮಾಡಿದ್ದರು.   ಡೆಕ್ಕನ್ ಯುದ್ಧದಲ್ಲಿ ಮೊಘಲ್ ಸೈನ್ಯದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಆ  ರಣರಂಗದಿಂದ ಹಿಂದಿರುಗುವ ಸಂದರ್ಭದಲ್ಲಿ     ಮುಘಲ್ ರಾಜಕುಮಾರ ಸಲೀಂ (ಜಹಾಂಗೀರ್) ಹೂಡಿದ  ಸಂಚಿನಿಂದ ಕೊಲೆಗೀಡಾದರು.

1683: ಜರ್ಮನಿಯಲ್ಲಿ ವಾದ್ಯಗಳನ್ನು ನಿರ್ಮಾಣ ಮಾಡುವುದರಲ್ಲಿ ಪ್ರಸಿದ್ಧ ನಾಗಿದ್ದಗಾಟ್ ಫ್ರೀಡ್ ಸಿಲ್ಬರ್ ಮ್ಯಾನ್ ಜನಿಸಿದರು. ಕೈ ಬೆರಳುಗಳಿಂದ ನುಡಿಸುವ ವಾದ್ಯಗಳಾದ ಹಾರ್ಪ್ಸಿ ಕಾರ್ಡ್ಸ್, ಕ್ಲೆವಿ ಕಾರ್ಡ್ಸ್, ಆರ್ಗನ್ಸ್, ಫೋರ್ಟೆ ಪಿಯಾನೋಸ್ ಮುಂತಾದ ವಾದ್ಯಗಳನ್ನು ತಯಾರಿಸುವುದರದಲ್ಲಿ ಅವರಿಗೆ ಪ್ರಸಿದ್ಧಿ ಇತ್ತು.

1836: ಚಿತ್ರಕಾರ ಹೆನ್ರಿ ಫಂಟಿನ್ –ಲಾಟೋರ್ ಜನಿಸಿದರು.  ಅವರು ಪುಷ್ಪಗಳನ್ನು ಚಿತ್ರಿಸುವುದರಲ್ಲಿ ಹಾಗೂ ಕಲಾವಿದರ ಗುಂಪುಗಳನ್ನು ಚಿತ್ರಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು.

1841: ಇಮ್ಪ್ರೇಸೆಶನಿಸ್ಟ್ ಪರಂಪರೆಯ  ಕಲೆಗಾರರ ಪೈಕಿ ಮಹತ್ವದ ಕಲಾವಿದೆ ಎನಿಸಿದ್ದ  ಬರ್ತೆ ಮೊರಿಸಾಟ್ ಫ್ರಾನ್ಸಿನ ಚೆರ್ ಪ್ರಾಂತ್ಯದ ಬರ್ಗೆಸ್ ಎಂಬಲ್ಲಿ ಜನಿಸಿದರು.

1845: ಭಾರತದ 34ನೇ ಗೌರ್ನರ್ ಜನರಲ್ ಆಗಿದ್ದ ಹೆನ್ರಿ ಪೆಟ್ಟಿ ಫಿಟ್ಜ ಮಾರಿಸ್ ಲಂಡನ್ನಿನಲ್ಲಿ ಜನಿಸಿದರು.

1856: ಆಸ್ಟ್ರೇಲಿಯಾದ ಪತ್ರಕರ್ತ, ಪ್ರಕಾಶಕ ಹಾಗೂ ‘ದಿ ಬುಲೆಟಿನ್’ ಪತ್ರಿಕೆಯ ಸಂಸ್ಥಾಪಕರಲ್ಲಿ ಒಬ್ಬರಾದ ಜೆ.ಎಫ್. ಆರ್ಚಿಬಾಲ್ಡ್ ಅವರು ವಿಕ್ಟೋರಿಯಾ ಬಳಿಯ ಗೀಲಾಂಗ್ ವೆಸ್ಟ್ ಪ್ರಾಂತ್ಯದಲ್ಲಿ ಜನಿಸಿದರು.  ಅವರು ಕಲಾ ಪ್ರಪಂಚದಲ್ಲಿ ಆರ್ಕಿಬಾಲ್ಡ್ ಪ್ರಶಸ್ತಿಯನ್ನೂ ಸ್ಥಾಪಿಸಿದ್ದಾರೆ.

1875: ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್-ಗಬೋನಿಸ್ ಭೌತ್ಶಾಸ್ತ್ರಜ್ಞ ಆಲ್ಬರ್ಟ್ ಸ್ವೀಟ್ಜರ್ ಅಂದು  ಜರ್ಮನಿಯ ಭಾಗವಾಗಿದ್ದು ಮುಂದೆ ಫ್ರಾನ್ಸಿಗೆ ಸೇರಿದ  ಕೆಯಸರ್ಬರ್ಗ್ ಎಂಬಲ್ಲಿ ಜನಿಸಿದರು.  ಅವರಿಗೆ ‘ರೆವೆರೆನ್ಸ್ ಆಫ್ ಲೈಫ್’ ಎಂಬ ತತ್ವಜ್ಞಾನ ಪ್ರತಿಪಾದನೆಗಾಗಿ 1952ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.  ಈ ಹಣದಿಂದ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡರು. ಅದರಲ್ಲಿ ಅವರು ಪಶ್ಚಿಮ ಮಧ್ಯ ಆಫ್ರಿಕಾದ ಗಬಾನ್ ದೇಶದ ಲಮ್ಬರೆನ್ ಎಂಬಲ್ಲಿ ಸ್ಥಾಪಿಸಿದ ಆಸ್ಪತ್ರೆ ಪ್ರಮುಖದ್ದಾಗಿದೆ.

1915: ಕರ್ನಾಟಕ ಶಾಸ್ತ್ರೀಯ ಸಂಗೀತ, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ಸಂಗೀತ ಸಂಯೋಜಕ, ನಿರ್ದೇಶಕ  ಗಾಯಕ ಹೊನ್ನಪ್ಪ ಭಾಗವತರ್ ಅವರು, ಬೆಂಗಳೂರಿನ ನೆಲಮಂಗಲದ ಬಳಿಯ ಚೌಡಸಂದ್ರದಲ್ಲಿ ಜನಿಸಿದರು. ಈ ಎಲ್ಲಾ ರಂಗಗಳಲ್ಲೂ   ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಅವರ ಕೀರ್ತಿ ಹಬ್ಬಿತ್ತು.  ಅವರ ಮಹಾ ಕವಿ ಕಾಳಿದಾಸ 1955ರಲ್ಲಿ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರ 1959ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದವು.  ಅಕ್ಟೋಬರ್ 2, 1992ರಂದು ನಿಧನರಾದ ಇವರಿಗೆ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ವವ ಪ್ರಶಸ್ತಿಗಳು ಸಂದಿದ್ದವು.

1892: ಭಾರತೀಯ ಕ್ರಿಕೆಟಿನ ‘ಹಿರಿಯಜ್ಜ’ (ಗ್ರ್ಯಾಂಡ್ ಓಲ್ಡ್ ಮ್ಯಾನ್) ಎಂದೇ ಖ್ಯಾತರಾದ ಪ್ರೊಫೆಸರ್ ದಿನಕರ್ ಬಲವಂತ್ ದೇವಧರ್ ಪುಣೆಯಲ್ಲಿ ಜನಿಸಿದರು.  ಪ್ರಥಮ ವಿಶ್ವಮಹಾಯುದ್ಧಕ್ಕೆ ಮುಂಚಿತವಾಗಿ ಹಾಗೂ ಎರಡನೇ ಮಹಾಯುದ್ಧದ ನಂತರ ಹೀಗೆ ಸುದೀರ್ಘ ಕಾಲ ಪ್ರಥಮ ದರ್ಜೆ   ಕ್ರಿಕೆಟ್ ಕ್ರೀಡೆಯಾಡಿದ ಅಪರೂಪದ ಆಟಗಾರರಿವರು.  ಮುಂಬೈ ರಣಜಿ ತಂಡದ ನಾಯಕರಾಗಿದ್ದ ಇವರು ಬಿರುಸಿನ ಬ್ಯಾಟಿಂಗ್ ಮತ್ತು ಲೆಗ್ ಬ್ರೇಕ್ ಬೌಲಿಂಗಿಗೆ ಹೆಸರಾಗಿದ್ದರು.  ಇವರ ಹೆಸರಿನಲ್ಲಿ ಭಾರತದ ವಿವಿಧ ಪ್ರಾಂತೀಯ ತಂಡಗಳ ನಡುವೆ ಏಕದಿನದ ಪಂದ್ಯಗಳು 1973ರಿಂದ ನಡೆಯುತ್ತಿವೆ.  ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಗೌರವ ಸಂದಿದ್ದ ಇವರು 1993ರಲ್ಲಿ ತಮ್ಮ 101ನೇ ವಯಸ್ಸಿನಲ್ಲಿ ನಿಧನರಾದರು.

1921: ಕನ್ನಡದ ಕೆಚ್ಚೆದೆಯ ಹೋರಾಟಗಾರ, ನ್ಯಾಯವಾದಿ, ಪತ್ರಕರ್ತ, ಪತ್ರಿಕೋದ್ಯಮಿ, ಸಾಹಿತಿ,  ಚಿಂತಕ, ರಾಜಕಾರಣಿ, ಆಡಳಿತಗಾರ ಮುಂತಾದ ಹಲವಾರು ರೀತಿಯಲ್ಲಿ ಕ್ರಿಯಾಶೀಲರಾದ ಡಾ. ಪುಟ್ಟಪ್ಪ ಸಿದ್ಧಲಿಂಗಗೌಡ ಪಾಟೀಲರು  ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು.  ವಕೀಲರಾಗಿ, ಪತ್ರಕರ್ತರಾಗಿ ಕನ್ನಡ ಮತ್ತು ಇಂಗ್ಲಿಷ್ ಬಾಷೆಗಳಲ್ಲಿ ಕೆಲಸ ಮಾಡಿ, ಪ್ರಸಿದ್ಧ ‘ಪ್ರಪಂಚ’ ಪತ್ರಿಕೆ ಹುಟ್ಟುಹಾಕಿದರು.  ಹಲವು ರೀತಿಯಲ್ಲಿ ಪ್ರಸಿದ್ಧ ಬರಹಗಳನ್ನು ಮಾಡಿ, ಕನ್ನಡಪರ ಚಳುವಳಿಗಳಲ್ಲಿ ಕ್ರಿಯಾಶೀಲರಾಗಿ,  ಸಂಸ್ಕೃತಿ ಚಿಂತನೆಗಳನ್ನು ಹಂಚುತ್ತಿರುವ ಅವರಿಗೆ  ನಾಡೋಜ ಗೌರವ, ನೃಪತುಂಗ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ, ರಾಜ್ಯೋತ್ಸವ ಪ್ರಶಸ್ತಿ  ಹೀಗೆ ಅನೇಕ ಗೌರವಗಳು  ಸಂದಿವೆ.

1920: ಕರ್ನಾಟಕ ಸಂಗೀತ ವಿದ್ವಾನ್‌ ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌ ಅವರು 1920  ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಜನಿಸಿದರು.  ವಿಶ್ವದೆಲ್ಲೆಡೆ ಸಂಗೀತ ಸೌರಭವನ್ನು ಬೀರಿ ಅನೇಕ ಶಿಷ್ಯರನ್ನು ತಯಾರು ಮಾಡಿರುವ ಅವರಿಗೆ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.   ಫೆಬ್ರುವರಿ 2014ರಂದು ಬೆಂಗಳೂರಿನಲ್ಲಿ ನಿಧನರಾದರು.

1977: ಅಂತರರಾಷ್ಟ್ರೀಯ ಕಾರು ರೇಸಿಂಗ್ ಪಟು ನಾರಾಯಣ್ ಕಾರ್ತಿಕೇಯನ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು.  ಫಾರ್ಮ್ಯುಲಾ ಥ್ರೀ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಂಡ ಪ್ರಥಮ ಭಾರತೀಯರೆಂಬ ಎಂಬ ಹೆಗ್ಗಳಿಕೆ ಇವರದು.

1742: ಪ್ರಖ್ಯಾತ ಖಗೋಳ ತಜ್ಞ ಹಾಗೂ ಗಣಿತ ತಜ್ಞರಾದ  ಎಡ್ಮಂಡ್ ಹ್ಯಾಲಿ ನಿಧನರಾದರು.  ಇವರು  ಅನ್ವೇಷಿಸಿದ  ಧೂಮಕೇತುವಿಗೆ ‘ಹ್ಯಾಲಿ ಕಾಮೆಟ್’ ಎಂದು ಇವರ ಹೆಸರನ್ನೇ ಇಡಲಾಗಿದೆ.

1962: ಮಹಾನ್ ಇಂಜಿನಿಯರ್, ವಿದ್ವಾಂಸ, ಮೈಸೂರು ಸಂಸ್ಥಾನದ ದಿವಾನ್, ಅನೇಕ ಕೈಗಾರಿಕೆಗಳು ಮತ್ತು  ಸಂಸ್ಥೆಗಳ  ಸ್ಥಾಪಕ, ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ  ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ 102ನೇ ವಯಸ್ಸಿನಲ್ಲಿ ನಿಧನರಾದರು.  1920ರಲ್ಲಿ Reconstructing India, 1934ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದ್ದರು.  ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ಮತ್ತೊಂದು ಹೆಸರಾದ ಸರ್ ಎಂ.ವಿ.  ಮೈಸೂರು ಸಂಸ್ಥಾನವಷ್ಟೇ ಅಲ್ಲದೆ, ಮುಂಬೈ ಸರ್ಕಾರ, ಹೈದರಾಬಾದ್ ಹಾಗೂ ಯಮನ್ ದೇಶದ ಏಡನ್ ಹೀಗೆ ಹೋದೆಡೆಯಲ್ಲೆಲ್ಲಾ ತಮ್ಮ ಶ್ರೇಷ್ಠ ಸಾಮರ್ಥ್ಯತೆಯನ್ನು ತೋರಿದರು.   ಬ್ರಿಟಿಷ್ ಸರ್ಕಾರದ ಸರ್ ಗೌರವ, ಭಾರತ ಸರ್ಕಾರದ ಭಾರತರತ್ನ ಗೌರವಗಳು ಅವರಿಗೆ ಸಂದಿದ್ದವು.

2007: ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್ 39ರ ಹರೆಯದ ಯಧುವೇಂದ್ರ ವಸಿಷ್ಠ  ಉತ್ತರ ಪ್ರದೇಶದ ಘಾಜಿಯಾಬಾದಿನಲ್ಲಿ ಹೃದಯಾಘಾತದಿಂದ ನಿಧನರಾದರು. 1998ರ ಬ್ಯಾಂಕಾಂಕ್ ಮತ್ತು 2002ರ ಬುಸಾನ ಏಷ್ಯನ್ ಕ್ರೀಡಾಕೂಟಗಳಲ್ಲಿ ಎಫ್-44 ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವಸಿಷ್ಠ 2000ದಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು.

 

Categories
e-ದಿನ

ಜನವರಿ-13

ಪ್ರಮುಖಘಟನಾವಳಿಗಳು:

1793: ಫ್ರೆಂಚ್ ಕ್ರಾಂತಿಕಾರಿಯಾದ ನಿಕೊಲಸ್ ಜೀನ್ ಹ್ಯೂಗನ್ ಡಿ ಬಸ್ಸವಿಲ್ಲೆ ಎಂಬಾತನನ್ನು ಜನರ ಗುಂಪೊಂದು ನೇಣುಹಾಕಿತು.

1842: ಪ್ರಥಮ ಆಂಗ್ಲ – ಆಫ್ಘನ್ ಯುದ್ಧದಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ 4500 ಸೇನಾನಿಗಳು ಮತ್ತು 12,000 ಶಿಬಿರ ವ್ಯವಸ್ಥಾಪಕರ ಪಡೆಯಲ್ಲಿ ಎಲ್ಲರೂ ಅಳಿದು ಹೋದರೂ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸೈನ್ಯದ  ವೈದ್ಯರಾದ ಡಾ. ವಿಲಿಯಂ ಬ್ರೈಡನ್ ಎಂಬಾತ ಮಾತ್ರಾ,  ಅಚ್ಚರಿ ಎಂಬಂತೆ ಕ್ಷೇಮವಾಗಿ ಆಫ್ಘಾನಿಸ್ಥಾನದ ಜಲಾಲಾ ಬಾದ್ ಎಂಬಲ್ಲಿದ್ದ ಬ್ರಿಟಿಷ್ ಶಿಬಿರಕ್ಕೆ ತಲುಪಿ ಪ್ರಸಿದ್ಧರಾದರು.

1849: ಎರಡನೇ ಸಿಖ್ ಸಮರವು ಲಾಹೋರ್ ಪ್ರಾಂತ್ಯದ  ಚಿಲಿಯನ್ ವಾಲಾದಲ್ಲಿ ನಡೆಯಿತು. ಬ್ರಿಟಿಷ್ ಸೇನಾಧಿಕಾರಿ ಸರ್  ಹಗ್ ಗೌಗ್ ಹೂಡಿದ ಯುದ್ಧದಲ್ಲಿ ಬ್ರಿಟಿಷ್ ಸೇನೆಗೆ ಗೆಲುವು ದೊರೆಯಿತಾದರೂ, ಸಿಖ್ಖರ ವೀರಾವೇಶ ಹೋರಾಟದಿಂದ ಬ್ರಿಟಿಷ್ ಸೇನೆಯಲ್ಲಿ ಅಪಾರ  ಸೇನೆ ನಷ್ಟವಾಗಿ,  ಸರ್ ಹಗ್ ಗೌಗ್  ತೀವ್ರ ಟೀಕೆಗೆ ಗುರಿಯಾದ.

1888: ‘ಭೌಗೋಳಿಕ ಜ್ಞಾನ’ ಹೆಚ್ಚಿಸುವ ಸಲುವಾಗಿ ಸಮುದಾಯವೊಂದನ್ನು ಸ್ಥಾಪಿಸಲು ವಾಷಿಂಗ್ಟನ್ನಿನ ಕಾಸ್ಮೋಸ್ ಕ್ಲಬ್ಬಿನಲ್ಲಿ 33 ಜನ ಸಭೆ ಸೇರಿದರು. ಇದು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಕ್ಕೆ ಮೂಲವಾಯಿತು. ಗಾರ್ಡಿನರ್ ಹಬ್ಬರ್ಡ್, 1888ರ ಫೆಬ್ರುವರಿ 17ರಂದು ಇದರ ಪ್ರಥಮ ಅಧ್ಯಕ್ಷರಾದರು. ಮೊತ್ತಮೊದಲ ‘ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್’ ಅದೇ ವರ್ಷ ಪ್ರಕಟಗೊಂಡಿತು.

1910: ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಒಪೆರಾ ಹೌಸ್ನಲ್ಲಿ ನಡೆದ ‘ಕ್ಯಾವಲ್ಲೇರಿಯ ರಸ್ಟಿಕಾನಾ ಅಂಡ್ ಪಗ್ಲಿಯಾಸ್ಸಿ’ ತಂಡದ ಒಪೆರಾ ಕಾರ್ಯಕ್ರಮವು ಆಕಾಶವಾಣಿಯಲ್ಲಿ  ನೇರ ಪ್ರಸಾರಗೊಂಡ ಪ್ರಪ್ರಥಮ ಕಾರ್ಯಕ್ರಮವೆನಿಸಿತು.

1913:  ಹೊವಾರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಸಿದ್ಧ ಡೆಲ್ಟಾ ಸಿಗ್ಮಾ ಥೀಟ ಮಹಿಳಾ ಸಮಾಜವು ಅಸ್ತಿತ್ವಕ್ಕೆ ಬಂತು.  ಇದು ಕಾಲೇಜು ವಿದ್ಯಾಭಾಸ ಮಾಡಿದ ಮಹಿಳೆಯರಿಂದ ಸಮಾಜಸೇವೆಯ ಉದ್ದೇಶದಿಂದ, ಪ್ರಮುಖವಾಗಿ ಅಮೆರಿಕದಲ್ಲಿನ ಆಫ್ರಿಕನ್ನರನ್ನು ಗಮನದಲ್ಲಿಟ್ಟುಕೊಂಡು ಸ್ಥಾಪನೆಗೊಂಡ ಸಂಸ್ಥೆ.

1915: ಇಟಲಿಯ ಲ-ಅಕ್ವಿಲಾ ಪ್ರಾಂತ್ಯದಲ್ಲಿ ಸಂಭವಿಸಿದ  6.7  ಪ್ರಮಾಣದ ಅವೆಝಾನೊ ಭೂಕಂಪದಲ್ಲಿ  29,978ರಿಂದ 32,610 ಜನರು ಸಾವಿಗೀಡಾದರು.

1942: ಅಂದಿನ ದಿನಗಳಲ್ಲಿ ಉಪಯೋಗದಲ್ಲಿದ್ದ ಕಾರುಗಳಿಗಿಂತ ಶೇಕಡಾ 30 ಕಡಿಮೆ ತೂಕದ ಪ್ಲಾಸ್ಟಿಕ್ ವಾಹನಕ್ಕೆ ಹೆನ್ರಿ ಫೋರ್ಡ್ ಅವರು ಪೇಟೆಂಟ್ ಪಡೆದುಕೊಂಡರು.

1942: ವಿಮಾನಗಳಲ್ಲಿ ಅದರಲ್ಲೂ ಪ್ರಮುಖವಾಗಿ ಯುದ್ಧ ವಿಮಾನಗಳಲ್ಲಿ ಅಪಘಾತ ಉಂಟಾಗುವಂತಹ ಪರಿಸ್ಥಿತಿಗಳಲ್ಲಿ ವಿಮಾನ ಚಾಲಕರನ್ನು ರಕ್ಷಿಸುವ ಸಲುವಾಗಿ ವಿಮಾನದಿಂದ ಹೊರಕ್ಕೆ ಹಾರುವ  ಎಜೆಕ್ಷನ್ ಸೀಟ್ ವ್ಯವಸ್ಥೆ ನಿರ್ಮಿಸಲಾಗಿರುತ್ತದೆ.  ಈ ವ್ಯವಸ್ಥೆಯನ್ನು ಪ್ರಥಮ ಬಾರಿಗೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಪ್ರಾಯೋಗಿಕ ಪೈಲಟ್ ಒಬ್ಬರು ‘ಹೀನಕೆಲ್ ಹೆ 280 ಜೆಟ್ ಯುದ್ಧ ವಿಮಾನ’ದಲ್ಲಿ ಬಳಸಿದರು.

1966:ಅಮೆರಿಕ ಸರ್ಕಾರ ಪ್ರಥಮ ಬಾರಿಗೆ ಆಫ್ರಿಕನ್ ಮೂಲದವರೊಬ್ಬರನ್ನು ಕ್ಯಾಬಿನೆಟ್ ಸದಸ್ಯರನ್ನಾಗಿ ನೇಮಕಮಾಡಿತು.  ಅಮೆರಿಕದ ಹೌಸಿಂಗ್ ಮತ್ತು ಅರ್ಬನ್ ಡೆವೆಲಪ್ಮೆಂಟ್  ಖಾತೆಗೆ ಸಚಿವರಾದ  ರಾಬರ್ಟ್ ಸಿ. ವೀವರ್ ಅವರು ಹೀಗೆ ನೇಮಕಗೊಂಡ ಪ್ರಥಮರೆಂಬ ಗೌರವಕ್ಕೆ ಪಾತ್ರರಾದರು.

1990: ಡೌಗ್ಲಾಸ್ ವೈಲ್ಡರ್  ಅವರು ಪ್ರಥಮ ಆಫ್ರಿಕನ್ ಅಮೇರಿಕನ್ ಗೌರ್ನರ್ ಎಂಬ ಗೌರವಕ್ಕೆ ಪಾತ್ರರಾದರು.  ಅವರು ವರ್ಜೀನೀಯಾದ ರಿಚ್ಮಂಡ್ನಲ್ಲಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

1993: ನಾಸಾದ ‘ಎಸ್.ಟಿ.ಎಸ್-54’ನ್ನು ಬಾಹ್ಯಾಕಾಶಕ್ಕೆ ಸೇರಿಸಲು ‘ಎಂಡೀವರ್’  ಮೂರನೆಯ ಬಾರಿ ಆಗಸದತ್ತ ಚಿಮ್ಮಿತು.

2000: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಆ ಸಂಸ್ಥೆಯಲ್ಲಿನ  ಪ್ರಧಾನ ಅಧ್ಯಕ್ಷತೆ  ಹುದ್ದೆಯ ಅಧಿಕಾರವನ್ನು  ಬಿಟ್ಟುಕೊಟ್ಟರು.   ಅವರ ಸ್ಥಾನದಲ್ಲಿ ಸ್ಟೀವ್ ಬಾಮರ್ ಅವರು ಮೈಕ್ರೋಸಾಫ್ಟ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

2007: ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

2007: ಟಾಟಾ ಸಮೂಹದ ತಾಜ್ ಹೋಟೆಲ್ಸ್ ರಿಸಾರ್ಟ್ಸ್ ಅಂಡ್ ಪ್ಯಾಲೇಸಸ್ ಸಂಸ್ಥೆಯು ಅಮೆರಿಕದ ಬೋಸ್ಟನ್ನಿನ 80 ವರ್ಷ ಇತಿಹಾಸ ಹೊಂದಿರುವ ರಿಜ್ ಹೋಟೆಲನ್ನು 7650 ಕೋಟಿ ರೂಪಾಯಿಗಳಿಗೆ ಖರೀದಿಸಿತು.

2008: ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ ‘ಡೆಕ್ಕನ್ ಒಡಿಸ್ಸಿ ಎಕ್ಸ್ ಪ್ರೆಸ್’, 100 ವರ್ಷದ ಹಿಂದೆ ಸಂಚರಿಸುತ್ತಿದ್ದ ‘ಉಗಿಯಂತ್ರದ ರೈಲು’ ಮತ್ತು  ‘ಗಾಲಿಗಳ ಮೇಲೆ ಅರಮನೆ` ಸ್ಥಾನ ಗಳಿಸಿವೆ. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಸಂಘ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಹ್ಯೂಸ್ಟನ್ನಿನಲ್ಲಿ ತಯಾರಿಸಿತು. ಅದರಲ್ಲಿ ಅತ್ಯಂತ ಐಷಾರಾಮಿ ಸೌಲಭ್ಯ ಹೊಂದಿರುವ ‘ಗೋಲ್ಡನ್ ಈಗಲ್ ಟ್ರಾನ್ಸಿಬ್ರೈನ್ ಎಕ್ಸ್ ಪ್ರೆಸ್’  ಮೊದಲನೆ ಸ್ಥಾನ ಪಡೆದಿದೆ.

2008: ಪಶ್ಚಿಮ ಆಫ್ಘಾನಿಸ್ಥಾನದ ಕಾಬೂಲನ್ನು ತತ್ತರಿಸುವಂತೆ ಮಾಡಿದ ನಿರಂತರ ಹಿಮಪಾತ ಮತ್ತು ಚಳಿಗೆ ಕನಿಷ್ಠ 52 ಮಂದಿ ಮೃತರಾದರು.  ಇದು ಇತ್ತೀಚಿನ ವರ್ಷಗಳಲ್ಲಿ ಚಳಿ ಮತ್ತು ಹಿಮಕ್ಕೆ ಸಂಭವಿಸಿದ ಅತ್ಯಧಿಕ ಸಾವು ನೋವಿನ ಪ್ರಮಾಣವೆಂದು ಹೇಳಲಾಗಿದೆ.

2009: ಆಸ್ಟ್ರೇಲಿಯಾದ ಪ್ರಬಲ ಬ್ಯಾಟ್ಸ್ ಮನ್ ಎನಿಸಿದ್ದ  ಮ್ಯಾಥ್ಯು ಹೇಡನ್,  ಬ್ರಿಸ್ಬೇನಿನಲ್ಲಿ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿದರು.

2017: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರ ಆರಾಧನಾ ಮಹೋತ್ಸವವು ಜನವರಿ 13 ರಿಂದ ಜನವರಿ 17ರ ವರೆವಿಗೆ ನಡೆಯಲಿದೆ.  ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಸಂಗೀತಗಾರರು ತಿರುವಯ್ಯಾರಿನಲ್ಲಿ ಬಂದು ಸೇರಿ ಕಛೇರಿ ನಡೆಸುತ್ತಾರಲ್ಲದೆ, ಆರಾಧನೆಯ ಕೊನೆಯ ದಿನದಂದು ಒಟ್ಟಾಗಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡುತ್ತಾರೆ. ಪುಷ್ಯ ಬಹಳ ಪಂಚಮಿ ದಿನದಂದು ತ್ಯಾಗರಾಜರು ಸಮಾಧಿಸ್ಥರಾದ  ದಿನಕ್ಕೆ ಹೊಂದಿಕೊಂಡಂತೆ ಈ ಆಚರಣೆ ನಡೆಯುತ್ತದೆ.

ಪ್ರಮುಖಜನನ/ಮರಣ:

1596: ಡಚ್ ಚಿತ್ರಕಾರ ಜಾನ್ ವಾನ್ ಗೋಯೆನ್ ಲೀಡನ್ ಎಂಬಲ್ಲಿ ಜನಿಸಿದರು.  ಲ್ಯಾಂಡ್ಸ್ಕೇಪ್  ಪ್ರಕೃತಿ ಚಿತ್ರಣಕ್ಕೆ ಹೆಸರಾದ ಅವರು 1200 ವರ್ಣ ಚಿತ್ರ ಮತ್ತು 1000ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ರಚಿಸಿದ್ದರು.

1832: ಅಮೆರಿಕದ ಲೇಖಕ ಮತ್ತು ಪತ್ರಕರ್ತ ಹೊರಾಟಿಗೋ ಅಲ್ಗರ್ ಮೆಸಚುಸೆಟ್ಸ್ ಪ್ರಾಂತ್ಯದ ಚೆಲ್ಸಿಯಾದಲ್ಲಿ ಜನಿಸಿದರು.  ಇವರ ಬಹುತೇಕ ಕಥೆಗಳು “ಸಾಮಾನ್ಯ ಅಥವಾ ಬಡತನ ವಾತಾವರಣದಲ್ಲಿ ಬೆಳೆದು, ಮುಂದೆ ಶ್ರದ್ಧಾವಂತ ದುಡಿಮೆ, ಛಲ ಮತ್ತು ಪ್ರಾಮಾಣಿಕತೆಗಳಿಂದ ಮೇಲೇರಿದ ವ್ಯಕ್ತಿತ್ವಗಳನ್ನು ಬಿಂಬಿಸುವಂತದ್ದಾಗಿವೆ”.  ‘ರಾಗಡ್ ಡಿಕ್’ (Ragged Dick) ಅವರ ಅತ್ಯಂತ ಪ್ರಸಿದ್ಧ ಕೃತಿ

1864: ಜರ್ಮನ್ ಭೌತವಿಜ್ಞಾನಿ ನೊಬೆಲ್ ಪುರಸ್ಕೃತ ವಿಲ್ ಹೆಲ್ಮ್ ವೀನ್ ಅವರು ಜರ್ಮನಿಯ ಫಿಸ್ಚ್ ಹೌಸೇನ್ ಬಳಿಯ, ಗಫ್ಕೇನ್ ಎಂಬಲ್ಲಿ ಜನಿಸಿದರು.  ಇವರು ಶಾಖ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಸಂ ಸಿದ್ಧಾಂತಗಳನ್ನು ಉಪಯೋಗಿಸಿ ‘ವೀನಸ್ ಡಿಸ್ಪ್ಲೇಸ್ಮೆಂಟ್ ಲಾ’ ಎಂಬ ಸಂಶೋಧನೆಯನ್ನು ಮಂಡಿಸಿದರು.  ಇದು ಶಾಖಕ್ಕೊಳಗಾದ ವಸ್ತು (blackbody) ಯಾವುದೇ  ಉಷ್ಣಾಂಶಗಳಲ್ಲಿ  ಹೊರಹೊಮ್ಮಿಸುವ ಸೂಸುವಿಕೆಯನ್ನ(emission ಅನ್ನು) ಲೆಕ್ಕಮಾಡಿ ಹೇಳಲು ಸಹಾಯಮಾಡುತ್ತದೆ.

1885: ಪ್ರಖ್ಯಾತ ಫುಲ್ಲರ್ ಬ್ರಷ್ ಕಂಪೆನಿ ನಿರ್ಮಿಸಿದ ಆಲ್ಫ್ರೆಡ್ ಫುಲ್ಲರ್ ಅವರು, ಕೆನಡಾದ ನೊವಾ ಸ್ಕೋಟಿಯ ಪ್ರಾಂತ್ಯದ, ಕಿಂಗ್ಸ್ ಕೌಂಟಿ ಬಳಿಯ ವೆಲ್ಸ್ ಫೋರ್ಡ್ ಎಂಬಲ್ಲಿ  ಜನಿಸಿದರು.  ಮುಂದೆ ಅಮೆರಿಕಕ್ಕೆ ಬಂದ ಅವರು 1906 ವರ್ಷದಲ್ಲಿ ಕೇವಲ 75 ಡಾಲರ್ ಬಂಡವಾಳದಿಂದ ಸಣ್ಣ ಬ್ರಷ್ ಉದ್ಯಮ ಸ್ಥಾಪಿಸಿದರು. ಪ್ರಾರಂಭಿಕ ವರ್ಷಗಳಲ್ಲಿ ಮನೆ ಮನೆಗೂ ಹೋಗಿ ಮಾರುತ್ತಿದ್ದ ಈತ, 1919ರ ವೇಳೆಗೆ ಒಂದು ಮಿಲಿಯನ್ ಡಾಲರ್ ಮಾರಾಟದ ಉದ್ಯಮವನ್ನು ಬೆಳೆಸಿದ್ದರು.

1898: ‘ಸಂಸ’ ಎಂದೇ ಖ್ಯಾತರಾದ ಖ್ಯಾತ ನಾಟಕಕಾರ, ಸಾಹಿತಿ ಎ. ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಜನಿಸಿದರು. 1919ರಲ್ಲಿ  ‘ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆ’ಯಲ್ಲಿ ಬಿ.ಎಂ.ಶ್ರೀ  ನೇತೃತ್ವದ ತೀರ್ಪುಮಂಡಲಿಯಿಂದ ಸಂಸರ ‘ಸುಗುಣ ಗಂಭೀರ’ ನಾಟಕ ಬಹುಮಾನ ಪಡೆಯಿತು.  ಹೀಗೆ ಪ್ರಸಿದ್ಧರಾದ ‘ಸಂಸ’ರು,  ಮೈಸೂರಿನ ಅರಸರ ಚರಿತ್ರೆಗೆ ಸಂಬಂಧಿಸಿದಂತೆ 23 ನಾಟಕಗಳನ್ನು ರಚಿಸಿದ್ದರೂ, ಕೆಲವು ಮಾತ್ರಾ ಉಳಿದು ಪ್ರಸಿದ್ಧಗೊಂಡಿವೆ.  1939ರಲ್ಲಿ ಆತ್ಮಹತ್ಯೆ ಮಾಡಿಕೊಂಡ ‘ಸಂಸ’ರು ಎರಡು ಕಾದಂಬರಿಗಳು ಮತ್ತು ಹಲವು ಪದ್ಯಕಾವ್ಯಗಳನ್ನೂ ರಚಿಸಿದ್ದರು.

1914: ಇಂಗ್ಲಿಷ್ ನಾಟಕಕಾರ, ಬರಹಗಾರ ಮತ್ತು  ಚಿತ್ರಕಥೆಗಾರರಾದ ಟೆಡ್ ವಿಲ್ಲಿಸ್ ಜನಿಸಿದರು.  ಇವರು ಟೆಲಿವಿಷನ್ನಿನಲ್ಲಿ 34 ನಾಟಕಗಳನ್ನೂ,  34 ಚಿತ್ರಕಥೆಗಳನ್ನೂ ರಚಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.

1924: ಪ್ರಸಿದ್ಧ ಬ್ಯಾಲೆ ನೃತ್ಯ ಕಲೆಗೆ ಹೆಸರಾಗಿದ್ದ, ಫ್ರೆಂಚ್ ನೃತ್ಯ ಕಲಾವಿದ, ನಿರ್ದೇಶಕ  ಮತ್ತು ಸಂಯೋಜಕ ರೋಲ್ಯಾಂಡ್ ಪೆಟಿಟ್ ಅವರು, ಸ್ವಿಟ್ಜರ್ಲ್ಯಾಂಡ್ ದೇಶದ ಜಿನೀವಾದಲ್ಲಿ ಜನಿಸಿದರು.

1926:  ಇಂಗ್ಲಿಷ್ ಬರಹಗಾರ ಮತ್ತು ಸೇನಾನಿ ಮೈಖೇಲ್ ಬಾಂಡ್ ಅವರು, ಬರ್ಕ್ ಶೈರಿನ ನ್ಯೂಬರಿ ಎಂಬಲ್ಲಿ ಜನಿಸಿದರು.  ಅವರ ಸೃಷ್ಟಿಯಾದ  ‘ಪ್ಯಾಡಿಂಗ್ ಟನ್ ಬೇರ್’ ಸರಣಿ ಕೃತಿಶ್ರೇಣಿ  ಪ್ರಸಿದ್ಧಿ ಪಡೆದಿದೆ.

1927: ದಕ್ಷಿಣ ಆಫ್ರಿಕಾದ ನೊಬೆಲ್ ಪುರಸ್ಕೃತ ಜೀವವಿಜ್ಞಾನಿ ಮತ್ತು ಶಿಕ್ಷಕ ಸಿಡ್ನಿ ಬ್ರೆನ್ನರ್ ಅವರು, ಗೌತೆಂಗ್ ಬಳಿಯ ಜೆರ್ಮಿಸ್ಟನ್ ಎಂಬಲ್ಲಿ ಜನಿಸಿದರು.   ವಂಶವಾಹಿನಿಗಳ  ಕುರಿತಾದ ‘ಜೆನೆಟಿಕ್ ಕೋಡ್’ ವಿಷಯದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಅವರಿಗೆ 2002 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿದೆ.

1938: ಪ್ರಖ್ಯಾಂತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ವಾಂಸ, ಸಂತೂರ್ ವಾದಕ, ಸಂಗೀತ ಸಂಯೋಜಕ ಪಂಡಿತ್ ಶಿವಕುಮಾರ ಶರ್ಮ ಅವರು ಜಮ್ಮುವಿನಲ್ಲಿ ಜನಿಸಿದರು.  ಸಂತೂರ್ ನಾದವನ್ನು ವಿಶ್ವದೆಲ್ಲೆಡೆ ಹರಿಸುತ್ತಿರುವ ಇವರು, ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ ಅವರೊಡಗೂಡಿ ‘ಶಿವ್-ಹರಿ’ ಹೆಸರಿನಿಂದ  ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕ ಜೋಡಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.  ಹಲವಾರು ಆಲ್ಬಂ ಮತ್ತು ಚಲನಚಿತ್ರ ಸಂಗೀತದ  ಪ್ಲಾಟಿನಂ ಡಿಸ್ಕ್, ಪದ್ಮಶ್ರೀ, ಪದ್ಮವಿಭೂಷಣ, ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಗೌರವ ಮುಂತಾದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

1949: ಭಾರತದ ಪ್ರಥಮ ಗಗನಯಾತ್ರಿಯಾಗಿ ಪ್ರಸಿದ್ಧರಾಗಿರುವ ಭಾರತೀಯ ವಾಯುಸೇನಾ ಅಧಿಕಾರಿ ರಾಕೇಶ್ ಶರ್ಮಾ ಅವರು, ಪಂಜಾಬಿನ ಪಾಟಿಯಾಲದಲ್ಲಿ ಜನಿಸಿದರು.  ಭಾರತ ಮತ್ತು ಸೋವಿಯತ್ ರಷ್ಯಾ ಬಾಹ್ಯಾಕಾಶ ಸಹಯೋಗದ  ‘ಇಂಟರ್ ಕಾಸ್ಮೊಸ್’ ಕಾರ್ಯಕ್ರಮದಡಿಯಲ್ಲಿ ಅವರು ಏಪ್ರಿಲ್ 2, 1984ರಂದು ‘ಸೋಯುಜ್ ಟಿ-11’ರಲ್ಲಿ ಯಶಸ್ವೀ ಬಾಹ್ಯಾಕಾಶ ಕೈಗೊಂಡಿದ್ದರು. ಹೀರೋ ಆಫ್ ದಿ ಸೋವಿಯತ್ ಯೂನಿಯನ್ ಮತ್ತು ಭಾರತ ಸರ್ಕಾರದ ಅಮೂಲ್ಯ ಸೈನ್ಯ ಸೇವೆಗೆ ಸಲ್ಲುವ  ಶಾಂತಿಕಾಲದ ‘ಅಶೋಕ ಚಕ್ರ’ ಪುರಸ್ಕಾರಗಳು ಅವರಿಗೆ ಸಂದಿವೆ.

1952: ಬ್ರಿಟಿಷ್ ಪತ್ರಕರ್ತ ಹಾಗೂ ‘ದಿ ಇಂಡಿಪೆಂಡೆಂಟ್’ ಪತ್ರಿಕೆಯ ಸಂಸ್ಥಾಪಕಾರಲ್ಲಿ ಒಬ್ಬರಾದ ಸ್ಟೀಫನ್ ಗ್ಲೋವರ್ ಜನಿಸಿದರು.

1960: ಅಮೆರಿಕದ ಭೌತವಿಜ್ಞಾನಿ ಮತ್ತು ರಸಾಯನ ಶಾಸ್ತ್ರಜ್ಞ ಎರಿಕ್ ಬೆಟ್ಸಿಗ್ ಅವರು ಮಿಚಿಗನ್ ಬಳಿಯ ಆನ್ ಅರ್ಬರ್ ಎಂಬಲ್ಲಿ ಜನಿಸಿದರು.   ಅವರಿಗೆ 2014ರಲ್ಲಿ ಅತ್ಯುತ್ಕೃಷ್ಟ ‘ಫ್ಲೋರೋಸೆನ್ಸ್ ಸೂಕ್ಷ್ಮದರ್ಶಕ ತಂತ್ರಜ್ಞಾನ’ (super-resolved fluorescence microscopy)  ಅಭಿವೃದ್ಧಿ ಪಡಿಸಿದ್ದಕ್ಕಾಗಿ ರಸಾಯನ ಶಾಸ್ತ್ರದಲ್ಲಿನ ನೊಬೆಲ್ ಪುರಸ್ಕಾರ ಸಂದಿತು.

1151: ಫ್ರೆಂಚ್ ಇತಿಹಾಸಜ್ಞ ಮತ್ತು ಗೊಥಿಕ್ ಕಟ್ಟಡ ವಿನ್ಯಾಸದ ಪ್ರಾರಂಭಿಕ ಪೋಷಕರಲ್ಲೊಬ್ಬರೆನಿಸಿರುವ  ಸುಗೇರ್ ನಿಧನರಾದರು.

1599: ಹೊಸ ಇಂಗ್ಲಿಷ್ ಕಾವ್ಯದ ಪ್ರಧಾನ ಕವಿಗಳಲ್ಲೊಬ್ಬರಾದ ಎಡ್ಮಂಡ್ ಸ್ಪೆನ್ಸರ್ ಲಂಡನ್ನಿನಲ್ಲಿ ನಿಧನರಾದರು. ಅವರ  ‘ದಿ ಫೇರಿ ಕ್ವೀನ್’, ‘ಅಲ್ಲಿಗೊರಿ’ ಮುಂತಾದ ಅವರ ಕವಿತೆಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ.

1625: ಫ್ಲೆಮಿಶ್ ಚಿತ್ರಕಲೆಯ ಪುನರುತ್ಥಾನ ಚಿತ್ರಕಾರರಾದ ಪೀಟರ್ ಬ್ರೂಘೇಲರ ಮಗನಾದ ಜಾನ್ ಬ್ರೂಘೆಲ್ ನಿಧನರಾದರು.  ಜಾನ್ ಬ್ರೂಘೆಲ್ ಮತ್ತು ಆತನ ಗೆಳೆಯ ರೂಬೆನ್, 17ನೇ ಶತಮಾನದಲ್ಲಿನ ಮೊದಲ ಮೂರು ದಶಕಗಳಲ್ಲಿ,   ಫ್ಲೆಮಿಶ್ ಚಿತ್ರಕಲೆಯಲ್ಲಿನ ಪ್ರಮುಖ ಕಲಾವಿದರೆಂದು ಪರಿಗಣಿತರಾಗಿದ್ದಾರೆ.

1832: ವಿಶ್ವಪ್ರಸಿದ್ಧವಾದ ಇಂಗ್ಲೆಂಡಿನ ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು ಸ್ಥಾಪಿಸಿದ,  ಕ್ರಿಕೆಟ್ಟಿಗ ಥಾಮಸ್ ಲಾರ್ಡ್ ಅವರು ಹ್ಯಾಂಪ್ ಶೈರಿನ ವೆಸ್ಟ್ ಮಿಯಾನ್ ಎಂಬಲ್ಲಿ ನಿಧನರಾದರು.

Categories
e-ದಿನ

ಜನವರಿ-12

ರಾಷ್ಟ್ರೀಯ ಯುವ ದಿನ
ಭಾರತ ಸರ್ಕಾರವು 1984ರ ವರ್ಷದಲ್ಲಿ, ವಿಶ್ವಕ್ಕೆ ಭಾರತೀಯ ಸನಾತನ ಧರ್ಮವನ್ನು ಮನಮುಟ್ಟುವಂತೆ ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು ಜನಿಸಿದ ಜನವರಿ 12 ದಿನವನ್ನು ‘ರಾಷ್ಟ್ರೀಯ ಯುವದಿನ’ ಎಂದು ಘೋಷಿಸಿತು.

ಪ್ರಮುಖಘಟನಾವಳಿಗಳು:

1554: ದಕ್ಷಿಣಪೂರ್ವಾ ಏಷ್ಯಾದ ಅತ್ಯಂತ ದೊಡ್ಡ ಚಕ್ರಾಧಿಪತ್ಯವನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾದ ಬಯಿನ್ನೌಂಗ್ ಅವರು ಬರ್ಮಾದ ರಾಜ ಸಿಂಹಾಸನವನ್ನೇರಿದರು.

1848: ಮಾರ್ಕ್ವೆಸ್ ಡಾಲ್ ಹೌಸಿ ಅವರು ಭಾರತದ ಗವರ್ನರ್ ಜನರಲ್ ಆದರು.  ಇವರು ಯುದ್ಧ ಮತ್ತು ಸಂಧಾನಗಳ ಮೂಲಕ ವಿವಿಧ ರಾಜ್ಯಗಳನ್ನು ಸೇರಿಸಿ ಭಾರತದ ನಕ್ಷೆಯನ್ನು ರೂಪಿಸಿದ ವ್ಯಕ್ತಿ  ಎಂದು ಪರಿಗಣಿತರಾಗಿದ್ದಾರೆ.

1866: ಲಂಡನ್ನಿನಲ್ಲಿ ‘ದಿ ರಾಯಲ್ ಏರೋನಾಟಿಕಾಲ್ ಸೊಸೈಟಿ’ ಸ್ಥಾಪನೆಗೊಂಡಿತು.

1895: ಯುನೈಟೆಡ್ ಕಿಂಗ್ಡಂನಲ್ಲಿ ‘ದಿ ನ್ಯಾಷನಲ್ ಟ್ರಸ್ಟ್’ ಆರಂಭಗೊಂಡಿತು. ಐತಿಹಾಸಿಕ ಸ್ಮಾರಕಗಳು  ಮತ್ತು ಪ್ರಾಕೃತಿಕ ಸೊಬಗನ್ನು ಸಂರಕ್ಷಿಸುವುದು ಈ ಸಂಸ್ಥೆಯ ಪ್ರಧಾನ ಆಶಯವಾಗಿದೆ.

