ಕಿಟ್ಟಿಯ ಕಥೆ
ಕೃತಿ – ಕಿಟ್ಟಿಯ ಕಥೆ
ಲೇಖಕರು – ಡಾ. ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
ಡಾ. ಚಂದ್ರಶೇಖರ ಕಂಬಾರ (ಜನನ – ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ ‘ಕರ್ನಾಟಕ ವಿವಿ’ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.
ಸ್ಥಾನಮಾನ
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”.
ಜನನ: ಕುವೆಂಪುರವರು ೧೯೦೪ ರ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ ೧೯೨೯ ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, ೧೯೫೫ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ಮೊದಲ ಹಂತ: ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ. ಜತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿ ಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. ೧೯೨೫ ರಲ್ಲಿ ಪ್ರಕಟವಾದ ಕುವೆಂಪುರವರ “ಬೊಮ್ಮನಹಳ್ಳಿ ಕಿಂದರಿಜೋಗಿ” ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
ಬೆಳವಣಿಗೆ: ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು “ಬೆರಳ್ಗೆ ಕೊರಳ್”,”ಶೂದ್ರ ತಪಸ್ವಿ”,”ಸ್ಮಶಾನ ಕುರುಕ್ಷೇತ್ರಂ”, “ರಕ್ತಾಕ್ಷಿ”,”ಜಲಗಾರ” ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ” ಕೊಳಲು”,”ಅಗ್ನಿಹಂಸ”,”ಅನಿಕೇತನ”,”ಅನುತ್ತರಾ”, “ಇಕ್ಷು ಗಂಗೋತ್ರಿ”, “ಕಥನ ಕವನಗಳು”,” ಕಲಾಸುಂದರಿ”, “ಕಿಂಕಿಣಿ”, “ಕೃತ್ತಿಕೆ”, “ಜೇನಾಗುವ”, “ನವಿಲು”, “ಪಕ್ಷಿಕಾಶಿ”, “ಚಿತ್ರಾಂಗದಾ” ಮೊದಲಾದ ಕವನಸಂಕಲನಗಳು, “ರಾಮಕೃಷ್ಣ ಪರಮಹಂಸ”, “ಸ್ವಾಮಿ ವಿವೇಕಾನಂದ” ಜೀವನಚರಿತ್ರೆಗಳನ್ನೂ ಇವರು ಬರೆದಿದ್ದಾರೆ.
“ನೆನಪಿನ ದೋಣಿಯಲ್ಲಿ” ಕುವೆಂಪುರವರ ಆತ್ಮಕಥೆ.
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ರಲ್ಲಿ ಪದ್ಮಭೂಷಣ
೧೯೬೪ ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
೧೯೬೮ ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ
ಮೂರು(೩) ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ
೧೯೮೭ ರಲ್ಲಿ ಪಂಪ ಪ್ರಶಸ್ತಿ
೧೯೮೯ರಲ್ಲಿ ಪದ್ಮವಿಭೂಷಣ
೧೯೯೨ ಕರ್ನಾಟಕ ರತ್ನ ಪ್ರಶಸ್ತಿ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ…’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. “ಅಭಿನವ ವಾಲ್ಮೀಕಿ” ಎಂದೇ ಜನಮಾನಸದಲ್ಲಿ ಪ್ರಸಿದ್ಧರಾದ ಕುವೆಂಪುರವರು ೧೯೯೪ ನವೆಂಬರ್ ೧೧ರಂದು ಮೈಸೂರಿನ ತಮ್ಮ ನಿವಾಸ ಉದಯರವಿಯಲ್ಲಿ ನಿಧನರಾದರು.
ಕುವೆಂಪು ಕನ್ನಡ ಅಧ್ಯಯನ ಕೇಂದ್ರ(ಮೈಸೂರು ವಿಶ್ವ ವಿದ್ಯಾನಿಲಯ),ಕುವೆಂಪು ವಿಶ್ವವಿದ್ಯಾಲಯಗಳು ಕುವೆಂಪು ಅವರ ನೆನಪನ್ನು ಉಳಿಸಿವೆ.
ಮಹಾಕಾವ್ಯ
ಖಂಡಕಾವ್ಯಗಳು
ಕವನ ಸಂಕಲನಗಳು
ಕಥಾ ಸಂಕಲನ
ಕಾದಂಬರಿಗಳು
ನಾಟಕಗಳು
ಪ್ರಬಂಧ
ವಿಮರ್ಶೆ
ಆತ್ಮಕಥೆ
ಜೀವನ ಚರಿತ್ರೆಗಳು
ಅನುವಾದ
ಭಾಷಣ-ಲೇಖನ
ಶಿಶು ಸಾಹಿತ್ಯ
ಇತರೆ
ಆಯ್ದ ಸಂಕಲನಗಳು
ಕೃತಿ:ನೆಲದ ಮರೆಯ ನಿದಾನ
ಲೇಖಕರು:, ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ : ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು
ಲೇಖಕರು : ಡಾ. ಚಂದ್ರಶೇಖರ ಕಂಬಾರ
ಕೃತಿ-ಬಣ್ಣೀಸಿ ಹಾಡವ್ವ ನನ ಬಳಗ
ಮುನ್ನುಡಿ-ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ದೇಶೀಯ ಚಿಂತನ
ಲೇಖಕರು: ಡಾ. ರಾಮ ಮನೋಹರ ಲೋಹಿಯಾ
ಕೃತಿಯನ್ನು ಓದಿ
ಕೃತಿ:ಕನ್ನಡ ಕರ್ನಾಟಕ
ಲೇಖಕರು: ಡಾ. ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ – ಐದು ದಶಕದ ಕಥೆಗಳು
ಲೇಖಕರು – ಯು.ಆರ್.ಅನಂತಮೂರ್ತಿ
ಸಂಪಾದಕರು – ಗೋಪಾಲಕೃಷ್ಣ ಅಡಿಗ, ರಾಜೀವ ತಾರಾನಾಥ
ಕೃತಿ: ಈ ವರೆಗಿನ ಹೇಳತೇನ ಕೇಳ
ಲೇಖಕರು: ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ವಾಲ್ಮೀಕಿಯ ನೆವದಲ್ಲಿ
ಲೇಖಕರು: ಯು.ಆರ್.ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ – ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ಪುಷ್ಪರಾಣಿ, ಕಿಟ್ಟೀ ಕಥೆ, ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು, ಕಾಸಿಗೊಂದು ಸೇರು
ಲೇಖಕರು – ಚಂದ್ರಶೇಖರ ಕಂಬಾರ
ಕೃತಿ-ಜೈಸಿದನಾಯ್ಕಾ
ಲೇಖಕರು-ಡಾ. ಚಂದ್ರಶೇಖರ ಕಂಬಾರ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ಕಾಲಮಾನ:
ಲೇಖಕರು: ಯು.ಆರ್.ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ-ಪಚ್ಚೆ ರೆಸಾರ್ಟ್ ಈಚಿನ ಕಥೆ/ಕವಿತೆಗಳು
ಲೇಖಕರು-ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ:ಸಮಕ್ಷಮ
ಲೇಖಕರು: ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ-ಮರವೇ ಮರ್ಮರವೇ
ಲೇಖಕರು-ಚಂದ್ರಶೇಖರ ಕಂಬಾರ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ಬೆತ್ತಲೆ ಪೂಜೆ ಯಾಕೆ ಕೂಡದು?
ಲೇಖಕರು: ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ-ದಿವ್ಯ
ಲೇಖಕರು-ಯು.ಆರ್. ಅನಂತಮೂರ್ತಿ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ:ಚಾಳೇಶ
ಲೇಖಕರು ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ಡಾ. ಚಂದ್ರಶೇಖರ ಕಂಬಾರ ಕೃತಿ ಸಂಚಯನ
ಲೇಖಕರು ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ-ಭವ
ಲೇಖಕರು-ಯು.ಆರ್. ಅನಂತಮೂರ್ತಿ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ-ತುಕ್ರನ ಕನಸು
ಲೇಖಕರು-ಡಾ. ಚಂದ್ರಶೇಖರ ಕಂಬಾರ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ
ಕೃತಿಯನ್ನು ಓದಿ
ಕೃತಿ:ಪೂರ್ವಾಪರ
ಲೇಖಕರು: ಡಾ.ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ-ಆಚೀಚೆ
ಲೇಖಕರು-ಡಾ. ಯು.ಆರ್. ಅನಂತಮೂರ್ತಿ
ಸರಣಿ-ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
ಕೃತಿ:ಮಾತು ಸೋತ ಭಾರತ
ಲೇಖಕರು ಯು.ಆರ್. ಅನಂತಮೂರ್ತಿ
ಕೃತಿಯನ್ನು ಓದಿ
೧.ಆಗಮನ
ನೀಲವ್ಯೋಮ ವಿಶಾಲ ಪಥದಲಿ
ಶ್ರಾವಣ ನೀರದ ನೀಲ ರಥದಲಿ
ಗೌರಿಗಣೇಶರು ಬರುವರದೊ!
ಭಾದ್ರಪದಾದಿಯ ಶಾದ್ವಲ ವೇದಿಯ
ಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆ
ಶ್ರೀ ಕೈಲಾಸವ ತರುವರದೊ!
ಅವರೈತರುವಾ
ಮುಗಿಲಿನ ತೇರಿಗೆ ಬೆಳ್ಳಕ್ಕಿಯ ಸಾಲೆ
ತೋರಣ ಹೂ ಮಾಲೆ;
ಕೊಕ್ಕಿನ ಕುಂಕುಮವೆರಸಿದ ಪಸುರಿನ
ಗಿಳಿವಿಂಡಕ್ಷತೆ;
ತಳಿವಳು ಬನದೇವಿ,
ಹೊಸ ಅತಿಥಿಯನೋವಿ.