1908: ಐಫೆಲ್ ಗೋಪುರದಿಂದ  ಪಥಮ ಬಾರಿಗೆ  ರೇಡಿಯೋ ದೂರ ಸಂದೇಶವನ್ನು ಭಿತ್ತರಿಸಲಾಯಿತು.

1915: ಅಮೇರಿಕದ ಪ್ರತಿನಿಧಿ ಸಭೆಯಾದ ‘ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’   ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿತು.

1932: ಹಟ್ಟೀ ಕಾರವೇ ಅವರು ಅಮೆರಿಕದ ಸೆನೆಟ್ಟಿಗೆ ಆಯ್ಕೆಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು.

1934: ಚಿತ್ತಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು.

1986: ಅಮೇರಿಕದ ಕಾಂಗ್ರೆಸ್ಸಿಗರಾದ ಬಿಲ್ ನೆಲ್ಸನ್ ‘ಎಸ್.ಟಿ.ಎಸ್-61-ಕಾಸಾ’ ಯೋಜನೆಯ ವಿಶೇಷ ತಜ್ಞರಾಗಿ ಕೊಲಂಬಿಯಾ ಗಗನ ನೌಕೆಯನ್ನೇರಿ ಬಾಹ್ಯಾಕಾಶಕ್ಕೆ ಚಿಮ್ಮಿದರು.

1991: ಕುವೈತಿನಿಂದ  ಇರಾಕ್ ಪಡೆಗಳನ್ನು ಹೊರಗಟ್ಟಲು, ತನ್ನ ಮಿಲಿಟರಿ ಬಲವನ್ನು ಬಳಸುವ ವಿಧೇಯಕಕ್ಕೆ  ಅಮೇರಿಕದ ಕಾಂಗ್ರೆಸ್ ಅಂಗೀಕಾರ ನೀಡಿತು.

1992: ದಾವಣಗೆರೆಯಲ್ಲಿ  ಡಾ. ಜಿ. ಎಸ್. ಶಿವರುದ್ರಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಾಲ್ಕು ದಿನ ನಡೆದ 61ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.

1998: ‘ಹ್ಯೂಮನ್ ಕ್ಲೋನಿಂಗ್’ ವೈಜ್ಞಾನಿಕ ಪ್ರಯೋಗಗಳನ್ನು ನಡೆಸದಿರಲು 19 ಐರೋಪ್ಯ ರಾಷ್ಟ್ರಗಳು ಸಾಮಾಹಿಕವಾಗಿ ನಿರ್ಧರಿಸಿದವು.

2001: ಡೌನ್ ಟೌನ್ ಡಿಸ್ನಿ ಸಂಸ್ಥೆ, ಕ್ಯಾಲಿಫೋರ್ನಿಯಾದ ಅನಹೀಮ್ ಪ್ರದೇಶದಲ್ಲಿ ‘ಡಿಸ್ನೀ ಲ್ಯಾಂಡ್ ರೆಸಾರ್ಟ್’ ಒಂದನ್ನು  ಸಾರ್ವಜನಿಕರಿಗೆ ತೆರೆಯಿತು.

2004: ವಿಶ್ವದ ಅತಿದೊಡ್ಡ ಓಶನ್ ಲೈನರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ  ‘ಆರ್.ಎಮ್.ಎಸ್. ಕ್ವೀನ್ ಮೇರಿ 2’  ನೌಕೆ, ತನ್ನ ಚೊಚ್ಚಲ ಸಮುದ್ರಯಾನವನ್ನು ಆರಂಭಿಸಿತು.

2005: ‘ನಾಸಾ’ ಸಂಸ್ಥೆ ತನ್ನ  ‘ಡೀಪ್ ಇಂಪ್ಯಾಕ್ಟ್’ ಸ್ಪೇಸ್ ಪ್ರೋಬ್ ಅನ್ನು, ಕೇಪ್ ಕೆನಾವರೆಲ್ ಕೇಂದ್ರದಿಂದ, ಡೆಲ್ಟಾ ಆಲ್  ರಾಕೆಟ್ ಮೂಲಕ ಉಡಾಯಿಸಲಾಯಿತು.

2006: ಸೌದಿ ಅರೇಬಿಯಾದ ಹಜ್ ಯಾತ್ರೆಯ ಕೊನೆಯ ದಿನ,  ಸೈತಾನನಿಗೆ ಕಲ್ಲೆಸೆಯುವ ಧಾರ್ಮಿಕ ವಿಧಿ ಆಚರಣೆ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 362 ಯಾತ್ರಿಕರು ಮೃತರಾದರು.

2007: ಸಂಸತ್ತಿನ ಮೇಲೆ ದಾಳಿ ಮಾಡಿದ ಸಂಚಿಗಾಗಿ ಮರಣದಂಡನೆಗೆ ಗುರಿಯಾದ ಮೊಹಮ್ಮದ್ ಅಫ್ಜಲ್ ಗುರುವಿನ ಕ್ಷಮಾದಾನ ಕೋರಿಕೆ ಮೇಲ್ಮನವಿಯನ್ನು ವಜಾಮಾಡಿದ ಸುಪ್ರೀಂಕೋರ್ಟ್, ಈ ಹಿಂದೆ  ಹೈಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯಿತು.

2010: ಹೈಟಿಯಲ್ಲಿ ಉಂಟಾದ ಭೀಕರ ಭೂಕಂಪದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾದರಲ್ಲದೆ, ಅದರ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ಬಹುತೇಕ ನಾಶಗೊಂಡಿದೆ.

ಪ್ರಮುಖಜನನ/ಮರಣ:

1591: ಸ್ಪಾನಿಷ್ ಚಿತ್ರಗಾರ ‘ಜುಸೆಪೆ ಡಿ ರಿಬೆರಾ’ ಅವರು ಸ್ಪೈನಿನ ವೆಲೆನ್ಸಿಯಾ ಬಳಿಯ ಕ್ಸಟಿವ ಎಂಬಲ್ಲಿ ಜನಿಸಿದರು.  ಮೂಲತಃ ಅವರ ಚಿತ್ರಗಳು ಸ್ಪಾನಿಷ್ ಕಲೆಯನ್ನು ಬಿಂಬಿಸಿದರೂ, ಅವರ ಬಹುತೇಕ ಚಿತ್ರಗಳು ಇಟಲಿಯಲ್ಲಿ ಮೂಡಿಬಂತು.

1822: ‘ಎಟಿಯನ್ ಲೆನಾಯರ್’ ಅವರು ಬೆಲ್ಜಿಯಂ ದೇಶದ ಮುಸ್ಸಿ-ಲಾ-ವಿಲ್ಲೆ ಎಂಬಲ್ಲಿ ಜನಿಸಿದರು.  ಇವರು  ಪ್ರಥಮ ಬಾರಿಗೆ ಇಂಟರ್ನಲ್ ಕಂಬಷನ್ ಇಂಜಿನ್ ತಯಾರಿಸಿದರು.  ಇಂಜಿನ್ನಿನ ಒಳಗೆ ಹರಿಯುವ ತೈಲಕ್ಕೆ, ಇದರಲ್ಲಿ  ಹರಿಯುವ ಗಾಳಿಯು ಶಾಖವನ್ನು ಸೃಜಿಸಿ,   ಬಿರುಸಿನ ಒತ್ತಡದ ಅನಿಲವನ್ನು ಹೊರಹೊಮ್ಮಿಸುತ್ತದೆ.  ಆ ಅನಿಲದ ಒತ್ತಡವನ್ನು ಪಿಸ್ಟನ್ಗಳು, ಟರ್ಬೈನ್ಗಳು, ರೋಟಾರುಗಳಲ್ಲಿ  ಅಳವಡಿಸಿಕೊಳ್ಳುವುದರಿಂದ   ವಿವಿಧ ರೀತಿಯ ಉಪಯೋಗೀ  ಯಂತ್ರಗಳಿಗೆ ಚಾಲನಾ ಶಕ್ತಿಯನ್ನು ಒದಗಿಸಿಕೊಳ್ಳುವ ಸಾಧ್ಯತೆಗಳು ತೆರೆದುಕೊಂಡವು.

1849: ಫ್ರೆಂಚ್ ಚಿತ್ರಕಾರ ಜೀನ್ ಬೆರಾಡ್ ಅವರು ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ ಜನಿಸಿದರು.  ಪ್ಯಾರಿಸ್ ನಗರದ ಜೀವನವನ್ನು ಅದ್ಭುತವಾಗಿ ಚಿತ್ರಿಸಿರುವುದು ಇವರ ಕಲೆಯ ವಿಶೇಷತೆ.  ಇವರು ಧಾರ್ಮಿಕ ಚಿತ್ರಗಳನ್ನು ಸಹಾ ಸಮಕಾಲೀನ ಹಿನ್ನೆಲೆಗಳಲ್ಲಿ ಚಿತ್ರಿಸಿದ್ದಾರೆ.

1863: ನರೇಂದ್ರನಾಥ ದತ್ತ ಎಂಬ ಹುಟ್ಟು ಹೆಸರು ಪಡೆದಿದ್ದ ಸ್ವಾಮಿ ವಿವೇಕಾನಂದರು ಕಲ್ಕತ್ತಾದಲ್ಲಿ ಜನಿಸಿದರು.  ಚಿಕ್ಕವಯಸ್ಸಿನಿಂದಲೂ ಯಾವುದೇ ಪೂರ್ವಾಗ್ರಹವಿಲ್ಲದ ಮುಕ್ತ ವೈಚಾರಿಕ ಮನೋಭಾವದಲ್ಲಿ, ದೇವರ ಅಸ್ತಿತ್ವದಂತಹ ವಿಚಾರಗಳನ್ನು ಶೋಧಿಸಿ ಹೊರಟ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರ ಸನ್ನಿಧಾನದಲ್ಲಿ ಆ ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟತೆ ದೊರೆಯಿತು.  ಶ್ರೀ ರಾಮಕೃಷ್ಣ ಮಿಷನ್ ಸ್ಥಾಪಿಸಿ, ಭಾರತದಾದ್ಯಂತ ಪರ್ಯಟನೆ ನಡೆಸಿದ ಅವರು ತಮ್ಮ ವಿಚಾರಧಾರೆಯಿಂದ  ಜನಸಾಮಾನ್ಯರಿಂದ ರಾಜಮಹಾರಾಜರುಗಳವರೆಗೆ ಎಲ್ಲರನ್ನೂ  ಆಕರ್ಷಿಸಿದರು. ಅಮೆರಿಕದ  ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಿಂದ ಸಮಸ್ತ ವಿಶ್ವಕ್ಕೆ, ಭಾರತೀಯ ಸಂಸ್ಕೃತಿಗೆ ಗೌರವ ತರುವಂತಹ ಸುಸ್ಪಷ್ಟ ಒಳನೋಟವನ್ನು ತೋರಿಸಿಕೊಟ್ಟರು.

1869: ಭಗವಾನ್ ದಾಸ್ ಅವರು ವಾರಣಾಸಿಯಲ್ಲಿ ಜನಿಸಿದರು. ಸ್ವಾತಂತ್ಯ್ರ ಹೋರಾಟಗಾರರಾಗಿ,  ಥಿಯೋಸೊಪಿಸ್ಟರಾಗಿ, ಹಿಂದೂಸ್ಥಾನಿ ಕಲ್ಚರ್ ಸೊಸೈಟಿಯ ಕ್ರಿಯಾಶೀಲ ಸದಸ್ಯರಾಗಿ, ಬ್ರಿಟಿಷ್ ಆಡಳಿತದಲ್ಲಿ ಕೇಂದ್ರೀಯ ಲೆಜಿಸ್ಲೇಟಿವ್ ಅಸೆಂಬ್ಲಿ ಸದಸ್ಯರಾಗಿ ವಿವಿಧ ರೀತಿಯಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.  ಅನ್ನಿ ಬೆಸೆಂಟ್ ಅವರೊಂದಿಗೆ ಸೆಂಟ್ರಲ್ ಹಿಂದೂ ಶಾಲೆ ಆರಂಭಿಸಿದ ಅವರು  ಮುಂದೆ ಕಾಶಿ ವಿದ್ಯಾಪೀಠ ಸ್ಥಾಪಿಸಿದರು.  1955ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿತು.

1899: ರಸಾಯನ ಶಾಸ್ತ್ರಜ್ಞನರಾದ ಪಾಲ್ ಹರ್ಮನ್ ಮುಲ್ಲರ್  ಸ್ವಿಟ್ಜರ್ಲ್ಯಾಂಡ್ ದೇಶದ, ಸೊಲೋಟರ್ನ್ ಬಳಿಯ ಓಲ್ಟೆನ್ ಎಂಬಲ್ಲಿ ಜನಿಸಿದರು. ಡಿ.ಡಿ.ಟಿ ಯಲ್ಲಿರುವ  ಕೀಟನಾಶಕ ಗುಣಗಳನ್ನು ಸಂಶೋಧಿಸಿದ ಅವರು, ಇದನ್ನು  ಕ್ರಿಮಿಗಳು ಹರಡುವ ರೋಗಗಳಾದ ಮಲೇರಿಯಾ ಜಾಂಡೀಸ್ ಮುಂತಾದವುಗಳ ನಿವಾರಣೆಗೆ ಬಳಸಬಹುದೆಂದು ತೋರಿಸಿಕೊಟ್ಟರು.  ಈ ಸಂಶೋಧನೆಗಾಗಿ ಅವರಿಗೆ 1948ರ ನೊಬೆಲ್ ಪುರಸ್ಕಾರ ಸಂದಿತು.

1918: ಪಾಶ್ಚಿಮಾತ್ಯ ದೇಶಗಳಲ್ಲಿ  ಭಾರತೀಯ ಯೋಗ ಮತ್ತು ಧ್ಯಾನಪದ್ದತಿಗಳನ್ನು ಪಸರಿಸಿದ  ಗುರು ಮಹರ್ಷಿ ಮಹೇಶ್ ಯೋಗಿ ಅವರು, ಜಬಲ್ಪುರದಲ್ಲಿ ಜನಿಸಿದರು.  ಮನಸ್ಸಿನ ನಿಯಂತ್ರಣ ಮತ್ತು  ಏಕಾಗ್ರತೆ ಸಾಧಿಸುವ ಟ್ರಾನ್ಸಿಡೆಂಟಲ್ ಮೆಡಿಟೇಷನ್ ಯೋಗ ಪದ್ಧತಿಯಿಂದ ಅವರು ಪ್ರಸಿದ್ಧರಾದರು.  1968ರಲ್ಲಿ, ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು, ಇವರ ಶಿಷ್ಯರಾದ ಮೇಲೆ, ಇವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು. ಮಾದಕ ವ್ಯಸನಗಳಿಗೆ ಬಲಿಯಾದ ರಾಕ್ ಗಾಯಕರಿಗೆ ಇವರ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. 2008, ಫೆಬ್ರುವರಿ 5ರಂದು ನಿಧನರಾದರು.

1920: ಅಮೆರಿಕದ ಚಳುವಳಿಗಾರ ಮತ್ತು ರಾಜಕೀಯ ನಾಯಕರಾಗಿದ್ದ ಜೇಮ್ಸ್ ಫಾರ್ಮರ್ ಅವರು ಟೆಕ್ಸಾಸಿನ ಮಾರ್ಷಲ್ ಎಂಬಲ್ಲಿ ಜನಿಸಿದರು.  ಇವರು ಇತರರೊಂದಿಗೆ ಸ್ಥಾಪಿಸಿ ಅಧ್ಯಕ್ಷತೆ ವಹಿಸಿದ್ದ ಅಮೆರಿಕದಲ್ಲಿರುವ ಆಫ್ರಿಕನ್ ಮೂಲದವರ ‘ಕಾಂಗ್ರೆಸ್ ಫಾರ್ ರೇಸಿಯಲ್ ಈಕ್ವಾಲಿಟಿ’ ಸಂಘಟನೆಯು, ಅಲ್ಲಿ ನಡೆದ  ‘ಸಾರ್ವಜನಿಕ ಹಕ್ಕುಗಳ ಚಳುವಳಿಯಲ್ಲಿ’  (ಸಿವಿಲ್ ರೈಟ್ಸ್ ಮೂವ್ಮೆಂಟ್ನಲ್ಲಿ ) ಪ್ರಮುಖ ಪಾತ್ರವಹಿಸಿತ್ತು.

1929: ಕನ್ನಡದ ವಿದ್ವಾಂಸ ಮತ್ತು ಸಂಶೋಧಕರಾದ ಶ್ರೀನಿವಾಸ ಹಾವನೂರ್ ಅವರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ ಜನಿಸಿದರು. ಅರವತ್ತಕ್ಕೂ ಹೆಚ್ಚು ಮಹತ್ವದ ಸಂಶೋಧನಾ ಕೃತಿಗಳನ್ನು ರಚಿಸಿದ ಡಾ. ಶ್ರೀನಿವಾಸ ಹಾವನೂರು ಅವರು, ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ಅನ್ನು ಬಳಸಿದವರಲ್ಲಿ ಮೊದಲಿಗರು.  2010ರ ವರ್ಷದಲ್ಲಿ ನಿಧನರಾದ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳಿಗೆ ಭಾಜನರಾಗಿದ್ದರು.

1964: ಪ್ರಸಿದ್ಧ ಅಮೆಜಾನ್.ಕಾಂ ಸಂಸ್ಥೆಯ ಸಂಸ್ಥಾಪಕ, ಕಂಪ್ಯೂಟರ್ ವಿಜ್ಞಾನಿ ಮತ್ತು ವ್ಯಾಪಾರಸ್ಥ ಜೆಫ್ ಬೆಸೋಸ್ ಅವರು ಅಮೆರಿಕ ದೇಶದಲ್ಲಿನ,  ನವ ಮೆಕ್ಸಿಕೋದ, ಆಲ್ಬುಕರ್ಕ್ ಎಂಬಲ್ಲಿ ಜನಿಸಿದರು.  ಅವರು ಸ್ಥಾಪಿಸಿರುವ ಅಮೆಜಾನ್ ಸಂಸ್ಥೆ ಪ್ರಸಕ್ತದಲ್ಲಿ ವಿಶ್ವ ವ್ಯಾಪೀ ಅಂತರಜಾಲದಲ್ಲಿನ ಅತ್ಯಂತ ದೊಡ್ಡ  ವಹಿವಾಟು ಸಂಸ್ಥೆಯಾಗಿದೆ.

1705:  ಇಟಲಿಯ ಪ್ರಸಿದ್ಧ ವರ್ಣ ಚಿತ್ರಕಾರ ಲುಕಾ ಜಿಯಾರ್ಡಾನೋ ನೇಪಲ್ಸ್ ನಗರದಲ್ಲಿ ನಿಧನರಾದರು.  ನೇಪಲ್ಸ್, ರೋಮ್, ಫ್ಲಾರೆನ್ಸ್, ವೆನಿಸ್ ಮತ್ತು ಸ್ಪೈನ್ಗಳಲ್ಲಿ ಅವರು ಪ್ರಸಿದ್ಧ ಚಿತ್ರಗಳನ್ನು ರಚಿಸಿದರು.

1934: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು.

1976: ಪ್ರಸಿದ್ಧ ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ನಾಟಕ ರಚನಕಾರ್ತಿ  ಅಗಾಥಾ ಕ್ರಿಸ್ತಿ ಅವರು, ಇಂಗ್ಲೆಂಡಿನ ‘ಆಕ್ಸ್ ಫೋರ್ಡ್ ಷೈರಿನ’ ವಿಂಟರ್ಬ್ರೂಕ್ ಎಂಬಲ್ಲಿ  ನಿಧನರಾದರು.

1992:  ಹಿಂದೂಸ್ಥಾನಿ ಸಂಗೀತದ ಮೇರು ಕಲಾವಿದ ಕುಮಾರ ಗಂಧರ್ವ ಅವರು ದೇವಸ್ ಎಂಬಲ್ಲಿ ನಿಧನರಾದರು. ಬೆಳಗಾವಿಯ ಸುಳ್ಳೇಬಾವಿ ಎಂಬ ಗ್ರಾಮದಲ್ಲಿ ಜನಿಸಿದ ಇವರ ಬಾಲ್ಯದ ಹೆಸರ   ಶಿವಪುತ್ರ ಕೊಂಕಾಳಿಮಠ.  ಇವರು ಆರು ವರ್ಷದ ಬಾಲಕರಾಗಿದ್ದಾಗ ಇವರ  ಅದ್ಭುತ ಗಾಯನ ಕೇಳಿದ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಗರಿಸಿದ್ದು ಅವರ ಹೆಸರೇ ಆಯ್ತು. ಇವರಿಗೆ   ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್  ಮುಂತಾದ ಅನೇಕ  ಗೌರವಗಳು ಸಂದಿದ್ದವು.

2001: ಪ್ರಸಿದ್ಧ ತಂತಜ್ಞ ಮತ್ತು ವಿಶ್ವಪ್ರಸಿದ್ಧ ಕಂಪ್ಯೂಟರ್ ತಂತ್ರಜ್ಞಾನ ಸಂಸ್ಥೆಗಳಾದ  HP (ಹೆವ್ಲೆಟ್ ಪ್ಯಾಕರ್ಡ್), ಎಗಿಲೆಂಟ್ ಟೆಕ್ನಾಲಜೀಸ್, ಕೀ ಸೈಟ್ ಮುಂತಾದ ಸಂಸ್ಥೆಗಳ ಸ್ಥಾಪಕರಲ್ಲಿ ಒಬ್ಬರಾದ  ‘ವಿಲಿಯಂ ರೆಡಿಂಗ್ ಟನ್ ಹೆವ್ಲೆಟ್’  ಅವರು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊ ಎಂಬಲ್ಲಿ ನಿಧನರಾದರು. 

Categories
e-ದಿನ

ಜನವರಿ-11

ದಿನಾಚರಣೆಗಳು:

ಜರ್ಮನ್ ಆಪಲ್ಸ್ ಡೇ

ಜರ್ಮನಿಯಲ್ಲಿ ಜನರ ಗಮನವನ್ನು ಆಪಲ್ ಗಿಡಗಳತ್ತ ಸೆಳೆದು ಅವುಗಳನ್ನು ದೇಶದಾದ್ಯಂತ ಹೆಚ್ಚು ಜನಪ್ರಿಯಗೊಳಿಸಲು ಜನವರಿ 11ದಿನವನ್ನು ಆಪಲ್ ದಿನವಾಗಿ ಆಚರಿಸಲಾಗುತ್ತಿದೆ.  ಈ ಆಚರಣೆ 2010ರ ವರ್ಷದಿಂದ ಆರಂಭಗೊಂಡಿದೆ.

ಅಮೆರಿಕದಲ್ಲಿ ‘ನ್ಯಾಷನಲ್ ಹ್ಯುಮನ್ ಟ್ರಾಫಿಕಿಂಗ್ ಅವೇರ್ನೆಸ್ ಡೇ’

ಜೀತಪದ್ಧತಿ  ಮತ್ತು ಮನುಷ್ಯರನ್ನು ಸಾಗಣೆ ಮಾಡುವ ವ್ಯವಸ್ಥೆಗಳ ವಿರುದ್ಧ ಜನಜಾಗೃತಿ ಮೂಡಿಸುವ  ಕುರುಹಾಗಿ ಅಮೆರಿಕದಲ್ಲಿ  ‘ನ್ಯಾಷನಲ್ ಹ್ಯುಮನ್ ಟ್ರಾಫಿಕಿಂಗ್ ಅವೇರ್ನೆಸ್ ಡೇ’ ಆಚರಿಸಲಾಗುತ್ತದೆ.

ಪ್ರಮುಖಘಟನಾವಳಿಗಳು:

532: ಕಾನ್ ಸ್ಟಾಂನ್ಟಿನೋಪಾಲ್ನಲ್ಲಿ ರಥದ ಓಟಸ್ಪರ್ಧೆ ಏರ್ಪಾಡಾದ ಸಂದರ್ಭದಲ್ಲಿ, ವಿವಿಧ ರಥ ಓಡಿಸುವ ಸ್ಪರ್ಧಿಗಳ  ಬೆಂಬಲಿಗರ ನಡುವೆ ವಾಗ್ವಾದಕ್ಕೆ  ಮೊದಲಾಗಿ, ಅದು ಹಿಂಸಾತ್ಮಕ ಹೋರಾಟಕ್ಕೆ ತಿರುಗಿತು.

1569: ಇಂಗ್ಲೆಂಡಿನಲ್ಲಿ  ಮೊದಲಬಾರಿಗೆ ‘ಲಾಟರಿ’ಯೊಂದನ್ನು ಗುರುತಿಸಿ ದಾಖಲಿಸಲಾಯಿತು.

1693: ಭೀಕರ ಭೂಕಂಪದಲ್ಲಿ ಸಿಸಿಲಿ ಮತ್ತು ಮಾಲ್ಟಾದ ಹಲವು ಭಾಗಗಳು ನಾಶಗೊಂಡವು.

1759: ಪೆನ್ಸಿಲ್ ವೇನಿಯಾದ ಫಿಲಡೆಲ್ಫಿಯಾದಲ್ಲಿ ಅಮೆರಿಕದ ಮೊದಲ ಜೀವಾ ವಿಮಾ ಸಂಸ್ಥೆ ಪ್ರಾರಂಭಗೊಂಡಿತು

1779: ಚಿಂಗ್–ಥಾಂಗ್ ಕ್ಹೊಮ್ಬಾ ಮಣಿಪುರದ ಅರಸರಾಗಿ ಸಿಂಹಾಸನರೂಢರಾದರು.

1787: ವಿಲಿಯಂ ಹರ್ಷೆಲ್ ಅವರು ಯುರೇನಸ್ ಗ್ರಹದ ಎರಡು ಚಂದ್ರರನ್ನು ಅನ್ವೇಷಿಸಿದರು.

1922: ಮಧುಮೇಹ ರೋಗಕ್ಕೆ  ಸಿಲುಕಿ ಮರಣಾವಸ್ಥೆಯಲ್ಲಿದ್ದ  14 ವರ್ಷದ  ಬಾಲಕ ಲಿಯೋನಾರ್ಡ್ ಥಾಂಪ್ಸನ್ ಗೆ ಟೊರೊಂಟೋ ಜನರಲ್ ಆಸ್ಪತ್ರೆಯಲ್ಲಿ ಇನ್ಸುಲಿನ್ ನೀಡಲಾಯಿತು. ಇದಕ್ಕೆ ಒಂದು ವರ್ಷಕ್ಕೆ ಮೊದಲು ಟೊರೊಂಟೋದ ಪ್ರಯೋಗಾಲಯದಲ್ಲಿ ಕೆನಡಾದ ವಿಜ್ಞಾನಿಗಳಾದ ಫ್ರೆಡರಿಕ್ ಗ್ರ್ಯಾಂಟ್ ಬಂಟಿಂಗ್ ಮತ್ತು ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಈ ಹಾರ್ಮೋನನ್ನು ಸಂಶೋಧಿಸಿ ಪ್ರತ್ಯೇಕಿಸಿದ್ದರು.

1927: ಮೆಟ್ರೋ ಗೋಲ್ಡ್ವಿನ್ ಮೇಯರ್ ಸಂಸ್ಥೆಯ ಮುಖ್ಯಸ್ಥರಾದ ಲೂಯಿಸ್ ಬಿ ಮೇಯರ್ ಅವರು ಕ್ಯಾಲಿಫೋರ್ನಿಯಾದ ಲಾಸ್ ಏಂಜೆಲಿಸ್ನಲ್ಲಿನ ಕೂಟವೊಂದರಲ್ಲಿ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್’ ಸ್ಥಾಪನೆಯನ್ನು ಘೋಷಿಸಿದರು.

1935: ‘ಅಮೇಲಿಯಾ ಇಯರ್ ಹಾರ್ಟ್’ ಅವರು ಹವಾಯಿಯಿಂದ ಕ್ಯಾಲಿಫೋರ್ನಿಯಾಕ್ಕೆ ಏಕಾಂಗಿಯಾಗಿ ಹಾರಾಟ ನಡೆಸಿದ ಪ್ರಥಮ ವ್ಯಕ್ತಿ ಎನಿಸಿದರು.

1942: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಪಡೆಗಳು ಕೌಲಾಲಂಪುರವನ್ನು ಆಕ್ರಮಿಸಿದವು.

1943: ಎರಡನೇ ವಿಶ್ವಮಹಾಯುದ್ಧದಲ್ಲಿ  ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಚೈನಾದಲ್ಲಿನ ವಸಾಹತುಗಳ ಮೇಲೆ ತಮಗಿದ್ದ ಅಧಿಪತ್ಯವನ್ನು ಬಿಟ್ಟುಕೊಟ್ಟವು

1943: ಪತ್ರಕರ್ತ ಮತ್ತು  ಕಾರ್ಮಿಕ ನಾಯಕ ‘ಕಾರ್ಲೋ ಟ್ರೆಸ್ಕಾ’ ನ್ಯೂಯಾರ್ಕ್ ನಗರದಲ್ಲಿ ಹತ್ಯೆಗೀಡಾದರು. ಇವರು ಮುಸಲೋನಿಯ ಸರ್ವಾಧಿಕಾರತ್ವ,  ಸೋವಿಯತ್ ಯೂನಿಯನ್ನಿನ  ಸ್ಟ್ಯಾಲಿನ್ ತತ್ವ  ಮತ್ತು ಕಾರ್ಮಿಕ ಒಕ್ಕೂಟಗಳಲ್ಲಿ ಮಾಫಿಯಾ ಪ್ರವೇಶಗಳ ವಿರುದ್ಧ ಮುಕ್ತ ಟೀಕಾಕಾರರಾಗಿದ್ದರು.  ಜನಸಂಖ್ಯಾ ನಿಯಂತ್ರಣದ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಮುದ್ರಿಸಿ ಜೈಲಿಗೂ ಹೋಗಿದ್ದ ಅವರು ಅಮೆರಿಕದಾದ್ಯಂತ  ನಡೆದ ಅಸಂಖ್ಯಾತ ಚಳವಳಿಗಳ ನೇತಾರರಾಗಿದ್ದರು.

1949: ಪೆನ್ಸಿಲ್ವೇನಿಯಾದ  ಪಿಟ್ಸ್ ಬರ್ಗಿನ KDKA-TV ಯಲ್ಲಿ ಪೂರ್ವ  ತೀರದಲ್ಲಿನ ಕಾರ್ಯಕ್ರಮಗಳೊಂದಿಗೆ,  ಮಧ್ಯ-ಪಶ್ಚಿಮ ಪ್ರಾಂತ್ಯದಲ್ಲಿನ  ಕಾರ್ಯಕ್ರಮದ ಜೊತೆ ಸಂಪರ್ಕ ಕಲ್ಪಿಸಿ ಭಿತ್ತರಿಸಲಾಯಿತು.  ಇದು ಪ್ರಥಮ  ಸಂಪರ್ಕ ನೆಟ್ ವರ್ಕ್ ಸಂಯೋಗದ ಪ್ರಥಮ ಕಾರ್ಯಕ್ರಮವೆನಿಸಿತು.

1962: ಪೆರುವಿನ ಹುವಾಸ್ ಕರನ್ ಎಂಬಲ್ಲಿ  ಉಂಟಾದ  ಹಠಾತ್  ಹಿಮಪಾತ (avalanche)ದಲ್ಲಿ ನಾಲ್ಕು ಸಾವಿರ ಸಾವುಗಳು ಸಂಭವಿಸಿದವು

1963: ದಿ ‘ವಿಸ್ಕಿ ಎ ಗೋ-ಗೋ’ ಲಾಸ್ ಏಂಜೆಲಿಸ್ ನಗರದಲ್ಲಿ ಪ್ರಾರಂಭಗೊಂಡಿತು.  ಇದು ಅಮೇರಿಕದಲ್ಲಿ ಪ್ರಾರಂಭವಾದ ಪ್ರಥಮ್ ಡಿಸ್ಕೋ ಎನಿಸಿದೆ.

1964: ಅಮೆರಿಕದ ಸರ್ಜನ್ ಜನರಲ್ ಡಾ.ಲೂಥರ್ ಟೆರ್ರಿ ಅವರು ‘ಧೂಮ್ರಪಾನವು ಆರೋಗ್ಯಕ್ಕೆ ಹಾನಿಕರವೆಂದು’ ತಮಗೆ ವಿಶೇಷ ತಜ್ಞರ ಸಲಹಾ ಸಮಿತಿ ಸಲ್ಲಿಸಿದ್ದ ವರದಿಯನ್ನು ಪ್ರಕಟಿಸಿದರು.  ಇದು ಅಮೇರಿಕಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಧೂಮ್ರಪಾನದ ದುಷ್ಪರಿಣಾಮಗಳ ಕುರಿತಾದ  ತಿಳುವಳಿಕೆಗಳನ್ನು ಮೂಡಿಸಲು ಪ್ರೇರಣೆಯಾದ ಘಟನೆಯಾಯ್ತು.

1972: ಪಶ್ಚಿಮ ಪಾಕಿಸ್ತಾನದ ಹೆಸರು ಬಾಂಗ್ಲಾದೇಶವೆಂದು ಬದಲಾಯಿತು. ಷೇಕ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಪ್ರಥಮ ಅಧ್ಯಕ್ಷರಾದರು.

1966: ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನದ ದೆಸೆಯಿಂದ ಗುಲ್ಜಾರಿಲಾಲ್ ನಂದಾ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡರು.

1996: ನಾಸಾದ ಎಸ್.ಟಿ.ಎಸ್-72 ಕೆನಡಿ ಸ್ಪೇಸ್ ಸೆಂಟರಿನಿಂದ ಬಾಹ್ಯಾಕಾಶಕ್ಕೆ ಚಿಮ್ಮಿತು.  ಇದು ನಾಸಾದ 74ನೇ ಸ್ಪೇಸ್ ಶಟಲ್ ಮಿಷನ್ ಹಾಗೂ ಎಂಡೀವರಿನ ಹತ್ತನೇ ಫ್ಲೈಟ್ ಎನಿಸಿತು.

2009: ಹುಬ್ಬಳ್ಳಿ ನ್ಯಾಯಾಲಯದಲ್ಲಿನ ಬಾಂಬ್ ಸ್ಛೋಟ, ಧಾರವಾಡ ಸಮೀಪದ ವೆಂಕಟಾಪುರ ಗ್ರಾಮದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್‌ಗಳನ್ನು ಹುದುಗಿಸಿಟ್ಟಿದ್ದ ಪ್ರಕರಣ ಮತ್ತು  ಹಲವಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಅಕ್ಟೋಬರ್ 29, 2008ರಂದು  ನಡೆದ ವ್ಯಾಪಾರಿ ಕಿರಣ ಕುಮಟಗಿ ಎಂಬವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಛೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದರು.

2008: 2007- 08ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಜೀವಮಾನದ ಸಾಧನೆ ಪ್ರಶಸ್ತಿಗಾಗಿ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ನಿರ್ಮಾಪಕಿ  ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗುಲಾಬಿ ಟಾಕೀಸ್’ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು. ಪಿ.ಆರ್. ರಾಮದಾಸ ನಾಯ್ಡು ನಿರ್ದೇಶನದ ‘ಮೊಗ್ಗಿನ ಜಡೆ’ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರಗಳು ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. ‘ಮಿಲನ’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರು ಸುಬ್ಬಯ್ಯ ನಾಯ್ಡು (ಅತ್ಯುತ್ತಮ ನಟ) ಪ್ರಶಸ್ತಿ ಪಡೆದರು. ಗುಲಾಬಿ ಟಾಕೀಸ್ ಚಿತ್ರದಲ್ಲಿನ ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಉಮಾಶಂಕರ ಸ್ವಾಮಿ ನಿರ್ದೇಶನದ ‘ಬನದ ನೆರಳು’ ಚಿತ್ರವನ್ನು ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಏಕಲವ್ಯ’ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ದೊರಕಿತು. ತುಳು ಚಿತ್ರ ‘ಬಿರ್ಸೆ’ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಗಳಿಸಿತು.

2009: ಕೇಂದ್ರ ಸರ್ಕಾರ ಐಟಿ ಕ್ಷೇತ್ರ ಪರಿಣತ, ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರೇಕ್ ಮತ್ತು ಕೇಂದ್ರ ಸರ್ಕಾರದ ಕಾನೂನು ಸಲಹೆಗಾರ ಅಚ್ಯುತನ್ ಅವರನ್ನು ಸತ್ಯಂ ಕಂಪ್ಯೂಟರ್‌ನ ಹೊಸ ನಿರ್ದೇಶಕರಾಗಿ ಭಾನುವಾರ ನೇಮಿಸಿತು.

2008: ತಮಿಳುನಾಡಿನಲ್ಲಿ ಪೊಂಗಲ್ ಸಂದರ್ಭದಲ್ಲಿ ನಡೆಯುವ ಗೂಳಿ ಕಾಳಗ ನಡೆಸದಂತೆ ನೀಡಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಲು ತಮಿಳು ನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿತು. ಪ್ರಾಣಿ ಹಿಂಸೆಗೆ ಪ್ರಚೋದನೆ ನೀಡುವ ಈ ಕ್ರೀಡೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಪ್ರಾಣಿ ಕಲ್ಯಾಣ ಮಂಡಳಿ ಕಳೆದ ವರ್ಷ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಆದರೆ ಸಾಂಸ್ಕೃತಿಕ ಇತಿಹಾಸ ಹೊಂದಿದ ಈ ಕ್ರೀಡೆ ನಡೆಸಲು ಅವಕಾಶ ನೀಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಪೀಠವು ಈ ಅರ್ಜಿಯನ್ನು ತಳ್ಳಿಹಾಕಿತು.

ಪ್ರಮುಖಜನನ/ಮರಣ:

1853: ಗ್ರೀಕ್ ವರ್ಣಚಿತ್ರಕಾರ ಗಿಯೋರ್ಗಿಯೋಸ್ ಜಾಕೋಬೈಡ್ಸ್ ಅವರು ಒಟ್ಟೋಮನ್ ಸಾಮ್ರಾಜ್ಯದ ಲೆಸ್ಬೋಸ್ ಎಂಬಲ್ಲಿ ಜನಿಸಿದರು.  ಅವರು ಮ್ಯೂನಿಚ್ ಸ್ಕೂಲಿನ ಗ್ರೀಕ್ ಕಲಾ ಪರಂಪರೆಯ ಪ್ರಮುಖ ಪ್ರತಿನಿಧಿಗಳಲ್ಲಿ ಒಬ್ಬರು.  ಅಥೆನ್ಸ್ ನಗರದಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಗ್ರೀಸ್ ಸ್ಥಾಪಕರಾಗಿ ಹಾಗೂ ಪ್ರಥಮ ಮೇಲ್ವಿಚಾರಕರಾಗಿ ಅವರು ಸೇವೆ ಸಲ್ಲಿಸಿದ್ದರು.  ದಿ ಚಿಲ್ರನ್ಸ್ ರಿಸೈಟಲ್, ದಿ ಫಸ್ಟ್ ಸ್ಟೆಪ್ಸ್, ದಿ ವೈಫ್ ಅಂಡ್ ಸನ್ ಆಫ್  ದಿ ಆರ್ಟಿಸ್ಟ್ ಮುಂತಾದವು ಅವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.

1859:  ದಿ ಲಾರ್ಡ್ ಕರ್ಜನ್ ಆಫ್ ಕೆಡ್ಲೆಸ್ಟನ್ ಡರ್ಬಿಷೈರ್ನಲ್ಲಿ ಜನಿಸಿದರು. ಅವರು   ಬ್ರಿಟಿಷ್ ಭಾರತ ಸರ್ಕಾರದ 35ನೇ ಗೌರ್ನರ್ ಜನರಲ್ ಆಫ್ ಇಂಡಿಯಾ ಆಗಿದ್ದರು. ಪೂರ್ವ ಬಂಗಾಳ ಮತ್ತು ಅಸ್ಸಾಂಗಳನ್ನು ಇವರು ಸೃಜಿಸಿದರು.

1896: ನಾಟಕಕಾರ ಕಂದಗಲ್ಲ ಹನುಮಂತರಾಯ ಅವರು ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲದಲ್ಲಿ ಜನಿಸಿದರು. ಅನೇಕ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದ ಇವರ ರಂಗತಾಲೀಮಿನಲ್ಲಿ  ಮಲ್ಲಿಕಾರ್ಜುನ ಮನಸೂರಬಸವರಾಜ ರಾಜಗುರು, ಏಣಗಿ ಬಾಳಪ್ಪ, ಗರೂಡ ಸದಾಶಿವರಾಯರು ಮುಂತಾದ ಅನೇಕ ಪ್ರಸಿದ್ಧರು  ಶಿಷ್ಯವೃತ್ತಿ ನಡೆಸಿದ್ದರು.

1906: ಮನೋರೋಗಗಳಲ್ಲಿನ ಉದ್ವೇಗಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಉಪಯೋಗಿಸುವ ಎಲ್.ಎಸ್.ಡಿ (ಲೈಸೆರ್ಜಿಕ್ ಆಸಿಡ್ ಡೈಥೈಲಮೈಡ್) ಕಂಡುಹಿಡಿದ ಸ್ವಿಟ್ಜರ್ಲ್ಯಾಂಡ್ ದೇಶದ ಔಷದ ತಜ್ಞ ‘ಆಲ್ಬರ್ಟ್ ಹಾಫ್ ಮ್ಯಾನ್’ ಅವರು ಬರ್ಗಿಮ್ ಲಿಮೆಂಟಲ್ ಎಂಬಲ್ಲಿ ಜನಿಸಿದರು.

1924: ಫ್ರೆಂಚ್ ಅಮೆರಿಕನ್ ವೈದ್ಯ ಮತ್ತು ‘ಅಂತಃಸ್ರಾವ ಶಾಸ್ತ್ರಜ್ಞ’ (ಎಂಡೋಕ್ರಿನಾಲಜಿಸ್ಟ್) ಆದ ‘ರೋಜರ್ ಗುಯಲ್ಲೆಮಿನ್’ ಫ್ರಾನ್ಸಿನ ಡಿಜೋನ್ ಎಂಬಲ್ಲಿ ಜನಿಸಿದರು. ನ್ಯೂರೋ ಹಾರ್ಮೋನ್ಸ್ ಕುರಿತಾದ ಸಂಶೋಧನೆಗೆ ಅವರಿಗೆ 1977ರ ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1954: ಮಕ್ಕಳ ಹಕ್ಕುಗಳ ಹೋರಾಟಗಾರರಾದ ನೊಬೆಲ್ ಪ್ರಶಸ್ತಿ ಸಮ್ಮಾನಿತ ಕೈಲಾಶ್ ಸತ್ಯಾರ್ಥಿ ಮಧ್ಯಪ್ರದೇಶದ ವಿದಿಶಾದಲ್ಲಿ ಜನಿಸಿದರು.  ‘ಬಚಪನ್ ಬಚಾವೋ ಆಂದೋಲನ್’ ಪ್ರವರ್ತಕರಾಗಿ ಅವರು 144 ದೇಶಗಳಲ್ಲಿನ 83,000 ಕ್ಕೂ ಹೆಚ್ಚು ಮಕ್ಕಳನ್ನು ಶೋಷಣೆಯಿಂದ ಮುಕ್ತಗೊಳಿಸಿದ್ದಾರೆ.  ಕಾರ್ಮಿಕತನದಿಂದ ಮುಕ್ತಗೊಂಡ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಂದೆ ಸ್ವಂತಕಾಲಿನಮೇಲೆ ನಿಲ್ಲುವಂತಹ ಶಕ್ತಿಯನ್ನೂ ತುಂಬುತ್ತಿದ್ದಾರೆ.  ಇವರಿಗೆ 2014ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರದ ಗೌರವವೇ ಅಲ್ಲದೆ ಅನೇಕ ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1973: ಕರ್ನಾಟಕದಿಂದ ರಾಷ್ಟ್ರವನ್ನು ಪ್ರತಿನಿಧಿಸಿ ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು ಮಧ್ಯಪ್ರದೇಶದ ಇಂದೂರಿನಲ್ಲಿ ಜನಿಸಿದರು.  ಟೆಸ್ಟ್ ಕ್ರಿಕೆಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳೆರಡೂ ವಿಭಾಗಗಳಲ್ಲೂ ಹತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ವಿಶ್ವದ ಎಲ್ಲಾ ಟೆಸ್ಟ್ ಕ್ರಿಕೆಟ್ ತಂಡಗಳ ವಿರುದ್ದವೂ ಶತಕ ಬಾರಿಸಿದ ಮೊದಲ ಆಟಗಾರರಾಗಿದ್ದಾರೆ.  ಅನೇಕ ಮಹತ್ವದ ದಾಖಲೆಗಳನ್ನು ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಿಸಿರುವ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯಲ್ಲದೆ ವಿಶ್ವದ ಶ್ರೇಷ್ಠ ಕ್ರಿಕೆಟ್ಟಿಗರಿಗೆ ಸಲ್ಲುವ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

1984: ಅಂತರಜಾಲದಲ್ಲಿ ಆನ್ ಲೈನ್  ಸೋಶಿಯಲ್ ಮೀಡಿಯಾ ಉದ್ಯಮಿಯಾಗಿ ಹಾಗೂ ಪ್ರಖ್ಯಾತ ಅಂತರಜಾಲ ಸಾಧನಗಳ ಸೃಷ್ಟಿಕರ್ತರಾಗಿ ಪ್ರಸಿದ್ಧಿ ಪಡೆದಿರುವ,  ‘ಮ್ಯಾಟ್ ಮುಲ್ಲೆನ್ ವೆಗ್’ ಅವರು ಅಮೇರಿಕಾದ ಹೌಸ್ಟನ್ ನಗರದಲ್ಲಿ  ಜನಿಸಿದರು.  ಆಧುನಿಕ ಅಂತರಜಾಲ ತಾಣ ನಿರ್ಮಾಣ ವ್ಯವಸ್ಥೆಗಳಲ್ಲಿ ಪ್ರಖ್ಯಾತವಾಗಿರುವ  ‘ವರ್ಡ್ ಪ್ರೆಸ್’ ಸಾಧನವನ್ನು ತಮ್ಮ ‘ಆಟೋಮ್ಯಾಟಿಕ್’ ಉದ್ಯಮದ  ಮೂಲಕ  ನಿರ್ಮಿಸಿದ ಕೀರ್ತಿ ಇವರದ್ದಾಗಿದೆ.  ಇದಲ್ಲದೆ ಅಕಿಸ್ ಮೆಟ್, ಗ್ರವತಾರ್, ವಾಲ್ಟ್ ಪ್ರೆಸ್, ಇಂಟೆನ್ಸ್ ಡಿಬೇಟ್, ಪೋಲ್ ಡ್ಯಾಡಿ ಮುಂತಾದ ಅನೇಕ ಅಂತರಜಾಲ ವ್ಯವಸ್ಥೆಗಳನ್ನು ನಿರ್ಮಿಸುತ್ತಾ ಸಾಗಿದ್ದಾರೆ.