ಬಿತ್ತಿದ ಗದ್ದೆಯ ಬಿತ್ತರದೆದೆಯಲಿ
ಬತ್ತದ ಪೈರಿನ ಚಿನ್ನದ ಕನಸಿನ
ಕಥೆ ಹೇಳಿ
ಸುಯ್ಯನೆ ಬೀಸುತ್ತಿದೆ ಗಾಳಿ,
ಅಲೆ ಅಲೆ ಅಲೆ ಛಂದದಲಿ,
ಆಶಾಬಂಧದಲಿ.
ಸಹ್ಯಾದ್ರಿಯ ಮಳೆನೀರ್ ತುಂಬಿದ ಹೊಳೆ
ಕಾವೇರಿ
ಕೆಳಕೆಳಗಿಳಿಯುವ ತೇರಿನೊಳಮ್ಮನ
ತೊಡೆಯೇರಿ
ಕುಳಿತ ಗಣೇಶನ ಕಣ್ಣಿನಚ್ಚರಿಗೆ
ರಜತ ರೇಖೆಯೊಲು ತೋರಿ
ಹರಿಯುತ್ತಿರುವಳು ಕನ್ನಡ ತಾಯಿಯ
ತುಂಬೆದೆ ಸೂಸಿದ ಸುಕುಮಾರಿ!
ಆ ಮುಗಿಲಿನ ತೇರ್
ನೇಸರ್ ತಿಂಗಳ್ ಅರಿಲುಗಳೂರನು ದಾಟಿ,
ಸಾಗರ ಮುದ್ರಿತ ಪೃಥಿವೀ ಗೋಲವ ಸುತ್ತಿ,
ನಾನಾ ದೇಶದ ನಾನಾ ದೃಶ್ಯವ ನೋಡಿ; —
ಪುಣ್ಯ ಹಿಮಾಚಲ ಶಿರ ಶಿಖರದೊಳವತರಿಸಿ
ಭಾರತಭೂಮಿಯ ಗಿರಿನದಿವನಗಳ ಚರಿಸಿ
ಕಡೆಗೈತಂದಿದೆ ಕನ್ನಡನಾಡನ್ ವರಿಸಿ,
ಕೈಲಾಸವನುಳಿದೈತಂದವನನ್,
ಕಂದಾ, ನಿನ್ನನ್ ಸ್ಮರಿಸಿ!
ಸುತ್ತುತ್ತಿಳಿವಾ ಮುತ್ತಿನ ತೇರ್
ಹತ್ತಿರೆ ಹತ್ತಿರೆ ಬರುತಿದೆ ಪಾರ್;
ಶ್ರಾವಣದಂತ್ಯ ಪ್ರಾತಃ ಕಾಲದ
ಚಿನ್ನದ ಬಿಸಿಲಲಿ ತಳಿಸುವ ತೇರ್;
ಭಾದ್ರಪದಾನಿಲ ಪಕ್ಷಗಲೋಲಿಹ
ಜಲಧರ ಹಂಸಗಳೆಳೆಯುವ ತೇರ್;
ನದೀ ಶರಾವತಿ ಗೇರುಸೊಪ್ಪೆಯಲಿ ತೇರ್;
ಧುಮುಧುಮುಕುವವೋಲಿಳಿಯುವ ತೇರ್;
ಬೇಲೂರಿನ ದೇವಾಲಯ ರಚನೆಗೆ
ಕನ್ನಡಿ ಹಿಡಿದಿಹ ಕನ್ನಡ ತೇರ್; —
ಅಡಕೆಯ ಹೂವಿನ ಬಮಗಾರದ ತೇರ್;
ತೆಂಗಿನ ಹೂವಿನ ಬಂಗಾರದ ತೇರ್;
ಬಾಳೆಯ ಹೂವಿನ ಸಿಂಗಾರದ ತೇರ್;
ಮಲ್ಲಿಗೆ ತಾವರೆ ಸಂಪಗೆ ಕೇದಗೆ
ಸೇವಂತಿಗೆ ಸೀತಾಳಿಯ ತೇರ್;
ಮಾವಿನ ಹಲಸಿನ ತಳಿರಿನ ತೋರಣ
ಮಿಳಿರುವ ಚಂದದ ಗಂಧದ ತೇರ್; —
ಸುತ್ತುತ್ತಿಳಿವಾ ಮುತ್ತಿನ ತೇರ್
ಬಂತದೊ, ಬಂತದೊ, ಬಂತದೊ, ಪಾರ್!
ಪೋ, ಬಳಿಸಾರ್; ಬಾ, ಬಾ, ಬಾ, ಬಳಿಸಾರ್;
ಇಳಿಯಿತು ನೆಲಮುಟ್ಟಿತು ದೇವರ ತೇರ್!
ಅದೆ ಕಾಣ್ ಪರಮೇಶ್ವರಿ, ಶಿವೆ , ಗೌರಿ,
ಶುಭಕರಿ, ಶಂಕರಿ, ಶೈಲಕುಮಾರಿ.
ಆಕೆಯ ಕೈಲಾಸದ ಮಾರಾಣಿ;
ಕಠೋರಪತದೀಂ ರುದ್ರ ಕಪರ್ದಿಯ
ಕಳೇಬರಾರ್ಧವ ಪಡೆದ ಶಿವಾಣಿ.
ವಿಶ್ವವತ್ಸಲತೆ ಮೆಯ್ವೆತ್ತಾಕೆಯೆ
ಮೋಲೋಕದ ಮಾತಾಯಿ;
ಕಾಲ್ವಿಡಿ, ಕೈಮುಗಿ; ಒಲಿ, ನಲಿ, ಮಣಿ, ಕುಣಿ;
ಮುತ್ತಿಡುವಳೊ ಮಾತಾಯಿ!
ವಿದ್ಯಾಮೂರ್ತಿ ಗಣೇಶನ ತಾಯಿ,
ಕಂದಾ,
ಬುದ್ಧಿಯನೀವಳೋ ನಿನಗೆ ಮಿಠಾಯಿ!
ಸುರ ಸೇನಾಪತಿ ಕುಮಾರ ಸ್ವಾಮಿಯ
ಪಡೆದಾ ಮಾತಯಿ
ಕ್ಷಾತ್ರತೇಜದಾ ಖಡ್ಗವನಾತ್ಮಕೆ
ಮಾಳ್ಪಳೋ ವೀರ ತುರಾಯಿ!
ತಪಸ್ವಿ ಶಿವನನೆ ತಪದಿಂ ಗೆಲ್ದಾ
ಮಹಾ ತಪಸ್ವಿನಿ ಕಲ್ಯಾಣಿ,
ಕೇಳ್, ತಂಗೀ,
ಮನದನ್ನನ ಮನವೊಲಿಸುವ ಕಲೆಯನೆ
ಕೊರಳಿಗೆ ಮಾಳ್ಪಳ್ ಕಟ್ಟಾಣಿ!
ಎಲ್ಲರು ಬನಿ; ಎಲ್ಲರು ಬನ್ನಿ;
ಹಿರಿಯರು ಬನ್ನಿ; ಕಿರಿಯರು ಬನ್ನಿ;
ಸುರುವರು ಐತನಿ:
“ನಮಸ್ಕಾರ! ನಮಸ್ಕಾರ!
ನಮಸ್ಕಾರ!” ಎನ್ನಿ!
“ನಮಸ್ಕಾರ, ನಮಸ್ಕಾರ,
ನಮಸ್ಕಾರ, ದೇವಿ!
ಮಕ್ಕಳು ನಾವ್ ಚಿಕ್ಕವರನ್
ಅಕ್ಕರೆಯಿಂದೋವಿ,
ಪೊರೆ ತಿರೆಯನ್; ಪೊರೆ ನೆರೆಯನ್;
ಪೊರೆ ನಮ್ಮನ್, ತಾಯಿ!
ತಂದೆಯ ಕಾಯ್, ತಾಯಿಯ ಕಾಯ್,
ಒಲವನ್ ಕಾಯ್, ತಾಯಿ!
ನಮಸ್ಕಾರ, ನಮಸ್ಕಾರ,
ನಮಸ್ಕಾರ, ದೇವಿ!”
೨. ಆತಿಥ್ಯ
ಓಂ ಮಂಗಳ, ಹ್ರೀಂ ಮಂಗಳ, ಓಂ ಹ್ರೀಂ ಓಂ!
ಓಂ ಸತ್ಯಕೆ, ಹ್ರೀಂ ಧರ್ಮಕೆ, ಓಂ ಹ್ರೀಂ ಓಂ!
ಒಲವಿಗೆ ಓಂ, ಚೆಲುವಿಗೆ ಓಂ, ಓಂ ಓಂ ಓಂ!
ಶಾಂತಿಗೆ ಓಂ, ಸತ್ವಕೆ ಓಂ, ಓಂ ಓಂ ಓಂ!
ವೀಣೆಯ ತನ್ನಿ; ಪಿಟೀಲನು ತನ್ನಿ;
ನಾಗಸ್ವರ ಸುರವೇಣುವ ತನ್ನಿ.
ಸಮುದ್ರ ಮಂದ್ರ ಮೃದಂಗವ ತನ್ನಿ;
ಗಂಭೀರಾಂಬುದ ಭೇರಿಯ ತನ್ನಿ.
ವೈಣಿಕ ವರ್ಯನ, ಗಾಯಕ ವರ್ಯನ.
ಕವಿ ಚಕ್ರೇಶನ ಕರೆತನ್ನಿ;
ಜಗನ್ಮಾತೆಗೆ ಗಣೇಶಗಾಥೆಯ
ಹಾಡುವ, ಕುಣಿದಾಡುವ, ಬನ್ನಿ.
ಜಯವೆನ್ನಿ!
ಶುಭವೆನ್ನಿ!
ಅರ್ಘ್ಯವ ತನ್ನಿ; ಪಾದ್ಯವ ತನ್ನಿ:
ಧೂಪ, ದೀಪ, ಪುಷ್ಪ, ಗಂಧ್,
ಓಕುಳಿಯನು ತನ್ನಿ,
ಅಮ್ಮಗೆ ಕುಶಲವೆ? ಅಯ್ಯಗೆ ಕುಶಲವೆ?
ತಂಗಿ, ತಮ್ಮ , ಅಕ್ಕ, ಅಣ್ಣ,
ಕುಶಲವೆ ಪಿತೃಗಳಿಗೆನ್ನಿ.
ಕೈಲಾಸಾದ್ರಿಗೆ ಕುಶಲವೆ ಕೇಳಿ.
ಲಕ್ಷ್ಮೀ ಸ್ವಾಮಿಗೆ ಸೌಖ್ಯವೆ ಕೇಳಿ.
ವಾಣೀಪ್ರಿಯನಿಗೆ ಶಾಂತಿಯೆ ಕೇಳಿ.
ಲೋಕೇಶ್ವರರಿಗಶೋಕವೆ ಕೇಳಿ.
ಕ್ಷೇಮಂಕರನಿಗೆ ಆ ಶಂಕರನಿಗೆ
ಸುಕ್ಷೇಮವೆ ಆದನೂ ಕೇಳಿ!
“ಕುಶಲ! ಸೌಖ್ಯ! ಶಾಂತಿ! ಕ್ಷೇಮ!”
ಎಂಬಾ ಉತ್ತರಗಳೆ ವರವಾಗಲ್,
ಕೇಳ್ದರಿಗಾಶೀರ್ವಾದಗಳಾಗಲ್,
ಮಾತೆಗೆ ವಂದಿಸಿ ಮುದತಾಳಿ!
ಬುದ್ಧಿಗಣೇಶಾ, ಸಿದ್ಧಿಗಣೇಶಾ,
ಬಾರ, ಗಣೇಶ, ದೇವಕುಮಾರ!
ವಿದ್ಯಾರ್ಥಿಯ ಸಖ, ಹೇ ವಿದ್ಯಾಸುಖ,
ಬಾರ, ವಿನಾಯಕ, ಬಾರ;
ಗೌರಿಯ ಹಣೆಯಾ ಕುಂಕುಮವೊತ್ತಿಹ
ಇಭಮುಖ ಕಮಲವ ತೋರ;
ಬ್ರಹ್ಮಚರ್ಯದಾ ಸಂಯಮ ಸಂಭವ
ವಿದ್ಯುತ್ ತೇಜವ ತಾರ;
ಬಾರ, ಗಣೇಶಾ, ಬಾರ!
ಕೈಕಾಲ್ ತೊಳೆಯಲು ಬಿಸಿನೀರಿದೆ ಕೋ;
ಒದ್ದೆಯನಾರಿಸೆ ವಸ್ತ್ರವ ಕೋ.
ಶ್ರಾವಣ ನೀರದಯಾತ್ರೆಯ ದೂರದ
ದಣಿವಾರಿಸೆ ತೃಣಮಂಚವ ಕೋ.
ಕಡುಬಿದೆ ಕೊಳ್; ಕಾಯಿದೆ ಕೊಳ್;
ಬಾಳೆಯ ಹಣ್ಣಿದೆ; ಹಲಸಿನ ಹಣ್ಣಿದೆ,
ಮಾವಿನ ಹಣ್ಣಿದೆ ಕೊಳ್;
ಕಿತ್ತಳೆ ತೊಳೆಯಿದೆ ಕೊಳ್. —
ಹಾಲಿದೆ ಕೋ; ಜೇನಿದೆ ಕೋ;
ಕಬ್ಬಿನ ರಸವಿದೆ ಕೋ.
ಬೆಲ್ಲವ ಕೋ; ಬೆಣ್ಣೆಯ ಕೋ;
ಹೆಪ್ಪಿನ ಮೊಸರಿದೆ ಕೋ;
ಶ್ಯಾಮಿಗೆ ಪಾಯಸ ಕಾಯ್ಹಾಲ್ ಇದೆ ಕೋ.
ಯಾವುದು ಬೇಕೋ? ಯಾವುದು ಸಾಕೋ?
ಹೇಳಣ್ಣಾ, ನಾಣ್ ನಿನಗೇಕೋ?
ರಜತಾದ್ರಿಯ ಸಿರಿಯನು ಕಂಡವ ನೀನ್
ನಮ್ಮ ಬಡತನಕೆ ಪೇಸುವೆಯೇನ್?
ನಿನ್ನ ತಂದೆಯಾ ಭಿಕ್ಷಾಟಯನೆ
ಕೈಕೊಂಡಿಹಳಯ್ ಭಾರತಿ ತಾನ್!
ನಿನ್ನಯ ಕೃಪೆಯಿರೆ, ದೇವಿಯ ಕೃಪೆಯಿರೆ,
ಕೈಲಾಸೇಶ್ವರ ಕೃಪೆಯಿರಲು,
ಸುರಸೇನಾಪತಿ ಕುಮಾರಸ್ವಾಮಿಯ
ಧೀರ ಕ್ಷಾತ್ರದ ಕೃಪೆಯಿರಲು.
ಬರುವಾ ಕಾಲಕೆ ಭಾರತ ಮಾತೆಗೆ
ಸ್ವಾತ್ರಂತ್ರ್ಯದ ಶ್ರೀಯೈತರಲು,
ಕಾಮಧೇನುವಿನ ಕೆಚ್ಚಲಿನಮೃತವ
ಕೊಡುವೆವು ಬೆಳ್ಳಿಯ ಬಟ್ಟಲಲಿ!
ಕಲ್ಪವೃಕ್ಷದಾ ರಸಘನ ಫಲವನೆ
ಇಡುವೆವೊ ಚಿನ್ನದ ತಟ್ಟೆಯಲಿ!
ಸ್ಕಂದನ ಹೋಲುವ ಧುರಧರವೀರರ್,
ನಿನ್ನನೆ ಹೋಲುವ ಸನ್ಮತಿ ಧೀರರ್,
ಭಾರತಾಂಬೆಯಾ ಕೀರ್ತಿಯ ಶೂರರ್
ಹುಟ್ಟಲಿ ಅವಳಾ ಹೊಟ್ಟೆಯಲಿ!
ಹಬ್ಬದ ಸಂತೋಷಕೆ ಬಂದತಿಥಿಗೆ
ಕೊರತೆಯನೊರೆದನ್, ತಪ್ಪಾಯ್ತು!
ನಾಡಿನ ಎದೆಯನ್ ಕೊರೆಯುವ ನೋವಿಗೆ
ನಾಲಗೆಯಿತ್ತನ್; ತಪ್ಪಾಯ್ತು!
ಬಡತನವಿರಲಿ, ದಾಸ್ಯವೆ ಇರಲಿ.
ಸಂಕಟವಿರಲಿ, ಏನೇ ಇರಲಿ
ನಮ್ಮಾತಿಥ್ಯಕೆ ಕುಂದಿಲ್ಲ.
ಈ ಸ್ಥಿತಿಯಲ್ಲೂ ಈ ಗತಿಯಲ್ಲೂ
ಪುಣ್ಯಭೂಮಿಯೀ ಮಕ್ಕಳು ಕೊಡುವಾ
ದಿವ್ಯಾತಿಥ್ಯಕೆ ಸಮನಿಲ್ಲ;
ಬೇರೆ ನಾಡುಗಳಿಗೆಲ್ಲಿಗೆ ಹೋಗು
ವಂಚನೆ ಕೋಟಲೆ ಹಿಂಸೆಯ ಕೂಗು!
ಇನ್ನುಳಿದಾರೊಳ್ ವೇದ ಉಪನಿಷತ್
ಭಾರತ ರಾಮಾಯಣಗಳ ರಸ ಸತ್?
ನಮ್ಮ ಮಹಾತ್ಮನ್ ಮತ್ತೆಲ್ಲಿಹನಯ್?
ಆ ಮುಕ್ತಾತ್ಮನ ಕೃಪೆ ಹಿಡಿದೆದೆ ಕಯ್
ಬಂಧನವೂ ಸ್ವಾತಂತ್ರ್ಯಕೆ ಮಿಗಿಲಯ್!
ಇದು ಪಾಶ್ಚಾತ್ಯರ ನೆಲದೊಲವಲ್ಲಯ್;
ಈ ಹೆಮ್ಮಗೆ ಪರಮಾರ್ಥವೆ ಉಸಿರಯ್!
ಅದರಿಂದಾಮರ್ಪಿಪ ನೈವೇದ್ಯಮ್
ಇನ್ನುಳಿದಾರ್ಗಂ ದುಸ್ಸಾಧ್ಯಮ್:
ಆತ್ಮದ ಬೆಳ್ಳಿ, ಅತ್ಮದ ಚಿನ್ನ,
ಪುಣ್ಯಲೋಚನೆಗಳ ಪರಮಾನ್ನ,
ನಾಂ ನಿಮಗಿಕ್ಕುವ ಅಮೃತಾನ್ನ! —
ವಾಗ್ದೇವಿಯ ವಾತ್ಸಲ್ಯದ ವತ್ಸನ್
ರಚಿಸುತ್ತಿಹ ಹೊಸ ರಾಮಾಯಣವನ್
ಓದುವೆ ಬಾ, ತಾಯೀ.