1928: ಇಂಗ್ಲಿಷ್ ಕವಿ ಮತ್ತು  ಕಾದಂಬರಿಕಾರ ಥಾಮಸ್ ಹಾರ್ಡಿ ಇಂಗ್ಲೆಂಡಿನ ಡಾರ್ಸೆಟ್ ಪ್ರಾಂತ್ಯದ ಡಾರ್ಚೆಸ್ಟರ್ ಎಂಬಲ್ಲಿ ನಿಧನರಾದರು.   ಬಹಳಷ್ಟು ಕವಿತೆಗಳೇ  ಅಲ್ಲದೆ, ‘ಫಾರ್ ಫ್ರಮ್ ದಿ ಮ್ಯಾಡಿಂಗ್  ಕ್ರೌಡ್’, ‘ದಿ ಮೇಯರ್ ಆಫ್ ಕಾಸ್ಟರ್ ಬ್ರಿಡ್ಜ್’, ‘ಟೆಸ್ ಆಫ್ ದಿ ಡಿ’ಅರ್ಬರ್ ವಿಲ್ಲೆಸ್’  ಮತ್ತು  ‘ಜೂಡ್ ಅಂಡ್ ದಿ ಅಬ್ಸ್ ಕ್ಯೂರ್’ ಅವರ ಪ್ರಖ್ಯಾತ ಕಾದಂಬರಿಗಳಾಗಿವೆ.

1966: ಪ್ರಾಮಾಣಿಕತೆಗೆ ದೊಡ್ಡ ಹೆಸರಾದ ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ತಾಷ್ಕೆಂಟಿನಲ್ಲಿ ನಿಧನರಾದರು. ಹಿಂದಿನ ದಿನವಷ್ಟೇ ಅವರು ಪಾಕಿಸ್ಥಾನದ ಅಯೂಬ್ ಖಾನ್ ಜೊತೆಗೆ ‘ತಾಷ್ಕೆಂಟ್ ಒಪ್ಪಂದ’ಕ್ಕೆ ಸಹಿ ಮಾಡಿದ್ದರು.

1988: ಭೌತಶಾಸ್ತ್ರ ಮತ್ತು ಶಿಕ್ಷಣದಲ್ಲಿ ಹೆಸರಾಗಿದ್ದ ‘ಇಸಿಡರ್ ಐಸಾಕ್ ರಬಿ’  ಪೋಲೆಂಡ್ ದೇಶದಲ್ಲಿ ಜನಿಸಿದರು.  ಮುಂದೆ ಅಮೆರಿಕನ್ ನಿವಾಸಿಯಾದ ಅವರ ‘ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನಾನ್ಸ್’ ಸಂಶೋಧನೆಗಾಗಿ 1944ರ ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

1991: ಅಮೆರಿಕದ ಭೌತಶಾಸ್ತ್ರಜ್ಞ ‘ಕಾರ್ಲ್ ಡೇವಿಡ್ ಅಂಡರ್ಸನ್’ ಅವರು ಕ್ಯಾಲಿಫೋರ್ನಿಯಾದ, ಸಾನ್ ಮರಿನೋ ಎಂಬಲ್ಲಿ ನಿಧನರಾದರು.  ‘ಪೊಸಿಟ್ರಾನ್’ ಸಂಶೋಧನೆಗಾಗಿ ಅವರಿಗೆ 1936ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

2006: ಸಿಜಿಕೆ ಎಂದೇ ಖ್ಯಾತರಾಗಿದ್ದ ಹೆಸರಾಂತ ರಂಗ ನಿರ್ದೇಶಕ, ಸಂಘಟಕ, ಸಿ.ಜಿ. ಕೃಷ್ಣಸ್ವಾಮಿ  ದಾವಣಗೆರೆಯಲ್ಲಿ ನಿಧನರಾದರು. 1950ರ ಜೂನ್ 27ರಂದು ಮಂಡ್ಯದಲ್ಲಿ ಜನಿಸಿದ ಸಿಜಿಕೆ ಸುಮಾರು 12 ನಾಟಕಗಳನ್ನು ರಚಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ ಮತ್ತು  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಅನೇಕ ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದ್ದರ ಜೊತೆಗೆ ಕೆಲವು ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದರು.

2008:  ಪ್ರಸಿದ್ಧ ಪರ್ವತಾರೋಹಿ ಮತ್ತು ಅನ್ವೇಷಕ ಪ್ರವೃತ್ತಿಯ ಸಾಹಸಕಾರ ‘ಎಡ್ಮಂಡ್ ಪೆರ್ಕಿವಲ್ ಹಿಲೆರಿ’ ಅವರು ನ್ಯೂಜಿಲೆಂಡಿನ ಆಕ್ಲೆಂಡ್ ನಗರದಲ್ಲಿ ನಿಧನರಾದರು.  ತೇನ್ಸಿಂಗ್ ಜೊತೆಗೂಡಿ ಮೌಂಟ್ ಎವರೆಸ್ಟ್ ಆರೋಹಿಸಿದ ವಿಶ್ವಪ್ರಥಮರಾದ ಅವರು ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವಗಳೆರಡನ್ನೂ ತಲುಪಿದ ಸಾಧನೆಯನ್ನೂ ಮಾಡಿದ್ದರು.  ಈ ಮೂರೂ ಸಾಧನೆಯನ್ನು ಮಾಡಿದ ಏಕೈಕ ಸಾಹಸಿ ಎನಿಸಿದ್ದಾರೆ.

Categories
e-ದಿನ

ಜನವರಿ-10

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 49: ಜೂಲಿಯಸ್ ಸೀಸರನು ರುಬಿಕಾನ್ ಅನ್ನು ದಾಟಿ, ಅಂತರ್ ಯುದ್ಧದ ಮುನ್ಸೂಚನೆ ನೀಡಿದ.

1645: ಟವರ್ ಆಫ್ ಲಂಡನ್ನಿನಲ್ಲಿ ಆರ್ಚ್ ಬಿಷಪ್ ವಿಲಿಯಂ ಲಾಡ್ ಅವರ ಶಿರಃಛೇದನ ಮಾಡಲಾಯಿತು.

1776: ಪ್ರಸ್ಸಿದ್ಧ ತತ್ವಜ್ಞಾನಿ, ಅಮೆರಿಕದ ಕ್ರಾಂತಿಕಾರಿ ಹೋರಾಟದ ಪ್ರಮುಖಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ಥಾಮಸ್ ಪೈನ್ ಅವರು ‘ಕಾಮನ್ ಸೆನ್ಸ್’ ಎಂಬ ಕರಪತ್ರವನ್ನು ಪ್ರಕಟಿಸಿದರು. ಅತ್ಯಂತ ಕ್ಷಿಪ್ರವಾಗಿ ಬಹು ಮಾರಾಟವಾದ ಈ ಕರಪತ್ರವನ್ನು ಪ್ರತಿಯೋರ್ವ ಹೋರಾಟಗಾರನೂ ಓದಿ ಅಥವಾ ಕೇಳಿ ಪ್ರಭಾವಿಯಾದದ್ದರಿಂದ ಅಮೇರಿಕನ್ ಕ್ರಾಂತಿ ಹೆಚ್ಚು ಶಕ್ತಿಯುತವಾಯ್ತು ಎಂಬುದು ಇತಿಹಾಸಜ್ಞರ ಅಭಿಪ್ರಾಯವಾಗಿದೆ.

1839: ಬ್ರಿಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ‘ಭಾರತೀಯ ಚಹಾ’ದ ಹರಾಜು ನಡೆಯಿತು.

1863:  ವಿಶ್ವದ ಅತಿ ಹಳೆಯ ಭೂತಳದ ‘ಲಂಡನ್ ಅಂಡರ್ ಗ್ರೌಂಡ್’ ರೈಲು ಸಂಚಾರ ವ್ಯವಸ್ಥೆ, ‘ಲಂಡನ್ ಪ್ಯಾಡಿಂಗ್ ಟನ್’ ಮತ್ತು ‘ಫರಿಂಗ್ ಟನ್’ ನಡುವೆ ಪ್ರಾರಂಭಗೊಂಡಿತು.

1870: ಬಾಂಬೆಯ ಚರ್ಚ್ ಗೇಟ್ ನಿಲ್ದಾಣ ರೈಲ್ವೆ ಸಂಚಾರಕ್ಕಾಗಿ ತೆರೆದುಗೊಂಡಿತು. ಇದು ಪಶ್ಚಿಮ ಮುಂಬೈ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿನ ಪ್ರಪ್ರಥಮ ರೈಲು ನಿಲ್ದಾಣವಾಗಿದೆ.

1870: ‘ಸ್ಟ್ಯಾಂಡರ್ಡ್ ಆಯಿಲ್’ ಅಮೆರಿಕದ ತೈಲ ಉತ್ಪಾದನೆ, ಸಾಗಣೆ, ಸಂಸ್ಕರಣಾ, ಮತ್ತು ಮಾರಾಟ ಸಂಸ್ಥೆಯಾಗಿದೆ. 1870ರ ವರ್ಷದಲ್ಲಿ ಇದನ್ನು ಜಾನ್ ಡಿ. ರಾಕ್ ಫೆಲರ್ ಅವರು ಓಹಿಯೋದಲ್ಲಿ ಪ್ರಾರಂಭಿಸಿದರು. ಅಂದಿನ ದಿನಗಳಲ್ಲಿ ಇದು ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಸ್ಕರಣಾ ಸಂಸ್ಥೆಯಾಗಿತ್ತು.

1920: ಪ್ರಥಮ ವಿಶ್ವಮಹಾಯುದ್ಧವನ್ನು ಅಧಿಕೃತವಾಗಿ ಅಂತ್ಯಗೊಳಿಸುವ ‘ವರ್ಸೈಲ್ಸ್ ಒಪ್ಪಂದ’(ಟ್ರೀಟಿ ಆಫ್ ವರ್ಸೈಲ್ಸ್) ಏರ್ಪಟ್ಟಿತು. ಇದರಿಂದಾಗಿ ಜರ್ಮನಿ ಮತ್ತು ಇತರ ರಾಷ್ಟ್ರಗಳ ಒಕ್ಕೂಟದ ನಡುವಿನ ಪ್ರಥಮ ಮಹಾಯುದ್ಧ ಅಧಿಕೃತವಾಗಿ ಕೊನೆಗೊಂಡಿತು.

1920: ಪ್ರಥಮ ಮಹಾಯುದ್ಧವಾದ ನಂತರದಲ್ಲಿ ಪ್ಯಾರಿಸ್ ಸಮಾವೇಶದಲ್ಲಿ ಅಂತರ ಸರ್ಕಾರಗಳ ಸಂಸ್ಥೆಯಾಗಿ ‘ಲೀಗ್ ಆಫ್ ನೇಷನ್ಸ್’ ಸ್ಥಾಪನೆಗೊಂಡಿತು. ವಿಶ್ವಶಾಂತಿಯನ್ನು ಕಾಪಾಡುವ ಮೂಲೋದ್ದೇಶವನ್ನು ಹೊಂದಿದ್ದ ಇದರ ಕೇಂದ್ರವನ್ನು ಸ್ವಿಡ್ಜರ್ಲ್ಯಾಂಡಿನ ಜಿನೀವಾದಲ್ಲಿ ಸ್ಥಾಪಿಸಲಾಯಿತು. ಯುದ್ಧವನ್ನು ತಡೆಗಟ್ಟುವಲ್ಲಿ ಈ ಸಂಸ್ಥೆ ವಿಫಲವಾಗಿ ‘ಎರಡನೆ ವಿಶ್ವ ಮಹಾಯುದ್ಧ’ ನಡೆದದ್ದರಿಂದ 1946ರಲ್ಲಿ ಈ ‘ಲೀಗ್ ಆಫ್ ನೇಷನ್ಸ್’ ಮುಚ್ಚಿ ವಿಶ್ವಸಂಸ್ಥೆ ರೂಪುಗೊಂಡಿತು.

1927: ಫ್ರಿಟ್ಜ್ ಲ್ಯಾಂಗ್ ಅವರ ಮೆಟ್ರೊಪೊಲಿಸ್ ಚಿತ್ರ ಜರ್ಮನಿಯಲ್ಲಿ ಪ್ರದರ್ಶಿತಗೊಂಡಿತು. ಅಂದಿನ ದಿನಗಳಲ್ಲಿನ ಕಾಲ್ಪನಿಕ ವಿಜ್ಞಾನ ಕಥೆಯ ಮಹತ್ವದ ಚಿತ್ರವೆಂದು ಇದು ಪ್ರಸಿದ್ಧವಾಗಿದೆ.

1929: ‘ಹೆರ್ಗೆ’ ಎಂದು ಖ್ಯಾತರಾದ ರೆಮಿ ಜಾರ್ಜಸ್ ಅವರ ಪ್ರಸಿದ್ಧ ‘ಟಿನ್ ಟಿನ್’ ಕಾಮಿಕ್ ಬರಹ, ‘ಲೆ ವಿಂಗ್ ಟಿಯೇಮ್’ ಎಂಬ ಪತ್ರಿಕೆಯಲ್ಲಿ ಪ್ರಥಮ ಬಾರಿಗೆ ಮೂಡಿಬಂತು.

1946: ವಿಶ್ವಸಂಸ್ಥೆಯ ಮೊದಲ ಮಹಾ ಅಧಿವೇಶನ ‘ಜನರಲ್ ಅಸೆಂಬ್ಲಿ’ ಲಂಡನ್ನಿನಲ್ಲಿ ನಡೆಯಿತು. 51 ದೇಶಗಳ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು.

1946: ‘ಪ್ರಾಜೆಕ್ಟ್ ಡಯಾನ’ ಎಂಬುದು ‘ಯು.ಎಸ್. ಆರ್ಮಿ ಸಿಗ್ನಲ್ಸ್ ಕಾರ್ಪ್ಸ್’ ತಂಡದ ಯಶಸ್ವೀ ಪ್ರಾಯೋಗಿಕ ಯೋಜನೆ. ಚಂದ್ರನ ಮೇಲೆ ರೇಡಾರ್ ಸಂಕೇತಗಳನ್ನು ಚಿಮ್ಮಿಸಿ ಅವುಗಳಿಗೆ ಪ್ರತಿಫಲನ ಪಡೆಯುವುದು ಈ ಕಾರ್ಯಯೋಜನೆಯ ಉದ್ದೇಶವಾಗಿತ್ತು. ಇದು ‘ರಾಡಾರ್ ಅಸ್ಟ್ರಾನಮಿ’ಯಲ್ಲಿನ ಪ್ರಥಮ ಪ್ರಯೋಗ ಎನಿಸಿದ್ದು, ಭೂಮಿಯ ಆಚೆಗಿನ ಕಾಯದ ಜೊತೆಗಿನ ಪ್ರಥಮ ಸಂಪರ್ಕ ಸಾಧನೆಯ ಯತ್ನವೆಂದು ಭಾವಿಸಲಾಗಿದೆ. ಇದು ಮುಂದೆ ಮೂಡಿಬಂದ ಭೂಮಿ ಮತ್ತು ಚಂದ್ರರ ನಡುವೆ ಉಂಟಾದ EME (Earth-Moon-Earth) ಸಂಪರ್ಕ ತಂತ್ರಜ್ಞಾನಗಳಿಗೆ ಪ್ರೇರಣೆ ಒದಗಿಸಿತು.

1962: ನಾಸಾ ಸಂಸ್ಥೆಯು ತನ್ನ ಅಪೋಲೋ ಕಾರ್ಯಯೋಜನೆಯಲ್ಲಿ ‘ಸಿ-5’ ರಾಕೆಟ್ ಬಾಹ್ಯಾಕಾಶ ವಾಹನ ನಿರ್ಮಾಣವನ್ನು ಪ್ರಕಟಿಸಿತು. ಮುಂದೆ ಇದು ‘ಸಾಟರ್ನ್ 5’ ಎಂದು ಹೆಸರು ಪಡೆದುಕೊಂಡು ‘ಅಪೋಲೋ ಚಂದ್ರ ಯೋಜನೆಯ’ (ಅಪೋಲೋ ಮೂನ್ ಮಿಷನ್) ಎಲ್ಲ ಉಡಾವಣೆಗಳಿಗೂ ವಾಹನ ವ್ಯವಸ್ಥೆಯಾಗಿ ರೂಪುಗೊಂಡಿದೆ.

1966: ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ಥಾನದ ಅಧ್ಯಕ್ಷ ಅಯೂಬ್ ಖಾನ್ ಅವರು ರಷ್ಯಾದ ತಾಷ್ಕೆಂಟಿನಲ್ಲಿ, ಭಾರತ- ಪಾಕಿಸ್ಥಾನ ನಡುವಣ 17ದಿನಗಳ ಸಮರವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಉಭಯ ರಾಷ್ಟ್ರಗಳೂ ತಮ್ಮ ತಮ್ಮ ಸೇನೆಗಳನ್ನು ಸಮರಭೂಮಿಯಿಂದ ಹಿಂತೆಗೆದುಕೊಂಡು ರಾಜತಾಂತ್ರಿಕ ಬಾಂಧವ್ಯದ ಮರುಸ್ಥಾಪನೆಗೆ ಒಪ್ಪಿಕೊಂಡವು. ಇದಾದ ಮರುದಿನ ಲಾಲ್ ಬಹಾದುರ್ ಶಾಸ್ತ್ರಿ ಅವರ ಸಾವು ಸಂಭವಿಸಿತು.

1987: ಕರ್ನಲ್ ಟಿ.ಪಿ.ಎಸ್. ಚೌಧರಿ ಅವರ ನೇತೃತ್ವದಲ್ಲಿ ವಿಶ್ವಪರ್ಯಟನೆಯನ್ನು ಕೈಗೊಂಡ ‘ತೃಷ್ಣಾ’ ವಿಹಾರ ನೌಕೆಯು, ತನ್ನ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಮುಂಬೈಗೆ ಬಂದಿಳಿಯಿತು. ಈ ನೌಕೆಯು 37 ಅಡಿ ಉದ್ದ ಮತ್ತು 10.5 ಟನ್ ತೂಕವುಳ್ಳದ್ದಾಗಿದ್ದು, ಫೈಬರ್ ಗಾಜಿನಿಂದ ರೂಪುಗೊಂಡಿತ್ತು.

1972: ಒಂಬತ್ತು ವರ್ಷ ಜೈಲಿನಲ್ಲಿ ಕಳೆದ ಷೇಕ್ ಮುಜೀಬುರ್ ರೆಹಮಾನ್ ಅವರು ಬಾಂಗ್ಲಾದೇಶಕ್ಕೆ ಅಧ್ಯಕ್ಷರಾಗಿ ಹಿಂದಿರುಗಿದರು.

1990: ಟೈಮ್ ಇನ್ಕಾರ್ಪೋರೇಷನ್ ಮತ್ತು ವಾರ್ನರ್ ಕಂಮ್ಯೂನಿಕೆಶನ್ ಸಂಸ್ಥೆಗಳು ಸಂಗಮಗೊಂಡು ‘ಟೈಮ್ ವಾರ್ನರ್’ ಎಂಬ ಸಂಸ್ಥೆಯಾಯಿತು.

2006: ಜನಪ್ರಿಯ ಕಾದಂಬರಿಕಾರರಾದ ಡಾ. ಎಸ್.ಎಲ್. ಭೈರಪ್ಪ ಅವರನ್ನು 2005ನೇ ಸಾಲಿನ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು.

2006: ಯಾವ ವಿಚಾರಣೆಯನ್ನೂ ನಡೆಸದೆ ಲಾಲುಂಗ್ ಎಂಬಾತನನ್ನು 54 ವರ್ಷಗಳ ಕಾಲ ಬಂಧನದಲ್ಲಿ ಇಟ್ಟ ತಪ್ಪಿಗಾಗಿ ಅಸ್ಸಾಂ ಸರ್ಕಾರ, ಆತನಿಗೆ 3 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಆತ ಯಾರ ಮೇಲೋ ಹಲ್ಲೆ ನಡೆಸಿದ ಆರೋಪದ ಮೇಲೆ1950 ವರ್ಷದಲ್ಲಿ ಜೈಲಿಗೆ ಬಂದಿದ್ದನಾದರೂ, ಯಾವುದೇ ದಾಖಲೆಯನ್ನೂ ಹೊಂದಿಲ್ಲದ ಪೋಲೀಸ್ ವ್ಯವಸ್ಥೆ ಆತನನ್ನು ಇಷ್ಟು ಸುದೀರ್ಘ ಕಾಲ ಜೈಲಿನಲ್ಲಿರಿಸಿತ್ತು.

2006: ಮರಾಠಾ ನಾಯಕ ಶಿವಾಜಿಯ ತೇಜೋವಧೆ ಮಾಡುವಂತಹ ವಿಷಯಗಳನ್ನು ಒಳಗೊಂಡಿದೆ ಎಂಬ ಕಾರಣದಿಂದ ಅಮೆರಿಕದ ‘ಜೇಮ್ಸ್ ಲೇನ್’ ವಿರಚಿತ `ಎಪಿಕ್ ಆಫ್ ಶಿವಾಜಿ’ ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿತು. ಜೇಮ್ಸ್ ಲೇನ್ ಅವರ ಹಿಂದಿನ ಪುಸ್ತಕ ‘ಶಿವಾಜಿ- ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಪುಸ್ತಕವನ್ನು ಸಹಾ 2004ರಲ್ಲಿ ನಿಷೇಧಿಸಲಾಗಿತ್ತು.

2007: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಮತ್ತು ರಾಜ್ಯ ಸಭೆಯ ಇಬ್ಬರು ಸದಸ್ಯರನ್ನು ಉಚ್ಛಾಟಿಸಿದ ಸಂಸತ್ತಿನ ಐತಿಹಾಸಿಕ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ತಪ್ಪೆಸಗಿದ ಸಂಸತ್ ಸದಸ್ಯರನ್ನು ಸದನದಿಂದ ಉಚ್ಛಾಟಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಪಂಚಸದಸ್ಯ ಪೀಠವು 4-1ರ ಬಹುಮತದಿಂದ ತೀರ್ಪು ನೀಡಿತು.

2007: ಭಾರತೀಯ ‘ಪಿ.ಎಸ್.ಎಲ್.ವಿ–ಸಿ7’ ಬಾಹ್ಯಾಕಾಶ ಉಪಗ್ರಹ ವಾಹನವು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿ, ನಾಲ್ಕು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿತು.

2008: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ನಾವಲ್ ಟಾಟಾ ಅವರು ‘ನ್ಯಾನೋ’ ಹೆಸರಿನ ಕಡಿಮೆ ಬೆಲೆಯ ಕಾರ್ ಬಿಡುಗಡೆ ಮಾಡಿದರು. ಮೂರು ಮಾದರಿಗಳಲ್ಲಿ ಬಿಡುಗಡೆಗೊಂಡ ಈ ‘ನ್ಯಾನೋ’ ಕಾರಿನ ಮೂಲ ಬೆಲೆ (ತೆರಿಗೆ ಮತ್ತು ಇತರ ವೆಚ್ಚಗಳನ್ನು ಹೊರತು ಪಡಿಸಿ) 1 ಲಕ್ಷ ರೂಪಾಯಿ ಇತ್ತು.

2009: ರಂಗಕರ್ಮಿ ಮತ್ತು ನಟಿ ಅರುಂಧತಿ ನಾಗ್, ಸಂಗೀತ ಸಾಧಕ ಮೈಸೂರಿನ ಆರ್.ಸತ್ಯನಾರಾಯಣ್ ಮತ್ತು ಕೀರ್ತನಕಾರ ತುಮಕೂರಿನ ಲಕ್ಷ್ಮಣ್‌ದಾಸ್ ಅವರುಗಳು 2008ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರೊ.ಆರ್.ಸತ್ಯನಾರಾಯಣ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ, ಅರುಂಧತಿ ನಾಗ್ ಅವರಿಗೆ ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಹಾಗೂ ಲಕ್ಷ್ಮಣದಾಸ್ ಅವರಿಗೆ ಕೀರ್ತನ ಕ್ಷೇತ್ರದ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ.

2009: ವಿಶ್ವದ ಅತಿ ಎತ್ತರ ವ್ಯಕ್ತಿ ಚೀನಾದ ಬಾವೊ ಕ್ಸಿಶುನ್ ಅವರು ಪ್ರಚಾರ ರಾಯಭಾರಿಯಾಗಿ ಹಾಂಕಾಂಗ್‌ನ ಶಾಪಿಂಗ್ ಮಾಲ್‌ನಲ್ಲಿ ಕಾಣಿಸಿಕೊಂಡರು. ಇವರ ಎತ್ತರ 7 ಅಡಿ 8.95 ಅಂಗುಲ!!!

ಪ್ರಮುಖಜನನ/ಮರಣ:

1654: ಇತಿಹಾಸಜ್ಞ ಮತ್ತು ವಿದ್ವಾಂಸ ಬರಹಗಾರ ಜೊಶುವಾ ಬರ್ನೆಸ್ ಲಂಡನ್ನಿನಲ್ಲಿ ಜನಿಸಿದರು. ಅವರ ‘ಗೆರಾನಿಯಾ’- ‘ಪಿಗ್ಮಿಸ್ ಎಂದು ಕರೆಯಲ್ಪಡುತ್ತಿದ ಪುಟ್ಟ ವ್ಯಕ್ತಿಗಳ ಸಾಹಸ ಕಥೆ’ ಪ್ರಸಿದ್ಧವಾಗಿದೆ. ಇತಿಹಾಸಕ್ಕೆ ಸಂಬಂಧ ಪಟ್ಟ ಹಲವು ಗ್ರಂಥಗಳನ್ನೂ ರಚಿಸಿದ್ದ ಇವರಿಗೆ ಫೆಲೋ ಆಫ್ ರಾಯಲ್ ಸೊಸೈಟಿ ಗೌರವ ಸಂದಿತ್ತು.

1802: ಯೂರೋಪಿನ ಪರ್ವತಪ್ರದೇಶಗಳಲ್ಲಿ ನಿರ್ಮಾಣಗೊಂಡ ಪ್ರಥಮ ರೈಲು ಹಾದಿ ಎನಿಸಿರುವ, ಆಸ್ಟ್ರಿಯಾದಲ್ಲಿರುವ ‘ಸೇಮ್ಮೆರಿಂಗ್’ ರೈಲ್ವೆಯ ವಿನ್ಯಾಸಕಾರ ‘ಕಾರ್ಲ್ ರಿಟ್ಟರ್ ಆಫ್ ಘೇಗ’ ಇಟಲಿಯ ವೆನಿಸ್ ನಗರದಲ್ಲಿ ಜನಿಸಿದರು. ಇವರು ತಮ್ಮ ಕಾಲದ ಶ್ರೇಷ್ಠ ರೈಲ್ವೆ ತಂತ್ರಜ್ಞಾನಿ ಮತ್ತು ವಿನ್ಯಾಸಕಾರರೆನಿಸಿದ್ದರು.

1916: ಸ್ವೀಡಿಷ್ ಜೈವಿಕ ವಿಜ್ಞಾನಿ ಸುನೆ ಬರ್ಗ್ ಸ್ಟ್ರಾಮ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ಫಿಸಿಯಾಲಜಿ ಅಥವಾ ಮೆಡಿಸಿನ್ ಕ್ಷೇತ್ರದಲ್ಲಿ ‘ಪ್ರೊಸ್ಟಾ ಗ್ಲಾಂಡಿಸ್ ಮತ್ತು ಅವುಗಳ ಅಂಶಗಳ’ ಕುರಿತಾದ ಸಂಶೋಧನೆಗಾಗಿ ಅವರಿಗೆ 1982ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಸಂದಿತು.

1936: ಖಗೋಳ ಶಾಸ್ತ್ರಜ್ಞ ಮತ್ತು ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ರಾಬರ್ಟ್ ವುಡ್ರೋ ವಿಲ್ಸನ್ ಅವರು ಅಮೆರಿಕದ ಟೆಕ್ಸಾಸಿನ ಹೌಸ್ಟನ್ ಎಂಬಲ್ಲಿ ಜನಿಸಿದರು. ಅಮೋ ಅಲನ್ ಪೆನ್ಸಿಯಾಜ್ ಅವರೊಂದಿಗೆ ಜೊತೆಗೂಡಿ ‘ಕಾಸ್ಮಿಕ್ ಮೈಕ್ರೋವೇವ್ ಬ್ಯಾಗ್ರೌಂಡ್ ರೇಡಿಯೇಷನ್’ ಕುರಿತಾಗಿ ಇವರು ನಡೆಸಿದ ಮಹತ್ವದ ಸಂಶೋಧನೆಗಾಗಿ 1978ರಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು. ಬಿಗ್ ಬ್ಯಾಂಗ್ ಥಿಯರಿಗೆ ಈ ಅನ್ವೇಷಣೆ ಮಹತ್ವದ ಪ್ರಾರಂಭ ಒದಗಿಸಿತು.

1920: ಜಾನಪದ ವಿದ್ವಾಂಸ, ಸಂಪಾದಕ, ಸಾಹಿತಿ, ಶಿಕ್ಷಣ ತಜ್ಞ ಎಂ.ಎಸ್. ಸುಂಕಾಪುರ ಮುಳಗುಂದದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಕಟ್ಟುವಲ್ಲಿ ಇವರು ಆರ್. ಸಿ. ಹಿರೇಮಠ ಅವರೊಂದಿಗೆ ಅಹರ್ನಿಶಿ ದುಡಿದಿದ್ದರು. ಕೆಲವರ್ಷ ಗುಲಬರ್ಗ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು, ನಂತರದಲ್ಲಿ ನಿವೃತ್ತಿಯವರೆಗೂ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಶೋಭಮಾಲ ಸ್ವತಂತ್ರ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. 1992ರ ವರ್ಷದಲ್ಲಿ ನಿಧನರಾದ ಇವರು ಗ್ರಂಥ ಸಂಪಾದನೆಯಲ್ಲಿ ಹಗಲಿರುಳೂ ದುಡಿದು ಕನ್ನಡದ ಪ್ರಾಚೀನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಮೇಲೆ ಬೆಳಕು ತಂದುದಲ್ಲದೆ, ಹಾಸ್ಯ ಸಾಹಿತ್ಯದಲ್ಲೂ ಪ್ರಸಿದ್ಧರಾಗಿದ್ದರು.

1940: ಕರ್ನಾಟಕ ಸಂಗೀತ ಗಾಯಕ, ವಿದ್ವಾಂಸ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕರಾದ ಕೆ.ಜೆ. ಏಸುದಾಸ್ ಕೇರಳದ ಕೊಚ್ಚಿಯಲ್ಲಿ ಜನಿಸಿದರು. ವಿಶ್ವದಾದ್ಯಂತ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನಡೆಸಿಕೊಡುತ್ತಿರುವುದರ ಜೊತೆಗೆ ಭಾರತೀಯ ಬಹುತೇಕ ಭಾಷೆಗಳು, ಮಲಯ, ರಷ್ಯನ್, ಅರಬ್ಬಿ, ಲ್ಯಾಟಿನ್ ಭಾಷೆಗಳಲ್ಲಿ ಅವರು 40,000ಕ್ಕೂ ಹೆಚ್ಚು ಹಾಡುಗಳನ್ನು ಅವರು ಧ್ವನಿ ಮುದ್ರಿಸಿದ್ದಾರೆ. ಪದ್ಮಶ್ರೀ, ಪದ್ಮ ಭೂಷಣ, ಏಳು ಬಾರಿ ಶ್ರೇಷ್ಠ ಚಲನಚಿತ್ರ ಹಿನ್ನೆಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಇನ್ನಿತರ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.

2007: ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾವ್ ಅವರು ತಮ್ಮ 92ನೆಯ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಲಾ ತಿಲಕ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾಗಿದ್ದ ಯು.ಆರ್. ಕೃಷ್ಣರಾವ್ ಅವರು ಇಂತದ್ದೇ ಅನುರೂಪ ಸಾಧನೆ ಮಾಡಿದ ತಮ್ಮ ಪತ್ನಿ ಚಂದ್ರ ಭಾಗಾದೇವಿ ಅವರೊಂದಿಗೆ ಸೇರಿ ನಾಟ್ಯಕಲೆಗೆ ಮಹತ್ವದಕೊಡುಗೆ ನೀಡಿದವರೆನಿಸಿದ್ದಾರೆ.

Categories
e-ದಿನ

ಜನವರಿ-09

ದಿನಾಚರಣೆಗಳು:

ಅನಿವಾಸಿ ಭಾರತೀಯರ ದಿನ

ಅನಿವಾಸಿ ಭಾರತೀಯರು ಭಾರತದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಗೌರವಾರ್ಥವಾಗಿ ಈ ದಿನವನ್ನು ‘ಅನಿವಾಸಿ ಭಾರತೀಯರ ದಿನ’ ಎಂದು  ಆಚರಿಸಲಾಗುತ್ತಿದೆ.  ಈ ದಿನ ಮಹಾತ್ಮ ಗಾಂಧೀಜಿ ಅವರು  ದಕ್ಷಿಣ  ಆಫ್ರಿಕಾದಿಂದ  ಭಾರತಕ್ಕೆ 1915ರ ವರ್ಷದಲ್ಲಿ ಹಿಂದಿರುಗಿದ ದಿನಕ್ಕೆ ಹೊಂದಿಕೊಂಡ ಮಹತ್ವವನ್ನೂ ಒಳಗೊಂಡಿದೆ.

ಪ್ರಮುಖಘಟನಾವಳಿಗಳು:

475: ಬೈಜಾಂಟೈನ್ ಚಕ್ರವರ್ತಿ ಜೆನೋಗೆ ಅವನ ರಾಜಧಾನಿಯಾದ ಕಾನ್ ಸ್ಟಾಂಟಿನೋಪಲ್ ತೊರೆಯುವುದು ಅನಿವಾರ್ಯವಾಗಿ, ಆತನ ಸೈನ್ಯಾಧಿಕಾರಿಯಾಗಿದ್ದ  ಬ್ಯಾಸಿಲಿಸ್ಕಸ್ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಿದ

1760: ಬರಾರಿ ಘಾಟ್ ಯುದ್ಧದಲ್ಲಿ ಅಹ್ಮದ್ ಷಾ ದುರಾನಿ ಮರಾಠರನ್ನು ಸೋಲಿಸಿದ

1793: ಜೀನ್ ಪಿಯೆರೆ ಬ್ಲಾನ್ಚರ್ಡ್ ಬಲೂನಿನಲ್ಲಿ ಹಾರಾಟ ನಡೆಸಿದ ಪ್ರಥಮ ಅಮೆರಿಕನೆನಿಸಿದ.

1799: ನೆಪೋಲಿಯನ್ ಯುದ್ದಗಳಲ್ಲಿ ಗ್ರೇಟ್ ಬ್ರಿಟನ್ನಿನ ಸಿದ್ಧತೆಗಳಿಗೆ ಹಣ ಕ್ರೋಡೀಕರಿಸಲು,   ಪ್ರಧಾನಿ ‘ವಿಲಿಯಂ ಪಿಟ್ ದಿ ಯಂಗರ್’ ಅವರು ಪೌಂಡ್ ಒಂದಕ್ಕೆ ಎರಡು ಶಿಲ್ಲಾಂಗ್ ಆದಾಯ ತೆರಿಗೆ ಜಾರಿಗೆ ತಂದರು.

1816: ಸರ್ ಹಂಫ್ರಿ ಡವಿ ಅವರು  ತಾವು ಸಿದ್ಧಪಡಿಸಿದ ಸೇಫ್ಟಿ ಲ್ಯಾಂಪ್ ಅನ್ನು, ಹೆಬರ್ನ್ ಕೊಲೈರಿ ಗಣಿ ಕಾರ್ಮಿಕರ ಉಪಯೋಗದಲ್ಲಿ  ಪ್ರಯೋಗ ನಡೆಸಿದರು.

1822: ಪೋರ್ಚುಗೀಸ್ ರಾಜಕುಮಾರ  ಬ್ರೆಜಿಲ್ಲಿನ ಮೊದಲನೇ ಪೆಡ್ರೋ, ತನ್ನ ಮೇಲೆ ದೊರೆ ಆರನೇ ಜೋವೋ ವಿಧಿಸಿದ ಗಡೀಪಾರು ಆಜ್ಞೆಯನ್ನು ಲೆಕ್ಕಿಸದೆ, ಬ್ರೆಜಿಲ್ ದೇಶದಲ್ಲೇ  ಉಳಿದ.   ಈ ಘಟನೆ ಬ್ರೆಜಿಲ್ ದೇಶದ ಸ್ವಾತಂತ್ರ್ಯ ಚಳುವಳಿಯ ಪ್ರಾರಂಭವೆನಿಸಿತು.

1839: ಪ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಡಾಗ್ಯುಯೆರಿಯೋಟೈಪ್ ಛಾಯಾಚಿತ್ರ   ಸಂಸ್ಕರಣೆಯ ಪೂರ್ಣ ವಿವರಣೆಗಳನ್ನು ಪ್ರಕಟಪಡಿಸಿತು.  ಖ್ಯಾತ ಖಗೋಳ ತಜ್ಞ ಹಾಗೂ ಭೌತತಜ್ಞ ‘ಡಿ.ಎಫ್.ಜೆ. ಆರಗೊ’ ಈ ವಿವರಗಳನ್ನು  ಪ್ರಕಟಿಸಿದರು. ಫ್ರಾನ್ಸಿನ ಜೋಸೆಫ್ ನೀಸೆಫೋರ್ ನೀಪೆಸ್ ಅವರು 1926-27ರಲ್ಲಿ ಮೊತ್ತ ಮೊದಲ ಫೊಟೋಗ್ರಾಫ್ ತಯಾರಿಸಿದ್ದರೂ ಅದು ಕಡಿಮೆ  ಗುಣಮಟ್ಟದ್ದಾಗಿತ್ತು.  ಆ ಸಂಸ್ಕರಣಾ ವಿಧಾನದಲ್ಲಿ ಒಂದು ಚಿತ್ರವನ್ನು ಕಾಣಲು 8 ಗಂಟೆ ಬೇಕಾಗುತ್ತಿತ್ತು. ಲೂಯಿ  ಡ್ಯಾಗುಯೆರೆ ಅಭಿವೃದ್ಧಿ ಪಡಿಸಿದ ಡಾಗ್ಯುಯೆರಿಯೋಟೈಪ್  ಸಂಸ್ಕರಣಾ ವಿಧಾನದಲ್ಲಿ ಚಿತ್ರಗಳನ್ನು  ಕೇವಲ 20-30 ನಿಮಿಷಗಳಲ್ಲಿ ಕಾಣುವುದು ಸಾಧ್ಯವಾಯಿತು.

1894: ನ್ಯೂ ಇಂಗ್ಲೆಂಡ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆಯು ಪ್ರಥಮ ಬ್ಯಾಟರಿ ಚಾಲಿತ ಸ್ವಿಚ್ ಬೋರ್ಡ್ ಅನ್ನು ಮಸ್ಸಚುಸೆಟ್ಸ್ ಪ್ರದೇಶದ ಲೆಕ್ಸಿಂಗ್ಟನ್ ಕೇಂದ್ರದಲ್ಲಿ  ಅಳವಡಿಸಲಾಯಿತು.

1909: ದಕ್ಷಿಣ ಧ್ರುವಕ್ಕೆ ಕೈಗೊಂಡ ‘ನಿಮ್ರೋಡ್ ಎಕ್ಸ್ಪೆಡಿಶನ್’ ಸಾಹಸ ಯಾತ್ರೆಯಲ್ಲಿ, ತಂಡದ ನಾಯಕರಾದ   ಅರ್ನೆಸ್ಟ್ ಶಾಕಲ್ಟನ್ ಅವರು ದಕ್ಷಿಣ ಧ್ರುವದಿಂದ 97 ನಾಟಿಕಲ್ ಮೈಲು ದೂರದಲ್ಲಿ (ಅಂದರೆ 180 ಕಿಲೋಮೀಟರ್ ದೂರದಲ್ಲಿ) ಬ್ರಿಟಿಷ್ ಧ್ವಜವನ್ನು ಏರಿಸಿದರು.  ಅಂದಿನ ದಿನಗಳವರೆಗೆ ಅದು ದಕ್ಷಿಣ ಧ್ರುವದಲ್ಲಿ ಕೈಗೊಂಡ ಗರಿಷ್ಟ ದೂರದ  ಕ್ರಮಿಕೆಯಾಗಿತ್ತು.

1916: ಒಂದನೇ ವಿಶ್ವ ಮಹಾಯುದ್ಧದಲ್ಲಿ, ತನ್ನ ವಿರೋಧಿ ಪಡೆಗಳನ್ನು ಸಂಪೂರ್ಣವಾಗಿ ಕಾಲ್ತೆಗೆಯುವಂತೆ ಮಾಡಿದ  ಒಟ್ಟಾಮನ್ ಸಾಮ್ರಾಜ್ಯವು ಪೂರ್ಣ ವಿಜಯ ಸಾಧಿಸಿತು.  ಇದರೊಂದಿಗೆ  ‘ದಿ ಬ್ಯಾಟಲ್ ಆಫ್ ಗಲ್ಲಿಪೊಲಿ’ ಮುಕ್ತಾಯಗೊಂಡಿತು.

1917: ‘ಬ್ಯಾಟಲ್ ಆಫ್ ರಫ’ ಕದನವು ಈಜಿಪ್ಟ್ ಗಡಿಪ್ರದೇಶದಲ್ಲಿ ಪ್ಯಾಲೆಸ್ಟೈನ್ ಜೊತೆಗೆ ನಡೆಯಿತು.

1918: ಅಮೇರಿಕನ್ ಇಂಡಿಯನ್ನರ ಕೊನೆಯ ಯುದ್ಧವಾದ ಬ್ಯಾಟಲ್ ಆಫ್ ಬೇರ್ ವ್ಯಾಲಿ ನಡೆಯಿತು.

1923: ಸ್ಪೇನ್ ದೇಶದ ಜುವಾನ್ ಡಿ ಲಾ ಸಿಯೆರ್ವಾ ಅವರು ಆಟೋಜೈರೊ ವಿಮಾನ ನಿರ್ಮಿಸಿದರು.  ವಿಮಾನವು ಹೆಚ್ಚಿನ ಎತ್ತರದಲ್ಲಿ ಹಾರಲು, ಮೇಲೇರಲು ಮತ್ತು ಕೆಳಗಿಳಿಯಲು ಸಹಾಯಕವಾಗುವಂತೆ  ಸ್ವಯಂಚಾಲಿತ ರೋಟರ್ ಅನ್ನು ಈ ನಿರ್ಮಾಣದಲ್ಲಿ ಅಳವಡಿಸಿದ್ದರು. ಈ ರೋಟರ್ ತನ್ನ ಚಲನೆಯನ್ನು ತಿರುಗುವ ಪ್ರೊಪೆಲರ್ ಮೂಲಕ ಪಡೆದುಕೊಳ್ಳುವ ವ್ಯವಸ್ಥೆ  ಈ ನಿರ್ಮಾಣದಲ್ಲಿತ್ತು .

1941: ಎರಡನೇ ಮಹಾಯುದ್ಧದಲ್ಲಿ ಮೊದಲ  ಏವ್ರೋ ಲ್ಯಾನ್ಕ್ಯಾಸ್ಟರ್ ವಿಮಾನವನ್ನು  ಬಳಸಲಾಯ್ತು. ಇದು ಬ್ರಿಟಿಷ್ ರಾಯಲ್ ಏರ್ ಫೋರ್ಸಿಗಾಗಿ ಏವ್ರೋ ತಯಾರಿಸಿದ ನಾಲ್ಕು ಇಂಜಿನ್ ಯುಕ್ತ  ಬಾಂಬ್  ಮಳೆ ಸುರಿಸುವ ದೈತ್ಯ ವಿಮಾನವಾಗಿತ್ತು.

1957: ಸ್ಯೂಯೇಜ್ ಕಾಲುವೆಯನ್ನು ಈಜಿಪ್ಟ್ ಸಾಮ್ರಾಜ್ಯದಿಂದ ಹಿಂದೆ ಪಡೆಯಲು ವಿಫಲರಾಗಿದ್ದಕ್ಕಾಗಿ  ಬ್ರಿಟಿಷ್ ಪ್ರಧಾನಿ ಸರ್ ಆಂತೋನಿ ಈಡೆನ್ ಅವರು ತಮ್ಮ ರಾಜಿನಾಮೆ ಸಲ್ಲಿಸಿದರು.

1915: ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕಾನೂನುಭಂಗ ಚಳವಳಿ ನಡೆಸಿದ ಬಳಿಕ ಮುಂಬೈಗೆ ಹಿಂದಿರುಗಿದರು. ಅಪೋಲೊ ಬಂದರಿಗೆ ಅವರಿದ್ದ ಹಡಗು ಬಂದಾಗ, ಅವರನ್ನು  ಎದುರುಗೊಳ್ಳಲು  ವೈಸ್ರಾಯ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.

1982: ಡಾ. ಎಸ್. ಝಡ್. ಖಾಸಿಂ  ಅವರ ನೇತೃತ್ವದಲ್ಲಿ ದಕ್ಷಿಣ ಧ್ರುವದ ಅಂಟಾರ್ಕ್ಟಿಕಾ ಕಡೆಗೆ ಭಾರತದ ಮೊದಲ ಸಂಶೋಧನಾ ತಂಡವು ತನ್ನ  ಪಯಣ ಕೈಗೊಂಡಿತು.

1992: 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಜಿ. ಎಸ್. ಶಿವರುದ್ರಪ್ಪನವರ ಸಮ್ಮೆಳನಾಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಆರಂಭಗೊಂಡಿತು.

2006: ಅರುಂಧತಿ ರಾಯ್ ಅವರ ರಾಜಕೀಯ ಪ್ರಬಂಧಗಳ ಸಂಕಲನವಾದ  ‘ದಿ ಅಲ್ಜೀಬ್ರಾ ಆಫ್ ಇನ್ಫಿನೈಟ್ ಜಸ್ಟೀಸ್’ ಕೃತಿಯನ್ನು   2005ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಗ್ಲಿಷ್ ಸಾಹಿತ್ಯ ಪ್ರಶಸ್ತಿಗೆ  ಪ್ರಶಸ್ತಿಗೆ  ಆಯ್ಕೆ ಮಾಡಲಾಯಿತು.

2007: ಆಪಲ್ ಸಂಸ್ಥೆಯ ಮುಖ್ಯಸ್ಥರಾದ ಸ್ಟೀವ್ ಜಾಬ್ಸ್ ಅವರು  ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಮ್ಯಾಕ್ ವರ್ಲ್ಡ್ ಕೀ ನೋಟ್ ಭಾಷಣದಲ್ಲಿ ಐಫೋನ್ ಪರಿಚಯಿಸಿದರು.

2007: ರೂಪಾ ಬಜ್ವಾ ಅವರ  ‘ಸ್ಯಾರಿ ಶಾಪ್’ ಇಂಗ್ಲಿಷ್ ಕೃತಿಯನ್ನು,  ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಿದ ಸಂದರ್ಭದ 27 ಸೆಕೆಂಡುಗಳ ಅವಧಿಯ ಸ್ಪಷ್ಟ  ವಿಡಿಯೋ ಚಿತ್ರವೊಂದು  ಅಂತರಜಾಲದಲ್ಲಿ  ಪ್ರಸಾರಗೊಂಡಿತು. ಸದ್ದಾಮ್ ಅವರ ಕೊರಳಲ್ಲಿ ಆಗಿರುವ ಗಾಯ ಈ ವಿಡಿಯೋದಲ್ಲಿ ಎದ್ದು ಕಾಣುವಂತಿದ್ದು, ಸದ್ದಾಮ್ ಅವರನ್ನು ನೇಣಿಗೇರಿಸುವುದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ ಎರಡನೆಯ ಸಾರ್ವಜನಿಕ ಬಹಿರಂಗ ಪುರಾವೆ ಇದಾಗಿದೆ. ಕ್ಯಾಮರಾ ಒಳಗೊಂಡ ಮೊಬೈಲಿನಿಂದ ಈ ಚಿತ್ರಿಕರಣ ಮಾಡಲಾಗಿದ್ದು, ಸದ್ದಾಮ್ ಅವರನ್ನು ನೇಣು ಹಾಕಿದ ಬಳಿಕ, ಕೆಳಕ್ಕೆ ಇಳಿಸಿ ಕಬ್ಬಿಣದ ಮಂಚದ ಮೇಲೆ ಮಲಗಿಸುವವರೆಗಿನ ಪೂರ್ಣ ಚಿತ್ರಣ ಇದರಲ್ಲಿದೆ.