ಕೈಲಾಸದೊಳೂ ಯಾರೂ ಕೇಳದ
ಹೊಸಗನ್ನಡ ಹೊಸ ಹೊಸ ಹಾಡುಗಳನ್
ಹಾಡುವೆ ಕೇಳ್, ತಾಯಿ.
ನೀನೂ ನಿನ್ನೀ ಮಗವೂ ಕೇಳಲ್
ಮತ್ಕೃತಿ ಕೃತಕೃತ್ಯಮ್!
ನಿಮ್ಮೀರ್ವರ ಬಗೆಯೊಳಗದು ಬಾಳಲ್
ನನ್ನಾಕೃತಿ ಸತ್ಯಮ್;
ಮೇಣ್ ನಿತ್ಯಮ್:
ದೇವರ ಕಿವಿ ಕೇಳಲ್
ದೇವರ ಬಗೆ ತಾಳಲ್,
ಕವಿಕಲ್ಪನೆ ತಾಂ ಘನತರ ಸತ್ಯಮ್!
ಕೇಳ್, ಸತ್ಯಕೆ ಸತ್ಯಮ್!
೩. ಪ್ರಯಾಣ
ಏತರ ವೈರಾಗಿಯೊ ಅವನು!
ನೀವ್ ಬಂದೆಲ್ಲಾ
ವಾರವು ಮುಗಿದಿಲ್ಲ.
ದೂತರ ಹಿಂಗಡೆ ದೂತರನಟ್ಟಿ.
ಅಲ್ಲಿಗೆ ಇಲ್ಲಿಗೆ ಸೇತುವೆ ಕಟ್ಟಿ,
ಕಾತರನಾದನೆ ಪರಶಿವನು?
ಯೋಗಕ್ಷೇಮವೊ? ಯೋಗಿಯ ಪ್ರೇಮವೋ?
ಯಾವುದೊ? ನಮಗಿನಿತನು ತಿಳುಹಿ.
ಸತಿಗೋ? ಸುತಗೋ? ಅಂತೂ ವಿರಹಿ
ಯತಿಗಳ ಯತಿಯಾಗಿಹ ಅವನೂ!
ಇಂದೇ ಬೀಳ್ಕೊಳ್ಳುವಿರೇನ್, ತಾಯಿ?
ಬೀಳ್ಕೊಳಿ ಎನ್ನಲ್ ಬರುವುದೆ ಬಾಯಿ?
ಸ್ವರ್ಗವೆ ಕಿಂಕರವಾಗಿತ್ತೆಮಗೆ;
ಕೈಲಾಸವೆ ಕಯ್ಗೂಡಿತ್ತೆಮ್ಮಿ ಬಡಮನೆಗೆ,
ತಾಯಿ, ನೇವೈತಂದು;
ನಿಮ್ಮಿ ಸಂಗದ ಪುಣ್ಯಸ್ಮರಣೆಯೆ ಜೊತೆ ಬಂದು
ಸವಿಸೊದೆಯಾಗ್ಲಿ ಈ ವಿಷು* ಸಂವತ್ಸರವೊಂದು
ಸುಖವಾಗಲಿ ಗಾಳಿಯ ಬಟ್ಟೆಯ ಪಯಣಂ;
ಸುಖವಾಗಲಿ ಮೋಡದ ನಾಡಿನ ಪಯಣಂ;
ಸುಖವಾಗಲಿ ರವಿ ಶಶಿ ತಾರೆಯ ಪಯಣಂ;
ಸುಖವಾಗಲಿ ಕೈಲಾಸಕೆ ಶ್ರೀ ಪಯಣಂ!
ದೇವರ ದೇವಗೆ, ಲೋಕವ ಕಾವಗೆ,
ಕಯ್ ಮುಗುದೆವು, ಹೇಳಿ.
ತೃಪ್ತಿಯ ಕೃಪೆಗೂ ಶಾಂತಿಯ ಕೃಪೆಗೂ
ವಂದಿಸಿದೆವು, ಹೇಳಿ.
ವರುಷ ವರುಷವೂ ತಮ್ಮಿರ್ವರನೂ
ತಪ್ಪದೆ ಕಳಿಸುವ ಕೃಪೆಮಾಡಲ್
ತಪ್ಪದೆ ನೀವ್ ಹೇಳಿ.
ವರುಷ ವರುಷವೂ ನಮ್ಮೆಲ್ಲರನೂ
ತಪ್ಪಿರೆ ಮನ್ನಿಸಿ ಕಾಪಾಡಲ್
ತಪ್ಪದೆ ನೀವ್ ಕೇಳಿ.
ನೀವ್ ಬರದಿದ್ದರೆ, ನೀವ್ ತರದಿದ್ದರೆ,
ದರಿದ್ರಮಿ ಧರೆ, ದೇವಿ!
ತಪ್ಪದೆ ಬನ್ನಿ; ತಪ್ಪದೆ ಬನ್ನಿ;
ತಪ್ಪದೆ ನಮ್ಮನ್ ಓವಿ!
ನಮಸ್ಕಾರ,ನಮಸ್ಕಾರ,
ನಮಸ್ಕಾರ, ದೇವಿ! —
ಏರಿತು ತೇರ್, ಮೋಡದ ತೇರ್,
ನೋಡದೊ ದೂರ, ದೂರ, ದೂರ.
ನಮಸ್ಕಾರ, ನಮಸ್ಕಾರ,
ಶಿವಕುಮಾರ!
ನಮಸ್ಕಾರ, ನಮಸ್ಕಾರ,
ನಮಸ್ಕಾರ!
೧
ತುಂಗಾತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ.
ಅಲ್ಲೇನಿಲಿಗಳ ಕಾಟವೆ ಕಾಟ,
ಅಲ್ಲಿಯ ಜನಗಳಿಗತಿಗೋಳಾಟ:
ಇಲಿಗಳು!
ಬಡಿದವು ನಾಯಿಗಳ!
ಇಲಿಗಳು!
ಕಡಿದವು ಬೆಕ್ಕುಗಳ!
ಕೆಲವನು ಕೊಂದುವು, ಕೆಲವನು ತಿಂದುವು,
ಕೆಲವನು ಬೆದರಿಸಿ ಹಿಂಬಾಲಿಸಿದವು. ೧೦
ಅಲ್ಲಿಯ ಮೂಷಿಕನಿಕರವು ಸೊಕ್ಕೆ
ಎಲ್ಲರ ಮೇಲೆಯ ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಲ್ಲದೆ
ಕುಣಿದುವು ಯಾರನು ಲೆಕ್ಕಿಸದೆ!
ಹಾಲಿನ ಮಡಕೆಯನೊಡೆದುವು ಕೆಲವು;
ಅನ್ನದ ಗಡಿಗೆಯ ಪುಡಿಮಾಡಿದವು.
ಬಡಿಸುವ ಅಡುಗೆಯ ಭಟ್ಟನ ತಡೆದು
ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದುವು;
ಈ ಪರಿ ತಿನ್ನುತ ಸೊಕ್ಕಿದುವು; ೨೦
ಧಾನ್ಯವನೆಲ್ಲಿಯ ಬಿಕ್ಕಿದುವು!
ಟೋಪಿಯ ಒಳಗಡೆ ಗೂಡನು ಮಾಡಿ
ಹೆತ್ತುವು ಮರಿಗಳನು;
ಪೇಟದ ಒಳಗಡೆ ಆಟವನಾಡಿ
ಕಿತ್ತುವು ಸರಿಗೆಯನು!
ಗೋಡೆಗೆ ತಗುಲಿಸಿದಂಗಿಯ ಜೇಬನು
ದಿನವೂ ಜಪ್ತಿಯ ಮಾಡಿದುವು;
ಮಲಗಿರೆ ಹಾಸಿಗೆಯನ್ನೇ ಹರಿದುವು,
ಕೇಶಚ್ಛೇದವ ಮಾಡಿದುವು;
ಬೆಣ್ಣೆಯ ಕದ್ದುವು, ಬೆಲ್ಲವ ಮೆದ್ದುವು ೩೦
ಎಣ್ಣೆಗೆ ಬಿದ್ದುವು ದಿನದಿನವು;
ಗೌಡರು ಮಾತಾಡುತ ಕುಳಿತಲ್ಲಿ
ಬಹಳ ಗಲಾಟೆಯ ಮಾಡಿದುವು.
ಗರತಿಯರಾಡುವ ಹರಟೆಗೆ ತುಂಬಾ
ತೊಂದರೆಯಿತ್ತುವು ಗಜಿಬಿಜಿಮಾಡಿ.
ಊರಿನ ಮಕ್ಕಳ ಕೈಲಿದ್ದ
ತಿಂಡಿಯ ಕಸಿದುವು ಧೈರ್ಯದಲ್ಲಿ!
೨
ಇಲಿಗಳ ಕೊಲ್ಲಲು ಊರಿನ ಜನರು
ತುಂಬಾ ಯತ್ನವ ಮಾಡಿದರು:
ಕಡಿದರೆ ಮುರಿದವು ಕತ್ತಿಗಳೆಲ್ಲ, ೪೦
ಹೊಡೆದರೆ ಮುರಿದುವು ಕೋಲುಗಳು;
ಇಲಿಗಳ ಬೇಟೆಯನಾಡುತಲಿರಲು
ಮುರಿದುವು ತಿಮ್ಮನ ಕಾಲುಗಳು!