2008: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಎ-ಸ್ಟಾರ್, ಸ್ಪ್ಲಾಷ್ ಮತ್ತು ಕಿಜಾಶಿ ಪರಿಕಲ್ಪನೆಯ  ಕಾರುಗಳನ್ನು ಇಂದು ಮಾರುಕಟ್ಟೆಯಲ್ಲಿ ಪ್ರದರ್ಶಿಸಿತು.  ಪ್ರಗತಿ ಮೈದಾನದಲ್ಲಿ ಆಟೋ ಎಕ್ಸ್ಪೋ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕಾರುಗಳ ಪರಿಕಲ್ಪನೆಯನ್ನು ವಿವರಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೊಂಜಿ ನಕಾನಿಶಿ ಅವರು, ಈ ಮೂರೂ ಕಾರುಗಳು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಲಿವೆ ಎಂದು ತಿಳಿಸಿದರು.  ‘ಎ ಸ್ಟಾರ್’ ಕಾರಿನ ಕಲ್ಪನೆಯನ್ನು  ಮೊತ್ತ ಮೊದಲ ಬಾರಿಗೆ ಭಾರತ ಮತ್ತು ಜಪಾನ್ ತಂತ್ರಜ್ಞರು ಜಂಟಿಯಾಗಿ  ಸಿದ್ದಪಡಿಸಿದ್ದು, ಬೆಂಗಳೂರಿನ ಭಾರತ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದ ಸೌರವ್ ಮತ್ತು ರಾಜೇಶ್ ಎಂಬ ಇಬ್ಬರು ಯುವಕರು ಇದನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ .

2009: ಕಂದಾಯ ನಿವೇಶನ ಮತ್ತು ಅವುಗಳಲ್ಲಿ ನಿರ್ಮಿಸಿದ ಮನೆಗಳನ್ನು ನೋಂದಣಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. 2008ರ ಡಿಸೆಂಬರ್ 31ರವರೆಗೆ ನಿರ್ಮಾಣವಾದ ಮನೆ ಮತ್ತು ನಿವೇಶನಗಳಿಗೆ ಸರ್ಕಾರದ ಈ ನಿರ್ಧಾರ ಅನ್ವಯವಾಗುತ್ತದೆ ಎಂದು ಸಂಪುಟದ  ಸಭೆಯ ನಂತರ ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಿಸಿದರು.

2009: ಸತ್ಯಂ ಕಂಪ್ಯೂಟರಿನ ವ್ಯವಹಾರಗಳಲ್ಲಿ ಅನೇಕ ಅಕ್ರಮಗಳು ನಡೆದಿವೆ ಎಂಬ ವಿಚಾರದಲ್ಲಿನ ತನಿಖೆ ಹಿನ್ನೆಲೆಯಲ್ಲಿ, ಆ ಸಂಸ್ಥೆಗೆ ತಪ್ಪೊಪ್ಪಿಗೆ ಪತ್ರ ಬರೆದು ಅಲ್ಲಿನ ಮುಖ್ಯಸ್ಥ ಪದವಿಗೆ ರಾಜೀನಾಮೆ ಸಲ್ಲಿಸಿದ್ದ  ರಾಮಲಿಂಗ ರಾಜು ಅವರು ಪೊಲೀಸರಿಗೆ  ಶರಣಾದರು.

ಪ್ರಮುಖಜನನ/ಮರಣ:

1475: ಇಟಲಿಯ ವಿದ್ವಾಂಸ ಮತ್ತು ಬರಹಗಾರ ಪಿಯೆಟ್ರೊ  ಕ್ರಿನಿಟಸ್ ಜನಿಸಿದರು.  ಅವರು 1504ರಲ್ಲಿ ಪ್ರಕಟಿಸಿದ ‘ಕಾಮನ್ ಪ್ಲೇಸ್ ಬುಕ್’ (De honesta discipline) ಕೃತಿಯಿಂದ ಪ್ರಸಿದ್ಧರಾಗಿದ್ದಾರೆ.  ನಾಸ್ಟ್ರಾಡಮಸ್ ಕೃತಿಗೆ ಇದು ಮೂಲಾಧಾರ ಕೃತಿಯಾಗಿದೆ.

1728: ಇಂಗ್ಲಿಷ್ ಇತಿಹಾಸಜ್ಞ, ಕವಿ ಮತ್ತು ವಿಮರ್ಶಕ ಥಾಮಸ್ ವಾರ್ಟನ್,  ಇಂಗ್ಲೆಂಡಿನ ಹ್ಯಾಂಪಷೈರಿನ ಬಾಸಿಂಗ್ಸ್ಟೋಕ್ ಎಂಬಲ್ಲಿ ಜನಿಸಿದರು.  ‘ಟು ದಿ ರಿವರ್ ಲೋಡನ್’ ಎಂಬ ಅವರ ಸಾನೆಟ್ ವಿಶ್ವಪ್ರಖ್ಯಾತವಾಗಿದೆ.

1818: ಫ್ರೆಂಚ್ ಶಿಲ್ಪಿ ಮತ್ತು ಛಾಯಾಗ್ರಾಹಕ ಆನ್ಟೋಯಿನ್ ಸಾಮ್ಯುಯೆಲ್ ಆಡಂ ಸಾಲೊಮನ್ ಫ್ರಾನ್ಸಿನ ಸಿಯೆನ್-ಎಟ್-ಮರ್ನೆ ಎಂಬಲ್ಲಿನ, ಲಾ ಫೆರ್ಟೆ ಎಂಬಲ್ಲಿ ಜನಿಸಿದರು. ವಿದ್ಯಾರ್ಥಿ ವೇತನ ಪಡೆದು ಸ್ವಿಟ್ಜರ್ಲ್ಯಾಂಡ್ ಮತ್ತು ಇಂಗ್ಲೆಂಡಿನಲ್ಲಿ ಶಿಲ್ಪಶಾಸ್ತ್ರ ಅಭ್ಯಾಸ ಮಾಡಿದ ಅವರ ಪ್ರಸಿದ್ಧ ಕೃತಿಗಳಲ್ಲಿ ವಿಕ್ಟರ್ ಕಸಿನ್, ಓಡಿಲಾನ್ ಬ್ಯಾರಟ್, ಪಿಯೆರೆ-ಜೀನ್ ಡಿ ಬೆರಾಂಗರ್, ಅಲ್ಫೋನ್ಸ್ ಡಿ ಲಮಾರ್ಟೈನ್, ಜಿಯಾಚಿನೋ ರೋಸ್ಸಿನಿ,ಮತ್ತು ಮೇರೀ ಆಂಟೋನೆಟ್ ಮುಂತಾದವು ಸೇರಿವೆ.

1822: ಪ್ರಖ್ಯಾತ ವಿನ್ಯಾಸಕಾರ ಕರೋಲ್ ಬೆನೆಶ್ ಜೆಕೊಸ್ಲವಾಕಿಯಾದ ಜಗೆರ್ನಡರೋಫ್ ಎಂಬಲ್ಲಿ ಜನಿಸಿದರು.  ಪೆಲೆಸ್ ಕಾಸಲ್, ಸೈಂಟ್ ಜೋಸೆಫ್ ಕೆಥೆಡ್ರಲ್, ಬ್ರನ್ಕೊವೆನೆಸ್ಕ್ ಆಸ್ಪತ್ರೆ ನಿರ್ಮಾಣಗಳೇ ಅಲ್ಲದೆ ಟಿಸ್ಮಿನ ಮೊನಾಸ್ಟ್ರಿ ಮತ್ತು ಬಿಸಿಟ್ರಿಟ ಮೊನಾಸ್ಟ್ರಿಗಳ ಪುನರ್ನಿರ್ಮಾಣ ಕಾರ್ಯಗಳಲ್ಲೂ ಅವರ  ಕಲಾತ್ಮಕ  ವಿನ್ಯಾಸದ ಸೊಬಗು ಪ್ರಸಿದ್ಧಿಗೊಂಡಿದೆ.

1870: ಬ್ಯಾಸ್ಕ್ಯುಲ್ ಬ್ರಿಡ್ಜ್ ವಿನ್ಯಾಸದಲ್ಲಿ ಕ್ರಾಂತಿ ತಂದ ಅಮೇರಿಕಾದ    ಜೋಸೆಫ್ ಸ್ಟ್ರಾಸ್ ಅವರು ಒಹಿಯೋ ಪ್ರಾಂತ್ಯದ  ಸಿನ್ ಸಿನ್ನಾಟಿ ಎಂಬಲ್ಲಿ ಜನಿಸಿದರು.  ಸಮುದ್ರ ಅಥವಾ ನದಿಗಳ ಮೇಲಿನ  ಸೇತುವೆಗಳು,   ಹಡಗು ಅಥವಾ ದೋಣಿಗಳಿಗೆ  ಸಂಚಾರಕ್ಕೆ  ಅನುವುಮಾಡಿಕೊಡಲು,   ಮೇಲೆ ಏರುವುದು ಮತ್ತು ಇಳಿಯುವುದು  ಬ್ಯಾಸ್ಕುಲ್ ಬ್ರಿಡ್ಜ್ ತಂತ್ರಜ್ಞಾನದ ವಿಶೇಷ. ಜೋಸೆಫ್ ಸ್ಟ್ರಾಸ್ ಅವರು ಪ್ರಸಿದ್ಧ ಗೋಲ್ಡನ್ ಗೇಟ್ ಬ್ರಿಡ್ಜಿನ ಪ್ರಧಾನ ವಿನ್ಯಾಸಕಾರರಾಗಿದ್ದರು.

1889: ಹಿಂದೀ ಸಾಹಿತಿ ವೃಂದಾವನಲಾಲ್ ವರ್ಮ ಅವರು ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಜನಿಸಿದರು.  ಸಾಹಿತ್ಯಕ, ಸಾಮಾಜಿಕ ಕಾದಂಬರಿಗಳು ಹಾಗೂ ನಾಟಕಗಳಿಗೆ ಅವರು ಪ್ರಸಿದ್ಧರಾಗಿದ್ದರು.  1969ರಲ್ಲಿ ನಿಧನರಾದ ಇವರಿಗೆ  ಪದ್ಮಭೂಷಣ ಪ್ರಶಸ್ತಿ, ಆಗ್ರಾ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್,  ಸೋವಿಯತ್ ನೆಹರೂ ಪ್ರಶಸ್ತಿ  ಹಾಗೂ ಝಾನ್ಸಿ ಕಿ ರಾಣಿ ಕೃತಿಗೆ ಸರ್ಕಾರದ ಬಹುಮಾನ ಮುಂತಾದ ಅನೇಕ ಗೌರವಗಳು ದೊರೆತಿದ್ದವು.

1901: ಚಿಕ್ ಯಂಗ್ ಅವರು ಚಿಕಾಗೋದ ಇಲಿನಾಯ್ಸ್ ಎಂಬಲ್ಲಿ ಜನಿಸಿದರು.  ಅವರ ಕಾಮಿಕ್ ಸರಣಿ ‘ಬ್ಲಾಂಡಿ’ ವಿಶ್ವಪ್ರಸಿದ್ಧಿ ಪಡೆದಿತ್ತು.  1973ರ ವರ್ಷದಲ್ಲಿ ನಿಧನರಾದರು.

1912: ಪ್ರಸಿದ್ಧ ಇಂಗ್ಲಿಷ್ ವಿನ್ಯಾಸಕಾರರಾದ ರಾಲ್ಫ್ ಟಬ್ಸ್ ಜನಿಸಿದರು.  ಅನೇಕ ಸುಂದರ ಕಟ್ಟಡ ವಿನ್ಯಾಸಗಳಿಗೆ ಹೆಸರಾಗಿರುವ ಅವರ ನಿರ್ಮಾಣಗಳಲ್ಲಿ  ‘ಡೋಮ್ ಆಫ್ ಡಿಸ್ಕವರಿ’ ಅತ್ಯಂತ ಪ್ರಸಿದ್ಧವಾಗಿದೆ.

1913: ಅಮೆರಿಕದ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಜನಿಸಿದ ದಿನ. 1969-74ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷರೆನಿಸಿದ್ದಾರೆ.

1922: ಭಾರತೀಯ ಮೂಲಸ್ಥ,  ಅಮೆರಿಕದ ಪ್ರಜೆಯಾದ ಹರ ಗೋವಿಂದ ಖೊರಾನ ಅವರು  ಈಗಿನ ಪಾಕಿಸ್ತಾನದ ಭಾಗವಾಗಿರುವ ಬ್ರಿಟಿಷ್ ಭಾರತದ ರಾಯಪುರದಲ್ಲಿ ಜನಿಸಿದರು. ‘ಕೊ‌ಎಂಸೈಮ್ ಎ’ ಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ಹರಗೋವಿಂದ ಖೊರಾನ ಅವರ ಒಂದು ದೊಡ್ಡ ಸಂಶೋಧನೆ. ಇದಲ್ಲದೆ ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್ ಅನ್ನು) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಪ್ರಯೋಗಾಲಯದಲ್ಲಿ  ತಯಾರು ಮಾಡಿ ಜಗತ್ತಿನ ಶ್ಲಾಘನೆಗೆ ಪಾತ್ರರಾದರು.  1968ರ ವರ್ಷದಲ್ಲಿ ಮಾರ್ಷಲ್ ಡಬ್ಲ್ಯೂ. ನಿರೆನ್‌ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ. ಹಾಲಿ ಅವರುಗಳ ಜತೆ ಖೊರಾನ  ಅವರಿಗೆ ಔಷಧ ವಿಜ್ಞಾನ ಕ್ಷೇತ್ರದಲ್ಲಿನ  ನೊಬೆಲ್ ಪುರಸ್ಕಾರ ಸಂದಿದೆ.

1927: ‘ಚಿಪ್ಕೋ’ ಪರಿಸರ ಸಂರಕ್ಷಣಾ  ಚಳುವಳಿಯ ಹರಿಕಾರ, ಮಹಾತ್ಮ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳ ಪ್ರತಿಪಾದಕ,  ಸುಂದರಲಾಲ್ ಬಹುಗುಣ ಅವರು ಉತ್ತರಖಾಂಡದ, ತೆಹ್ರಿ ಘರ್ವಾಲ್ ಪ್ರದೇಶದ ಮರೋದ ಗ್ರಾಮದಲ್ಲಿ ಜನಿಸಿದರು.  1970ರಲ್ಲಿ ಚಿಪ್ಕೋ ಚಳುವಳಿಯ ಸದಸ್ಯರಾಗಿ, ನಂತರದಲ್ಲಿ ತೆಹ್ರಿ ಬೃಹತ್  ಆಣೆಕಟ್ಟಿನ ವಿರುದ್ಧ ಹೀಗೆ ಅವರು ನಿರಂತರವಾಗಿ ಹಿಮಾಲಯದಲ್ಲಿನ ಕಾಡುಗಳ ಸಂರಕ್ಷಣೆಗೆ ಟೊಂಕಕಟ್ಟಿ ಹೋರಾಟ ನಡೆಸಿದರು.  ಅನೇಕ ಗ್ರಂಥಗಳನ್ನೂ ರಚಿಸಿರುವ ಇವರಿಗೆ ಪದ್ಮಶ್ರೀ, ರೈಟ್ ಲೈವ್ಲಿ ಹುಡ್, ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಐ.ಐ.ಟಿ. ರೂರ್ಕೆಲಾದಿಂದ ಡಾಕ್ಟರ್ ಆಫ್ ಸೋಶಿಯಲ್ ಸೈನ್ಸಸ್  ಪದವಿ ಮತ್ತು ಪದ್ಮವಿಭೂಷಣ ಗೌರವಗಳು ಸಂದಿವೆ.

1952: ಭಾರತದ ಪ್ರಸಿದ್ಧ ಅರ್ಥ ಶಾಸ್ತ್ರಜ್ಞರಾದ ಕೌಶಿಕ್ ಬಸು  ಕೋಲ್ಕೊತ್ತಾದಲ್ಲಿ ಜನಿಸಿದರು.  ಅವರು ವಿಶ್ವಬ್ಯಾಂಕಿನ ಹಿರಿಯ ಉಪಾಧ್ಯಕ್ಷ ಮತ್ತು ಪ್ರಧಾನ ಅರ್ಥಶಾಸ್ತ್ರಜ್ಞ ಸ್ಥಾನವನ್ನು ಅಲಂಕರಿಸಿದ್ದರು.  2012ರ ವರೆಗೆ ಅವರು, ಭಾರತ ಸರ್ಕಾರದ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.  ಪದ್ಮಭೂಷಣ ಪ್ರಶಸ್ತಿಯೇ ಅಲ್ಲದೆ ವಿಶ್ವದ ಪ್ರಸಿದ್ಧ ಸಂಸ್ಥೆಗಳ ಪ್ರಶಸ್ತಿ ಗೌರವಗಳೂ ಅವರನ್ನರಸಿ ಬಂದಿವೆ.

1953: ಮೃದಂಗ, ತಬಲಾ, ಢೋಲಕ್, ಡೋಲ್ಕಿ, ಖೋಲ್, ಖಂಜಿರ ಮತ್ತಿತರ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ಖ್ಯಾತಿ ಪಡೆದಿರುವ ಎಸ್. ಬಾಲಸುಬ್ರಹ್ಮಣ್ಯ  ಬೆಂಗಳೂರಿನಲ್ಲಿ ಜನಿಸಿದರು. ಎಲ್ಲ ಪ್ರಮುಖ ಸಿನಿಮಾ ಸಂಗೀತ ಗಾಯಕರು, ಸುಗಮ ಸಂಗೀತ ಗಾಯಕರು  ಮತ್ತು ಸಂಗೀತ ನಿರ್ದೇಶಕರೊಡನೆ ವಾದ್ಯ ನೀಡಿರುವ  ಇವರಿಗೆ  ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ , ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1959: ಗ್ವಾಟೆಮಲನ್ ಅಂತರ್ಯುದ್ಧದ ಸಮಯದಲ್ಲಿ  ಮತ್ತು ನಂತರದಲ್ಲಿ ಅಲ್ಲಿನ ಸ್ತ್ರೀ ಸಂರಕ್ಷಣೆ ಮತ್ತು ಮಾನವ ಹಕ್ಕುಗಳಿಗೆ ಹೋರಾಡಿದ ‘ರಿಗೋಬೆರ್ಟಾ ಮೆಂಚು ತುಮ್’,  ಆ ದೇಶದ ಕ್ವಿಂಛೆ ಬಳಿಯ ಲಾಜ್ ಚಿಮೆಲ್ ಎಂಬಲ್ಲಿ ಜನಿಸಿದರು.  1992ರಲ್ಲಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1998: ಜಪಾನಿನ ರಸಾಯನ ಶಾಸ್ತ್ರಜ್ಞ ಕೆನಿಚಿ ಫುಕುಯಿ ಅವರು ಕ್ಯೋಟೋದಲ್ಲಿ ನಿಧನರಾದರು.  ಮೆಕಾನಿಸಂಸ್ ಆಫ್ ಕೆಮಿಕಲ್ ರಿಯಾಕ್ಷನ್ಸ್ ಎಂಬ ಅವರ  ಸಂಶೋಧನೆಗಳಿಗೆ 1981ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು.

1998: ಮಾರ್ಷಿಯಲ್ ಆರ್ಟ್ನಲ್ಲಿ ಪ್ರಸಿದ್ಧಿ ಪಡೆದ ಇಸ್ರೇಲಿನ  ಇಮಿ ಲಿಚ್ ಟೆನ್ ಫೆಲ್ಡ್ ಅವರು ಆಸ್ಟ್ರಿಯಾ-ಹಂಗೆರಿಯಲ್ಲಿ ಜನಿಸಿದರು.  ಇವರು  ಮಾರ್ಷಿಯಲ್  ಆರ್ಟ್ನಲ್ಲಿ ‘ಕ್ರಾವ್ ಮಗ’ ಎಂಬ ಸ್ವಯಂ ರಕ್ಷಣಾ ಪದ್ಧತಿಯನ್ನು ರೂಪಿಸಿ ಪ್ರಸಿದ್ಧಿ ಪಡಿಸಿದ್ದರು.

2006: ಕೇರಳದ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಮುಖ್ಯಸಂಪಾದಕ, ಪ್ರಕಾಶನ ಸಂಸ್ಥೆಯ ಮುಖ್ಯಸಂಪಾದಕ ಎಂ.ಸಿ. ವರ್ಗೀಸ್ ಅವರು,  ಕೊಟ್ಟಾಯಮ್ಮಿನಲ್ಲಿ ನಿಧನರಾದರು. ಮಂಗಳ ಮಲಯಾಳಂ ದಿನಪತ್ರಿಕೆಯಲ್ಲದೆ, ಕನ್ನಡದ ಮಂಗಳ ವಾರಪತ್ರಿಕೆ, ಬಾಲ ಮಂಗಳ ಮತ್ತು ಗಿಳಿವಿಂಡು ವರ್ಗೀಸ್ ಅವರ ಅವರ ಒಡೆತನದ ಪ್ರಸಿದ್ಧ ಪತ್ರಿಕೆಗಳು.

2007: ಹಿರಿಯ ಪತ್ರಕರ್ತ ಮತ್ತು  ಖ್ಯಾತ ಕಥೆಗಾರರಾದ  ಜಿ.ಎಸ್. ಸದಾಶಿವ ಬೆಂಗಳೂರಿನಲ್ಲಿ  ನಿಧನರಾದರು. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ ವಾರಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ‘ಕನ್ನಡಪ್ರಭ’ದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸಹಾ ಸೇವೆ ಸಲ್ಲಿಸಿದ್ದರು. ಅನೇಕ ಕಥೆ, ಅನುವಾದ, ಮಕ್ಕಳ ಸಾಹಿತ್ಯ, ಸಂಪಾದನೆ ಮುಂತಾದವುಗಳಲ್ಲಿ ಕೃಷಿ ಮಾಡಿದ್ದ ಸದಾಶಿವ ಅವರು ಆಕ್ರಮಣಮೂರು ದಾರಿಗಳುಆಕ್ಸಿಡೆಂಟ್ ಮತ್ತು ಮೌನಿ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಬರೆದಿದ್ದರು.

2013: ಅಮೇರಿಕಾದ ನೊಬೆಲ್  ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಜೇಮ್ಸ್ ಎಂ. ಬುಚಾನನ್ ವರ್ಜೀನಿಯಾದ ಬ್ಲಾಕ್ಸ್ ಬರ್ಗ್ ಎಂಬಲ್ಲಿ ನಿಧನರಾದರು.  ಅವರು ತಮ್ಮ ‘ಪಬ್ಲಿಕ್ ಚಾಯ್ಸ್ ಥಿಯರಿ’ ಪ್ರತಿಪಾದನೆಗೆ ಪ್ರಸಿದ್ಧರಾಗಿದ್ದರು.

2014: ಅಮೇರಿಕಾದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ‘ಡೇಲ್ ಟಿ. ಮಾರ್ಟೆನ್ಸೆನ್’ ಅವರು,  ಇಲಿನಾಯ್ಸ್ ಪ್ರದೇಶದ ವಿಲ್ಮೆಟ್ಟೆ ಎಂಬಲ್ಲಿ ನಿಧನರಾದರು.  ಅವರು ‘ಸರ್ಚ್ ಅಂಡ್ ಮ್ಯಾಚಿಂಗ್ ಥಿಯರಿ ಆಫ್ ಫ್ರಿಕ್ಷನಲ್ ಅನ್ ಎಂಪ್ಲಾಯ್ಮೆಂಟ್’ ಎಂಬ ಸಂಶೋಧನೆಗೆ ಪ್ರಸಿದ್ಧಿ ಪಡೆದಿದ್ದರು.

Categories
e-ದಿನ

ಜನವರಿ-08

ಪ್ರಮುಖಘಟನಾವಳಿಗಳು:

1697: ಧರ್ಮನಿಂದೆ(blasphemy­)ಗಾಗಿ ಎಡಿನ್ ಬರ್ಗ್ ವಿದ್ಯಾರ್ಥಿ ಥಾಮಸ್ ಅಜ್ಕೆನ್ ಹೆಡ್ ಎಂಬಾತ  ಮರಣದಂಡನೆಗೆ ಗುರಿಯಾದ.  ಇದು ಬ್ರಿಟನ್ನಿನಲ್ಲಿ ಧರ್ಮನಿಂದನೆಗೆ ಉಂಟಾದ ಮರಣ ದಂಡನೆಗಳಲ್ಲಿ ಕಡೆಯದಾಗಿದೆ.

1790: ಜಾರ್ಜ್ ವಾಷಿಂಗ್ಟನ್ ಅವರು ಒಕ್ಕೂಟದ ಪ್ರಥಮ ರಾಜ್ಯದ ಭಾಷಣವನ್ನು ನ್ಯೂಯಾರ್ಕ್ ನಗರದಲ್ಲಿ ನೆರವೇರಿಸಿದರು.

1815: ನ್ಯೂ ಆರ್ಲಿಯಾನ್ಸ್ ಯುದ್ಧದಲ್ಲಿ  ಆಂಡ್ರಿಯಾ ಜಾಕ್ಸನ್ ನೇತೃತ್ವದ  ಅಮೆರಿಕ ಪಡೆಗಳು  ಬ್ರಿಟಿಷ್ ಪಡೆಗಳ ಮೇಲೆ ವಿಜಯ ಸಾಧಿಸಿದವು.

1835: ಅಮೆರಿಕದ ರಾಷ್ಟ್ರೀಯ ಸಾಲವು ಶೂನ್ಯವಾಗಿದ್ದ ಏಕೈಕ ಸಮಯವಾಗಿತ್ತು.

1867: ವಾಷಿಂಗ್ಟನ್ ಒಳಗೊಂಡ ಕೊಲಂಬಿಯಾ ಪ್ರಾಂತ್ಯದಲ್ಲಿ ಆಫ್ರಿಕನ್ ಅಮೆರಿಕನ್ನರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1889: ಹರ್ಮನ್ ಹೊಲೆರಿತ್ ಅವರಿಗೆ, ಅವರು ಅಭಿವೃದ್ದಿ ಪಡಿಸಿದ ಪಂಚ್ ಕಾರ್ಡ್ ಕ್ಯಾಲ್ಕ್ಯುಲೇಟರಿಗೆ, ‘ಆರ್ಟ್ ಆಫ್ ಅಪ್ಲೆಯಿಂಗ್ ಸ್ಟಾಟಿಸ್ಟಿಕ್ಸ್’ಗಾಗಿನ ಪೇಟೆಂಟ್ ನೀಡಲಾಯಿತು. ಹರ್ಮನ್ ಹೊಲೆರಿತ್ ಅವರು ಅಭಿವೃದ್ಧಿ ಪಡಿಸಿದ ಈ  ಪಂಚಿಂಗ್ ಕಾರ್ಡ್ ಟಾಬ್ಯುಲೇಟಿಂಗ್ ವ್ಯವಸ್ಥೆ, ಸೆಮಿ ಆಟೋಮ್ಯಾಟಿಕ್ ಡಾಟಾ ಪ್ರೋಸೆಸಿಂಗ್ ವ್ಯವಸ್ಥೆಗಳಿಗೆ  ನಾಂದಿ ಹಾಡಿತು. ಈ ವ್ಯವಸ್ಥೆ ಸುಮಾರು ಒಂದು ಶತಮಾನದ ಅವಧಿಯವರೆಗೆ ಪ್ರಚಲಿತದಲ್ಲಿತ್ತು.

1904: ಚಿಕಾಗೋ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿರುವ ಬ್ಲಾಕ್ ಸ್ಟೋನ್ ಗ್ರಂಥಾಲಯ ಕಟ್ಟಡವು ಲೋಕಾರ್ಪಣೆಗೊಂಡಿತು.  ಚಿಕಾಗೋದ ಅಧ್ಯಕ್ಷರಾಗಿದ್ದ ತಿಮೋಥಿ ಬೀಚ್ ಬ್ಲಾಕ್ ಸ್ಟೋನ್ ಅವರ ಹೆಸರನ್ನು ಈ ಕಟ್ಟಡಕ್ಕೆ ನೀಡಲಾಗಿದೆ.  ಸೋಲನ್ ಎಸ್. ಬೆಮಾನ್ ಅವರು ಈ ಕಟ್ಟಡದ ವಿನ್ಯಾಸಕಾರರಾಗಿದ್ದರು.

1940: ಎರಡನೇ ವಿಶ್ವ ಮಹಾಯುದ್ದದ ಪರಿಣಾಮವಾಗಿ ‘ಫುಡ್ ರೇಷನ್’ ಮಾಡುವ ಅನಿವಾರ್ಯತೆಗೆ ಒಳಗಾದ ಬ್ರಿಟನ್, ಆಹಾರ ಪದಾರ್ಥಗಳ ಪಡಿತರ ವ್ಯವಸ್ಥೆ ಜಾರಿಮಾಡಿತು.

1983: ಅಮೆರಿಕದಲ್ಲೇ ಮೊದಲಬಾರಿಗೆ, ವಾಷಿಂಗ್ಟನ್ ನಗರದಲ್ಲಿರುವ  ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ನಲ್ಲಿ ಲಿಯನಾರ್ಡೊ ಡಾ-ವಿಂಚಿ ಅವರ ‘ಮೊನಾ ಲಿಸಾ’ ಕೃತಿಯನ್ನು ಪದರ್ಶಿಸಲಾಯಿತು.

1964: ಅಮೆರಿಕದ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು  ದೇಶದಲ್ಲಿನ ಬಡತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ‘ಬಡತನದ ವಿರುದ್ಧ ಯುದ್ಧ’ ಎಂಬ ಕಾಯಿದೆಯನ್ನು ಪ್ರಸ್ತಾಪಿಸಿದರು.

1971: ಅಂತರರಾಷ್ಟ್ರೀಯ ಒತ್ತಡಗಳ ಮೇರೆಗೆ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಅವರು,  ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಸೆರೆಮನೆಯಲ್ಲಿದ್ದ ಷೇಕ್ ಮುಜೀಬುರ್ ರೆಹಮಾನ್ ಅವರನ್ನು  ಬಿಡುಗಡೆಗೊಳಿಸಿದರು.

1973: ಸೋವಿಯತ್ ಯೂನಿಯನ್ನಿನ  ಬಾಹ್ಯಾಕಾಶ ನೌಕೆ ‘ಲೂನಾ 21’ರ ಬಾಹ್ಯಾಕಾಶ ಯಾತ್ರೆ ಪ್ರಾರಂಭಗೊಂಡಿತು

1981: ಫ್ರಾನ್ಸಿನ ಟ್ರಾನ್ಸ್-ಎನ್-ಪ್ರಾವಿನ್ಸಿನಲ್ಲಿ, ಸ್ಥಳೀಯ ರೈತನೊಬ್ಬ, ತಾನು ಕಂಡ ‘UFO ಎಂದು ವಿಜ್ಞಾನ ಪ್ರಪಂಚ ಹೇಳುವ, ಗುರುತುಹಿಡಿಯಲಾಗದ’  ಆಕಾಶ ಕಾಯದ ಕುರಿತಾಗಿ ಸುದೀರ್ಘ ಮಾಹಿತಿ ನೀಡಿದ. ಇದು ಇದುವರೆವಿಗೂ ಲಭ್ಯವಿರುವ ಯಾವುದೇ UFO ನೋಟದ ವರದಿಗಳಿಗಿಂತ ಹೆಚ್ಚು   ಪರಿಪೂರ್ಣವಾದ್ದು ಮತ್ತು  ಕೂಲಂಕಷವಾಗಿ ದಾಖಲಿಸಿರುವಂತದ್ದು ಎಂದು ಹೇಳಲಾಗಿದೆ.

1994: ರಷ್ಯಾದ ಗಗನಯಾತ್ರಿ ವಲೇರಿ ಪಾಲ್ವಕೊವ್ ಅವರು ಸೊಯುಜ್ ಟಿಎಮ್ – 18ರಲ್ಲಿ, ಬಾಹ್ಯಾಕಾಶದಲ್ಲಿ ನಿರ್ಮಿಸಲಾಗಿರುವ  ‘ಮಿರ್’ ಕೇಂದ್ರಕ್ಕೆ ಹೊರಟರು.  ಅಲ್ಲಿ ಅವರು ಒಟ್ಟು 437 ದಿನಗಳು ವಾಸ್ತವ್ಯಹೂಡಿದ ದಾಖಲೆ ನಿರ್ಮಿಸಿದ್ದಾರೆ’.

1998: ಬಾರತದಾದ್ಯಂತ ಇರುವ ‘ನಗೆ ಕೂಟಗಳು’ ಪ್ರಥಮ ಬಾರಿಗೆ ‘ಜಾಗತಿಕ ನಗೆ ದಿನ’ವನ್ನು ಮುಂಬೈನಲ್ಲಿ  ಆಚರಿಸಿದವು.  ಭಾರತದಾದ್ಯಂತದ ನಗೆ ಕೂಟಗಳ ಸುಮಾರು 10,000 ಮಂದಿ ಸದಸ್ಯರು ರೇಸ್ಕೋರ್ಸ್ ಮೈದಾನದಲ್ಲಿ ಸಮಾವೇಶಗೊಂಡು ಒಟ್ಟಾಗಿ ಗಹಗಹಿಸಿ  ನಕ್ಕರು.  ಈ ನಂತರದಲ್ಲಿ  ಪ್ರತಿವರ್ಷದ ಜನವರಿ ತಿಂಗಳ ಎರಡನೇ ಭಾನುವಾರವನ್ನು  ‘ಜಾಗತಿಕ ನಗೆ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

2006: ಖ್ಯಾತ ಮರಾಠಿ ಸಾಹಿತಿ ವಿಂದಾ ಕರಂಡೀಕರ್ ಅವರನ್ನು  2003ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಹೆಚ್ಚು ಪ್ರಾಯೋಗಿಕ ಹಾಗೂ ಸಮಗ್ರವಾಗಿ ಸಾಹಿತ್ಯ ಕೃಷಿ ಮಾಡಿದ ಮರಾಠಿ ಸಾಹಿತಿಗಳಲ್ಲಿ ಕರಂಡೀಕರ್ ಒಬ್ಬ ಪ್ರಮುಖರೆನಿಸಿದ್ದಾರೆ.

2006: ದೆಹಲಿಯಲ್ಲಿ ಉಷ್ಣಾಂಶ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಳಿದು 70 ವರ್ಷಗಳ ಅವಧಿಯಲ್ಲೇ ಅತ್ಯಂತ ಹೆಚ್ಚಿನ  ಚಳಿ ದಾಖಲಾಯಿತು.

ಪ್ರಮುಖಜನನ/ಮರಣ:

1638: ಪ್ರಸಿದ್ಧ ವರ್ಣಚಿತ್ರಕಲೆಗಾರ್ತಿ ಎಲಿಜೆಬೆತ್ ಸಿರಾನಿ ಎಂಬಾಕೆ ಇಟಲಿಯ ಬೊಲೋಗ್ನ ಎಂಬಲ್ಲಿ ಜನಿಸಿದರು.  ವರ್ಣಕಲೆಗಾರ್ತಿ ಮತ್ತು ಚಿತ್ರಗಳನ್ನು ಅಚ್ಚುಮಾಡುವ ಕಲಾವಿದೆಯಾಗಿದ್ದ ಆಕೆ ತಾನಿದ್ದ ಬೊಲೋಗ್ನ ಪ್ರಾಂತ್ಯದಲ್ಲಿ ಅತ್ಯಂತ ಪ್ರಸಿದ್ಧಳಾಗಿದ್ದು ಇತರ ಮಹಿಳಾ ಕಲಾವಿದರಿಗಾಗಿ ಆಕಾಡೆಮಿಯನ್ನು ಸ್ಥಾಪಿಸಿದ್ದರು.  ಅಮೆರಿಕದಲ್ಲಿರುವ ‘ವರ್ಜಿನ್ ಅಂಡ್ ಚೈಲ್ಡ್’, ಬೊಲೋಗ್ನದಲ್ಲಿರುವ ‘ಪೋರ್ಟಿಯಾ ವೂಂಡಿಗ್ ಹರ್ ಥೈ’,  ರಷ್ಯಾದಲ್ಲಿರುವ  ‘ಸೆಲ್ಫ್ ಪೋರ್ಟ್ರೈಟ್’ ಮುಂತಾದ ಅವರ ಅನೇಕ ಚಿತ್ರಗಳು ವಿಶ್ವದೆಲ್ಲ  ಕಲಾಪ್ರೇಮಿಗಳ ಕಣ್ಮನ ತಣಿಸುವಂತದ್ದಾಗಿವೆ. ಇನ್ನೂ 27 ವಯಸ್ಸಿನಲ್ಲಿರುವಾಗಲೇ ಸಂದೇಹಾಸ್ಪದ ರೀತಿಯಲ್ಲಿ ಇವರ ಸಾವು ಸಂಭವಿಸಿತು.

1680: ಪ್ರಸಿದ್ಧ ವರ್ಣಚಿತ್ರಗಾರ ಸೆಬಾಸ್ಟಿಯಾನೋ ಕೊಂಕ ‘ಕಿಂಗ್ಡಂ ಆಫ್ ನೇಪಲ್ಸ್’ನ ಗಯೇಟ ಎಂಬಲ್ಲಿ ಜನಿಸಿದರು.  ಮುಂದೆ ರೋಮ್ ನಗರದಲ್ಲಿ ವಾಸ್ತವ್ಯ ಹೂಡಿದ ಅವರು, ಅನೇಕ ಪ್ರಸಿದ್ಧ ಚಿತ್ರಗಳನ್ನಲ್ಲದೆ ವರ್ಣಚಿತ್ರ  ಕಲೆಗಾರರಿಗೆ ಉಪಯುಕ್ತವಾದ ಕೈಪಿಡಿಯನ್ನೂ ತಯಾರಿಸಿದರು.

1867: ಎಮಿಲಿ ಗ್ರೀನ್ ಬಾಲ್ಚ್ ಅವರು ಅಮೆರಿಕದ ಬೋಸ್ಟನ್ ನಗರದಲ್ಲಿ ಜನಿಸಿದರು.  ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದ ಅವರನ್ನು ಸಮಾಜದ ನೋವಿನ ಸಂಗತಿಗಳಾದ ಬಡತನ, ವಲಸೆ, ಬಾಲಕಾರ್ಮಿಕರು ಮುಂತಾದ ವಿಚಾರಗಳು ಕಾಡಿದ್ದವು. ಈ ಕುರಿತು ಅವರು ಮಹತ್ವದ ಕೃತಿಗಳನ್ನು ರಚಿಸಿದ್ದರು.   ಮೊದಲ ಮಹಾಯುದ್ದದ ಸಂದರ್ಭದಲ್ಲಿ  ಶಾಂತಿಗಾಗಿ ಚಳುವಳಿ ಕೈಗೊಂಡ ಆಕೆ ಸ್ವಿಡ್ಜರ್ಲ್ಯಾಂಡ್ ಮೂಲದ ‘ವುಮೆನ್ಸ್ ಇಂಟರ್ನ್ಯಾಷನಲ್ ಲೀಗ್ ಫಾರ್ ಪೀಸ್ ಅಂಡ್ ಫ್ರೀಡಂ’(WLPF) ಸಂಘಟನೆಯ ಕೇಂದ್ರ ನಾಯಕಿಯಾದರು.  1961ರ ವರ್ಷದಲ್ಲಿ ನಿಧನರಾದ ಇವರಿಗೆ 1946ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.

1894: ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರೂ,  ಪ್ರವೃತ್ತಿಯಿಂದ ಸಾಹಿತಿಗಳೂ ಆದ ಕೆ.ವಿ.ಅಯ್ಯರ್ ಅವರು ಕೋಲಾರ ಜಿಲ್ಲೆಯ ದೇವಸಮುದ್ರದಲ್ಲಿ ಜನಿಸಿದರು.  ಶಾಂತಲಾ, ರೂಪದರ್ಶಿ, ಲೀನಾ ಕಾದಂಬರಿಗಳು;  ‘ಸಮುದ್ಯತಾ’ ಕಥಾಸಂಕಲನ;  ದೈಹಿಕ ಶಿಕ್ಷಣ ಕುರಿತು ‘Chemical change in Physical Figure’, ‘Physic and Figure’,  ‘Surya Namaskar’,  ‘Perfect Strength’,  ‘How to obtain strength’ ಮುಂತಾದವು ಅವರ ಪ್ರಸಿದ್ಧ ಕೃತಿಗಳು. 1980ರಲ್ಲಿ ನಿಧನರಾದ ಇವರಿಗೆ,   ಕರ್ನಾಟಕ ಸಾಹಿತ್ಯ ಅಕಾಡೆಮಿಯು 1979ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1933: ‘ಶ್ರೀಮಖ’, ‘ಹೋಶ್ರೀ’, ‘ಶ್ರೀಶ’ ಮುಂತಾದ ಕಾವ್ಯನಾಮಗಳಿಂದ ಕಥೆ, ಕವನ ಕಾದಂಬರಿಗಳನ್ನು ಬರೆದ ಶ್ರೀನಿವಾಸ ಉಡುಪರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಲ್ಲುಂಡೆಯಲ್ಲಿ ಜನಿಸಿದರು. ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಇವರ ‘ಒಲಿದು ಬಂದವಳು’ ಕಾದಂಬರಿಗೆ 1967ರಲ್ಲಿ  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು.  2000ದ ವರ್ಷ  ಮಾರ್ಚ್ 9 ರಂದು ನಿಧನರಾದರು.

1903: ಖ್ಯಾತ ಸಾಹಿತಿ ಎಲ್. ಗುಂಡಪ್ಪ ಅವರು ಜನಿಸಿದರು.  ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಗುಂಡಪ್ಪನವರು ಕುಮಾರವ್ಯಾಸನ ಕರ್ಣಾಟ ಕಥಾಮಂಜರಿ ಗದ್ಯಾನುವಾದವೇ ಅಲ್ಲದೆ, ತಮಿಳಿನ ಪ್ರಸಿದ್ಧ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ. ಮಕ್ಕಳ ಸಾಹಿತ್ಯ, ವ್ಯಾಕರಣ ಮತ್ತಿತರ ಬರಹಗಳನ್ನೂ ಮಾಡಿದ್ದ ಇವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಮತ್ತು 1975ರ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿದ್ದವು.

1909: ಪ್ರಮುಖ ಬಂಗಾಳಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳಾ ಸಾಹಿತಿ ಆಶಾಪೂರ್ಣ ದೇವಿ ಅವರು ಕಲ್ಕತ್ತಾದ ಪೊತೋಲ್ ದಂಗ ಎಂಬಲ್ಲಿ ಜನಿಸಿದರು.  ‘ಪ್ರಥಮ್ ಪ್ರೊತಿಶ್ರುತಿ’, ‘ಸುಬರ್ನೋಲತಾ’, ‘ಬಕುಲಕಥಾ’ ಮುಂತಾದವು ಇವರ ಪ್ರಸಿದ್ಧ ಕೃತಿಗಳಾಗಿವೆ.  1995 ಜುಲೈ 13ರಂದು ನಿಧನರಾದ ಇವರಿಗೆ ಜ್ಞಾನಪೀಠ ಪ್ರಶಸ್ತಿಯೇ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಪದ್ಮಶ್ರೀ ಮತ್ತು ಅನೇಕ ವಿಶ್ವವಿದ್ಯಾಲಯಗಳ ಡಿ.ಲಿಟ್ ಗೌರವಗಳು ಅರ್ಪಿತವಾಗಿದ್ದವು.

1925: ಹಿಂದೀ ಭಾಷಾ ಸಾಹಿತ್ಯದಲ್ಲಿ ‘ನಯಿ ಕಹಾನಿ’ ಯುಗದ ಪ್ರಮುಖರಾದ ಮೋಹನ್ ರಾಕೇಶ್ ಅವರು ಅಮೃತಸರದಲ್ಲಿ ಜನಿಸಿದರು.  ಕಾದಂಬರಿ, ಕತೆ, ಪ್ರಾವಾಸಿ ಸಾಹಿತ್ಯ, ವಿಮರ್ಶೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಅವರ ಸಾಹಿತ್ಯ ಮೂಡಿಬಂದಿದೆ.  1972ರ ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು 1968 ವರ್ಷದ  ಪ್ರಶಸ್ತಿ ನೀಡಿ ಗೌರವಿಸಿತ್ತು.

1926: ಮಹಾನ್ ಒಡಿಸ್ಸಿ ನೃತ್ಯ ಕಲಾವಿದರಾದ ಕೇಳೂಚರಣ್ ಮೊಹಾಪಾತ್ರ ಒರಿಸ್ಸಾದ ಪುರಿ ಸಂಸ್ಥಾನದ ರಘುರಾಜಪುರ ಎಂಬಲ್ಲಿ ಜನಿಸಿದರು.  ಜೀವನದಲ್ಲಿನ ವಿವಿಧ ಆಯಾಮಗಳಲ್ಲಿ ಬೀಡಿ ಕಟ್ಟುವ ಕೂಲಿ ಕೆಲಸದಿಂದ ಮೊದಲ್ಗೊಂಡು ವಿಶ್ವಪ್ರಸಿದ್ಧ ಕಲಾವಿದರಾಗಿ ಬೆಳೆದು ನಿಂತ ಕೇಳೂಚರಣ ಮಹಾಪಾತ್ರರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಸಂಗೀತ ನೃತ್ಯ ಅಕಾಡೆಮಿ ಗೌರವ, ಕಾಳಿದಾಸ ಸಮ್ಮಾನದಂತಹ ಮಹಾನ್ ಗೌರವಗಳು ಅರಸಿಬಂದಿದ್ದವು.

1936: ಕನ್ನಡದ ಹಿರಿಯ ವಿಮರ್ಶಕ, ಸಂಸ್ಕೃತಿ ಚಿಂತಕ ಸಾಹಿತಿ ಪ್ರೊ. ಸಿ.ಎನ್. ರಾಮಚಂದ್ರನ್ ಅವರು ಜನಿಸಿದರು.  ಸೋಮಾಲಿಯಾ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ 1996ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ನಿವೃತ್ತರಾದರು. ಕನ್ನಡದಲ್ಲಿ 16 ಹಾಗೂ ಇಂಗ್ಲೀಷಿನಲ್ಲಿ 10 ಕೃತಿಗಳನ್ನು ರಚನೆ ಮಾಡಿದ್ದಾರೆ. ವಿಮರ್ಶೆಯ ಕನ್ನಡದ ಪ್ರಸಿದ್ಧ ಕೃತಿಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಅವರ ‘ಆಖ್ಯಾನ-ವ್ಯಾಖ್ಯಾನ’ ಕೃತಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ’ನೆರಳುಗಳ ಬೆನ್ನುಹತ್ತಿ’ ಅವರ ಆತ್ಮಕಥನವಾಗಿದೆ.