ಬೇಟೆಯನಾಡಲು ಅಡುಗೆಯ ಮನೆಯಲಿ
ಬಿದ್ದಳು ಬಳೆಯೊಡೆದಚ್ಚಮ್ಮ!
ಭೃಂಗಾಮಲಕದ ತೈಲವ ಹಚ್ಚಿದ
ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ
ಇಲಿಗಳಿಗಾಗಿತ್ತೂಟದ ಫೇಣಿ!
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ೫೦
ಉಂಡುವು, ತಿಂದುವು ದನಗಳ ಕೆಚ್ಚಲ;
ಹರಿದುವು ಕರುಗಳ ಬಾಲಗಳ!
ಸಿದ್ದೋಜೈಗಳು ಶಾಲೆಗೆ ಹೋಗಿ
ಪಾಠವ ಬೋಧಿಸುತ್ತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು
ಚಂಗನೆ ನೆಗೆಯಿತು ತೂತನು ಮಾಡಿ.
ಲೇವಡಿ ಎಬ್ಬಿಸೆ ಬಾಲಕರೆಲ್ಲ
ಗುರುಗಳಿಗಾಯಿತು ಬಲು ಗೇಲಿ!
ಹರಿಯಲು ರೇಶ್ಮೆಯ ರವಕೆಯ ಕಣಗಳ,
ಕೊಚ್ಚಲು ಕಾಗಿನ ಸೀರೆಯನು, ೬೦
ಮುಂಗಾಣದೆ ಜಟ್ಟಕ್ಕನು ಹೋಗಿ
ಬತ್ತಿದ ಕೆರೆಯನು ಹಾರಿದಳು;
ಸತ್ತೇ ಎನ್ನುತ ಚೀರಿದಳು!
ಬೆಳಗಿನ ಜಾವದಿ ಏಳುತ ನೋಡಲು
ಭಟ್ಟಾಶಾಸ್ತ್ರಿಯ ಜನಿವಾರ
ಇಲಿಗಳಿಗಾಗಿತ್ತಾಹಾರ!
ಒಂದಿಲಿ ಸತ್ತರೆ ಎರಡಿಲಿಯಾದುವು,
ಕೊಂದರೆ ಒಂದನು ಎರಡೈತಂದುವು!
ಇಲಿಗಳ ಕಾಟವ ಸಹಿಸಲು ಆರದೆ
ಊರಿನ ಜನರೆಲ್ಲರು ಒಂದಾಗಿ ೭೦
ಮೂಷಿಕ ಯಾಗವ ಮಾಡಿದರು,
ದೇವರ ಪೂಜೆಯ ಮಾಡಿದರು;
ಹರಕೆಯ ಹೊತ್ತರು, ಕಾಣಿಕೆ ತೆತ್ತರು,
ಮಂತ್ರವ ದಿನದಿನ ಹೇಳಿದರು!
ನಿಷ್ಫಲವಾದುವು ಮಂತ್ರಗಳೆಲ್ಲ,
ಬಾಯ್ ಬಾಯ್ ಕಳೆದರು ಶಾಸ್ತ್ರಿಗಳೆಲ್ಲ,
ಕಣ್ ಕಣ್ ಬಿಟ್ಟರು ಪಂಡಿತರೆಲ್ಲ,
ಕಂಬನಿಗೆರೆದರು ಜನರೆಲ್ಲ!
೩
ಮುಂದಿನ ಮಾರ್ಗವ ಕಾಣದೆ ಜನರು
ಗೌಡನ ಬಳಿ ಹೋದರು ಗುಂಪಾಗಿ: ೮೦
ಗೌಡನು ಮನೆಯಿಂದೀಚೆಗೆ ಬಂದನು
ಕಂಗಳನರಳಿಸಿ ಬೆರಗಾಗಿ!
ಕೂಗಿದರೆಲ್ಲರು ಗೌಡನ ಕುರಿತು;
ಗೌಡನು ನಿಂತನು ಮೈಮರೆತು:
“ಥೂ! ಛೀ! ಗೌಡನೆ ನೀ ಹಾಳಾಗ!
ಮಾರಿಯ ಇಲಿಗಳ ಕೊಲ್ಲಿಸೊ ಬೇಗ!
ತೆರಿಗೆಯ ಮಾತ್ರಾ ಕಾಸೂ ಬಿಡದೆ
ಹೊಡೆದೂ ಬೈದೂ ಎತ್ತವೆ ನೀನು.
ನಿನ್ನ ರುಮಾಲಿನ ಜರಿ ಹಾಳಾಗ,
ನಿನ್ನೀ ಗಂಟಲು ಕಟ್ಟೇ ಹೋಗ! ೯೦
ಇಲಿಗಳ ಸಹಿಸೆವು ಕೊಲ್ಲಿಸೊ ಬೇಗ!
ಬೆಂಕಿಯನಿಡುವೆವು ನಿನ್ನೀ ಮನೆಗೆ,
ಕೊಲ್ಲಿಸದಿರೆ ಬರೆಯಿಡುವೆವು ನಿನಗೆ!
ಹೆಸರಿಗೆ ಮಾತ್ರಾ ಗೌಡನೆ ನೀನು?
ಮಾನವೆ ಇಲ್ಲವೆ ಛೀ ನಿನಗೇನು!”
೪
ಈ ಪರಿ ಬೈದರು ಜನರೆಲ್ಲ;
ಗೌಡನು ಬಾಯೇ ಬಿಡಲಿಲ್ಲ!
ಜನರೆಲ್ಲಾ ಹಿಂತಿರುಗಿದ ಮೇಲೆ
ಗೌಡನು ಓಡಿದ ಚಾವಡಿಗೆ:
ಕರೆದನು ಊರಿನ ತಲೆಯಾಳುಗಳ; ೧೦೦
ಕಟ್ಟೆಯೊಳಲ್ಲಿಯೆ ಸಭೆ ಸೇರಿದರು.
ದಿನವೆಲ್ಲಾ ಚರ್ಚೆಯ ಮಾಡಿದರು;
ದಿನವೆಲ್ಲಾ ವಾದವ ಹೂಡಿದರು.
ಹೊರಟವು ಯುಕ್ತಿಯ ಮಾತುಗಳು,
ಮಾತೊಳು ಮನೆಯನು ಕಟ್ಟಿದರು.
ಅಂತೂ ಇಲಿಗಳ ಕೊಲ್ಲುವ ಬಗೆಯು
ಒಬ್ಬರಿಗಾದರು ಹೊಳೆಯಲೆ ಇಲ್ಲ.
ಗೌಡನು ತಲೆ ತಲೆ ಹೊಡಕೊಂಡ:
ಕಡೆಗಾ ರಂಗೇಗೌಡನು ಊರಿಗೆ ೧೧೦
ಬೆಂಕಿಯ ಹಾಕುವ ಸಲಹೆಯ ಕೊಟ್ಟ.
ಊರನೆ ಖಂಡಿತ ಬಿಡಬೇಕೆಂದು
ರಾಮಾಶಾಸ್ತ್ರಿಗಳಾಡಿದರು.
ತಿಪ್ಪಂಭಟ್ಟರು ಚಿಂತಿಸಿ ಚಿಂತಿಸಿ
‘ದೇವರು ಮಾಡಿದುದಾಗಲಿ’ ಎಂದರು!
ಸಲಹೆಗಳೆಲ್ಲಾ ಮುಗಿದಾ ಮೇಲೆ
ಗೌಡನು ಜನರನು ಕುರಿತೆಂತೆಂದ:
‘ಇಲಿಗಳ ಕೊಲ್ಲಲು ದಾರಿಯನಾರು
ತೋರಿಸಿ ಕೊಡುವರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು; ೧೨೦
ತಿಳಿದವರಿದ್ದರೆ ಬನ್ನಿರಿ! ಏನು?’
೫
ಒಬ್ಬರ ಮೊಗವನು ಒಬ್ಬರು ನೋಡಿ
ಮಾತಾಡದೆ ಇದ್ದರು ಜನರೆಲ್ಲ!
ಗೌಡನು ಕೂಗಿದ ಮೊದಲನೆ ಸಾರಿ;
ಯಾರೂ ಮುಂದಕೆ ಬರಲೇ ಇಲ್ಲ.
ನಾಣ್ಯಗಳೆಂಬಾ ಮಾತನು ಕೇಳಿ
ಮಂಗೈಶೆಟ್ಟರು ಕೋಪವ ತಾಳಿ
ಬ್ರಹ್ಮನ ರಾಣಿಯ ದೂರಿದರು:
ಮೆದುಳನು ನೀಡದೆ ತಲೆಯನು ಮಾಡಿದ
ಕಮಲಜನನು ಬೈದಾಡಿದರು! ೧೩೦
ಸುತ್ತಲು ನೋಡುತ ಗೌಡನು ಮತ್ತೆ
ಎರಡನೆ ಸಾರಿಯು ಕೂಗಿದನು.
ಆಸೆಯನೆಲ್ಲವ ನೀಗಿದನು!
ಕೂಗಿದನಾತನು ಮೂರನೆ ಸಾರಿ;
ಮಾತೇ ಇಲ್ಲ, ಎಲ್ಲಿಯ ಮೌನ!