1953: ಪ್ರಸಿದ್ಧ ರಂಗಕಲಾವಿದ, ಮಹಾಬೋಧಿ ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ  ಕಲಾಗಂಗೋತ್ರಿ ತಂಡದ ಸ್ಥಾಪಕರಾದ ಬಿ.ವಿ. ರಾಜಾರಾಂ ಈ ದಿನ  ಜನಿಸಿದರು. ನಾಟಕಗಳ ಅಭಿನಯ ಮತ್ತು  ನಿರ್ದೇಶನಕ್ಕೆ ಹೆಸರಾದ ಇವರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

1961: ಅಮೇರಿಕದ ಸ್ಪ್ರಿಂಟರ್ ಕ್ಯಾಲ್ವಿನ್ ಸ್ಮಿತ್ ಅಮೆರಿಕದ ಮಿಸಿಸಿಪಿಯ ಬೋಲ್ಟನ್ ಎಂಬಲ್ಲಿ ಜನಿಸಿದರು.  1983 ಮತ್ತು 1987ರಲ್ಲಿ 200 ಮೀಟರ್ ಓಟದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಇವರು,  100 ಮೀಟರ್ ಓಟವನ್ನು 9.93 ಸೆಕೆಂಡುಗಳಲ್ಲಿ ಕ್ರಮಿಸಿ ಓಟ ಕೆಲಕಾಲ ವಿಶ್ವದಾಖಲೆಯಾಗಿತ್ತು.

1337: ಇಟಾಲಿಯನ್ ವರ್ಣಚಿತ್ರಕಾರ ಮತ್ತು ವಿನ್ಯಾಸಕಾರ ಗಿಯಾಟೋ ಅವರು ಇಟಲಿಯ ಫ್ಲಾರೆನ್ಸ್ ನಗರದಲ್ಲಿ ನಿಧನರಾದರು.  ಕಲೆಯ ಚರಿತ್ರೆಯಲ್ಲಿ  ‘ರೆನೆಯಸಾನ್ಸ್’ ಎನ್ನುವ ನವೋದಯ ಕಾಲದ ಪ್ರಮುಖ ಕಲಾವಿದರಾದ ಇವರು ಸ್ಕ್ರೊವೇಗ್ನಿ ಚಾಪೆಲ್, ಫ್ಲಾರೆನ್ಸ್ ಕ್ಯಾಥೆಡ್ರಲ್, ಗಿಯಾಟೋ ಕ್ಯಾಂಪೆನೈಲ್ ಮುಂತಾದ ವಿನ್ಯಾಸಗಳಿಗೆ ಹಾಗೂ ಕ್ರಿಸ್ತನ ಬದುಕನ್ನು ನಿರೂಪಿಸುವ  ಸರಣಿ ಚಿತ್ರಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.

1570: ಫ್ರೆಂಚ್ ನವೋದಯದ ಕಾಲದ ಪ್ರಮುಖ ಶಿಲ್ಪಿ, ವಿನ್ಯಾಸಕಾರ ಮತ್ತು ಬರಹಗಾರ ಫಿಲ್ಬರ್ಟ್ ಡೆಲೋರ್ಮೆ ಪ್ಯಾರಿಸ್ ನಗರದಲ್ಲಿ ನಿಧನರಾದರು.   ಚಟಿಯೂ ಡಿ’ಅನೆಟ್ ಎಂಬ ಅವರ ವಿನ್ಯಾಸ ವಿಶ್ವಪ್ರಸಿದ್ಧಿ ಪಡೆದಿದೆ.

1642: ವಿಜ್ಞಾನ ಕ್ರಾಂತಿಯ ಮಹಾಪುರುಷರಲ್ಲಿ ಪ್ರಮುಖರಾದ  ಭೌತಶಾಸ್ತ್ರಜ್ಞಗಣಿತಜ್ಙಖಗೋಳ ಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಗೆಲಿಲಿಯೋ ಗೆಲೆಲಿ ಅವರು ಇಟಲಿಯ ಗ್ರಾಂಡ್ ಡಚ್ಚಿ ಆಫ್ ಟಸ್ಕನಿ ಬಳಿಯ ಅರ್ಸೆಟ್ರಿ ಎಂಬಲ್ಲಿ ನಿಧನರಾದರು.  ಖಗೋಳ ಅನ್ವೇಷಣೆಗಳಿಗೆ   ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟವರಾಗಿದ್ದಾರೆ

1941: ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ ಅವರು ಕೀನ್ಯಾದ ನಯ್ಯೇರಿ ಎಂಬಲ್ಲಿ ನಿಧನರಾದರು. ಇವರು   ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು. ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತಾದ ತಮ್ಮ  ಚಿಂತನೆಗಳನ್ನು,  ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ನಡೆಸಿದ ಸ್ಥಳೀಯ ಹುಡುಗರ ಕ್ಯಾಂಪ್  ಮೂಲಕ 1907ರ ವರ್ಷದಲ್ಲಿ ಕಾರ್ಯರೂಪಕ್ಕೆ ತಂದರು.  ಇದು ಮುಂದೆ ಸ್ಕೌಟ್ ಚಳುವಳಿಯಾಗಿ ರೂಪುಗೊಂಡಿತು.  1908ರಲ್ಲಿ  ‘ಸ್ಕೌಟಿಂಗ್ ಫಾರ್ ಬಾಯ್ಸ್’ ಎಂಬ ಪುಸ್ತಕವನ್ನು ಬರೆದರು

1958: ಕಟ್ಟಡಗಳ ನಿರ್ಮಾಣದಲ್ಲಿ ಮಹಿಳೆಯರು ಅಪರೂಪವಾಗಿದ್ದ ಕಾಲದಲ್ಲಿ ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾಗಿದ್ದ ಮೇರಿ ಎಲಿಜಬೆತ್ ಕೊಲ್ಟರ್ ನಿಧನರಾದರು.  ಗ್ರಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್, ಹೋಪಿ ಹೌಸ್, ಹರ್ಮಿಟ್ಸ್ ರೆಸ್ಟ್, ಲುಕ್ ಔಟ್ ಸ್ಟುಡಿಯೋ, ಡೆಸರ್ಟ್ ವ್ಯೂ ವಾಚ್ ಟವರ್ ಮುಂತಾದ ಅನೇಕ ಪ್ರಸಿದ್ಧ  ವಿನ್ಯಾಸಗಳಿಗೆ ಇವರು ಹೆಸರಾಗಿದ್ದಾರೆ.

1997: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕದ ಜೈವಿಕ ವಿಜ್ಞಾನಿ ಮೆಲ್ವಿನ್ ಕ್ಯಾಲ್ವಿನ್ ಅವರು  ಕ್ಯಾಲಿಫೋರ್ನಿಯಾದ  ಬರ್ಕ್ಲಿ ಎಂಬಲ್ಲಿ ನಿಧನರಾದರು.  ಜೀವ ರಸಾಯನಶಾಸ್ತ್ರ, ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದವರೆಂದು ಇವರು ಪ್ರಸಿದ್ಧಿ ಪಡೆದಿದ್ದಾರೆ.

1998: ‘ಬಬಲ್ ಗಮ್’ ಕಂಡುಹಿಡಿದ ಅಮೆರಿಕನ್ ವರ್ತಕ ವಾಲ್ಟೇರ್ ಇ. ಡೀಮರ್,  ಪೆನ್ಸಿಲ್ವೇನಿಯಾದ ಲ್ಯಾನ್ಕಾಸ್ಟರ್ ಎಂಬಲ್ಲಿ 93ನೇ ವಯಸ್ಸಿನಲ್ಲಿ ನಿಧನರಾದರು. ಫ್ಲೀರ್ ಚ್ಯುಯಿಂಗ್ ಗಮ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ತಮ್ಮ ಬಿಡುವಿನ ವೇಳೆಯಲ್ಲಿ ಗಮ್ ಖಾದ್ಯಗಳ ಜೊತೆಗೆ ಸಂಶೋಧನಾತ್ಮಕವಾಗಿ ಆಟವಾಡುತ್ತಿದ್ದರು.  ಹೀಗೆ ಆಟವಾಡುತ್ತಿದ್ದ ಅವರಿಗೆ, 1928ರ ಒಂದು ದಿನದಲ್ಲಿ  ಬಬಲ್ ಗಮ್ ಅನ್ನು ಕಂಡು ಹಿಡಿಯುವುದು ಸಾಧ್ಯವಾಯಿತು.

2002: ಆಸ್ಟ್ರೇಲಿಯಾದಲ್ಲಿ ಜನಿಸಿದ ರಷ್ಯಾದ ಭೌತವಿಜ್ಞಾನಿ ಅಲೆಗ್ಸಾಂಡರ್ ಪ್ರೊಖೋರೋವ್ ಮಾಸ್ಕೋದಲ್ಲಿ ನಿಧನರಾದರು.  ಲೇಸರ್ಸ್ ಮತ್ತು ಮಾಸರ್ಸ್ ಕುರಿತಾದ ಮಹತ್ವದ ಸಂಶೋಧನೆಗಳಿಗಾಗಿ ಇವರಿಗೆ 1964ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಸಂದಿತ್ತು.

Categories
e-ದಿನ

ಜನವರಿ-07

ಪ್ರಮುಖಘಟನಾವಳಿಗಳು:

1610: ಪ್ರಖ್ಯಾತ ಖಗೋಳ ಶಾಸ್ತ್ರಜ್ಞರಾದ ಗೆಲಿಲಿಯೋ ಗೆಲಿಲಿ ಅವರು ಮುಂದೆ ಗೆಲಿಲಿಯನ್ ಮೂನ್ಸ್ ಎಂದೇ ಪ್ರಖ್ಯಾತವಾದ ಗ್ಯಾನಿಮೇಡ್, ಕಾಲಿಸ್ಟೋ, ಲೋ ಮತ್ತು ಯುರೋಪಾ ಚಂದ್ರರತ್ತ ಮೊದಲ ದೃಷ್ಟಿ ಹಾಯಿಸಿದರು. ಮೊದಲಿಗೆ ಲೋ ಮತ್ತು ಯುರೋಪಾ ಅವರಿಗೆ ಎರಡನ್ನೂ ಪ್ರತ್ಯೇಕಿಸಿಕೊಳ್ಳಲಿಕ್ಕೆ ಸಾಧ್ಯವಾಗದಿದ್ದರೂ, ಮಾರನೆಯ ದಿನ ಅವರಿಗೆ ಅದು ಸಾಧ್ಯವಾಯಿತು.

1782: ಅಮೆರಿಕಾದ ಮೊದಲ ವಾಣಿಜ್ಯ ಬ್ಯಾಂಕ್ ‘ಬ್ಯಾಂಕ್ ಆಫ್ ನಾರ್ತ್ ಅಮೆರಿಕ’ ಫಿಲೆಡೆಲ್ಫಿಯಾದಲ್ಲಿ ಕಾರ್ಯಾರಂಭ ಮಾಡಿತು. ಇದರ ಷೇರುಗಳು ಮಾರಾಟವಾದಾಗ, ಅದು ದೇಶದ ಮೊದಲ ಸಾರ್ವಜನಿಕ ಒಡೆತನದ ಪದ್ದತಿಗೆ ನಾಂದಿಯಾಯಿತು. 1791ರವರೆಗೆ ಇದು ಅಘೋಷಿತ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿತ್ತು.

1785: ಫ್ರಾನ್ಸಿನ ಜೀನ್ ಪಿಯೆರ್ ಬ್ಲಾನ್ಚರ್ಡ್ ಮತ್ತು ಅಮೇರಿಕಾದ ಜಾನ್ ಜೆಫ್ರೀಸ್ ಜೋಡಿ ಇಗ್ಲೆಂಡಿನ ಡೋವರ್ ಇಂದ ಫ್ರಾನ್ಸಿನ ಕಲಾಯಿಸ್ ಎಂಬಲ್ಲಿಗೆ, ಗಾಳಿ ತುಂಬಿದ ಬಲೂನಿನ ಮೂಲಕ ಯಶಸ್ವಿ ಪಯಣ ಕೈಗೊಂಡರು.

1789: ಅಮೆರಿಕದ ಮೊದಲ ಅಧ್ಯಕ್ಷರಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆಗೊಂಡರು. ಅವರು ಅಧಿಕಾರ ಸ್ವೀಕರಿಸಿದ್ದು ಏಪ್ರಿಲ್ 30ರಂದು. ಇವರು 1797ರ ಮಾರ್ಚ್ 03 ರವರೆಗೆ ಅಧ್ಯಕ್ಷರಾಗಿದ್ದರು.

1857: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯಲ್ಲಿ ಪಾಲ್ಗೊಂಡ್ದದಕ್ಕಾಗಿ ಕೊನೆಯ ಮೊಘಲ್ ಚಕ್ರವರ್ತಿ ಎರಡನೆಯ ಬಹಾದುರ್ ಶಹಾ ಅವರ ಮೇಲೆ ವಿಚಾರಣೆ ಆರಂಭವಾಯಿತು.

1894: ಫ್ರೆಂಚ್ ಮೂಲದವರಾಗಿ ಥಾಮಸ್ ಆಲ್ವಾ ಎಡಿಸನ್ ಅವರ ಸಂಸ್ಥೆಯಲ್ಲಿ ತಂತ್ರಜ್ಞರಾದ ವಿಲಿಯಂ ಕೆನ್ನೆಡಿ ಡಿಕ್ಸನ್ ಅವರು, ಚಲನಚಿತ್ರಗಳನ್ನು ಚಿತ್ರೀಕರಿಸುವ ಕಿನೆಟೋಸ್ಕೋಪ್ ತಯಾರಿಯಲ್ಲಿ ಪಾಲ್ಗೊಂಡು ಅದಕ್ಕೆ ಅಗತ್ಯವಾದ ಸೇಲ್ಯುಲಾಯ್ಡ್ ಫಿಲಂ ಅನ್ನು ಅನ್ವೇಷಿಸಿದರು. ಇದಕ್ಕೆ ಅವರು 1894ರ ವರ್ಷದಲ್ಲಿ ಪೇಟೆಂಟ್ ಪಡೆದರು.

1904: ರೇಡಿಯೋ ವೈರ್ಲೆಸ್ ತರಂಗಗಳ ಮೂಲಕ ಗಂಭೀರ ಪರಿಸ್ಥಿತಿಗಳು ಎದುರಾದಾಗ ಉಪಯುಕ್ತವಾದ ’CQD’ ಸಂಜ್ಞೆಗಳ ಉಪಯೋಗ ಮಾರ್ಕೋನಿ ಇಂಟರ್ ನ್ಯಾಷನಲ್ ಮೆರಿನ್ ಕಾಮ್ಯೂನಿಕೇಶನ್ ಕಂಪೆನಿಯಿಂದ ಜಾರಿಗೆ ಬಂತು. ಇದರ ಅರ್ಥ ‘All Stations: distress’ ಎಂಬುದಾಗಿತ್ತು. ಇದು ಅಪಾಯದಲ್ಲಿ ಸಿಲುಕುತ್ತಿದ್ದ ನೌಕೆಗಳಿಗೆ ಬಹು ಉಪಯುಕ್ತವಾಗಿತ್ತು. ಮುಂದೆಯೂ ಅಲ್ಲಲ್ಲಿ ಈ ಸಂಜ್ಞೆಗಳು ಬಳಕೆಯಲ್ಲಿದ್ದರೂ SOS (Save our Ship, Save our Soul, Send out Succour ಇತ್ಯಾದಿ ಅರ್ಥ ಸೂಚಕಗಳ ) ಸಂಜ್ಞೆಗಳು ಹೆಚ್ಚು ಬಳಕೆಯಲ್ಲಿವೆ.

1927: ಅಟ್ಲಾಂಟಿಕ್ ಆಚೆ ಈಚೆಗಿನ ಮೊದಲ ಸಂಪರ್ಕ ದೂರವಾಣಿ ಸೇವೆ ನ್ಯೂಯಾರ್ಕ್ ಮತ್ತು ಲಂಡನ್ ನಗರಗಳ ನಡುವೆ ಆರಂಭಗೊಂಡಿತು.

1931: ಆಸ್ಟ್ರೇಲಿಯಾದ ಗೈ ಮೆನ್ಸೀಸ್ ಅವರು ಏಕಾಂಗಿಯಾಗಿ ಮೊದಲಬಾರಿಗೆ ಟ್ರಾನ್ಸ್-ಟಾಸ್ಮಾನ್ (ಆಸ್ಟ್ರೇಲಿಯಾ – ನೂಜಿಲೆಂಡ್) ವಿಮಾನ ಹಾರಾಟ ನಡೆಸಿದರು. 11 ಗಂಟೆ 45 ನಿಮಿಷಗಳ ನಿರಂತರ ಹೋರಾಟವನ್ನು ನಡೆಸಿದ ಅವರು ನ್ಯೂಜಿಲೆಂಡಿನ ಪಶ್ಚಿಮ ತೀರದಲ್ಲಿ ಪ್ರತಿಕೂಲ ಹವಾಮಾನದಿಂದ ಹಠಾತ್ ಭೂಸ್ಪರ್ಶಕ್ಕೀಡಾದರು. ಇದಕ್ಕೆ ಹಿಂದೆ ಸ್ಮಿತ್ ಮತ್ತು ಉಲ್ಮ್ ಎಂಬ ಜೋಡಿ 1928ರ ವರ್ಷದಲ್ಲಿ ದಕ್ಷಿಣದ ಭಾಗದಲ್ಲಿ ಇಂಗ್ಲೆಂಡಿನಿಂದ ಆಸ್ಟ್ರೇಲಿಯಾಕ್ಕೆ ಹಾರಿದ್ದರು. ಅನಿರೀಕ್ಷಿತವಾದ ಅಪಘಾತಕ್ಕೀಡಾದರೂ ಮೆನ್ಸೀಸ್ ಅವರು ಸ್ಮಿತ್ ಮತ್ತು ಉಲ್ಮ್ ಜೋಡಿಗಿಂತ ಎರಡೂವರೆ ತಾಸು ಹೆಚ್ಚಿನ ಹಾರಾಟ ನಡೆಸಿದ ಕೀರ್ತಿಗೆ ಪಾತ್ರರಾದರು.

1935: ಇಟಲಿಯ ಸರ್ವಾಧಿಕಾರಿ ಮುಸಲೋನಿ ಮತ್ತು ಫ್ರೆಂಚ್ ವಿದೇಶಾಂಗ ಸಚಿವ ಪಿಯೆರ್ರೆ ಲಾವಲ್ ಅವರ ಜೊತೆ ‘ಫ್ರಾಂಕೋ ಇಟಾಲಿಯನ್ ಒಪ್ಪಂದ’ ಏರ್ಪಟ್ಟಿತು. “ಪ್ರಥಮ ವಿಶ್ವಯುದ್ಧದ ನಂತರದಲ್ಲಿ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ನಡುವೆ ಹಂಚಿಹೋಗಿದ್ದ ಜರ್ಮನಿ ವಸಾಹತು ಪ್ರದೇಶಗಳನ್ನು ಇಟಲಿಯು ಈ ಯುದ್ದದಲ್ಲಿ ಮಾಡಿದ ಬಲಿದಾನ ಮತ್ತು ಶ್ರಮದ ನೆನಪಿನ ಬಹುಮಾನ ರೂಪವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸಿನ ಕೆಲವೊಂದು ಗಡಿನಾಡ ಪ್ರದೇಶಗಳನ್ನು ನೀಡಲಾಗುವುದು” ಎಂಬುದು ಈ ಒಪ್ಪಂದದ ತಿರುಳಾಗಿತ್ತು.

1945: ಬ್ರಿಟಿಷ್ ಜನರಲ್ ಬೆನಾರ್ಡೋ ಮೊಂಟಗೋಮೆರಿ ಅವರು ಜರ್ಮನಿಯ ಪ್ರಾಬಲ್ಯವನ್ನು ಬಹುತೇಕವಾಗಿ ಮುರಿದ ‘ಬ್ಯಾಟಲ್ ಆಫ್ ದಿ ಬಲ್ಜ್’ ವಿಜಯದ ಯಶಸ್ಸು ನನಗೇ ಸಲ್ಲಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಪಶ್ಚಿಮದಲ್ಲಿ ಬೆಲ್ಜಿಯಂನ ವಲ್ಲೋನಿಯಾ, ಫ್ರಾನ್ಸ್, ಲುಕ್ಸೆಮ್ಬರ್ಗ್ ಮುಂತಾದ ದಟ್ಟ ಕಾಡುಪ್ರದೇಶಗಳ ನಡುವೆ ಜರುಗಿದ ಈ ಯುದ್ಧದಲ್ಲಿ ಜರ್ಮನಿಗೆ ಉಂಟಾದ ಭೀಕರ ನಷ್ಟಗಳ ಜೊತೆ ಜೊತೆಗೆ ಅಮೆರಿಕ ಪಡೆ ಕೂಡಾ ಅತೀವ ಕಷ್ಟನಷ್ಟಗಳಿಗೆ ಈಡಾಯಿತು.

1948: ಕೆಂಟಕಿ ಏರ್ ನ್ಯಾಷನಲ್ ಗಾರ್ಡಿನ ಚಾಲಕ ಥಾಮಸ್ ಮಾಂಟೆಲ್ ಅವರು UFO ಎನ್ನಲಾಗುವ ಗುರುತಿಸಲಾಗದ ಹಾರುವ ವಸ್ತುಗಳನ್ನು (Unidentified Flying Objects) ಹಿಡಿಯಹೋಗಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡರು.

1954: ಯಾಂತ್ರಿಕ ಭಾಷಾ ಅನುವಾದ ವ್ಯವಸ್ಥೆಯನ್ನು (Machine Translation System) ಮೊಟ್ಟ ಮೊದಲಬಾರಿಗೆ ಸಾರ್ವಜನಿಕವಾಗಿ ನ್ಯೂಯಾರ್ಕ್ನಲ್ಲಿರುವ ಐಬಿಎಮ್ ಪ್ರಧಾನ ಕಚೇರಿಯಲ್ಲಿ ಪ್ರದರ್ಶಿಸಲಾಯಿತು.

1968: ಸರ್ವೇಯರ್ ಸರಣಿಯ ಕೊನೆಯ ಗಗನನೌಕೆಯಾದ ‘ಸರ್ವೇಯರ್ 07’ ಕೇಪ್ ಕಾರ್ನಿವಲ್ ನಲ್ಲಿರುವ ಲಾಂಚ್ ಕಾಂಪ್ಲೆಕ್ಸಿನಿಂದ ನಭಕ್ಕೆ ಚಿಮ್ಮಿತು.

1985: ಜಪಾನ್ ದೇಶ ತನ್ನ ಪ್ರಥಮ ಅಂತರಗ್ರಹ ಸಂಚಾರಿ ಉಪಗ್ರಹವಾದ ‘ಸಕಿಗಾಕೆ’ ಅನ್ನು ಉಡಾಯಿಸಿತು. ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಹೊರತು ಇನ್ಯಾವುದೇ ದೇಶ ಕೈಗೊಂಡ ಆಳವಾದ (space probe) ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇದು ಪ್ರಥಮದ್ದಾಗಿದೆ.

2006: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್.ರಾವ್ ಮತ್ತು ವಿಪ್ರೊ ಸಂಸ್ಥೆಯ ಮುಖ್ಯಸ್ಥರಾದ ಅಜೀಂ ಎಚ್. ಪ್ರೇಮ್ ಜಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಪ್ರಶಸ್ತಿ ಪ್ರದಾನ ಮಾಡಿದರು.

2006: ಸಾಗರೋತ್ತರ ಭಾರತೀಯರಿಗೆ ಆಗಾಗ ವೀಸಾ ಪಡೆಯಲು ಇದ್ದ ಕಿರಿಕಿರಿ ನಿವಾರಿಸಲು ಅಜೀವ ಪರ್ಯಂತ ಪ್ರವೇಶ ವೀಸಾ ಸೌಲಭ್ಯ ನೀಡುವ ಭಾರತ ಸಾಗರೋತ್ತರ ನಾಗರಿಕ (ಒಸಿಐ) ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೈದರಾಬಾದಿನ ಅನಿವಾಸಿ ಭಾರತೀಯ ನಿವಾಸಿ ಸಮಾವೇಶದಲ್ಲಿ ಚಾಲನೆ ನೀಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಾದ ನಿವೃತಿ ರಾಯ್ ಮತ್ತು ಇಫ್ತಿಕಾರ್ ಷರೀಫ್ ಅವರಿಗೆ ಅನಿವಾಸಿ ಭಾರತೀಯ ಪೌರತ್ವ ಚೀಟಿಗಳನ್ನು ಪ್ರಧಾನಿ ಹಸ್ತಾಂತರಿಸಿದರು.

2007: ಜೈವಿಕ ತಂತ್ರಜ್ಞಾನ ಕಾರ್ಯದರ್ಶಿಗಳಾಗಿದ್ದ ಡಾ. ಎಂ.ಕೆ. ಭಾನ್ ಅವರನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿ.ಎಸ್.ಐ.ಆರ್) ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.

2008: ಕುಟುಂಬಕ್ಕೆ ಒಂದೇ ಮಗು ಕಾಯ್ದೆಯನ್ನು ಉಲ್ಲಂಘಿಸಿದ ಚೀನಾದಲ್ಲಿನ ಹುಬೈ ಪ್ರಾಂತ್ಯದ 500 ಸದಸ್ಯರನ್ನು ಕಮ್ಯುನಿಸ್ಟ್ ಪಕ್ಷ ಉಚ್ಛಾಟಿಸಿತು. ಕಮ್ಯುನಿಸ್ಟ್ ಸದಸ್ಯರಲ್ಲದೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಕುಟುಂಬಗಳು ಈ ನೀತಿಯನ್ನು ಉಲ್ಲಂಘಿಸಿದ್ದಾರೆ.

2009:  ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ರಾಮಲಿಂಗರಾಜು, ತಾವು ಸಂಸ್ಥೆಗೆ ಹಲವು ಸಹಸ್ರ ಕೋಟಿಯಷ್ಟು ಮೋಸ ಎಸಗಿರುವುದಾಗಿ ನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದು, ತಮ್ಮ ರಾಜೀನಾಮೆಯನ್ನೂ ಸಲ್ಲಿಸಿದರು.

2009: ಸಿದ್ದಾರ್ಥ ವಿಹಾರ ಟ್ರಸ್ಟ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡಿರುವ ಬುದ್ಧ ವಿಹಾರವನ್ನು ಕಲ್ಬುರ್ಗಿ ಸಮೀಪದಲ್ಲಿನ ಕುಸನೂರು ಬಳಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.

2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲಸಂಜಾತ ಸಂಜಯ್ ಗುಪ್ತ ಅವರನ್ನು ಅಮೇರಿಕಾದ ಸರ್ಜನ್ ಜನರಲ್ ಆಗಿ ನೇಮಕ ಮಾಡಿದ್ದಾರೆ.

ಪ್ರಮುಖಜನನ/ಮರಣ:

1827: ಕೆನಡಾದ ತಂತ್ರಜ್ಞ ಮತ್ತು ಸಂಶೋಧಕ ಸ್ಟಾಂಡ್ ಫೋರ್ಡ್ ಫ್ಲೆಮಿಂಗ್ ಅವರು ಸ್ಕಾಟ್ ಲ್ಯಾಂಡ್ ದೇಶದ ಫಿಫೆ ಬಳಿಯ ಕಿರ್ಕ್ ಕಾಲ್ಡಿ ಎಂಬಲ್ಲಿ ಜನಿಸಿದರು. ಹದಿನೆಂಟನೆಯ ವಯಸ್ಸಿನಲ್ಲಿ ಇವರು ಕೆನಡಾಗೆ ವಲಸೆ ಬಂದರು. ಸಂಶೋಧಕರಾದ ಇವರು ವಿಶ್ವವನ್ನು ‘ವ್ಯವಸ್ಥಿತ ಕಾಲಮಾನ ಪ್ರದೇಶ’ (standard time zone)ಗಳಾಗಿ ವಿಂಗಡಿಸುವ ಪಸ್ತಾಪವನ್ನು ಮಂಡಿಸಿದರು. ಕೆನಡಾದ ಮೊದಲ ಅಂಚೆ ಚೀಟಿಯನ್ನು ರೂಪಿಸಿದರು. ಭೂಮಾಪನ ಮತ್ತು ಭೂನಕ್ಷೆ ತಯಾರಿಸುವ ವ್ಯವಸ್ಥೆ ಜಾರಿಗೆ ತಂದರು. ಬಹುತೇಕ ಇಂಟರ್ ಕೋಲೋನಿಯಲ್ ರೈಲ್ವೆ ಮತ್ತು ಕೆನಡಿಯನ್ ಪಸಿಫಿಕ್ ರೈಲ್ವೆ ವ್ಯವಸ್ಥೆಯನ್ನು ರೂಪಿಸಿದರು. 1915ರಲ್ಲಿ ನಿಧನರಾದ ಇವರು ‘ರಾಯಲ್ ಸೊಸೈಟಿ ಆಫ್ ಕೆನಡಾ’ ಸಂಸ್ಥಾಪಕ ಸದಸ್ಯರಾಗಿ ಮತ್ತು ‘ರಾಯಲ್ ಕೆನಡಿಯನ್ ಇನ್ಸ್ಟಿಟ್ಯೂಟ್’ ಸಂಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

1909: ‘ಫಿಯರ್ ಲೆಸ್ ನಾಡಿಯಾ’ ಎಂದೇ ಖ್ಯಾತಿ ಪಡೆದಿದ್ದ ಭಾರತದ ಚಿತ್ರನಟಿ ಮೇರಿ ಈವಾನ್ಸ್ ನಾಡಿಯಾ ಅವರು ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ತಂದೆಯೊಂದಿಗೆ ಭಾರತಕ್ಕೆ ಬಂದು, ಬ್ಯಾಲೆ ನರ್ತಕಿಯಾಗಿ, ರಂಗ ಕಲಾವಿದೆಯಾಗಿ, ಝರ್ಕೋ ಸರ್ಕಸ್ ಕಲಾವಿದೆಯಾಗಿ ಮತ್ತು ಚಲನಚಿತ್ರ ನಟಿಯಾಗಿ ಖ್ಯಾತಿ ಗಳಿಸಿದ್ದರು.

1912: ಪ್ರಸಿದ್ಧ ವ್ಯಂಗ್ಯಚಿತ್ರ ಸರಣಿ ‘ದಿ ಆಡಮ್ಸ್ ಫ್ಯಾಮಿಲಿ’ ಸೃಷ್ಟಿಕರ್ತ ಚಾರ್ಲ್ಸ್ ಆಡಮ್ಸ್ ಅಮೆರಿಕದ ನ್ಯೂಜೆರ್ಸಿ ಪ್ರಾಂತ್ಯದ ವೆಸ್ಟ್ ಫೀಲ್ಡ್ ಎಂಬಲ್ಲಿ ಜನಿಸಿದರು.

1917: ಕಲಾವಿದ ಮಿಲ್ಟನ್ ರೆಸ್ನಿಕ್ ಅವರು ಉಕ್ರೇನಿನ ಬ್ರಾಟ್ ಸ್ಲಾವ್ ಎಂಬಲ್ಲಿ ಜನಿಸಿದರು. ನ್ಯೂ ಬ್ರೈಡ್, ಪಿಂಕ್ ಫೈರ್, ಎಲೆಫೆಂಟ್, ವೆಡ್ಡಿಂಗ್, ಅರ್ಥ್ ಮುಂತಾದ ಅವರ ಪ್ರಸಿದ್ಧ ಚಿತ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದ ಸಂಗ್ರಹಾಲಯಗಳಲ್ಲಿವೆ.

1917: ಸುಪ್ರಸಿದ್ಧ ಹಾರ್ಮೋನಿಯಂ ಕಲಾವಿದ ಪಂಡಿತ್ ರಾಮಭಾವು ಬಿಜಾಪುರೆ ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ಎಂಬಲ್ಲಿ ಜನಿಸಿದರು. 1953ರಲ್ಲಿ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದಿಂದ ಸಂಗೀತ ವಿಶಾರದ ಹಾಗೂ ಸಂಗೀತ ಅಲಂಕಾರ (ಹಾರ್ಮೋನಿಯಂ) ಪರೀಕ್ಷೆಯಲ್ಲಿ ಇಡೀ ಭಾರತಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರದು. 93 ವರ್ಷ ಜೀವಿಸಿ, ದೇಶದೆಲ್ಲೆಡೆ ಕಾರ್ಯಕ್ರಮ ನೀಡಿ ಪ್ರಸಿದ್ಧರಾದ ಇವರಿಗೆ , ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’, ಸಂಗೀತ ವಿದ್ವಾನ್ ಟಿ. ಚೌಡಯ್ಯ ಪ್ರಶಸ್ತಿ, ಮಹೋಪಾಧ್ಯಾಯ ಬಿರುದು ಮುಂತಾದ ಅನೇಕ ಗೌರವಗಳು ಸಂದಿದ್ದವು.

1925: ಯುನೈಟೆಡ್ ಕಿಂಗ್ಡಂನಲ್ಲಿನ ವಿಶ್ವ ಪ್ರಸಿದ್ಧ ಡರೆಲ್ ವೈಲ್ಡ್ ಲೈಫ್ ಪಾರ್ಕ್ ಸಂಸ್ಥಾಪಕ ಗೆರಾಲ್ಡ್ ಡರೆಲ್ ಅವರು ಜೆಮ್ಶೆಡ್ಪುರದಲ್ಲಿ ಜನಿಸಿದರು. ಪ್ರಕೃತಿ ಪ್ರೇಮಿ, ಪ್ರಾಣಿ ಸಂಗ್ರಹಾಲಯದ ಮುಖ್ಯಸ್ಥರಾಗಿ, ದೂರದರ್ಶನದಲ್ಲಿ ಪ್ರಕೃತಿ ಮತ್ತು ಪ್ರಾಣಿಗಳ ಕುರಿತಾದ ನಿರೂಪಕರಾಗಿ ಪ್ರಸಿದ್ಧರಾದ ಡರೆಲ್ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ಇವರ ಅಣ್ಣ ಲಾರೆನ್ಸ್ ಡರೆಲ್ ಕಾದಂಬರಿಕಾರರಾಗಿ ಪ್ರಸಿದ್ಧರು.

1938: ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಟಿ ಬಿ. ಸರೋಜಾದೇವಿ ಅವರು ಬೆಂಗಳೂರಿನಲ್ಲಿ ಜನಿಸಿದರು. ಕನ್ನಡದಲ್ಲಿ ರಾಷ್ಟ್ರಪಶಸ್ತಿ ವಿಜೇತ ಚಿತ್ರ ‘ಕಿತ್ತೂರು ರಾಣಿ ಚೆನ್ನಮ್ಮ’ , ‘ಅಮರಶಿಲ್ಪಿ ಜಕಣಾಚಾರಿ’, ‘ನ್ಯಾಯವೇ ದೇವರು’ ಮುಂತಾದ ಚಿತ್ರಗಳಲ್ಲದೆ, ತಮಿಳು, ತೆಲುಗು, ಹಿಂದೀ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿವೆ.

1941: ಪ್ರಸಿದ್ಧ ರಸಾಯನ ಶಾಸ್ತ್ರ ವಿಜ್ಞಾನಿ, ಕೇಂಬ್ರಿಡ್ಜ್ ಪ್ರಾಧ್ಯಾಪಕ ಜಾನ್ ಇ. ವಾಕರ್ ಇಂಗ್ಲೆಂಡಿನ ಪಶ್ಚಿಮ ಯಾರ್ಕ್ ಶೈರ್ ಬಳಿಯ ಹ್ಯಾಲಿಫಾಕ್ಸ್ ಎಂಬಲ್ಲಿ ಜನಿಸಿದರು. 1997ರಲ್ಲಿ ರಸಾಯನ ಶಾಸ್ತ್ರದಲ್ಲಿನ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ಸಂದಿದೆ.

1989: ಜಪಾನ್ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳ್ವಿಕೆ ನಡೆಸಿದ ಚಕ್ರವರ್ತಿ ಹಿರೊಹಿತೊ ಟೋಕಿಯೋದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಅವರು 1926ರಿಂದ 1989ರವರೆಗೆ ಜಪಾನನ್ನು ಆಳಿದರು.

2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ತೀರ್ಥಹಳ್ಳಿಯ ಸಾವಿತ್ರಮ್ಮ ರಾಮಶರ್ಮ ಶಿವಮೊಗ್ಗದಲ್ಲಿ ನಿಧನರಾದರು. ಮಕ್ಕಳ ಕಲ್ಯಾಣಕ್ಕೆ ಸಲ್ಲಿಸಿದ ಸೇವೆಗಾಗಿ 1982ರಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದರು. ಬಸವಾನಿಯ ಹೊಳೆಕೊಪ್ಪದಲ್ಲಿ ವೃದ್ಧರಿಗಾಗಿ ‘ಅಭಯಾಶ್ರಮ’ ಮತ್ತು ತೀರ್ಥಹಳ್ಳಿಯಲ್ಲಿ ಕಸ್ತೂರಿಬಾ ಆಶ್ರಮ ನಡೆಸಿ ಹೆರಿಗೆ ಸೌಲಭ್ಯ ಕಲ್ಪಿಸಿದ್ದರು. ಅವರ ಪತಿ ವಾಮನಶರ್ಮ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.

2007: 86 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ‘ಗಿನ್ನೆಸ್’ ದಾಖಲೆ ನಿರ್ಮಿಸಿದ್ದ ‘ಹೊಟ್ಟೆ ಪಕ್ಷ’ದ ರಂಗಸ್ವಾಮಿ ಬೆಂಗಳೂರಿನಲ್ಲಿ ನಿಧನರಾದರು. ಒಂದೂ ಸಲವೂ ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದದ್ದು ವಿನೂತನ ವಿಧಾನಗಳ ಮೂಲಕ ಪ್ರಚಾರ ನಡೆಸುತ್ತಿದ್ದುದು ಅವರ ವೈಖರಿಯಾಗಿತ್ತು.

Categories
e-ದಿನ

ಜನವರಿ-06

ಪ್ರಮುಖಘಟನಾವಳಿಗಳು:

1838: ಅಮೇರಿಕಾದ ಆಲ್ಫ್ರೆಡ್ ವೈಲ್ ಅವರು ಚುಕ್ಕೆ(.) ಮತ್ತು ಪುಟ್ಟ ಅಡ್ಡಗೆರೆ(-) ಸಂಜ್ಞೆಗಳನ್ನು ಬಳಸಿ ‘ಟೆಲಿಗ್ರಾಫ್’ ಎಂದು ಪ್ರಸಿದ್ಧವಾದ ತಂತಿ ಸಂದೇಶ ವ್ಯವಸ್ಥೆಯನ್ನು ನಿರೂಪಿಸಿದರು. ಇದು ಮುಂದೆ ಬಳಕೆಗೆ ಬಂದ ‘ಮೋರ್ಸ್ ಕೋಡ್’ ಸಂಜ್ಞೆಗಳಿಗೆ ಪೀಠಿಕೆಯಾಯ್ತು.

1839: ಕಳೆದ ಮುನ್ನೂರು ವರ್ಷಗಳಲ್ಲೇ ಅತ್ಯಂತ ಭೀಕರವಾದ ಚಂಡಮಾರುತವು ಐರ್ಲ್ಯಾಂಡ್ ದೇಶವನ್ನು ಅಪ್ಪಳಿಸಿ ಡಬ್ಲಿನ್ ನಗರದ ಶೇಕಡಾ ಇಪ್ಪತ್ತಕ್ಕೂ ಹೆಚ್ಚು ಜನವಸತಿ ನಾಶಗೊಂಡವು.

1907: ಶಿಶುವಿಹಾರ (ಮಾಂಟೆಸ್ಸರಿ) ವ್ಯವಸ್ಥೆಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದ ಮಾರಿಯಾ ಮಾಂಟೆಸ್ಸರಿ ಅವರು, ಕಾರ್ಮಿಕರ ಮಕ್ಕಳ ಪಾಲನೆಯನ್ನು ದಿನದ ವೇಳೆಯಲ್ಲಿ ನೋಡಿಕೊಳ್ಳುವ ಪ್ರಥಮ ಶಿಶುವಿಹಾರ ಮತ್ತು ಅಂಗನವಾಡಿ ಕೇಂದ್ರವನ್ನು ಇಟಲಿಯ ರೋಮ್ ನಗರದಲ್ಲಿ ಸ್ಥಾಪಿಸಿದರು.

1912: ಜರ್ಮನಿಯ ಜಿಯೋಫಿಸಿಸ್ಟ್ ಆಲ್ಫ್ರೆಡ್ ವೆಗೆನರ್ ಅವರು ಪ್ರಥಮ ಬಾರಿಗೆ ಕಾಂಟಿನೆಂಟಲ್ ಡ್ರಿಫ್ಟ್ ಸಿದ್ಧಾಂತವನ್ನು ನಿರೂಪಿಸಿದರು. ಭೂಮಿಯ ಮೇಲಿರುವ ವಿವಿಧ ಖಂಡಗಳ ಚಲನೆ ಒಂದಕ್ಕೊಂದು ಪೂರಕವಾಗಿರುವುದರಿಂದ ಅವು ಸಮುದ್ರದ ಮೇಲ್ದೆರೆಯಲ್ಲಿ (ocean bed) ತೇಲುತ್ತಿರುವಂತೆ ಭಾಸವಾಗುತ್ತದೆ ಎಂಬುದನ್ನು ಅವರು ತೋರಿಸಿಕೊಟ್ಟರು.

1929: ಮದರ್ (ಸಂತ) ತೆರೇಸಾ ಎಂದು ಪ್ರಖ್ಯಾತರಾದ ಅಲ್ಬೇನಿಯಾದ ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು ಅವರು ಭಾರತದಲ್ಲಿ ಬಡತನ ಮತ್ತು ರೋಗಗಳಿಂದ ನೊಂದ ಜನರ ಸೇವೆ ಮಾಡುವ ಉದ್ದೇಶದಿಂದ ಕಲ್ಕಾತ್ತಾಗೆ ಆಗಮಿಸಿದರು.

1930: ಪ್ರಥಮ ಡೀಸೆಲ್ ಇಂಜಿನ್ ಚಾಲಿತ ವಾಹನವು ಅಮೇರಿಕಾದ ಇಂಡಿಯಾನಾಪೊಲಿಸ್ ನಗರದಿಂದ ನ್ಯೂಯಾರ್ಕಿನವರೆಗೆ ತನ್ನ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿತು.

1931: ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರು ತಮ್ಮ ಸಂಶೋಧನೆಗಳ ಸ್ವಾಮ್ಯದ ಕೊನೆಯ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿದರು.

1941: ಅಮೇರಿಕಾದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ಸ್ಟೇಟ್ ಆಫ್ ದಿ ಯೂನಿಯನ್ ವೇದಿಕೆಯಲ್ಲಿ ‘ಫೋರ್ ಫ್ರೀಡಮ್ಸ್’ ಭಾಷಣದಲ್ಲಿ ಮಾತನಾಡುವ ಸ್ವಾತಂತ್ರ್ಯ, ಪೂಜಿಸುವ ಸ್ವಾತಂತ್ರ್ಯ, ಬಯಕೆಗಳಿಂದ ಸ್ವಾತಂತ್ರ್ಯ ಮತ್ತು ಭಯದಿಂದ ಸ್ವಾತಂತ್ರ್ಯ ಎಂಬ ನಾಲ್ಕು ರೀತಿಯ ಸ್ವಾತಂತ್ರ್ಯಗಳನ್ನು ತಮ್ಮ ಐತಿಹಾಸಿಕ ಉಪನ್ಯಾಸದಲ್ಲಿ ಪ್ರಸ್ತಾಪಿಸಿದರು.

1947: ಪ್ಯಾನ್ ಅಮೇರಿಕನ್ ಏರ್ಲೈನ್ಸ್, ವಿಶ್ವದಾದ್ಯಂತ ಎಲ್ಲೆಡೆಯ ಪಯಣಕ್ಕೂ ಟಿಕೆಟ್ ವ್ಯವಸ್ಥೆ ಪ್ರಾರಂಭಿಸಿದ ಪ್ರಥಮ ವಿಮಾನಯಾನ ಸಂಸ್ಥೆ ಎನಿಸಿತು.

1947: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಭಾರತದ ವಿಭಜನೆಯನ್ನು 99-52 ಮತಗಳ ಅಂತರದಲ್ಲಿ ಅಂಗೀಕರಿಸಿತು.

1951: ಕೊರಿಯಾ ಯುದ್ಧದಲ್ಲಿ ಸುಮಾರು 1300 ದಕ್ಷಿಣ ಕೊರಿಯಾ ಕಮ್ಮ್ಯೂನಿಸಂ ಪರ ಸಹಾನುಭೂತಿ ಉಳ್ಳವರನ್ನು ನಿರ್ದಯವಾಗಿ ಕೊಲ್ಲಲಾಯಿತು. ಜಗತ್ತಿನ ಚರಿತ್ರೆಯಲ್ಲಿ ಗಂಘ್ವಾ ನರಮೇಧ ಎಂದೆನಿಸಿದೆ.

1989: 1984ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ನೇರ ಆರೋಪಿಗಳಾಗಿದ್ದ ಸತ್ವಂತ್ ಸಿಂಗ್ ಮತ್ತು ಈ ಹತ್ಯೆ ಯೋಜನೆಯ ರೂವಾರಿಯಾಗಿದ್ದ ಕೇಹರ್ ಸಿಂಗ್ ಅನ್ನು ಗಲ್ಲಿಗೇರಿಸಲಾಯಿತು.

2006: ಭಾರತೀಯ ಮೂಲದ ಕೃಷಿಕ ಎಲಿಯಾಹು ಬೆಜಾಲೆಲ್ ಅವರು ಇಸ್ರೇಲಿನ ಪ್ರತಿಷ್ಠಿತ ಪ್ರವಾಸಿ ಭಾರತೀಯ ಪ್ರಶಸ್ತಿಗೆ ಆಯ್ಕೆಯಾದರು. 1955ರಲ್ಲಿ ಕೇರಳದ ಚೆಂದಮಂಗಳಂ ಗ್ರಾಮದಿಂದ ಇಸ್ರೇಲಿಗೆ ಬಂದು ಅಲ್ಲಿ ಅವರು ರೈತರಾಗಿ ಗಣನೀಯ ಸೇವೆ ಸಲ್ಲಿಸಿದರು. ಇಸ್ರೇಲಿನ ನೆಗಿವ್ ಮರುಭೂಮಿಯಲ್ಲಿ ತಾವು ಮಾಡಿದ ಕೃಷಿಸಾಧನೆಗಾಗಿ, 1964ರಲ್ಲಿ ಶ್ರೇಷ್ಠ ರಫ್ತುದಾರ ಪ್ರಶಸ್ತಿಯನ್ನು ಸಹಾ ಅಲ್ಲಿನ ಪ್ರಧಾನಿ ಲೆವಿ ಎಸ್ಕೋಲ ಅವರಿಂದ ಸ್ವೀಕರಿಸಿದ್ದರು.

2006: ಚಿತ್ರನಟ ವಿಷ್ಣುವರ್ಧನ್ ಸೇರಿದಂತೆ ನಾಲ್ವರು ಗಣ್ಯರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನಲ್ಲಿ ನಡೆದ 41ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ವಿಷ್ಣುವರ್ಧನ್, ಕೊಲಾಜ್ ಕಲಾವಿದ ವಿ. ಬಾಲು, ನೃತ್ಯ ಕಲಾವಿದೆ ಮಾಯಾರಾವ್ ಹಾಗೂ ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರುಗಳಿಗೆ ಡಾಕ್ಟರೇಟ್ ಪ್ರದಾನ ಮಾಡಿದರು.