ಮುಂದಲೆ ಹಿಂದಲೆ ಎರಡನು ಉಜ್ಜುತ,
ಕಂಗಳ ಕೆರಳಿಸಿ, ಹಲ್ಲನು ಕಡಿಯುತ,
ಶೆಟ್ಟರು ಬಲು ಪೇಚಾಡಿದರು;
ಆವೇಶದ ದಯಪಾಲಿಸು ಎನ್ನುತ
ವಾಣಿಯ ಪರಿಪರಿ ಬೇಡಿದರು ೧೪೦
೬
ಏನಿದು ಗುಜುಗುಜು ಗುಂಪಿನಲಿ?
ನೋಡಿದರೇನಾಶ್ಚರ್ಯವನು?
ಆಲಿಸಿ! ದೂರದ ಕಿಂದರಿ ನಾದ!
ಬರುವನು ಯಾರೋ ಕಿಂದರಿ ಜೋಗಿ:
ಹತ್ತಿರ ಹತ್ತಿರಕವನೈತಂದು;
ಬಂದಿತು ಜನರಿಗೆ ಒಂದಾನಂದ!
ನೋಡಿರಿ! ನೋಡಿರಿ, ಕಿಂದರಿ ಜೋಗಿ:
ನೋಡಿದರಲ್ಲರು ಬೆರಗಾಗಿ!
ಬಂದನು ಬಂದನು ಕಿಂದರಿ ಜೋಗಿ!
ಕೆದರಿದ ಕೂದಲ ಗಡ್ಡದ ಜೋಗಿ! ೧೫೦
ನಾನಾ ಬಣ್ಣದ ಬಟ್ಟೆಯ ಜೋಗಿ!
ಕೈಯಲಿ ಕಿಂದರಿ ಹಿಡಿದಾ ಜೋಗಿ!
ಕುದುರೆಯ ಗೊರಸಿನ ಅಡಿಗಳ ಜೋಗಿ!
ಕಡವೆಯ ಕೊಂಬಿನ ತಲೆಯಾ ಜೋಗಿ!
ಆನೆಯ ಕಿವಿಗಳ ಕಿಂದರಿ ಜೋಗಿ!
ಹಂದಿಯ ದಾಡೆಯ ಕೋರೆಯ ಜೋಗಿ!
ಮಂಗನ ಮೂತಿಯ ಮುಡಿದಿಹ ಜೋಗಿ!
ಬಂದನು ಬಂದನು ಕಿಂದರಿ ಜೋಗಿ
ಹಾರುತ ತೇಲುತಲಿಳಿದನು ಜೋಗಿ!
ಕೈಕೈ ಮುಗಿಯುತ ಕಣ್ದೆರದು ೧೬೦
ಹಿಂದಕೆ ಸರಿಯುತ ಜನರೆಲ್ಲ
ದಾರಿಯ ಬಿಟ್ಟರು ಕಿಂದರಿ ಜೋಗಿಗೆ.
ಜೋಗಿಯು ಹತ್ತಿದ ಗೌಡನ ಕಟ್ಟೆಯ;
ಗೌಡನ ಹೃದಯವು ಬಾಯ್ಗೇ ಬಂದಿತು,
ಗಡಗಡ ನಡುಗಿದನು!
ತೊದಲುತ ಬೆದರುತ ಕಂಪಿತಕಂಠದಿ
ನೀನಾರೆಂದನು ಜೋಗಿಯ ಕುರಿತು.
ಅದಕಾ ಜೋಗಿಯು ಇಂತೆಂದ;
ಕೇಳಿದರೆಲ್ಲರು ಬಾಯ್ಬಿಟ್ಟು:
“ಹಿಮಗಿರಿಯಲ್ಲಿಹ ಜೋಗಿಯು ನಾನು; ೧೭೦
ಪರಮೇಶ್ವರನಿಗೆ ಗೆಳೆಯನು ನಾನು;
ನಿಮ್ಮೀ ಗೋಳನು ಕೇಳಿದ ಶಿವನು
ನನ್ನನ್ನಿಲ್ಲಿಗೆ ಕಳುಹಿದನು.
ಇಲಿಗಳನೆಲ್ಲಾ ಕೊಂದರೆ ಆರು
ಸಾವಿರ ನಾಣ್ಯಗಳಿವೆಯೇನು?”
೭
ಉಬ್ಬಿತು, ಉಕ್ಕಿತು ಗೌಡನ ಸಂತಸ;
ಶಹಭಾಸೆಂದರು ಜನರೆಲ್ಲ.
ಗೌಡನು ಜೋಗಿಯ ಕುರಿತಿಂತೆಂದ;
ಜನರದನೆಲ್ಲಾ ಕೇಳಿದರು:
“ಬೇಕಾದುದ ನಾ ಕೊಡುವೆನು ಜೋಗಿ; ೧೮೦
ಆರೇಕಿನ್ನೆರಡಾದರು ಕೊಡುವೆನು.
ಬೇಕಾದುದನೆಲ್ಲವ ನೀ ಕೇಳು;
ಊರೇ ನಿನ್ನದು! ನಾ ನಿನ್ನಾಳು!
ಆದರೆ ಒಂದೇ ಸಂದೇಹ —
ಇಲಿಗಳನೋಡಿಪ ಶಕ್ತಿಯು ನಿನಗೆ
ನಿಜವಾಗಿರುವುದು ಹೌದಷ್ಟೆ?”
ಜೋಗಿಯು ಹಿಂತಿರುಗೆಲ್ಲರ ನೋಡಿ,
ಕೈಯಾ ಕಿಂದರಿಯನು ಸರಿಮಾಡಿ,
ಗಡ್ಡವ ನೀವುತ ದುರುದುರು ನೋಡಿ,
ಗೌಡನ ಕಡೆ ತಿರುಗಿಂತೆಂದ: ೧೯೦
“ಕೃತಯುಗದೊಳು ಕೈಲಾಸದೊಳು
ಇಲಿಗಳ ಕಾಟವು ಮಿತಿಮೀರೆ,
ಇಲಿಗಳ ಕೊಲ್ಲುವೆನೆಂಬಾ ರೋಷ
ಏರಲು, ಭೈರವನಾದನು ಈಶ!
ಆದರು ಆಗದೆ ಮೂಷಿಕನಾಶ
ನಂದಿಯ ಕಳುಹಿದನೆನ್ನೆಡೆಗೆ:
ಕೊಂದೆನು ಅವುಗಳ ನಾ ಕಡೆಗೆ!
ಕಾಮನ ದಹಿಸಿದ ಹಣೆಗಣ್ಣು
ಮೂಷಿಕರೋಮವ ಸುಡಲಿಲ್ಲ!
ಬೊಮ್ಮನಹಳ್ಳಿಯ ಜನರೇ ಕೇಳಿ, ೨೦೦
ಮುಂದಿನ ಕಥೆಯನು ಮುಗಿಸುವೆ ಹೇಳಿ:
ದ್ವಾಪರಯುಗದೊಳು ವೈಕುಂಠದೊಳು
ಮೂಷಿಕ ಸೈನ್ಯಕು ಜಯವಿಜಯರಿಗೂ
ಭೀಕರ ಕಾಳಗ ಜರುಗಿತು, ಕಡೆಗೆ
ಆ ಜಯವಿಜಯರು ವಿಷ್ಣುವಿನೆಡೆಗೆ
ಓಡುತ ಹೋದರು ಮೊರೆಯಿಡಲು,
ಮೂಷಿಕ ಸೈನ್ಯಕೆ ಮೈಸೋತು!
ಕಡೆಗಾ ವಿಷ್ಣುವೆ ಚಕ್ರವ ಹಿಡಿದು
ಮೂಷಿಕಕುಲವನೆ ಕೊಲ್ಲುವೆನೆಂದ
ಕದನವನಾಡಲು ಇಲಿಗಳ ಕೂಡೆ ೨೦೦
ಮೂರ್ಛೆಗೆ ಸಂದನು ಬಲುಬಳಲಿ!
ವಿಷ್ಣುವೆ ಸೋತನು ಕದನದಲಿ!
ಪೀತಾಂಬರವನು ಹರಿದುವು ಕೆಲವು;
ಚಕ್ರದ ಹಲ್ಲನು ಮುರಿದುವು ಕೆಲವು!
ಕೌಸ್ತುಭರತ್ನವನಪರಹರಿಸಿದುವು!
ಶಂಖವ ಭೂಂ ಭೂಂ ಊದಿದವು!
ಗದೆಯನ್ನೆಳೆದು ಬಿಸಾಡಿದುವು!
ರಾಕ್ಷಸಕೋಟೆಯ ಕೊಂದಾ ಚಕ್ರವು
ಬರಿದಾಯಿತು ಇಲಿಗಳ ಮುಂದೆ.
ಕಡೆಗೆನ್ನನು ಕರೆಕಳುಹಿದನು, ೨೨೦
ಮೂಷಿಕನಾಶವ ಮಾಡಿದೆನು!
“ಕಿಂದರಿ ಜೋಗಿಯೆ ನಿಲ್ಲಿಸು, ಸಾಕು;
ನೀ ಗಟ್ಟಿಗನೆಂಬುದು ಗೊತ್ತಾಯ್ತು!
ನಿನ್ನ ಪರಾಕ್ರಮಕಂತ್ಯವೆ ಇಲ್ಲ;
ಗೆಳೆಯರು ವಿಷ್ಣುಮಹೇಶ್ವರರೆಲ್ಲ,
ನಮ್ಮೂರಿಲಿಗಳ ಸಂಹರಿಸು;
ಬೇಕಾದುದ ನಾವೀಯುವೆವು!” —
ಎಂದನು ಗೌಡನು ಸಂತಸದಿಂದ;
ಜನತತಿಗಾದುದು ಅತ್ಯಾನಂದ!
೮
ಮರುಮಾತಾಡದೆ ಕಿಂದರ ಜೊಗಿ ೨೩೦
ಕಟ್ಟೆಯನಿಳಿದನು ಬೀದಿಗೆ ಹೋಗಿ.
ಗಡ್ಡವ ನೀವುತ ಸುತ್ತಲು ನೋಡಿ,
ಮಂತ್ರವ ಬಾಯಲಿ ಮಣಮಣ ಹಾಡಿ,
ಕಿಂದರಿ ಬಾರಿಸತೊಡಗಿದನು;
ಜಗವನು ಮೋಹಿಸಿತಾ ನಾದ!
ಏನಿದು? ಏನಿದು? ಗಜಿಬಿಜಿ ಎಲ್ಲಿ?
ಊರನೆ ಮುಳುಗಿಪ ನಾದವಿದಲ್ಲಿ?
ಇಲಿಗಳು! ಇಲಿಗಳು! ಇಲಿಗಳ ಹಿಂಡು!
ಬಳಬಳ ಬಂದುವು ಇಲಿಗಳ ದಂಡು!
ಅನ್ನದ ಮಡಕೆಯನಗಲಿದುವು! ೨೪೦
ಟೋಪಿಯ ಗೂಡನು ತ್ಯಜಿಸಿದುವು!
ಬಂದುವು ಅಂಗಿಯ ಜೇಬನು ಬಿಟ್ಟು,
ಮಕ್ಕಳ ಕಾಲಿನ ಚೀಲವ ಬಿಟ್ಟು.
ಹಾರುತ ಬಂದುವು, ಓಡುತ ಬಂದುವು,
ನೆಗಯುತ ಬಂದುವು, ಕುಣಿಯುತ ಬಂದುವು,
ಜೋಗಿಯ ಬಾರಿಸೆ ಕಿಂದರಿಯ!
ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ,
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ, ೨೫೦
ಎಲ್ಲಾ ಬಂದುವು ಓಡೋಡಿ,
ಜೋಗಿಯು ಬಾರಿಸೆ ಕಿಂದರಿಯ!
ಬಂದುವು ನಾನಾ ಬಣ್ಣದ ಇಲಿಗಳು,
ಕೆಂಪಿನ ಇಲಿಗಳು, ಹಳದಿಯ ಇಲಿಗಳು,
ಬೆಳ್ಳಿಲಿ, ಕರಿಯಲಿ, ಗಿರಿಯಲಿ, ಹೊಲದಿಲಿ,
ಕುಂಕುಮರಾಗದ, ಚಂದನರಾಗದ,
ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ,
ನಾನಾವರ್ಣದ ಇಲಿಗಳು ಬಂದುವು
ಕುಣಿಯುತ ನಲಿಯುತ ಸಂತಸದಿ ೨೬೦
ಜೋಗಿಯು ಬಾರಿಸೆ ಕಿಂದರಿಯ!
ನೋಡಿರಿ! ಕಾಣಿರಿ! ಬರುತಿಹವಿನ್ನೂ!
ಅಟ್ಟದ ಮೇಲಿಂ ಬರುವುವು ಕೆಲವು!
ಕಣಜದ ಕಡೆಯಿಂ ಬರುವುವು ಕಲವು!
ಓಹೋ! ಬಂದುವು ಹಿಂಡ್ಹಿಂಡಾಗಿ!
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ,
ಚೀ! ಪೀ! ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನಲಿನಲಿದಾಡಿ
ಬಂದಿತು ಮೂಷಿಕಸಂಕುಲವು
ಜೋಗಿಯು ಬಾರಿಸೆ ಕಿಂದರಿಯ! ೨೭೦
೯
ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಹೊರಟನು ತುಂಗಾನದಿಯೆಡೆಗಾಗಿ.
ಕಿಂದರಿ ನಾದವು ಗಗನಕ್ಕೇರಿತು,
ಇಲಿಗಳನ್ನೆಲ್ಲಾ ಮನಮೋಹಿಸಿತು |
ಕಿಂದರಿ ಜೋಗಿಯ ಹಿಂಬಾಲಿಸಿದರು
ಜನಗಳು ನೋಡಲು ಕೌತುಕವ;
ಜೋಗಿಯು ನಡೆದನು, ಇಲಿಗಳು ನಡೆದುವು,
ಸೇರಿದರೆಲ್ಲರು ನದಿಯೆಡೆಯ;
ಹೊಳೆಯಾ ಮರಳಿನ ಗುಡ್ಡೆಯ ತುಂಬಾ
ನೋಡಿದರೆಲ್ಲಿಯು ಇಲಿಯಿಲಿ ಗುಂಪೇ | ೨೮೦
ಉಸಿರಾಡದೆ ನಿಂತರು ಜನರೆಲ್ಲಾ
ಮುಂದೇನಾಗುವುದೆಂದಲ್ಲಿ:
ದಿವಿಜರು ಕವಿದರು ಗಗನದಲಿ,
ಹೂಮಳೆ ಕರೆದರು ಹರುಷದಲಿ;
ದುಂದುಭಿನಾದವ ಮಾಡಿದರು;
ಕಾಣದ ಬೆರಗನು ನೋಡಿದರು;
ಸುತ್ತಲು ನೋಡಿದ ಕಿಂದರಿ ಜೋಗಿ,
ನಡೆದನು ಹೊಳೆಯಾ ನೀರಿನ ಮೇಲೆ!
ಸೇರಿದ ಜನರೆಲ್ಲರು ಬೆರಗಾಗಿ
‘ಜಯಜಯ ಜೋಗೀ!’ ಎಂದರು ಕೂಗಿ! ೨೯೦
ಇಲಿಗಳು ಒಂದರ ಮೇಲೊಂದು
ಹಿಂಬಾಲಿಸಿದುವು ಜೋಗಿಯನು;
ಬುಳುಬುಳು ನೀರೊಳು ಮುಳುಗಿದುವೆಲ್ಲಾ
ಹೆಣವಾಗಲ್ಲಿಯೆ ತೇಲಿದುವು.
ಎಲ್ಲಾ ಮುಳುಗಿದುವೆಂದೆನೆ, ಅಲ್ಲ:
ರಾವಣನಂದದ ಮೂಷಿಕ ಗಡವ
ದೃಢವಾಗೀಜುತ ಸೇರಿತು ದಡವ!
೧೦
ಆಗದು ಜನರಿಗೆ ಈ ಪರಿ ನುಡಿಯಿತು
ಕಿಂದರಿ ನಾದದ ಅನುಭವವ:
“ಕಿಂದರಿ ಬಾರಿಸಿದಾಗಲೆ ಎಲ್ಲಿಯು ೩೦೦
ಹೋಳಿಗೆವಾಸನೆ ತುಂಬಿದುದು;
ಯಾರೋ ಹೋಳಿಗೆ ಮಾಡುವರೆಂದು
ಗೂಡನು ಬಿಟ್ಟೆವು ಹೊರಗಡೆ ಬಂದು.
ನೋಡಲು ಹಲ್ವದ ರಾಶಿಯ ಕಂಡೆವು;
ವಿಧವಿಧ ತಿಂಡಿಗಳೆಲ್ಲಾ ಜೋಗಿಯ
ಸುತ್ತಲು ಮೆರವುದ ನೋಡಿದೆವು!
ಬಲಗಡೆ ದೊಡ್ಡ ಮಿಠಾಯಿಯ ರಾಶಿ,
ಎಡಗಡೆ ಬೇಣ್ಣೆಯ ಮುದ್ದೆಯ ರಾಶಿ,
ತಲೆಯೊಳು ಸಕ್ಕರೆ, ಕೈಯೊಳು ಬೆಲ್ಲ;
ಬನ್ನಿರಿ, ಬನ್ನಿರಿ, ಎಂದುವು ಎಲ್ಲ! ೩೧೦
ಹಿಂಬಾಲಿಸಿದೆವು ನಾವುಗಳು
ತಿಂಡಿಯ ತಿನ್ನುವ ಛಲದಿಂದ;
ಕಡೆಗೆಲ್ಲವು ಬರಿ ಬಯಲಾಯ್ತು,
ತಿಂಡೆಯೆ ಹರಿಯುವ ಹೊಳೆಯಾಯ್ತು!”
ಜನರೆಲ್ಲರು ಮಾಯೆಗೆ ಬೆರಗಾಗಿ
‘ಜಯಜಯ ಜೋಗೀ!’ ಎಂದರು ಕೂಗಿ!
ಬಿಳಿದಾಯಿತು ಗೌಡನ ಮುಖವೊಂದು:
ಹಣ ಕೊಡಬೇಕಾಯ್ತಲ್ಲಾ ಎಂದು!
೧೧
ಕಿಂದರಿ ಜೋಗಿಯು ಹಿಂದಕೆ ಬಂದ,
“ಗೌಡನೆ, ನಾಣ್ಯಗಳನು ಕೊಡು” ಎಂದ. ೩೨೦
ಗೌಡನು ನೋಡಿದ ಬೆರಗಾಗಿ!
“ಸಾವಿರ ಆರೂ” ಎಂದನು ಜೋಗಿ!
ಗೌಡನು ನಿಂತನು ತಲೆದೂಗಿ!
“ಕಿಂದರಿ ಜೋಗಿಯೆ ಹೇಳುವೆ ಕೇಳು,
ಸಾವಿರ ಆರನು ನಾ ಕೊಡಲಾರೆನು;
ನೀ ಮಾಡಿದ ಕೆಲಸವು ಹೆಚ್ಚಲ್ಲ.
ಸುಮ್ಮನೆ ಕಿಂದರಿ ಬಾರಿಸಿದೆ.