2009: ಕರ್ನಾಟಕ ಸರ್ಕಾರ ರಚಿಸಿದ ‘ರಾಜ್ಯ ಕಾನೂನು ಆಯೋಗಕ್ಕೆ’ ಪ್ರಥಮ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತು. ಈ ಆಯೋಗವು ಜನಸಾಮಾನ್ಯರಿಗೆ ತ್ವರಿತ ನ್ಯಾಯ ನೀಡಲು ಹಾಗೂ ಸುಧಾರಣೆ ತರಲು ಇರುವ ನ್ಯೂನತೆಗಳ ಅಧ್ಯಯನ ಕೈಗೊಳ್ಳಲು ರಚಿಸಲಾಗಿದೆ.

2009: ಕಾನೂನು ವಿಶ್ವವಿದ್ಯಾಲಯದಲ್ಲಿ ವಿಶೇಷಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಜೆ.ಎಸ್. ಪಾಟೀಲ್ ಅವರನ್ನು ಪ್ರಥಮ ಕುಲಪತಿಗಳಾಗಿ ಕರ್ನಾಟಕ ಸರ್ಕಾರವು ನೇಮಿಸಿತು.

ಪ್ರಮುಖಜನನ/ಮರಣ:

1785: ಇಟಲಿ, ಫ್ರಾನ್ಸ್, ಜರ್ಮನಿ ಮುಂತಾದೆಡೆಗಳಲ್ಲಿ ಆಳವಾಗಿ ಇತಿಹಾಸ ಮತ್ತು ಇತಿಹಾಸಕ್ಕೆ ಅಗತ್ಯವಾದ ಭಾಷಾಜ್ಞಾನವನ್ನು ಗಳಿಸಿ, ಅಮೂಲ್ಯ ಚರಿತ್ರಾರ್ಹ ವಿಷಯಗಳನ್ನು ಸಂಪಾದಿಸಿ ಪ್ರಕಟಿಸಿದ ಗ್ರೀಕ್ ಇತಿಹಾಸಜ್ಞ ಅಂಡ್ರಿಯಾಸ್ ಮೌಸ್ಟಾಕ್ಸಿಡಿಸ್ ಅವರು ಜನಿಸಿದರು.

1819: ಪ್ರಸಿದ್ಧ ವರ್ಣಚಿತ್ರಗಾರ ಬಲ್ದಾಸ್ಸಾರೆ ವೆರಾಸ್ಸಿ ಜನಿಸಿದರು. ಮಿಲನ್ ನಗರದಲ್ಲಿರುವ ರಿಸೋರ್ಜಿಮೆಂಟೋ ಮ್ಯೂಸಿಯಂನಲ್ಲಿರುವ, ಇವರ ‘ಎಪಿಸೋಡ್ ಫ್ರಮ್ ಫೈವ್ ಡೇಸ್’ ಎಂಬ ಇಂಗ್ಲಿಷ್ ಅರ್ಥದ ಕೃತಿ ಪ್ರಸಿದ್ಧಿ ಪಡೆದಿದೆ.

1832: ಪ್ರಸಿದ್ಧ ಫ್ರೆಂಚ್ ವರ್ಣಚಿತ್ರ ಕಲೆಗಾರ, ಮುದ್ರಣಕಾರ, ಗ್ರಂಥಕಾರ ಮತ್ತು ಶಿಲ್ಪಿಯಾಗಿದ್ದ, ಗುಸ್ತಾವೆ ಡೋರ್ ಅವರು ಫ್ರಾನ್ಸಿನ ಸ್ಟ್ರಾಸ್ ಬೌರ್ಗ್ ಎಂಬಲ್ಲಿ ಜನಿಸಿದರು. ಅವರ ಮರಗೆತ್ತನೆಗಳು ಪ್ರಖ್ಯಾತವಾಗಿವೆ. ಫ್ರಾನ್ಸ್ ಸರ್ಕಾರ ಅವರನ್ನು “ಚೆವಲಿಯರ್ ಡಿ ಲಾ ಲೆಜಿಯನ್ ಡಿ’ಹನ್ನಿಯೂರ್” ಎಂಬ ಶ್ರೇಷ್ಠ ಗೌರವ ನೀಡಿ ಸಮ್ಮಾನಿಸಿತ್ತು.

1897: ವಿಶ್ವವಿಖ್ಯಾತ ಶಿಲ್ಪಿ ರಂಜಾಳ ಗೋಪಾಲ ಶೆಣೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ರಂಜಾಳದಲ್ಲಿ ಜನಿಸಿದರು. ಕುಂಚ, ಬಣ್ಣಗಳ ಜೊತೆ ಆಟವಾಡುತ್ತಾ ಬೆಳೆದ ಇವರು ‘ರಂಜಾಳ ಶ್ರೀಮದ್ ಭುವನೇಂದ್ರ ಶಿಲ್ಪ ಕಲಾ ಶಾಲೆ’ ಸ್ಥಾಪಿಸಿ ಉಳಿ, ಸುತ್ತಿಗೆ, ಚಾಣ ಹಿಡಿದರು. ಕಾರ್ಕಳದ ವೆಂಕಟ್ರಮಣ ದೇವಾಲಯದ ಗರುಡ ಮಂಟಪದ ನಾಲ್ಕು ಕಂಬಗಳ ಕಲಾ ವೈಖರಿ ಅವರಿಗೆ ಮೊದಲ ಕೀರ್ತಿ ತಂದ ಶಿಲ್ಪ. ಧರ್ಮಸ್ಥಳಕ್ಕಾಗಿ ನಿರ್ಮಿಸಿಕೊಟ್ಟ 39 ಅಡಿಯ ಬಾಹುಬಲಿ, ಉತ್ತರ ಪ್ರದೇಶದ ಫಿರೋಜ್ ನಗರಕ್ಕೆ ನಿರ್ಮಿಸಿಕೊಟ್ಟ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರಕ್ಕಾಗಿ ನಿರ್ಮಿಸಿಕೊಟ್ಟ 67 ಅಡಿಗಳ ಬುದ್ಧ ಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳಕ್ಕಾಗಿ ನಿರ್ಮಿಸಿದ ಮಲಗಿರುವ ಬುದ್ಧ, ಮುಂಬೈಗಾಗಿ ನಿರ್ಮಿಸಿದ ರಾಮ-ಲಕ್ಷ್ಮಣ ಇತ್ಯಾದಿ ಶಿಲ್ಪಗಳು ವಿಶ್ವದಾದ್ಯಂತ ಅವರ ಕೀರ್ತಿಯನ್ನು ಪಸರಿಸಿವೆ. ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಧರ್ಮಸ್ಥಳದ ಹೆಗ್ಗಡೆಯವರಿಂದ ಬಂಗಾರದ ಕಡಗ, ಶಿಲ್ಪ ವಿಶಾರದ ಬಿರುದು, ಕಾಶೀ ಮಠದಿಂದ ‘ಶಿಲ್ಪ ಸಾಮ್ರಾಜ್ಯ ಚಕ್ರವರ್ತಿ’ ಬಿರುದು, ಭಾರತ ಸರಕಾರದ ಮಾಸ್ಟರ್ ಕ್ರಾಫ್ಟ್‌ಸ್‌ಮನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಅವರಿಗೆ ಸಂದಿದ್ದವು.

1910: ಕರ್ನಾಟಕ ಸಂಗೀತದ ಮಹಾನ್ ಕಲಾವಿದರಲ್ಲಿ ಒಬ್ಬರಾದ ಜಿ. ಎನ್. ಬಾಲಸುಬ್ರಮಣ್ಯಂ ಅವರು ತಂಜಾವೂರು ಜಿಲ್ಲೆಯ, ಮಾಯಾವರಂ ಬಳಿಯ ಗುಡಲೂರು ಎಂಬಲ್ಲಿ ಜನಿಸಿದರು. ಮಹಾನ್ ಸಂಗೀತಕಾರರಾಗಿ, ಅನೇಕ ಶ್ರೇಷ್ಠ ಶಿಷ್ಯರನ್ನು ತಯಾರು ಮಾಡಿದ ಗುರುವಾಗಿ, ವಾಗ್ಗೆಯಕಾರರಾಗಿ, ಚಲನಚಿತ್ರ ಕಲಾವಿದರಾಗಿ, ಆಕಾಶವಾಣಿ ಕಾರ್ಯಕ್ರಮ ಸಂಯೋಜಕರಾಗಿ ಹೀಗೆ ವಿವಿಧ ರೀತಿಯಲ್ಲಿ ಅವರು ಸಂಗೀತ ಸೇವೆ ಸಲ್ಲಿಸಿದ್ದಾರೆ. 1965ರ ವರ್ಷದಲ್ಲಿ ನಿಧನರಾದ ಇವರು ಸಂಗೀತ ಲೋಕದಲ್ಲಿ ‘ಜಿ.ಎನ್.ಬಿ’ ಎಂದೇ ಪ್ರಸಿದ್ಧರು.

1929: ತ್ರಿವೇಣಿ ಅವರ ಸಮಕಾಲೀನರಾದ ಕಥೆ, ಕಾದಂಬರಿಗಾರ್ತಿ ಎಂ.ಕೆ. ಜಯಲಕ್ಷ್ಮಿ ಅವರು ತ್ರಿವೇಣಿ ಅವರಂತೆಯೇ ಅಲ್ಪಾಯುಷಿ. ಜೀವಿಸಿದ್ದ ಮೂವತ್ತೈದು ವರ್ಷಗಳಲ್ಲಿ ಹದಿನಾರು ಕಾದಂಬರಿ, ಹಲವಾರು ಕಥೆಗಳನ್ನು ಬರೆದರು. ಸ್ತ್ರೀ ಶೋಷಣೆಯ ವಿರುದ್ಧ ಬಂಡಾಯದ ದನಿಯನ್ನು ದಾಖಲಿಸಿರುವುದರ ಜೊತೆಗೆ, ಅವೈಜ್ಞಾನಿಕವಾದ ಮೂಢನಂಬಿಕೆಗಳಿಗಿಂತ ನೀತಿ, ಧರ್ಮ, ಆದರ್ಶಗಳನ್ನೇ ಮೈಗೂಡಿಸಿಕೊಂಡು ಬಾಳುವೆ ಮಾಡುವ ಮಹಿಳಾ ಪಾತ್ರಗಳ ಆರೋಗ್ಯಕರ ಕಾದಂಬರಿಗಳತ್ತ ಜಯಲಕ್ಷ್ಮಿ ಗಮನ ಹರಿಸಿದ್ದಾರೆ. ಇವರ ಬಹುತೇಕ ಕಾದಂಬರಿಗಳು ಬಹುಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ. ‘ಸಂಸಾರದಲ್ಲಿ ಸಮರ’ ಕಾದಂಬರಿಗೆ 1962ರಲ್ಲಿ ಮೈಸೂರು ಸರಕಾರದ ಪ್ರಶಸ್ತಿ ದೊರೆತಿತ್ತು.

1933: ಕವಿ, ಪ್ರಾಧ್ಯಾಪಕ ಪಂಚಾಕ್ಷರಿ ಹಿರೇಮಠ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಎಂಬಲ್ಲಿ ಜನಿಸಿದರು. ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 33 ವರ್ಷ ಸೇವೆ ಜೊತೆಗೆ ಮುರುಘಾ ಮಠದ ಮೂಲಕ ಸಂಶೋಧನೆ, ಸಮಗ್ರ ವಚನ ಸಾಹಿತ್ಯ ಸಂಸ್ಕರಣೆ ಮತ್ತು ಪ್ರಕಟಣೆ ಹೊಣೆ ನಿರ್ವಹಿಸಿದರು. ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ, ಜೀವನಚರಿತ್ರೆ, ವಿಚಾರ ಸಾಹಿತ್ಯ, ಪ್ರವಾಸಕಥನ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ 80 ಕೃತಿ ಪ್ರಕಟಿಸಿದ್ದಾರೆ. ಪ್ರಕಾಶಕರಾಗಿ ಅನೇಕ ವಿದ್ವಾಂಸರ ಕೃತಿಗಳಿಗೆ ಬೆಳಕು ನೀಡಿದ್ದಾರೆ. ಸೋವಿಯತ್‌ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

1944: ಪ್ರಸಿದ್ಧ ಶರೀರ ಶಾಸ್ತ್ರಜ್ಞ ರಾಲ್ಫ್ ಸಿನ್ಕರ್ನ್ಗೆಲ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದ ರೀಹೇನ್ ಎಂಬಲ್ಲಿ ಜನಿಸಿದರು. ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಇಮ್ಯುನಾಲಜಿ ಪ್ರಾಧ್ಯಾಪಕರಾದ ಇವರಿಗೆ, ದೇಹದಲ್ಲಿರುವ ಇಮ್ಯೂನ್ ವ್ಯವಸ್ಥೆ ಹೇಗೆ ದೋಷಯುಕ್ತ ಕಣಗಳನ್ನು ಪತ್ತೆಹಚ್ಚುತ್ತದೆ ಎಂಬ ಸಂಶೋಧನೆಗಾಗಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಸಂದಿದೆ.

1959: ಭಾರತಕ್ಕೆ ಮೊದಲ ಬಾರಿಗೆ ಒಂದು ದಿನದ ಕ್ರಿಕೆಟ್ ವಿಶ್ವಕಪ್ ಗೆಲುವು ತಂದು ಕೊಟ್ಟ, ವಿಶ್ವದ ಮಹಾನ್ ಸರ್ವಾಂಗೀಣ (ಆಲ್ರೌಂಡ್) ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ‘ಕಪಿಲ್ ದೇವ್ ರಾಮ್ ಲಾಲ್ ನಿಖಂಜ್’ ಅವರು ಚಂಡೀಗಢದಲ್ಲಿ ಜನಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿಕೆಟ್ ಮತ್ತು 5000ಕ್ಕೂ ಹೆಚ್ಚು ರನ್ ಮಿಶ್ರ ಸಾಧನೆಗಳನ್ನು ಮಾಡಿರುವ ಏಕೈಕ ಕ್ರಿಕೆಟ್ಟಿಗರಾಗಿರುವ ವಿಶ್ವದಾಖಲೆ ಇವರದ್ದಾಗಿದೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ವಿಸ್ಡೆನ್ ಶತಮಾನದ ಭಾರತೀಯ ಆಟಗಾರ, ಐ.ಸಿ.ಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಮುಂತಾದ ಅನೇಕ ಪ್ರತಿಷ್ಟಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಇವರಿಗೆ ಸಂದಿವೆ.

1967: ವಿಶ್ವಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕರಾದ ಎ. ಆರ್. ರಹಮಾನ್ ಅವರು ಚೆನ್ನೈನಲ್ಲಿ ಜನಿಸಿದರು. ಭಾರತದ ವಿವಿಧ ಭಾಷಾ ಚಲನಚಿತ್ರಗಳಲ್ಲಿ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳಲ್ಲೂ, ಆಲ್ಬಂಗಳಲ್ಲೂ ಸಂಗೀತ ನೀಡಿ ಆಸ್ಕರ್, ಗ್ರಾಮಿ, ಬಾಫ್ಟಾ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಮಹತ್ವದ ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನೂ, ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗಳನ್ನೂ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

1537: ರೋಮ್ನಲ್ಲಿರುವ ‘ಪಲಾಸ್ಸೋ ಮಸ್ಸಿಮೋ ಅಲ್ಲೇ ಕೊಲೋನ್ನೆ’ ಅಂತಹ ಶ್ರೇಷ್ಠ ಕಟ್ಟಡಗಳ ವಿನ್ಯಾಸಕ ಮತ್ತು ವರ್ಣ ಚಿತ್ರಕಾರ ಬಲ್ದಾಸ್ಸಾರೆ ಪೆರುಜ್ಜಿ ನಿಧನರಾದರು.

1646: ಜರ್ಮನಿಯ ಪ್ರಸಿದ್ಧ ಆಗಸ್ಬರ್ಗ್ ಟೌನ್ ಹಾಲ್ ಅಂತಹ ಕಟ್ಟಡದ ವಿನ್ಯಾಸಕ ಎಲಿಯಾಸ್ ಹಾಲ್ ನಿಧನರಾದರು.

1840: ಬ್ರಿಟಿಷ್ ಲೇಖಕಿ ಮತ್ತು ನಾಟಕಕಾರ್ತಿ ಫ್ರಾನ್ಸಿಸ್ ಬುರ್ನೀ ಇಂಗ್ಲೆಂಡಿನ ಬಾತ್ ಎಂಬಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ಅವರ ‘ಎವೆಲಿನ’, ‘ಸೆಸಿಲಿಯ’, ‘ಕ್ಯಾಮಿಲ್ಲ’, ‘ದಿ ವಾಂಡರರ್’ ಕಾದಂಬರಿಗಳು, ಹಲವರು ನಾಟಕಗಳು ಮತ್ತು ವಿವಿಧ ನಿಯತಕಾಲಿಕಗಳಲ್ಲಿ ಬರಹಗಳು ಇವೆಲ್ಲಾ, ಓದುಗರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.

1885: ‘ಆಧುನಿಕ ಹಿಂದಿ’ಯ ಜನಕ ಎಂದೇ ಪರಿಗಣಿತರಾಗಿದ್ದ ಭಾರತೀಯ ಕವಿ, ನಾಟಕಕಾರ, ವಿಮರ್ಶಕ, ಪತ್ರಕರ್ತ `ಭರತೇಂದು’ ಹರೀಶ್ ಚಂದ್ರ ಅವರು ತಮ್ಮ 35ನೇ ವಯಸ್ಸಿನಲ್ಲಿ ವಾರಣಾಸಿಯಲ್ಲಿ ನಿಧನರಾದರು.

1919: ಅಮೆರಿಕದ 26ನೇ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್, ತಮ್ಮ 60ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.

1942: ಬೆಲ್ಜಿಯನ್ ವ್ಯಾಪಾರಿ ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 3ನೇ ಅಧ್ಯಕ್ಷರಾಗಿದ್ದ ಹೆನ್ರಿ ಡಿ ಬೈಲೆಟ್ ಲಾತೂರ್, ಬೆಲ್ಜಿಯಂ ದೇಶದ ಬ್ರಸೆಲ್ಸ್ ಎಂಬಲ್ಲಿ ಜನಿಸಿದರು.

2007: ದಿಢೀರ್ ನೂಡಲ್ ಶೋಧಿಸಿದ ‘ನೂಡಲ್ ದೊರೆ’ ಜಪಾನಿನ ಮೊಮೊಫುಕು ಅಂಡೊ, ತಮ್ಮ 96ನೆಯ ವಯಸ್ಸಿನಲ್ಲಿ ಟೋಕಿಯೋದಲ್ಲಿ ನಿಧನರಾದರು. ದ್ವಿತೀಯ ಮಹಾಯುದ್ಧದ ನಂತರ ಉದ್ಭವಿಸಿದ ಆಹಾರ ಕೊರತೆಯ ದಿನಗಳಲ್ಲಿ, ಜನರು ಕಾಳಸಂತೆಯಲ್ಲಿ ರೇಮನ್ಸ್ ನೂಡಲ್ಸ್ ಖರೀದಿಗೆ ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ಕಂಡು ಅಂಡೊ ‘ದಿಢೀರ್ ನೂಡಲ್ ತಯಾರಿಕೆ’ ವಿಧಾನ ಕಂಡು ಹಿಡಿದರು. ಗಗನಯಾನಿಗಳಿಗೆಂದೇ ವಿಶೇಷವಾಗಿ ಸಿದ್ಧ ಪಡಿಸಿದ್ದ ಕಪ್ ನೂಡಲ್ಸ್ ಪ್ರಚಾರ ಉತ್ತೇಜಿಸಲು 2005ರಲ್ಲಿ ಅವರು ಟೆಲಿವಿಷನ್ ಕಾರ್ಯಕ್ರಮದಲ್ಲೂ ಪಾಲ್ಗೊಂಡ್ದಿದರು.

2008: ಕಾಲಿಲ್ಲದ ಲಕ್ಷಾಂತರ ಮಂದಿಗೆ ಕೃತಕ ಕಾಲಿನ ಭಾಗ್ಯ ಒದಗಲು ಕಾರಣರಾದ ಜೈಪುರ ಕೃತಕ ಕಾಲಿನ ಸಂಶೋಧಕ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಪ್ರಮೋದ್ ಕರಣ್ ಸೇಥಿ ನಿಧನರಾದರು. ಮ್ಯಾಗ್ಸೆಸೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ. ಸೇಥಿ 1969ರಲ್ಲಿ ಜೈಪುರ ಕೃತಕ ಕಾಲು ಸಂಶೋಧಿಸಿದ್ದರು.

2017: ಹಿರಿಯ ನಟ ಓಂಪುರಿ ನಿಧನ: ಕಲಾತ್ಮಕ ಚಿತ್ರಗಳಲ್ಲಿ ತಮ್ಮ ವೈಶಿಷ್ಟ್ಯಪೂರ್ಣ ಅಭಿನಯದಿಂದ ಜಗತ್ತಿನ ರಸಿಕರ ಮನಗೆದ್ದ ಪ್ರತಿಭಾವಂತ ನಟ.

Categories
e-ದಿನ

ಜನವರಿ-05

ಪ್ರಮುಖ ದಿನಾಚರಣೆಗಳು:

ಹರ್ಬಿನ್ ಅಂತರರಾಷ್ಟ್ರೀಯ ಮಂಜುಗಡ್ಡೆ ಮತ್ತು ಮಂಜಿನ ಶಿಲ್ಪಗಳ ಹಬ್ಬ:

ಈ ಹಬ್ಬವು ಚೀನಾದ ಹರ್ಬಿನ್ ಎಂಬಲ್ಲಿ ಚಳಿಗಾಲದ ಸಮಯದಲ್ಲಿ ಆಚರಿಸುವ ಹಬ್ಬವಾಗಿ ಆರಂಭಗೊಂಡಿತು. ಹಿಮ ಪ್ರದೇಶಗಳಲ್ಲಿ ಮಂಜುಗಡ್ಡೆ ಮತ್ತು ಗಟ್ಟಿಯಾದ ಹಿಮ(ಸ್ನೋ)ದಿಂದ ಶಿಲ್ಪಗಳನ್ನು ಮಾಡಿ ಕಲಾತ್ಮಕವಾಗಿ ಆಚರಿಸುವ ಈ ಹಬ್ಬವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಖ್ಯಾತಿಗೊಂಡಿದ್ದು, ವಿಶ್ವದ ವಿವಿಧ ಚಳಿ ಪ್ರದೇಶಗಳ ಜನರೂ ಈ ಆಚರಣೆಯನ್ನು ಸಂಭ್ರಮಿಸತೊಡಗಿದ್ದಾರೆ.

ಜೋಮಾ ಶಿಂಜಿ:

ಜಪಾನಿನ ಕಾಮಕುರ ಪ್ರದೇಶಗಳಲ್ಲಿನ ಪ್ರಸಿದ್ಧ ಕಾಮಕುರ ಜನಪದೀಯ ಹಬ್ಬಗಳಲ್ಲೊಂದು. ದುಷ್ಟಶಕ್ತಿಗಳ ನಿಗ್ರಹದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ ಬಿಲ್ಲುಗಾರರು ಕೃತಕ ದುಷ್ಟಶಕ್ತಿಗಳ ಸಂಕೇತಗಳ ಮೇಲೆ ಬಾಣ ಬಿಡುತ್ತಾರೆ.

ಅಮೆರಿಕದ ರಾಷ್ಟ್ರೀಯ ಪಕ್ಷಿ ದಿನ:

ಈ ದಿನದಂದು ಅಮೆರಿಕದ ಪಕ್ಷಿ ಪ್ರೇಮಿಗಳು ಪಕ್ಷಿ ವೀಕ್ಷಣೆ, ಪಕ್ಷಿಗಳ ಕುರಿತ ಜ್ಞಾನಸಂಪಾದನೆ, ಪಕ್ಷಿಗಳ ಪ್ರೇಮಭಿವ್ಯಕ್ತಿಯ ಆಟಗಳು, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಿಕೆ ಮುಂತಾದ ಆಚರಣೆಗಳ ಮೂಲಕ ಸಂಭ್ರಮಿಸುತ್ತಾರೆ.

ಪ್ರಮುಖಘಟನಾವಳಿಗಳು:

1066: ಇಂಗ್ಲೆಂಡಿನ ಆಂಗ್ಲೋ ಸಾಕ್ಸರ್ ದೊರೆಗಳಲ್ಲಿ ಕೊನೆಯವನಾದ ಎಡ್ವರ್ಡ್ ದಿ ಕನ್ಫೆಸರ್ ಸಂತಾನವಿಲ್ಲದೆ ನಿಧನನಾದ. ಇದು ಫ್ರಾನ್ಸಿನ ಮೂಲದ ನಾರ್ಮನರು ಇಂಗ್ಲೆಂಡನ್ನು ಆಕ್ರಮಿಸುವುದಕ್ಕೆ ಎಡೆ ಮಾಡಿಕೊಟ್ಟಿತು.

1914: ಫೋರ್ಡ್ ಮೋಟಾರ್ ಸಂಸ್ಥೆಯು ಮೊಟ್ಟಮೊದಲ ಬಾರಿಗೆ 8 ಗಂಟೆಗಳ ಕಾರ್ಮಿಕ ದಿನ ಮತ್ತು ಕನಿಷ್ಠ ವೇತನ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದ ಕಾರ್ಮಿಕನಿಗೆ ಅನಿರ್ದಿಷ್ಟ ಅವಧಿಗಳ ಕೆಲಸ ತಪ್ಪಿತಲ್ಲದೆ, ದಿನಕ್ಕೆ ಕಡೇಪಕ್ಷ 5 ಡಾಲರ್ ಸಂಭಳ ಖಚಿತವಾಗಿ ದೊರೆಯುವಂತಾಯ್ತು.

1919: ‘ನಾಝಿ’ ಪಕ್ಷಕ್ಕೆ ಪ್ರಾರಂಭ ಒದಗಿಸಿದ ಜರ್ಮನ್ ವರ್ಕರ್ಸ್ ಪಾರ್ಟಿ ಸ್ಥಾಪನೆಗೊಂಡಿತು. ಆಂಟನ್ ಡ್ರೆಕ್ಸಲರ್ ಎಂಬಾತ ಇದನ್ನು ಸ್ಥಾಪಿಸಿದ. ಇದರ ಪ್ರಾರಂಭಿಕ ವರ್ಷದಲ್ಲಿ ಒಂದು ಸಭೆಗೆ ಹಾಜರಾಗಿದ್ದ ಅಡಾಲ್ಫ್ ಹಿಟ್ಲರ್ ತನ್ನ ವಾಕ್ಚಾತುರ್ಯದಿಂದ ಈ ಸಂಘಟನೆಯ ಮೇಲೆ ಹಿಡಿತ ಸಾಧಿಸಿದ. 1920­-21ರ ಅವಧಿಯಲ್ಲಿ ಪಕ್ಷದ ಎಲ್ಲ ನಾಯಕರನ್ನೂ ಉಚ್ಛಾಟಿಸಿದ ಹಿಟ್ಲರ್ ಇದಕ್ಕೆ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಎಂಬ ಹೊಸ ಹೆಸರನ್ನಿಟ್ಟ.

1925: ನೆಲ್ಲಿ ಟಯ್ಲೋ ರಾಸ್ ಅವರು ಅಮೆರಿಕದಲ್ಲಿನ ಪ್ರಥಮ ಮಹಿಳಾ ಗೌರ್ನರ್ ಎನಿಸಿದರು.

1933: ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣ ಆರಂಭಗೊಂಡಿತು. ಈ ಸೇತುವೆ 20ನೇ ಶತಮಾನದ ಎಂಜಿನಿಯರಿಂಗ್‌ ಅದ್ಭುತ ಎಂದೇ ಬಣ್ಣಿತಗೊಂಡಿದೆ. ಜಗತ್ತಿನ ಮೊದಲ ತೂಗು ಸೇತುವೆ ಎಂಬ ಖ್ಯಾತಿ ಗೋಲ್ಡನ್‌ ಗೇಟ್‌ ಬ್ರಿಡ್ಜ್ 1937ರಿಂದ ಸಂಚಾರಕ್ಕೆ ತೆರೆದಿದೆ. 1.7 ಮೈಲಿ ಉದ್ದದ ಈ ಸೇತುವೆ ಸ್ಯಾನ್‌ಫ್ರಾನ್ಸಿಸ್ಕೋ ಉತ್ತರ ತುದಿಯನ್ನು ಮರೀನ್‌ ಕೌಂಟಿಯ ಸಸಲಿಟೋಗೆ ಸೇರಿಸುತ್ತದೆ. ಸ್ಯಾನ್‌ಫ್ರಾಸ್ಸಿಸ್ಕೊ ಕೊಲ್ಲಿಯ ಮೇಲಿರುವ ಈ ತೂಗು ಸೇತುವೆ ಎರಡು ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಗೋಪುರದ ತುದಿಯಿಂದ ಇಳಿಬಿಡಲಾದ ಎರಡು ಉಕ್ಕಿನ ಕೇಬಲ್‌ಗ‌ಳು ಸೇತುವೆಯ ಭಾರವನ್ನು ತಡೆದುಕೊಳ್ಳುತ್ತದೆ. ಉಕ್ಕಿನ ಕೇಬಲ್‌ಗ‌ಳ ಒಳಗೆ ಸುಮಾರು 88 ಸಾವಿರ ಮೈಲಿ ಉದ್ದದ ವೈರ್‌ಗಳನ್ನು ಬಳಸಲಾಗಿದೆ. ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಗೋಪುರಗಳು ನೀರಿನಿಂದ 726 ಅಡಿ ಎತ್ತರವಾಗಿವೆ. ಈ ಎರಡು ಗೋಪುರಗಳ ಮಧ್ಯೆ 4200 ಅಡಿ ಅಂತರವಿದೆ. ಈ ಸೇತುವೆಯ ನಿರ್ಮಾಣಕ್ಕೆ 88 ಸಾವಿರ ಟನ್‌ ಉಕ್ಕು ಬಳಕೆಯಾಗಿದ್ದು ಸಿಮೆಂಟ್‌ ಕಾಂಕ್ರೀಟನ್ನೂ ಬಳಸಲಾಗಿದೆ. ಸೇತುವೆ ಒಟ್ಟು 887,000 ಟನ್‌ ಭಾರವಿದೆ. ಜೋಸೆಫ್ ಬೈರ್ಮನ್‌ ಸ್ಟ್ರಾಸ್‌ ಎಂಬಾತ ಸೇತುವೆ ನಿರ್ಮಾಣದ ಮುಖ್ಯ ಎಂಜಿನಿಯರ್‌ ಆಗಿದ್ದರು.

1950: ಸ್ವರ್ಡೋವಿಸ್ಕ್ ವಿಮಾನ ದುರಂತದಲ್ಲಿ ಸೋವಿಯತ್ ಒಕ್ಕೂಟದ ರಾಷ್ಟ್ರೀಯ ಐಸ್ ಹಾಕಿ ತಂಡದ ಎಲ್ಲ ಹನ್ನೊಂದು ಆಟಗಾರರೂ ಒಳಗೊಂಡಂತೆ 19 ಜನ ನಿಧನರಾದರು.

1970: ಚೀನಾದ ಯುನ್ನಾನ್ ಪ್ರಾಂತ್ಯದ ಟೊಂಗೈನಲ್ಲಿ ಉಂಟಾದ 7.1 ಪ್ರಮಾಣದ ಭೂಕಂಪದಲ್ಲಿ 10,000 ದಿಂದ 15,621 ಜನರು ಮೃತರಾಗಿ 26,783 ಜನರು ಗಾಯಗೊಂಡರು.

1972: ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಗಗನ ನೌಕೆಗಳ ನಿರ್ಮಾಣಕ್ಕೆ ಆದೇಶ ಹೊರಡಿಸಿದರು.

1993: ಕೆನಡಾದ ಎಂ.ವಿ. ಬ್ರಯೇರ್ ಎಂಬ ತೈಲ ನೌಕೆಯು ತನ್ನ ಚಾಲನಾ ಶಕ್ತಿಯನ್ನು ಕಳೆದುಕೊಂಡು ಸ್ಕಾಟ್ಲೆಂಡಿನ ಶೆಟ್ಲೆಂಡ್ ದ್ವೀಪದಲ್ಲಿ ಕೆಲ ಸಮಯ ಗಾಳಿಯ ರಭಸಕ್ಕೆ ತೇಲುತ್ತಿದ್ದು, ನಂತರದಲ್ಲಿ ತಾನು ಹೊತ್ತಿದ್ದ 85000 ಟನ್ ತೈಲ ಸೋರಿಕೆಯಾಗಿ ಬೆಂಕಿಗೆ ಸ್ಫೋಟಗೊಂಡಿತು.

2005: ಸೌರವ್ಯೂಹದಲ್ಲಿನ ಎರಡನೇ ದೊಡ್ಡ ಕುಬ್ಜ ಗ್ರಹವಾದ ಈರಿಸ್ ಅನ್ನು ಮೈಖೇಲ್ ಇ. ಬ್ರೌನ್, ಛಾಡ್ ಟ್ರುಜಿಲ್ಲೋ ಮತ್ತು ಡೇವಿಡ್ ಎಲ್. ರಬಿನೌವಿಟ್ಜ್ ಒಳಗೊಂಡ ತಂಡವು ಪತ್ತೆಹಚ್ಚಿತು. ಈ ವಿಜ್ಞಾನಿಗಳು ಅಕ್ಟೋಬರ್ 21, 2003ರಂದು ಕ್ಯಾಲಿಫೋರ್ನಿಯಾದ ಪಲೋಮಾರ್ ವೀಕ್ಷಣಾಲಯದಲ್ಲಿ ತೆಗೆದ ಚಿತ್ರಗಳನ್ನು ಉಪಯೋಗಿಸಿ ಇದನ್ನು ಸಾಧಿಸಿದರು.

2014: ಸ್ವದೇಶಿ ನಿರ್ಮಿತ ಭಾರತದ ಪ್ರಥಮ ಕ್ರಯೋಜೆನಿಕ್ ಎಂಜಿನ್ ಚಾಲಿತ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಜಿ ಸ್ಯಾಟ್ 14’ ಸಂವಹನ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯಲ್ಲಿ ಮಹತ್ವದ ಮೈಲುಗಲ್ಲೆನಿಸಿತು.

ಪ್ರಮುಖಜನನ/ಮರಣ:

1846: ಜರ್ಮನಿಯ ಪ್ರಸಿದ್ಧ ನೊಬೆಲ್ ಪ್ರಶಸ್ತಿ ವಿಜೇತ ತತ್ವಜ್ಞಾನಿ ಮತ್ತು ಲೇಖಕ ರುಡಾಲ್ಫ್ ಕ್ರಿಸ್ತೋಫ್ ಯೂಕೆನ್ ಅವರು ಜರ್ಮನಿಯ ಹ್ಯಾನೋವರ್ ಪ್ರದೇಶದ ಔರಿಚ್ ಎಂಬಲ್ಲಿ ಜನಿಸಿದರು.

1855: ಜಗತ್ಪ್ರಸಿದ್ಧ ಗಿಲ್ಲೆಟ್ ಕಂಪೆನಿಯನ್ನು ಹುಟ್ಟುಹಾಕಿದ ಅಮೆರಿಕದ ವ್ಯಾಪಾರಿ ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರು ವಿಸ್ಕಾನ್ಸಿನ್ ಪ್ರದೇಶದ ಫಾಂಡ್ ಡು ಲ್ಯಾಕ್ ಎಂಬಲ್ಲಿ ಜನಿಸಿದರು. ರೇಜರ್ ಮತ್ತು ಬ್ಲೇಡ್ ಬ್ಯುಸಿನೆಸ್ ಮಾಡೆಲ್ ಅನ್ನು ಸಂಶೋಧಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕಡಿಮೆ ತೂಕವುಳ್ಳ ಉಪಯೋಗಿಸಿ ಎಸೆಯಬಹುದಾದ ರೇಜರುಗಳನ್ನು ಗಿಲೆಟ್ ಮಾರುಕಟ್ಟೆಗೆ ತಂದು ಯಶಸ್ವಿಯಾದರು. 1932, ಜುಲೈ 9ರಂದು ನಿಧನರಾದರು.

1869: ‘ಗಳಗನಾಥ’ ಎಂಬ ಹೆಸರಿನಿಂದ ಪ್ರಖ್ಯಾತರಾದ ವೆಂಕಟೇಶ ತಿರಕೋ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ಜನಿಸಿದರು. ಶಿಕ್ಷಕರಾಗಿ ಎರಡು ದಶಕಗಳು ಕೆಲಸ ಮಾಡಿ, ಪ್ರಸಿದ್ಧ ‘ಸದ್ಭೋಧ ಪತ್ರಿಕೆ’ ಎಂಬ ಮಾಸಪತ್ರಿಕೆ ಪ್ರಾರಂಭಿಸಿದರು. ಒಂದು ಶಾಲೆಯನ್ನೂ ನಿರ್ಮಿಸಿದ್ದರು. 1942, ಏಪ್ರಿಲ್ 22ರಂದು ನಿಧನರಾದ ಗಳಗನಾಥರು 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು 8 ಪ್ರಬಂಧಗಳನ್ನು ರಚಿಸಿದ್ದಾರೆ. ಆ ಕಾಲದ ಬಹುತೇಕ ಗಣ್ಯ ಬರಹಗಾರರು ಅವರನ್ನು ಗುರುಗಳೆಂಬ ಪೂಜ್ಯಭಾವದಿಂದ ಕಾಣುತ್ತಿದ್ದರು.

1893: ‘ಆಟೋಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪ್ರಸಿದ್ಧ ಗ್ರಂಥರಚನೆಕಾರ, ಪಾಶ್ಚಿಮಾತ್ಯ ದೇಶಿರಿಗರಲ್ಲಿ ಧ್ಯಾನ ಮತ್ತು ಕ್ರಿಯಾ ಯೋಗವನ್ನು ಪ್ರಸಿದ್ಧಿ ಪಡಿಸಿದ ಪರಮಹಂಸ ಯೋಗಾನಂದ ಅವರು ಉತ್ತರಪ್ರದೇಶದ ಗೋರಕಪುರದಲ್ಲಿ ಜನಿಸಿದರು. ವಿಶ್ವದ ವಿವಿದೆಡೆಗಳಲ್ಲಿ ಧ್ಯಾನ ಬೋಧನಾ ಕೇಂದ್ರಗಳನ್ನು ಸ್ಥಾಪಿಸಿ ಬಹಳಷ್ಟು ಶಿಷ್ಯರನ್ನು ಹೊಂದಿದ್ದ ಅವರು 1952, ಮಾರ್ಚ್ 7ರಂದು ನಿಧನರಾದರು.

1895: ಪ್ರಸಿದ್ಧ ವಾಹನ ತಂತ್ರಜ್ಞ ಆಲ್ಬರ್ಟ್ ಮಸ್ಸಿಮಿನೋ ಅವರು ಇಟಲಿಯ ಟ್ಯುರಿನ್ ಎಂಬಲ್ಲಿ ಜನಿಸಿದರು. ಫಿಯೆಟ್, ಆಲ್ಫಾ ರೋಮಿಯೋ, ಸ್ಟೆಬಿಲಿಮೆಂಟಿ ಫೆರಿನೊ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ ಅವರು ಅವರು ಸ್ಕುಡೆರಿಯಾ ಫೆರಾರಿ, ಮಸೆರಾಟಿ ಮುಂತಾದ ಸಂಸ್ಥೆಗಳ ಪ್ರಸಿದ್ಧ ಕಾರುಗಳ ನಿರ್ಮಾಣದಲ್ಲಿ ಪ್ರಮುಖ ತಂತ್ರಜ್ಞರಾಗಿದ್ದರು. 1975ರ ವರ್ಷದಲ್ಲಿ ನಿಧನರಾದರು.

1917 : ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ ಎಂದು ಪ್ರಸಿದ್ಧರಾದ ಎಂ.ಕೆ. ಇಂದಿರಾ ಅವರು ತೀರ್ಥಹಳ್ಳಿಯಲ್ಲಿ ಜನಿಸಿದರು. ಕೇವಲ 2ನೇ ತರಗತಿ ಓದಿದರೂ, 48 ಕಾದಂಬರಿಗಳನ್ನೂ, 15 ಸಣ್ಣಕಥಾ ಸಂಕಲನಗಳನ್ನೂ ಮತ್ತು ಆತ್ಮಚರಿತ್ರೆಯನ್ನೂ ಬರೆದ ಅವರ ‘ತುಂಗಭದ್ರ’, ‘ಸದಾನಂದ’, ‘ನವರತ್ನ’, ‘ಫಣಿಯಮ್ಮ’ – ಈ ನಾಲ್ಕು ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು. ಚಲನಚಿತ್ರವಾದ ‘ಫಣಿಯಮ್ಮ’ ರಾಷ್ಟ್ರ ಪ್ರಶಸ್ತಿ ಗಳಿಸಿತು. ‘ಗೆಜ್ಜೆಪೂಜೆ’ ಮತ್ತೊಂದು ಮಹತ್ವದ ಚಿತ್ರವಾಯಿತು. 1994, ಮಾರ್ಚ್ 15ರಂದು ನಿಧನರಾದರು. ತೇಜಸ್ವಿ ನಿರಂಜನ ಅವರು ಮೂಡಿಸಿದ ‘ಫಣಿಯಮ್ಮ’ ಕೃತಿಯ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು.

1941: ಟೈಗರ್ ಪಟೌಡಿ ಎಂದೇ ಪ್ರಸಿದ್ಧರಾದ ಭಾರತೀಯ ಕ್ರಿಕೆಟ್ ಆಟಗಾರ ಮನ್ಸೂರ್ ಆಲಿ ಖಾನ್ ಪಟೌಡಿ ಭೋಪಾಲ್ನಲ್ಲಿ ಜನಿಸಿದರು. 21ನೇ ವಯಸ್ಸಿನಲ್ಲೇ ನಾಯಕತ್ವ ವಹಿಸಿ, ಭಾರತೀಯ ಕ್ರಿಕೆಟ್ಟಿನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ದಾಖಲೆ ಅವರದ್ದಾಗಿದೆ. ನಾಯಕತ್ವ, ಬ್ಯಾಟಿಂಗ್ ಮತ್ತು ಕ್ಷೇತ್ರರಕ್ಷಣೆಗಳಲ್ಲಿ ಅವರು ದಕ್ಷರೆನಿಸಿದ್ದ ಅವರು 2011, ಸೆಪ್ಟೆಂಬರ್ 22 ರಂದು ನಿಧನರಾದರು. ರಾಜ ಮನೆತನಕ್ಕೆ ಸೇರಿದ್ದ ಇವರು 1952-71 ಅವಧಿಯಲ್ಲಿ ‘ನವಾಬ್ ಆಫ್ ಪಟೌಡಿ’ ಎನಿಸಿದ್ದರು.

1952:  ಭಾರತ ಮತ್ತು ಇಂಗ್ಲೆಂಡ್ ಎರಡೂ ಕ್ರಿಕೆಟ್ ತಂಡಗಳ ಪರವಾಗಿ ಆಡಿದ ಇಫ್ತಿಕರ್ ಆಲಿ ಪಟೌಡಿ ಅವರು ನವದೆಹಲಿಯಲ್ಲಿ ನಿಧನರಾದರು. ಪಟೌಡಿ ಮನೆತನದ 8ನೇ ನವಾಬರಾಗಿದ್ದ ಇವರು 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿದ್ದರು.

2006: ಟಿ.ಕೆ. ರಾವ್ ಎಂದೇ ಪತ್ರಿಕೆ ಹಾಗೂ ಕಲಾ ವಲಯದಲ್ಲಿ ಪರಿಚಿತರಾಗಿದ್ದ ಚಿತ್ರ ಕಲಾವಿದ ತಾಡ ಕೃಷ್ಣರಾವ್ ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ಪ್ರಭ, ಉದಯವಾಣಿ, ತರಂಗ, ತುಷಾರ, ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ, ಕಾಮಧೇನು ಮುಂತಾದ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದಿದ್ದ ರಾವ್ ಬರಹಗಾರ ಮತ್ತು ರಂಗನಟರಾಗಿಯೂ ಸೇವೆ ಸಲ್ಲಿಸಿದ್ದರು. 1999ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ವಜ್ರಮುನಿ ಬೆಂಗಳೂರಿನಲ್ಲಿ ನಿಧನರಾದರು. ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ಅವರು ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದ ವಜ್ರಮುನಿ ಅವರಿಗೆ ಉತ್ತಮ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮತ್ತು ಉತ್ತಮ ಚಲನಚಿತ್ರ ಸಾಧಕರಿಗೆ ನೀಡುಲಾಗುತ್ತಿರುವ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಸಂದಿದ್ದವು.

2007: ತೆಹ್ರಿ ಅಧಿಪತ್ಯದ ಆರನೆಯ ಹಾಗೂ ಕೊನೆಯ ದೊರೆ ಮನವೇಂದ್ರ ಶಹಾ ನವದೆಹಲಿಯಲ್ಲಿ ನಿಧನರಾದರು. ಬದರಿನಾಥ ದೇವಾಲಯದ ಸಂರಕಕ್ಷಿಸಿದ್ದಕ್ಕಾಗಿ ‘ಬೊಳಂದ ಬದ್ರಿ’ ಎಂದೇ ಜನಪ್ರಿಯರಾಗಿದ್ದ ಶಹಾ ಅವರು ಗಢವಾಲ್ ಕ್ಷೇತ್ರದಿಂದ ಲೋಕಸಭೆಗೆ ಎಂಟು ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. 1948ರಲ್ಲಿ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರು ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕುವಂತೆ ಕರೆ ಕಳುಹಿಸಿದಾಗ ವಿಲೀನ ಒಪ್ಪಂದಕ್ಕೆ ವಿಳಂಬವಿಲ್ಲದೆ ಸಹಿ ಹಾಕಿದ ಭಾರತೀಯ ದೊರೆಗಳಲ್ಲಿ ಶಹಾ ಮೊದಲ ಸಾಲಿನವರಾಗಿದ್ದರು.

Categories
e-ದಿನ

ಜನವರಿ-04

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 46: ಜೂಲಿಯಸ್‌ ಸೀಸರನ ವಿಜಯ :ಜೂಲಿಯಸ್ ಸೀಸರನು ಟೈಟಸ್ ಲೇಬಿನಸನನ್ನು ರುಸ್ಪಿನ್  ಕದನದಲ್ಲಿ  ಸೋಲಿಸಿದನು.

1847: ಸಾಮ್ಯುಯಲ್ ಕೊಲ್ಟನು ತನ್ನ ಪ್ರಥಮ ರಿವಾಲ್ವರ್ ಪಿಸ್ತೂಲನ್ನು ಅಮೆರಿಕ ಸರ್ಕಾರಕ್ಕೆ  ಮಾರಾಟ ಮಾಡಿದನು.

1853: ಅಪಹರಣಕ್ಕೊಳಗಾಗಿ ಜೀತದಾಳಾಗಿ ಮಾರಾಟಗೊಂಡಿದ್ದ ಸೋಲೋಮನ್ ನಾರ್ಥಪ್ ತನ್ನ ಸ್ವಾತಂತ್ರ್ಯವನ್ನು ಮರಳಿ ಗಳಿಸಿಕೊಂಡನು.  ಮುಂದೆ ಆತನ ನಿಜಜೀವನ ಸ್ಮೃತಿಯಾದ  ‘ಟ್ವೆಲ್ವ್ ಇಯರ್ಸ್ ಎ ಸ್ಲೇವ್’ ಬಹು  ಮಾರಾಟಗೊಂಡ ಕೃತಿ ಎನಿಸಿತು.

1865: ಅಂತರರಾಷ್ಟ್ರೀಯ ಪ್ರಸಿದ್ಧ  ಷೇರು ವಿನಿಮಯ ಕೇಂದ್ರವಾದ ‘ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೆಂಜ್’ ತನ್ನ ಪ್ರಥಮ ಸ್ವಂತ ಕೇಂದ್ರ ಕಚೇರಿಯನ್ನು ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟ್ ಬಳಿಯಲ್ಲಿ ಸ್ಥಾಪಿಸಿತು.

1903: ಕೋನಿ ಐಲ್ಯಾಂಡಿನ ಲೂನಾ ಪಾರ್ಕ್ ಮಾಲೀಕರು ಟಾಪ್ಸಿ  ಎಂಬ ಆನೆಯನ್ನು ವಿಷವುಣಿಸಿ  ವಿದ್ಯುತ್  ಸ್ಪರ್ಶಕ್ಕೀಡು ಮಾಡಿ ಕೊಂದುಹಾಕಿದರು.  ಎಡಿಸನ್ ಚಿತ್ರ ಸಂಸ್ಥೆಯು ‘ಎಲೆಕ್ಟ್ರೋಕ್ಯೂಟಿಂಗ್ ಆಫ್ ಎಲಿಫೆಂಟ್’ ಎಂಬ ಹೆಸರಿನಲ್ಲಿ ಟಾಪ್ಸಿಯ ಕೊಲ್ಲುವಿಕೆಯನ್ನು ಚಿತ್ರೀಕರಿಸಿತು.

1912: ಬ್ರಿಟಿಷ್ ಸಾಮ್ರಾಜ್ಯ ಆಳ್ವಿಕೆಯ ಪ್ರದೇಶಗಳಲ್ಲಿ ರಾಯಲ್ ಚಾರ್ಟರ್ ಆದೇಶದ ಮೂಲಕ ‘ದಿ ಸ್ಕೌಟ್ ಅಸೋಸಿಯೇಷನ್’ ಸಂಘಟನೆಗೆ ಚಾಲನೆ ನೀಡಲಾಯಿತು.

1948: ಬರ್ಮಾ (ಈಗಿನ ಮಯನ್ಮಾರ್) ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗಳಿಸಿಕೊಂಡಿತು.

1958: ಕೆಲಸ ಮುಗಿಸಿ ಧರೆಗೆ ಬಿದ್ದ ಸ್ಪುಟ್ನಿಕ್: ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಕೃತಕ ಉಪಗ್ರಹವಾದ ರಷ್ಯದ ‘ಸ್ಪುಟ್ನಿಕ್’  92 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಉರಿದು ಬಿತ್ತು.

1959: ‘ಲೂನಾ 1’ ಚಂದ್ರನ ಆವರಣವನ್ನು ತಲುಪಿದ ಮೊದಲ ಗಗನನೌಕೆ ಎನಿಸಿತು.

1972: ರೋಸ್ ಹೀಲ್ಬ್ರಾನ್ ಅವರು ಇಂಗ್ಲೆಂಡ್ ಮತ್ತು ವೇಲ್ಸಿನ  ಕೇಂದ್ರ ಕ್ರಿಮಿನಲ್ ನ್ಯಾಯಾಲಯವಾದ ‘ಓಲ್ಡ್ ಬೆಯ್ಲಿ’ಯಲ್ಲಿ ಆಸೀನರಾದ ಪ್ರಥಮ ಮಹಿಳಾ ನ್ಯಾಯಾಧೀಶರಾದರು.

2001: ಭಾರತದ ಹಗುರ ಯುದ್ಧ ವಿಮಾನವು (ಟಿ.ಡಿ 1) ಬೆಂಗಳೂರಿನಲ್ಲಿ ತನ್ನ ಚೊಚ್ಚಲ ಹಾರಾಟ ನಡೆಸಿತು. ಇದರೊಂದಿಗೆ ಸ್ವಂತ ಸೂಪರ್ ಸಾನಿಕ್ ವಿಮಾನವನ್ನು ವಿನ್ಯಾಸಗೊಳಿಸಿದ ವಿಶೇಷ ರಾಷ್ಟ್ರಗಳ ಕೂಟಕ್ಕೆ ಭಾರತವೂ ಸೇರ್ಪಡೆಗೊಂಡಿತು.

2004: ‘ನಾಸಾ’ದ ಗಗನನೌಕೆ ‘ಸ್ಪಿರಿಟ್’ ಯಶಸ್ವಿಯಾಗಿ ಮಂಗಳಗ್ರಹದ ಮೇಲಿಳಿಯಿತು. 2009ರಲ್ಲಿ ಈ ನೌಕೆ ಮಂಗಳನ ಸಡಿಲ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿತಾದರೂ 2010 ಮಾರ್ಚ್ ವರೆಗೆ ಹಲವು ಮಹತ್ವಪೂರ್ಣ ದಾಖಲೆಗಳನ್ನು ಕಳುಹಿಸಿಕೊಟ್ಟಿತ್ತು. ತಾನು ಮೊದಲು ಇಳಿದತಾಣದಿಂದ  8 ಕಿಮೀ ಪ್ರಯಾಣಿಸಿದ್ದ ಸ್ಪಿರಿಟ್ ಆ ಪ್ರದೇಶದ ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟಿತ್ತು.

2007: ಕಾರವಾರದ ಐ ಎನ್ ಎಸ್ ನೌಕಾನೆಲೆಯಲ್ಲಿ ‘ಐ ಎನ್ ಎಸ್ ಶಾರ್ದೂಲ’ ಎಂಬ ಅಪ್ಪಟ ಭಾರತೀಯ ತಾಂತ್ರಿಕತೆಯಲ್ಲಿ ನಿರ್ಮಾಣವಾದ   ಪ್ರಥಮ ಹಡಗನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು  ರಾಷ್ಟ್ರಕ್ಕೆ ಸಮರ್ಪಿಸಿದರು. ಯುದ್ಧ ಸಮಯ ಮಾತ್ರವೇ ಅಲ್ಲದೆ, ಚಂಡಮಾರುತ, ಸುನಾಮಿ, ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಜೀವಗಳ ರಕ್ಷಣೆಗಾಗಿ ಬಳಸಬಹುದಾದಂತಹ  ಸಾಮರ್ಥ್ಯವನ್ನು ಈ ನೌಕೆ  ಮೈಗೂಡಿಸಿಕೊಂಡಿದೆ.

2008: ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಸ್ವಿಟ್ಜರ್ಲೆಂಡಿನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರ ಮೇಲೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಎರಡು ವರ್ಷಗಳ ನಿಷೇಧ ಹೇರಿತು. ಅವರು  2007  ವರ್ಷದ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ ನಿಷೇಧಿತ ಕೊಕೇನ್ ಸೇವಿಸಿ ಸಿಕ್ಕಿ ಬಿದ್ದಿದ್ದರು.  ಮುಂದೆ 2013ರ ವರ್ಷದಲ್ಲಿ ಪುನಃ ಟೆನಿಸ್ ಅಂಕಣಕ್ಕೆ ಹಿಂದಿರುಗಿದ ಹಿಂಗಿಸ್ ಅವರು ಭಾರತದ ಸಾನಿಯಾ ಮಿರ್ಜಾ ಅವರ ಜೊತೆಗೂಡಿ 3  ಗ್ರಾಂಡ್ ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನೂ,   ಲಿಯಾಂಡರ್ ಪೇಸ್ ಅವರ ಜೊತೆಗೂಡಿ ನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನೂ ಒಳಗೊಂಡ ಹಲವಾರು ಮಹತ್ವದ ಸಾಧನೆಗಳನ್ನೂ ಮಾಡುತ್ತಾ ಮುಂದುವರೆದಿದ್ದಾರೆ

2008: ಖ್ಯಾತ ಪರಿಸರವಾದಿ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಉಲ್ಲಾಸ್ ಕಾರಂತ್ ಅವರಿಗೆ  ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ‘ಫೆಲೊ’ ಗೌರವ ಸಂದಿತು.

2008: 2007-08ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ 7895 ಹುದ್ದೆಗಳ ಪೈಕಿ ಎಲ್ಲ ಜಿಲ್ಲೆಗಳಲ್ಲಿ ಶೇ1 ಮೀಸಲಾತಿಯಂತೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. 2007ರ ಜುಲೈ 30ರ ಅಧಿಸೂಚನೆಯಂತೆ ಅಂಗವಿಕಲ ಅಧಿನಿಯಮದ ಪ್ರಕಾರ ಶಿಕ್ಷಕರ ಹುದ್ದೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಬೇಕು. ಈ ಮೀಸಲಾತಿಯಲ್ಲಿ ಶೇ 1ರಷ್ಟನ್ನು ಅಂಧರಿಗೆ ಇಡಬೇಕು  ಎಂಬ ನಿಯಮವಿದೆ.

ಪ್ರಮುಖಜನನ/ಮರಣ:

1642: ಭೌತ ವಿಜ್ಞಾನಿ ಐಸಾಕ್‌ ನ್ಯೂಟನ್‌ ಜನನ

1809: ಅಂಧರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದ ‘ಬ್ರೈಲ್’ ವ್ಯವಸ್ಥೆಯ  ಹರಿಕಾರ, ಫ್ರೆಂಚ್ ಶಿಕ್ಷಣತಜ್ಞ ಲೂಯಿ ಬ್ರೈಲ್ ಅವರು ಜನವರಿ 4, 1809ರ ವರ್ಷದಲ್ಲಿ ಫ್ರಾನ್ಸಿನ  ಕೋಪುವ್ ರೇ ಎಂಬಲ್ಲಿ ಜನಿಸಿದರು. ಲೂಯಿ ಬ್ರೈಲ್‌ ಜನಿಸಿದ ಮೂರು ವರ್ಷ  ನಂತರ ಆಕಸ್ಮಿಕವಾಗಿ ಅವರ ಕಣ್ಣಿಗೆ ಕಬ್ಬಿಣದ ದಬ್ಬಳ ತಾಗಿ ಒಂದು ಕಣ್ಣು ಕಳೆದು ಹೋಯ್ತು.  ಮುಂದೆ ಅದು ಉಂಟುಮಾಡಿದ  ಅಂಟುರೋಗದಿಂದ ಎರಡನೇ ಕಣ್ಣೂ ಶಕ್ತಿ ಹೀನವಾಯ್ತು.  ತನ್ನ ದೃಷ್ಟಿಹೀನತೆಯಲ್ಲೇ  ಕ್ರಿಯಾಶೀಲನಾಗಿ ಬದುಕುವುದನ್ನು ಲೂಯಿ ಬ್ರೈಲ್ ಅಭ್ಯಾಸ ಮಾಡಿಕೊಂಡರು.  ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ ನೀಡಿದ ವಿದ್ಯಾರ್ಥಿ ದೆಸೆಯಿಂದ  ಶಿಕ್ಷಣದಲ್ಲಿ ಅವರು  ಉತ್ತಮವಾದ ಸಾಧನೆ ಮಾಡುತ್ತಾ ಬಂದರು.  ವಿದ್ಯಾರ್ಥಿಯಾಗಿರುವಾಗಲೇ ಕಣ್ಣಿಲ್ಲದವರು ಸಮರ್ಥವಾಗಿ ಓದು ಬರೆಯುವ ವ್ಯವಸ್ಥೆ ನಿರ್ಮಿಸುವತ್ತ ಅವರು  ತಮ್ಮ ಪ್ರಯತ್ನಗಳನ್ನು ಪ್ರಾರಂಭಿಸಿದರು.  ಈ ಹಾದಿಯಲ್ಲಿ ಇವರನ್ನು ಚಾರ್ಲ್ಸ್ ಬಾರ್ಬಿಯರ್ ಅವರು ಸೈನ್ಯಕ್ಕೆ ಉಪಯೋಗಿಸಲು ಸೃಷ್ಟಿಸಿದ್ದ  ಸೂಚ್ಯಬರಹ ಮಾದರಿ (ಕ್ರಿಪ್ಟೋಗ್ರಫಿ) ಪ್ರೇರೇಪಿಸಿತು. ಈ ಪ್ರೇರಣೆಯಿಂದ ಅಂಧರಿಗೆ ಓದಿ ಬರೆಯಲು ಸಹಾಯಕವಾಗುವ ತಮ್ಮದೇ ಆದ ವ್ಯವಸ್ಥೆಯನ್ನೇ ಲೂಯಿ ಬ್ರೈಲ್ ಹುಟ್ಟುಹಾಕಿದರು.  ಈ ವ್ಯವಸ್ಥೆಯನ್ನು 1824ರ ವರ್ಷದಲ್ಲಿ ತಜ್ಞರ ಮುಂದೆ ಪ್ರಸ್ತುತಪಡಿಸಿದರು.  ಪ್ರಾರಂಭದಲ್ಲಿ  ಶಿಕ್ಷಕರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಬದುಕನ್ನು ರೂಪಿಸ ಹೊರಟಿದ್ದ  ಲೂಯಿ ಬ್ರೈಲ್ ಮುಂದೆ ತಮ್ಮ ಬಹುತೇಕ ಜೀವನವನ್ನು ತಾವು ನಿರ್ಮಿಸಿದ ವ್ಯವಸ್ಥೆಯ  ಉನ್ನತೀಕರಣ ಮತ್ತು ಬಳಕೆಗೆ ತರುವ ಕಾರ್ಯಕ್ಕೆ ವಿನಿಯೋಗಿಸಿದರು.   ಲೂಯಿ ಬ್ರೈಲ್ ಜನವರಿ 6, 1852ರ ವರ್ಷದಲ್ಲಿ ಪ್ಯಾರಿಸ್ ನಗರದಲ್ಲಿ ನಿಧನರಾದರು.  ಅವರು ನಿಧನಾನಂತರದ ಹಲವು ವರ್ಷಗಳು ಕಳೆದರೂ ಬ್ರೈಲ್ ವ್ಯವಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಉಪಯೋಗಗೊಂಡಿರಲಿಲ್ಲ.  ಕಾಲಕ್ರಮೇಣದಲ್ಲಿ ವಿಶ್ವದಾದ್ಯಂತ  ಬಹುತೇಕ ಬಾಷೆಗಳವರು  ಇದನ್ನು  ಕ್ರಾಂತಿಕಾರಕ  ಸಂಶೋಧನೆಯಾಗಿ ಮನಗಂಡು, ಇದರ ಉಪಯೋಗವನ್ನು  ಪಡೆಯುತ್ತಿದ್ದಾರೆ.

1889: ಸರ್ವೋಚ್ಚನ್ಯಾಯಾಲಯದ  ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಅಲಂಕರಿಸಿದ ಎರಡನೇ ಮಹನೀಯರಾದ   ಕಾನೂನು ತಜ್ಞ ಮತ್ತು ಸಂಸ್ಕೃತ ವಿದ್ವಾಂಸರಾದ ಎಂ. ಪತಂಜಲ ಶಾಸ್ತ್ರಿ ಅವರು ಈಗಿನ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಗೆ ಸೇರಿರುವ ಮದನಕೊಲ್ಲತ್ತೂರ್ ಎಂಬಲ್ಲಿ ಜನಿಸಿದರು.  ನವೆಂಬರ್ 1951ರಿಂದ ಜನವರಿ 1954ರ ಅವಧಿಯಲ್ಲಿ ಸರ್ವೋಚ್ಚನ್ಯಾಯಾಲಯದ  ಮುಖ್ಯ ನ್ಯಾಯಾಧೀಶರಾಗಿದ್ದ ಶಾಸ್ತ್ರಿಗಳು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿದ್ವತ್ ಮಂಡಳಿಯ ಸದಸ್ಯರಾಗಿಯೂ, ತಿರುಪತಿಯ ಕೇಂದ್ರೀಯ ಸಂಸ್ಕೃತ ವಿದ್ಯಾಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸದಸ್ಯರಾಗಿದ್ದರಲ್ಲದೆ, ಮದ್ರಾಸಿನ ಲೆಜೆಸ್ಲೇಟೀವ್ ಕೌನ್ಸಿಲ್ ಸದಸ್ಯರೂ ಆಗಿದ್ದರು.  ದೆಹಲಿ ವಿಶ್ವವಿದ್ಯಾಲಯದ ಗೌರವ ಕುಲಪತಿಗಳ ಸ್ಥಾನವನ್ನೂ ಅವರು ಅಲಂಕರಿಸಿದ್ದರು.  ಮಾರ್ಚ್ 16, 1963ರಲ್ಲಿ ನಿಧನರಾದರು.

1890: ಪ್ರಸಿದ್ಧ ಡಿಸಿ – ಕಾಮಿಕ್ಸ್ ಪ್ರಕಟಣಾ ಸಂಸ್ಥೆಯ ಸಂಸ್ಥಾಪಕ  ಮಾಲ್ಕಂ ವೀಲರ್ – ನಿಕಲ್ಸನ್ ಅವರು ಅಮೆರಿಕದ ಟೆನ್ನೆಸ್ಸೆ ಪ್ರದೇಶದ  ಗ್ರೀನ್ವಿಲ್ಲೇ ಎಂಬಲ್ಲಿ ಜನಿಸಿದರು.  ಪಲ್ಪ್ ಮ್ಯಾಗಜೈನ್ ಬರಹಗಾರರಾಗಿ ಪ್ರಸಿದ್ಧ ಅಮೆರಿಕನ್ ಕಾಮಿಕ್ ಬುಕ್ ಹುಟ್ಟಿಗೆ ಕಾರಣರಾಗಿ ಕಾಮಿಕ್ ಲೋಕದಲ್ಲಿ ಹಳೆಯ ಚಾರಿತ್ರಿಕ – ಪೌರಾಣಿಕ ವಿಷಯಗಳನ್ನು ಅವಲಂಬಿಸದೆ, ಹೊಸ ಹೊಸ  ರೀತಿಯ ಕಾಮಿಕ್ ಪಾತ್ರಗಳ ಲೋಕವನ್ನು ಸೃಷ್ಟಿಸಿದರು.  ಮುಂದೆ   ಪ್ರತಿಷ್ಟಿತ  ಡಿಸಿ – ಕಾಮಿಕ್ಸ್ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸಿದರು.  ಡಿಸಿ ಎಂಬುದು ‘ಡಿಟೆಕ್ಟಿವ್ ಕಾಮಿಕ್ಸ್’ ಎಂಬ  ಚಿಂತನೆಯಿಂದ ಮೂಡಿ,  ಪ್ರಸಿದ್ಧ  ಕಾಮಿಕ್ ಲೋಕದ ಸೃಷ್ಟಿಗಳಾದ ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ , ವಂಡರ್ ವುಮನ್, ಗ್ರೀನ್ ಲ್ಯಾಂಟರ್ನ್, ದಿ ಫ್ಲ್ಯಾಶ್  ಮುಂತಾದ ಅಸಂಖ್ಯಾತ ಸೃಷ್ಟಿಗಳು ಈ ಸಂಸ್ಥೆಯಿಂದ ಮೂಡಿಬಂದಿವೆ.  ಮಾಲ್ಕಂ ವೀಲರ್ – ನಿಕಲ್ಸನ್ ಅವರು 1965ರ ವರ್ಷದಲ್ಲಿ ನಿಧನರಾದರು

1896 : ಕನ್ನಡದ ಖ್ಯಾತ ಸಾಹಿತಿ ಶಂಕರ ಬಾಳ ದೀಕ್ಷಿತ ಜೋಶಿ  (ಶಂ.ಬಾ. ಜೋಶಿ) ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಎಂಬಲ್ಲಿ ಜನಿಸಿದರು.  ಹಲವು ಪತ್ರಿಕೆಗಳಿಗೆ ಲೇಖನ, ಕರ್ಮವೀರದ ಸಂಪಾದಕತ್ವ ಮುಂತಾದ ಕೆಲಸಗಳನ್ನು ನಿರ್ವಹಿಸಿದರು.  ಕರ್ನಾಟಕ ಇತಿಹಾಸ, ಕನ್ನಡ ಭಾಷಾ ಶಾಸ್ತ್ರ, ಜಾನಪದ ಸಾಹಿತ್ಯ, ಧಾರ್ಮಿಕ ಗ್ರಂಥಗಳ ಜೊತೆಗೆ ಹಲವಾರು ಗ್ರಂಥಗಳ ಅನುವಾದವನ್ನೂ ನಿರ್ವಹಿಸಿದರು.  ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಕನ್ನಡದ ನೆಲೆ, ಕಂನುಡಿಯ ಹುಟ್ಟು, ಮಕ್ಕಳ ಒಡಪುಗಳು, ಸೌಂದರ್ಯ ವಿಚಾರ, ಸಾತತ್ಯ ಮತ್ತು ಸತ್ಯ, ಭಗವದ್ ಗೀತೆ, ಶಿವರಹಸ್ಯ, ಹಾಲುಮತ ದರ್ಶನ, ಋಗ್ವೇದ ಸಾರ- ನಾಗಪ್ರತಿಮಾ ವಿಚಾರ, ಬುಧನ ಜಾತಕ ಇತ್ಯಾದಿ ಕೃತಿಗಳನ್ನು ರಚಿಸಿದರು. 1981ರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.  ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.

1925: ಸ್ವಾತಂತ್ಯ್ರಹೋರಾಟಗಾರ, ಗಾಂಧಿವಾದಿ, ಪ್ರಕೃತಿ ಚಿಕಿತ್ಸಾ ಪರಿಣತ, ದಕ್ಷ ತಂತ್ರಜ್ಞ, ಸಮಾಜಸೇವಕ, ಪತ್ರಕರ್ತ, ಸಾಹಿತಿ  ಡಾ. ಹೊ. ಶ್ರೀನಿವಾಸಯ್ಯ ಅವರು ಬೆಂಗಳೂರಿನಲ್ಲಿ ಜನಿಸಿದರು.  ತಂತ್ರಜ್ಞರಾಗಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಲ್ಲದೆ ‘ಪ್ರಕೃತಿ ಜೀವನ ಟ್ರಸ್ಟ್’ ಆರಂಭಿಸಿ ಪ್ರಕೃತಿ ಚಿಕಿತ್ಸಾ ವಿಷಯದ ಬಗ್ಗೆ ವಿಫುಲ ಕಾರ್ಯಕೈಗೊಂಡರು.  ಆರೋಗ್ಯವೇ ಭಾಗ್ಯ, ಆರೋಗ್ಯಶಾಸ್ತ್ರ ಪರಿಚಯ, ಪ್ರಕೃತಿದತ್ತ ಆರೋಗ್ಯ, ಯೋಗ ನಿದ್ರೆ ಮುಂತಾದವು ಅವರ ಆರೋಗ್ಯ ಕುರಿತಾದ ಕೃತಿಗಳು.  ಮಕ್ಕಳಿಗಾಗಿ ‘ಕನ್ನಡದ ಕಣ್ವ ಬಿ.ಎಂ.ಶ್ರೀ’, ‘ಪ್ರಕೃತಿ ಚಿಕಿತ್ಸಾ ತಜ್ಞ ಲಕ್ಷ್ಮಣ ಶರ್ಮ’, ‘ಡಾ. ಎನ್‌.ಎಸ್‌. ಹರ್ಡಿಕರ್’ ಮುಂತಾದವು ಜೀವನ ಚರಿತ್ರೆಗಳು; ‘ಶ್ರೀಲಂಕಾ’, ‘ಸಿಂಹಳದಲ್ಲಿ ಶಶಿ’, ‘ಶಶಿಕಂಡಜರ್ಮನಿ’, ‘ನಾ ಕಂಡ ಜರ್ಮನಿ’, ‘ಜಯಶ್ರೀ ಕಂಡ ಜಗತ್ತು’ ಮುಂತಾದವು  ಪ್ರವಾಸ ಕೃತಿಗಳು.  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ಸರಕಾರದ ಪತಂಜಲಿ ಸುವರ್ಣ ಪದಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಯೋಗ ಕೇಂದ್ರದಿಂದ ಯೋಗಶ್ರೀ ಪ್ರಶಸ್ತಿ, ದೆಹಲಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು  ಅವರಿಗೆ ಸಂದಿವೆ.

1931: ಹಿಂದೀ ಚಲನಚಿತ್ರಗಳಲ್ಲಿ ತಾಯಿ ಪಾತ್ರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಪ್ರಸಿದ್ಧರಾದ  ನಿರೂಪರಾಯ್ ಅವರು ‘ಕೋಕಿಲ ಕಿಶೋರಚಂದ್ರ ಬುಲ್ಸಾರ’ ಎಂಬ ಹೆಸರಿನಿಂದ ಗುಜರಾಥಿನ ವಲ್ಸಾದ್ ಎಂಬಲ್ಲಿ ಜನಿಸಿದರು. ಎಪ್ಪತ್ತರ ದಶಕದಲ್ಲಿ ಮುನಿಮ್ಜಿ, ಛಾಯಾ, ಶೆಹನಾಯ್ ಚಿತ್ರಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಫಿಲಂ ಫೇರ್ ಪ್ರಶಸ್ತಿ, ಬೆಂಗಾಲ್ ಚಿತ್ರ ವಿಮರ್ಶಕರ ಪ್ರಶಸ್ತಿ ಅಲ್ಲದೆ,   ಫಿಲಂ ಫೇರ್ ಜೀವಮಾನ ಪ್ರಶಸ್ತಿಗಳು ಅವರಿಗೆ ಸಂದಿವೆ.

1884: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದ್ರ ಸೇನ್ ಅವರು ತಮ್ಮ 45ನೇ ವಯಸ್ಸಿನಲ್ಲಿ ನಿಧನರಾದರು.

1960: ನೊಬೆಲ್ ವಿಜೇತ ಫ್ರೆಂಚ್ ಸಾಹಿತಿ ಆಲ್ಬರ್ಟ್ ಕಾಮು ಅವರು ಕಾರು ಅಪಘಾತದಲ್ಲಿ ನಿಧನರಾದರು.  ತಮ್ಮ ಬರಹಗಳಲ್ಲಿ ನಿರಾಕರಣ ವಾದವನ್ನು ವಿರೋಧಿಸುತ್ತಲೇ  ಬದುಕಿನಲ್ಲಿ ಸ್ವಾತಂತ್ರ್ಯದ ಕುರಿತಾಗಿ ಪ್ರತಿಪಾದಿಸಿ ಬರೆದ ಕಾಮು  ಕಾದಂಬರಿ, ಕಥೆ, ನಾಟಕ, ಚಿಂತನೆಗಳು, ಪ್ರಬಂಧಗಳು ಹೀಗೆ ವೈವಿಧ್ಯಮಯ ಎಲ್ಲ ರೀತಿಯ ಬರಹಗಳನ್ನೂ ಮೂಡಿಸಿದ್ದಾರೆ.

1965: ಟಿ. ಎಸ್. ಎಲಿಯೆಟ್ ಎಂದೇ ಖ್ಯಾತರಾದ ನೋಬಲ್ ಪ್ರಶಸ್ತಿ ವಿಜೇತ ಕವಿ, ನಾಟಕಕಾರ, ವಿಮರ್ಶಕ ಥಾಮಸ್ ಸ್ಟೀಯರ್ನ್ಸ್ ಲಂಡನ್ನಿನ ಕೆನ್ಸಿಂಗ್ಟನ್ ಎಂಬಲ್ಲಿ  ನಿಧನರಾದರು.  ಮೂಲತಃ ಅಮೆರಿಕದವರಾದ ಅವರು ನಂತರದಲ್ಲಿ ಇಂಗ್ಲೆಂಡಿನಲ್ಲಿ ನೆಲೆಸಿದರು. 1915ರಲ್ಲಿ ಅವರು ರಚಿಸಿದ  ‘ದಿ ಲವ್ ಸಾಂಗ್ ಆಫ್ ಜೆ. ಆಲ್ಫ್ರೆಡ್ ಪ್ರುಫ್ರಾಕ್’ ಎಂಬ ಕವಿತೆ ನವ್ಯತೆಯ ಮಾಸ್ಟರ್ ಪೀಸ್ ಎನಿಸಿ ಪ್ರಖ್ಯಾತಗೊಂಡಿತು.  ಮುಂದೆ ದಿ ವೆಸ್ಟ್ ಲ್ಯಾಂಡ್, ದಿ ಹಾಲೋ ಮೆನ್, ಆಶ್ ವೆಡ್ನೆಸ್ಡೇ, ಫೋರ್ ಕ್ವಾರ್ಟೆಟ್ಸ್  ಮುಂತಾದ ಅನೇಕ ಪ್ರಖ್ಯಾತ ಕವಿತೆಗಳೂ, ಪ್ರಸಿದ್ಧ ನಾಟಕವಾದ ‘ಮರ್ಡರ್ ಇನ್ ಕ್ಯಾಥೆಡ್ರಲ್’ ಸೇರಿದಂತೆ 7 ನಾಟಕಗಳೂ ಪ್ರಕಟಗೊಂಡವು.    ಆಧುನಿಕ  ಕಾವ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು

1994: ಭಾರತೀಯ ಚಲನಚಿತ್ರಗಳಲ್ಲಿ ಪ್ರಖ್ಯಾತ ಗೀತೆಗಳ ಹೊಳೆಯನ್ನೇ ಹರಿಸಿದ  ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರು ನಿಧನರಾದರು.

2016: ನ್ಯಾಯವಾದಿ, ರಾಜಕಾರಣಿ ಮತ್ತು ಸರ್ವೋಚ್ಚ ನ್ಯಾಯಾಲಯದ  38ನೇ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್. ಹೆಚ್. ಕಪಾಡಿಯ ಅವರು ನಿಧನರಾದರು.

Categories
e-ದಿನ

ಜನವರಿ-03

ಪ್ರಮುಖಘಟನಾವಳಿಗಳು:

1749: ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಡೆನ್ಮಾರ್ಕಿನ ‘ಬರ್ಲಿಂಗ್ಸ್ಕೆ’ ಪತ್ರಿಕೆಯ ಪ್ರಥಮ ಸಂಚಿಕೆ ಪ್ರಕಟಗೊಂಡಿತು.

1777: ಅಮೆರಿಕಾದ ಜನರಲ್ ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆ ಪ್ರಿನ್ಸ್ಟನ್ ಕದನದಲ್ಲಿ ಬ್ರಿಟಿಷ್ ಜನರಲ್ ಲಾರ್ಡ್ ಕಾರ್ನವಾಲೀಸ್ ಸೈನ್ಯಕ್ಕೆ ಸೋಲುಣಿಸಿತು.

1870: ಅಮೇರಿಕಾದ  ನ್ಯೂಯಾರ್ಕ್ ನಗರದಲ್ಲಿನ ಪ್ರಸಿದ್ಧ ತೂಗು ಸೇತುವೆ ‘ಬ್ರೂಕ್ಲಿನ್ ಬ್ರಿಡ್ಜ್’ ನಿರ್ಮಾಣ ಆರಂಭಗೊಂಡಿತು.  ಮ್ಯಾನ್ಹಟನ್ ಪ್ರಾಂತ್ಯದಿಂದ  ‘ಈಸ್ಟ್ ರಿವರ್’ ನದಿಯ ಮೇಲೆ ಬ್ರೂಕ್ಲಿನ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿರುವ  ಈ ಸೇತುವೆಯನ್ನು ಕೇಬಲ್ ಸ್ಟೇಯ್ಡ್ ಸಸ್ಪೆನ್ಷನ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ.  ಇದನ್ನು  1883 ಮೇ 24 ರಂದು ಸಂಚಾರಕ್ಕಾಗಿ ತೆರೆಯಲಾಯಿತು.  1825 ಮೀಟರ್ ಉದ್ದ, 26 ಮೀಟರ್ ಅಗಲ  ಹಾಗೂ 41 ಮೀಟರ್ ಗರಿಷ್ಟ ಆಳವನ್ನು ಹೊಂದಿರುವ  ಈ ಸೇತುವೆ  1903ರವರೆಗೆ  ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು.

1880: ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಮೊದಲ ಸಂಚಿಕೆ ಮುಂಬೈನಲ್ಲಿ ಪ್ರಕಟಗೊಂಡಿತು. ಪ್ರಾರಂಭದಲ್ಲಿ ಇದು ಟೈಮ್ಸ್ ಆಫ್ ಇಂಡಿಯಾ ಸಮೂಹದ ಸಾಪ್ತಾಹಿಕ ಪುರವಣಿಯಾಗಿ  ‘ಟೈಮ್ಸ್ ಆಫ್ ಇಂಡಿಯಾ ಓವರ್ ಲ್ಯಾಂಡ್ ವೀಕ್ಲಿ ಎಡಿಷನ್’ ಎಂಬ  ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. 1929ರಲ್ಲಿ ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಎಂದು ಹೆಸರು ಬದಲಿಸಿಕೊಂಡಿತು.

1888: ಲಾಸ್ ಏಂಜೆಲಿಸ್ ನಗರದ ಹ್ಯಾಮಿಲ್ಟನ್ ಪ್ರದೇಶದಲ್ಲಿರುವ  ಲಿಕ್  ವೀಕ್ಷಣಾಲಯದಲ್ಲಿ 91 ಸೆಂಟಿ ಮೀಟರ್ ವ್ಯಾಸದ  ರಿಫ್ರಾಕ್ಟಿಂಗ್ ಟೆಲಿಸ್ಕೋಪ್ ಅನ್ನು ಪ್ರಥಮಬಾರಿಗೆ ಬಳಸಲಾಯಿತು.  ಅಂದಿನ ಕಾಲದಲ್ಲಿ ಇದು  ವಿಶ್ವದಲ್ಲೇ ಅತ್ಯಂತ  ದೊಡ್ಡ ದೂರದರ್ಶಕ ಉಪಕರಣವೆಂಬ ಕೀರ್ತಿಗೆ ಪಾತ್ರವಾಗಿತ್ತು.

1911: 7.7 ರಿಕ್ಟರ್ ಪ್ರಮಾಣದ  ಭೂಕಂಪವು ರಷ್ಯಾದ ಟರ್ಕೆಸ್ಥಾನದ ಅಲ್ಮೇಟಿ ನಗರವನ್ನು ಧ್ವಂಸಮಾಡಿತು.

1925: ಇಟಲಿಯ ಸಂಸತ್ತನ್ನು ವಿಸರ್ಜಿಸಿ ತನ್ನನ್ನು ಸರ್ವಾಧಿಕಾರಿ  ಎಂದು ಘೋಷಿಸಿಕೊಂಡ.

1947: ಯು.ಎಸ್. ಕಾಂಗ್ರೆಸ್ ಅಧಿವೇಶನದ  ಕಾರ್ಯಕಲಾಪವನ್ನು  ಪ್ರಥಮ ಬಾರಿಗೆ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಯಿತು.

1956: ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಗೋಪುರದ ಮೇಲ್ಬಾಗವು ಅಗ್ನಿ ಅನಾಹುತಕ್ಕೀಡಾಗಿ ಹಾನಿಗೊಂಡಿತು.

1957: ಸ್ವಿಟ್ಜರ್ಲ್ಯಾಂಡ್ದೇಶದ ಹ್ಯಾಮಿಲ್ಟನ್ ವಾಚ್ ಕಂಪೆನಿಯು ವಿಶ್ವದ ಪ್ರಥಮ ಎಲೆಕ್ಟ್ರಿಕ್ ಕೈಗಡಿಯಾರ ‘ಎಲೆಕ್ಟ್ರಿಕ್ 500’ ಅನ್ನು ಬಿಡುಗಡೆ ಮಾಡಿತು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿ. ಎನ್. ಆರ್ ರಾವ್) ಅವರು ಮೊತ್ತ ಮೊದಲ ಭಾರತ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾವ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

2008: ಖ್ಯಾತ ಇಂಗ್ಲಿಷ್ ಲೇಖಕಿ ಕನ್ನಡತಿ ಮಾಲತಿ ರಾವ್ ಅವರನ್ನು 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅವರ ‘ಡಿಸಾರ್ಡರ್ಲಿ ವುಮೆನ್’ ಕಾದಂಬರಿಗೆ ಈ ಪ್ರಶಸ್ತಿ ದೊರಕಿತು.

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 106: ರೋಮನ್ ದಾರ್ಶನಿಕ, ರಾಜಕಾರಣಿ, ಶ್ರೇಷ್ಠ ವಾಗ್ಮಿ, ನ್ಯಾಯಶಾಸ್ತ್ರ ಮತ್ತು  ಸಂವಿಧಾನ ನಿಪುಣ ಮಾರ್ಕಸ್ ಟುಲಿಯಸ್ ಸಿಸೆರೋ ಅವರು ರೋಮ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿರುವ ಅರ್ಪಿನುಂ ಎಂಬಲ್ಲಿ ಜನಿಸಿದರು.

1760: ಬ್ರಿಟಿಷರ ವಿರುದ್ಧ ಹೋರಾಡಿದ ಪಾಳೆಯಗಾರ ವೀರಪಾಂಡ್ಯ ಕಟ್ಟಾಬೊಮ್ಮನ್ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಪಂಚಲನ್ಕುರಿಚಿ ಎಂಬಲ್ಲಿ ಜನಿಸಿದರು.  ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸಾರ್ವಭೌಮತ್ವವನ್ನು ಒಪ್ಪದೆ ಅವರ ವಿರುದ್ಧ ಹೋರಾಡಿದರು.  ಬ್ರಿಟಿಷ್ ಆಡಳಿತವು  ಇವರನ್ನು 16 ಅಕ್ಟೋಬರ್ 1799ರಂದು  ಸಾರ್ವಜನಿಕವಾಗಿ ತೂತ್ತುಕುಡಿ ಜಿಲ್ಲೆಯ ಕಯತ್ತಾರ್ ಎಂಬಲ್ಲಿ ನೇಣುಗಂಬಕ್ಕೇರಿಸಿತು. ಅವರ ಪ್ರಾಣಾರ್ಪಣೆಯ 200ನೇ ವರ್ಷದ ಸ್ಮರಣೆಯಾಗಿ   ಅಕ್ಟೋಬರ್ 16, 1999ರಂದು  ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ತಮಿಳುನಾಡಿನ ವಿಜಯನಾರಾಯಣಂ ಎಂಬಲ್ಲಿ ಇರುವ  ಭಾರತೀಯ ನೌಕಾದಳದ ಸಂಪರ್ಕ ಕೇಂದ್ರಕ್ಕೆ  ಐ.ಎನ್.ಎಸ್. ಕಟ್ಟಾಬೊಮ್ಮನ್ ಎಂದು ಹೆಸರಿಡಲಾಗಿದೆ.

1831: ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆ, ಆಧುನಿಕ ಶಿಕ್ಷಣ ಮಾತೆ ಎಂದು ಪ್ರಸಿದ್ಧರಾದ ಸಾವಿತ್ರಿಬಾಯಿ ಫುಲೆ ಅವರು  ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ ಜನಿಸಿದರು.  ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ  ಅನೇಕ ಶಾಲೆಗಳನ್ನು ಸ್ಥಾಪಿಸಿ, ಹೆಣ್ಣುಮಕ್ಕಳನ್ನು  ಮನೆ ಮನೆಗೆ ಹೋಗಿ  ಶಿಕ್ಷಣಶಾಲೆಗೆ ಕರೆತಂದರು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಇದ್ದ ವಿರೋಧಗಳಿಗೂ ಎದೆಗುಂದದೆ ಸಹಸ್ರಾರು  ಮಕ್ಕಳಿಗೆ  ವಿದ್ಯಾಭ್ಯಾಸ ಧಾರೆ ಎರೆದರು.  ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ್ದಕ್ಕಾಗಿ ಜ್ಯೋತಿಬಾ ಫುಲೆ ಅವರನ್ನು  ಬ್ರಿಟಿಷ್ ಸರ್ಕಾರ ಗೌರವಿಸಿದ ಸಮಾರಂಭದಲ್ಲೇ,  “ಈ ಕೀರ್ತಿ ನಿನಗೆ ಸೇರಬೇಕು” ಎಂದು ನುಡಿದು  ಅದನ್ನು ಅವರು ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ  ಗೌರವದಿಂದ ನೀಡಿದ್ದರು.  ಸಾವಿತ್ರಿಬಾಯಿ ಫುಲೆ ಅವರು ತೀವ್ರ ಪ್ಲೇಗ್ ಕಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 10 ಮಾರ್ಚ್ 1897ರಲ್ಲಿ ಸಾವನ್ನಪ್ಪಿದರು.

1861: ಟೆನಿಸ್ ಕ್ರೀಡೆಯಲ್ಲಿ ಮಹಾನ್ ಸಾಧನೆ ಮಾಡಿದ  ಇಂಗ್ಲಿಷ್ ಅವಳಿ ಜವಳಿ ಸಹೋದರರಾದ ವಿಲಿಯಂ ರೇನ್ ಶಾ (1861-1904) ಮತ್ತು ಅರ್ನೆಸ್ಟ್ ರೇನ್ ಶಾ (1861-1899) ಹುಟ್ಟಿದ ದಿನ. ಈ ಅವಳಿ ಜವಳಿ ಸಹೋದರರು 1880ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ನಿನಲ್ಲಿ ಒಟ್ಟಾಗಿ ಟೆನಿಸ್ ಆಟಕ್ಕೆ ಪ್ರವೇಶ ಪಡೆದರು. ವಿಲಿಯಂ ಅವರು ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು  7 ಬಾರಿ (1881-86 ಹಾಗೂ 1889ರಲ್ಲಿ) ಪಡೆದುಕೊಂಡರು. ತನ್ನ ಸಹೋದರನನ್ನೇ ಮೂರು ಬಾರಿ ಫೈನಲ್ಸ್ ನಲ್ಲಿ ಪರಾಭವಗೊಳಿಸಿದರು. ಅರ್ನೆಸ್ಟ್ 1888ರಲ್ಲಿ ಚಾಂಪಿಯನ್ ಶಿಪ್ ಗೆದ್ದರು. ಇವರಿಬ್ಬರೂ ಒಟ್ಟಾಗಿ  ಬ್ರಿಟಿಷ್ ಡಬಲ್ಸ್ ಪ್ರಶಸ್ತಿನ್ನು ಏಳು ಬಾರಿ ಗೆದ್ದುಕೊಂಡರು. 1888ರಲ್ಲಿ ವಿಲಿಯಂ ಬ್ರಿಟಿಷ್ ಲಾನ್ ಟೆನಿಸ್ ಅಸೋಸಿಯೇಶನ್ನಿನ ಮೊತ್ತ ಮೊದಲ ಬ್ರಿಟಿಷ್ ಅಧ್ಯಕ್ಷರಾಗಿ ಆಯ್ಕೆಯಾದರು.

1883: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ಜನಿಸಿದ ದಿನ. 1945ರಿಂದ 1951ರ ಅವಧಿಯಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ಇವರು ಭಾರತದ ಸ್ವಾತಂತ್ರ್ಯವನ್ನು ಅನುಮೋದಿಸಿದರು.

1884: ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು ತುರುವೇಕೆರೆಯಲ್ಲಿ ಜನಿಸಿದರು.  ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು  ಉಳಿಸಿ ಬೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಬಿ.ಎಂ.ಶ್ರೀ ಅವರು ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಮತ್ತು  ಸಂಸ್ಕೃತ ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು. ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿಯರ್ ಸಾಹೇಬರು ವಿದ್ಯಾರ್ಥಿಗಳಿಗೆ ಆಧುನಿಕ ವಿಮರ್ಶನ ವಿಧಾನದಲ್ಲಿ ಬೋಧನೆ ಮಾಡಲು ಬಿ.ಎಂ. ಶ್ರೀಕಂಠಯ್ಯನವರನ್ನು ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕ ಎಂದು 1909ರಲ್ಲಿ ನೇಮಿಸಿದರು.  ನೇಮಕವಾದ ಎರಡು ವರ್ಷಗಳಲ್ಲಿ ಇವರ ಕನ್ನಡದ ಒಲವು, ಒಲ್ಮೆ ಇವುಗಳ ಕೀರ್ತಿ ಧಾರವಾಡದವರೆಗೂ ಹಬ್ಬಿತು.  1911ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ಬಿ.ಎಂ.ಶ್ರೀ ತಮ್ಮ ಮೊತ್ತಮೊದಲನೆಯ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಯುಗಪ್ರವರ್ತಕ ಭಾಷಣವನ್ನು ಮಾಡಿದರು.  1928ರಲ್ಲಿ ಕಲಬುರ್ಗಿ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು ಸೀಮೆಯಲ್ಲಿ ಬಿ.ಎಂ.ಶ್ರೀಯವರೂ ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದಾಗ ಅವರು ಮೊತ್ತಮೊದಲು ಮಾಡಿದ ಕೆಲಸ ಎಂದರೆ ಕನ್ನಡದ ಬಾವುಟವನ್ನು ಹಾರಿಸಿದ್ದು;  ತಾವು ರೂಪಿಸಿದ ಕನ್ನಡದ ಬಾವುಟದ ಕಲ್ಪನೆಗೆ ಕವನರೂಪವನ್ನು ಕೊಟ್ಟರು;  ಪ್ರಾಚೀನ-ಅರ್ವಾಚೀನ ಕನ್ನಡ ಕವಿಗಳು ಕಂಡ ಕರ್ನಾಟಕವನ್ನು ವರ್ಣಿಸುವ ಕವನಗಳ ಸಂಕಲನವೊಂದನ್ನು ‘ಕನ್ನಡ ಬಾವುಟ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು;  ಕನ್ನಡ ಬಾವುಟವನ್ನು ಹಿಡಿದು ಕನ್ನಡ ನಾಡನ್ನೆಲ್ಲ ಸುತ್ತಿ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕನ್ನಡ ಜನಮನವನ್ನು ಸಿದ್ಧಗೊಳಿಸಿದರು. ಮೈಸೂರು ಮಹಾರಾಜರಿಂದ ಅವರಿಗೆ ರಾಜ ಸೇವಾಸಕ್ತ ಬಿರುದು ಸಂದಿತು. ಗ್ರಂಥ ಸಮರ್ಪಣೆ ಪರಂಪರೆಯ ಮೊದಲ ಗ್ರಂಥ ‘ಸಂಭಾವನೆ’ ಅವರಿಗೆ ಸಮರ್ಪಿತಗೊಂಡಿತು.