ಇಲಿಗಳ ಹೊತ್ತೆಯ ನೀನೇನು?
ಅವುಗಳು ತಮ್ಮಷ್ಟಕೆ ತಾವೇ
ಬಿದ್ದುವು ಹೊಳೆಯಲಿ ಮುಳುಗಿದುವು! ೩೩೦
ಕೊಡುವೆನು ನೀ ಪಟ್ಟಿಹ ಶ್ರಮಕಾಗಿ
ಕಾಸೈದಾರನು ತೆದುಕೊ, ಜೋಗಿ;
ಪುರಿಗಡಲೆಯ ಕೊಂಡುಕೊ ಹೋಗಿ!”
ಈ ಪರಿ ನುಡಿಯಲು ಗೌಡನು, ಜೋಗಿಯ
ಕಂಗಳ ಕೆರಳಿಸುತಿಂತೆಂದ:
“ಆಡಿದ ಭಾಷೆಯ ತಪ್ಪುವೆಯ?
ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ!
ನಿಮ್ಮೀ ಹಳ್ಳಿಯನಾರಿಸುವೆ!”
“ಸಾವಿರವಾರಲು ಕೊಡುವರದಾರು? ೩೪೦
ಅಪ್ಪನ ಗಂಟೇ? ಹೋಗೋ, ಜೋಗಿ!
ನೀ ಮಾಡುವುದೇನನು ನೋಡುವೆನು:
ಮಾತಾಡದೆ ತೊಲಗಿಲ್ಲಿಂದ!
ಹೆಚ್ಚಿಗೆ ಮಾತೇನಾದರು ನುಡಿದರೆ
ಕಿಂದರಿಯೊಡೆಸುವೆ; ಗಡ್ಡವ ಸುಡಿಸುವೆ,
ನಿನ್ನೀ ತಲೆಯನು ಬೋಳಿಸುವೆ.
ಕಿಂದರಿತಂತಿಯು ಹರಿಯುವವರೆಗೂ
ಬಾರಿಸು; ಬೇಡೆಂದವರಾರು?
ಬಲ್ಲೆಯ ನಾನಾರೆಂಬುದನು?
ಊರ ಪಟೇಲ, ಹಳ್ಳಿಗೆ ಗೌಡ! ೩೫೦
ನಡೆ, ನಡೆ, ಮರುಮಾತಾಡದಿರು!”
೧೨
ಗೌಡನು ನುಡಿಯನು ಕೇಳಿದ ಜೋಗಿ
ಕಿಂದರಿ ಬಾರಿಸತೊಡಗಿದನು.
ನಾದವು ಹಬ್ಬಿತು ಊರೊಳಗೆಲ್ಲ,
ಕರೆಯಿತು ಊರಿನ ಹುಡುಗರನೆಲ್ಲ!
ಓಡುತ ಬಂದರು ಬಾಲಕರು
ಕೇಳದೆ ಹಿರಿಯರ ಮಾತುಗಳ.
ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಕಿಂದರಿ ಬಾರಿಸಿದನು ಇಂಪಾಗಿ.
‘ಟಿಂಗ್ಟಿಂಗ್! ಟಿಂಗ್ಟಿಂಗ್!’ ನಾದವ ಕೇಳಿ ೩೬೦
ಚಂಗ್ಚಂಗ್ ನೆಗೆದರು ಬಾಲಕರೋಡಿ.
ಕಿಂದರಿ ಜೋಗಿಯು ಹೊರಟನು ಮುಂದೆ,
ಬಾಲಕರೆಲ್ಲರು ಹರಿದರು ಹಿಂದೆ!
ಊರಿನ ಜನರೆಲ್ಲರು ಭಯದಿಂದ
ಎಂದರು ‘ಮಕ್ಕಳ ಗೌಡನೆ ಕೊಂದ;
ಹಾಳಾದೆವು ಗೌಡನ ದೆಸೆಯಿಂದ.’
ಗೌಡನು ಕೂಗಿದ ಹೆದರಿಕೆಯಿಂದ,
ಜೋಗೀ ಜೋಗೀ ಹಿಂತಿರುಗೆಂದ.
ಕಿಂದರಿ ಜೋಗಿಯು ನಡೆದನು ಮುಂದೆ,
ಮಕ್ಕಳು ಓಡುತ ಹೋದರು ಹಿಂದೆ. ೩೭೦
ಕುಂಟರು ಭರದಿಂದೋಡಿದರು!
ಕುರಡರು ನೋಟವ ನೋಡಿದರು!
ಮೂಗರು ಸವಿಮಾತಾಡಿದರು!
ಕಿವುಡರು ನಾದವ ಕೇಳಿದರು!
ಬಾಲರು ಭರದಿಂದೋಡಿದರು:
ಜನರೆಲ್ಲಾ ಗೋಳಾಡಿದರು!
ಬೊಮ್ಮನಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು
ಓಡಿದರೆಲ್ಲರು ಜೋಗಿಯ ಹಿಂದೆ.
ಹೊಳೆಯ ತೀರವ ಜೋಗಿಯು ಸೇರಿ ೩೮೦
ನೀರೊಳಗಿಳಿಯದೆ ಬಲಗಡೆ ತಿರುಗಿ
ಚೌಡಿಯ ಬೆಟ್ಟಕ್ಕಭಿಮುಖವಾದ,
ಭರದಿಂ ಬೇಗನೆ ಮುಂದಕೆ ಹೋದ.
ಬೆಟ್ಟವನವನೇರುವುದಿಲ್ಲೆಂದು
ಹಾರೈಸಿದರಾ ಊರಿನ ಜನರು.
ಬೆಟ್ಟದ ಬುಡವನು ಸೇರಿದ ಜೋಗಿ
ನಿಲ್ಲುವನೆಂದಲ್ಲಾ ಬಯಸಿದರು!
೧೩
ಏನಿದು ನಿಂತರು ಜನರೆಲ್ಲ
‘ಅಯ್ಯೋ ಮಕ್ಕಳೆ ‘ ಎಂದೆನುತ?
ಜೋಗಿಯು ಬಾರಿಸೆ ಕಿಂದರಿಯ ೨೯೦
ಬಂಡೆಯ ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯು!
ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರ!
ಬೆಟ್ಟವು ಬಾಗಿಲ ಹಾಕಿತು ಬೇಗ;
ಹಿಂದಕ್ಕುಳಿದವನೊಬ್ಬನೆ ಕುಂಟ.
ಅಲ್ಲಿಗೆ ಬಂದರು ಜನರೋಡಿ,
ಕುಂಟನ ಕಂಡರು ಒಂಟಿಯಲಿ;
ಕುಂಡನನುಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು. ೪೦೦
ಕಂಬನಿಗೆರೆದರು ಗೋಳಾಡಿದರು.
ಜೋಗಿಯ ಕೂಗುತ ಬಲು ಬೇಡಿದರು.
ಬೆಟ್ಟವು ಕೊಟ್ಟಿತು ಮರುದನಿಯ!
ಭೂಮಿಯ ಹೀರಿತು ಕಂಬನಿಯ!
ಉಳಿದಾ ಕುಂಟನು ಅಳುತಿಂತೆಂದ:
“ಅಯ್ಯೋ ಎನಗಿಲ್ಲವರಾನಂದ!
ಜೋಗಿಯು ಕಿಂದರಿ ಬಾರಿಸೆ ಕಂಡೆವು
ಬಣ್ಣದ ಮನೆಗಳ ಪಟ್ಟಣವ,
ಹಣ್ಣುಗಳುದುರಿದ ತೋಟಗಳ!
ನಾನಾ ಆಟದ ಸಾಮಾನುಗಳ, ೪೧೦
ತರತರ ರಾಗದ ಗೊಂಬೆಗಳ;
ಮಾತಿಗೆ ಮಿರಿದ ಆನಂದಗಳ,
ಕೈಗೇ ಸಿಕ್ಕುವ ಹಕ್ಕಿಗಳ!
ಜಿಂಕೆಗಳೆಮ್ಮೊಡನಾಡಿದುವಲ್ಲಿ,
ಮೊಲಗಳು ಕುಳಿತುವು ಮೈಮೇಲಲ್ಲಿ!
ಅಯ್ಯೋ ಹೋಯಿತೆ ಆ ನಾಕ!
ಅಯ್ಯೋ ಬಂದಿತೆ ಈ ಲೋಕ!”
೧೪
ಬಂದರು ಎಲ್ಲರು ಬೊಮ್ಮನಹಳ್ಳಿಗೆ
ದಃಖಾಂಬುಧಿಯೊಳಗೀಜಾಡಿ;
ಕಂಬನಿಗೆರೆದರು ಗೋಳಾಡಿ! ೪೨೦
ಈಗಾ ಹಳ್ಳಿಯ ಬೀದಿಯಲಾರೂ
ಕಿಂದರಿನಾದವನಾಲಿಸರು
ಕಿಂದರಿ ಜೋಗಿಗಳಲ್ಲಿಗೆ ಬಂದರೆ
ಬೇಕಾದ್ದೆಲ್ಲವನೀಯುವರು!
ಭಾಷೆಯ ಕೊಟ್ಟರೆ, ಮೂರ್ತೀ, ನಾವು
ಮೋಸವ ಮಾಡದೆ ಸಲ್ಲಿಸಬೇಕು.
ಆದುದರಿಂದ, ಮೂರ್ತೀ, ಕೇಳು:
ಸತ್ಯವನೆಂದೂ ತ್ಯಜಿಸದೆ ಬಾಳು!
-ಕುವೆಂಪು
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!
ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ:
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!