1892: ಮಹಾನ್ ವಿದ್ವಾಂಸರೂ, ಸಾಹಿತಿಗಳೂ ಆದ  ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಜನಿಸಿದರು.  ಸಂಸ್ಕೃತದಲ್ಲಿ ಕಾಶಿ ಜಂಗವಾಡಿಮಠದ ಪಂಡಿತ ಮತ್ತು ಸಾಹಿತ್ಯಾಚಾರ್ಯ ಪದವಿಗಳನ್ನೂ, ಕಲ್ಕತ್ತೆಯಲ್ಲಿ ವ್ಯಾಕರಣತೀರ್ಥ ಪದವಿಯನ್ನೂ ಪಡೆದ ಚಂದ್ರಶೇಖರ ಶಾಸ್ತ್ರಿಗಳು ಚಿತ್ರದುರ್ಗ, ಯಾದಗಿರಿಗಳಲ್ಲಿ ಸಂಸ್ಕೃತ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು.  ಶಾಸ್ತ್ರಿಗಳು ಕನ್ನಡದಲ್ಲಿ ಹಲವಾರು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ನೂರಾರು ಸಂಶೋಧನಾ ಮತ್ತು ಪಾಂಡಿತ್ಯಪೂರ್ಣ ಲೇಖನಗಳನ್ನು ನಾಡಿನ ಶ್ರೇಷ್ಠಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಧಾರವಾಡದಲ್ಲಿ ನಡೆದ 25ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಕರ್ನಾಟಕ, ಕನ್ನಡ ಸಾಹಿತ್ಯ ಇವುಗಳನ್ನು ಕುರಿತು ಅವರು ವ್ಯಕ್ತಪಡಿಸಿದ ಚಿಂತನೆಗಳು ಅಮೋಘವಾಗಿವೆ. 1968ರಲ್ಲಿ ಇವರ ‘ಬಸವರತ್ನಾಕರ’ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1983ರಲ್ಲಿ ಕರ್ನಾಟಕ ರಾಜ್ಯದ ರಾಜ್ಯ ಪ್ರಶಸ್ತಿ, 1966ರಲ್ಲಿ ಸಂಶೋಧಕರಿಗಾಗಿ ಇರುವ ಚಿದಾನಂದ ಪ್ರಶಸ್ತಿಗಳು  ಶಾಸ್ತ್ರಿಗಳಿಗೆ ಸಂದ ಪ್ರಮುಖ ಪ್ರಶಸ್ತಿಗಳಾಗಿವೆ.  ಅಕ್ಟೋಬರ್ 24, 1997ರ ವರ್ಷದಲ್ಲಿ  ಮಾಗಳ ಗ್ರಾಮದಲ್ಲಿ ನಿಧನರಾದರು.

1918: ಪ್ರಾಧ್ಯಾಪಕ, ಸಾಹಿತಿ  ಪ್ರೊ. ಜಿ. ವರದರಾಜರಾವ್ ಅವರು ಬೆಂಗಳೂರಿನಲ್ಲಿ ಜನಿಸಿದರು.  ‘ಕುಮಾರ ರಾಮನ ಸಾಂಗತ್ಯಗಳು’ ಜಿ. ವರದರಾಜರಾಯರಿಗೆ ಡಾಕ್ಟರೇಟ್‌ ತಂದು ಕೊಟ್ಟ ಮಹಾ ಪ್ರಬಂಧ.  ಹರಿದಾಸ ಸಾಹಿತ್ಯದಲ್ಲಿ ಅಪಾರ ಸಾಹಿತ್ಯ ಕೃಷಿ ನಡೆಸಿರುವ  ಇವರ  ‘ಓಬವ್ವ’ ೩೦೦ ಸಾಲುಗಳ ಮಿತಿಯ ಕಥನ ಕವನ ಪ್ರಸಂಗಕ್ಕೆ  ಬಿ.ಎಂ.ಶ್ರೀಯವರ ರಜತ ಮಹೋತ್ಸವ ಚಿನ್ನದ ಪದಕ ಸಂದಿತ್ತು.  ನವೆಂಬರ್ 13, 1987ರಲ್ಲಿ ನಿಧನರಾದರು.

1921: ಪ್ರಸಿದ್ಧ ಹಿಂದೀ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಚೇತನ್ ಆನಂದ್,  ಈಗಿನ ಪಾಕಿಸ್ತಾನದ ಲಾಹೋರಿನಲ್ಲಿ ಜನಿಸಿದರು.  1946ರ ವರ್ಷದಲ್ಲಿ ಇವರ ಪ್ರಥಮ ಚಿತ್ರ ‘ನೀಚಾ ನಗರ್’ ಕೇನ್ಸ್ ಚಲನಚಿತ್ರೋತ್ಸವದಲ್ಲಿ “ಪಾಲ್ಮೆ ಡಿ’ಓರ್” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.  1949ರಲ್ಲಿ ಇವರು ತಮ್ಮ ಕಿರಿಯ ಸಹೋದರ ಪ್ರಖ್ಯಾತ ನಟ ದೇವಾನಂದ್ ಅವರ ಜೊತೆಗೂಡಿ ನವಕೇತನ್ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಅವರು ತಮ್ಮದೇ ಆದ ಹಿಮಾಲಯನ್ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿದರು.   17 ಚಲನಚಿತ್ರಗಳು ಮತ್ತು ರಾಷ್ಟ್ರೀಯ ದೂರದರ್ಶನದಲ್ಲಿ ಜನಪ್ರಿಯಗೊಂಡ  ‘ಪರಮ ವೀರ ಚಕ್ರ’ ಎಂಬ ಯೋಧರ ಸಾಹಸದ ಕಥೆಗಳನ್ನು ಪ್ರಸ್ತುತಪಡಿಸಿದ್ದರು. ಕೇನ್ಸ್ ಪ್ರಶಸ್ತಿಯೇ ಅಲ್ಲದೆ 1965ರ ವರ್ಷದಲ್ಲಿ ಅವರ ‘ಹಕೀಕತ್’ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡನೇ ಶ್ರೇಷ್ಠ ಚಿತ್ರ ಪ್ರಶಸ್ತಿ, ‘ಕುದ್ರತ್’ ಚಿತ್ರದ ಉತ್ತಮ ಚಿತ್ರಕತೆಗೆ ಫಿಲಂಫೇರ್ ಪ್ರಶಸ್ತಿಗಳೂ ಸಂದಿದ್ದವು.  ಜುಲೈ 6, 1997ರಲ್ಲಿ ನಿಧನರಾದರು.

1952: ಪ್ರಸಿದ್ಧ ನಾಟ್ಯ ಕಲಾವಿದೆ, ನಾಟ್ಯಗುರು ವನಮಾಲ ಕುಲಕರ್ಣಿ ಅವರು ಬಳ್ಳಾರಿಯಲ್ಲಿ ಜನಿಸಿದರು. ನೂರಾರು ಶಿಷ್ಯರನ್ನು ತಯಾರು ಮಾಡಿರುವುದರ ಜೊತೆಗೆ  ತಮ್ಮ ನೂರಾರು ನೃತ್ಯ ಪ್ರದರ್ಶನಗಳಿಂದ ಪ್ರಖ್ಯಾತರಾಗಿರುವ ವನಮಾಲ ಕುಲಕರ್ಣಿ ಅವರಿಗೆ  ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

2002: ಭಾರತೀಯ ಬಾಹ್ಯಾಕಾಶ ಯುಗದಲ್ಲಿ, ಫ್ಲೂಯಿಡ್ ಡೈನಾಮಿಕ್ಸ್ ಸಂಶೋಧನೆಯ ಪಿತಾಮಹರೆಂದು ಪ್ರಖ್ಯಾತರಾಗಿರುವ ಡಾ.  ಸತೀಶ್ ಧವನ್ ಅವರು ನಿಧನರಾದರು.  ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ಮತ್ತು ಭಾರತೀಯ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾಗಿ ಅಧಿಕಾರ ನಿರ್ವಹಿಸಿದ ಸತೀಶ್ ಧವನ್ ತಮ್ಮ ನಿರ್ದೇಶನದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಪ್ರತಿಮ ಮುನ್ನಡೆ ಒದಗಿಸಿಕೊಟ್ಟರು. ಅವರ ಗೌರವಾರ್ಥ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವೆಂದು ಹೆಸರಿಸಲಾಗಿದೆ.  ಸತೀಶ್ ಧವನ್ನರಿಗೆ ಭಾರತದ ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗಳಲ್ಲದೆ, ಭಾರತೀಯ ವಿಜ್ಞಾನ ಮಂದಿರದ ಪ್ರತಿಷ್ಟಿತ ಅಲ್ಯುಮ್ನಸ್ ಗೌರವ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಲ್ಯುಮ್ನಿ ಗೌರವ ಮುಂತಾದ ಅನೇಕ ಅಂತರರಾಷ್ಟ್ರೀಯ ಮಟ್ಟದ ಗೌರವಗಳು ಅವರಿಗೆ ಸಂದಿದ್ದವು.

Categories
e-ದಿನ

ಜನವರಿ-02

ಪ್ರಮುಖಘಟನಾವಳಿಗಳು:

1777: ಅಮೆರಿಕಾದ ಕ್ರಾಂತಿಕಾರಿ ಯುದ್ಧ: ಜಾರ್ಜ್ ವಾಷಿಂಗ್ಟನ್ ನೇತೃತ್ವದ ಅಮೇರಿಕದ ಪಡೆಗಳು ನ್ಯೂಜೆರ್ಸಿಯ ಟ್ರೆಂಟನ್  ಬಳಿ ‘ಬ್ಯಾಟಲ್ ಆಫ್ ದಿ ಆಸುನ್ಪಿಂಕ್ ಕ್ರೀಕ್’ ಎಂದು ಪ್ರಸಿದ್ಧಿಗೊಂಡಿರುವ ಯುದ್ಧದಲ್ಲಿ ಬ್ರಿಟಿಷ್ ಪಡೆಗಳನ್ನು ಹಿಮ್ಮೆಟ್ಟಿಸಿದವು.

1839: ಅತ್ಯಂತ ಸೂಕ್ಷ್ಮವಾದ ಅಂಶಗಳೂ ಕಾಣಬರುವಂತಹ ಡಾಗ್ಯುಯೆರಿಯೋ ಟೈಪ್ಸ್ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಮೊಟ್ಟಮೊದಲ ಬಾರಿಗೆ ಚಂದ್ರನ ಚಿತ್ರವನ್ನು ಛಾಯಾಗ್ರಹಣ ಮಾಡಿದ್ದರು. ಡಾಗ್ಯುಯೆರಿಯೋ ಟೈಪ್ಸ್ ಛಾಯಾಗ್ರಹಣ ಒಂದೆರಡು ದಶಕಗಳ ಕಾಲ ಖಗೋಳಜ್ಞರಿಗೆ ಮುಂದಿನ ತಂತ್ರಜ್ಞಾನಗಳು ಅಭಿವೃದ್ಧಿ ಆಗುವವರೆಗೂ ಸಾಕಷ್ಟು ಉಪಯುಕ್ತವಾಗಿತ್ತು.

1954: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನದ ಸ್ಥಾಪನೆಯನ್ನು ಪ್ರಕಟಿಸಲಾಯಿತು.

1959: ಸೋವಿಯತ್‌ ರಷ್ಯಾದ ಬಾಹ್ಯಾಕಾಶ ನೌಕೆ ಲ್ಯೂನಾ-1 ಟೈರಾಟಮ್ಮಿಂದ ಬಾಹ್ಯಾಕಾಶಕ್ಕೆ ಏರಿತು. ಇದು ಚಂದ್ರನ ಅತ್ಯಂತ ಸಮೀಪಕ್ಕೆ ಮತ್ತು ಕಕ್ಷೆಗೆ ತಲುಪಿದ ಪ್ರಥಮ ಗಗನನೌಕೆ ಎಂಬ ಕೀರ್ತಿಗೆ ಪಾತ್ರವಾಗಿದೆ.

2016: ವಿಭಾಗದ ಮೇಲೆ ಸಶಸ್ತ್ರ ಭಯೋತ್ಪಾದಕರ ಗುಂಪು ದಾಳಿಮಾಡಿತು.  ಈ ದಾಳಿಯಲ್ಲಿ ಐದು ಜನ ಆಯುಧರಹಿತರಾಗಿದ್ದ  ಭಾರತೀಯ ಯೋಧರು  ಪ್ರಾಣ ಕಳೆದುಕೊಳ್ಳುವುದರ ಜೊತೆಗೆ, ಉಗ್ರರೊಂದಿಗೆ ಹೋರಾಡಿದ ಗರುಡ್ ಕಮಾಂಡೋ ಗುರುಸೇವಕ ಸಿಂಗ್ ಹಾಗೂ ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟಗೊಂಡ ಕಾರಣದಿಂದ  ಲೆಫ್ಟಿನೆಂಟ್ ಕರ್ನಲ್ ನಿರಂಜನ್ ತಮ್ಮ ಪ್ರಾಣ ತೆತ್ತರು.  ಈ ಸಂಬಂಧವಾದ ‘ಆಪರೇಷನ್ ಧಂಗು’ ಎಂಬ  ಕಾರ್ಯಾಚರಣೆ ಜನವರಿ 2ರಂದು ಸಂಜೆ ಆರಂಭಗೊಂಡು ಜನವರಿ 03ರಂದು ಮಧ್ಯಾಹ್ನ 1.30ರ ವರೆಗೆ 17 ಗಂಟೆಗಳ ಕಾಲ ನಡೆದು, ಭಾರತೀಯ ಸೇನೆ ಆರು ಉಗ್ರರನ್ನು ಹತ್ಯೆಗೈದು ತನ್ನ ವಾಯುನೆಲೆಯನ್ನು ಉಗ್ರರಿಂದ ಮುಕ್ತಗೊಳಿಸಿಕೊಂಡಿತು.

ಪ್ರಮುಖಜನನ/ಮರಣ:

1923: ಅವರು ಉತ್ತರ ಕನ್ನಡ ಕುಮಟಾದ ಹೊಲನಗದ್ದೆಯಲ್ಲಿ ಜನಿಸಿದರು.  ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ  ಮುಕ್ತಿ ಹೊಲೆಯರ ಪದಗಳು, ಕುವರಿ ಮರಾಠಿ ಕಥೆಗಳು, ಗುಮಟೆಯ ಪದಗಳು, ಕರಾವಳಿಯ ಜನಪದ ಕಥೆಗಳು, ತಿಮ್ಮಕ್ಕನ ಪದಗಳು ಪರಮೇಶ್ವರಿಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು, ಮೂಢನಂಬಿಕೆಗಳು, ಹಾಲಿನ ತೆನೆ, ಹಾಡಲುಂಟೇ ನಿನ್ನ ಮಡಿಲಲ್ಲಿ ಮುಂತಾದ ಮಹತ್ವದ ಕೃತಿಗಳನ್ನು ರಚಿಸಿದ್ದೇ ಅಲ್ಲದೆ ಜಾನಪದ ಗೀತೆ, ಕಥನ ಗೀತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಮಾಡಿದ್ದಾರೆ. ಅವರಿಂದ  ಕಾವ್ಯ, ನಾಟಕ, ಕಥೆ, ಲಘು-ಬರಹ, ವ್ಯಕ್ತಿ ಚಿತ್ರ, ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರಗಳಲ್ಲಿಯೂ ಸಾಹಿತ್ಯ ಸೇವೆ ಸಂದಿವೆ.  2005ರಲ್ಲಿ ಈ ಲೋಕವನ್ನಗಲಿದರು.

1928: ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯತ್ವದೊಂದಿಗೆ ಅನೇಕ ರಾಗಗಳನ್ನು ಸಾಕ್ಷಾತ್ಕರಿಸಿಕೊಂಡು ನಾಕೋಡ ಅವರು ಪಂಚಾಕ್ಷರಿ ಗವಾಯಿಗಳು ಪ್ರಾರಂಭಿಸಿದ್ದ ‘ಶ್ರೀ ಕುಮಾರೇಶ್ವರ ನಾಟ್ಯಸಂಘ’ದಲ್ಲಿ ಕಲಾವಿದರಾಗಿ ಖ್ಯಾತಿ ಗಳಿಸಿದ್ದಲ್ಲದೆ ದೇಶಾದಾದ್ಯಂತ ತಮ್ಮ ಸಂಗೀತ ಕಛೇರಿಗಳನ್ನು ಮೊಳಗಿಸಿ ಪ್ರಖ್ಯಾತರಾಗಿದ್ದರು. ಕರ್ನಾಟಕ ಸಂಗೀತ ನಾಟಕ ಅಕಾಡಮಿ ‘ಸಂಗೀತ ಕಲಾತಿಲಕ’ ಸೇರಿದಂತೆ ಅನೇಕ ಗೌರವಗಳು ಅರ್ಜುನ ಸಾ ನಾಕೋಡರಿಗೆ ಸಂದಿದ್ದವು.  ಜನವರಿ 4, 2001ರ ವರ್ಷದಲ್ಲಿ ಈ ಲೋಕವನ್ನಗಲಿದರು.

1937: ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ  ಹೀಗೆ ವಿವಿಧಮುಖೀ ವಿದ್ವಾಂಸರೂ, ಸಾಹಿತ್ಯದ ಔನ್ನತ್ಯದ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ  ಡಾ.  ಚಂದ್ರಶೇಖರ ಕಂಬಾರರು  ಬೆಳಗಾವಿಯ ಘೋಡಗೇರಿಯಲ್ಲಿ ಜನಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾದವರು. ಸರ್ಕಾರದ ಹಲವು ಅಕಾಡೆಮಿಗಳ ಪದಾಧಿಕಾರಿಗಳಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಹೀಗೆ  ವಿವಿಧ ರಂಗಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.   ಸುಮಾರು ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ.  5 ಚಲನ ಚಿತ್ರಗಳನ್ನೂ, 8 ಸಾಕ್ಷಚಿತ್ರಗಳನ್ನೂ ತಯಾರಿಸಿದ್ದಾರೆ.  ವಿಶ್ವದಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.  ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.

1940: ಭಾರತೀಯ ಮೂಲದ ಅಮೆರಿಕಾ ಪ್ರಜೆ ಶ್ರೇಷ್ಠ ಗಣಿತಜ್ಞ ಎಸ್. ಆರ್. ಶ್ರೀನಿವಾಸ ವರದನ್ ಅವರು ಚೆನ್ನೈನಲ್ಲಿ ಜನಿಸಿದರು. ಗಣಿತದ ‘ಸಂಭವನೀಯತಾ ಸಿದ್ಧಾಂತ’ (ಪ್ರಾಬಬಲಿಟಿ ಥಿಯರಿ)ಗಳಿಗೆ ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ ಅದರಲ್ಲೂ ಪ್ರಮುಖವಾಗಿ ‘ಮಾರ್ಟಿಂಗೇಲ್ ಸಮಸ್ಯೆಗಳು’ ಮತ್ತು  ‘ಲಾರ್ಜ್ ಡೀವಿಯೇಶನ್’ ಕುರಿತಾದ ಶ್ರೇಷ್ಠ ಕೊಡುಗೆಗಳಿಗಾಗಿ  ವಿಶ್ವಪ್ರಸಿದ್ಧಿ ಪಡೆದಿದ್ದಾರೆ.  ವಿಜ್ಞಾನ, ಸಂಶೋಧನೆ, ತಂತ್ರಜ್ಞರಿಗೆ ಅಮೇರಿಕದಲ್ಲಿ ಸಲ್ಲುವ ಅತ್ಯುನ್ನತ ಗೌರವವಾದ ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’,  ಭಾರತ ಸರ್ಕಾರದ ಪದ್ಮಭೂಷಣ, ಏಬೆಲ್ ಪ್ರೈಜ್, ಸ್ಟೀಲ್ ಪ್ರೈಜ್, ಬರ್ಕ್ ಹಾಫ್ ಪ್ರೈಜ್ ಮುಂತಾದ ಅನೇಕ ಪ್ರಶಸ್ತಿಗಳೂ,  ರಾಯಲ್ ಸೊಸೈಟಿ ಒಳಗೊಂಡಂತೆ ವಿಶ್ವದ ಪ್ರತಿಷ್ಟಿತ ಸಂಸ್ಥೆಗಳ  ಫೆಲೋಷಿಪ್ ಗೌರವಗಳೂ ಅವರದ್ದಾಗಿವೆ.

Categories
e-ದಿನ

ಜನವರಿ-01

ಪ್ರಮುಖಘಟನಾವಳಿಗಳು:

ಕ್ರಿಸ್ತಪೂರ್ವ 45: ರೋಮನ್ ಚಕ್ರಾಧಿಪತ್ಯವು ಜೂಲಿಯನ್ ಕ್ಯಾಲೆಂಡರನ್ನು ತನ್ನ ಸಾರ್ವಜನಿಕವಾಗಿ   ಅಳವಡಿಸಿಕೊಂಡು, ಜನವರಿ 1ನೇ ದಿನಾಂಕವನ್ನು ವರ್ಷದ ಪ್ರಾರಂಭದ ದಿನ ಎಂದು ಘೋಷಿಸಿತು.

1582: ಫ್ರಾನ್ಸ್, ಪೋರ್ಚುಗಲ್, ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂದು, ಜನವರಿ 1 ದಿನ ‘ಹೊಸ ವರ್ಷದ ದಿನ’ವೆಂದು ಪರಿಗಣಿತಗೊಂಡಿತು. ಗ್ರೇಟ್ ಬ್ರಿಟನ್ ದೇಶವು ಈ ಪದ್ಧತಿಯನ್ನು  1752ರಲ್ಲಿ ಅಂಗೀಕರಿಸಿತು. ಗ್ರೆಗೋರಿಯನ್ ಕ್ಯಾಲೆಂಡರ್ ಬಹುತೇಕವಾಗಿ ವಿಶ್ವದೆಲ್ಲೆಡೆ ಅಳವಡಿತಗೊಂಡಿದೆ. ಅಲೋಸಿಯಸ್ ಲಿಲಿಯಸ್ಎಂಬಾತನಿಂದ  ರೂಪಿಸಲ್ಪಟ್ಟ  ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ವ್ಯಾಪ್ತಿಯನ್ನು ಜೂಲಿಯನ್ ಕ್ಯಾಲೆಂಡರಿನಿಂದ ಶೇಕಡಾ 0.002ರಷ್ಟು ಬದಲಿಸಿಕೊಂಡಿದೆ. ಪೋಪ್ ಗ್ರೆಗೋರಿ-13, ಈ ಪದ್ಧತಿಯ ಅನುಸರಣೆಯನ್ನು  ಅಕ್ಟೋಬರ್ 1582 ವರ್ಷದಲ್ಲಿ ಆದೇಶಿಸಿದರು.  ಹೀಗಾಗಿ ಅವರ ಹೆಸರನ್ನೇ ಪಡೆದುಕೊಂಡ ಈ ಪದ್ಧತಿ ‘ಗ್ರೆಗೋರಿಯನ್ ಕ್ಯಾಲೆಂಡರ್’ ಆಗಿದೆ.

1772: ಪ್ರಥಮ ಬಾರಿಗೆ ಟ್ರಾವೆಲರ್ಸ್ ಚೆಕ್ಕುಗಳು ಲಂಡನ್ನಿನಲ್ಲಿ ಬಳಕೆಗೆ ಬಂದವು. ಪ್ರಯಾಣದಲ್ಲಿರುವಾಗ ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗುವುದನ್ನು ತಪ್ಪಿಸಲು ನಿಗದಿತ ಹಣಕಾಸು ವಿನಿಮಯ ಕೇಂದ್ರಗಳಲ್ಲಿ ನಗದು ಮಾಡಿಕೊಳ್ಳಬಹುದಾದ ಈ ಟ್ರಾವೆಲರ್ಸ್ ಚೆಕ್ಕುಗಳನ್ನು, ಪ್ರಾರಂಭಿಕವಾಗಿ 90 ವಿವಿಧ ನಗರಗಳಲ್ಲಿ ನಗದು ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಟ್ರಾವೆಲರ್ಸ್ ಚೆಕ್ಕುಗಳು 20ನೇ ಶತಮಾನದ ಅಂತ್ಯದವರೆವಿಗೂ ಪ್ರಾಮುಖ್ಯತೆ ಹೊಂದಿತ್ತು.  ಮುಂದುವರೆದ  ಅಂತರರಾಷ್ಟ್ರೀಯ ಮಟ್ಟದ  ಬ್ಯಾಂಕಿಂಗ್ ಮತ್ತು ವಾಣಿಜ್ಯ ವ್ಯವಹಾರದ ಆಧುನಿಕ ವ್ಯವಸ್ಥೆಯ ಮಾದರಿಗಳಾದ ವಿವಿಧ ಕಾರ್ಡುಗಳು ಮತ್ತು ಅಂತರಜಾಲ ಹಣ ವರ್ಗಾವಣೆ ವ್ಯವಸ್ಥೆಗಳ ಚಲಾವಣೆಯಿಂದ, ‘ಟ್ರಾವೆಲರ್ಸ್ ಚೆಕ್’ ಉಪಯೋಗ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖಗೊಂಡಿದೆ.

1788: ಪ್ರಸಿದ್ಧ ವಾರ್ತಾಪತ್ರಿಕೆ ‘ದಿ ಟೈಮ್ಸ್’ನ ಮೊದಲ ಸಂಚಿಕೆ ಇಂಗ್ಲೆಂಡಿನಲ್ಲಿ ಪ್ರಕಟವಾಯಿತು.  1785ರ ವರ್ಷದಲ್ಲಿ ಪ್ರಾರಂಭಗೊಂಡ ಈ  ಪತ್ರಿಕೆ ಪ್ರಾರಂಭಿಕ ವರ್ಷಗಳಲ್ಲಿ  ‘ದಿ ಡೈಲಿ ಯೂನಿವರ್ಸಲ್ ರಿಜಿಸ್ಟರ್’ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು.

1808: ಅಮೆರಿಕವು ಜೀತದಾಳುಗಳನ್ನು ಆಮದು ಮಾಡಿಕೊಳ್ಳುವ ಪದ್ಧತಿಯನ್ನು ನಿಲ್ಲಿಸಿತು.

1877: ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಯನ್ನು ‘ಭಾರತದ ರಾಣಿ’ ಎಂದು ಘೋಷಿಸಲಾಯಿತು.

1906: ಬ್ರಿಟಿಷ್ ಆಡಳಿತದ ಭಾರತ ಸರ್ಕಾರವು ಅಧಿಕೃತವಾಗಿ ” ಭಾರತೀಯ ಕಾಲಮಾನ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ಅನ್ನು ಅಳವಡಿಸಿಕೊಂಡಿತು.

1949: ವಿಶ್ವಸಂಸ್ಥೆಯ ಯುದ್ಧವಿರಾಮದ ಆದೇಶದಂತೆ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಮಧ್ಯರಾತ್ರಿಗೆ ಒಂದು ನಿಮಿಷ ಮುಂಚಿತವಾಗಿ ಕಾಶ್ಮೀರದಲ್ಲಿನ ಯುದ್ಧವನ್ನು ನಿಲ್ಲಿಸಿದವು.

1978: ಏರ್ ಇಂಡಿಯಾ 747 ‘ಎಂಪರರ್ ಅಶೋಕ ವಿಮಾನವು ಮುಂಬೈ ಬಳಿ ಸಮುದ್ರಕ್ಕೆ ಅಪ್ಪಳಿಸಿ ಅದರಲ್ಲಿದ್ದ 213 ಪ್ರಯಾಣಿಕರು ಮೃತರಾದರು.

1995: ಅಂತರರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳನ್ನು ನಿಯಂತ್ರಿಸುವ ‘ವಿಶ್ವ ವಾಣಿಜ್ಯ ಒಕ್ಕೂಟ’ WTO (ದಿ ವರ್ಲ್ಡ್ ಟ್ರೇಡ್ ಆರ್ಗನೈಸೇಷನ್) ಅಸ್ತಿತ್ವಕ್ಕೆ ಬಂತು. ಈ ಒಕ್ಕೂಟದ ಪ್ರಧಾನ ಕಚೇರಿ ಸ್ವಿಟ್ಜರ್ ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿದೆ.

1999: ಹನ್ನೊಂದು ಐರೋಪ್ಯ ರಾಷ್ಟ್ರಗಳು `ಯುರೋ’ ಹೆಸರಿನ ಏಕರೂಪ ಹಣದ ಚಲಾವಣೆಯನ್ನು ಜಾರಿಗೆ ತಂದವು.

2001: ಕಲ್ಕತ್ತಾ ನಗರವನ್ನು ‘ಕೊಲ್ಕತ್ತಾ’ ಎಂದು ಮರುನಾಮಕರಣಗೊಂಡಿತು.

2000: ಎಲ್ಲ ಎಲೆಕ್ಟ್ರಾನಿಕ್ ವಾಣಿಜ್ಯ  ವ್ಯವಹಾರಕ್ಕೆ ಅಂತಾರಾಷ್ಟ್ರೀಯ ಮಾನಕವಾಗಿ ಬ್ರಿಟನ್ನಿನಲ್ಲಿ ‘ಗ್ರೀನ್-ವಿಚ್ ಎಲೆಕ್ಟ್ರಾನಿಕ್ ಟೈಮ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ಜಗತ್ತಿನಾದ್ಯಂತ ಇರುವ ಇಂಟರ್ ನೆಟ್ ಸೇವಾ ಮಾರಾಟಗಾರರು ಮತ್ತು ಬಳಕೆದಾರರು,  ಒಂದೇ ನಿರ್ದಿಷ್ಟ ಕಾಲಮಾಪನ ವ್ಯವಸ್ಥೆಯಲ್ಲಿ  ವೇಳೆಯನ್ನು ಅನುಸರಿಸುವುದು ಸಾಧ್ಯವಾಗಿದೆ.

ಪ್ರಮುಖಜನನ/ಮರಣ:

1863: ಫ್ರೆಂಚ್ ಇತಿಹಾಸಕಾರರೂ, ಶಿಕ್ಷಣ ತಜ್ಞರೂ, ಅಂತರರಾಷ್ಟ್ರೀಯ ಒಲಿಂಪಿಕ್ ” open=”no”]<p>ಸಮಿತಿಯ ಸಂಸ್ಥಾಪಕರೂ ಆದ  ಪಿಯೆರ್ರೆ ಡಿ ಕೌಬರ್ಟಿನ್ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು.

1892: ಮಹಾತ್ಮ ಗಾಂಧೀಜಿಯವರ ಆಪ್ತ ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ಗಾಂಧೀಜಿಯವರ ಬದುಕನ್ನು ಆಪ್ತವಾಗಿ ದಾಖಲಿಸಿದ, ಸ್ವಾತಂತ್ರ್ಯ ಹೋರಾಟಗಾರ ಮಹದೇವ ದೇಸಾಯಿ ಅವರು ಗುಜರಾತಿನ ಸೂರತ್ ಜಿಲ್ಲೆಗೆ ಸೇರಿದ ಸರಸ್ ಎಂಬಲ್ಲಿ ಜನಿಸಿದರು.  ಮಹದೇವ ದೇಸಾಯಿ ಮತ್ತು ಅವರ ಪತ್ನಿ ಇಬ್ಬರೂ ಗಾಂಧೀಜಿಯವರ ಆಶ್ರಮದಲ್ಲಿದ್ದು ಅಪಾರ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾದರು.  ದೇಸಾಯಿ ಅವರು 13 ನವೆಂಬರ್ 1917ರ ದಿನದಿಂದ ತಾವು ನಿಧನರಾಗುವ ಮುನ್ನಾದಿನವಾದ 14 ಆಗಸ್ಟ್ 1942ರವರೆಗೂ ಗಾಂಧೀಜಿಯವರ ದಿನಚರಿಯನ್ನು ಕಾಲಾನುಕ್ರಮದ ಘಟನೆಗಳಾಗಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.  ಗಾಂಧೀಜಿಯವರ ಜೊತೆ ಆಘಾಖಾನ್ ಅರಮನೆಯಲ್ಲಿ ಬಂಧಿತರಾಗಿದ್ದ ದೇಸಾಯಿ ಅವರು ಆಗಸ್ಟ್ 15, 1942ರಂದು ಹೃದಯಾಘಾತದಿಂದ ನಿಧನರಾದರು.  ಮಹದೇವ ದೇಸಾಯಿ ಅವರ ಜೀವನ ಚರಿತ್ರೆಯನ್ನು ‘ದಿ ಫೇರ್ ಅಂಡ್ ದಿ ರೋಸ್’ ಹೆಸರಿನಲ್ಲಿ ಅವರ ಪುತ್ರ ನಾರಾಯಣ ದೇಸಾಯಿ ಅವರು ರಚಿಸಿದ್ದಾರೆ.

1894: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಜನಿಸಿದರು. (Quantum Theory) ಕ್ವಾಂಟಮ್ ಚಲನವನ್ನಾಧರಿಸಿದ ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ ಪ್ರವರ್ತಕರು. ‘ಯಾವುದೇ ನಿಶ್ಚಿತ ಸ್ಥಿತಿಯಲ್ಲಿ ಇರಬಹುದಾದ ಪೋಟಾನ್‌ಗಳ ಸಂಖ್ಯೆಗೆ ಮಿತಿ ಇರುವುದಿಲ್ಲ’ ಎಂದು ವಿಜ್ಞಾನ ಕ್ಷೇತ್ರದಲ್ಲಿ ಬೋಸ್ ನಿರೂಪಿಸಿದರು. ಫೋಟಾನ್‌ಗಳಂಥ ಕಣಗಳು ಮುಂದೆ ‘ಬೋಸಾನ್’ಗಳೆಂದು ಹೆಸರಾದುವು. ಬೋಸ್ ಅವರ ಸಂಶೋಧನೆಯನ್ನು ಮೆಚ್ಚಿದ ಐನ್‌ಸ್ಟೈನ್ ಅವರು ಫೋಟಾನ್‌ಗಳ ಶಕ್ತಿಯ ಹಂಚಿಕೆಯ ಅಧ್ಯಯನವನ್ನು ಪರಮಾಣುಗಳಿಗೂ ವಿಸ್ತರಿಸಿದರು. ಹೀಗೆ ಹುಟ್ಟಿಕೊಂಡ ಶಕ್ತಿ ಹಂಚಿಕೆಯ ಕ್ರಮ ‘ಬೋಸ್-ಐನ್‌ಸ್ಟೈನ್  ಸ್ಟಾಟಿಸ್ಟಿಕ್ಸ್’ ಅಥವಾ ‘ಬೋಸ್ ಐನ್‌ಸ್ಟೈನ್ ಹಂಚಿಕೆ’ ಎಂದೇ ಖ್ಯಾತವಾಯಿತು. ಈ ಹಂಚಿಕೆಯನ್ನು ಅವಲಂಬಿಸಿಯೇ ‘ಬೋಸ್ ಸಾಂದ್ರೀಕರಣ’ [ಬೋಸ್ ಕಂಡೆನ್ಸೇಷನ್] ಎಂಬ ವಿಶಿಷ್ಟ ವಸ್ತುಸ್ಥಿತಿಯನ್ನು ಐನ್‌ಸ್ಟೈನ್ 1925ರಲ್ಲಿ ಕಲ್ಪಿಸಿದರು. 1995ನೇ ಜೂನ್ 5 ರಂದು ಕೊಲರಾಡೊ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ  ಶುದ್ಧವಾದ ಬೋಸ್ ಸಾಂದ್ರೀಕರಣ ಸಾಧ್ಯವಾಯಿತು.

1895: ದೀರ್ಘ, ಸುಸ್ಥಿರ, ಮೋಹಕ ದಾಖಲೆಯನ್ನು ಕರ್ನಾಟಕ ಗೀತದಲ್ಲಿ ಮೂಡಿಸಿದ ಪ್ರಮುಖರಲ್ಲೊಬ್ಬರಾದ ಪಿಟೀಲು ವಾದಕ ಟಿ. ಚೌಡಯ್ಯನವರು ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ಬಿಡಾರಂ ಕೃಷ್ಣಪ್ಪನವರ  ಬಳಿ ಸುದೀರ್ಘ ಕಾಲ ಸಂಗೀತವನ್ನು ತಪಸ್ಸಿನಂತೆ ಅಭ್ಯಾಸ ಮಾಡಿದ ಚೌಡಯ್ಯನವರು ಕಛೇರಿಗಳಲ್ಲಿ ಪಿಟೀಲಿನಲ್ಲಿ ನಾಲ್ಕು ತಂತಿಗಳ ಬದಲಿಗೆ ಏಳು ತಂತಿಗಳನ್ನು ಬಳಕೆಗೆ ತಂದು ಪ್ರಸಿದ್ಧಿ ಪಡಿಸಿದರು. ಸ್ವಯಂ ವೀಣೆ ಶೇಷಣ್ಣನವರೇ  ಚೌಡಯ್ಯನವರ ಸಪ್ತತಂತಿಗಳಿಂದ ಮೂಡಿಬಂದ ನಾದ ಸೊಗಸಾಗಿದೆ ಎಂದು ಬೆನ್ನುತಟ್ಟಿದರು. ತನಿವಾದ್ಯ ಹಾಗೂ ಪಕ್ಕವಾದ್ಯ ಕಲಾವಿದರಾಗಿ ತಮ್ಮ ಕಾಲದ ಎಲ್ಲಾ ವಿದ್ವಾಂಸರ ನಡುವೆಯೂ ಅವರು ಅಪಾರ  ಮೆಚ್ಚುಗೆ ಗಳಿಸಿದ್ದರು. ‘ವಾಣಿ’ ಎಂಬ ಚಲನಚಿತ್ರದಲ್ಲಿ ಸಂಗೀತಗಾರರಾಗಿ ಇವರ ಅಭಿನಯ ಅಪಾರ ಜನಪ್ರಿಯತೆ ಗಳಿಸಿತ್ತು.  ಮೈಸೂರು ಮಹಾರಾಜರಾದ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಂಗೀತ ರತ್ನ ಬಿರುದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಮದರಾಸ್ ಮ್ಯೂಸಿಕ್ ಅಕಾಡೆಮಿ  ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾನಿಧಿ ಬಿರುದು, ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.  1967 ಜನವರಿ 19ರಂದು ನಿಧನರಾದರು. ಅವರ ಹೆಸರಿನಲ್ಲಿ 1980ರ ವರ್ಷದಲ್ಲಿ ನಿರ್ಮಿತಗೊಂಡಿರುವ  ಟಿ.ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಿನ ಕಲಾರಸಿಕರ ಪ್ರತಿಷ್ಟಿತ ತಾಣವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಟಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರವನ್ನು ವಾದ್ಯಸಂಗೀತದಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ನೀಡಲಾಗುತ್ತಿದೆ.

1900: ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾದ ಶ್ರೀಕೃಷ್ಣ ನಾರಾಯಣ ರತನಜಂಕರ್ ಮುಂಬೈನಲ್ಲಿ ಜನಿಸಿದರು. ಆಗ್ರಾ ಘರಾಣಾದ  ದ್ರುಪದ್, ಖಯಾಲ್ ಶೈಲಿಯ ಗಾಯನಕ್ಕೆ ಹೆಸರಾದ ಅನೇಕ ಮಹತ್ವದ ಸಂಗೀತ ಸಾಧಕರ ಗುರುಗಳು. ಅವರು ಮಧ್ಯಪ್ರದೇಶದ ಇಂದಿರಾ ಸಂಗೀತ ಕಲಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ಅವರು ಸುಜನ್ ಎಂಬ ಹೆಸರಿನಲ್ಲಿ 800ಕ್ಕೂ ಕೃತಿಗಳನ್ನು ಸಂಯೋಜಿಸಿದ್ದರಲ್ಲದೆ, ಹಲವಾರು ನವೀನ ರಾಗಗಳ ಸೃಷ್ಟಿಕರ್ತರೂ  ಆಗಿದ್ದರು.  ಫೆಬ್ರುವರಿ 14, 1974ರಂದು ನಿಧನರಾದ ಅವರ ಸಾಧನೆಗೆ ಪದ್ಮಭೂಷಣ ಪ್ರಶಸ್ತಿ, ಕೇಂದ್ರ  ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್  ಹಾಗೂ ಇನ್ನಿತರ ಹಲವಾರು ಪ್ರತಿಷ್ಟಿತ ಗೌರವಗಳು ಅವರನ್ನರಸಿ ಬಂದಿದ್ದವು.

1916: ‘ಚದುರಂಗ’ ಎಂದೇ ಖ್ಯಾತರಾದ ಸುಬ್ರಹ್ಮಣ್ಯ ರಾಜು ಅರಸು ಅವರು ಹುಣಸೂರಿನ  ಕಲ್ಲಹಳ್ಳಿಯಲ್ಲಿ ಜನಿಸಿದರು.‘ಸರ್ವಮಂಗಳ’, ‘ಉಯ್ಯಾಲೆ’, ‘ವೈಶಾಖ’, ‘ಹೆಜ್ಜಾಲ’ ಕಾದಂಬರಿಗಳನ್ನು ರಚಿಸಿದರು. ಅವರ ‘ವೈಶಾಖ’ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಸಣ್ಣಕತೆ, ನಾಟಕಗಳು, ಕವನ ಸಂಕಲನವೊಂದನ್ನೂ ಸಹ ಚದುರಂಗರು ರಚಿಸಿದ್ದರು. 1998ರ ಅಕ್ಟೋಬರ್ 19ರಂದು ಮೈಸೂರಿನಲ್ಲಿ ನಿಧನರಾದ ಚದುರಂಗರು ‘ಭಕ್ತ ರಾಮದಾಸ’ ಚಿತ್ರದ ಕಥಾಲೇಖಕರಾಗಿ, ‘ಮಾಯಾ’ ಇಂಗ್ಲಿಷ್ ಚಿತ್ರದ ಸಹ ನಿರ್ದೇಶಕರಾಗಿ, ‘ಸರ್ವಮಂಗಳ’ ಮತ್ತು ‘ಉಯ್ಯಾಲೆ’ ಎಂಬ ಪ್ರಶಸ್ತಿವಿಜೇತ ಚಿತ್ರಗಳ ನಿರ್ಮಾಪಕರಾಗಿ, ವೆಂಕಟಲಕ್ಷಮ್ಮ ಮತ್ತು ಕುವೆಂಪು ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿ ಸಹ ಚಿತ್ರರಂಗದ ವಿವಿಧ ಸಾಧನೆಗಳಲ್ಲಿ ಛಾಪು ಮೂಡಿಸಿದವರು.

1931: ಕವಿ ಅರವಿಂದ ನಾಡಕರ್ಣಿಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ಓದಿನ ದಿನಗಳಲ್ಲಿ  ಗೌರೀಶ ಕಾಯ್ಕಿಣಿ, ಸು.ರಂ.ಎಕ್ಕುಂಡಿ ಅವರ ಪ್ರಭಾವದಿಂದ ಕವಿತೆಯ ಗೀಳು ಮೂಡಿತು.  ಮುಂಬೈನಲ್ಲಿ ವೃತ್ತಿ ಜೀವನದಲ್ಲಿದ್ದ ನಾಡಕರ್ಣಿ ಅವರು ಮುಂಬೈ ಕನ್ನಡ ಸಂಘದ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು. ಹಲವು ವೈಚಾರಿಕ ಲೇಖನಗಳು ಮತ್ತು ಕವನ ಸಂಕಲನಗಳನ್ನು ರಚಿಸಿರುವ ಇವರಿಗೆ ಭಟ್ಕಳದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಸಮ್ಮೇಳದ ಅಧ್ಯಕ್ಷತೆ, ಶಂಬಾ ಜೋಶಿಯವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ 1981 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ‘ಆತ್ಮಭಾರತ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಗೌರವಗಳು ಸಂದಿದ್ದವು. 2008ರ ಮೇ 19ರಂದು ಈ ಲೋಕವನ್ನಗಲಿದರು.

1944: ಇಂಗ್ಲಿಷ್ ಶಿಲ್ಪಿ ಸರ್ ಎಡ್ವಿನ್ ಲ್ಯುಟಿಯೆನ್ಸ್ (1869-1944) ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು. ಅವರು ನವದೆಹಲಿ ನಗರ ಯೋಜನೆ ಹಾಗೂ ರಾಷ್ಟ್ರಪತಿ ಭವನದ (ಮೊದಲಿಗೆ ವೈಸ್ ರಾಯ್ ಹೌಸ್) ವಿನ್ಯಾಸಕ್ಕಾಗಿ ಖ್ಯಾತರಾದವರು.

1955: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್  ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು. ಅನೇಕ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದ ಭಟ್ನಾಗರ್ ಅವರು  ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿ  ಸ್ವತಂತ್ರ ಭಾರತದ ಪ್ರಪ್ರಥಮ ‘ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್.ಐ.ಆರ್) ಸಂಸ್ಥೆಯ ಪ್ರಥಮ ಡೈರೆಕ್ಟರ್ ಜನರಲ್  ಹುದ್ದೆಯನ್ನು ನಿರ್ವಹಿಸಿದ್ದರಲ್ಲದೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ಪ್ರಥಮ ಚೇರ್ಮನ್ ಆಗಿದ್ದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧಕರಿಗೆ  ಪ್ರತಿಷ್ಟಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ನೀಡಲಾಗುತ್ತಿದೆ.

1879: ಪ್ರಸಿದ್ಧ ಇಂಗ್ಲಿಷ್ ಸಾಹಿತಿ ಇ. ಎಮ್. ಫಾರ್ಸ್ಟರ್ ಲಂಡನ್ನಿನಲ್ಲಿ ಜನಿಸಿದರು. ಅವರು  20 ನೇ ಶತಮಾನದ ಬ್ರಿಟಿಷ್ ಸಮಾಜದಲ್ಲಿ ವ್ಯಾಪಕವಾಗಿದ್ದ  ವರ್ಗ ಭಿನ್ನತೆ ಮತ್ತು ಬೂಟಾಟಿಕೆಗಳನ್ನು ಮಾರ್ಮಿಕವಾಗಿ  ಅಭಿವ್ಯಕ್ತಿಸುವ ತಮ್ಮ  ಸಮರ್ಥ ಬರವಣಿಗೆಗಳಿಂದ  ಪ್ರಸಿದ್ಧಿ ಪಡೆದಿದ್ದಾರೆ. 1924ರಲ್ಲಿ ಅವರು ರಚಿಸಿದ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿ  ಅಪಾರ  ಯಶಸ್ಸು ಪಡೆಯಿತು.   ವೇರ್ ಏಂಜೆಲ್ಸ್ ಫಿಯರ್ ಟು ಟ್ರೀಡ್, ದಿ ಲಾಂಗೆಸ್ಟ್ ಜರ್ನಿ, ಎ ರೂಮ್ ವಿತ್ ಎ ವ್ಯೂ,  ಹೊವಾರ್ಡ್ಸ್  ಎಂಡ್, ಮೌರೈಸ್  ಅವರ ಇತರ ಕಾದಂಬರಿಗಳು.   ಅನೇಕ ಕಥಾ ಸಂಕಲನಗಳು, ನಾಟಕಗಳು, ಲಲಿತ ಪ್ರಬಂಧಗಳು, ಪ್ರವಾಸಿ ಬರಹಗಳು ಮತ್ತು ಇನ್ನಿತರ ಹಲವಾರು ರೀತಿಯ ಬರಹಗಳು ಸಹಾ ಅವರ ಲೇಖನಿಯಿಂದ ಹರಿದಿವೆ.  ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಅವರ ಹೆಸರು 16 ಬಾರಿ ಸೂಚಿಸಲ್ಪಟ್ಟಿತ್ತು.  ಜೂನ್ 7, 1970ರಲ್ಲಿ ನಿಧನರಾದರು.
ದಿನಾಚರಣೆಗಳು:

ಪಬ್ಲಿಕ್ ಡೊಮೇನ್ ಡೇ:ಕಾಪಿರೈಟ್ ಕಾನೂನುಗಳಿಗೆ ಒಳಪಟ್ಟ ಪ್ರಕಟಣೆಗಳು ಆಯಾ ದೇಶಗಳ ಕಾನೂನುಗಳಿಗೆ ಅನುಗುಣವಾಗಿ ನಿಯಮಿತ ವರ್ಷಾವಧಿಗಳ ನಂತರದಲ್ಲಿ  ಜನವರಿ 1 ದಿನಾಂಕದಂದು ಮುಕ್ತ ಸಾರ್ವಜನಿಕ ವಲಯಕ್ಕೆ ಅಥವ ಪಬ್ಲಿಕ್ ಡೊಮೇನಿಗೆ  ಬರುತ್ತವೆ.  ಹೀಗಾಗಿ  ಈ ದಿನವನ್ನು ‘ಪಬ್ಲಿಕ್ ಡೊಮೇನ್ ಡೇ’ ಎಂದು ಪರಿಗಣಿಸಲಾಗುತ್ತಿದೆ.